Tuesday, July 13, 2021

ಕೇಳಿದ ವರವ ಕೊಡುವ ಬಲಮುರಿ ಗಣಪ

                            ಆದಿನಾಥ ಕೈಲಾಸವಾಸ ಶಿವನ ಹಾಗೂ ಪಾರ್ವತಿಯ ಮುದ್ದು ಕಂದ ಗಣಪತಿಯು ಸರ್ವ ಪೂಜೆಯಲ್ಲಿಯೂ ಮೊದಲು ಪೂಜೆ ಒಳಗಾಗುವ ದೇವರು. ಅವನು ಮೊದಲು ಪೂಜೆ ಸ್ವೀಕರಿಸಲು ಅರ್ಹ ಆಗಿದ್ದಕ್ಕೆ ಒಂದು ಕಥೆ ಇದೆ. ಪಾರ್ವತಿ ದೇವಿಯ ಸೃಷ್ಟಿ ಈ ಗಣಪ. ಒಮ್ಮೆ ಪಾರ್ವತಿದೇವಿಯು ಕೈಲಾಸದಲ್ಲಿ ಇದ್ದಾಗ ನಂದಿಯನ್ನು ಕಾವಲಿಗಿರಿಸಿ ಯಾರನ್ನು ಒಳಗಡೆ ಬಿಡಬಾರದು ಎಂದು ಹೇಳಿದಳು. ಅದಾದ ಕೆಲ ಸಮಯಕ್ಕೆ ಶಿವನು ಲೋಕ ಸಂಚಾರವನ್ನು ಮುಗಿಸಿ ಕೈಲಾಸಕ್ಕೆ ಹಿಂದಿರುಗಿದನು. ನಂದಿಯು ಶಿವನನ್ನು ಒಳಗೆ ಬಿಡಲು ಪಾರ್ವತಿದೇವಿಗೆ ಪ್ರಶ್ನೆ ಮೂಡಿತು, ನಂದಿ ನನಗಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ಶಿವನಿಗೆ ಕೊಡುತ್ತಾನೆ ಹಾಗಾಗಿ ನನ್ನ ಆಜ್ಞೆಯನ್ನು ಮೀರಿ  ಬಿಡುತ್ತಾನೆಂದು. ಇದರಿಂದ ಪಾರ್ವತಿದೇವಿಯು ತಾನು ಹಚ್ಚಿಕೊಂಡಿದ್ದ ಅರಿಶಿಣವನ್ನು ತೆಗೆದು ಆಕೃತಿಯನ್ನು ಮಾಡಿ ಅದಕ್ಕೆ ಜೀವವನ್ನು ತುಂಬಿದಳು. ಈ ಬಾರಿ ದೇವಿಯು ದ್ವಾರದ ಬಳಿ ನಿಂತು ಯಾರನ್ನೂ ಒಳಗೆ ಬಿಡಬೇಡ ಎಂದು ಗಣಪತಿಗೆ  ಆಜ್ಞೆಯನ್ನು ನೀಡಿದಳು. ತಾಯಿಯ ಆಜ್ಞೆಯನ್ನು ಗಣಪನು ಪಾಲಿಸಲು ಅದೇ ಸಮಯಕ್ಕೆ ಶಿವನು ಬಂದನು ಶಿವನನ್ನು ಗಣಪತಿಯು ತಡೆಯಲು ಕೋಪಗೊಂಡ ಶಿವನು ಪಾರ್ವತಿಯ ಸೃಷ್ಟಿ ಬಾಲಕನೆಂದ ತಿಳಿಯದೆ , ಶಿವನು ಆ ಬಾಲಕನ ಶಿರವನ್ನು ಕತ್ತರಿಸಿದನು. ಪಾರ್ವತಿಯು ಹೊರಗೆ ಬಂದು ನೋಡಲಾಗಿ ಶಿರಚ್ಛೇದವಾದ ದೇಹ ಬಿದ್ದಿತ್ತು.
                     ತಾಯಿಯು ತನ್ನ ಮಗನಿಗೆ ಜೀವ ಬರಬೇಕೆಂದು ಹಠ ಹಿಡಿದು ಕುಳಿತಳು. ಪಾರ್ವತಿ ಹಠಕ್ಕೆ ಸೋತ ಶಿವನು ದೇಹಕ್ಕೆ ಜೀವ ಕೊಡಲು ಒಪ್ಪಿ ಬ್ರಹ್ಮನನ್ನು ಕೇಳಲು, ಬ್ರಹ್ಮನು ಪ್ರಾಣಿಯ ತಲೆಯನ್ನು ಜೋಡಿಸಿ ಜೀವ ಕೊಡಬಹುದೆಂದು ಹೇಳಲಾಗಿ, ಶಿವನು ತನ್ನ ಅನುಚರರನ್ನು ಕರೆದು ಉತ್ತರ ದಿಕ್ಕಿಗೆ ಮಲಗಿದ್ದ ಪ್ರಾಣಿಯ ತಲೆಯನ್ನು ತರಲು ಹೇಳಿದನು. ಉತ್ತರ ದಿಕ್ಕಿಗೆ ಮಲಗಿದ ಪ್ರಾಣಿಯ ತಲೆಯನ್ನು ಹುಡುಕಲು ಹೊರಟ ಅನುಚರರಿಗೆ ಸಿಕ್ಕಿದ್ದು ಆನೆಯ ತಲೆ. ಆನೆಯ ತಲೆಯನ್ನು ತಂದು ಜೀವತುಂಬಲು ಪಾರ್ವತಿದೇವಿಗೆ ಚಿಂತೆ ಕಾಡಿತು. ಯಾರು ಪ್ರಾಣಿತಲೆ ಇರುವ ನನ್ನ ಮಗನಿಗೆ ಬೆಲೆ ಕೊಡುತ್ತಾರೆ ಎಂದು ಆ ಚಿಂತೆಯನ್ನು ಹೋಗಿಸಲು ಪರಶಿವನು ಗಣಪತಿಯನ್ನು ಗಣಗಳಿಗೆ ಅಧಿನಾಯಕನನ್ನಾಗಿ ಮಾಡಿ ಎಲ್ಲಾ ದೇವತೆಗಳಿಂದ ಪೂಜೆ ಸ್ವೀಕರಿಸಲು, ಪೂಜೆಗೆ ಎಲ್ಲಾ ದೇವತೆಗಳಿಂದ ಮೊದಲು ಗಣಪನಿಗೆ ಸಿಗುವಂತೆ ಅನುಗ್ರಹಿತನಾದನು.
                     ಅಂತಹ ಗಣಪತಿಯು ಮಳಲಕೊಪ್ಪ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡ್ಡಿದ್ದೇ ರೋಚಕ, ಇಂದಿನ ಬಲಮುರಿ ಗಣಪತಿ ಇರುವ ಜಾಗದಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಗ್ರಾಮದ ಹಿರಿಯರು ನಿರ್ಧರಿಸಿದರು, ಆದರೂ ಎಲ್ಲವೂ ಗಣಪನ ಇಚ್ಛೆಯಂತೆ ಕೊನೆಯಲ್ಲಿ ವಿಘ್ನವಿನಾಯಕನದ ಗಣಪನಿಗೆ ಸುಂದರ ದೇವಾಲಯ ನಿರ್ಮಾಣ ಗೊಂಡಿತ್ತು. ಈ ವಿಗ್ರಹದ ವಿಶೇಷತೆಯೇನೆಂದರೆ ಇದನ್ನು ತಮಿಳುನಾಡಿನಿಂದ ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ಬಲಮುರಿ ಗಣಪನಿಗೆ ಸುತ್ತಮುತ್ತ ಹಳ್ಳಿಗಳಿಂದ ಭಕ್ತರು ಬಂದು ಸ್ವಾಮಿಯ ಸೇವೆಯನ್ನು ಮಾಡಿಸುತ್ತಾರೆ.
                    ಈ ದೇವಸ್ಥಾನದ ಮತ್ತೊಂದು ವಿಶೇಷವೆಂದರೆ ಇಲ್ಲಿ ಹೋಮಹವನ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುತ್ತವೆ . ಪ್ರತಿ ಹುಣ್ಣಿಮೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕವಾದ ಸತ್ಯನಾರಾಯಣ ಪೂಜೆ ಹಾಗೂ ಪ್ರತಿ ತಿಂಗಳು ಬರುವ ಸಂಕಷ್ಟಿಯಲ್ಲಿ ಸಂಕಷ್ಟಹರ ಚತುರ್ಥಿಪೂಜೆ ವಿಜೃಂಭಣೆಯಿಂದ ನಡೆಯುತ್ತದೆ. ಯಾವುದೇ ಜಾತಿ ಮತ ಬೇಧವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ.
                 ಇಂತಹ ಗಣಪನ ಗೋಪುರ ಕಾರ್ಯವು ಪೂರ್ಣಗೊಂಡಿದ್ದು ಇದೇ ತಿಂಗಳು ಊರಿನ ಗುರುಹಿರಿಯರ ಸಮಕ್ಷಮದಲ್ಲಿ ಶಿಖರ ಪ್ರತಿಷ್ಠಾಪನೆ ಕಾರ್ಯವು 15/07/2021ರಂದು ವಿಜ್ರಂಭಣೆಯಿಂದ ನಡೆಯುತ್ತಿದೆ. ಇದೇ ಸಮಯದಲ್ಲಿ ನವಗ್ರಹ ಬಿಂಬ ಪ್ರತಿಷ್ಠಾಪನೆ ಹಾಗೂ ಅಶ್ವತ್ಥ ವೃಕ್ಷ ಉದ್ಯಾಪನೆ ನಡೆಯುತ್ತಿದ್ದು ಸಕಲವೂ ಸ್ವಾಮಿಯ ಇಚ್ಛೆಯಂತೆ ಪೂರ್ಣಗೊಳ್ಳುವುದಿದೇ, ಗಣಪನು ಸಮಸ್ತ ಭಕ್ತರನ್ನು ಆಶೀರ್ವದಿಸುತ್ತಾ ಪ್ರತಿಷ್ಠಾಪನೆಗೊಂಡಿದ್ದಾರೆ.

Saturday, July 10, 2021

ಬದಲಾದ ದೇವತೆ - ಭಾಗ-2

..ಒಟ್ಟಿನಲ್ಲಿ ರೌದ್ರ ರೂಪಿಣಿ, ಆಕೆಯ ತಂಗಿಯೂ ನಾಲಿಗೆಯನ್ನು ಹೊರಗೆ ಚಾಚಿದ ರುದ್ರ ರೂಪಿಣಿ. ಅವರು ರಾಕ್ಷಸರನ್ನು ಸಂಹರಿಸಿದವರು. ಮಾಂಸ ಪ್ರಿಯರು ಕೋಳಿ, ಕೋಣ, ಕುರಿಗಳನ್ನು ಬಲಿ ತೆಗೆದುಕೊಂಡು ಬರುತ್ತಿದ್ದವರು.
                 ಕಾಲಚಕ್ರದ ಸುಳಿಗೆ ಸಿಲುಕಿ ಎಲ್ಲರೂ ಬದಲಾಗಬೇಕು ಇಲ್ಲವಾದರೆ ಅಸ್ತಿತ್ವ ಉಳಿಯುವುದು ಕಷ್ಟವಾಗುತ್ತದೆ. ಬದಲಾದರೂ ದೇವತೆಗಳೇ ಬದಲಾದರೂ ಸಾಮಂತರ ಕುಲದೇವತೆಯಾದ ಮೇಲೆ ಆಕೆಗೆ ಕೋಣ, ಕುರಿ, ಕೋಳಿಗಳನ್ನು ಬಲಿಕೊಡುವುದು ನಿಲ್ಲಿಸಲಾಯಿತು. ಆಕೆ ನೆಲೆಸಿದ್ದ ಆಕೆಯ ಸ್ಥಾನದಿಂದ ಆಕೆಯ ಆಚರಣೆಗಳನ್ನು ದೂರ ಮಾಡಲಾಯಿತು. ಬೆಟ್ಟದ ತುದಿಯಲ್ಲಿ ಇದ್ದ ಆಚರಣೆಯನ್ನು ಬೆಟ್ಟದ ಪಾದದ ಕೆಳಗೆ ತರಲಾಯಿತು. ಆಕೆ ಬಲಿ ಪಡೆಯುತ್ತಿದ್ದ ದೇವತೆ ಎನ್ನಲು ಸಾಕ್ಷಿಯೆನ್ನುವಂತೆ ಇಂದಿಗೂ ಬೆಟ್ಟದ ತಪ್ಪಲಿನ ಕೆಳಗೆ ಆಕೆಗೆ ಬಲಿಯನ್ನು ಕೊಡಲಾಗುವುದು.
         ರಾಜಾಶ್ರಯದಲ್ಲಿ ಆಕೆ ಬದಲಾದಳು ಆಕೆಯನ್ನು ರೌದ್ರ ರೂಪದಿಂದ ಸಾತ್ವಿಕತೆ ದೇವತೆ ಎನ್ನುವಂತೆ ಚಿತ್ರಿಸಲಾಯಿತು. ಆಕೆಯು ತಾಯಿ , ಆಕೆ ಮಕ್ಕಳು  ಇಷ್ಟಪಟ್ಟಂತೆ ಇರಲು ಬಯಸಿದಳೆನೋ ಎನ್ನುವಂತೆ ಬದಲಾದಳು, ಒಟ್ಟಿನಲ್ಲಿ ಬದಲಾಗಿದ್ದಳು ಕೊನೆಗೆ ಬರೀ ಕೆಳವರ್ಗದ ತಾಯಿಯಾಗಿದ್ದ ಆಕೆ ಮೇಲ್ವರ್ಗಕ್ಕೆ ಹತ್ತಿರವಾದಳು. ಕೊನೆಗೆ ನಾಡದೇವತೆಯಾಗಿ ಹೋದಳು. ಇಂದು ಆಕೆಯದು ರಾಜಬೀದಿ ಮೆರವಣಿಗೆ ಏಕೆಂದರೆ ಬದಲಾದಳು, ಬದಲಾವಣೆ ಆಕೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದಿತು.
                 ನಾವು ಅಷ್ಟೇ ಬದಲಾಗಬೇಕು ನಮ್ಮ ಉನ್ನತಿಗಾಗಿ ಬದಲಾಗಬೇಕು ನಮ್ಮತನವನ್ನು ಉಳಿಸಿಕೊಂಡು ಧರ್ಮದ ಹಾದಿಯಲ್ಲಿ ನಡೆಯುತ್ತ ಬದಲಾಗಬೇಕು. ಬದಲಾವಣೆ ಜಗದ ನಿಯಮ ನಾವು ಬದಲಾದರೂ ಬದಲಾಗದಿದ್ದರೂ ಸಮಯ ಎಲ್ಲವನ್ನೂ ಬದಲು ಮಾಡುತ್ತದೆ. ಬದಲಾದರೆ ಉಳಿಯುತ್ತೇವೆ ಇಲ್ಲವಾದರೆ ಅಳಿಯುತ್ತೇವೆ .ಆಕೆ ನಮಗೆ ಕಲಿಸುತ್ತಿರುವ ಪಾಠ ಅದು. ಬದಲಾದಳು ತಾಯಿಯೇ ಬದಲಾದಳು ಇನ್ನು ನಾವು ಆಕೆಯ ಮಕ್ಕಳು, ಬದಲಾಗದಿದ್ದರೆ ಜಗದ ನಿಯಮದ ವಿರುದ್ದ ಅಳಿಯುತ್ತೇವೆ ಬದಲಾದರೆ ಉಳಿಯುತ್ತೇವೆ.

Sunday, June 20, 2021

ಬದಲಾದ ದೇವತೆ - ಭಾಗ-1

           ಸೃಷ್ಟಿಯ ರಹಸ್ಯ ಏನೆಂದು ತಿಳಿಯುವ ಪ್ರಯತ್ನ ಮನುಷ್ಯ ಮಾಡುತ್ತಲೇ ಇರುತ್ತಾನೆ. ಆದರೆ ಅವನಿಗೆ ಅದು ನಿಲುಕದ ಹೋದ ವಿಷಯವಾಗಿಯೇ ಉಳಿದಿದೆ ಏಕೆಂದರೆ ಈ ಜಗತ್ತಿನಲ್ಲಿ ಯಾವುದೂ ಸ್ಥಿರವಲ್ಲ .ಸ್ಥಿರವಲ್ಲದಿದ್ದರೆ ಇಲ್ಲದಿದ್ದರೆ ಮತ್ತೇನು ಎಂದು ಪ್ರಶ್ನೆ ಏಳುವುದು ಸಹಜ.
            ಆಕೆ ಒಬ್ಬಳು ದೇವತೆ ಲೋಕದೃಷ್ಟಿಯಲ್ಲಿ .ಆದರೆ ಆಕೆ ಸಾಮಾನ್ಯ ಹೆಣ್ಣು ಅಸಾಮಾನ್ಯ ವಿದ್ಯೆಯನ್ನು ಕರಗತ ಮಾಡಿಕೊಂಡ ಸಂಪನ್ನೆ. ತ್ರಿಲೋಕ ಅಂದರೆ ತ್ರಿಪುರ ಸುಂದರಿಯ ಅಕ್ಕ. ತ್ರಿ ಎಂದರೆ ಮೂರು ಪುರ ಎಂದರೆ ಊರು ಆಕೆ ತ್ರಿಪುರ ಸುಂದರಿ ಅಂದರೆ ಮೂರು ಊರು ಅಥವಾ ಲೋಕದ ಸುಂದರಿ .ಈಕೆ ಹುಟ್ಟಿಗೆ ಕಾರಣ, ಅಕ್ಕ ಮಾಡಲಾಗದ್ದನ್ನು ತಂಗಿ ಮಾಡಲು ಹುಟ್ಟಿದ್ದಳು. ಇನ್ನು ಅಕ್ಕ ರಾಕ್ಷಸ ಕುಲವನ್ನೇ ನಾಶಮಾಡಲು ಹುಟ್ಟಿ ಬಂದಿದ್ದವಳು.
          ರಾಕ್ಷಸರ ಜೊತೆ ಕಾದಾಡಬೇಕಾದರೂ ಅಪರಿಮಿತ ಶಕ್ತಿ ಬೇಕಾಗುತ್ತದೆ. ಅಂತಹ ಶಕ್ತಿ ಸಂಪನ್ನೆ ಯಾಗುವುದು ಸುಲಭವಲ್ಲ ಅನುಭವ ಬೇಕಾಗುತ್ತದೆ, ಅನುಭವ ಪಡೆಯಬೇಕಾದದ್ದು ಕಾರ್ಯಗಳಿಂದ ರಕ್ತವನ್ನು ಚೆಲ್ಲಾಡಲು ಮೊದಲು ಸಣ್ಣಪುಟ್ಟ ಪ್ರಾಣಿಗಳ ವಧೆ ಮಾಡುತ್ತಾ ಅನುಭವ ಪಡೆಯಬೇಕು ಅದಕ್ಕೆ ಆಕೆ ಆಯ್ಕೆ ಮಾಡಿಕೊಂಡಿದ್ದು ಕೋಳಿ-ಕುರಿ ಕೋಣಗಳನ್ನು. ಅದನ್ನು ಕಡಿಯುತ್ತಾ ಕಡಿಯುತ್ತಾ ರಾಕ್ಷಸರ ವಧೆಗೆ ಸಿದ್ಧವಾದಳು.
                ಅವನೊ ಕೇಳಿದ ತಕ್ಷಣ ವರವನ್ನು ಕೊಡುವ ಶಿವನಿಂದ ವರಪಡೆದು ಶಕ್ತಿ ಸಂಪಾದಿಸಿಕೊಂಡಿದ್ದ ರಾಕ್ಷಸ. ಹೆಣ್ಣಿನ ಹೊರತಾಗಿ ಯಾರಿಂದಲೂ ಸಾವು ಬರಬಾರದು ಎಂದು ಬಯಸಿದ್ದ ವ್ಯಕ್ತಿ ಸಾಮಾನ್ಯ ಹೆಣ್ಣು ಏನು ಮಾಡಬಲ್ಲಳು ಎಂಬ ಬಲವಾದ ನಂಬಿಕೆ .ಅದಕ್ಕೆ ನನ್ನ ಸಾವು ಅಷ್ಟು ಸುಲಭವಲ್ಲ ಹೆಣ್ಣುನನ್ನು ಮಣಿಸುವದವನಷ್ಟು ಶಕ್ತಿಹೀನ ನಾನಲ್ಲ ಎಂಬ ಭ್ರಮೆ .ಇನ್ನು ಆತನ ತಮ್ಮನೋ ಅವನು ರಕ್ತದ ಕಣಕಣದಲ್ಲೂ ರಾಕ್ಷಸರನ್ನು ಸೃಷ್ಟಿ ಮಾಡುವ ವರಪಡೆದ ಬಲಶಾಲಿ .ಅಣ್ಣ ತಮ್ಮ ಇಬ್ಬರೂ ಶಿವಭಕ್ತರು, ಅವರ ನಿತ್ಯಪೂಜೆ ಏನಿದ್ದರೂ ಮಹಾ ಶಕ್ತಿಶಾಲಿಯಾದ ಮಹಾಬಲನಿಗೆ.
             ಆಕೆಯನ್ನು ರೌದ್ರ ರೂಪಿಣಿಯಾಗಿ ಬೆಳೆಸಲಾಯಿತು ಏಕೆಂದರೆ ಅವಳು ಹೋರಾಡಬೇಕಾಗಿತ್ತು. ಅಸುರ ಸಂಹಾರವೇ ಆಕೆಯ ಜನ್ಮಕ್ಕೆ ಕಾರಣವೆಂಬ ನಿರೀಕ್ಷೆಯಿತ್ತು .ರಾಕ್ಷಸರನ್ನು ಕೊಲ್ಲಲೆಂದೇ ಹುಟ್ಟಿದವಳು ಎಂಬಂತೆ ಅಗೋಚರ ವಿದ್ಯೆಗಳನ್ನು ಕಲಿಸಲಾಯಿತು. ಆಕೆಯ ವೇಷಭೂಷಣವೇ ರುದ್ರಭಯಂಕರ ಹಣೆಯಲ್ಲಿ ದೊಡ್ಡದಾದ ಕುಂಕುಮ ಮುಡಿ ಕಟ್ಟದ ಜಡೆ ಕಣ್ಣಲ್ಲಿ ಕಾಂತಿಯುತವಾದ ಹೊಳಪು, ಆಕೆಗೆ ಅಷ್ಟ ವಿದ್ಯೆಯನ್ನು ಕಳಿಸಲಾಯಿತು. ಅಷ್ಟ ಕೈಗಳಲ್ಲಿ ಅಷ್ಟ ಆಯುಧಗಳು ಒಂದು ಕೈಯಲ್ಲಿ ಹಾವುನ್ನು ಹಿಡಿದಿದ್ದರೆ ಮತ್ತೊಂದು ಕೈಯಲ್ಲಿ ಡಮರುಗ ಮಗದೊಂದು ಕೈಯಲ್ಲಿ ಬೆಂಕಿ ಜ್ವಾಲೆಯಿಂದ ಪ್ರಜ್ವಲಿಸುವ ಪಾತ್ರೆ ಮಗದೊಂದು ಕೈಯಲ್ಲಿ ರುಂಡಗಳನ್ನು ಚೆಂಡಾಡುವ ಕತ್ತಿ.....

Thursday, March 11, 2021

ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗ ಯಾವುದು ಶ್ರೇಷ್ಠ

ಭಾರತ ವಿಶ್ವದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ .ತನ್ನ ವಿಶಿಷ್ಟತೆಯಲ್ಲಿ ಜಗತ್ತನ್ನು ಮನಸೂರೆಗೊಂಡ ರಾಷ್ಟ್ರ. ಇಂತಹ ರಾಷ್ಟ್ರವು ಬ್ರಿಟಿಷರ ಆಡಳಿತದಿಂದ 1947 ರಲ್ಲಿ ಸ್ವಾತಂತ್ರ್ಯಗೊಂಡು 26 ಜನವರಿ 1950 ರಂದು ಗಣರಾಜ್ಯವಾಯಿತು. ಒಂದು ರಾಷ್ಟ್ರ ಗಣರಾಜ್ಯವಾಗಲು ಮೂಲತ ಬೇಕಾಗಿರುವುದು ಅದರದೇ ಆದಂತಹ ಕಾನೂನು ಹಾಗೂ ಸುವ್ಯವಸ್ಥೆ. ಒಂದು ರಾಷ್ಟ್ರ ಪರಿಪಕ್ವವಾಗಿ ನಡೆಯಲು ಅದರದೇ ಆದ ರೀತಿ-ರಿವಾಜುಗಳನ್ನು ಮಾಡಿಕೊಂಡಿರುತ್ತದೆ. ಅದೇ ರೀತಿ ಭಾರತವು ಆಯ್ಕೆಮಾಡಿಕೊಂಡ ವಿಧಾನ ಫೆಡರಲ್ ವ್ಯವಸ್ಥೆ. ಅದರ ಪ್ರತಿಫಲವೇ ಹುಟ್ಟಿಕೊಂಡಿದ್ದು ರಾಜ್ಯ ಹಾಗೂ ಕೇಂದ್ರಕೃತ ವ್ಯವಸ್ಥೆ .ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪರಿಕಲ್ಪನೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.
            ರಾಜ್ಯ ಹಾಗೂ ಕೇಂದ್ರ ಆಡಳಿತ ನಡೆಸಲು ಒಂದು ವ್ಯವಸ್ಥೆ ಬೇಕಾಗುತ್ತದೆ. ಅದೇ ಕಾರ್ಯಂಗ, ಆ ಕಾರ್ಯಾಂಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ ಎಂದು ನೋಡಿಕೊಳ್ಳಲು ಮತ್ತೊಂದು ವ್ಯವಸ್ಥೆ ಬೇಕಾಗುತ್ತದೆ ಅದೇ ಶಾಸಕಾಂಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಆಯ್ಕೆಯು ಜನರಿಂದ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಆಡಳಿತ ನಡೆಸುತ್ತಾರೆ. ಕಾರ್ಯಾಂಗಕ್ಕೆ ನಿರ್ದೇಶನ ನೀಡುವ ಅಧಿಕಾರ ಶಾಸಕಾಂಗಕ್ಕೆ ಇರುತ್ತದೆ. ಕೇಂದ್ರದಲ್ಲೂ ಕೂಡ ಇದೇ ಮಾದರಿಯ ಲೋಕಸಭಾ ವ್ಯವಸ್ಥೆ ಜಾರಿಯಲ್ಲಿ ಇರುತ್ತದೆ. ಜನಸಂಖ್ಯೆ ಅನುಗುಣವಾಗಿ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರಗಳನ್ನು ಮಾಡುತ್ತಾರೆ .ಕಾರ್ಯಾಂಗ ನಿರಂತರವಾಗಿ ಯಾವುದೇ ಅಡೆತಡೆ ಇಲ್ಲದೆ ಜನರ ಒಳಗೆ ಇರುವ ಒಂದು ವ್ಯವಸ್ಥೆ .ಇಲ್ಲಿ ಅಧಿಕಾರ ವರ್ಗ, ಸರ್ಕಾರಿ ನೌಕರರು ಹಾಗೂ ಇತರರು ಇರುತ್ತಾರೆ.
             ಇನ್ನು ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳ ಅಧಿಕಾರದ ಅವಧಿ ಐದು ವರ್ಷಗಳು. ಅವರ ಅವಧಿಯಲ್ಲಿ ಜನಪರ ಕೆಲಸಗಳನ್ನು ಮಾಡಿ ಮತ್ತೆ ಅಧಿಕಾರದ ಗದ್ದುಗೆ ಏರಬಹುದು ಇಲ್ಲವಾದಲ್ಲಿ ಜನರಿಗೆ ಅವರನ್ನು ತಿರಸ್ಕರಿಸುವ ಅಧಿಕಾರ ಮತಚಲಾವಣೆಯ ಮುಖಾಂತರ ಭಾರತದ ಸಂವಿಧಾನ ಅವಕಾಶ ಮಾಡಿಕೊಟ್ಟಿರುತ್ತದೆ. ಅಧಿಕಾರಕ್ಕೆ ಬಂದ ಮಾತ್ರಕ್ಕೆ ಅವರು ಕಾನೂನಿನ ಹಾಗೂ ಸಂವಿಧಾನಿಕ ಚೌಕಟ್ಟನ್ನು ಮೀರಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಂತಿಲ್ಲ . ಸಂವಿಧಾನದ ಅರಿವಿಲ್ಲದ ಜನಪ್ರತಿನಿಧಿಗಳು ಅಂತಹ ಕೆಲಸಗಳನ್ನು ಮಾಡಿ ಕೈಸುಟ್ಟುಕೊಂಡ ನಿದರ್ಶನಗಳು ಭಾರತದಲ್ಲಿ ಬಹಳ ಇವೆ.
               ಇನ್ನು ಕಾರ್ಯಂಗ ಸುಸೂತ್ರ ಆಡಳಿತ ನಿರಂತರವಾಗಿ ನಡೆಯಲು ಇರುವ ಒಂದು ಉತ್ತಮ ವ್ಯವಸ್ಥೆ ಆದರೆ ಕೆಲವೊಮ್ಮೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಗುಣವಾಗಿ ತಮ್ಮ ಕಾರ್ಯವನ್ನು ಕಾರ್ಯಂಗದವರು ತೋರುತ್ತಾರೆ. ಅಥವಾ ಒತ್ತಡದ ನಿಮಿತ್ತ ತಮ್ಮ ಕಾರ್ಯ ವ್ಯಾಪ್ತಿಯನ್ನು ಮೀರಿ ವರ್ತಿಸುತ್ತಾರೆ . ಶಾಸಕಾಂಗ ಹಾಗೂ ಕಾರ್ಯಾಂಗ ತಮ್ಮ ವ್ಯಾಪ್ತಿಯನ್ನು ಮೀರಿ ವರ್ತಿಸಿದಾಗ ನ್ಯಾಯಾಂಗವು ಸಂವಿಧಾನಾತ್ಮಕ ರಕ್ಷಣೆಯ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಬಹುದು.
            ಇನ್ನು ನ್ಯಾಯಾಂಗ ವ್ಯವಸ್ಥೆಯು ತುಂಬಾ ಅಚ್ಚುಕಟ್ಟಾಗಿ ಮೂಡಿ ಬಂದಿರುವುದು ಇಡೀ ವಿಶ್ವದಲ್ಲಿ ಭಾರತದಲ್ಲಿ ಮಾತ್ರ ಏಕೆಂದರೆ ಇಲ್ಲಿ ನ್ಯಾಯಾಧೀಶರನ್ನು ಯಾವುದೇ ರಾಜಕೀಯ ವ್ಯವಸ್ಥೆ ಆಯ್ಕೆ ಮಾಡುವುದಿಲ್ಲ . ಭಾರತದಲ್ಲಿ ನ್ಯಾಯಾಧೀಶರನ್ನು ನ್ಯಾಯಾಧೀಶರೇ ಆಯ್ಕೆ ಮಾಡುವ ವಿಧಾನ ಚಾಲ್ತಿಯಲ್ಲಿದೆ. ಅದು ನ್ಯಾಯಾಂಗವನ್ನು ಪಕ್ಷತೀತವಾಗಿ ಕಾರ್ಯನಿರ್ವಹಿಸಲು ಅನುವುಮಾಡಿಕೊಡುತ್ತದೆ. ನ್ಯಾಯಾಂಗ ತೀರ್ಪುಗಳು ಭಾರತದ ಸಂವಿಧಾನ ರಕ್ಷಣೆಗೆ ಒಳಪಟ್ಟು ತಮ್ಮ ತೀರ್ಪನ್ನು ನೀಡುತ್ತ ಬಂದಿವೆ. ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಈ ನೆಲದ ಅಂತಿಮ ಕಾನೂನಾಗಿ ರೂಪಗೊಂಡಿರುವ ಇತಿಹಾಸವಿದೆ.
              ಭಾರತದ ರಾಷ್ಟ್ರೀಯ ಲಾಂಛನದಲ್ಲಿ ಕಾಣುವ ಮೂರು ಸಿಂಹಗಳಂತೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಕಾರ್ಯನಿರ್ವಹಿಸುತ್ತವೆ ಕಾಣದೆ ಇರುವ ಸಿಂಹವೇ ಪ್ರಜಾಪ್ರಭುತ್ವ .ಈ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮೂರು ವ್ಯವಸ್ಥೆಗಳು ಸುಗಮವಾಗಿ ಸಾಗಬೇಕು. ಅದರಲ್ಲೂ ನ್ಯಾಯಾಂಗ ವ್ಯವಸ್ಥೆಯು ಶಾಸಕಾಂಗ ಹಾಗೂ ಕಾರ್ಯಾಂಗದ ತಪ್ಪುಗಳನ್ನು ತಿದ್ದುಪಡಿ ಮಾಡಿ ಸಂವಿಧಾನವನ್ನು ರಕ್ಷಣೆ ಮಾಡುತ್ತ ನಡೆಯಬೇಕಾಗುತ್ತದೆ. ನ್ಯಾಯಾಂಗ ವ್ಯವಸ್ಥೆ ಏರುಪೇರಾದರೆ ಪ್ರಜಾಪ್ರಭುತ್ವದ ರಕ್ಷಣೆ ಅಸಾಧ್ಯ . ಪ್ರಜಾಪ್ರಭುತ್ವದ ವ್ಯವಸ್ಥೆಗೆ ದಕ್ಕೆಯಾದರೆ ರಾಷ್ಟ್ರೀಯ ಏಕತೆಗೆ ಭಂಗ ಉಂಟಾಗುತ್ತದೆ. ಅಂತಿಮವಾಗಿ ಸರ್ವಾಧಿಕಾರಿಗಳು ಹುಟ್ಟಿಕೊಳ್ಳುವ ಸಂಭವವಿರುತ್ತದೆ ಅಂತಹ ಒಂದು ಸಂದರ್ಭವನ್ನು ತಡೆಯುವಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆ ಸಫಲವಾಗಿದೆ. ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕಾದರೆ ಮೂರು ವ್ಯವಸ್ಥೆಯು ಸಮನಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಾಧ್ಯ..

Thursday, November 26, 2020

ಪ್ರೀತಿ ಪ್ರೇಮ ಪಯಣ

ಪ್ರೀತಿಯೆಂದರೆ ಜಗತ್ತಿನ ಶಕ್ತಿ ಆ ಶಕ್ತಿಯಿಂದಲೇ ಜಗತ್ತು ನಡೆಯುವುದು ಎಂದರೆ ತಪ್ಪಾಗಲಾರದು. ಪ್ರೀತಿ ಎಂಬುದು ಇದೇ ರೀತಿ ಇರುತ್ತದೆ ಎಂದು ಹೇಳಲಾಗದು. ಅದರ ಶಕ್ತಿ ಅನಂತ, ಆಗಾದ ಎಷ್ಟು ಅಗಾದವೆಂದರೆ ಮಹಾನ್ ಸಾಮ್ರಾಜ್ಯಗಳನ್ನು ಕಟ್ಟುವಷ್ಟು ಹಾಗೂ ಮಹಾನ್ ಸಾಮ್ರಾಜ್ಯಗಳನ್ನು ಪತನ ಮಾಡುವಷ್ಟು .ಪ್ರೀತಿಯೆಂಬುದು ಬರಿ ಮನುಷ್ಯನಿಗೆ ಸಂಬಂಧಪಟ್ಟ ವಿಷಯವಲ್ಲ .ಪ್ರೀತಿ ಸಕಲ ಜೀವರಾಶಿಗಳಲ್ಲಿ ಇರುತ್ತದೆ. ಪ್ರೀತಿ ಇಲ್ಲದ ಬದುಕು ಶೂನ್ಯ ಎಂಬ ಭಾವನೆ ಮೂಡುತ್ತದೆ. ಅದರಲ್ಲೂ ಹದಿಹರಿಯದ ಪ್ರೀತಿಯಂದರೆ ಕೇಳಬೇಕಾ ? ಪ್ರೀತಿಯಂದರೆ ಅದು ಬರೀ ಹದಿಹರೆಯದವರ ನಡುವೆ ಮಾತ್ರ ಇರುವಂತಹದ ? ಅಥವಾ ಸಕಲ ಜೀವರಾಶಿಗಳಲ್ಲಿ ಇರುವಂತಹದ ? ಎಂದು ನೋಡುತ್ತಾ ಹೋದರೆ ನಮಗೆ ಪ್ರೀತಿ ಏಕೆ ಹುಟ್ಟುತ್ತದೆ ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ಸಾಮಾನ್ಯವಾಗಿ ಕಾಡುವ ಪ್ರಶ್ನೆ ? ಮೊದಲು ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ನೋಡೋಣ ಪ್ರೀತಿ ಎಲ್ಲಾ ಸಂಬಂಧಗಳಲ್ಲಿ ಇರುವಂತಹ ಸಾಮಾನ್ಯ ವಿಷಯ ಆದರೆ ಅದನ್ನು ದೀರ್ಘಕಾಲದಲ್ಲಿ ಉಳಿಸಿಕೊಳ್ಳುವ ಬಗೆ ಹೇಗೆ ?
                   ಪ್ರೀತಿಯಲ್ಲಿ ಹಲವು ಬಗೆ ಅದು ತಂದೆ ತಾಯಿಯ ಪ್ರೀತಿಯಿಂದ ಹಿಡಿದು ತಮ್ಮ ತಂಗಿಯಂದಿರು ಹಾಗೂ ಸಂಬಂಧಿಕರಿಂದ ಸಿಗುವ ಪ್ರೀತಿ ಅಮೂಲ್ಯವಾದದ್ದು. ಒಂದು ಹುಡುಗ ಹುಡುಗಿ ಹಾಗೂ ನಿಷ್ಕಲ್ಮಶ ಸ್ನೇಹದ ಪ್ರೀತಿ ಇನ್ನೂ ಅಮೋಘ. ಸ್ನೇಹದ ಪ್ರೀತಿಯಲ್ಲಿ ಕಾಳಜಿ ಇರುತ್ತದೆ. ಸ್ನೇಹ ಎಲ್ಲ ಸಂಬಂಧಗಳ ಸಮ್ಮಿಲನ ಅಲ್ಲಿ ತಂದೆಯ ಕಾಳಜಿ ತಾಯಿಯ ಮಮತೆ, ತಮ್ಮ ಹಾಗೂ ತಂಗಿಯಂದಿರ ಕುಚೇಷ್ಟೆ ಇರುತ್ತದೆ. ಇನ್ನು ಹದಿಹರೆಯದ ಪ್ರೀತಿಯಲ್ಲಿ ಹಲವು ಬಗೆಗಳು ಇರುತ್ತವೆ. ಹದಿಹರೆಯದವರು ಎಂದರೆ 15 ವರ್ಷದಿಂದ 23 ವರ್ಷದೊಳಗಿನ ಪ್ರೀತಿಯನ್ನು ಹದಿಹರೆಯದ ಪ್ರೀತಿಯೆಂದು ಕರೆಯಬಹುದು. 15ವರ್ಷದ ಪ್ರೀತಿ ಆಕರ್ಷಣೆಯಿಂದ ಹುಟ್ಟುವಂತಹ ಒಂದು ಕ್ರಿಯೆ, ಅದು ನಮ್ಮ ದೇಹದಲ್ಲಿ ಆಗುವ ಹಾರ್ಮೋನುಗಳ ಬದಲಾವಣೆಯಿಂದ ಆಗುವಂತಹ ಆಕರ್ಷಣೆ ದೈಹಿಕ ಆಕರ್ಷಣೆಯಿಂದ ಶುರುವಾಗಿ ಅರ್ಥಮಾಡಿಕೊಳ್ಳುವ ಮಟ್ಟಿಗೆ ಮುಂದುವರೆದರೆ ಆ ಪ್ರೀತಿ  ದೀರ್ಘಕಾಲ ಉಳಿಯುತ್ತದೆ. ಇಲ್ಲವಾದಲ್ಲಿ ಆಕರ್ಷಣೆ ಕಡಿಮೆಯಾದಂತೆ ಪ್ರೀತಿ ಕಡಿಮೆಯಾಗುತ್ತ ಹೋಗುತ್ತದೆ. ಅಂದರೆ ಅದು ಪ್ರೀತಿಯಲ್ಲ ಆಕರ್ಷಣೆ ಎಂದಾಯಿತು.
                 ಇನ್ನು ಕಾಲೇಜು ದಿನಗಳಲ್ಲಿ ಆಗುವ ಪ್ರೀತಿ ಆಕರ್ಷಣೆ ಜೊತೆಗೆ ಭ್ರಮಾತ್ಮಕ ಲೋಕದೊಂದಿಗೆ ಬೆಸೆದಿರುತ್ತದೆ. ಅಂದರೆ ಯಾವುದೋ ಸಿನಿಮಾದ ಪ್ರಭಾವ ಆಗಿರಬಹುದು ಅಥವಾ ಪ್ರೀತಿಸುವ ವ್ಯಕ್ತಿಯ ಆ ಸಮಯದ ನಡವಳಿಕೆ ಆಗಿರಬಹುದು ಅದನ್ನು ಇಷ್ಟಪಡುತ್ತಿದಂತೆ ಹುಟ್ಟುವ ಪ್ರೀತಿ, ಅದು ವಾಸ್ತವಿಕತೆಗೆ ದೂರವಾಗಿರುವಹಂತಹದ್ದು. ಇನ್ನು 23ರ ನಂತರ ಆಗುವ ಪ್ರೀತಿ ವಾಸ್ತವಿಕತೆಗೆ ಸಮೀಪ ಇರುವ ವಯಸ್ಸಿನಲ್ಲಿ ಆಗುವ ಪ್ರೀತಿ ಅಲ್ಲಿ ಭ್ರಮಾತ್ಮಕ ಹಾಗು ವಾಸ್ತವಿಕತೆಯ ಸಣ್ಣ ಎಳೆಯ ಅಂತರವಿರುತ್ತದೆ. ಆ ಅಂತರ ತಿಳಿಯುವುದು 23ರ ನಂತರ, ಬದುಕಿನ ಹಾಗು ಮನೆಯಲ್ಲಿನ ಜವಾಬ್ದಾರಿ ವ್ಯಕ್ತಿಯನ್ನು ಭ್ರಮಾತ್ಮಕದಿಂದ ವಾಸ್ತವಿಕತೆಗೆ ತಂದು ನಿಲ್ಲಿಸುತ್ತದೆ. ಆನಂತರದ ವಯಸ್ಸಿನಲ್ಲಿ ಪ್ರೀತಿ ಹುಟ್ಟುವ ಪ್ರಮಾಣ ಕಡಿಮೆ ಆದರೆ ಅದು ದೀರ್ಘಕಾಲ ಉಳಿಯುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾದರೆ ಹದಿಹರೆಯದ ಪ್ರೀತಿ ಉಳಿಯುವುದಿಲವಾ ? ಎಂದು ಪ್ರಶ್ನೆ ಕಾಡುವುದು ಸಹಜ. ಹದಿಹರೆಯದ ಪ್ರೀತಿಯು ಉಳಿಯುತ್ತದೆ. ಆದರೆ ಅದು ಆಕರ್ಷಕ ಹಾಗೂ ಬ್ರಹ್ಮ ತ್ಮಕ ಹಂತವನ್ನು ದಾಟಿರಬೇಕು. ಆಗ ಮಾತ್ರ ಅಂತಹ ಪ್ರೀತಿ ಉಳಿಯಲು ಸಾಧ್ಯ.
                 ಪ್ರೀತಿಯಲ್ಲಿ ಮೂಲವಾಗಿ ಬೇಕಾಗಿರುವುದು ನಂಬಿಕೆ .ಅದು ಪ್ರೀತಿಯಲ್ಲಿ ಮಾತ್ರವಲ್ಲ ಎಲ್ಲ ಸಂಬಂಧಗಳಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಅಂಶ, ನಂಬಿಕೆ ಇಲ್ಲದೆ ಯಾವ ಪ್ರೀತಿಯು ಉಳಿಯುವುದಿಲ್ಲ ನಂಬಿಕೆ ಎಲ್ಲಾ ಸಂಬಂಧಗಳ ಜೀವಾಳ. ನಂಬಿಕೆ ಹೊರತಾದ ಸಂಬಂಧ ಒಂದು ರೀತಿ ಯಾಂತ್ರಿಕ ಬದುಕಿನಂತೆ, ಬದುಕು ನಡೆಯುತ್ತದೆ ಆದರೆ ಒಳಗಿನಿಂದ ಅಂದರೆ ಅಂತರಂಗದಿಂದ ಮನುಷ್ಯ ಖುಷಿಯಾಗಿರುವುದು ಇಲ್ಲ ,ಆದರೆ ಬದುಕಿರುತ್ತಾನೆ. ಪ್ರೀತಿ ದೀರ್ಘಕಾಲ ಉಳಿಯಲು ನಂಬಿಕೆ ಒಂದೆ ಸಾಲದು ಪರಸ್ಪರ ಅರ್ಥಮಾಡಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಪರಸ್ಪರ ಅರ್ಥಮಾಡಿಕೊಂಡು ನಂಬಿಕೆ ಆಧಾರದ ಮೇಲೆ ಬದುಕಿದರೆ ಸಂಬಂಧಗಳು ಖುಷಿಯನ್ನು ನೆಮ್ಮದಿಯನ್ನು ಸಂತೃಪ್ತಿಯನ್ನು ನೀಡಿ ಬದುಕನ್ನು ಅರ್ಥಪೂರ್ಣಗೊಳಿಸುತ್ತವೆ.

Thursday, November 19, 2020

ಪ್ರೇಮದ ಅನ್ವೇಷಣೆ ಭಾಗ - 25.

ಅವರ ಕುಟುಂಬವನ್ನು ಕಳುಹಿಸಿಕೊಡುವಾಗ ಮೊದಲಬಾರಿ ಮನಸ್ಸಿಗೆ ತುಂಬಾ ಬೆಲೆ ಬಾಳುವುದನ್ನು ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಭಾವ ವಿಧುವನ್ನು ಬಹಳವಾಗಿ ಕಾಡಿತು. ಜಾನಕಿ ಅಮ್ಮನವರು ಅತ್ತುಬಿಟ್ಟರು ಅಷ್ಟು ಅನನ್ಯವಾಗಿತ್ತು ಅವರ ಸಂಬಂಧ ಅವರನ್ನು ಕಳುಹಿಸಿದ ದಿನ ತುಂಬಾ ದುಃಖದ ದಿನವಾಗಿತ್ತು .ಆದರೂ ವಿಧುವಿಗೆ ಒಂದು ಸಮಾಧಾನಕರ ವಿಷಯ, ಏನೆಂದರೆ ಅದಿತಿಯ ಫೋನ್ ನಂಬರ್ ಸಿಕ್ಕಿದ್ದು ಇಂದು ಸಂಜೆಯಾದರೂ ನಾನು ನನ್ನ ಪ್ರೀತಿಯ ವಿಷಯವನ್ನು ಹೇಳಿಬಿಡಬೇಕು ಎಂದು ನಿರ್ಧರಿಸಿದ ವಿಧು.
                  ಅಂದು ವಿಧು ತನ್ನ ಸ್ನೇಹಿತನಾದ ಸಾಗರ್ ಒಟ್ಟಿಗೆ ಏಂದಿನಂತೆ ಸಂಜೆ ವಾಯು ವಿಹಾರಕ್ಕೆ ಹೋದನು ದಿನ ನಿತ್ಯದ ವಾಯುವಿಹಾರಕ್ಕೆ ಮತ್ತುರಿನಿಂದ ಹೊಸಳ್ಳಿಗೆ ಕಾಲು ಸೇತುವೆ ಮೇಲೆ ಹೋಗಿ ಹೊಸಳ್ಳಿ ದಡವನ್ನು ಮುಟ್ಟಿ ಬರುತ್ತಿದ್ದರು. ಅಂದು ಎಂದಿನಂತೆ ಕಾಲು ಸೇತುವೆ ಮೇಲೆ ಸಣ್ಣದಾಗಿ ಹರಿಯುವ ನೀರಿನ ಮೇಲೆ ನಡೆದು ಹೋಗುವಾಗ ವಿಧುವಿನ ಫೋನ್ ರಿಂಗಣಿಸಿತು.  ಫೋನನ್ನು ತೆಗೆದುಕೊಳ್ಳವ ಸಮಯದಲ್ಲಿ ಕಾಲುಜಾರಿದ ವಿಧು. ಸಾಗರ್ ವಿಧುವಿನ ಕೈಯನ್ನು ಹಿಡಿದ, ಜಾರಿದ ರಭಸಕ್ಕೆ ಫೋನ್ ನೀರಿನ ಅಂತರಾಳವನ್ನು ಸೇರಿತು. ಸಾಗರ್ ತಕ್ಷಣ ನೀರಿಗೆ ಜಿಗಿದ ಫೋನ್ ತರಲೆಂದು. ಆದರೆ ಫೋನ್ ಸಿಗಲಿಲ್ಲ ಅದಾಗಲೇ ನೀರಿನ ಅಂತರಾಳದಲ್ಲಿ ಫೋನ್ ಮುಳುಗಿಹೋಯಿತು. ವಿಧು ಹಾಗೂ ಅದಿತಿಯ ನಡುವೆ ಇದ್ದ ಏಕಮಾತ್ರ ಕೊಂಡಿ ಅಂತಿದ್ದ ಫೋನ್ ನೀರಿಗೆ ಜಾರಿದ ಕೂಡಲೇ ವಿಧುವಿನ ಮನವು ನೀರಿನಲ್ಲಿ ಜಾರಿತು ವಿಧು ಮೌನವಾದ.

   *                   *                 *

ಕೃತಜ್ಞತೆಗಳು

ನನ್ನ ಮೊಟ್ಟ ಮೊದಲ ಕೃತಜ್ಞತೆ ನಿಮಗೆ ಓದುಗರಿಗೆ ಸಲ್ಲುತ್ತದೆ. ಈ ಕಥೆಯು ನಿಮ್ಮಲ್ಲಿ ಆಸಕ್ತಿಯನ್ನು ಕೆರಳಿಸಿತು ಎನ್ನುವುದು ನನಗೆ ತುಂಬಾ ಪ್ರಿಯವಾದ ಸಂಗತಿಯಾಗಿದೆ. ಒಂದು ಕಥೆ ತುಂಬಾ ಅಮೋಘವಾಗಿ ಬರಬೇಕಾದರೆ ಅದರ ಹಿಂದೆ ಹಲವಾರು ಕಾಣದ ಕೈಗಳು ತಮ್ಮ ಕೆಲಸಗಳನ್ನು ಮಾಡಿರುತ್ತವೆ. ಈ ಕಥೆಯನ್ನು ಮೊದಲ ಬಾರಿ ಓದಿದ ಸಾಹಿತ್ಯ ಪ್ರಿಯರಾದ ಪುಟ್ಟಮಾರರಶೆಟ್ಟಿ ಅಣ್ಣನವರು ಕಥೆಯಲ್ಲಿ ಇದ್ದ ಹಲವಾರು ಪುನರಾವರ್ತಿತ ಪದಗಳನ್ನು ತೆಗೆಯಲು ಹೇಳಿ ಅದಕ್ಕೆ ಸ್ಪಷ್ಟ ರೂಪವನ್ನು ಕೊಟ್ಟರು.
                ಇನ್ನು ನನ್ನ ಕಥೆಯನ್ನು ಮೆಚ್ಚಿ ನ್ಯೂಸ್ ಮೈಸೂರ್ ವೆಬ್ಸೈಟ್ನಲ್ಲಿ ಪ್ರಕಟ ಮಾಡುತ್ತಿದ್ದ ಹೊಸದಿಗಂತ ಪತ್ರಿಕೆಯ ಅಂಕಣಕಾರ ಹಾಗೂ ಲೇಖಕರಾದ ಪ್ರವೀಣ್ ಕುಮಾರ್ ಮಾವಿನಕಾಡು ಅಣ್ಣನವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ.
               ಅಂತಿಮ ರೂಪದಲ್ಲಿ ಈ ಕಥೆಯನ್ನು ನೀವು ಓದುವಂತೆ ಮಾಡಿದ ಕಥೆಯ ಅಭಿಮಾನಿಗಳಿಗೆ ಅನಂತ ಅನಂತ ಧನ್ಯವಾದಗಳು.

Wednesday, November 18, 2020

ಪ್ರೇಮದ ಅನ್ವೇಷಣೆ ಭಾಗ - 24

ಅದು ನನ್ನ ಹುಡುಗಿ ನನಗೆ ಸಿಗದವಳು ನಿಮಗೆ ಸಿಕ್ಕಿದ್ದಾಳೆ. ತಮಾಷೆ ಮಾಡಿದ ಕೂಡಲೇ ಅವರು, ಅದಿತಿ ನನ್ನ ಕೈರುಚಿಯನ್ನು ವಿಧು ನೋಡಲಿ ನಾನು ಇವತ್ತು ಅಡುಗೆಯನ್ನು ಮಾಡುತ್ತೇನೆ ಬಿಡಿ ಎಂದು ಹೇಳಿ ಅಡಿಗೆಯನ್ನು ಮಾಡಿ ಇಟ್ಟಿದ್ದಾಳೆ . ನಸುನಕ್ಕ ವಿಧು ಅದಕ್ಕೆ ಊಟದಲ್ಲಿ ಉಪ್ಪು ಖಾರ ಇಲ್ಲದ ಈ ರಸಂ ಅನ್ನು ಆ ದೇವರೇ ಮೆಚ್ಚಬೇಕು ಎಂದು ತಮಾಷೆ ಮಾಡುತ್ತ ಊಟವನ್ನು ಮಾಡಿದ. ದಿನವು ಹತ್ತಿರದಲ್ಲೇ ಇದ್ದ ಶಿವನ ಆಲಯಕ್ಕೆ ಹೋಗುವ ಅಭ್ಯಾಸವಿದ್ದ ವಿಧು ದೇವಸ್ಥಾನಕ್ಕೆ ಹೋಗಿ ಬರುವ ಸಮಯದಲ್ಲಿ ರೂಮಿನ ಹೊರಭಾಗದಲ್ಲಿ ಇದ್ದ ಅದಿತಿ ನೀವು ಬೆಳಗ್ಗೆ ಎಷ್ಟೊತ್ತಿಗೆ ಎದ್ದು ವ್ಯಾಯಾಮ ಮಾಡಲು ಹೋಗುತ್ತೀರಿ ಎಂದು ಕೇಳಿದಾಗ ನಗು ತಾಳಲಾರದೆ ನಕ್ಕು ನುಡಿದಿದ್ದ ವಿಧು ಹೌದು ದೇವಸ್ಥಾನದಲ್ಲಿ ಜಿಮ್ ಮಾಡುತ್ತೇನೆ ಎಂದು. ಶುಬ್ರ ವಸ್ತ್ರದಲ್ಲಿ ಯಾರುತಾನೇ ವ್ಯಾಯಾಮ ಮಾಡಲು ಹೋಗುತ್ತಾರೆ ಅಷ್ಟು ತಿಳಿಯದೆ ಈ ಹುಡುಗಿಗೆ !  ಮುಗ್ಧ ಪ್ರಶ್ನೆಗಳು ಅವಳ ಮುಗ್ದಮನಸ್ಸಿನ ಸೂಚಕ ವಾಗಿರುವಂತೆ ಇರುತ್ತಿದ್ದವು ಅದಿತಿಯ ಪ್ರಶ್ನೆಗಳು. ಕಲ್ಲಿನಂತಿದ್ದ ವಿಧುವಿನ ಮನಸ್ಸು  ಮಗುವಿನಂತೆ ಮೃದುವಾಗುತ್ತ ಹೋಯಿತು. ಅದಿತಿಯ ಮುಗ್ಧ ಮಾತುಗಳು ಅವಳ ಹತ್ತಿರ ಮಾತನಾಡಲು ತವಕಿಸುತ್ತಿತ್ತು. ಮೊದಲ ಬಾರಿ ಬೇರೆ ಒಂದು ಜೀವಕ್ಕಾಗಿ ವಿಧುವಿನ ಮನಸ್ಸು ಚಡಪಡಿಸುತ್ತಿತ್ತು. ಅದಿತಿಯನ್ನು ಬೆಳಿಗ್ಗೆ ಸಂಜೆ ನೋಡಲಿಲ್ಲ ವೆಂದರೆ ಏನೋ ಕಳೆದುಕೊಂಡ ಅನುಭವ ಆದಂತೆಯೇ ! ವಿಧು ತನ್ನ ಜೀವನದಲ್ಲಿ ಬೇರೆ ಹುಡುಗಿ ಹತ್ತಿರ ಮುಕ್ತವಾಗಿ ಮಾತನಾಡಿದನೆಂದರೆ ಅದು ಅದಿತಿಯ ಹತ್ತಿರ ಮಾತ್ರ. ಆದಿತ್ಯ ಹಂತಹಂತವಾಗಿ ಸುಧಾರಿಸುತ್ತಾ ಗುಣವಾಗುತ್ತ ಹೋದ.
            ಅದಿತಿಯ ಪ್ರೀತಿಯಲ್ಲಿ ಬಿದ್ದ ವಿಧುವಿಗೆ ದಿನಗಳು ಕಳೆದಿದ್ದು ಅವನ ಅರಿವಿಗೆ ಬರಲಿಲ್ಲ . ಆದಿತ್ಯ ಸುಧಾರಿಸುತ್ತಿದ್ದಂತೆ ವೈದ್ಯರು ಅವನಿಗೆ ಕರೆದುಕೊಂಡು ಹೋಗಬಹುದು ಎಂದು ಹೇಳಿದರು. ಅದಿತಿ ಕುಟುಂಬದವರು ಇನ್ನು ಮೂರು ದಿನಗಳಲ್ಲಿ ಅವರು ಕರ್ನಾಟಕವನ್ನು ಬಿಟ್ಟು ಹೊರಡುವವರಲ್ಲಿದ್ದರು. ಅದು ವಿಧುವಿಗೆ ತಿಳಿದ ಕೂಡಲೇ ಹೇಗಾದರೂ ಧೈರ್ಯಮಾಡಿ ತನ್ನ ಪ್ರೀತಿಯನ್ನು ಅದಿತಿಯಲ್ಲಿ ಹೇಳಿಬಿಡಬೇಕು ಎಂದು ನಿಶ್ಚಯಿಸಿ ಅದಿತಿಯ ಹತ್ತಿರ ಹೋದ. ಆದರೆ ಅವನಿಗೆ ಧೈರ್ಯ ಸಾಲದೆ ಹೋಯಿತು. ಆದರೂ ಧೈರ್ಯ ಮಾಡಿ ಇನ್ನೇನು ಅವಳಿಗೆ ತನ್ನ ಪ್ರೀತಿಯ ಬಗ್ಗೆ ಹೇಳಬೇಕೆನ್ನುವಷ್ಟರಲ್ಲಿ ಅದಿತಿಗೆ ಫೋನ್ ಬಂತು, ಕರೆಯನ್ನು ಸ್ವೀಕಾರ ಮಾಡಿ ನಾನು ನಿಮಗೆ ಆಮೇಲೆ ಸಿಗುತ್ತೇನೆ ಎಂದು ಹೇಳಿ ಹೋದಳು. ಓಹೋ ನನಗೆ ಧೈರ್ಯವಾಗಿ ನೇರವಾಗಿ ಹೇಳಲು ಆಗುತ್ತಿಲ್ಲವಲ್ಲ ಸರಿ ಆಗದಿದ್ದರೆ ಹೇಗೆ ಹೇಳುವುದು ಎಂದು ಯೋಚಿಸುತ್ತಿರುವಾಗಲೇ ಅದಿತಿ ಜಾನಕಿ ಅಮ್ಮನವರ ಜೊತೆ  ಅಡುಗೆ ಮಾಡಿ ತರಲು ಹೋಗಿರುವುದು ತಿಳಿಯಿತು. ಹೇಗಿದ್ದರೂ ಜಾನಕಿ ಅಮ್ಮನವರಿಗೆ ವಿಧು ಅದಿತಿ ಮಾತನಾಡುವುದು ತಿಳಿದ ವಿಚಾರವೇ ಎಂದು ತಿಳಿದಿದ್ದ ವಿಧು ಜಾನಕಿ ಅಮ್ಮನವರಿಗೆ ಫೋನ್ ಮಾಡಿ ಅದಿತಿಗೆ ಕೊಡಲು ಹೇಳಿದರೆ ಕೊಡುತ್ತಾರೆ ಎಂದು ಜಾನಕಿ ಅಮ್ಮನವರಿಗೆ ಫೋನ್ ಮಾಡಿದ ಆ ಕಡೆಯಿಂದ ಇಂಗ್ಲಿಷ್ನಲ್ಲಿ ಮಾತು ನಾನು ಅದಿತಿ ಮಾತನಾಡುತ್ತಿರುವುದು ಎಂದು ಓಹೋ ಅದಿತಿ ಫೋನ್ ತೆಗೆದುಕೊಂಡಿರುವುದರಿಂದ ನೇರವಾಗಿ ಹೇಳಿ ಬಿಡಬೇಕೆಂದು, ಅದಿತಿಯವರೇ ಎಂದ ವಿಧು ಅದಿತಿ ಏನು ಹೇಳಿ ಎಂದಳು ನಾನು ನಿಮಗೆ ಒಂದು ಮಾತನ್ನು ಹೇಳಬೇಕೆಂದಿದ್ದನೇ ಎಂದ ಇನ್ನೇನು ಧೈರ್ಯವಾಗಿ ಹೇಳಬೇಕು ಅನ್ನುವಷ್ಟರಲ್ಲಿ ಫೋನ್ ನಿಶಬ್ದವಾಯಿತು.
                   ಹಲೋ ಹಲೋ ಎಂದು ವಿಧು,  ಆ ಕಡೆಯಿಂದ ಯಾರು ಮಾತನಾಡದಂತಾಯಿತು. ಕೆಲವು ಸಮಯದ ನಂತರ ಜಾನಕಿ ಅಮ್ಮನವರು ಹಾಗೂ ಅದಿತಿ ಅಡುಗೆಯನ್ನು ತಯಾರಿಸಿಕೊಂಡು ಬಂದರು. ಬಂದವರೇ ಅದಿತಿ ವಿಧುವಿಗೆ ಊಟವನ್ನು ಕೊಟ್ಟು ಕೇಳಿದಳು. ನೀವು ಫೋನಿನಲ್ಲಿ ಏನೋ ಹೇಳಲು ಬಂದಿರಿ. ಆದರೆ ಫೋನಿನಲ್ಲಿ ಬ್ಯಾಟರಿ ಕಡಿಮೆ ಇದ್ದ ಕಾರಣ ಫೋನ್ ಸ್ವಿಚ್ ಆಫ್ ಆಯಿತು, ಏನು ಹೇಳಿ ಎಂದಳು. ಅದಿತಿಯ ಪಕ್ಕ ಜಾನಕಿ ಅಮ್ಮನವರು ಇದ್ದಿದ್ದರಿಂದ ವಿಧು ಏನು ಇಲ್ಲ ಸ್ವಲ್ಪ ಊಟವನ್ನು ಕಡಿಮೆ ತರಲು ಹೇಳೋಣವೆಂದು ಫೋನ್ ಮಾಡಿದೆ ಎಂದು ಸುಮ್ಮನಾದ. ಅವರು ಹೋಗುವ ಮೂರು ದಿನಗಳ ಒಳಗಾಗಿ ಹೇಳಲು ವಿಧುವಿಗೆ ಕೊನೆಗೂ ಸಾಧ್ಯವಾಗಲಿಲ್ಲ. ಅದಿತಿ ಹಾಗೂ ಅವರ ಕುಟುಂಬ ಹೋಗುವ ದಿನ ಬಂದೇ ಬಿಟ್ಟಿತು ಅವರು ಹೋಗುವವರಿದ್ದರು. ಜಾನಕಿ ಅಮ್ಮನವರು ನಾನು ಇನ್ನು ಹೇಗೆ ಅವರನ್ನು ನೋಡಲಿ ಮಾತನಾಡಿಸಲಿ ಇಲ್ಲಿ ಅವರನ್ನು ಮನೆಯ ಮಕ್ಕಳಂತೆ ನೋಡಿಕೊಂಡಿದ್ದೇನೆ. ಇನ್ನು ಹೇಗೆ ಎಂಬ ಚಿಂತೆಯನ್ನು ಹೊರಹಾಕಿದರು. ಈಗ ಫೋನಿನಲ್ಲೇ ನೋಡಿ ನೇರವಾಗಿ ಮಾತನಾಡಬಹುದು ಅಂತಹ ಅವಕಾಶವಿದೆ ಎಂದು ಹೇಳಿದ ವಿಧು. ಅದಿತಿಯನ್ನು ಕರೆದು ವಿಧುವಿನ ಫೋನ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತೇನೆ ಎಂದು ಹೇಳಿದರು. ಅದಕ್ಕೆ ಅದಿತಿ ಒಪ್ಪಿದಳು. ಆಕೆಯ ಫೋನ್ ನಂಬರನ್ನು ವಿಧುವಿಗೆ ನೀಡಿದಳು. ಮರುದಿನ ಬೆಳಗಿನ ಜಾವ ಐದು ಮೂವತ್ತರ ಸಮಯದಲ್ಲಿ ಅವರಿಗೆ ಹೋಗಲು ವಾಹನದ ವ್ಯವಸ್ಥೆ ಮಾಡಲಾಯಿತು. ಅದಿತಿಯನ್ನು ಅವರ ಕುಟುಂಬವನ್ನು ಕಳುಹಿಸಿಕೊಡುವಾಗ.......

Tuesday, November 17, 2020

ಪ್ರೇಮದ ಅನ್ವೇಷಣೆ ಭಾಗ - 23


ನನ್ನ ಹೆಸರು ಅದಿತಿ ಎಂದು ಪರಿಚಯ  ಮಾಡಿಕೊಂಡಳು. ವಿಧುವಿಗೆ ಅವಳನ್ನು ನೋಡುತ್ತಿದ್ದರೆ ಮೊದಲೇ ಅದಿತಿ ಹತ್ತಿರ ಮಾತನಾಡಿಸಿದ್ದೇನೆ ಎನ್ನುವಂತೆ ಭಾಸವಾಗುತ್ತಿತ್ತು . ಅದಿತಿಯ ಕಣ್ಣನ್ನು ನೋಡುತ್ತಿದ್ದರೆ ಯಾವುದೋ ಜನುಮದ ನಂತು ಇರುವಂತೆ ಅನಿಸುತ್ತಿತ್ತು. ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಪ್ರಶಾಂತತೆ ಭಾಷೆಯ ಸಂವಹನ ಸಮಸ್ಯೆ ಇದ್ದರೂ ಕೂಡ ಏನೋ ಒಂದು ರೀತಿಯ ಆತ್ಮೀಯತೆಯ ಭಾವ. ಭಾಷೆಯ ಸಂವಹನದ ಸಮಸ್ಯೆ ಇದ್ದಿದ್ದರಿಂದ ಯಾವುದೇ ವಿಚಾರವಾಗಿ ವಿಧವನ್ನು ಕೇಳುವುದು ಅನಿವಾರ್ಯವಾಯಿತು. ಆದಿತ್ಯನ ತಂದೆ ತಾಯಿಯಾದ ಗಾಯತ್ರಿಯವರಿಗೆ ಅಲ್ಪಸ್ವಲ್ಪ ಹಿಂದಿ ಇಂಗ್ಲಿಷ್ ಬರುತ್ತಿದ್ದರಿಂದ ಸಂವಹನದ ಸಮಸ್ಯೆ ಅದಿತಿ ಕುಟುಂಬದವರಿಗೆ ಅಷ್ಟಾಗಿ ಕಾಡಲಿಲ್ಲ. ಆದಿತ್ಯನ ಕುಟುಂಬ ಏನನ್ನಾದರೂ ಕೇಳುವುದಿದ್ದರೆ ವಿಧುವನ್ನು ಕೇಳಬೇಕಾಗಿತ್ತು. ಸ್ಥಳೀಯರಾದ ಜಾನಕಿ ಅಮ್ಮನವರು ಹಾಗೂ ವಿಧುವಿನ ಸ್ನೇಹಿತನಾದ ಸಾಗರ್ ತಮ್ಮ ಕೆಲಸ ಮುಗಿದ ಮೇಲೆ ಸಂಜೆಯಾಗುತ್ತಲೇ ಮನೆಗೆ ಹೋಗುತ್ತಿದ್ದರು . ಜಾನಕಿ ಅಮ್ಮನವರಿಗೆ ಕನ್ನಡ ಬಿಟ್ಟರೆ ತಮಿಳು ಅಲ್ಪಸ್ವಲ್ಪ ಬರುತ್ತಿತ್ತು ಉಳಿದಂತೆ ಅವರಿಗೆ ಬೇರೆ ಭಾಷೆ ಬರುತ್ತಿರಲಿಲ್ಲ ಹಾಗಾಗಿ ವಿಧು ಇವರಿಬ್ಬರ ಸಂಭಾಷಣೆಯನ್ನು ಅನುವಾದ ಮಾಡಿ ಅವರಿಗೆ ಅವರ ಸಂಭಾಷಣೆಯನ್ನು ಇವರಿಗೆ ಅನುವಾದವನ್ನು ಮಾಡಬೇಕಾಗಿತ್ತು. ಹುಡುಗಿಯರೊಂದಿಗೆ ಮೊದಲಿನಿಂದಲೂ ಅಂತರ ಕಾಯ್ದುಕೊಂಡ ಬಂದ ವಿಧುವಿಗೆ ಹುಡುಗಿಯರ ಹತ್ತಿರ ಮಾತನಾಡುವುದಕ್ಕೂ ಸ್ವಲ್ಪ ಹಿಂಜರಿಕೆ, ಆದರೆ ಆದಿತ್ಯನ ತಂಗಿ ಅದಿತಿ ದಿಟ್ಟತನದ ಹುಡುಗಿ ಏನೇ ಹೇಳುವುದಿದ್ದರೆ ನೇರವಾಗಿ ಹೇಳುವ ಹುಡುಗಿ ಮುಗ್ಧ ಮನಸ್ಸಿನ ಹುಡುಗಿ ಅದಿತಿ ಅವಳ ಕಮಲದ ಕಣ್ಣುಗಳು ವಿಧುವನ್ನು ಸೆಳೆಯಲು ತುಂಬ ದಿನ ಬೇಕಾಗಿರಲಿಲ್ಲ ಕಾಡಿಗೆಯನ್ನು ಹಚ್ಚುತ್ತಿದ್ದ ಕಣ್ಣುಗಳು ಮುಕ್ತ ಮನಸ್ಸಿನ ಮಾತುಗಳು ನೇರನುಡಿಯ ಮಾತುಗಳು. ಅದಿತಿಯ ಕಣ್ಣೋಟ ವಿಧು ಅದಿತಿಯನ್ನು ಪ್ರೀತಿಸುವಂತೆ ಮಾಡಿತ್ತು. ವಿಧು ತನ್ನ ಅರಿವಿಲ್ಲದಂತೆ ಅದಿತಿಯನ್ನು ಪ್ರೀತಿಸಲು ತೊಡಗಿದ್ದನು. ದಿನ ಬೆಳಿಗ್ಗೆ ಎದ್ದ ಕೂಡಲೇ ಅದಿತಿ ಮುಖವನ್ನು ನೋಡುವುದು ವಿಧುವಿಗೆ ಸಂತೋಷವನ್ನು ತರಿಸುತ್ತಿತ್ತು. ಆಕೆಯ ಮುಗ್ಧ ಮುಖ ಆಕೆಯ ಬಗ್ಗೆ ಕಾಳಜಿ ಬರುವಂತೆ ಮಾಡಿತ್ತು .ಅವಳ ನಗು ಚಂದ್ರನು ಭೂಮಿಗೆ ಬೆಳದಿಂಗಳು ಸೂಸುವಂತೆ ಬೆಳದಿಂಗಳ ಕಿರಣಗಳಿಗೆ ಭೂಮಿ ತಂಪೆರೆಯುವ ರೀತಿ ಮನಸ್ಸಿಗೆ ಮುದವನ್ನು ನೀಡುತ್ತಿತ್ತು. 
                    ಬದುಕಿನಲ್ಲಿ ಮೊದಲ ಬಾರಿ ಪ್ರೀತಿಯ ಸೆಲೆಯನ್ನು ಕಂಡ ವಿಧು ಪ್ರೀತಿಯಲ್ಲಿ ಬಿದ್ದ ನಂತರ ತನ್ನನ್ನು ತಾನೇ ಮರೆತವನಂತೆ ಇದ್ದನು. ಇದನ್ನೆಲ್ಲ ಗಮನಿಸುತ್ತಿದ್ದ ಜಾನಕಿ ಅಮ್ಮನವರು ವಿಧು ಹಾಗೂ ಅದಿತಿಯ ಮೇಲೆ ಅನುಮಾನ ಪಡಲು ಆರಂಭಿಸಿದರು. ಇಬ್ಬರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಜಾನಕಿ ಅಮ್ಮನವರು ವಿಧುವನ್ನು ನೇರವಾಗಿ ಕೇಳಿಯೇ ಬಿಟ್ಟರು. ನಿನ್ನನ್ನು ನೋಡಿದರೆ ಯಾಕೋ ಅದಿತಿಯನ್ನು ಇಷ್ಟಪಟ್ಟಂತೆ ಕಾಣುತ್ತಿದೆ ಎಂದರು . ಅದಕ್ಕೆ ಹಾಗೇನು ಇಲ್ಲ ಪರಸ್ಪರ ಚೆನ್ನಾಗಿ ಮಾತನಾಡಿದ ಮಾತ್ರಕ್ಕೆ ಹೇಗೆ ಪ್ರೀತಿಸಿದಂತೆ ಆಗುತ್ತದೆ ಎಂದು ಜಾನಕಿ ಅಮ್ಮನವರನ್ನು ಕೇಳಿದ. ಅಷ್ಟಕ್ಕೆ ಸುಮ್ಮನಾಗದ ಜಾನಕಿಮ್ಮನವರು ಅದಿತಿಯನ್ನು ನೀನು ಯಾರನ್ನಾದರೂ ಮದುವೆಯಾಗಬೇಕೆಂದು ನಿಶ್ಚಯ ಮಾಡಿದ್ದೀಯಾ ಎಂದು ಕೇಳಿಯೇ ಬಿಟ್ಟರು. ಅದಕ್ಕೆ ಅದಿತಿ ಇಲ್ಲ ನಾನು ಯಾರನ್ನು ಮದುವೆಯಾಗಬಾರದೆಂದು ನಿರ್ಧರಿಸಿದ್ದೇನೆ ಎಂದು ಹೇಳಿದಳು. ವಿಧು ಅದಿತಿ ಮಾತನಾಡಿದರೆ ಸಾಕು ಜಾನಕಿ ಅಮ್ಮನವರಿಗೆ ಅನುಮಾನದ ಭೂತ ಬಂದುಬಿಡುವುದು. ದಿನವೂ ಮನೆಯಿಂದ ಅಡಿಗೆಯನ್ನು ಮಾಡಿ ತರುತ್ತಿದ್ದ ಜಾನಕಿ ಅಮ್ಮನವರು ಅದಿತಿ ಕುಟುಂಬಕ್ಕೂ ಅಡಿಗೆಯನ್ನು ಮಾಡಿ ತರುತ್ತಿದ್ದರು. ಆದರೆ ಅಂದು ಅಡಿಗೆಯಲ್ಲಿ ಏನು ವ್ಯತ್ಯಾಸ ಕಂಡಂತೆ ಆಯ್ತು ವಿಧು ಜಾನಕಿ ಅಮ್ಮನವರಿಗೆ ಕೇಳಿದ ಅಡುಗೆ ರುಚಿಯಲ್ಲಿ ವ್ಯತ್ಯಾಸವಿದೆಯಲ್ಲ ಎಂದ ಅದಕ್ಕೆ ಅವರು ನಿನ್ನ ಹುಡುಗಿ ಮಾಡಿದ್ದು ಎಂದು ಹೇಳಿದರು. ಅದು ನನ್ನ ಹುಡುಗಿ ನನಗೆ ಸಿಗದವಳು ನಿಮಗೆ ಸಿಕ್ಕಿದ್ದಾಳೆ ಯಾರವಳು......

Monday, November 16, 2020

ಪ್ರೇಮದ ಅನ್ವೇಷಣೆ ಭಾಗ - 22

ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಆದಿತ್ಯನಿದ್ದ ವೈದ್ಯರು ಅವನ ಕಿವಿಯಲ್ಲಿ ತುಂಬಾ ರಕ್ತ ಹೋಗಿದೆ ಸ್ವಲ್ಪದರಲ್ಲಿ ಡ್ಯಾಮೇಜ್ ಆಗುವುದು ತಪ್ಪಿದೆ. ತಲೆಬುರುಡೆಯಲ್ಲಿ ಏರ್ಕ್ರಾಕ್ ಆಗಿದೆ ಇವನು ಬದುಕಿ ಉಳಿದದ್ದೇ ಹೆಚ್ಚು ಅದು ಖಂಡಿತವಾಗಿ ಬದುಕಿ ಉಳಿಯುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಪ್ರಜ್ಞೆ ಬರುವತನಕ ಏನನ್ನು ಹೇಳಲು ಬರುವುದಿಲ್ಲ ಎಂದರು. ಐಸಿಯು ಇಂದ ಹೊರಗೆ ಬಂದವನೇ ಆದಿತ್ಯನ ಸ್ನೇಹಿತರಾದ ಚಿರಾಗ್ ಮತ್ತು ಚಿನ್ಮಯ್ ಅನ್ನು ಕರೆದು ಮನೆಗೆ ವಿಷಯವನ್ನು ತಿಳಿಸಿದ್ದೀರಾ ಎಂದು ಕೇಳಿದ ಅದಕ್ಕವರು ತಿಳಿಸಿದ್ದೇವೆ ಆದಿತ್ಯನ ತಂದೆ-ತಾಯಿ ಬರುತ್ತಾರೆ ಎಂದರು. ಮತ್ತೆ ವೈದ್ಯರ ಬಳಿ ಹೋದ ವಿಧು ಎಷ್ಟೇ ಖರ್ಚು ಆದರೂ ಪರವಾಗಿಲ್ಲ ಅತ್ಯುತ್ತಮ ಚಿಕಿತ್ಸೆಯನ್ನು ನೀಡಿ ಆದಿತ್ಯನನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡಿ, ಅವರ ತಂದೆ ತಾಯಿ ಸದ್ಯದಲ್ಲಿ ಬರುತ್ತಾರೆ ಒಳ್ಳೆಯ ಔಷಧಿ ಗಳನ್ನು ಕೊಡಿ ಎಂದು ಹೇಳಿ ಹೊರಬರುವಾಗ ವೈದ್ಯರು ನಿಮ್ಮ ಸ್ನೇಹಿತ ಮಧ್ಯಪಾನ ಮಾಡಿದ್ದಾನೆ ಎಂದು ಹೇಳಿದರು. ಓಹೋ ಆದಿತ್ಯ ಹಾಗೂ ಆತನ ಸ್ನೇಹಿತರು ಹಿಂದಿನ ರಾತ್ರಿ ಮಧ್ಯಪಾನವನ್ನು ಮಾಡಿದ್ದಾರೆ ಎಂದು ಅರಿವಿಗೆ ಬರುತ್ತಿದ್ದಂತೆ ವೈದ್ಯರಿಗೆ ವಿಧು ಇವನ್ನೆಲ್ಲ ಅವನ ತಂದೆ ತಾಯಿಗೆ ಹೇಳಬೇಡಿ ಅವರು ನೊಂದುಕೊಳ್ಳುತ್ತಾರೆ ಅವನ ಆರೋಗ್ಯದ ಬಗ್ಗೆ ಮಾತ್ರ ಗಮನ ಕೊಡಿ ಎಂದು ಹೇಳಿ ಬಂದನು. ಚಿರಾಗ್ ಚಿನ್ಮಯ್ ಅವರಿಗೆ ಹಣದ ಅವಶ್ಯಕತೆ ಇದ್ದರೆ ಕೇಳಿ ಎಂದು ಹೇಳಿ ಆಸ್ಪತ್ರೆಯಿಂದ ಹೊರಟ. ಮಧ್ಯಾಹ್ನದ ಹೊತ್ತಿಗೆ ಫೋನ್ ಕರೆ ಬಂದಿತ್ತು ಆದಿತ್ಯನ ತಂದೆ-ತಾಯಿ ಬಂದಿದ್ದಾರೆಂದು ನೀವು ಬರಬೇಕು ಎಂದು. ವಿಧು ಆಸ್ಪತ್ರೆ ತಲುಪಿದಾಗ ಅವರ ತಂದೆ-ತಾಯಿ ಹಾಗು ತಂಗಿ ಆಸ್ಪತ್ರೆಯಲ್ಲಿ ಕುಳಿತಿದ್ದರು. ಚಿನ್ಮಯ್ ಆದಿತ್ಯನ ತಂದೆ-ತಾಯಿ ಹಾಗೂ ಅವರ ತಂಗಿಯನ್ನು ಪರಿಚಯ ಮಾಡಿಕೊಟ್ಟ. 
                     ಆದಿತ್ಯ ಅವರಿಗೆ ಒಬ್ಬನೇ ಮಗ ಅವನಿಗೆ ಊರೂರು ಸುತ್ತುವ ಹವ್ಯಾಸ ಅದೇ ರೀತಿ ಊರೂರು ಸುತ್ತುತ್ತ ಬಂದವನು ಸಂಸ್ಕೃತ ಗ್ರಾಮಕ್ಕೆ ಬಂದು ಸಂಸ್ಕೃತ ಕಲಿಯುವ ಇಚ್ಛೆಯಾಗಿ ಉಳಿದಿದ್ದ. ಆದಿತ್ಯನ ತಂದೆ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ತಾಯಿ ಆಂಧ್ರಪ್ರದೇಶದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿ ಇಬ್ಬರು ಮಕ್ಕಳು ಒಂದು ಹೆಣ್ಣು ಒಂದು ಗಂಡು ಬೇರೆ ರಾಜ್ಯದಿಂದ ಬಂದವರಾಗಿದ್ದರಿಂದ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿತ್ತು .ಅವರ ಜೊತೆ ಮಾತನಾಡಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆ ಮೂಡಿಸಲಾಯಿತು . ಆದಿತ್ಯ ಓಡಿಸಿಕೊಂಡು ಬಂದಿದ್ದ ಅವನ ಸ್ನೇಹಿತನಾದ ಚಿನ್ಮಯ್ ಅವನ ಬೈಕನ್ನು ಪೊಲೀಸರು ತೆಗೆದುಕೊಂಡುಹೋಗಿ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡಿದ್ದರು.  ಅದನ್ನು ಬಿಡಿಸಿಕೊಡುವಂತೆ ಕೇಳಿಕೊಂಡರು. ವಿಧು ತನ್ನ ರಾಜಕೀಯ ಪ್ರಭಾವ ಬಳಸಿ ಆದಿತ್ಯ ತಾಯಿಯ ಒಪ್ಪಿಗೆ ಮೇಲೆ ಬೈಕನ್ನು ಬಿಡಿಸಿಕೊಂಡು ಅವರ ಸ್ನೇಹಿತರಿಗೆ ವಾಪಸ್ ಸಿಗುವಂತೆ ಮಾಡಿದನು. ಅದನ್ನು ಅವರಿಗೆ ಕೊಡಿಸಿದ ಮೇಲೆ ರಿಪೇರಿ ಮಾಡಿಸಿಕೊಂಡು ಮತ್ತೆ ಆಂಧ್ರಕ್ಕೆ ತಮ್ಮ ಬೈಕನ್ನು ತೆಗೆದುಕೊಂಡು ಹೋದರು. ಆದಿತ್ಯ ಕಾಲ ಕ್ರಮೇಣ ಹಂತಹಂತವಾಗಿ ಸುಧಾರಿಸುತ್ತ ಬಂದನು. ಆದಿತ್ಯನಿಗೆ ಚಿಕಿತ್ಸೆ ಮುಂದುವರಿಸುವ ಸಲುವಾಗಿ ಮತ್ತೂರಿನಲ್ಲಿ ಉಳಿಯುವ ಪರಿಸ್ಥಿತಿ ಎದುರಾಯಿತು. ಆದಿತ್ಯನ ಕುಟುಂಬ ಮತ್ತೂರಿಗೆ ಬಂದು ಭವನದಲ್ಲಿ ಉಳಿಯುವಂತಾಯಿತು. ಕನ್ನಡ ಭಾಷೆಯ ಅರಿವಿಲ್ಲದ ತಂದೆ-ತಾಯಿ ಹಾಗೂ ಮಗಳು. ವಿಧು ಹಾಗೂ ಅವರ ನಡುವೆ ಇದ್ದ ಏಕೈಕ ಭಾಷೆ ಇಂಗ್ಲಿಷ್, ಅವರ ಸಂವಹನಕ್ಕೆ ಅಡ್ಡಿಯಾಗದ ಭಾಷೆಯಾಯಿತು. ಅವರ ಮಗಳು ಇಂಗ್ಲಿಷ್ ಹಾಗು ಹಿಂದಿಯನ್ನು ಸಲೀಸಾಗಿ ಮಾತನಾಡುತ್ತಿದ್ದಳು. ಬರಿ ಮುಖತಹ ಪರಿಚಯವಿದ್ದ ವಿಧು ಅಷ್ಟಗಿ ಅವರ ಬಗ್ಗೆ ಕೇಳಲು ಹೋಗಲಿಲ್ಲ. ಮಾತು ಮುಂದುವರಿಸಿದ ಆದಿತ್ಯನ ತಂಗಿ ನನ್ನ ತಂದೆ ಹೆಸರು ಜಗನ್ ತಾಯಿಯ ಹೆಸರು ಗಾಯತ್ರಿ ಹಾಗೂ ನನ್ನ ಹೆಸರು.......

Saturday, November 14, 2020

ಪ್ರೇಮದ ಅನ್ವೇಷಣೆ ಭಾಗ - 21


 
ಆ ಭಾಷೆಯೇ ಸಂಕೇತಿ, ಸಂಕೇತಿ ಭಾಷೆಗೆ ಲಿಪಿಯಿಲ್ಲ ಆದರೆ ಮತ್ತೂರಿನ ಅಗ್ರಹಾರದಲ್ಲಿ ಆಡುಭಾಷೆಯಾಗಿ ಪ್ರಚಲಿತದಲ್ಲಿದೆ. ಒಟ್ಟಿನಲ್ಲಿ ಹೇಳುವುದಾದರೆ ಒಂದು ವಿಶಿಷ್ಟ ಊರು ಇನ್ನೂ ತನ್ನ ಹಳೆಯ ಆಚಾರ-ವಿಚಾರ ಸಂಪ್ರದಾಯಗಳನ್ನು ಯಥಾವತ್ತಾಗಿ ಉಳಿಸಿಕೊಂಡು ಬರುತ್ತಿರುವ ಗ್ರಾಮ. ಅಲ್ಲಿನ ಸ್ಥಳೀಯ ವಿಚಾರಗಳನ್ನು ಸ್ಥಳೀಯ ಸ್ನೇಹಿತನಾದ ಸಾಗರ್ ಇಂದ ತಿಳಿದುಕೊಂಡು ತನ್ನ ರೂಮಿನ ಕಡೆ ಹೆಜ್ಜೆ ಹಾಕಿದ. ಅಂದು ಜಾನಕಿ ಅಮ್ಮನವರು ವಿಧುವಿಗೆ ಮಾತ್ರ ಊಟವನ್ನು ತಂದಿದ್ದರು. ಆದಿತ್ಯ ಹಾಗೂ ಅವರ ಸ್ನೇಹಿತರು ಇಂದು ಹೊರಗಡೆ ಊಟವನ್ನು ಮಾಡುತ್ತಾರೆ .ನೀನು ಊಟವನ್ನು ಮಾಡು ಎಂದು ಹೇಳಿ ಹೋದರು. ಸರಿ ಎಂದು ವಿಧು ತನ್ನ ಊಟವನ್ನು ಮುಗಿಸಿ ಮಲಗಿದ. 
                 ಅಂದು ರಾತ್ರಿ ಸರಿಯಾಗಿ 2:45 ಸಮಯದಲ್ಲಿ ಯಾರೋ ಬಾಗಿಲು ಬಡಿದಂತಾಯಿತು ಯಾರು ಎಂದರು ಉತ್ತರವಿಲ್ಲ ಸರಿ ನೋಡೇಬಿಡೋಣವೆಂದು ಎದ್ದುಹೋಗಿ ಬಾಗಿಲು ತೆಗೆದ. ಚಿನ್ಮಯಿ ಬಾಗಿಲ ಬಳಿ ನಿಂತಿದ್ದ ಯಾಕೆ ಈ ಸಮಯದಲ್ಲಿ ಬಾಗಿಲು ಬಡಿದದ್ದು ಎಂದು ಕೇಳಿದ ವಿಧು. ಚಿನ್ಮಯಿ ನಿನಗೆ ಒಂದು ವಿಷಯವನ್ನು ಹೇಳಬೇಕು ಮನಸ್ಸನ್ನು ಗಟ್ಟಿ ಮಾಡಿಕೋ ಎಂದ ವಿಧು ಆಯ್ತು ಹೇಳಿ ಎಂದಾಗ ಚಿನ್ಮಯ್ ಆದಿತ್ಯನಿಗೆ ಅಪಘಾತವಾಗಿದೆ ಇವಾಗ ಆಸ್ಪತ್ರೆಯಲ್ಲಿದ್ದಾನೆ ಎಂದಾಗ ವಿಧುವಿಗೆ ದಿಗ್ಭ್ರಮೆಯಾಯಿತು. 10:00 ಗಂಟೆಯ ಸಮಯದಲ್ಲಿ ಮೂರು ಜನರು ಮಾತನಾಡುತ್ತಿದ್ದ ಶಬ್ದ ಕೇಳಿಸಿತು. ಇವಾಗ ನೋಡಿದರೆ ಹೀಗೆ ಹೇಳುತ್ತಿದ್ದಾನಲ್ಲ ಎಂದೆನಿಸಿತು. ವಿಧು ಯಾವಾಗ ಎಲ್ಲಿ ಆಗಿದ್ದು ಎಂದ. ಅದಕ್ಕೆ ಚಿನ್ಮಯಿ 10.30 ರ ಸಮಯದಲ್ಲಿ ಆಗಿದೆ ಇವಾಗ ಏನು ಸಮಸ್ಯೆ ಇಲ್ಲ ಎಂದ. ವಿಧು ತಕ್ಷಣ ಆಸ್ಪತ್ರೆಗೆ ಹೊರಡಲು ಅನುವಾದ. ಆದರೆ ನೀವು ಗಾಬರಿಯಾಗುವ ಅವಶ್ಯಕತೆ ಇಲ್ಲ ಈಗ ಅವನು ಚೆನ್ನಾಗಿದ್ದಾನೆ. ನೀವು ಬೆಳಿಗ್ಗೆ ಬಂದು ನೋಡಬಹುದು ಎಂದು ಹೇಳಿದ. ಆಯ್ತು ಸರಿ ಎಂದು ಮತ್ತೆ ಹೋಗಿ ಮಲಗಲು ಹೋದರೆ ವಿಧುವಿಗೆ ನಿದ್ರೆ ಬರುತ್ತಿಲ್ಲ. ಹಲವಾರು ಪ್ರಶ್ನೆಗಳು ಮನದಲ್ಲಿ ಸುಳಿದವು.
                  ಅಪಘಾತ ಹೇಗಾಯಿತು ? ಏಕಾಯಿತು ? ಮೂರೂ ಜನರು ಒಟ್ಟಿಗೆ ಇದ್ದರಲ್ಲ ? ಅಪಘಾತವಾದಾಗ ಇವರುಗಳು ಜೊತೆಗೆ ಇರಲಿಲ್ಲವೇ ? ಅಥವಾ ಅಪಘಾತವಾದ ಕೂಡಲೇ ಅವನನ್ನು ಬಿಟ್ಟು ಬಂದರ ? ಒಬ್ಬನೇ ಹೋಗಿ ಹೇಗೆ ಅಪಘಾತಕ್ಕೀಡಾದ ? ಆದಿತ್ಯನ ಸ್ನೇಹಿತರ ನಡೆಯನ್ನು ನೋಡಿದರೆ ಇವರ ಮೇಲೆ ಅನುಮಾನ ಬರುವಂತೆ ಮಾತನಾಡುತ್ತಿದ್ದಾನೆ ? ಇವಾಗಲೇ ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸಿದರೂ ಆದಿತ್ಯನ ಆತ್ಮೀಯ ಸ್ನೇಹಿತರು ಅವನೊಟ್ಟಿಗೆ ಇದ್ದಾರೆ. ಈವಾಗ ಚೆನ್ನಾಗಿದ್ದಾನೆ ಎಂದು ಹೇಳಿದ್ದಾರೆ ನೋಡೋಣ ಬೆಳಕು ಹರಿಯಲಿ ಎಂದುಕೊಳ್ಳುವಷ್ಟರಲ್ಲಿ ಸೂರ್ಯ ಪೂರ್ವ ದಿಕ್ಕಿನಿಂದ ತನ್ನ ಕರ್ತವ್ಯವನ್ನು ಆರಂಭಿಸಿದ್ದ. ಸ್ಥಳೀಯರಿಂದ ಅವನಿಗೆ ಅಪಘಾತವಾದ ಸ್ಥಳದ ಮಾಹಿತಿ ಪಡೆದು ಹೋಗಿ ನೋಡಿದರೆ, ವಿಧುವಿನ ಅಂದಾಜು ಮೀರಿತ್ತು. ಅವನಿಗೆ ಅಪಘಾತವಾದ ರೀತಿ ವಾತಾವರಣವನ್ನು ಕಲುಷಿತಗೊಳಿಸಿತ್ತು. ರಸ್ತೆಯ ಮೇಲೆ ರಕ್ತ ನೀರಿನಂತೆ ಚೆಲ್ಲಿತ್ತು. ಓಹೋ ಇದು ಸಣ್ಣ ಅಪಘಾತವಲ್ಲ ಇದೊಂದು ದೊಡ್ಡ ಅಪಘಾತ ಎಂಬ ಅರಿವೂ ಆಯಿತು. ವಿಧು ಮತ್ತೆ ತಡಮಾಡಲಿಲ್ಲ ಅಲ್ಲಿಂದ ಸೀದಾ ಆಸ್ಪತ್ರೆಗೆ ಹೋದ ಅಲ್ಲಿ ಆದಿತ್ಯ ಸ್ನೇಹಿತರಿದ್ದರು ಅವರನ್ನು ಕೇಳಿದ ಆದಿತ್ಯ ಎಲ್ಲಿ ಎಂದು. ಐಸಿಯು ಅಲ್ಲಿದ್ದಾನೆ ಎಂದರು. ಇದೇನಪ್ಪಾ ಇದು, ಇವರು ಬೆಳಿಗ್ಗೆ ನೋಡಿದರೆ ಚೆನ್ನಾಗಿದ್ದಾನೆ ಎಂದರು ಈಗ ನೋಡಿದರೆ ಐಸಿಯುನಲ್ಲಿ ಇದ್ದಾನೆ ಎಂದು ಹೇಳುತ್ತಿದ್ದಾರಲ್ಲ ಎಂದುಕೊಂಡ. ಅಷ್ಟರಲ್ಲಿ ವೈದ್ಯರು ಆದಿತ್ಯನ ಕಡೆಯವರು ಬನ್ನಿ ಎಂದು ಕರೆದರು ಆದಿತ್ಯನ ಸ್ನೇಹಿತರಿಬ್ಬರು ವಿಧು ನೀವೇ ಹೋಗಿ ಎಂದರು. ವಿಧು ಒಳಗೆ ಹೋದ. ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಆದಿತ್ಯನಿದ್ದ.....

Wednesday, November 11, 2020

ಪ್ರೇಮದ ಅನ್ವೇಷಣೆ ಭಾಗ - 20

ಇಬ್ಬರು ಸೇರಿ ಒಂದು ಸಂಜೆ ದೇವಸ್ಥಾನದ ಹತ್ತಿರ ಹೋದರು. ಪುರಾತನ ದೇವಸ್ಥಾನ ಜೀರ್ಣೋದ್ಧಾರದ ನಂತರ ತನ್ನ ಹಳೆಯ ಸೊಬಗನ್ನು ಕಳೆದುಕೊಂಡಿದೆ. ಆದರೆ ಪ್ರಕೃತಿಯ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲದು ಒಂದು ಕಡೆ ತುಂಗಾನದಿಯ ಭೋರ್ಗರೆತ ಮತ್ತೊಂದು ಕಡೆ ಶಾಂತಚಿತ್ತನಾಗಿ ಕುಳಿತುಕೊಂಡ ಬಸವ, ದೇವಸ್ಥಾನದ ಒಳಗಡೆ ಅದ್ಭುತವಾದ ಶಿವಲಿಂಗ, ದೇವಸ್ಥಾನಕ್ಕೆ ಬೀಗ ಹಾಕಿದರು ಕಿಂಡಿಯಿಂದ ದೇವರ ದರ್ಶನ ಪಡೆದು ಕತ್ತಲು ಕವಿಯುತ್ತಲೇ ವಾಪಸ್ ಮತ್ತೂರಿಗೆ ಬಂದರು. ಜಾನಕಿ ಅಮ್ಮನವರು ಹೆದರಿಸಿ ದಂತೆ ಅಲ್ಲಿ ಯಾವ ಅನುಭವವೂ ವಿಧುವಿಗೆ ಆಗಲಿ ಆದಿತ್ಯನಿಗೆ ಆಗಲಿ ಆಗಲಿಲ್ಲ. ಮತ್ತೆ ಮುಂಜಾನೆ ಬೇಗ ಎದ್ದು ತನ್ನ ಕೆಲಸಕ್ಕೆ ಹೋದ ವಿಧು ಮಧ್ಯಾಹ್ನದ ಸಮಯಕ್ಕೆ ಮತ್ತೂರಿಗೆ ವಾಪಸ್ಸಾದ, ಅಂದು ಆದಿತ್ಯ ಹೂರಗಡೆ ಊಟಕ್ಕೆ ಹೋಗೋಣ ಬನ್ನಿ ಎಂದು ಕರೆದ, ನಡೆಯಿರಿ ಯಾವುದಾದರೂ ಹೊಸರುಚಿಯನ್ನು ನೋಡೋಣವೆಂದು ಹೋಗಿ ಊಟ ಮುಗಿಸಿ ಬಂದರು. ಮಲೆನಾಡಿನ ವಿಶೇಷವಾದ ಉಂಡೆ ಗಡಬು ಆಗು ಚಟ್ನಿ ಅವರ ಊಟದ ಸ್ವಾದವನ್ನು ಇನ್ನು ಹೆಚ್ಚಿಗೆ ಮಾಡಿತ್ತು. ವಿಧು ಆದಿತ್ಯನ ಪರಿಚಯವಾಗಿ ಇನ್ನು ನಾಲ್ಕು ದಿನಗಳು ಕಳೆದಿದ್ದವು. ಅಷ್ಟರಲ್ಲಿ ಆದಿತ್ಯನ ಸ್ನೇಹಿತರು ಆಂಧ್ರದಿಂದ ಬಂದರು ಅವರನ್ನು ಶಿವಮೊಗ್ಗದಲ್ಲಿ ಬರಮಾಡಿಕೊಳ್ಳಲು ಆದಿತ್ಯನನ್ನು ವಿಧುವನ್ನು ಒಟ್ಟಿಗೆ ಕರೆದುಕೊಂಡು ಹೋದ, ಆತನ ಸ್ನೇಹಿತರನ್ನು ಪರಿಚಯ ಮಾಡಿಕೊಟ್ಟ , ಒಬ್ಬನ ಹೆಸರು ಚಿರಾಗ್ ಮತ್ತೊಬ್ಬನ ಹೆಸರು ಚಿನ್ಮಯ ಎಲ್ಲರೂ ಸೇರಿ ಕೊಡಚಾದ್ರಿಗೆ ಹೋಗಲು ಯೋಜನೆಯನ್ನು ರೂಪಿಸಿದರು. ಆ ಯೋಜನೆಯಿಂದ ವಿಧು ದೂರವುಳಿದಿದ್ದ ಅವನಿಗೆ ಅವನ ಕೆಲಸಗಳನ್ನು ಪೂರ್ಣಪ್ರಮಾಣದಲ್ಲಿ ಮುಗಿಸಲು ಸಮಯದ ಅಭಾವವಿತ್ತು. 
                    ಅಷ್ಟರಲ್ಲಿ ಸಾಗರ್ ವಿಧುವಿನ ಪರಿಚಯ ಸ್ನೇಹದ ಕಡೆ ತಿರುಗಿತು. ವಿಧು ತನ್ನ ಸ್ನೇಹಿತನಾದ ಸಾಗರ್ ಅವರೊಟ್ಟಿಗೆ ಸಂಜೆಯ ವಾಯು ವಿಹಾರಕ್ಕೆ ಇಲ್ಲಿ ಎಲ್ಲಿ ಹೋಗುವುದು ಉತ್ತಮ ಎಂದು ಕೇಳಿದಾಗ ಸಾಗರ್ ಇಂದು ಸಂಜೆ ಇಬ್ಬರು ಒಟ್ಟಿಗೆ ಹೋಗೋಣ, ನೀವು ಆ ಜಾಗವನ್ನು ಖಂಡಿತ ಇಷ್ಟಪಡುತ್ತೀರಾ ಎಂದು ಹೇಳಿದ. ಸಾಗರ್ ಹೇಳಿದ್ದನ್ನು ಕೇಳಿದ ವಿಧು ವಿಶೇಷ ಜಾಗವೇ ಇರಬೇಕು ಅನಿಸುತ್ತದೆ ನೋಡೋಣ ಎಂದು ಸುಮ್ಮನಾದ. ಸಂಜೆಯಾಗುತ್ತಲೇ ಸಾಗರ್ ವಿಧುವನ್ನು ಕರೆದುಕೊಂಡು ಮತ್ತೂರು-ಹೊಸಳ್ಳಿ ನಡುವೆ ಇರುವ ತುಂಗಾನದಿಯಲ್ಲಿ ನಿರ್ಮಿಸಿರುವ ಕಾಲು ಹೊಳೆಗೆ ಸಂಜೆಯ ವಿಹಾರಕ್ಕೆ ಕರೆದುಕೊಂಡು ಹೋದ. ತುಂಗಾನದಿಯಲ್ಲಿ ಇರುವ ಕಾಲು ಹೊಳೆಗೆ ಹೋದರು. ಪ್ರಕೃತಿಯ ಸೌಂದರ್ಯವನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ತುಂಗಾ ನದಿಯ ಎರಡು ತಟದಲ್ಲಿ ಇರುವ ಗ್ರಾಮಗಳು ಮತ್ತೂರು-ಹೊಸಳ್ಳಿ 2 ಗ್ರಾಮಗಳ ಸಂಪರ್ಕವೇ ಆ ಕಾಲು ಹೊಳೆ ಸೇತುವೆ . ಪ್ರಕೃತಿಯ ರಮಣೀಯ ದೃಶ್ಯ ಎಂಥವರನ್ನು ತನ್ನತ್ತ ಸೆಳೆಯಬಲ್ಲದು ಸಂಸ್ಕೃತ ಗ್ರಾಮ ಮತ್ತೂರು, ಹೊಸಳ್ಳಿ ಗಮಕ  ಗ್ರಾಮ ಸಂಸ್ಕೃತವೆಂದರೆ ಗ್ರಾಮದ ಜನರು ಸಂಸ್ಕೃತವನ್ನು ಮಾತನಾಡುತ್ತಾರೆ ಅಲ್ಲಿ ಸಣ್ಣವರಿಂದ ದೊಡ್ಡವರ ತನಕ ಸಂಸ್ಕೃತ ಸಂಭಾಷಣೆಯನ್ನು ಆಡುಭಾಷೆಯಾಗಿ ಬಳಸುತ್ತಾರೆ. ಗಮಕ ಗ್ರಾಮವೆಂದರೆ ಗಮಕ ಒಂದು ವಿಶಿಷ್ಟ ಪ್ರಕಾರದ ಕಲೆ ರಾಮಾಯಣ ಮಹಾಭಾರತವನ್ನು ಆ ಕಲೆಯ ಮುಖಾಂತರ ಮುಂದಿನ ಪೀಳಿಗೆಗೆ ತಿಳಿಸುವ ಒಂದು ಕ್ರಿಯೆ ಅಂತಹ ಗ್ರಾಮದಲ್ಲಿ ವಾಸಮಾಡುವುದು ಒಂದು ಚೈತನ್ಯವನ್ನು ಕೊಡುತ್ತದೆ. ಯಾವುದೇ ಊರಿಗೆ ಹೋದರೂ ಊರಿನ ವಿಶೇಷ ತಿಳಿಯುವುದು ವಿಧುವಿನ ಅಭ್ಯಾಸ ಮತ್ತೂರು ಹೇಗೆ ಅಸ್ತಿತ್ವಕ್ಕೆ ಬಂತು ಎಂದು ಅಲ್ಲಿಯ ಹಿರಿಯರನ್ನು ವಿಚಾರಿಸಿದಾಗ ಇನ್ನೂ ಹಲವು ವಿಚಾರಗಳು ತಿಳಿದು ಬಂದವು ಹಿಂದೆ ದಕ್ಷಿಣ ಭಾರತದಲ್ಲಿ ಇದ್ದ ಹಿಂದೂ ಸಾಮ್ರಾಜ್ಯ ವಿಜಯನಗರ ಕಾಲದಲ್ಲಿ ರಾಜರು ಬ್ರಾಹ್ಮಣರಿಗೆ ಮತ್ತೂರಿನ ಅಗ್ರಹಾರವನ್ನು ನೀಡಿದರು ಎಂದು ತಿಳಿದುಬಂತು. ಮತ್ತೂರಿನ ಇನ್ನೂ ಒಂದು ವಿಶೇಷವೆಂದರೆ ಅಲ್ಲಿ ಕರ್ನಾಟಕದ ತುಳುನಾಡಿನಲ್ಲಿರುವ ತುಳು ಭಾಷೆಯಂತಹ ಮತ್ತೊಂದು ಭಾಷೆ ಅಸ್ತಿತ್ವದಲ್ಲಿರುವುದು ತಿಳಿದು ಆಶ್ಚರ್ಯವಾಯಿತು. ಆ ಭಾಷೆಯೇ.......

Sunday, November 8, 2020

ಪ್ರೇಮದ ಅನ್ವೇಷಣೆ ಭಾಗ - 19


ಬಸ್ ನಿಲ್ದಾಣ ಹತ್ತಿರವಿರುವ ಬೀದಿಗೆ ಹೊರಟು ಒಂದು ಕಪ್ ಚಾ ಕುಡಿದು ಮತ್ತೆ ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಸರಿಯಾಗಿ 38 ನಿಮಿಷವಾಗಿತ್ತು. ಬಸ್ ನಿಲ್ದಾಣಕ್ಕೆ ಬರುವುದಕ್ಕೂ ಕೃಷ್ಣ ಅವರು ಬಂದರು. ವಿಧುವನ್ನು ಕರೆದುಕೊಂಡು ಹೊರಟರು. ಅವನಿಗೆ ಶಿವಮೊಗ್ಗ ಬಿಟ್ಟು ಬೇರೆ ಎಲ್ಲೋ ಹೋಗುತ್ತಿರುವಂತೆ ಎನಿಸಿತು. ನೇರ ವ್ಯಕ್ತಿತ್ವದ ಹುಡುಗ ಕೃಷ್ಣ ಅಣ್ಣಾವ್ರನ್ನು ಕೇಳಿಯೇಬಿಟ್ಟ ನಾವು ಎಲ್ಲಿಗೆ ಹೋಗುತ್ತಿರುವುದು ಎಂದು. ಅದಕ್ಕೆ ಅವರು ಹೇಳಿದರು ಮತ್ತೂರಿಗೆ. ವಿದು ಮನಸ್ಸಿನಲ್ಲಿ ಅಂದುಕೊಂಡ ಇವರು ಹೇಳುತ್ತಿರುವ ಮತ್ತೂರು ನಾನು ಹಿಂದೆ ಪತ್ರಿಕೆಯಲ್ಲಿ ಓದಿದ ಸಂಸ್ಕೃತ ಮಾತನಾಡುವ ಮತ್ತೂರು ಗ್ರಾಮ ಅಲ್ಲ ತಾನೇ ! ನೋಡೋಣ ಹೇಗಿದ್ದರೂ ಹೋಗುತ್ತಿದ್ದೇನೆ ಎಂದು ಅಂದುಕೊಂಡು ಸುಮ್ಮನಾದ. ಊರು ತಲುಪಿದ ಮೇಲೆ ಅವನಿಗೆ ಆಶ್ಚರ್ಯ ಕಾದಿತ್ತು ಅವನು ಅಂದುಕೊಂಡಂತೆ ಅದು  ಸಂಸ್ಕೃತ ಮಾತನಾಡುವ ಗ್ರಾಮ. ಭಾರತೀಯ ಸಂಸ್ಕೃತಿ ಭಾರತೀಯ ಪರಂಪರೆ ಮೇಲೆ ವಿಶೇಷ ಅಭಿಮಾನವಿದ್ದ  ವಿಧುವಿಗೆ ತುಂಬಾ ಖುಷಿಯಾಯಿತು. ಈ ಗ್ರಾಮಕ್ಕೆ ಒಂದು ಬಾರಿಯಾದರೂ ಭೇಟಿ ಕೊಡಬೇಕು ಅಂದುಕೊಂಡಿದ್ದ ವಿಧು ಇಂದು ಅದೇ ಗ್ರಾಮದಲ್ಲಿ ಇದ್ದಾನೆ. ಕೃಷ್ಣ ಅಣ್ಣನವರು ಅವನಿಗೆ ಅಲ್ಲಿ ಉಳಿಯಲು ವ್ಯವಸ್ಥೆ ಮಾಡಿದರು. ಅದು ನಾಲ್ಕು ರೂಮುಗಳು ಇರುವ ಒಂದು ಭವನ, ಸಂಸ್ಕೃತ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಅಲ್ಲಿ ಉಳಿಯಲು ವ್ಯವಸ್ಥೆ ಮಾಡುತ್ತಿದ್ದ ಜಾಗ, ಅಲ್ಲಿ ಉಳಿಯಲು ವ್ಯವಸ್ಥೆ ಮಾಡಿ ಕೆಲಸ ಮಾಡುತ್ತಿದ್ದ ಜಾನಕಿ ಅಮ್ಮನವರಿಗೆ ಊಟದ ವ್ಯವಸ್ಥೆ ಮಾಡುವಂತೆ ಹೇಳಿ ಬೆಳಿಗ್ಗೆ ಸಿಗುತ್ತೇನೆ ಎಂದು ಹೇಳಿ ಹೋದರು. ವಿಧು ಕೈಕಾಲು ಮುಖ ತೊಳೆದುಕೊಂಡು ಹೊರಬರುವಷ್ಟರಲ್ಲಿ ಜಾನಕಿಮ್ಮನವರು ಮನೆಗೆ ಹೋಗಿ ಊಟವನ್ನು ತಂದಿದ್ದರು. ಊಟವನ್ನು ತಂದು ಮುಂಭಾಗದಲ್ಲಿ ಇಟ್ಟು ನೋಡಪ್ಪ ಎರಡು ಊಟ ಇಟ್ಟಿದ್ದೇನೆ. ಒಂದು ನಿನಗೆ ಮತ್ತೊಂದು ಆದಿತ್ಯನಿಗೆ ಎಂದು ಹೇಳಿದರು. ಜಾನಕಿ ಅಮ್ಮನವರನ್ನು ಯಾರು ಆದಿತ್ಯ ಎಂದು ಕೇಳಿದ್ದಕ್ಕೆ ನಿನ್ನ ಮುಂದಿನ ರೂಂನಲ್ಲಿರುವ ಹುಡುಗನ ಆದಿತ್ಯ .ಅವನು ಬಾಗಿಲು ತೆರೆದು ಹೊರಗೆ ಬಂದಮೇಲೆ ಊಟವನ್ನು ಅವನಿಗೆ ಕೊಡು ಎಂದು ಹೇಳಿ ಹೋದರು. ಕೆಲವು ನಿಮಿಷಗಳನಂತರ ಆದಿತ್ಯ ಹೊರಗೆ ಬಂದನು.
                  ವಿಧು ಮತ್ತು ಆದಿತ್ಯ ಇಬ್ಬರೂ ಸಮಾನ ವಯಸ್ಕರಾಗಿದ್ದರಿಂದ ಇಬ್ಬರಿಗೂ ಇಂಗ್ಲೀಷ್ ಬರುತ್ತಿದ್ದರಿಂದ ಅವರ ಮಾತುಕತೆಗೆ ಸಮಸ್ಯೆ ಏನು ಆಗಲಿಲ್ಲ .ಒಬ್ಬರಿಗೊಬ್ಬರ ಪರಿಚಯ ಆಯಿತು. ಆದಿತ್ಯ ಸಂಸ್ಕೃತ ಕಲಿಯಲು ಮತ್ತೂರಿಗೆ ಆಂಧ್ರದ ವಿಜಯವಾಡದಿಂದ ಬಂದಿದ್ದವನಾಗಿದ್ದನು. ವಿಧು ತಾನು ಬಂದಿದ್ದ ಕೆಲಸದ ವಿಚಾರವನ್ನು ಹೇಳಿದನು. ವಿಧು ಕೃಷ್ಣ ಅಣ್ಣನವರ ಮಾರ್ಗದರ್ಶನದಂತೆ ಜನರಿಗೆ ರಾಷ್ಟ್ರೀಯತೆಯ ಬಗ್ಗೆ ತಿಳಿಹೇಳುವ ಕೆಲಸವನ್ನು ಆರಂಬಿಸಿದನು. ಅವನಿಗೆ ಹೊಸ ಹೊಸ ಜಾಗಗಳನ್ನು ಆವಿಷ್ಕಾರ ಮಾಡುವ ಹಾಗೂ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜಾಸ್ತಿ ಹಾಗಾಗಿ ಸ್ಥಳೀಯರೊಂದಿಗೆ ಕೆಲವು ಸ್ಥಳೀಯ ವಿಷಯಗಳನ್ನು ತಿಳುವ ಪ್ರಯತ್ನ ಮಾಡಿದನು. ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸುವ ವ್ಯಕ್ತಿತ್ವದ ವಿಧುವಿಗೆ ಸ್ಥಳೀಯವಾಗಿ ಒಬ್ಬ ವ್ಯಕ್ತಿಯ ಪರಿಚಯವಾಯಿತು. ಅವನ ಹೆಸರು ಸಾಗರ್ ವಿಧುವಿನ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ. ಮತ್ತೂರಿನ ಹತ್ತಿರದಲ್ಲೇ ಒಂದು ಪುರಾತನ ಶಿವನ ದೇವಾಲಯವಿದೆ ಎಂದು ಜನಕಿ ಅಮ್ಮ ಹಾಗೂ ಸಾಗರ್ ಇಂದ ತಿಳಿದ ಅವನಿಗೆ ಆ ದೇವಸ್ಥಾನವನ್ನು ನೋಡುವ ಬಯಕೆ. ಆದರೆ ಆ ದೇವಸ್ಥಾನಕ್ಕೆ ಸಂಜೆಯ ಮೇಲೆ ಯಾರೂ ಹೋಗುವುದಿಲ್ಲ ಅಲ್ಲಿ ದಿವ್ಯಜ್ಯೋತಿಯ ಸಂಚಾರವಿದೆ ಎಂದು ಜಾನಕಿ ಅಮ್ಮನವರು ಹೆದರಿಸುತ್ತಿದ್ದರು. ಹಾಗಾದರೆ ಆ ದೇವಸ್ಥಾನವನ್ನು ಸಂಜೆಯ ಸಮಯದಲ್ಲಿಯೇ ನೋಡಬೇಕು ಎಂದು ನಿಶ್ಚಯಿಸಿದ ವಿಧು ಅದರ ವಿಚಾರವಾಗಿ ಆದಿತ್ಯ ನೊಂದಿಗೆ ಚರ್ಚಿಸಿದನು. ಆದಿತ್ಯನು ಕೂಡ ಹುಚ್ಚುಸಾಹಸಗಳನ್ನು ಮಾಡಲು ಇಷ್ಟ ಪಡುವ ವ್ಯಕ್ತಿ. ಇಬ್ಬರು ಸೇರಿ ಒಂದು ಸಂಜೆ ದೇವಸ್ಥಾನದ ಹತ್ತಿರ......

Saturday, November 7, 2020

ಪ್ರೇಮದ ಅನ್ವೇಷಣೆ ಭಾಗ - 18

ಅಲ್ಲಿಂದ ಸಂಬಂಧಗಳ ಮೇಲಿನ ನಂಬಿಕೆಯು ಸಡಿಲವಾಗುತ್ತ ಹೋಯಿತು. ಗುರುಗಳಿಗೆ ಆದ ಅವಮಾನ ನನಗೆ ಆದಂತೆ ಎಂದು ತಿಳಿದು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಿ ಮತ್ತು ತರಗತಿಗೆ ಮೊದಲನೆಯವನಾಗಿ ಬಂದನು. ಎಲ್ಲರಿಗೂ ಉತ್ತರ ಎನ್ನುವಂತೆ ಕಾಲೇಜ್ ಬಿಡುವ ಸಮಯದಲ್ಲಿ ಗುರುವಿನ ಆಶೀರ್ವಾದದೊಂದಿಗೆ ಸಿ.ಇ.ಟಿ ಯಲ್ಲಿ ಉತ್ತಮ ಅಂಕಗಳಿಸಿ ಮೈಸೂರಿನಲ್ಲಿ ಇಂಜಿನಿಯರಿಂಗ್ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಸಫಲನಾದ, ಆದರೆ ಮತ್ತೆ ಜೀವನದಲ್ಲಿ ಯಾರ ಸಂಬಂಧವೂ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರಿಂದ ಮತ್ತೆ ಯಾರೊಟ್ಟಿಗೂ ಸ್ನೇಹವನ್ನು ಮಾಡಿಕೊಳ್ಳಲಿಲ್ಲ. ಎಲ್ಲರನ್ನೂ ಸಮನಾಗಿ ಕಾಣುವ ಅವನ ನಿರ್ಧಾರ ಅವನನ್ನು ಒಂಟಿಯಾಗಿ ನಿಲ್ಲಿಸಿತ್ತು. ಈ ಬಾರಿ ವಿಧುವಿನ ಮನಸ್ಸು ಇನ್ನೂ ಗಟ್ಟಿಯಾಗಿ ಕಲ್ಲಿನಂತೆ ಬಲಿಷ್ಠವಾಗಿ ಇರುವಂತೆ ಆಗಿತ್ತು. ಸಾಕು ಇನ್ನು ನನ್ನ ಹಣೇಬರದಲ್ಲಿ ಪ್ರೀತಿ ಸಿಗುವ ಹಾಗೆ ಬರೆದಿಲ್ಲ ಅನಿಸುತ್ತದೆ. ತಿಳುವಳಿಕೆ ಬಂದಾಗಿನಿಂದ ಮನೆಯವರ ಪ್ರೀತಿ ಕಾಣದ ಜೀವ ಹೊರಗಿನ ನಾಟಕೀಯ ಸ್ನೇಹವನ್ನು ನಿಜವಾದ ಕಾಳಜಿ ಹಾಗೂ ನಿಷ್ಕಲ್ಮಶವಾದ ಪ್ರೀತಿ ಎಂದು ತಿಳಿದ ಮೂರ್ಖತನಕ್ಕೆ ಬೇಸರವಾಯಿತು. ವಿಧು ಮತ್ತು ತನ್ನ ಬಗ್ಗೆ ತಾನೇ ಪ್ರಶ್ನೆ ಮಾಡಿಕೊಳ್ಳಲು ಆರಂಭಿಸಿದ, ಬದುಕನ್ನು ಸಮಾಜಕ್ಕೆ ಮೀಸಲಿಡುವ ತೀರ್ಮಾನ ಮಾಡಿರುವ ನನಗೆ ಏಕೆ ವ್ಯಕ್ತಿಗತ ಪ್ರೀತಿಯ ಅವಶ್ಯಕತೆ ಇದೆ ? ಎಂದು ಅವನಲ್ಲಿ ಅವನೇ ಕೇಳಿಕೊಂಡನು. ಇಲ್ಲ ಅದರ ಅವಶ್ಯಕತೆ , ಎಂದು ತನ್ನನ್ನೆ ತಾನು ಸಮಾಧಾನಪಡಿಸಿ ಕೊಂಡನು. ಇಂಜಿನಿಯರಿಂಗ್ ಓದುತ್ತಿರಬೇಕಾದರೆ ಸರ್ಕಾರಿ ಕೆಲಸದ ಜಾಹೀರಾತನ್ನು ನೋಡಿದ ಅವನು ಮನೆಯಲ್ಲಿನ ಹಂಗಿನ ಊಟಕ್ಕಿಂತ ದುಡಿಮೆಯ ಊಟವೇ ಮೇಲೆಂದು ಕೆಲಸಕ್ಕೆ ಅರ್ಜಿ ಹಾಕಿದ. ಅವನು ಅದೃಷ್ಟವೋ ಏನೋ ಎನ್ನುವಂತೆ ಅಲ್ಲಿ ಆಯ್ಕೆಯಾದ. ಆದರೆ ಭ್ರಷ್ಟಾಚಾರ ವಿರುದ್ಧದ ಹೋರಾಟ ಅವನನ್ನು ಕೆಲಸದಲ್ಲಿ ತುಂಬಾ ದಿನಗಳ ಕಾಲ ಉಳಿಯುವಂತೆ ಅವಕಾಶ ಮಾಡಿಕೊಡಲಿಲ್ಲ.
                ಕೆಲಸಕ್ಕೆ ರಾಜೀನಾಮೆ ನೀಡಿ ಅಲ್ಲಿಂದ ಹೊರನಡೆದ. ಇತ್ತ ಇಂಜಿನಿಯರಿಂಗ್ ಪೂರ್ಣಗೊಳಿಸದೆ ಅತ್ತ ಕೆಲಸವೂ ಇಲ್ಲದೆ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಂತಹ ಪರಿಸ್ಥಿತಿಯಲ್ಲೂ ತನ್ನ ಬದುಕಿನ ಶಿಸ್ತನ್ನು ಬಿಡದ ಅವನು ಮತ್ತೆ ಸಾಮಾಜಿಕ ಜೀವನದ ಕಡೆ ಮುಖ ಮಾಡಿದ. ಸಮಾಜಸೇವೆಯನ್ನು ಮಾಡಬೇಕು ಎಂದು ಸಮಾಜದಲ್ಲಿ ಹಲವಾರು ಸೇವಾಕಾರ್ಯವನ್ನು ಮಾಡಿಕೊಂಡ ಬಂದಿದ್ದರಿಂದ ಅವನಿಗೆ ಸಾಮಾಜಿಕ ಜನಮನ್ನಣೆ ಇತ್ತು. ಇದರ ಮಧ್ಯೆ ಇಂಜಿನಿಯರಿಂಗ್ ಮಾಡುವಾಗ ಆಕಸ್ಮಿಕವಾಗಿ ಸಂಪರ್ಕಕ್ಕೆ ಬಂದ ರಾಷ್ಟ್ರೀಯ ವಿಚಾರಗಳಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ. ಇದರ ಮಧ್ಯೆ ಅವನಿಗೆ ಒಂದು ಕರೆಬಂತು ಅದು ರಾಜ್ಯನಾಯಕರ ಕರೆಯಾಗಿತ್ತು. ನಿಮ್ಮಂತಹ ಯುವಕರು ನಮ್ಮ ರಾಷ್ಟ್ರಕ್ಕೆ ಅವಶ್ಯಕತೆಯಿದೆ. ರಾಷ್ಟ್ರೀಯವಾದ ವಿಚಾರಗಳನ್ನು ಮನೆಮನೆಗೆ ತಲುಪಿಸಲು ನಿಮ್ಮ ಅವಶ್ಯಕತೆ ಇದೆ ಬನ್ನಿ ಎಂದು ಕರೆದರು. ವಿಧು ಸಂತೋಷದಿಂದ ಒಪ್ಪಿದ. ಬದುಕನ್ನು ಇನ್ನು ಸಾರ್ವಜನಿಕ ಜೀವನಕ್ಕೆ ಮೀಸಲಿಡಬೇಕೆಂದು ನಿರ್ಧರಿಸಿ ಪ್ರಯಾಣಿಸುತ್ತಿದ್ದ ವಿಧು, ಬದುಕಿನ ಪುಟವನ್ನು ತಿರುವಿ ಹಾಕಿ ಇನ್ನೇನು ನಿದ್ರೆಯ ಮಂಪರಿನಿಂದ ಸಂಪೂರ್ಣವಾಗಿ ನಿದ್ರೆಗೆ ಜಾರಬೇಕು ಅಷ್ಟರಲ್ಲೇ ಯಾರೋ ಶಿವಮೊಗ್ಗ ಬಂತು ಬನ್ನಿ ಎಂದು ಕರೆದಂತೆ ಭಾಸವಾಯಿತು. ಯಾರು ಎಂದು ನೋಡಿದರೆ ಬಸ್ ಕಂಡಕ್ಟರ್ ಕೊನೆಯ ನಿಲ್ದಾಣ ಎಲ್ಲರೂ ಇಳಿಯಲು ಬನ್ನಿ ಎಂದು ಕೂಗುತ್ತಿದ್ದರು. ಮಂಪರು ನಿದ್ರೆಯಿಂದ ಎದ್ದ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಶಿವಮೊಗ್ಗದ ಬಸ್ಟ್ಯಾಂಡಿನಲ್ಲಿ ಬಸ್ ನಿಂತಿತ್ತು. ವಿಧುವನ್ನು ಶಿವಮೊಗ್ಗಕ್ಕೆ ಕಳುಹಿಸಿ ಕೊಟ್ಟ ವರ ಫೋನ್ ನಂಬರ್ ಗೆ ಕರೆ ಮಾಡಿದ ಅವರು ಒಂದು ನಂಬರ್ ಕೊಟ್ಟರು ಆ ನಂಬರ್ಗೆ ಕರೆ ಮಾಡಿದಾಗ ಆ ಕಡೆಯಿಂದ ಹೇಳಿ ನಾನು ಕೃಷ್ಣ ಮಾತನಾಡುತ್ತಿರುವುದು ನಿಮ್ಮ ಬಗ್ಗೆ ನಾರಾಯಣ್ ಅವರು ಎಲ್ಲ ಹೇಳಿದ್ದಾರೆ ಇನ್ನು 20 ನಿಮಿಷ ಕಾಯಿರಿ ನಾನು ನಿಮ್ಮನ್ನು ಕರೆದೊಯ್ಯುತ್ತೇನೆ ಎಂದು ಹೇಳಿದರು. ಇನ್ನು 20 ನಿಮಿಷ ಹೇಗಿದ್ದರೂ ಅವರು ಬರುವುದಿಲ್ಲ ನೋಡೋಣ ಇಲ್ಲಿನ ಜನರು ಹೇಗೆ ಎಂಬ ಕುತೂಹಲದಿಂದ ಸುಮ್ಮನೆ ಒಂದು ಬಸ್ ನಿಲ್ದಾಣ ಹತ್ತಿರವಿರುವ ಬೀದಿಗೆ ಹೋರಾಟ.......

Monday, October 19, 2020

ನಿಷ್ಕಲ್ಮಶ ಸ್ನೇಹ ಹೇಗಿರಬೇಕು ?


ಸ್ನೇಹ ಜಗತ್ತಿನ ಅದ್ಭುತವಾದ ಸಂಬಂಧ ಅಲ್ಲಿ ಯಾವ ಅಳತೆಗಳು ಇರುವುದಿಲ್ಲ .ಕುಚೇಷ್ಟೆಯಿಂದ ಹಿಡಿದು ಪ್ರೀತಿ ,ಮಮತೆ ,ವಿಶ್ವಾಸ ಎಲ್ಲ ಇರುತ್ತದೆ .ಅದು ನಿಷ್ಕಲ್ಮಶ, ಎಲ್ಲಾ ಸಂಬಂಧಗಳಿಗೆ ಮೀರಿದ ಬಂದವದು. ಸ್ನೇಹ ಪ್ರತಿಯೊಂದು ಜೀವಿಗೆ ಬದುಕಿನಲ್ಲಿ ಅವಶ್ಯವಾಗಿ ಬೇಕಾಗಿರುವ ಅನುಭೂತಿ, ಅನುಬಂಧ. ಅಂತಹ ಸ್ನೇಹಕ್ಕೆ ಬೆಲೆ ಕಟ್ಟಲಾಗದು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ಸಂಬಂಧಗಳು ಜಾಗತೀಕರಣದ ಪ್ರಭಾವದಿಂದ ತಮ್ಮ ಸಂಬಂಧದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದವೆ. ಅದರೊಳಗೆ ಸ್ನೇಹ ಸೇರಿರುವುದು ಇಂದಿನ ಸಮಾಜದ ದುರಂತ. ಇಂದಿನ ದಿನಮಾನದಲ್ಲಿ ಸಂಬಂಧಗಳು ಲಾಭದ ಆಧಾರದಲ್ಲಿ ನಡೆಯುತ್ತಿರುವುದರಿಂದ ನಿಷ್ಕಲ್ಮಶ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಕೃತಕತೆ ಸತ್ಯವಾಗಿ ಕಾಣುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದರೊಳಗೆ ನಾವು ಉತ್ತಮ ಸ್ನೇಹಿತರನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದರ ಬಗ್ಗೆ ನೋಡೋಣ. ಉತ್ತಮ ಸ್ನೇಹಿತರನ್ನು ತಿಳಿಯುವ ಮೊದಲು ನಾವು ಉತ್ತಮ ಸ್ನೇಹಿತರಾಗಿದೇವ ಎಂಬುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು. ಉತ್ತಮ ಸ್ನೇಹವೆಂದರೆ ಏನು ಎಂಬ ಪ್ರಶ್ನೆ ಕಾಡುವುದು ಸಹಜ. ಬದುಕಿನಲ್ಲಿ ಹಲವಾರು ಜನರು ಬರುತ್ತಾರೆ. ಕೆಲವರು ವರವಾಗಿ ಬಂದರೆ ಕೆಲವರು ಶಾಪವಾಗಿ ಬರುತ್ತಾರೆ .ಕೆಲವರು ನಿಮ್ಮ ಸತ್ವವನ್ನೇ ಹೀರಿದರೆ ಮತ್ತೆ ಕೆಲವರು ನಿಮ್ಮ ಅಂತರಂಗದ ಶಕ್ತಿಯನ್ನು ಪ್ರಚೋದಿಸುತ್ತಾರೆ.
                  ನಾವು ಇಲ್ಲಿ ಹುಡುಕ ಬೇಕಾಗಿರುವುದು ನಿಜ ಸ್ನೇಹಿತರನ್ನು ,ನಿಜ ಸ್ನೇಹಿತರು ಎಂದರೆ ಯಾರು ಎಂಬ ಪ್ರಶ್ನೆ ಕಾಡುವುದು ಸಹಜ. ನಮ್ಮ ಜೊತೆ ಊಟ ಮಾಡಿ ಹರಟೆ ಹೊಡೆದವರೆಲ್ಲ ಹಾಗೂ ನಮ್ಮ ಜೊತೆ ಸುತ್ತುವವರೆಲ್ಲ ನಿಜ ಸ್ನೇಹಿತರಾಗಲು ಸಾಧ್ಯವಿಲ್ಲ. ನಿಜ ಸ್ನೇಹದಲ್ಲಿ ಸ್ನೇಹಿತನ ಏಳಿಗೆಯನ್ನು ಪ್ರಚೋದಿಸುವಂತ ಶಕ್ತಿ ಇರಬೇಕು. ಅವನ ಅಂತರಂಗದ ಶಕ್ತಿಯನ್ನು ತಿಳಿದು ಅವನ ಉನ್ನತಿಗೆ ಸಹಕಾರ ಕೊಡುವ ಮನೋಭಾವವಿರಬೇಕು. ಅದು ಬಿಟ್ಟು ಅವನ ಮುಂದೆ ನಯವಾಗಿ ಮಾತನಾಡಿ ಅವನ ಬೆನ್ನ ಹಿಂದೆ ಮಾತನಾಡುವ ಚಾಳಿ ಇರಬಾರದು, ಬೇರೆಯವರ ಮುಂದೆ ತಾವು ಒಳ್ಳೆಯವರಾಗಲು ಅವರು ಕೆಟ್ಟವರಂತೆ ಚಿತ್ರಿಸಬಾರದು. ಸ್ನೇಹದ ಏಳಿಗೆಯನ್ನು ಸಹಿಸದೆ ಹಿತ ಶತ್ರುವಿನ ರೀತಿ ಇರಬಾರದು. ಅಂತಹ ಸಂಬಂಧಗಳು ಸುದೀರ್ಘಕಾಲ ಬಾರದಂತೆ ಮುರಿದು ಬೀಳುತ್ತವೆ.
                 ಸ್ನೇಹವೆಂಬುದು ಒಂದು ಮಧುರ ಸಂಬಂಧ. ಅದನ್ನು ನಾವು ಪುರಾಣ ಕಾಲದಿಂದಲೂ ನೋಡಿಕೊಂಡು ಬಂದಿದ್ದೇವೆ. ಅದಕ್ಕೆ ಉತ್ತಮ ಉದಾಹರಣೆ ಕೃಷ್ಣ ಕುಚೇಲನ ಸ್ನೇಹ. ಕೃಷ್ಣ ರಾಜಪರಂಪರೆಯಲ್ಲಿ ಬಂದಿದ್ದರು . ಆತನ ಬಡ ಸ್ನೇಹಿತನನ್ನು ಮರೆಯಲಿಲ್ಲ ಅದು ಶ್ರೇಷ್ಠ ಸ್ನೇಹ. ಸ್ವಾರ್ಥ ಸ್ನೇಹಕ್ಕೆ ಉತ್ತಮ ಉದಾಹರಣೆ ದುರ್ಯೋಧನ ಹಾಗೂ ಕರ್ಣನ ಸ್ನೇಹ. ಅದು ಲಾಭಕ್ಕಾಗಿ ಆದ ಸ್ನೇಹ ಹಾಗಾಗಿ ಕರ್ಣ ಧರ್ಮ ಮಾರ್ಗದಲ್ಲಿ ನಡೆದರು ಅವನ ಸಾವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಮತ್ತು ಮುಂದುವರೆದು ಹೇಳುವುದಾದರೆ ದ್ರುಪದ ಹಾಗೂ ದ್ರೋಣಾಚಾರ್ಯರ ಸ್ನೇಹ. ಅವರಿಬ್ಬರೂ ಸಹಪಾಠಿಗಳು ಒಂದೇ ಗುರುಕುಲದಲ್ಲಿ ಬೆಳೆದವರು. ಸ್ನೇಹಕ್ಕೆ ಬೆಲೆ ಕೊಡದ ದ್ರುಪದ ತನ್ನ ಅಧಿಕಾರದ ಅಹಂನಿಂದ ಸಹಾಯ ಕೇಳಿಬಂದ ದ್ರೋಣಾಚಾರ್ಯರನ್ನು ಅವಮಾನಿಸಿದ ಅದರ ಪ್ರತಿಫಲವೇ ದ್ರೋಣಾಚಾರ್ಯರ ಕ್ಷಮೆ ಕೇಳುವಂತಹ ಸಂದರ್ಭ ಒದಗಿ ಬಂತು.  ಐತಿಹಾಸಿಕ ಕಥೆಗಳಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಸ್ನೇಹವಿದ್ದರೆ ಕೃಷ್ಣ ಕುಚೇಲನಂತೆ ಇರಬೇಕು. ಅದು ನಿಷ್ಕಲ್ಮಶ ಸ್ವಾರ್ಥದ ಸ್ನೇಹ ವಾಗಲಿ ,ಲಾಭದ ಸ್ನೇಹವಾಗಲಿ ಬಹಳ ಕಾಲ ಉಳಿಯುವುದಿಲ್ಲ .ಕಾಲಕಳೆದಂತೆ ಸ್ವಾರ್ಥದ ಲಾಭದ ಸ್ನೇಹಗಳು ಅಳಿಯುತ್ತವೆ .ಆದರೆ ನಿಜ ಸ್ನೇಹ ಶಾಶ್ವತವಾಗಿ ಉಳಿಯುತ್ತದೆ .ಸ್ನೇಹದಲ್ಲಿ ಅಪೇಕ್ಷೆಯು ಇರಬಾರದು. ಅಪೇಕ್ಷೆಯೂ ಸ್ನೇಹವನ್ನು ಮಾತ್ರವಲ್ಲ ಎಲ್ಲಾ ಸಂಬಂಧಗಳನ್ನು ಹಾಳು ಮಾಡಿಬಿಡುತ್ತದೆ. ಎಲ್ಲ ಸಂಬಂಧಗಳ ಜೀವಾಳ ನಂಬಿಕೆ. ನಂಬಿಕೆ ಕಳೆದುಹೋಗದಂತೆ ನಡೆದುಕೊಂಡರೆ ಸ್ನೇಹವು ಸುದೀರ್ಘವಾಗಿ ಉಳಿಯುತ್ತದೆ. ನಂಬಿಕೆ ಕಳೆದುಕೊಂಡ ಸಂಬಂಧಗಳು ಉಳಿಯುವುದು ಅಸಾಧ್ಯ .ಯಾವುದೇ ಸಂಬಂಧ ಉಳಿಯಬೇಕಾದರೆ ಎರಡು ಕಡೆಯ ಪ್ರಯತ್ನದಿಂದ ಮಾತ್ರ ಸಾಧ್ಯ .ಯಾವುದೇ ಸಂಬಂಧಗಳನ್ನು ಒತ್ತಾಯಪೂರ್ವಕವಾಗಿ ಉಳಿಸಿಕೊಳ್ಳುವಂತ ಕೆಲಸ ಮಾಡಬಾರದು. ನಂಬಿಕೆ ಇಲ್ಲದ ಮೇಲೆ ಅವು ಕೃತಕ ಸಂಬಂಧಗಳ ಆಗಿಬಿಡುತ್ತವೆ. ಕೃತಕತೆಯ ಬದುಕು ಮನಸ್ಸಿಗೆ ಮುದ ನೀಡಲು ಸಾಧ್ಯವಿಲ್ಲ . ಆ ಸಂಬಂಧಗಳು ಇದ್ದೂ ಇಲ್ಲದಂತೆ ಇರುತ್ತವೆ. ಇದ್ದು ಇಲ್ಲದಿರುವುದಕ್ಕಿಂತ ಇಲ್ಲದಿರುವುದೇ ಉತ್ತಮ. ಉತ್ತಮ ಸ್ನೇಹಿತರನ್ನು ಕಳೆದುಕೊಂಡರೆ ವಜ್ರವನ್ನು ಎಸೆದ ಕಲ್ಲನ್ನು ಎತ್ತಿ ಕೊಂಡಂತೆ. ಕೃತಕ ಸ್ನೇಹ ಉಳಿಯುವುದಿಲ್ಲ .ನಿಜ ಸ್ನೇಹ ಅಳಿಯುವುದಿಲ್ಲ....

Sunday, October 11, 2020

ಪ್ರೇಮದ ಅನ್ವೇಷಣೆ ಭಾಗ-17


ಹೇಗಿದ್ದರೂ ಕುಶಾಲ್ ನಿಂದ ದೂರಸರಿಯಲು ನಿಶ್ಚಯಿಸಿದ್ದ ವಿಧುವಿಗೆ ಇದು ಒಂದು ರೀತಿಯ ಅನುಕೂಲವೇ ಆಯಿತು. ಇನ್ನು ಅಂತರವನ್ನು ಕಾಯ್ದುಕೊಳ್ಳಲು ಸುಲಭವಾಯಿತು. ವಿಧು ಎರಡನೆಯ ಬಾರಿಯೂ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಕುಶಾಲ್ಗೆ ತಡೆಯಲಾಗಲಿಲ್ಲ ಹೇಗಾದರೂ ಮಾಡಿ ಪ್ರಥಮಸ್ಥಾನ ಗಳಿಸಿದಂತೆ ತಡೆಯಬೇಕು ಎಂದು ನಿಶ್ಚಯಿಸಿ ನೇರವಾಗಿ ಎದುರಿಸಲು ಸಾಧ್ಯವಾಗದೆ ಕುಶಾಲ್ ವಿಧುವಿಗೆ ಯಾವುದೇ ರೀತಿಯ ಶೈಕ್ಷಣಿಕ ನೆರವು ಸಿಗದಂತೆ ಮಾಡಬೇಕು ಎಂದು ಯೋಚಿಸಿ ತನ್ನ ಸಹಪಾಠಿಗಳಿಗೆ ಯಾವುದೇ ಕಾರಣಕ್ಕೂ ಅವನಿಗೆ ಗೊತ್ತಿಲ್ಲದ್ದನ್ನು ಹೇಳಿ ಕೊಡಬೇಡಿ ಎಂದು ತಾಕೀತು ಮಾಡುತ್ತಿದ್ದ ಅವನ ಸಹಪಾಠಿಗಳು ಕುಶಾಲ್ ನ ಅರಿವಿಗೆಬಾರದೆ ಹೇಳಿಕೊಡುತ್ತಿದ್ದರು. ಅದನ್ನು ತಿಳಿದ ಕುಶಾಲ್ ವಿಧುವಿನ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಹೇಳಿ ಅವನ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದ .ಆ ವಿಚಾರವಾಗಿ ಕೆಲವು ಸಹಪಾಠಿಗಳು ವಿಧುವಿನ ಹತ್ತಿರ ಚರ್ಚೆ ಮಾಡುತ್ತಿದ್ದರು. ವಿಧುವಿಗೆ ಗೊತ್ತಿಲ್ಲದ ಪಾಠದ ವಿಷಯಗಳನ್ನು ಹೇಳಿ ಕೊಡಲು ಹಿಂದೇಟು ಹಾಕುವಂತೆ ಮಾಡಿದ. ಆಗ ಅವನ ನೆರವಿಗೆ ಬಂದಿದೆ ಅವನ ಗುರುಗಳು. ಗುರುಗಳ ಬಳಿ ತನ್ನ ಸಮಸ್ಯೆಗಳನ್ನು ಹೇಳಿಕೊಂಡು ಯಾರು ನನಗೆ ಪಠ್ಯಪುಸ್ತಕದ ವಿಚಾರಗಳನ್ನು ಹೇಳಿಕೊಡುತ್ತಿಲ್ಲ ಸರ್ .ನಿಮ್ಮ ಸಹಾಯ ಬೇಕು ಎಂದಾಗ ಅವನು ಗುರುಗಳು ದಿನದ 24 ಗಂಟೆಗಳು ನಮ್ಮ ಮನೆಯ ಬಾಗಿಲು ತೆರೆದಿರುತ್ತದೆ ಎಂದು ಹೇಳಿ ಆತ್ಮಸ್ಥೈರ್ಯವನ್ನು ತುಂಬಿ ಕಳುಹಿಸಿದರು. ಹರ ಮುನಿದರೂ ಗುರು ಕಾಯುವನು ಎಂಬ ನಾಡು-ನುಡಿ ಅವನ ವಿಷಯದಲ್ಲಿ ಸತ್ಯವಾಯಿತು. ಸರ್ವ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುತ್ತಿದ್ದ ಗುರುಗಳಿಗೆ ಕುಶಾಲ್ ಅವಮಾನ ಮಾಡಿಬಿಟ್ಟ. ವಿದು ಗುರುವಿಗೆ ಪ್ರಿಯವಾದ ಶಿಷ್ಯ ಹಾಗಾಗಿ ಇವನಿಗೆ ಹೆಚ್ಚಿನ ಅಂಕಗಳನ್ನು ಕೊಡುತ್ತಾರೆಂದು ತರಗತಿಯ ಸಹಪಾಠಿಗಳನ್ನು ಗುರುಗಳ ವಿರುದ್ದ ಎತ್ತಿಕಟ್ಟಿ ಬಿಟ್ಟ. 
           ಕುಶಾಲ್ ನ ನಿಜಮುಖ ಗೋಚರಿಸಿದ್ದು ತರಗತಿಯಲ್ಲಿ. ವಿಧುವಿಗೆ ಹೆಚ್ಚಿನ ಅಂಕವನ್ನು ನೀವು ಕೊಡುತ್ತಿದ್ದೀರಾ ಎಂದು ತರಗತಿಯಲ್ಲಿ ಗುರುಗಳ ವಿರುದ್ಧದ ಆರೋಪವನ್ನು ಮಾಡಿದ ಗುರುಗಳು ಪುಸ್ತಕ ಮುಟ್ಟಿ ಪ್ರಮಾಣ ಮಾಡುವಂತಹ ಪರಿಸ್ಥಿತಿಗೆ ತಂದು ಬಿಟ್ಟ. ಇಂತಹ ಆರೋಪ ನಿರೀಕ್ಷಿಸದ ಗುರುಗಳು ಮನಸ್ಸಿನಲ್ಲಿ ನೊಂದುಕೊಂಡು ನೋವುಂಡು ತರಗತಿಯಲ್ಲಿ ಪುಸ್ತಕವನ್ನು ಹಿಡಿದು ಪ್ರಮಾಣ ಮಾಡಿಬಿಟ್ಟರು. ಯಾವುದೇ ಕಾರಣಕ್ಕೂ ವಿಧುವಿಗೆ ನಾನು ಹೆಚ್ಚು ಅಂಕಗಳನ್ನು ನೀಡಿಲ್ಲ ಅವನು ಸ್ವಂತ ಶಕ್ತಿಯನ್ನು ಅನುಸಾರ ಅಂಕಗಳನ್ನು ಪಡೆಯುತ್ತಿದ್ದಾನೆ. ಅದರಲ್ಲಿ ನನ್ನ ಪಾತ್ರವಿಲ್ಲ ಎಂದು ತರಗತಿಯಲ್ಲಿ ವಿದ್ಯಾರ್ಥಿಗಳ ಎದುರಿಗೆ ಪ್ರಮಾಣ ಮಾಡಿಬಿಟ್ಟರು. ಬದುಕಿನಲ್ಲಿ ಗಟ್ಟಿತನವನ್ನು ರೂಡಿಸಿಕೊಂಡಿದ್ದ ವಿಧುವಿನ ಕಣ್ಣಿನ ಅಂಚಿನಲ್ಲಿ ನೀರು ಜಿನುಗಿತು. ಅವನ ಮನಸ್ಸಿನಲ್ಲಿ ಆ ಚಿತ್ರಣ ಅಚ್ಚಳಿಯದೇ ಉಳಿಯಿತು. 
                    ನನ್ನ ಮೇಲೆ ಇದ್ದ ದ್ವೇಷ ಗುರುಗಳ ಮೇಲೆ ತೀರಿಸಿ ಬಿಟ್ಟನಲ್ಲ ಎಂದು ಮನಸ್ಸಿನಲ್ಲೇ ಕೊರಗಿದನು. ಗುರುಗಳು ಪುಸ್ತಕ ಮುಟ್ಟಿ ಪ್ರಮಾಣಿಸುವ ಅಂತಾಯಿತಲ್ಲ ಎಂದು ದುಃಖಿಸಿದನು. ಕುಶಾಲ್ ಗೆ ವಿಧುವಿನ ಮೇಲೆ ಇದ್ದ ದ್ವೇಷಭಾವನೆ ಹೊರಜಗತ್ತಿಗೆ ಪ್ರಕಟಗೊಂಡಿತು. ಅಲ್ಲಿಗೆ ಕುಶಾಲ್ನ ನಾಟಕೀಯತೆ ಪೂರ್ಣಪ್ರಮಾಣದಲ್ಲಿ ತಿಳಿಯಿತು.  ಕುಶಾಲ್ ನ ಸ್ವಾರ್ಥ ಹಿತದ ಸ್ನೇಹ ತಿಳಿದು ವಿಧು ಸ್ನೇಹವನ್ನು ಅಂತ್ಯಗೊಳಿಸಿದನು. ಅಲ್ಲಿಗೆ ಕುಶಾಲ್ ಮೇಲೆ ಇದ್ದ ನಿಷ್ಕಲ್ಮಶವಾದ ಸ್ನೇಹ ಪ್ರೀತಿ ವಿಶ್ವಾಸ ಕಳೆದುಹೋಯಿತು. ವಿಧುವಿಗೆ ಸತ್ಯದ ಅರಿವಾಯಿತು. ಮನೆಯಲ್ಲಿ ಸಿಗದ ಪ್ರೀತಿ ವಿಶ್ವಾಸ ಸ್ನೇಹಿತನಲ್ಲಿ ಸಿಕ್ಕಿದೆ ಎಂದು ಅಂದುಕೊಂಡಿದ್ದ ವಿಧುವಿಗೆ ಸ್ನೇಹದ ಹೆಸರಿನಲ್ಲಿ ಮೋಸ ಹೋಗಿದ್ದ ಅವನಿಗೆ ಅವನ ಬಗ್ಗೆ ಜಿಗುಪ್ಸೆಯಾಯಿತು. ಲಾಭಕ್ಕಾಗಿ ಅನುಕೂಲತೆಗಾಗಿ ನೋಡಿ ಸಂಬಂಧಗಳನ್ನು ಬೆಳೆಸುತ್ತಾರೆ ಎಂಬುದನ್ನು ಮನಗಂಡನು. ನಿಜವಾದ ಸಂಬಂಧಗಳಿಗೆ ಬೆಲೆ ಇಲ್ಲ ಎಂಬ ಸತ್ಯದ ಅರಿವಾಯಿತು. ಸಂಬಂಧವೆಂಬುದು ಅನಿವಾರ್ಯತೆ , ಅವಶ್ಯಕತೆ ಮೇಲೆ ಮಾಡುವುದು ಎಂಬ ಸತ್ಯವನ್ನು ತಿಳಿದುಕೊಂಡನು. ಅಲ್ಲಿಂದ ಸಂಬಂಧಗಳ ಮೇಲಿನ......

Friday, October 9, 2020

ಹಿಂದುತ್ವದ ರಾಯಭಾರಿಗಳು ಯಾರು ?


ಹಿಂದುತ್ವ ಜಗತ್ತಿಗೆ ಪ್ರಕೃತಿಯೊಂದಿಗೆ ಬದುಕುವ ಪಾಠವನ್ನು ಹೇಳಿಕೊಟ್ಟ ಧರ್ಮ. ಅದು ಸನಾತನ ಹಿಂದುತ್ವ ಎಂಬ ಪದವೆ ಒಂದು ರೋಮಾಂಚನ ತನ್ನ ಸನಾತನ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ವಿಶ್ವದಲ್ಲೆಡೆ ಪಸರಿಸಿ ಭಾರತದ ಮಣ್ಣಿನ ಪರಂಪರೆಯನ್ನು ವಿಶ್ವಕ್ಕೆ ತಿಳಿಸಿದ ಧರ್ಮ. ಹಿಂದುತ್ವ ಪದದ ಮೂಲವನ್ನು ಹುಡುಕುತ್ತಾ ಹೊರಟರೆ ನಮಗೆ ಸಿಗುವುದು ಸಿಂಧೂ ನಾಗರಿಕತೆ, ಆ ನಾಗರಿಕತೆಯ ಫಲವೇ ಅನ್ಯ ಖಂಡಗಳ ಜನರು ಭಾರತದ ಭೂಭಾಗವನ್ನು ಸಿಂಧೂ ನಾಗರಿಕತೆಯ ನಾಡು ಎಂದು ಕರೆದದ್ದು. ಅದು ಕಾಲಕ್ರಮೇಣ ಜನಗಳ ಉಚ್ಚಾರ ಸ್ಥಿತಿಯಲ್ಲಿ ಹಿಂದೂ ಆಯಿತು. ಹಿಂದೂ ಧರ್ಮಕ್ಕೆ ಆದಿಯಾಗಲಿ ಅಂತ್ಯವಾಗಲಿ ಇಲ್ಲ ಅದು ಸನಾತನ. ಸನಾತನ ಎಂದರೆ  ಅಂತ್ಯವಿಲ್ಲದ್ದು ಎಂದು ಅರ್ಥ. ಹಿಂದೂ ಪದ ಹುಟ್ಟುವುದಕ್ಕಿಂತ ಮೊದಲೇ ನಮ್ಮ ಇಂದಿನ ದಿನಮಾನದಲ್ಲಿ ಕರೆಯುವ ಹಿಂದೂ ಸಂಪ್ರದಾಯದ ರೀತಿ-ರಿವಾಜುಗಳು ಅಸ್ತಿತ್ವದಲ್ಲಿದ್ದವು.
            ಹಿಂದೂ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ. ಅದನ್ನು ಸನಾತನ ಎಂದು ಕೂಡ ಕರೆಯಬಹುದು.  ಅದು ಯಾರಿಂದಲೂ ಸ್ಥಾಪಿತವಾದ ಅಥವಾ ಯಾರದೋ ಮಾರ್ಗದರ್ಶನದಲ್ಲಿ ಮೂಡಿಬಂದ ಸಂಸ್ಕಾರ ಸಂಸ್ಕೃತಿ ಪರಂಪರೆಯಲ್ಲ .ಅದು ಪ್ರಾಕೃತಿಕವಾಗಿ ಪ್ರಕೃತಿಯೊಂದಿಗೆ ಹೊಂದಿಕೊಂಡು ಹೋಗುವ ಒಂದು ಜೀವನ ವಿಧಾನ. ಆ ಜೀವನ ವಿಧಾನ ಸಹಬಾಳ್ವೆ, ಸಮೃದ್ಧಿ ಹಾಗೂ ಶಾಂತಿಯನ್ನು ಬದುಕಿನೊಂದಿಗೆ ಜೋಡಿಸಿ ಕೊಟ್ಟಿದ್ದು .ಅದರ ಪರಿಣಾಮವೇ ಇಂದು ನಾವು ನಮ್ಮ ದೇಶದಲ್ಲಿ ವಿವಿಧತೆಯನ್ನು ಕಾಣಬಹುದು. ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯವಾಗಿರುವುದು. ಹಿಂದೂ ಸಂಸ್ಕೃತಿಯು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಂತೆ ಹೇಳಿಕೊಡುವ ಧರ್ಮ .ಅದೇ ಕಾರಣ ಇಂದು ಭಾರತದಲ್ಲಿ ವಿವಿಧ ಧರ್ಮದ ( ಮತದ ) ಜನರು ವಾಸಿಸಲು ಸಾಧ್ಯವಾಗಿರುವುದು. ಈ ಪರಂಪರೆ ಪ್ರಕೃತಿಯೊಂದಿಗೆ ಬದಲಾವಣೆಯಾಗುತ್ತಾ ಹೋಗಿದ್ದರ ಫಲವೇ ಇಂದು ಕೂಡ ತನ್ನ ಸಂಸ್ಕೃತಿಯನ್ನು ಹಾಗೂ ತನ್ನ ಇತಿಹಾಸವನ್ನು ಉಳಿಸಿಕೊಳ್ಳಲು ಹಿಂದೂ ಧರ್ಮಕ್ಕೆ ಸಾಧ್ಯವಾಗಿರುವುದು.
             ಇಂತಹ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಅನ್ಯ ಮತಗಳು ನಿರಂತರವಾಗಿ ಆಕ್ರಮಣ ನಡೆಸುತ್ತಾ ಸಂಸ್ಕೃತಿಯನ್ನು ನಾಶ ಮಾಡಲು ಅವಣಿಸುತ್ತಾ ಬಂದರು ಏನು ಮಾಡಲು ಸಾಧ್ಯವಾಗಿಲ್ಲ ಕಾರಣ ಹುಡುಕುತ್ತ ಹೊರಟರೆ ನಮಗೆ ಸಿಗುವುದು ಹಿಂದುತ್ವವನ್ನು ಉಳಿಸಿಕೊಂಡು ಬರುತ್ತಿರುವ ಸಮಾಜ ಅಂದರೆ ಅದನ್ನು ವಾಸ್ತವದ ರೂಪದಲ್ಲಿ ಅನುಷ್ಠಾನಕ್ಕೆ ತಂದು ಅದರೊಟ್ಟಿಗೆ ಬದುಕನ್ನು ನಡೆಸುತ್ತಿರುವ ಸಾಮಾನ್ಯ ಜನರಿಂದ ಇಂದು ಹಿಂದೂ ಧರ್ಮವು ಉಳಿದಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ನಾವು ಹಿಂದೂ ಧರ್ಮದ ರಾಯಭಾರಿಗಳು ಎನ್ನುವಂತೆ ಬಿಂಬಿಸಿಕೊಂಡು ಧರ್ಮವನ್ನೇ ಹೈಜಾಕ್ ಮಾಡಿ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಂಡು ನಮ್ಮ ದೇಶವನ್ನು ಆಳುತ್ತಿರುವ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆ. ಯಾವುದೇ ರಾಜಕೀಯ ಪಕ್ಷದಿಂದ ಧರ್ಮ ಉಳಿಯಲಾರದು ಏಕೆಂದರೆ ರಾಜಕೀಯ ಪಕ್ಷ ಹುಟ್ಟುವ ಮೊದಲೇ ಹಿಂದೂ ಧರ್ಮವು ಅಸ್ತಿತ್ವದಲ್ಲಿತ್ತು .ಮುಂದಿನ ದಿನಗಳಲ್ಲಿ ಹಿಂದುತ್ವದ ಹೆಸರನ್ನು ಹೇಳಿಕೊಂಡು  ಅಧಿಕಾರಕ್ಕೆ ಬರುವ ರಾಜಕೀಯ  ಪಕ್ಷ ಇಲ್ಲದಿದ್ದರೂ  ಹಿಂದುತ್ವ ಉಳಿಯುತ್ತದೆ. ಆದಿ-ಅಂತ್ಯ ಇಲ್ಲದ್ದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಇಂದಿಗೂ ನಿಜವಾದ ಹಿಂದುತ್ವದ ರಾಯಭಾರಿಗಳು ಸಾಮಾನ್ಯ ಜನರೇ. ಹಿಂದುತ್ವವು ರಾಜಕೀಯ ವಿಚಾರವಾಗದೆ ಸಾಮಾನ್ಯ ಜನರೊಳಗೆ ಶಾಶ್ವತವಾಗಿ ಉಳಿಯಲಿ.

Sunday, October 4, 2020

ಪ್ರೇಮದ ಅನ್ವೇಷಣೆ ಭಾಗ - 16


ನನಗೆ ಪ್ರೀತಿ ತೋರದ ತಂದೆ-ತಾಯಿ ಸಿಗದಿದ್ದರೂ ಪರವಾಗಿಲ್ಲ ಪ್ರೀತಿ ಹಾಗೂ ಕಾಳಜಿ ತೋರುವ ಸ್ನೇಹಿತ ಸಿಕ್ಕಿದನಲ್ಲ ಎಂಬುದೇ ದೊಡ್ಡ ವಿಷಯವಾಗಿತ್ತು. ಆದರೆ ಅವನ ಮನಸ್ಸಿನಲ್ಲಿ ಪ್ರೀತಿಯ ಹಿಂದೆ ಇದ್ದ ದ್ವೇಷ, ಕಾಳಜಿ ಹಿಂದೆ ಇದ್ದ ಸ್ವಾರ್ಥ ಅವನ ನಾಟಕೀಯತೆಯ ಪ್ರೀತಿ ಮತ್ತು ಕಾಳಜಿ ತಿಳಿದು ವಿಧುವಿಗೆ ದೊಡ್ಡ ಆಘಾತವಾಯಿತು. ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಇದ್ದ ವಿಧುವಿನ ಏಳಿಗೆ ಸಹಿಸದ ಕುಶಾಲ್ ವಿಧುವಿನ ಜೊತೆಗಾರರಿಗೆ ಮತ್ತು ಕಾಲೇಜಿನ ಸಹಪಾಠಿಗಳಿಗೆ ಇಲ್ಲದ ವಿಷಯಗಳನ್ನು ಹೇಳಿ ವಿಧುವಿನ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದ ಕುಶಾಲ್ ಮೇಲೆ ಅತಿಯಾದ ನಂಬಿಕೆ ಇಟ್ಟಿದ್ದ ಅವನಿಗೆ ತಿಳಿಯದಂತೆ ಅವನ ವಿರುದ್ಧ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ. ಕುಶಾಲ್ ನ ಮೋಸದ ಹರಿವು ನಿಧಾನವಾಗಿ ತಿಳಿಯಲು ಪ್ರಾರಂಭಿಸಿದ ಕೂಡಲೆ ಅವನಿಂದ ಅಂತರವನ್ನು ಕಾಯ್ದುಕೊಳ್ಳಲು ಆರಂಭಿಸಿದ. ವಿಧು ಉತ್ತಮವಾಗಿ ಓದಬೇಕು ಎಂಬ ಏಕಮಾತ್ರ ಉದ್ದೇಶದಿಂದ ಕಾಲೇಜು ಸೇರಿದ್ದರಿಂದ ಅವನ ಮುಂದೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡುವುದಷ್ಟೇ  ಆಯ್ಕೆಯಾಗಿತ್ತು. ತನ್ನ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಹಂಬಲ ಅವನಲ್ಲಿತ್ತು. ಅದರ ಅನಿವಾರ್ಯತೆ ಅವನಿಗಿತ್ತು. ಹಾಗಾಗಿ ವಿದ್ಯಾಭ್ಯಾಸದ ಕಡೆ ಪೂರ್ತಿಯಾಗಿ ಗಮನಹರಿಸಲು  ಉತ್ತಮ ಅಂಕ ಬರಲು ಶುರುವಾಯಿತು. ವಿಧುವಿನ ನಿರೀಕ್ಷೆ ಇಲ್ಲದೆ ತರಗತಿಗೆ ಮೊದಲನೆಯವನಾಗಿ ಬಂದ. ಅದನ್ನು ಸ್ನೇಹಿತ ಎನಿಸಿಕೊಂಡಿದ್ದ ಕುಶಾಲ್ ಗೆ ತಡೆಯಲಾಗಲಿಲ್ಲ ಎಂಬ ಸತ್ಯದ ಅರಿವಾದಾಗ ವಿಧುವಿಗೆ ಆಘಾತವಾಯಿತು. ಅವನನ್ನು ನೇರವಾಗಿ ಎದುರಿಸಲು ಆಗದ ಕುಶಾಲ್ ಬೇರೆ ರೀತಿಯಲ್ಲಿ ಅವನ ಏಳಿಗೆಯನ್ನು ತಡೆಯಬೇಕೆಂದು ಸಹಪಾಠಿಗಳಿಂದ ಯಾವುದೇ ರೀತಿಯ ಶೈಕ್ಷಣಿಕ ಸಹಕಾರ ಸಿಗದಂತೆ ಮಾಡಬೇಕು ಎಂಬ ದೃಷ್ಟಿಕೋನದಲ್ಲಿ ಯೋಚಿಸಿ ಅವನಿಗೆ ಅರ್ಥವಾಗದ ಪಾಠವನ್ನು ಹೇಳಿಕೊಡುವ ಹುಡುಗರಿಗೆ ಪಾಠವನ್ನು ಹೇಳಿಕೊಡಬೇಡಿ ಎಂದು ತಾಕಿತು ಮಾಡುತ್ತಿದ್ದ .
          ಆದರೂ ವಿಧುವಿನ ಸಹಪಾಠಿಗಳು ವಿದ್ಯಾಭ್ಯಾಸದ ವಿಚಾರಗಳನ್ನು ಹೇಳಿಕೊಡುತ್ತಿದ್ದರು. ಕುಶಾಲ್ನ ಒತ್ತಡ ಹೆಚ್ಚಿದ ಮೇಲೆ ಈ ವಿಚಾರವನ್ನು ವಿಧುವಿಗೆ ತಿಳಿಹೇಳಿದರು. ಅವನು ಎರಡನೆಯ ಬಾರಿಯೂ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿದರು ಫಲವಾಗಿ ತರಗತಿಗೆ ಮೊದಲನೆಯವನಾಗಿ ಬಂದ. ಅಷ್ಟರಲ್ಲಾಗಲೇ ಕಾಲೇಜಿನಲ್ಲಿ ಉತ್ತಮ ಸಹಪಾಠಿಗಳನ್ನು ಎಲ್ಲ ವಿಭಾಗಗಳಲ್ಲಿ ಸಂಪಾದಿಸಿದ್ದ ವಿಧು ಎಲ್ಲ ವಿಭಾಗಗಳಿಗೆ ಚಿರಪರಿಚಿತನಾಗಿದ್ದ. ಡಿಪ್ಲೋಮೋ ತರಗತಿಯ ಮೂರನೇ ವರ್ಷಕ್ಕೆ ಕಾಲಿಟ್ಟಾಗ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯುವ ಚರ್ಚೆಗಳು ಆರಂಭವಾದವು. ಎಲ್ಲಾ ವಿಭಾಗದ ಸ್ನೇಹಿತರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರಿಂದ ವಿಧುವಿಗೆ ಚುನಾವಣೆಗೆ ನಿಲ್ಲುವಂತೆ ಒತ್ತಡ ಬರುತ್ತಿತ್ತು. ಆದರೆ ಅವನಿಗೆ ಯಾವುದೇ ಚುನಾವಣೆ ಬೇಡವಾಗಿತ್ತು. ಏಕೆಂದರೆ ಅವನ ಉದ್ದೇಶ ಓದುವುದರ ಮುಖಾಂತರ ಡಿಪ್ಲೋಮಾ ಮುಗಿಸಿ ಹೋಗುವುದಾಗಿತ್ತು. ಅದೇ ಸಮಯದಲ್ಲಿ ಕುಶಾಲ್ ವಿಧುವಿನ ಹತ್ತಿರ ಸಹಾಯ ಕೇಳಿಕೊಂಡು ಬಂದ, ಅವನು ಉದ್ದೇಶವಿದ್ದು ವಿಧವನ್ನು ಹಿಡಿದರೆ ವೋಟು ತೆಗೆದುಕೊಳ್ಳಲು ಅನುಕೂಲ ಆಗಬಹುದು ಎಂಬುದು ಅವನ ಲೆಕ್ಕಾಚಾರವಾಗಿತ್ತು. ಇದನ್ನು ಅರಿಯದ ವಿಧು ಸ್ನೇಹಿತ ಸಹಾಯ ಕೇಳಿಬಂದಾಗ ಸಹಾಯ ಮಾಡುವುದು ನಿಜ ಸ್ನೇಹಿತನ ಲಕ್ಷಣವೆಂದು ಅವನ ಚುನಾವಣೆಗೆ ಸಹಾಯ ಮಾಡಲು ಒಪ್ಪಿದ. ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕುಶಾಲ್ ನ ಗೆಲುವಿಗೆ ಪ್ರಮುಖ ಕಾರಣನಾದ. ಕುಶಾಲ್ ಗೆಲ್ಲುವೆ ವಿಧುವಿಗೆ ಮುಳುವಾಗಿ ಕಾಡಿತು. ಕುಶಾಲ್ ನ ಇತರೆ ಸ್ನೇಹಿತರೆ ಅವನನ್ನು ಸೋಲಿಸಲು ಸಿದ್ಧವಿದ್ದ ಪರಿಸ್ಥಿತಿಯಲ್ಲಿ ಅವರನ್ನೆಲ್ಲ ಸಂಬಾಳಿಸಿ ಕುಶಾಲ್ ಗೆಲುವಿಗೆ ಕಾರಣನಾದ, ಕುಶಾಲ್ ತನ್ನ ಬುದ್ಧಿಯನ್ನು ಚುನಾವಣೆಯಲ್ಲಿ ಗೆದ್ದ ಮರುದಿನದಿಂದಲೇ ತೋರಿಸಲು ಶುರು ಮಾಡಿದ. ಚುನಾವಣೆಯಲ್ಲಿ ಗೆದ್ದ ಮರುದಿನ ಸಿಹಿ ಹಂಚುವ ಸಮಯದಲ್ಲಿ ಕುಶಾಲ್ ಗೆ ಕೇಡು ಬಯಸಿದವರನ್ನ ವೇದಿಕೆಯ ಮೇಲೆ ಕರೆದು ವಿಧವನ್ನು ಕರೆಯದಂತೆ ಅವಮಾನಿಸಿ ಬಿಟ್ಟ........

Friday, October 2, 2020

ಬಿಜೆಪಿ ಹೊರತಾದ ಹಿಂದೂ ರಾಷ್ಟ್ರೀಯವಾದದ ಪಕ್ಷದ ಅವಶ್ಯಕತೆ ಈ ದೇಶಕ್ಕೆ ಇದೆಯೇ ?

ಭಾರತದ ಭವ್ಯ ಪರಂಪರೆಗೆ ಕಾರಣ, ಈ ನೆಲದ ಮಣ್ಣಿನ ಗುಣವಾದ ಪ್ರಾಕೃತಿಕ ಸೊಬಗಿನ ಸಂಸ್ಕೃತಿ .ಭಾರತ ವಿಶ್ವಕ್ಕೆ ಬದುಕನ್ನು ಹೇಳಿಕೊಟ್ಟ ದೇಶ. ವಿವಿಧತೆಯಲ್ಲಿ ಏಕತೆಯನ್ನು ಅನಾದಿಕಾಲದಿಂದಲೂ ರೂಢಿಸಿಕೊಂಡು ಬಂದ, ವಿಶ್ವಕ್ಕೆ ಸಹಬಾಳ್ವೆಯ ಮಹತ್ವವನ್ನು ಸಾರಿದ, ವಿಶ್ವವೇ ಒಂದು ಮನೆಯೆಂದು ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯವನ್ನು ಕೊಟ್ಟ ದೇಶ. ಇಂತಹ ದೇಶದ ರಾಜಕೀಯ ಇತಿಹಾಸ ಇಂದು ನೆನ್ನೆಯದಲ್ಲ ಅದಕ್ಕೆ ಅದರದೇ ಆದ ಅಮೋಘ ಇತಿಹಾಸವಿದೆ. ರಾಮಾಯಣ ಕಾಲದಿಂದ ಆರಂಭವಾಗಿ ಮಹಾಭಾರತದಿಂದ ಇಂದಿನ  ಕಲಿಯುಗದಲೂ ತನ್ನದೇ ರಾಜಕೀಯ ಇತಿಹಾಸ ಇರುವ ದೇಶ ಯಾವುದಾದರೂ ಇದ್ದರೆ ? ಅದು ಭಾರತ ಮಾತ್ರ . ಭಾರತವು ಇಂದಿನವರೆಗೆ ಪ್ರೌಢತೆಯ ಪ್ರಬುದ್ಧತೆಯ ರಾಜಕೀಯ ಆಡಳಿತವನ್ನು ಮಾಡಿಕೊಂಡು ಬಂದ ದೇಶ. ಈ ದೇಶವನ್ನು ಇದುವರೆಗೂ ಯಾರೂ ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಲಾಗಲಿಲ್ಲ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು ? ಅದಕ್ಕೆ ಉತ್ತರ ನಮ್ಮ ಭೂತಾಯಿಯ ಆತ್ಮವೇ ಈ ನಮ್ಮ ಭಾರತ ದೇಶ. ಆತ್ಮವಿಲ್ಲದ ದೇಹ ಹೇಗೆ ಕಾರ್ಯಾಚರಿಸುವುದು ಇಲ್ಲವೋ ಅದೇ ರೀತಿ ಭಾರತದ ಬೆಳಕಿಲ್ಲದೆ ವಿಶ್ವವು ಉನ್ನತಿಗೆ ಹೋಗಲು ಸಾಧ್ಯವಿಲ್ಲ. ಭಾರತವು ಪ್ರಕೃತಿಯೊಂದಿಗೆ ಬೆರೆತ ದೇಶ ಪ್ರಕೃತಿಯ ಒಂದು ಭಾಗವೂ ಹೌದು. ಪ್ರಕೃತಿ ಬಯಸುವುದು ಧರ್ಮವನ್ನು, ಧರ್ಮವೆಂದರೆ ಪ್ರಕೃತಿಯೊಂದಿಗೆ ಕೂಡಿಬಾಳುವ ಒಂದು ಅನುಬಂಧ. ಅದೇ  ಸಂಸ್ಕೃತಿಯೇ ಮುಂದೆ ಧರ್ಮವಾಯಿತು.
                ಈ ಅನುಬಂಧ ಏರುಪೇರಾದರೆ ಈ ಪುಣ್ಯಭೂಮಿಯು ತನ್ನ ಸೇವಕರನ್ನು ತನ್ನ ನೆಲದ ಮೇಲೆ ಕರೆಸಿಕೊಳ್ಳುತ್ತದೆ. ಹಾಗೆಯೇ ನಮ್ಮ ದೇಶಕ್ಕೆ ಅವನತಿ ಬಂದಾಗ ಒಬ್ಬರ ಅಧಿಪತ್ಯ ಸಾಧಿಸುವಂತಹ ಪ್ರಸಂಗಗಳು ಎದುರಾದಾಗ ಪರ್ಯಾಯ ನಾಯಕರುಗಳು ಬರುತ್ತಾರೆ. ಹಾಗೆಯೇ ಇತಿಹಾಸ ನೋಡಿಕೊಂಡು ಹೋದಾಗ ನಮಗೆ ಹಲವಾರು ಉದಾಹರಣೆಗಳು ಸಿಗುತ್ತವೆ. ಹಿಂದುತ್ವ ಅವನತಿಯ ಹಾದಿ ಹಿಡಿಯುವ ಸಮಯದಲ್ಲಿ ಆಧ್ಯಾತ್ಮಿಕ ಕ್ರಾಂತಿಗಳು ಆಗಿದ್ದುಂಟು. ಅದಕ್ಕೆ ಉತ್ತಮ ಉದಾಹರಣೆ  ಶಂಕರಾಚಾರ್ಯರು ಸನಾತನ ಧರ್ಮವನ್ನು ಮತ್ತೆ ಉಳಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡಿದ್ದು. ಉತ್ತರಭಾರತದಲ್ಲಿ ಮುಸಲ್ಮಾನರ ದಾಳಿಗಳ ಆದಾಗ ದಕ್ಷಿಣ ಭಾರತದಲ್ಲಿ ನಾರಾಯಣಗುರು ಅವರ ಮುಖಾಂತರ ಆಧ್ಯಾತ್ಮಿಕ ಕ್ರಾಂತಿಯಾಗಿದ್ದು ಉಂಟು. ಒಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಈ ಮಣ್ಣಿನ ಗುಣಲಕ್ಷಣ. ಅದೇ ಕಾರಣ ಇಂದಿನವರೆಗೂ ಈ ದೇಶದಲ್ಲಿ ಯಾರಿಗೂ ಸರ್ವಾಧಿಕಾರಿಯಾಗಿ ಮರೆಯಲು ಸಾಧ್ಯವಾಗಿಲ್ಲ.
                 ಸ್ವಾತಂತ್ರ ಭಾರತದ ನಂತರ ದೇಶವು ಸಂಸ್ಕೃತಿಯ ಹೊರತಾಗಿ ರಾಜಕೀಯ ಧರ್ಮದ ( ಅಂದರೆ ರಾಜಕೀಯ ಸ್ವಾರ್ಥವನ್ನು ಇಟ್ಟುಕೊಂಡು ವೋಟ್ ಬ್ಯಾಂಕಿಗಾಗಿ ಹೆಸರಿಸುವ ಧರ್ಮ ) ವಿಚಾರವಾಗಿ ದೇಶ ಇಬ್ಭಾಗವಾಗಿ ಹೋಯಿತು. ಪಾಕಿಸ್ತಾನ ಮುಸಲ್ಮಾನರ ದೇಶವಾಗಿ ಭಾರತವು ಅರ್ಥವಿಲ್ಲದ ಪದವಾದ ಸೆಕ್ಯುಲರ್ ದೇಶವಾಗಿ ಹೊರಹೊಮ್ಮಿದಾಗ ಸಹಜವಾಗಿ ಹಿಂದುಗಳ ಸಹನೆಯ ಕಟ್ಟೆ ಒಡೆಯಿತು. ಅದರ ಫಲವೇ ಮುಂದಿನ ದಿನಗಳಲ್ಲಿ ಬಂದ ಜನ ಸಂಘ. ಜನ ಸಂಗವು ರೂಪಾಂತರಗೊಂಡು ಭಾರತೀಯ ಜನತಾ ಪಾರ್ಟಿ ಯಾಗಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಅದು ಯಾವ ಹೆಸರಿನಲ್ಲಿ ಅಧಿಕಾರ ಹಿಡಿಯಿತೋ ಅದರ ಮೂಲ ಸತ್ವವನ್ನೇ ಮರೆತುಬಿಟ್ಟಿತು. ಹಿಂದುತ್ವಕ್ಕೆ ಪೂರಕವಾದ ಯಾವ ಕೆಲಸಗಳು ಆಗಲಿಲ್ಲ. ಮತ್ತೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನು ಕಂಡಿತು. ಆನಂತರ ವಿದೇಶಿ ಮಹಿಳೆ ನಮ್ಮ ಭಾರತ ಭೂಮಿಯನ್ನು ಅನ್ಯಮಾರ್ಗದಿಂದ ಆಳಿದರು. ಅದರ ಪ್ರತಿಫಲ ಎನ್ನುವಂತೆ ದೇಶವು ಅವನತಿ ಹಾದಿಯನ್ನು  ಹಿಡಿಯಿತು. ಕಾಲಕಳೆದಂತೆ ಹಿಂದುತ್ವದ ಆದರ್ಶಗಳು ಕ್ರಮೇಣ ಕಡಿಮೆಯಾಗುತ್ತಾ ಹೋಯಿತು. ಪಕ್ಷಕ್ಕಾಗಿ ಹಗಲು ಇರುಳು ಎನ್ನದೆ ದುಡಿದ ಕಾರ್ಯಕರ್ತರು, ನಾಯಕರು ನೈಪಥ್ಯಕ್ಕೆ ಸರಿದರು. ಅನ್ಯ ಪಕ್ಷಗಳಿಂದ ಬಂದು ಬಿಜೆಪಿಯಲ್ಲಿ ಅಧಿಕಾರ ಅನುಭವಿಸುತ್ತಿರುವವರು ಒಂದು ಕಾಲದಲ್ಲಿ ಬಿಜೆಪಿಯ ನಿಷ್ಠಾವಂತರಿಗೆ ನೋವು ಕೊಟ್ಟವರೇ. ನಿಸ್ವಾರ್ಥದಿಂದ ದುಡಿದವರನ್ನು ಬಿಜೆಪಿ ಮರೆಯಿತು. ಜಾತಿ ಆಧಾರದ, ಸ್ವಜನಪಕ್ಷಪಾತದ, ಹಿಂಬಾಲಕರಿಗೆ ಮಣೆ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಜನಸಂಘದ ಧ್ಯೇಯಗಳು ಬಿಜೆಪಿಯಲ್ಲಿ ಉಳಿದಿಲ್ಲ ಎಲ್ಲವೂ ಬರೀ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ.
                  ಇಂದು ಬಿಜೆಪಿಯಲ್ಲಿ ನೈತಿಕತೆ ಕಡಿಮೆಯಾಗಿರುವ ಪರಿಣಾಮ ಕೆಲವರು ಬಿಜೆಪಿ ಬಿಡಲು ಸಿದ್ಧರಿದ್ದರು ಅವರಿಗೆ ಹಿಂದೂ ರಾಷ್ಟ್ರೀಯವಾದದ ನೆಲೆಗಟ್ಟಿನ ಪಕ್ಷ ಸಿಗುತ್ತಿಲ್ಲ. ಹಿಂದೂ ರಾಷ್ಟ್ರೀಯವಾದ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿ ಭಾರತದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ಅಧಿಕಾರದಲ್ಲಿದ್ದರು ಭಾರತವನ್ನು ಹಿಂದು ರಾಷ್ಟ್ರವೆಂದು ಘೋಷಿಸುತ್ತಿಲ್ಲ. ಇದು ಬಿಜೆಪಿಯ ದ್ವಂದ್ವ ನಿಲುವನ್ನು ತೋರಿಸುತ್ತದೆ. ಅದರ ಹಿಂದುತ್ವದ ಅಜೆಂಡಾ ಬರಿ ವೋಟ್ ಬ್ಯಾಂಕಿಗಾಗಿ ಸೀಮಿತವಾಗಿದೆ. ಇನ್ನೂ ಅದರ ಆರ್ಥಿಕ ನೀತಿಯಲ್ಲಿನ ಅಸಮತೋಲನ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ. ಅದನ್ನು ಪ್ರಶ್ನಿಸುವ ಗಟ್ಟಿ ದ್ವನಿ ಸಂಸತ್ತಿನಲ್ಲಿ ಇಲ್ಲದಂತಾಗಿದೆ. ಅದರ ವೈಫಲ್ಯಗಳನ್ನು ಹೇಳಿದರೆ ಅದು ಹಿಂದುತ್ವ ಎಂಬ ಅಸ್ತ್ರವನ್ನು ಪ್ರಯೋಗಿಸುತ್ತಿದೆ. ಬಿಜೆಪಿಯ ವಿರುದ್ಧ ಮಾತನಾಡಿದರೆ ಅದು ದೇಶ ವಿರುದ್ಧ ಮಾತನಾಡಿದಂತೆ ಎಂದು ಬಿಂಬಿಸಲಾಗುತ್ತಿದೆ. ಅದನ್ನು ಪ್ರಶ್ನಿಸುವ ದೇಶದ ಪರವಾಗಿ ಹೋರಾಡುವ ಇನ್ನೊಂದು ಹಿಂದೂ ರಾಷ್ಟ್ರೀಯವಾದದ ಪಕ್ಷದ ಅವಶ್ಯಕತೆ ಈ ದೇಶದಲ್ಲಿ ಬಹಳ ಇದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾಗಿದೆ. ಹಿಂದುತ್ವವೆಂಬುದು ಬಿಜೆಪಿ ಬರುವುದಕ್ಕಿಂತಲೂ ಮೊದಲೇ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ..... ಏಕೆಂದರೆ ಹಿಂದುತ್ವ ಸನಾತನ ಹಾಗೂ ಅನಂತ.....

Wednesday, September 30, 2020

ಪ್ರೇಮದ ಅನ್ವೇಷಣೆ ಭಾಗ-15


ಕುಶಾಲ್ ತನ್ನ ಪ್ರೀತಿಯ ಸಮಸ್ಯೆಗಳನ್ನು ಹೇಳಿಕೊಳ್ಳಲು ಶುರುಮಾಡಿದ. ವಿಧುವಿಗೆ ಹದಿಹರೆಯದ ಪ್ರೀತಿಯ ಮೇಲೆ ನಂಬಿಕೆ ಇಲ್ಲದ ಕಾರಣ ಕುಶಾಲ್ ನ ಕಥೆಯನ್ನು ಕೇಳಲು ಮೊದಲು ನಿರಾಸಕ್ತಿ ತೋರಿದರು ಪ್ರೀತಿಸಿದ ಹುಡುಗಿಯ ಬಗ್ಗೆ ಕಣ್ಣೀರು ಹಾಕುತ್ತ ಹೇಳಿದಾಗ ಅಯ್ಯೋಪಾಪ ಕೇಳಬೇಕು ಅನಿಸಿತು. ಇದುವರೆಗೂ ಹುಡುಗರು ಹುಡುಗಿಯರಿಗೆ ಮೋಸ ಮಾಡುತ್ತಾರೆ ಎಂದು ಬಲವಾಗಿ ನಂಬಿದ್ದ ವಿಧುವಿಗೆ ಹುಡುಗಿಯರು ಹುಡುಗರಿಗೆ ಮೋಸ ಮಾಡುತ್ತಾರೆ ಎಂಬುದನ್ನು ಮನಗಂಡನು. ಹುಡುಗಿಯರು ಎಂದರೆ ಬರಿ ಒಳ್ಳೆಯವರು ಇರುತ್ತಾರೆ ಎಂದು ತಿಳಿದವನಿಗೆ ಮೊದಲ ಬಾರಿಗೆ ಕೆಟ್ಟವರು ಇರುತ್ತಾರೆ ಎಂಬ ಸತ್ಯದ ಅರಿವಾಯಿತು.  ಒಬ್ಬ ನಿಜ ಸ್ನೇಹಿತನಾಗಿ ಅವನಿಗೆ ಸಮಾಧಾನ ಹೇಳುತ್ತಿದ್ದ. ರಾತ್ರಿ 2:00 3:00ರ ಸಮಯದಲ್ಲಿ ವಿಧುವಿಗೆ ಫೋನ್ ಮಾಡಿ ಅತ್ತಿದ್ದೂ ಉಂಟು. ಸ್ನೇಹಿತನ ನೋವನ್ನು ತನ್ನದೆಂದು ಭಾವಿಸಿದವನು ಪ್ರತಿಬಾರಿ ಸಮಾಧಾನ ಹೇಳುವುದು ಸಾಮಾನ್ಯವಾಗಿಬಿಟ್ಟಿತು. ರಾತ್ರಿ ಹೊತ್ತು ಮಾತನಾಡುತ್ತಿದ್ದ ವಿಧುವಿನ ಮೇಲೆ ಅವನ ತಂದೆ-ತಾಯಿ ಅನುಮಾನಿಸಿದ್ದು ಉಂಟು. ಅವರಿಂದ ಚುಚ್ಚು ಮಾತುಗಳನ್ನು ಕೇಳುತ್ತಿದ್ದ ಆದರೂ ಸ್ನೇಹಿತನ ಕಣ್ಣಿನಿಂದ ಬರುವ ನೀರನ್ನು ತಡೆಯುವ ಉದ್ದೇಶದಿಂದ ಆ ನೋವನ್ನು ಅನುಭವಿಸಿದನು. ನಿಧಾನವಾಗಿ ಅವರಿಬ್ಬರ ಸ್ನೇಹ ಬಲವಾಗುತ್ತ ಹೋಯಿತು.
             ಕುಶಾಲ್ ಪ್ರೀತಿಸಿದ ಹುಡುಗಿಯ ಸಂಬಂಧವು ಮುರಿದುಬಿತ್ತು. ಆ ಸಂಬಂಧ ಮುರಿದು ಬಿದ್ದ ಕೆಲವೇ ದಿನಗಳಲ್ ಕುಶಾಲ್  ಬೇರೆ ಹುಡುಗಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾನೆ ಎಂದು ಬೇರೆಯವರಿಂದ ತಿಳಿದು ಆಶ್ಚರ್ಯವಾಯಿತು. ನೇರನುಡಿಯ ವಿಧು ಕುಶಾಲ್ ನನ್ನು ನೇರವಾಗಿಯೇ ಕೇಳಿಬಿಟ್ಟ. ನೀನು ಇತ್ತೀಚಿನ ದಿನಗಳಲ್ಲಿ ಯಾರನ್ನಾದರೂ ಪ್ರೀತಿಸುತ್ತಿದ್ದೀಯ ? ಬೇರೆಯವರಿಂದ ಮಾಹಿತಿ ಸಿಕ್ಕಿದೆ. ಅದು ನಿಜವೂ ಸುಳ್ಳೆಂದು ಹೇಳು ಎಂದ, ಕುಶಾಲ್ ಅದು ನಿಜವೆಂದ ವಿಧು ಅವಕ್ಕಾಗಿ ಬಿಟ್ಟ. ವಿಧು ಕುಶಾಲ್ ನಿನ್ನ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಸೃಷ್ಟಿಸಿ ಮಾತನಾಡುತ್ತಿದ್ದಾನೆ ಎಂದು ಅನ್ಯ ಸ್ನೇಹಿತರು ಹೇಳಿದಾಗ ನಂಬದವನು. ಈಗ ನಮ್ಮ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರೀತಿ ಎಂದರೆ ಅದೊಂದು ನಿರೀಕ್ಷೆಯಿಲ್ಲದ ಕಾಳಜಿ ,ಪರಸ್ಪರ ಗೌರವಯುತವಾಗಿ ನಡೆದುಕೊಳ್ಳುವುದು, ಪರಸ್ಪರ ಅರ್ಥಮಾಡಿಕೊಂಡು ಬದುಕನ್ನು ಪರಿಪೂರ್ಣ ಮಾಡಿಕೊಳ್ಳುವುದು ಎಂದು ನಂಬಿದ್ದ ವಿಧುಗೆ ಕುಶಾಲಿನ ನಡೆ ಇಷ್ಟವಾಗಲಿಲ್ಲ . ಮೊದಲಿನಿಂದಲೂ ಕುಶಾಲ್ ಮೇಲೆ ಬೇರೆ ಸ್ನೇಹಿತರ ಆರೋಪವಿದ್ದರೂ ನಂಬದ ವಿಧು ಕಣ್ಣಮುಂದಿನ ಸತ್ಯವನ್ನು ನಂಬಲೇಬೇಕಾದ ಸ್ಥಿತಿ. ಬಟ್ಟೆ ಬದಲಿಸುವ ರೀತಿ ಸುಲಭವಾಗಿ ಪ್ರೀತಿಯನ್ನು ಬದಲಾಯಿಸುತ್ತಿದ್ದಾನಲ್ಲ. ಇವನು ನಿಜವಾಗಿಯೂ ಪ್ರೀತಿಸಿದ್ದನ್ನ ಎಂಬ ಪ್ರಶ್ನೆ ? ಅದು ಪ್ರೀತಿ ಮುರಿದು ಬಿದ್ದ ಕೇವಲ ಒಂದು ತಿಂಗಳ ಒಳಗಾಗಿ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂದರೆ ಏನರ್ಥ ? ಇವನಿಗೂ ನನ್ನ 11ನೇ ತರಗತಿಯ ಸಹಪಾಠಿಯಾದ ಹುಡುಗಿಯನ್ನು ಪ್ರೀತಿಸಿ ಮೋಸ ಮಾಡಿದವನಿಗೂ ವ್ಯತ್ಯಾಸವಿಲ್ಲ. ಇವನದು ಏನಿದ್ದರೂ ದೈಹಿಕ ಆಕರ್ಷಣೆಯ ಪ್ರೀತಿ ಎಂಬುದು ಅರಿವಾಯಿತು. ಅವನಿಂದ ಅಂತರವನ್ನು ಕಾಯ್ದುಕೊಳ್ಳಲು ನಿಶ್ಚಯಿಸಿ ಇವನಿಂದ ದೂರಸರಿಯುವುದು ಲೇಸೆಂದು ನಿಧಾನವಾಗಿ ಅವನಿಂದ ದೂರ ಇರಲು ಪ್ರಯತ್ನಿಸಿದ. ಆದರೆ ಅದಾಗಲೇ ಅವರಿಬ್ಬರ ಸ್ನೇಹ ಗಾಢವಾಗಿತ್ತು. ಕುಶಾಲ್ ಅಷ್ಟು ಸುಲಭವಾಗಿ ವಿಧುವನ್ನು ಬಿಡಲು ಸಿದ್ಧ ಇರುವವನಂತೆ ಕಾಣುತ್ತಿರಲಿಲ್ಲ. ಏಕೆಂದರೆ ಅವನದು ಪಕ್ಕಾ ಲೆಕ್ಕಾಚಾರದ ಸಂಬಂಧ ಎನ್ನುವುದು ತಿಳಿಯಲು ತುಂಬಾ ಸಮಯ ಹಿಡಯಿತು. ಕುಶಾಲ್ ಮಾತನ್ನು ನಂಬುತ್ತಿದ್ದ ವಿಧುವನ್ನು ಕುಶಾಲ್ ಮಾತಿನ ಮೂಲಕ ಕಟ್ಟಿ ಹಾಕುತ್ತಿದ್ದ .ಕುಶಾಲ್ ನಾಯವಾದ ಮಾತಿನ ಹಿಂದಿರುವ ಲೆಕ್ಕಚಾರದ ಮೋಸವನ್ನು ಅರಿಯಲು ಯಾವಾಗಲೂ ವಿಫಲನಾಗುತ್ತಿದ ಏಕೆಂದರೆ ಅವನದು ನಿಷ್ಕಲ್ಮಶ ಸ್ನೇಹ....

Monday, September 28, 2020

ಕೃಷಿ ವಿಧೇಯಕ 2020: ಮರಣಶಾಸನ ಆಗದಿರಲಿ ರೈತರ ಬದುಕು.


ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾ ಹಳ್ಳಿ ಇಂದ ರಾಜಕಾರಣವನ್ನು ಶುರುಮಾಡಿ ದಿಲ್ಲಿ ಗದ್ದುಗೆಯನ್ನು ಹಲವರು ಏರಿದರು. ನಾವು ಯಾರಿಂದ ಆಯ್ಕೆ ಆದೆವು ಎನ್ನುವುದನ್ನೇ ಮರೆತು ಬಿಟ್ಟರು. ರೈತ ಮಾತ್ರ ವೋಟ್ ಬ್ಯಾಂಕ್ ಆಗಿ ಉಳಿದುಬಿಟ್ಟ. ಸ್ವಾತಂತ್ರ್ಯ ಬಂದಾಗಿನಿಂದಲೂ ಅವನು ಹೇಳಿಕೊಳ್ಳುವಂತಹ ಪ್ರಗತಿಯನ್ನು ಕಾಣಲಿಲ್ಲ . ರೈತ ಹೋರಾಟದ ಆದಿಯನ್ನು ತಿಳಿಯಲಿಲ್ಲ ತನ್ನ ಪಾಡಿಗೆ ತಾನು ಲೋಕಕ್ಕೆ ಅನ್ನವನ್ನು ನೀಡುವ ಕಾಯಕವನ್ನು ಮಾಡಿಕೊಂಡು ಬದುಕುತ್ತಿದ್ದ. ಕಾಲ ಬದಲಾದಂತೆ ರೈತ ವೋಟ್ ಬ್ಯಾಂಕ್ ಆದಕಾರಣ ರೈತ ಸಂಘಟನೆಗಳು ಹುಟ್ಟಿಕೊಂಡವು. ರೈತ ಚಳುವಳಿಯ ಬಿಸಿ ಏರುತ್ತಿದ್ದಂತೆ ಅದರೊಳಗೆ ರಾಜಕೀಯ ಮೆತ್ತಿಕೊಂಡು ರಾಜಕೀಯ ಶಕ್ತಿಗಳು ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಸಂಘಟನೆಗಳನ್ನು ಅಸ್ತ್ರವಾಗಿ ಉಪಯೋಗಿಸಲು ಶುರು ಮಾಡಿದವು. ರಾಜಕೀಯದಿಂದ ರೈತಸಂಘಟನೆಗಳು ಚೆದುರಿ ಹೋದವು. ಕಾಲಕಳೆದಂತೆ ರೈತ ಸಂಘಟನೆಗಳ ಶಕ್ತಿ ಕಳೆದುಕೊಂಡು ರಾಜಕೀಯ ಶಕ್ತಿಯಾಗಿ ಪರಿವರ್ತನೆಗೊಂಡವು. ರಾಜಕೀಯ ಹಿತಾಸಕ್ತಿಗಾಗಿ ಕೆಲಸ ಮಾಡುವಂತಹ ನಾಯಕರುಗಳು ಹುಟ್ಟಿಕೊಂಡರು. ಅದರ ಫಲವೇ ಇಂದಿನ ರೈತ ಹೋರಾಟವನ್ನು ಬಿಜೆಪಿ ಸರ್ಕಾರ ರಾಜಕೀಯ ಹೋರಾಟ ಎಂದು ಕರೆದಿರುವುದು. ರೈತರ ಮೇಲೆ ಗುಂಡು ಹಾರಿಸಿದ ಸರ್ಕಾರದಿಂದ ಇದರ ಹೊರತಾಗಿ ಏನನ್ನಾದರೂ ನಿರೀಕ್ಷಿಸಲು ಸಾಧ್ಯವೇ ? ಕೇಂದ್ರ ಸರ್ಕಾರದ ರೈತ ವಿರೋಧಿ ನಿಲುವನ್ನು ಪ್ರಶ್ನೆ ಮಾಡುವ ಧೈರ್ಯ ಆ ಪಕ್ಷದ ನಾಯಕರುಗಳಿಗೆ ಉಳಿದಿಲ್ಲ ಏಕೆಂದರೆ ಇಂದು ಬಿಜೆಪಿ ಕೂಡ ಎಲ್ಲಾ ಪಕ್ಷಗಳಂತೆ ಸ್ವಜನಪಕ್ಷಪಾತ, ಸ್ವಾರ್ಥದಿಂದ ತುಂಬಿಹೋಗಿದೆ. ರೈತರ ಪರ ಧ್ವನಿ ಎತ್ತಲು ಕಾಂಗ್ರೆಸ್ನಲ್ಲಿ ನಾಯಕತ್ವದ ಕೊರತೆ ಇದೆ. ಇನ್ನು ಜೆಡಿಎಸ್ ಕುಟುಂಬ ರಾಜಕಾರಣದಲ್ಲಿ ಮುಳುಗಿ ಹೋಗಿದೆ. ಇಂದು ನಿಜವಾಗಿ ರೈತ ಪರ ಹೋರಾಟ ಮಾಡುವ ನಾಯಕರು ಯಾರು ಹೇಳಿಕೊಳ್ಳುವಂತಹವರು ಉಳಿದಿಲ್ಲ. ಅದರ ಲಾಭ ವಾಗುತ್ತಿರುವುದು ದುಡ್ಡು ತೆಗೆದುಕೊಂಡು ಹೋರಾಟ ಮಾಡುತ್ತಿರುವವರಿಗೆ, ಇನ್ನೂ ದುರ್ಬಲ ನಾಯಕತ್ವದಿಂದ ಪ್ರಬಲ ಹೋರಾಟಗಳು ನಡೆಯುತ್ತಿಲ್ಲ.
            ಇನ್ನು ರೈತರ ಹೆಸರು ಹೇಳಿಕೊಂಡು ಅಧಿಕಾರದ ಗದ್ದುಗೆ ಹಿಡಿದ ರಾಜ್ಯ ಬಿಜೆಪಿಯು ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ತಂದು ರೈತರ ಜಮೀನನ್ನು ಕಾರ್ಪೊರೇಟ್ ಕಂಪನಿಗಳು ಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿಧಾನಪರಿಷತ್ತಿನಲ್ಲಿ ಅನುಮೋದನೆ ಸಿಗದೆ ಬಾಕಿ ಉಳಿದಿದೆ. ಇದೇ ಸಮಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಮೂರು ರೈತ ವಿರೋಧಿ ಮಸೂದೆಗಳನ್ನು ಕಾಯ್ದೆ ರೂಪದಲ್ಲಿ ಜಾರಿಗೆ ತಂದಿದೆ.
1 ) ಎಪಿಎಂಸಿ ಬೈಪಾಸ್ ಅಡ್ರಿನನ್ಸ್ ಮಾದರಿಯಲ್ಲಿ "ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ 2020."
2 ) ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರಿವಾಗ್ನೆ 2020 "ಇದನ್ನು ಕೃಷಿ ಉದ್ಯಮದ ಮೂಲಕ ಆಹಾರ ಸಂಗ್ರಹಣೆ ಸ್ವಾತಂತ್ರ್ಯ ಸುಗ್ರಿವಾಗ್ನೆ" ಎಂದು ಭಾವಿಸಬಹುದು.
3 ) "ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆಗಳ ಒಪ್ಪಂದದ ಬರವಸೆ ಮತ್ತು ಕೃಷಿ ಸೇವೆಗಳ ಸುಗ್ರಿವಾಗ್ನೆ 2020" ಇದನ್ನು ಗುತ್ತಿಗೆ ಕೃಷಿ ಸುಗ್ರೀವಾಜ್ಞೆಯಾಗಿ ಪರಿಗಣಿಸಲಾಗಿದೆ.
        ಇನ್ನು ಇರುವ ಕಾಯ್ದೆಗಳನ್ನು ಸೂಕ್ತರೀತಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ವಿಫಲವಾಗಿರುವುದರಿಂದ ಹೊಸ ಕಾಯ್ದೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಸುಗ್ರೀವಾಜ್ಞೆಗಳು ರೈತರ ಬದುಕನ್ನು ಬೇರೆಯವರಿಗೆ ಮಾರಿಕೊಳ್ಳುವಂತಹ ಸ್ಥಿತಿಗೆ ತಂದು ನಿಲ್ಲಿಸಲು ಅನುವು ಮಾಡಿಕೊಡುತ್ತವೆ. ಕೇಂದ್ರ ಸರ್ಕಾರವು ಕೃಷಿ ವಿಧೇಯಕಗಳನ್ನು ರಾಜಕೀಯಗೊಳಿಸಿ, ಕೃಷಿ ಎಂದರೇನು ಎಂಬುದನ್ನು ತಿಳಿಯದ ಮೂರ್ಖ ಮಬ್ಬು ಭಕ್ತರಿಂದ ಶಂಖನಾದವನ್ನು ಬಾರಿಸುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರವು ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆಯೆರೆಯಲು ಮಾಡಿರುವಂತಹ ಶಾಸನವೇ ಕೃಷಿ ವಿಧೇಯಕಗಳು 2020. ಕಾರ್ಪೊರೇಟ್ ಕ್ಷೇತ್ರ ಕೃಷಿಯನ್ನು ಒಂದು ಬಾರಿ ನಿಯಂತ್ರಣ ತೆಗೆದುಕೊಂಡರೆ, ರೈತರನ್ನು ಸಾಮಾನ್ಯ ಜನರನ್ನು ತನಗೆಬೇಕಾದಂತೆ ಕುಣಿಸುತ್ತದೆ. ಮುಂದಿನ ದಿನಗಳಲ್ಲಿ ರೈತರು ಬೆಳೆಯುವ ತರಕಾರಿ ದವಸಧಾನ್ಯಗಳ ಹಕ್ಕುಸ್ವಾಮ್ಯ ಕಾರ್ಪೊರೇಟ್ ಕಂಪನಿಗಳದಾಗುತ್ತದೆ. ಕಾರ್ಪೊರೇಟ್ ಕಂಪನಿಗಳು ಕೃತಕ ಅಭಾವವನ್ನು ಸೃಷ್ಟಿಸಿ ದವಸ ಧಾನ್ಯಗಳ ಬೆಲೆಯನ್ನು ಎರಡು-ಮೂರು ಪಟ್ಟು ಹೆಚ್ಚಿಗೆ ಮಾಡಿ ಮಾಡುವಂತಹ ಪರಿಸ್ಥಿತಿಗೆ ತಂದು ನಿಲ್ಲಿಸುತ್ತವೆ. ವಿಧಿ ಇಲ್ಲದೆ ಗ್ರಾಹಕರು ಕೂಡ ಅದನ್ನು ಕೊಳ್ಳುವಂತಹ ಅನಿವಾರ್ಯತೆ ಬಿಳುತ್ತಾರೆ. ಮತ್ತದೇ ಬೆಳೆಯುವ ರೈತನಿಗೆ ಏನು ಸಿಗದು ಕೊಳ್ಳುವ ಗ್ರಾಹಕನಿಗೂ ಏನು ಸಿಗುವುದಿಲ್ಲ. ಹೊಸ ವಿಧೇಯಕ ಕೃಷಿಗೆ ಬೆಂಬಲ ಬೆಲೆಯನ್ನು ಕೊಡುವ ವಿಚಾರವಾಗಿ ಯಾವುದನ್ನು ಸ್ಪಷ್ಟಪಡಿಸಿಲ್ಲ. ರೈತ ಸಂಕಷ್ಟಕ್ಕೆ ಸಿಲುಕಿದಾಗ ಬೆಂಬಲ ಬೆಲೆ ಅವನ ನೆರವಿಗೆ ಬರುತ್ತಿತ್ತು. ರಾಷ್ಟ್ರೀಯ ಆಹಾರ ಭದ್ರತೆ ಮಾರಕವಾದ ಇಂತಹ ಕೃಷಿ ವಿಧೇಯಕವನ್ನು ಗಟ್ಟಿಧ್ವನಿಯಲ್ಲಿ ದನಿಯಲ್ಲಿ ವಿರೋಧಿಸುವಂತಹ ವಿರೋಧಪಕ್ಷಗಳು ಇಲ್ಲದ ಕಾರಣ ರೈತರಿಗೆ ಮಾರಕವಾದ ಈ ಕೃಷಿ ವಿಧೇಯಕ ಅನುಷ್ಠಾನಕ್ಕೆ ಬರುತ್ತಿದೆ.

Saturday, September 26, 2020

ಪ್ರೇಮದ ಅನ್ವೇಷಣೆ ಭಾಗ-14.

12ನೇ ತರಗತಿ ಅನುತ್ತೀರ್ಣನಾದ ಅವನಿಗೆ ಡಿಪ್ಲೊಮಾದಲ್ಲಿ ಆಯ್ಕೆಯಾಗಿದ್ದು ಬದುಕಿನಲ್ಲಿ ಅಮೃತ ಸಿಕ್ಕಿದ ಅನುಭವವಾಯಿತು. ಹೌದು, ಹೊಸ ಕಾಲೇಜು ಹೊಸ ಸ್ನೇಹಿತರ ಬಳಗ ಬದುಕಿನಲ್ಲಿ ಹೊಸ ಬುಗ್ಗೆ , ಹೊಸಬೆಳಕು. ನೇರ ನಿಷ್ಠುರಿವಾದಿಯಾದವನು ಯಾವುದಕ್ಕೂ ಹೆದರುವ ಜಾಯಮಾನ ಅವನದಲ್ಲ ,ತಪ್ಪನ್ನು ನೇರವಾಗಿ ಖಂಡಿಸುವ ಧೈರ್ಯ, ಚಾತಿ ಅವನಲ್ಲಿತ್ತು .ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯುವುದು ಶತಸಿದ್ಧ. ಇರುವುದರ ಒಳಗಾಗಿ ಏನನ್ನಾದರೂ ಸಾಧಿಸಬೇಕು ಎಂಬ ದೃಢ ಸಂಕಲ್ಪ ಅವನದು. ಬದುಕಿನಲ್ಲಿ ಯಾವತ್ತು ಹೇಡಿಯಂತೆ ಸಾಯಬಾರದು ಎಂದು ನಿಶ್ಚಯಿಸಿದ ಅವನಿಗೆ ಉಳಿದಿದ್ದು ಒಂದೇ ಮಾರ್ಗ ಚೆನ್ನಾಗಿ ಓದಬೇಕು ಉತ್ತಮ ಅಂಕ ಪಡೆದು ಬದುಕು ಕಟ್ಟಿಕೊಳ್ಳಬೇಕು. ಪುಸ್ತಕದ ಜ್ಞಾನ ಅವನ ಮಸ್ತಕವನ್ನು ತುಂಬಿತ್ತು .ಅವನ ಬದುಕನ್ನು ಸಮಾಜದ ಸೇವೆಗೆ ಮೀಸಲಿಡಬೇಕು ಎಂದು ನಿಶ್ಚಯಿಸಿದ. ಅವನು ಅವನಂತೆ ಮಾನಸಿಕ ಹಿಂಸೆ ಅನುಭವಿಸುವವರ ನೋವಿಗೆ ಸ್ಪಂದಿಸಬೇಕು. ಅವರನ್ನು ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕು. ಕೆಲವರಿಗೆ ತಂದೆ ತಾಯಿ ಇರುತ್ತಾರೆ ಮಕ್ಕಳು ಇರುವುದಿಲ್ಲ ಮತ್ತೆ ಕೆಲವರಿಗೆ ತಂದೆ-ತಾಯಿಯೇ ಇರುವುದಿಲ್ಲ ಮಕ್ಕಳು ಅನಾಥರು ಇರುತ್ತಾರೆ. ಅಂತವರನ್ನು ಸೇರಿಸಿ ಒಂದು ಸೂರಿನಡಿ ಬದುಕುವಂತೆ ಮಾಡಬೇಕು ಒಟ್ಟಿನಲ್ಲಿ ನಾನು ಬದುಕು ಕಟ್ಟಿಕೊಂಡು ಇತರರ ಬದುಕಿಗೆ ಬೆಳಕಾಗಿ ಬಾಳಬೇಕು. ಇನ್ನು ಮುಂದೆ ನನಗಾಗಿ ಅಲ್ಲದಿದ್ದರೂ ಸಮಾಜದ ಒಳಿತಿಗಾಗಿ ಜೀವಿಸಬೇಕು ಎಂಬ ಆಲೋಚನೆಯಲ್ಲಿ ವಿದ್ಯಾಭ್ಯಾಸ ಮುಂದುವರೆಯಲು ಪ್ರಾರಂಭವಾಯಿತು. ಅವನಿಗೆ ತಾಯಿ ಸರಸ್ವತಿಯ ಕೃಪೆ ಬಿಟ್ಟರೆ ಮತ್ತೆ ಏನು ಬೇಡವಾಯಿತು. ನಾಟಕೀಯತೆ, ಸ್ವಾರ್ಥ, ಪ್ರೀತಿಯ ಬಗ್ಗೆ ನಂಬಿಕೆ ಇಲ್ಲದಂತಾಯಿತು. ಹೊಸ ಬದುಕಿನೊಂದಿಗೆ ಹೊಸ ಆಲೋಚನೆಯೊಂದಿಗೆ ಮತ್ತೆ ಬದುಕನ್ನು ಶುರುಮಾಡಿದ.
             ಶಿಸ್ತುಬದ್ಧವಾದ ಜೀವನ ಮಿತಾಹಾರ ವ್ಯಾಯಾಮ, ಓದು ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವ ಶಿಸ್ತುಬದ್ಧವಾದ ಜೀವನಕ್ಕೆ ಹೊಂದಿಕೊಂಡು ಬಿಟ್ಟಿದ್ದ .ಬದುಕನ್ನು ಸಮಾಜಕ್ಕೆ ಮೀಸಲಿಡುವ ಸಂಕಲ್ಪಕ್ಕೆ ಅವನು ಸಿದ್ಧನಾದ. ಕಾಲೇಜು ದಿನಗಳು ಪ್ರಾರಂಭವಾದವು ಎಲ್ಲರನ್ನೂ ಸಮಾನವಾಗಿ ಕಾಣುವ ವಿಧು ಎಲ್ಲಾ ವಿಭಾಗದ ಸ್ನೇಹಿತರನ್ನು ಸಂಪಾದಿಸುವಲ್ಲಿ ಸಫಲನಾದ. ಕೆಲವೇ ದಿನಗಳಲ್ಲಿ ಉತ್ತಮ ಸ್ನೇಹಿತ ವರ್ಗವನ್ನು ಸಂಪಾದಿಸಿದ. ಕೆಲವು ದಿನಗಳ ನಂತರ ಇಬ್ಬರು ಹೊಸ ವ್ಯಕ್ತಿಗಳ ಆಗಮನವಾಯಿತು. ಮೊದಲು ಆಯ್ಕೆಯಾದವರು ಕಾಲೇಜಿಗೆ ಬರದಿರುವ ಕಾರಣ ಎರಡನೇ ಪಟ್ಟಿಯಲ್ಲಿ ಬಂದಿದ್ದವರು ಅವರಾಗಿದ್ದರು. ಅವರಲ್ಲಿ ಒಬ್ಬ ವ್ಯಕ್ತಿ ವಿಧುವನ್ನು ಪರಿಚಯ ಮಾಡಿಕೊಂಡ ಅವನ ಹೆಸರು ಕುಶಾಲ್ ಮತ್ತೊಬ್ಬ ಸಂಜಯ್. ಆಟೋಮೊಬೈಲ್ ವಿಭಾಗಕ್ಕೆ ಅವರು ಬಂದಿದ್ದರಿಂದ ಸಹಜವಾಗಿ ಉತ್ತಮ ಸಹಪಾಠಿಗಳದರು.ದಿನಕಳೆದಂತೆ ಕುಶಾಲ್ ವಿಧುವಿಗೆ ಆತ್ಮೀಯನಾಗುತ್ತಾ ಹೋದ, ಬೇರೆ ಸಹಪಾಠಿಗಳು ಎಂತಹ ಸ್ನೇಹ ಇವರದು ಒಂದೇ ಜೀವ ಎರಡು ಆತ್ಮ ಎಂದು ಕಾಲೇಜಿನ ಇತರ ಸಹಪಾಠಿಗಳು ಮಾತನಾಡಲು ಆರಂಭಿಸಿದರು. ವಿಧು ಆ ವಿಚಾರವಾಗಿ ಯಾರೇ ಏನೇ ಅಂದರು ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ ಏಕೆಂದರೆ ಅವನು ಸರ್ವರನ್ನೂ ಸಮಾನವಾಗಿ ಕಾಣುತ್ತಿದ್ದ ವ್ಯಕ್ತಿ. ಎಲ್ಲರೂ ಸಮಾನರು ಎಂಬ ಭಾವ ಅವನದು. ಅವನಿಗೆ ಓದುವುದು ಮಾತ್ರ ಮುಖ್ಯವಾಗಿತ್ತು. ಸಹಪಾಠಿಯಾಗಿದ್ದ ಕುಶಾಲ್ ಮೊದಲಿಗನಾಗಿ ಫೋನ್ ಮಾಡುವುದು ಮನೆಗೆ ಬರುವುದು ವಿಧುವಿನ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುವುದು. ತನ್ನ ವೈಯಕ್ತಿಕ ವಿಚಾರಗಳನ್ನು ಹೇಳಿಕೊಳ್ಳುವುದನ್ನು ಶುರುಮಾಡಿದ. ವಿಧುವಿಗೆ ಕೇಳಲು ಇರುಸು ಮುರುಸಾಗುತ್ತಿತ್ತು. ತನ್ನ ಮನೆಯ ಒಳಗೆ ಕರೆಯಲು ಹತ್ತು ಇಪ್ಪತ್ತು ಬಾರಿ ಯೋಚನೆ ಮಾಡಿ ಕರೆಯುವಂತಹ ಪರಿಸ್ಥಿತಿಯಲ್ಲಿ ಇದ್ದ ಅವನಿಗೆ ಮನೆಯ ಹತ್ತಿರ ಬರುತ್ತಿದ್ದ ಕುಶಾಲ್ ಅನ್ನು ಹೇಗೆ ಸಂಭಾಳಿಸುವುದು ಎಂಬ ಯೋಚನೆ.ಕುಶಾಲ್ ತನ್ನ ಪ್ರೀತಿಯ.....

Thursday, September 24, 2020

ಪ್ರೇಮದ ಅನ್ವೇಷಣೆ ಭಾಗ-13

ಆ ನಾಡು ನುಡಿ ಸತ್ಯವೆನಿಸಿತು. ಪುಸ್ತಕ ಓದುವ ಗೀಳು ಪ್ರಬುದ್ಧನ್ನಾಗಿ ಮಾಡಿತು. ಗ್ರಂಥಾಲಯ ಅದೊಂದು ವಿದ್ಯೆಯನ್ನು ನೀಡುವ ಶಾರದೆಯ ಸ್ಥಾನ ಎನ್ನುವ ಅರಿವು ಅವನಿಗಾಯಿತು. ಗ್ರಂಥಾಲಯದಲ್ಲಿದ್ದ ವ್ಯಕ್ತಿತ್ವ ವಿಕಸನದ ಪುಸ್ತಕವು ವಿಧುವಿನ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾದವು. ಹೀಗೆ ವ್ಯಕ್ತಿತ್ವ ವಿಕಾಸದ ಕಡೆಗೆ ಹೆಜ್ಜೆ ಇಟ್ಟ ಅವನಿಗೆ ಒಂದು ವರ್ಷಗಳ ಕಾಲ ಜ್ಞಾನ ಸಂಪಾದನೆಯಲ್ಲಿ ಕಳೆದುಹೋಗಿದ್ದು ಗೊತ್ತಾಗಲಿಲ್ಲ. ಆತನಿಗೆ ಗ್ರಂಥಾಲಯವೇ ಮನೆಯಾಗಿ ಹೋಯಿತು. ಒಂದು ವರ್ಷಗಳ ಕಾಲ ಸತತ ಅಭ್ಯಾಸ ಅವನಿಗೆ ಪುಸ್ತಕ ಓದುವ ಗೀಳನ್ನು ಇನ್ನೂ ಹೆಚ್ಚು ಮಾಡಿತು. ಜ್ಞಾನ ಹೆಚ್ಚಿದಂತೆ ಅವನು ಪ್ರಬುದ್ಧನಾಗುತ್ತ ಹೋದ. ಮನೆಯ ಹತ್ತಿರವೇ ಇದ್ದ ಸರ್ಕಾರಿ ಡಿಪ್ಲೋಮೋ ಕಾಲೇಜಿನಲ್ಲಿ ಸೀಟು ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಿದ್ದನ್ನು ಪತ್ರಿಕೆಯಲ್ಲಿ ನೋಡಿ, ನೋಡೋಣ ಒಂದು ಅರ್ಜಿಯನ್ನು ಹಾಕಿದರೆ ಆಯಿತು ಎಂದು ಅರ್ಜಿಯನ್ನು ಡಿಪ್ಲೋಮಾ ಕೋರ್ಸ್ಗೆ ಹಾಕಿ ಬಂದ. ಅದು 10ನೇ ತರಗತಿಯ ಅಂಕಗಳಿಗೆ ಅನುಗುಣವಾಗಿ ( ಗಣಿತ ಹಾಗೂ ವಿಜ್ಞಾನ )ದ ಒಟ್ಟು ಅಂಕಗಳ ಆಧಾರದ ಮೇಲೆ ಕೊಡಮಾಡುವ ಸೀಟ್. ಅವನದು ಹೇಳಿಕೊಳ್ಳುವಂತಹ ಅಂಕಗಳು ಹತ್ತನೇ ತರಗತಿಯಲ್ಲಿ ಇಲ್ಲದಿದ್ದ ಕಾರಣ ಡಿಪ್ಲೋಮೋ ಸೀಟು ಸಿಗುವ ಯಾವ ನಿರೀಕ್ಷೆಯೂ ಇರಲಿಲ್ಲ. ನೋಡೋಣ ಕೊನೆಯಬಾರಿ ಡಿಪ್ಲೋಮೋ ಸೀಟು ಸಿಕ್ಕರೆ ಹೋಗೋಣ ಇಲ್ಲದಿದ್ದರೆ ಮನೆ ಬಿಟ್ಟು ಹೋಗಿ ಬದುಕನ್ನು ಕಟ್ಟೋಣ. ಹಂಗಿನ ಅರಮನೆಗಿಂತ ಬಂಗದ ಕೂಳು ಲೇಸು ಎನ್ನುವ ನಾಣ್ಣುಡಿಯಂತೆ ಬದುಕುವ ದೃಢ ನಿಶ್ಚಯ ಮಾಡಿ ಮುನ್ನಡೆದ. ಅವನ ಅದೃಷ್ಟವೇನು ಎನ್ನುವಂತೆ ತಾಂತ್ರಿಕ ವಿದ್ಯಾಲಯದಲ್ಲಿ ಅಂತಿಮ ಸುತ್ತಿನಲ್ಲಿ ಎರಡು ಸೀಟುಗಳು ಉಳಿದವು. ಒಂದು ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತೊಂದು ಆಟೋಮೊಬೈಲ್ ಕ್ಷೇತ್ರದ ವಿಭಾಗ. ಮೂರು ಮಂದಿ ಅಂತಿಮ ಸುತ್ತಿನಲ್ಲಿ ಉಳಿದರು. ಅದರಲ್ಲಿ 15ನೇ ವಯಸ್ಸಿನ ಇಬ್ಬರು ಹಾಗೂ 16ನೇ ವಯಸ್ಸಿನ ಒಬ್ಬರು ಉಳಿದರು. ಮೊದಲನೆಯದಾಗಿ 15ನೇ ವಯಸ್ಸಿನವರನ್ನು ಕರೆದರು ಅದರಲ್ಲಿ ಹೆಚ್ಚಿಗೆ ಅಂಕವನ್ನು ಯಾರು ತೆಗೆದಿದ್ದರೋ ಅವರಿಗೆ ಕಂಪ್ಯೂಟರ್ ಸೈನ್ಸ್ ವಿಭಾಗವನ್ನು ಕೊಡಲಾಯಿತು. ಮತ್ತೊಬ್ಬನಿಗೆ ಉಳಿದಿದ್ದು ಒಂದು ಸೀಟು. ಅದು ಆಟೋಮೊಬೈಲ್ ಕ್ಷೇತ್ರ. ಆಟೋಮೊಬೈಲ್ ವಿಭಾಗ ಸೇರಬೇಕೆಂದರೆ 16ವಯಸ್ಸು ತುಂಬಿರಬೇಕು ಎಂಬ ಸರ್ಕಾರಿ ನಿಯಮ ಇದ್ದುದರಿಂದ ಆ ಹುಡುಗನಿಗೆ ಆಟೋಮೊಬೈಲ್ಸ್ ಸೀಟ್ ಸಿಗದಂತಾಯಿತು. ಉಳಿದಿದ್ದು ವಿಧು ಮಾತ್ರ. 16ನೇ ವಯಸ್ಸು ತುಂಬಿದ ಕಾರಣ ಅವನಿಗೆ ಆಟೋಮೊಬೈಲ್ ವಿಭಾಗದಲ್ಲಿ ಕೊನೆಯವನಾಗಿ ಸೇರಿಸಿಕೊಳ್ಳಲಾಯಿತು. ಅವನ ಅದೃಷ್ಟ ಎನ್ನುವಂತೆ 50 ಮಂದಿಯನ್ನು ಮಾತ್ರ ತೆಗೆದುಕೊಳ್ಳುವ ವಿಭಾಗದಲ್ಲಿ 50ನೇ ಯಾವನು ಆಗಿ ಆಯ್ಕೆ ಪತ್ರವನ್ನು ನೀಡಲಾಯಿತು. ಸಿಕ್ಕ ಆಯ್ಕೆ ಪತ್ರವನ್ನು ಅಲ್ಲಿನ ಸೂಪರಿಂಟೆಂಡೆಂಟ್ ಅವರಿಂದ ಅನುಮೋದನೆ ಪಡೆಯಬೇಕು. ಅನುಮೋದನೆ ಪಡೆಯಲು ಹೋದಾಗ ಅವರು ವ್ಯಂಗ್ಯವಾಗಿ ಸೀಟು ಪಡೆಯುವುದು ಮುಖ್ಯವಲ್ಲ ಮೊದಲು ಇಲ್ಲಿಂದ ಉತ್ತೀರ್ಣನಾಗಿ ಹೋಗಬೇಕು, ಎಂದು ಅಲ್ಲಿ ಆಯ್ಕೆಯಾಗಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕೇವಲವಾಗಿ ಹೇಳುತ್ತಿದ್ದರು.  ಅಂದೇ ವಿಧು ಮನಸ್ಸಿನಲ್ಲಿ ನಿರ್ಧರಿಸಿದ. ಈ ಕಾಲೇಜಿನಲ್ಲಿ ಕೊನೆಯ ಹಂತದಲ್ಲಿ ಆಯ್ಕೆಯಾದ ಹುಡುಗರು ಎಂದು ಅಪಹಾಸ್ಯ ಮಾಡುತ್ತಿದ್ದ ವ್ಯಕ್ತಿಯ ಮುಂದೆ ತುಂಬಾ ಚೆನ್ನಾಗಿ ಓದಿ ಉನ್ನತ ಅಂಕವನ್ನು ಪಡೆಯಬೇಕು. ನಾನೇ ಈ ವ್ಯಕ್ತಿಗೆ ಉತ್ತರವಾಗಿ ನಿಲ್ಲಬೇಕು ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಮುನ್ನಡೆದ. ಅಲ್ಲಿಗೆ ಸರಿಯಾಗಿ ಒಂದು ವಾರದ ನಂತರ ಕಾಲೇಜು ಪ್ರಾರಂಭವಾಯಿತು. ಬದುಕಿನ ಹೊಸ ಆಸೆ ಕನಸು ನಿರೀಕ್ಷೆಗಳೊಂದಿಗೆ ಕಾಲೇಜಿಗೆ ಮೊದಲ ದಿನ ಭೇಟಿಕೊಟ್ಟ ಬದುಕು ಇನ್ನಾದರೂ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ.....

Sunday, September 20, 2020

ಪ್ರೇಮದ ಅನ್ವೇಷಣೆ ಭಾಗ-12


ಈ ಜಗತ್ತಿನಲ್ಲಿ ಪ್ರೀತಿ ಪ್ರೇಮ ಅಂತ ಏನು ಇಲ್ಲ ಯಾರೇ ಕೆಟ್ಟವರು ಆದರೂ ತಾಯಿ ಕೆಟ್ಟವಳು ಆಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಆದರೆ ವಿಧುವಿನ ತಾಯಿ ಈಗಾಗಲೇ ವಿಧುವಿನ ಹತ್ತಿರ ಮಾತುಬಿಟ್ಟು ಹಲವು ವರ್ಷಗಳೇ ಕಳೆದು ಹೋಗಿವೆ .ತಾಯಿ ಪ್ರೀತಿ ಎನ್ನುತ್ತಾರೆ ಆದರೆ ಅವನಿಗೆ ತಿಳುವಳಿಕೆ ಬುದ್ಧಿ ಬಂದಾಗಿನಿಂದಲೂ ತಾಯಿ ಪ್ರೀತಿ ಕಂಡಿಲ್ಲ ತಂದೆಯದು ಕೇಳುವುದೇ ಬೇಡ ಪ್ರತಿ ಬಾರಿ ತೀರಾ ಅವಶ್ಯಕವೆಂದು ಹಣ ಕೇಳುವಾಗ ದೊಡ್ಡ ಜಗಳವೇ ನಡೆದುಹೋಗುತ್ತಿತ್ತು. ಇನ್ನೂ ಹದಿಹರೆಯದ  ಪ್ರೀತಿ ತನ್ನ ಕಾಮದ ಬಾಹ್ಯ ಸೌಂದರ್ಯದ ಆಕರ್ಷಿತವಾಗುವ ವಿಚಾರವೇ ಪ್ರೀತಿ ಎಂದುಕೊಳ್ಳುವಂತೆ ಬದುಕು ತೋರಿಸಿ ಕೊಟ್ಟಿತ್ತು. ಅದೇನೆಂದರೆ ಅವನ ಜೀವನದಲ್ಲಿ ನಡೆದ ಒಂದು ಘಟನೆ, ಸಹಪಾಠಿಯಾದ ಹುಡುಗಿ ಕಾಲೇಜಿನಲ್ಲಿ ಹಾಗೂ ಸ್ಕೂಲ್ನಲ್ಲಿಯು ಹಲವಾರು ವಿಚಾರಗಳಲ್ಲಿ ಅವನಿಗೆ ಸಹಾಯ ಮಾಡುತ್ತಿದ್ದ ಸಹಪಾಠಿಯಾದ ಅಕ್ಷತಾ ಗೌಡ ಒಬ್ಬ ಶ್ರೀಮಂತ ಮನೆಯ ಹುಡುಗನನ್ನು ಪ್ರೀತಿಸಿದಳು. ಅಕ್ಷತ ಗೌಡ ಅವರ ಮನೆಯ ಶ್ರೀಮಂತಿಕೆಗೆ ಏನು ಕಡಿಮೆ ಇರಲಿಲ್ಲ ತಂದೆ-ತಾಯಿ ಇಬ್ಬರು ಸರ್ಕಾರಿ ನೌಕರಿಯಲ್ಲಿ ಉನ್ನತ ಸ್ಥಾನದಲ್ಲಿ ಇದ್ದವರು ಇಬ್ಬರಿಗೂ ಒಬ್ಬಳೇ ಮುದ್ದಿನ ಮಗಳು ಅಕ್ಷತಾ ಗೌಡ.
            ಸ್ನೇಹಿತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುತ್ತಿದ್ದ ಹುಡುಗಿ ಯಾವುದನ್ನು ವಿಚಾರ ಮಾಡಿ ಒಪ್ಪಿಕೊಳ್ಳುತ್ತಿದ್ದ ಹುಡುಗಿ ಅದ್ಯಾವ ಸಮಯದಲ್ಲಿ ಪ್ರೀತಿಯ ಬಲೆಯಲ್ಲಿ ಬಿದ್ದಳು ಎನ್ನುವುದನ್ನು ತಿಳಿಯುವುದರ ಒಳಗಾಗಿ ಆತ್ಮಹತ್ಯೆಗೆ ಶರಣಾದಳು.  ಅವರಿಬ್ಬರ ನಡುವೆ ಏನು ನಡೆದಿತ್ತು ಗೊತ್ತಿಲ್ಲ.  ಅವಳನ್ನು ಪ್ರೀತಿಸಿದ ಹುಡುಗ ಹೇಮಂತ್ ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡ ಮಾರನೇ ದಿನವೇ ಬೇರೆ ಹುಡುಗಿಯೊಂದಿಗೆ ಚೆಲ್ಲಾಟ ವನ್ನು ಆಡಿಕೊಂಡು ತುಂಬಾ ಬೆಲೆಬಾಳುವ ಬೈಕಿನಲ್ಲಿ ಹೋಗುತ್ತಿರುವುದನ್ನು ನೋಡಿ ವಿಧು ದಿಗ್ಭ್ರಮೆಗೆ ಒಳಗಾದ.  ಅವರ ವಿಚಾರವಾಗಿ ಕಾಲೇಜಿನ ಇನ್ನಿತರೆ ಸಹಪಾಠಿಗಳನ್ನು ಕೇಳಿದಾಗ ಅವರು ಉತ್ತರವನ್ನು ಕೇಳಿ ಆಶ್ಚರ್ಯಚಕಿತನಾಗಿ ನಿಂತ. ಸಹಪಾಠಿಗಳು, ಅವನಿಗೆ ಅಕ್ಷತ ಗೌಡ ಅಂತವರು ಹಲವಾರು ಜನರೇಂದು ತಿಳಿದು ಬೇಸರವಾಯಿತು. ಈ ಹುಡುಗಿ ತನ್ನ ಪ್ರೀತಿಗಾಗಿ ಪ್ರಾಣವನ್ನೇ ಬಿಟ್ಟಿದ್ದು ಇವನ್ನು ನೋಡಿದರೆ ಈ ರೀತಿ ಮಾಡಿ ಬಿಟ್ಟನಲ್ಲ.
             ಓ ಈ ಜಗತ್ತಿನಲ್ಲಿ ಪ್ರೀತಿ ಎಂಬುದು ಬರಿ ಆಕರ್ಷಣೀಯ ವಿಷಯವಷ್ಟೇ ಎಂಬ ತೀರ್ಮಾನಕ್ಕೆ ಬಂದಿದ್ದ .ಆದರೆ ಇಲ್ಲಿ ಎಲ್ಲಾ ಉಲ್ಟಾ ಹುಡುಗರು ಅಣ್ಣನು ಪ್ರೀತಿಗೆ ಸಪೋರ್ಟ್ ಮಾಡಿದ ಎಂದು ಬಂದು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುತ್ತಾರೆ .ಇದು ಒಂದು ರೀತಿಯ ಸೋಜಿಗವೆನಿಸಿತು ಅಂತು-ಇಂತು ಚುನಾವಣೆಯನ್ನು ಮುಗಿಸಿದ ವಿಧು ಚುನಾವಣೆ ಮುಗಿದ ಮೇಲೆ ಮತ್ತೆ ರಾಜಕಾರಣಿಗಳು ತಕ್ಷಣಕ್ಕೆ ತಮ್ಮನ್ನು ತಿರುಗಿ ನೋಡಲ್ಲ ಎಂಬ ಅರಿವು ಅನುಭವದ ಮೂಲಕ ಬಂದಿತ್ತು .ಇಷ್ಟು ದಿನ ಹೇಗೋ ಮನೆಯಲ್ಲಿ ಇರುವುದು ತಪ್ಪಿಸಿಕೊಳ್ಳುತ್ತಿದ್ದ ಈಗ ಹೇಗೆ ತಪ್ಪಿಸಿಕೊಳ್ಳುವುದು ಎಂದು ಚಿಂತಿಸುತ್ತಿರಬೇಕಾದರೆ ಅವನ ಅದೃಷ್ಟವನ್ನುವಂತೆ, ಅವನ ಮನೆಯ ಅನತಿ ದೂರದಲ್ಲಿ ಒಂದು ಗ್ರಂಥಾಲಯದ ಉದ್ಘಾಟನೆ ಸುದ್ದಿ ಬಂದಿತು. ಪತ್ರಿಕೆ ಓದುವ ಗೀಳನ್ನು ಹಿಡಿಸಿಕೊಂಡಿದ್ದ ಅವನು ಗ್ರಂಥಾಲಯಕ್ಕೆ ಹೋಗಲು ಶುರು ಮಾಡಿದ. ದಿನ ಗ್ರಂಥಾಲಯಕ್ಕೆ ಹೋಗುತ್ತಿದ್ದ ಪತ್ರಿಕೆಯನ್ನು ಕೆಲವು ಗಂಟೆಗಳವರೆಗೆ ಓದುವುದು ಅವನ ಅಭ್ಯಾಸವಾಗಿತ್ತು .ಆನಂತರ ಏನು ಮಾಡುವುದು ಮನೆಗೆ ಹೋದರೆ ಬೈಯ್ಯುತ್ತಾರೆ. ಮನೆಯಲ್ಲಿ ನರಕಯಾತನೆ ಅನುಭವಿಸುವುದಕ್ಕಿಂತ ಗ್ರಂಥಾಲಯದಲ್ಲಿ ಸಮಯ ಕಳೆಯುವುದು ಲೇಸು ಎಂದುಕೊಂಡು ತಿಂಗಳಿಗೊಮ್ಮೆ ವಾರಕ್ಕೊಮ್ಮೆ ಬರುವ ಲೇಖನಗಳನ್ನು ಪುಸ್ತಕಗಳನ್ನು ಓದಲು ಶುರು ಮಾಡಿದ. ಕ್ರಮೇಣ ದೊಡ್ಡ ದೊಡ್ಡ ಪುಸ್ತಕಗಳನ್ನು ಕೇವಲ ಎರಡು-ಮೂರು ದಿನಗಳಲ್ಲಿ ಮುಗಿಸುವಷ್ಟು ಕಾದಂಬರಿಗಳನ್ನು ಮೂರರಿಂದ ಐದು ದಿನಗಳಲ್ಲಿ ಮುಗಿಸುವ ಸಂಕಲ್ಪದೊಂದಿಗೆ ತೆಗೆದುಕೊಂಡು ಅವುಗಳನ್ನು ಮುಗಿಸುತ್ತಿದ್ದ . ಓದಿನ ಹುಚ್ಚು ವಿಪರೀತವಾಯಿತು. ಅದು ಅವನನ್ನು ಜ್ಞಾನದ ಕಾಶಿ ಯನ್ನಾಗಿ ಮಾಡಿತು. ಒಂದು ದೇಶ ಸುತ್ತಬೇಕು ಇಲ್ಲ ಕೋಶ ಓದಬೇಕು ಎಂಬ ನಾಣ್ಣುಡಿಯನ್ನು ಕೇಳಿದ್ದ ವಿಧುವಿಗೆ.....

Thursday, September 17, 2020

ಪ್ರೇಮದ ಅನ್ವೇಷಣೆ ಭಾಗ - 11


12ನೇ ತರಗತಿ ಓದುತ್ತಿದ್ದ ಸಮಯದಲ್ಲಿ ವಿಧುವಿಗೆ ಒಳ್ಳೆಯ ಉಪಾಧ್ಯಾಯರು ಸಿಕ್ಕರು. 12ನೇ ತರಗತಿಯ ವಿಜ್ಞಾನದ ವಿಷಯ ಹಾರಿಸಿದ್ದರಿಂದ ಗಣಿತವೆಂಬ ಕಬ್ಬಿಣದಕಡಲೆ ಜಿಗಿಯುವುದು ಸ್ವಲ್ಪ ಕಷ್ಟವೆನಿಸಿತು. ಕಾಲೇಜಿನಲ್ಲಿ ಉತ್ತಮ ಶಿಕ್ಷಕ ವೃಂದ ಮನೆಯಲ್ಲಿ ತದ್ವಿರುದ್ಧ ವಾತಾವರಣ ತೊಳಲಾಟದಲ್ಲಿ ವಿಜ್ಞಾನ ವಿಷಯದಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣನಾದ ಕಬ್ಬಿಣದ ಕಡಲೆಯಂತ್ತಿದ್ದ ಗಣಿತವನ್ನು ಶಿಕ್ಷಕರ ಪ್ರೋತ್ಸಾಹದಿಂದ ಪಾಸ್ ಮಾಡಿದ. ಇಷ್ಟು ಸಾಕಾಗಿತ್ತು ಮನೆಯಲ್ಲಿ ವಿಧವನ್ನು ಇನ್ನು ತುಚ್ಚವಾಗಿ ಕಾಣಲು. ತಾಯಿ ಎನಿಸಿಕೊಂಡವರು ಕಠಿಣವಾಗಿ ವರ್ತಿಸುತ್ತಿರಲು ದೇವರೇ ದಿಕ್ಕು ಎನ್ನುವಂತಾಯಿತು. ಆತನ ಪರಿಸ್ಥಿತಿ. ಆತನ ಕೆಲವು ಸ್ನೇಹಿತರು ಅನುತ್ತೀರ್ಣರಾಗಿದ್ದರು. ಅವರ ತಂದೆಯವರು ತಮ್ಮ ಮಕ್ಕಳಿಗೆ ಉಳಿದಿದ್ದ ಒಂದು ಅವಕಾಶ ಹತ್ತನೇ ತರಗತಿಯ ಆಧಾರದ ಮೇಲೆ ತಾಂತ್ರಿಕ ಕೋರ್ಸ್ ಗೆ ಸೇರಿಸುವುದು ಆಗಿತ್ತು.  ಸ್ನೇಹಿತರ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಖಾಸಗಿ ಕಾಲೇಜಿಗೆ ಹೆಚ್ಚಿನ ಪ್ರಮಾಣದ ಶುಲ್ಕವನ್ನು ತುಂಬಿ ಸೇರಿಸಿದರು. ಆದರೆ ವಿಧುವಿಗೆ ಆ ಅವಕಾಶ ಇರಲಿಲ್ಲ. ವಿಧು ಮನೆಯಲ್ಲಿಯೇ ಉಳಿಯಬೇಕಾಯಿತು. ಮನೆಯಲ್ಲಿ ಅನುತ್ತೀರ್ಣನಾದ ತಪ್ಪನ್ನು ತಿದ್ದಿ ಬುದ್ಧಿ ಹೇಳಿ ಮಾರ್ಗದರ್ಶನ ಮಾಡುವುದು ಬಿಟ್ಟು ಇನ್ನು ಮನೆಯಲ್ಲಿ ಮೂದಲಿಕೆಯ ತುಚ್ಛವಾದ ಮಾತನ್ನು ಹೆಚ್ಚು ಮಾಡಿದರು. ಇದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಮನೆ ಬಿಟ್ಟು ಹೊರಡುವ ಯೋಚನೆ ಜನ್ಮತಾಳಿತು.
            ಮನೆಯಲ್ಲಿನ ಬೈಗುಳ ಮನಸ್ಸನ್ನು ಘಾಸಿ ಮಾಡುತ್ತಲೇ ಹೋಯಿತು. ಮನೆಯವರ ಬೈಗುಳ ತಪ್ಪಿಸಿಕೊಳ್ಳುವ ಸಲುವಾಗಿ ಹೊರಗಡೆ ಸುತ್ತಲೂ ಶುರುಮಾಡಿದ ಮನೆಯ ವಾತಾವರಣಕ್ಕಿಂತ ಹೊರಗಡೆ ಸಮಾಜದಲ್ಲಿ ನೆಮ್ಮದಿ ಸಿಗುವಂತಾಯಿತು. ಮನೆಯಲ್ಲಿ ಎಲ್ಲರೂ ಇದ್ದರೂ ಇಲ್ಲದಂತಿದ್ದ .ಅನಾಥಪ್ರಜ್ಞೆ ಸಾಮಾಜಿಕ ಜೀವನಕ್ಕೆ ಕಾಲಿಟ್ಟ ಮೇಲೆ ಕಡಿಮೆಯಾಗತೊಡಗಿತ್ತು. ತನ್ನ ಬದುಕನ್ನು ಮುಗಿಸಲು ಯೋಚಿಸಿದ್ದ ವಿಧುವಿಗೆ ಹೇಡಿಯಂತೆ ಸಾಯಬಾರದು. ಬದುಕನ್ನು ಸವಾಲಾಗಿ ಸ್ವೀಕರಿಸಬೇಕು ಎದುರಿಸಬೇಕು ಎಂಬ ಪಾಠವನ್ನು ಸಮಾಜವು ಕಲಿಸಿತು. ಸಮಾಜದಿಂದ ಕಲಿತ ಪಾಠ ಇನ್ನೂ ಅನೇಕ ಸಮಾಜ ಬದುಕಿಗೆ ಬೇಕಾದ ಪಾಠ ಕಲಿಸುತ್ತದೆ ಎಂಬ ಮಾತನ್ನು ಕೇಳಿದ್ದ ಆದರೆ ಅದರ ಅನುಭವ ಬರುವಂತಾಯಿತು. ಸಮಾಜದಲ್ಲಿ ಒಳ್ಳೆಯವರು ಹಾಗೂ ಕೆಟ್ಟವರ ಸಹವಾಸ ಒಳ್ಳೆಯದನ್ನು ಕೆಟ್ಟದ್ದನ್ನು ಗುರುತಿಸುವ ಕಲೆಯನ್ನು ಕಲಿಸಿತು. ಮನೆಯಲ್ಲಿನ ಮೂದಲಿಕೆಯನ್ನು ತಪ್ಪಿಸಿಕೊಳ್ಳಲು ಎಷ್ಟು ಸಾಧ್ಯವೋ ಅಷ್ಟು ಮನೆಯಿಂದ ಹೊರಬರಲು ಪ್ರಯತ್ನಿಸುತ್ತಿದ. ಈ ನಡುವೆ ಹಲವಾರು ರೀತಿಯ ಜನರ ಪರಿಚಯವಾದರು. ಚಿಕ್ಕನಿಂದಲೂ ಅದೇ ಊರಿನಲ್ಲಿ ಹುಟ್ಟಿ ಬೆಳೆದಿದ್ದರಿಂದ ಮುಖ ಪರಿಚಯವಿದ್ದ ಜನರು ಮಾತನಾಡಲು ಶುರು ಮಾಡಿದರು. ಅದೇ ಸಮಯದಲ್ಲಿ ಅಲ್ಲಿನ ವಾರ್ಡ್ ಚುನಾವಣೆ ಸನಿಹವಾಯಿತು.
                               ವಿಧುವಿಗೆ ಮೊದಲಿನಿಂದಲೂ ದಿನಪತ್ರಿಕೆ ಓದುವ ಹುಚ್ಚು ಇದ್ದಿದ್ದರಿಂದ ರಾಜಕೀಯ ವಿಷಯದ ಮೇಲೆ ಸ್ವಲ್ಪ ಓಲವು ಹೆಚ್ಚಾಗಿಯೇ  ಇತ್ತು. ಹಾಗಾಗಿ ರಾಜಕೀಯ ವಿಚಾರಗಳನ್ನು ಕೆಲವು ಜನರೊಟ್ಟಿಗೆ ಚರ್ಚೆ ಮಾಡುತ್ತಿದ್ದನ್ನು ಕಂಡು ಚುನಾವಣೆ ಪ್ರಚಾರ ಕಾರ್ಯ ಮಾಡಲು ಕರೆಯುತ್ತಿದ್ದರು. ಮನೆಯಲ್ಲಿನ ಚುಚ್ಚುಮಾತು ಮೂದಲಿಕೆಯ ಮಾತು ಕೇಳಿ ಕೇಳಿ ಸಾಕಾಗಿ ತಪ್ಪಿಸಿಕೊಳ್ಳಬೇಕೆಂದು ಅವರೊಟ್ಟಿಗೆ ಪ್ರಚಾರಕಾರ್ಯಕ್ಕೆ ಹೋಗುತ್ತಿದ್ದ. ಅಲ್ಲಿ ಎಲ್ಲಾ ಪಕ್ಷಗಳ ಪ್ರಚಾರವನ್ನು ಮಾಡುತ್ತಿದ್ದ ಎಲ್ಲಾ ಪಕ್ಷಗಳ ಅಂತರಾಳ ಹಾಗೂ ಅಂತರಂಗದ ಅರಿವು ಆಗುತ್ತಾ ಹೋಯಿತು. ಪ್ರಚಾರ ಮಾಡುವಾಗ ಕೆಲವು ಹುಡುಗರು ಅಣ್ಣ ನನ್ನ ಪ್ರೀತಿಗೆ ಸಪೋರ್ಟ್ ಮಾಡಿದ್ದಾರೆ ಎಂದು ಬರುತ್ತಿದ್ದರು. ವಿಧುವಿಗೆ ಅದು ವಿಚಿತ್ರವೆನಿಸಿತ್ತು. ಮನಸ್ಸಿನಲ್ಲಿ ಗೊಂದಲ ಇವರೆಲ್ಲ ಏಕೆ ಪ್ರೀತಿಗೆ ಅಣ್ಣ ಸಪೋರ್ಟ್ ಮಾಡುತ್ತಾನೆ ಅಂತ ಬರುತ್ತಾರೆ ಈ ಜಗತ್ತಿನಲ್ಲಿ ಪ್ರೀತಿ ಪ್ರೇಮ.....

Sunday, September 13, 2020

ಪ್ರೇಮದ ಅನ್ವೇಷಣೆ ಭಾಗ-10


ಇನ್ನು ಈ ಮನುಷ್ಯ ಹಲವಾರು ಜನರ ಮುಂದೆ ಕೇವಲವಾಗಿ ಕಾಣುವಂತೆ ಮಾಡುತ್ತಾನೆ .ಈ ಮನುಷ್ಯನ ಎದುರು ನಿಲ್ಲದೆ ಹೊರತು ಬೇರೆ ದಾರಿಯಿಲ್ಲವೆಂದು ತಿಳಿದು ಮೊದಲ ಬಾರಿ ತನ್ನ ತಂದೆಯ ವಿರುದ್ಧ ಮಾತನಾಡಲು ಶುರುಮಾಡಿದ. ಇದು ಅವನ ತಾಯಿಗೆ ಅಪಮಾನ್ಯ ವಾಯಿತು. ಅವನ ತಾಳ್ಮೆಯ ಕಟ್ಟೆ ಒಡೆದು ತಂದೆ ಎಂಬ ಮುಲಾಜನ್ನು ನೋಡದೆ ತನ್ನ ತಂದೆ ಬಳಸುತ್ತಿದ್ದ ಅವಾಚ್ಯ ಶಬ್ದಗಳನ್ನು ತಿರುಗಿಸಿ ಅವರ ವಿರುದ್ಧ ಬಳಸಲು ಆರಂಭಿಸಿದ. ಆಗ ಅವನ ತಾಯಿಯು ತನ್ನ ಗಂಡನ ಪರವಾಗಿ ನಿಂತದ್ದು ನೋಡಿ ಮತ್ತೆ ಅವನಿಗೆ ಕಾಡಿದ ಪ್ರಶ್ನೆ ನಿಜವಾಗಿಯೂ ಈಕೆ ನನ್ನ ತಾಯಿಯೇ ! ತಂದೆಯ ದೌರ್ಜನ್ಯ ಪ್ರಶ್ನೆ ಮಾಡಿದ್ದೆ ಮುಳುವಾಯಿತು. ಆನಂತರದ ದಿನಗಳಲ್ಲಿ ತಾಯಿ ಎನಿಸಿಕೊಂಡವರಿಂದ ಚುಚ್ಚು ಮಾತುಗಳು ಪ್ರಾರಂಭವಾದವು. ಮನೆಯಲ್ಲಿನ ಸಂಘರ್ಷ ಹೆಚ್ಚಾಯಿತು. ಚುಚ್ಚು ಮಾತುಗಳನ್ನು ಕೇಳುವುದು ಇವನಿಗೆ ಅಭ್ಯಾಸವಾಯಿತು. ತಾಯಿಯೆಂದರೆ ಮಮತೆಯ, ಪ್ರೀತಿಯ ರೂಪ, ತ್ಯಾಗಮಹಿ ಎಂದು ಬಣ್ಣಿಸುವ ಈ ಜಗತ್ತು ನೋಡಿ ವಿಚಿತ್ರವೆನ್ನಿಸಿತು. ತಾಯೆಂದರೆ ಬರಿ ಒಳ್ಳೆಯವರಿರುತ್ತರ ? ಕೆಟ್ಟವರು ಇರುವುದಿಲ್ಲವಾ ? ಇಲ್ಲಿ ನನ್ನದೇನು ತಪ್ಪು ತಂದೆ ಎನಿಸಿಕೊಂಡವನ ದೌರ್ಜನ್ಯವನ್ನು ಪ್ರಶ್ನೆ  ಮಾಡಿದ್ದೆ ತಪ್ಪು ಎಂದು ಅನಿಸಿದ್ದು ಉಂಟು. ವಿಧು ಏನನ್ನು ಕೇಳಿದರೂ ಸಿಗದ ವಸ್ತುಗಳು ತೇಜಸ್ ಕೇಳಿದ ಕೂಡಲೇ ಸಿಗುತ್ತಿದ್ದವು ಏಕೆಂದರೆ ಅವನು ಅವರಿಗೆ ಅದೃಷ್ಟದ ಮಗನಾಗಿದ್ದನು. ಹೀಗಾಗಿ ಯಾವುದೇ ವಸ್ತುವಿನ ಮೇಲೆ ವಿಧುವಿಗೆ ವ್ಯಾಮೋಹ ಉಂಟಾಗದಂತೆ ಆಯಿತು. ಯಾವುದು ಅವನಿಗೆ ಸಿಗದೆ ಹೋದದ್ದು ಅವನು ವಸ್ತುಗಳ ಮೇಲಿನ ಆಸೆಯನ್ನು ಬಿಡಲು ನೆರವಾಯಿತು. ಆದರೆ ಮನೆಗೆ ಬಂದು ಹೋಗುವವರ ಮುಂದೆ ಅವಮಾನ ಅಪಮಾನ ಕಡಿಮೆಯಾಗಲಿಲ್ಲ .ಅವನಿಗೆ ಅವನ ಸ್ವಾಭಿಮಾನ ಬಡಿದು ಬಡಿದು ಹೇಳುತ್ತಿತ್ತು.
            ಒಂದು ತುತ್ತು ಅನ್ನಕ್ಕಾಗಿ ಇವರಿಂದ ಇನ್ನೂ ಎಷ್ಟು ಎಂದು ದೌರ್ಜನ್ಯವನ್ನು ಸಹಿಸುವುದು. ಹಲವಾರು ಬಾರಿ ಮನೆಬಿಟ್ಟು ಹೊರಡಲು ಯೋಚಿಸಿದ್ದರು ಎಲ್ಲಿಗೆ ಹೋಗುವುದು ಎಂಬ ಪ್ರಶ್ನೆಯೊಂದಿಗೆ ಸುಮ್ಮನಾಗುತ್ತಿದ್ದ. ಬದುಕು ಒಂದು ಹೋರಾಟ ಅದು ಮನೆಯಲ್ಲೇ ಇರಬಹುದು ಅಥವಾ ಸಮಾಜದಲ್ಲಿ ಇರಬಹುದು ಹೋರಾಟ ಮಾಡಬೇಕಾದದ್ದು ಅನಿವಾರ್ಯ ಅದಕ್ಕೆ ನಾನು ಸಿದ್ಧವಾಗಬೇಕು ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು. ಆತ್ಮಹತ್ಯೆಯ ಯೋಚನೆ ಅವನ ತಲೆಯಲ್ಲಿ ಹೊಳೆದರು. ಆತ್ಮಹತ್ಯೆಯ ಹಾದಿ ತುಳಿಯುವವರು ಹೇಡಿಗಳು ಎಂದು ಓದಿದ್ದ ವಿಧು ನಾನು ಹೇಡಿಯಲ್ಲ ಹೋರಾಡುತ್ತೇನೆ. ಆ ವಿಧಿ ತನ್ನ ಸಾವನ್ನು ಪಡೆಯುವವರೆಗೂ ಹೋರಾಡುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಂಡು ತನ್ನ ಬದುಕಿನ ಹೋರಾಟವನ್ನು ಮುಂದುವರೆಸಿದ್ದ. ನನ್ನನ್ನು ಇವರು ಇಷ್ಟು ಕೇವಲವಾಗಿ ಕಾಣುತ್ತಿರುವುದು ಇವರ ಹಂಗಿನಲ್ಲಿ ಇರುವುದರಿಂದಲೇ ಎಂದು ನಿರ್ಧರಿಸಿ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲು ಮುಂದಾದ, ಬಟ್ಟೆಗಳನ್ನು ತೊಳೆದುಕೊಳ್ಳುತ್ತಿದ್ದ ಜೊತೆಗೆ ತಾನೇ ಅಡಿಗೆಯನ್ನು ಮಾಡಿಕೊಳ್ಳಲು ಶುರು ಮಾಡಿದ. ಅವರ ತಾಯಿಯ ಮೇಲಿನ ಅವಲಂಬನೆಯಿಂದ ಸಂಪೂರ್ಣವಾಗಿ ಹೊರಬಂದ. ತನ್ನ ಕಾಲೇಜಿನಲ್ಲಿ 11ನೇ ತರಗತಿ ಉತ್ತೀರ್ಣನಾದ ವಿಧು, 12ನೇ ತರಗತಿ ಪ್ರವೇಶ ಪಡೆಯುವ ಹೊತ್ತಿಗೆ ಅವನ ಮನಸ್ಸಿನಲ್ಲಿ ತೊಳಲಾಟ ಹದಿಹರಿಯದ ಹೊಯ್ದಾಟ ತನ್ನ ನೋವು ನಲಿವನ್ನು ಯಾರಲ್ಲಿ ಹೇಳಿಕೊಳ್ಳಲಿ ಎಂಬ ಜಿಜ್ಞಾಸೆ. ನೋವನ್ನು ಯಾರಿಗಾದರೂ ಹೇಳಿಕೊಂಡರು ಯಾರು ಕೂಡ ಅದಕ್ಕೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂಬ ಸತ್ಯದ ಅರಿವು ಅವನಿಗಿತ್ತು .ಸ್ನೇಹಿತರು ಮನೆಗೆ ಬಂದರು ಅವರನ್ನು ಮನೆಯ ಒಳಗೆ ಕರೆಯಲು ಹಿಂದುಮುಂದು ನೋಡುತ್ತಿದ. ಒಳಗೆ ಕರೆದರೆ ಎಲ್ಲಿ ಆಥಿತ್ಯ ನಾನೇ ಕೊಡಬೇಕಾಗಿ ಬರುವುದು ಅವರು ಕೇಳಿದರೆ ಏನು ಹೇಳುವುದು ಎಂಬ ಅಂಜಿಕೆ ಇನ್ನು ಅವರ ತಂದೆ ತಾಯಿಯನ್ನು ಪರಿಚಯ ಮಾಡಿ ಕೊಡುವಂತಿರಲಿಲ್ಲ ಬಿಡುವಂತೆಯೂ ಇರಲಿಲ್ಲ ಪರಿಚಯ ಮಾಡಿಕೊಟ್ಟರೆ ಎಲ್ಲಿ ಸ್ನೇಹಿತರ ಮುಂದೆ ಅವಮಾನ ಮಾಡುತ್ತಾರೆ ಎಂಬ ಯೋಚನೆ....

Sunday, August 16, 2020

ಪ್ರೇಮದ ಅನ್ವೇಷಣೆ ಭಾಗ-9.

ಹಿರಿಯ ಮಗನ ಹೆಸರು ವಿಧು, ಕಿರಿಯ ಮಗನ ಹೆಸರು ತೇಜಸ್. ತಂದೆಯವರದು ಬೆಲೆಯನ್ನೇ ಕಟ್ಟಲಾಗದ ಶ್ರೇಷ್ಠ ವೃತ್ತಿಯಾದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು. ತಾಯಿಯವರು ಗೃಹಿಣಿ ಒಂದು ಚಿಕ್ಕ ಸಂಸಾರ ಆದರೆ ಗುಣ ವಿಶೇಷತೆಗಳು ಬೇರೆ. ವಿಧು ಹಠಮಾರಿ ಸ್ವಭಾವದ ಹುಡುಗ ತೇಜಸ್ ಮೃದುಸ್ವಭಾವದ ಹುಡುಗ ಗಾದೆಮಾತು ಹೇಳುವಂತೆ ಕಿರಿಯ ಮಕ್ಕಳು ಕಿವಿ ಕಚ್ಚಿದರು ಪ್ರೀತಿ ಎನ್ನುವಂತೆ, ಕಿರಿಯ ಮಗ ತೇಜಸ್ ಮೇಲೆ ವಿಶೇಷವಾದ ಪ್ರೀತಿ .ಆ ಪ್ರೀತಿ ಎಷ್ಟರ ಮಟ್ಟಿಗೆ ಇತ್ತೆಂದರೆ ಆಗುವ ಅನಿಷ್ಟಕ್ಕೆಲ್ಲ ವಿಧು ಕಾರಣ ಅದೃಷ್ಟಕ್ಕೆ ಎಲ್ಲಾ ತೇಜಸ್ ಕಾರಣ ಎನ್ನುವ ಮಟ್ಟಿಗೆ. ಈ ಮಟ್ಟಿನ ತಾತ್ಸರ ವಿಧುವಿಗೆ ಮನೆಯವರ ಮೇಲೆ ಪ್ರೀತಿ ಇಲ್ಲದಂತೆ ಮಾಡಿತು. ತಂದೆ-ತಾಯಿ ತಮ್ಮ ಎಲ್ಲರೂ ಇದ್ದರೂ ಇಲ್ಲದಂತಿತ್ತು ಆತನ ಜೀವನ. ಅವನ ಮನಸ್ಸಿನಲ್ಲಿ  ಗಾಡ ನೋವಿನೊಂದಿಗೆ ಮನಸ್ಸಿನಲ್ಲಿ ಯೋಚನೆ ಮಾಡುತ್ತಿದ್ದನು. 
           ಬದುಕು ಬಹಳ ವಿಚಿತ್ರ ಎಲ್ಲ ಇದ್ದು ಇಲ್ಲದಂತೆ ಇರುವುದಕ್ಕಿಂತ ಇಲ್ಲದಂತೆ ಇರುವುದು ಉತ್ತಮ ಎಂದು ಮನಸ್ಸಿನಲ್ಲೇ ನೊಂದು ತಾನೇ ಸಮಾಧಾನಪಡಿಸಿ ಕೊಳ್ಳುತ್ತಿದ್ದನು. ಇದೆಲ್ಲದರ ನಡುವೆ ಅವನದು ವಿದ್ಯಾಭ್ಯಾಸದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಏನೂ ಇರಲಿಲ್ಲ. ಹಾಗಾಗಿ ಇವನು ಅವರ ತಂದೆ-ತಾಯಿಯ ಪಾಲಿಗೆ ದಡ್ಡ ಶಿಖಾಮಣಿಯಂತೆ ಕಾಣುತ್ತಿದ್ದನು.  ಇನ್ನು ಅವರ ತಂದೆ ಯಾವಾಗಲೂ ಋಣಾತ್ಮಕ ಅಂಶವನ್ನು ನೋಡುತ್ತಿದ್ದರಿಂದ ಆ ಋಣಾತ್ಮಕ ಪರಿಣಾಮವನ್ನು ವಿಧು ಪೂರ್ಣ ಪ್ರಮಾಣದಲ್ಲಿ ಎದುರಿಸಬೇಕಾಯಿತು. ಮನೆಗೆ ಬಂದ ನೆಂಟರು ಸ್ನೇಹಿತರ ಮುಂದೆ ವಿಧುವನ್ನು ತೆಗಳುವುದು, ತೇಜಸ್ಸನ್ನು ಹೊಗಳುವುದು ಇವರ ಕಾಯಕ ಎನ್ನುವಂತೆ ವರ್ತಿಸುತ್ತಿದ್ದರು. ವಿಧುವಿನ ಜೀವನದಲ್ಲಿ ಪ್ರೀತಿ ತೋರಿಸುವ ವ್ಯಕ್ತಿಗಳು ಚಿಕ್ಕವಯಸ್ಸಿನಿಂದಲೇ ಅವನಿಗೆ ಸಿಗಲಿಲ್ಲ ಅವನ ದುರದೃಷ್ಟವೋ ಏನೋ ಭಾವನೆಗಳು ಅರಳುವ ಸಮಯದಲ್ಲಿ ಭಾವನೆಗಳು ಸತ್ತು ಹೋಗಿದ್ದವು. ಬದುಕು ಬೇಡ ಎನ್ನುವಷ್ಟುರ ಮಟ್ಟಿಗೆ ಜಿಗುಪ್ಸೆ ಪ್ರತಿ ಹಂತದಲ್ಲೂ ಮೂದಲಿಕೆಯ ಮಾತುಗಳು, ಅವನ ತಂದೆ-ತಾಯಿ ನಡೆಸಿಕೊಳ್ಳುತ್ತಿದ್ದ ರೀತಿ ನಾನು ಇವರ ಮಗನೋ ಅಲ್ಲವಾ ಎಂದು ಅನುಮಾನ ಉಂಟುಮಾಡುವಂತೆ ಇರುತ್ತಿತ್ತು. ಅವರ ನಡವಳಿಕೆಗಳು ವಿಧುವಿಗೆ ಒಂಟಿತನದಿಂದ ಬದುಕುವ ಪಾಠವನ್ನು ಕಲಿಸಿ ಬಿಟ್ಟಿದ್ದವು.
                  ಎಲ್ಲಾ ಹೇಳುತ್ತಾರೆ ಕೆಟ್ಟ ಮಕ್ಕಳು ಹುಟ್ಟಬಹುದು. ಆದರೆ ಕೆಟ್ಟ ತಂದೆ-ತಾಯಿ ಇರುವುದಿಲ್ಲವೆಂದು ಆದರೆ ವಿಧುವಿಗೆ ಈ ಮಾತು ಎಷ್ಟು ಸತ್ಯವಿರಬಹುದು ಎಂಬ ಜಿಜ್ಞಾಸೆ. ಪ್ರತಿಬಾರಿಯೂ ಇವನು ದಡ್ಡ ಶಿಖಾಮಣಿ ಇವನು ಹತ್ತನೇ ತರಗತಿಯನ್ನು ಕೂಡ ಪಾಸ್ ಮಾಡಲಾರ ಎಂದು ತಿಳಿದಿದ್ದ ಹಾಗೂ ಎಲ್ಲರ ಮುಂದೆ ಮೂದಲಿಸುತ್ತಿದ್ದ ಅವನ ತಂದೆ ತಾಯಿಗೆ ಅಚ್ಚರಿಯಾಗುವಂತೆ ಹತ್ತನೆಯ ತರಗತಿಯಲ್ಲಿ ಉತ್ತೀರ್ಣನಾದ. ತಾನು ಅನುಭವಿಸುತ್ತಿದ್ದ ಮೂದಲಿಕೆ ಅಪಹಾಸ್ಯ ಇಂತಹದನ್ನೆಲ್ಲ ವಿರೋಧಿಸುತ್ತಿದ್ದ ಕಾರಣಕ್ಕೋ ಏನೋ, ಸಹಪಾಠಿಗಳು ಬೇರೆಯವರಿಗೆ ಮಾಡುತ್ತಿದ್ದ ಅಪಹಾಸ್ಯ ,ಅವಮಾನ ಕಟುವಾಗಿ ವಿರೋಧಿಸುತ್ತಿದ್ದ .ಮನುಷ್ಯರ ಹೊಟ್ಟೆಕಿಚ್ಚಿನ ಗುಣ ಇವನನ್ನು ಯಾವಾಗಲೂ ಗೊಂದಲದಲ್ಲಿ ಇರುವಂತೆ ಮಾಡುತ್ತಿತ್ತು. ಬೇರೆಯವರನ್ನ ಮೂದಲಿಸಿ ಅಪಹಾಸ್ಯ ಮಾಡಿ ಇವರು ಗಳಿಸುವುದಾದರೂ ಏನನ್ನು ಎಂಬ ಪ್ರಶ್ನೆ ಕಾಡುತ್ತಿತ್ತು .10ನೇ ತರಗತಿ ಮುಗಿದ ಮೇಲೆ 11ನೇ ತರಗತಿ ವಿಜ್ಞಾನ ವಿಷಯದಲ್ಲಿ ಪದವಿ ಪೂರ್ವ ಕಾಲೇಜಿಗೆ ಸೇರಿಕೊಂಡ. ಅಲ್ಲಿ ತನ್ನ ಬದುಕಿನ ಹೊಸ ಚಿಂತನೆಗಳು ಹೊಸ ವಿಚಾರಗಳು ಹೊಸ ಕನಸುಗಳೊಂದಿಗೆ ತನ್ನ ಬದುಕಿನ ಯಾತ್ರೆಯನ್ನು ಹೊಸ ಹುಮ್ಮಸ್ಸಿನಿಂದ ಮುಂದುವರಿಸಿಕೊಂಡು ಹೋಗುವುದಾಗಿ ನಿಶ್ಚಯಿಸಿಕೊಂಡು, ಹೊಸ ಬದುಕಿಗೆ ತನ್ನನ್ನು ತಾನು ತೆರೆದುಕೊಂಡು ಮುನ್ನಡೆದ. ಆದರೆ ಅವನ ಮನೆಯಲ್ಲಿ ಯಾವ ಬದಲಾವಣೆಯನ್ನು ಕಾಣಲಿಲ್ಲ ಮನೆಯಲ್ಲಿ ಮಕ್ಕಳು ದೊಡ್ಡವರಾದಮೇಲೆ ಮಕ್ಕಳಿಗಿಂತ ಹೆಚ್ಚಾಗಿ ಸ್ನೇಹಿತರಂತೆ ಕಾಣಬೇಕು ಎಂಬ ಅರಿವಿಲ್ಲದ ಅವರ ತಂದೆ ಇನ್ನೂ ಅವನನ್ನು ಹೊಡೆಯುವುದು ಬಡಿಯುವುದು ಮುಂದುವರಿಸಿದರು. ಇನ್ನು ಇವರ ನಡವಳಿಕೆ ಇಂದ ನೋವನ್ನು ಅನುಭವಿಸಿ ಅವನ ಸಹನೆಯ ಕಟ್ಟೆ ಒಡೆದು ಹೋಗಿತ್ತು. ಇದೇ ರೀತಿ ಮುಂದುವರೆದರೆ ನನ್ನನ್ನು......

Tuesday, August 11, 2020

ಪ್ರೇಮದ ಅನ್ವೇಷಣೆ ಭಾಗ-8

          ನೀನು ಹೇಳುವುದು ಸತ್ಯ; ಆದರೆ ದೇಶವನ್ನು ನಿನ್ನಂತೆ ತುಂಬಾ ಜನರು ಪ್ರೀತಿಸುತ್ತಾರೆ. ನಿನ್ನ ದೇಶಪ್ರೇಮದ ಬಗ್ಗೆ ಸಂಶಯವೇ ಬೇಡ ಎಂದು ಹೇಳುತ್ತಾ ಅನಿಕೇತ್ ಈಗಲಾದರೂ ಹೇಳು ಯಾರನ್ನಾದರೂ ಪ್ರೀತಿಸುತ್ತಿದ್ದೀಯ ಎಂದು ? ಅವನ ಪ್ರಶ್ನೆಗೆ ಉತ್ತರ ಎನ್ನುವಂತೆ ವಿಧು ಇಲ್ಲ ಯಾರನ್ನೂ ನಾನು ಇನ್ನು ಪ್ರೀತಿಸಿಲ್ಲ ಎಂದು ಹೇಳುವಾಗಲೇ ಕೊನೆಪಕ್ಷ ಮದುವೆ ಯೋಚನೆ ಏನಾದರೂ ಇದೆಯೇ ? ಎಂದು ಕೇಳಿದ, ಹಾಗೇನು ಇಲ್ಲ ನೋಡೋಣ ಕಾಲ ಬಂದಾಗ ಏನೇನು ಆಗಬೇಕು ಅದು ಆಗೇ ತಿರುತ್ತದೆ. ಸರಿ ಈಗ ಎಲ್ಲಿ ಹೋಗುತ್ತಿರುವೆ ಈ ಸಮಯದಲ್ಲಿ ಶಿವಮೊಗ್ಗಕ್ಕೆ ಹೋಗಲು ಕಾರಣವಾದರೂ ಏನು ? ನಿನ್ನ ವ್ಯವಹಾರದ ದೃಷ್ಟಿಯಿಂದ ಅದಕ್ಕೆ ಸಂಬಂಧಪಟ್ಟಂತೆ ಹೋಗುತ್ತಿರುವೆಯ ಹೇಗೆ ಎಂದು ಪ್ರಶ್ನಿಸಿದ. ಇಲ್ಲ ನಾನು ರಾಷ್ಟ್ರೀಯ ಸೇವಾ ಸಮಿತಿಯಿಂದ ಚುನಾವಣಾ ಕಾರ್ಯಕ್ಕಾಗಿ ರಾಷ್ಟ್ರೀಯ ಸೇವಾ ಪಾರ್ಟಿಯಲ್ಲಿ ಕೆಲಸ ಮಾಡಲು ಹೋಗುತ್ತಿರುವೆ ಎಂದ ವಿಧು. ಓ ನೀನು ಇನ್ನು ನಿನ್ನ ರಾಜಕೀಯ ಒಡನಾಟವನ್ನು ಬಿಟ್ಟಿಲ್ಲ ಎಂದಾಯಿತು, ಹೋಗಲಿ ಬಿಡು ರಾಜಕೀಯದಲ್ಲಿ ಆದರೂ  ನೀನು ಎತ್ತರ ಸ್ಥಾನದಲ್ಲಿ ಬೆಳೆಯಬೇಕು ಎನ್ನುವಷ್ಟರಲ್ಲಿ ಶಿವಮೊಗ್ಗಕ್ಕೆ ಹೋಗುವ ಬಸ್ ಬಂದಿತು. ಅನಿಕೇತ್ ವಿಧುವನ್ನು ಬಸ್ಸಿಗೆ ಹತ್ತಿಸಿ ಹೊರಟ. ವಿಧು ಬಸ್ ಹತ್ತಿದ ಕೂಡಲೇ ಕಿಟಕಿಯ ಪಕ್ಕದ ಜಾಗವನ್ನು ಹುಡುಕಿ ಕುಳಿತ ಬಸ್ ತನ್ನ ಪಯಣವನ್ನು ಆರಂಭಿಸಿತು.
             ಟಿಕೆಟ್ ತೆಗೆದುಕೊಂಡ ವಿಧು ಬಸ್ಸಿನ ಕಿಟಕಿಯನ್ನು ತೆಗೆದ ಆಹ್ಲಾದಕರ ತಂಗಾಳಿ. ಅದು ಮುಸ್ಸಂಜೆಯ ಸಮಯ ಸೂರ್ಯ ಪೂರ್ವದಿಂದ ತನ್ನ ಪಥವನ್ನು ಪಶ್ಚಿಮದ ಕಡೆಗೆ ತನ್ನ ಪಯಣವನ್ನು ಬಲು ಜೋರಾಗಿ ನಡೆಸುತ್ತಿದ್ದಾನೆ ಎನ್ನುವಂತೆ ಭಾಸವಾಗುತ್ತಿತ್ತು. ಆ ಕಿತ್ತಲೆ ಬಣ್ಣದ ಕಿರಣಗಳು ತನ್ನ ಅಂದಿನ ಕರ್ತವ್ಯವನ್ನು ಮುಗಿಸಿ ಮನೆಗೆ ಸೇರುವ ತವಕದಲ್ಲಿ ಮಕ್ಕಳು ಶಾಲೆಯನ್ನು ಬಿಟ್ಟು ಕೂಡಲೇ ಮನೆಗೆ ಹೋಗುವಂತೆ ಹೋಗುವ ರೀತಿಯಲ್ಲಿ ಕಾಣುತ್ತಿತ್ತು. ಬೆಳ್ಳಕ್ಕಿ ಹಿಂಡು ತನ್ನ ಮನೆಗಳಿಗೆ ತೆರಳುವ ದೃಶ್ಯ ಮನಸ್ಸಿಗೆ ಮುದವನ್ನು ಕೊಡುತ್ತಿತ್ತು .ಇನ್ನೇನು ಸಂಜೆ ಕತ್ತಲು ಆವರಿಸುತ್ತಿದ್ದಂತೆ ಪ್ರಕೃತಿಯ ಸೌಂದರ್ಯ ಹಂತಹಂತವಾಗಿ ಮರೆಯಾಗುತ್ತಿತ್ತು. ಕತ್ತಲು ಕವಿಯುತ್ತಿದ್ದಂತೆ ತನ್ನ ಬದುಕಿನ ಕತ್ತಲಿನ ಬಗ್ಗೆ ಯೋಚಿಸಲು ಶುರುಮಾಡಿದ ವಿಧು. ಹೌದು ನಾನು ಏಕೆ ಹೀಗೆ ? ನನ್ನ ಸ್ನೇಹಿತರೆಲ್ಲ ಏಕೆ ನನ್ನನ್ನು ನೀನು ತುಂಬಾ ವಿಭಿನ್ನ ಎಂದು ಕರೆಯುತ್ತಾರೆ, ಎಂದು ಯೋಚಿಸತೊಡಗಿದ.  ಮನುಷ್ಯನ ಬದುಕಿನ ಹಾಗೂ ಪರಿಸರದ ಆಧಾರದ ಮೇಲೆ ಅವನ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎನಿಸಿತು ಮನಸ್ಸಿನಲ್ಲಿ. ವಿಧುವಿನ ಮನಸ್ಸಿನಲ್ಲಿ ಹಲವಾರು ವಿಚಾರಗಳು ಸುಳಿದವು. ನಾನೇಕೆ ಹೀಗೆ ನಾನು ಬೆಳೆದು ಬಂದ ಪರಿಸರವೇ ? ಏಕೆ ನಾನು ಎಲ್ಲರಿಗಿಂತ ಭಿನ್ನವಾಗಿ ಬೆಳೆದೆ. ನಾನೇ ಬಿನ್ನವ ಅಥವಾ ಈ ಲೋಕ ಬಿನ್ನವಾಗಿದೆಯಾ? ಅಥವಾ ನನ್ನ ಬಾಲ್ಯದ ಪ್ರಭಾವ ನಾ ? ಅಥವಾ ಅನುಭವಕ್ಕೆ ಮಾತ್ರ ತಿಳಿಯುವಂತಹ ಯಾವುದಾದರೂ ಅತೀಂದ್ರಿಯ ಶಕ್ತಿ ಆಟದಲ್ಲಿ ಸಿಲುಕಿ ಕೊಂಡಿದ್ದೇನ ? ಎಂಬ ಜಿಜ್ಞಾಸೆ. ಮನಸ್ಸಿನಲ್ಲಿ ಹೀಗೆ ಹತ್ತು ಹಲವಾರು ಯೋಜನೆಗಳು ಹರಿದವು. ಬದುಕಿನ ಪಯಣ ವಿಚಿತ್ರ ಮನುಷ್ಯ ಹುಟ್ಟಿದಾಗ ಇರುವ ಮುಗ್ಧ ಮನಸ್ಸಿನಿಂದ ಹಿಡಿದು ಬದುಕಿನ ಪರಿಪಕ್ವತೆ ತಿಳಿಯುವ ಒಳಗೆ ಬದುಕು ಮುಗಿದು ಹೋಗಿರುತ್ತದೆ. ಅಲ್ಲವಾ ? ಮನಸ್ಸಿನಲ್ಲಿ ಬದುಕಿನ ಪುಟಗಳನ್ನು ತಿರುವು  ಹಾಕಲು ಶುರುಮಾಡಿದ. ಅವನ ಮನಸ್ಸು ತಾನು ಬೆಳೆದ ಚಿಕ್ಕಮಗಳೂರಿನ ಕಡೆ ಹೋಯಿತು. ಚಿಕ್ಕಮಗಳೂರು ಎಂದರೆ ಕೇಳಬೇಕಾ ಪ್ರಕೃತಿ ಸೌಂದರ್ಯ ಮೈಮೇಲೆ ಹೊತ್ತು ನಿಂತಂತಹ ಸೌಂದರ್ಯ ಗಿರಿಶಿಖರಗಳ ನೆಲೆಬೀಡು ಎಂಥವರನ್ನು ತನ್ನ ಸೌಂದರ್ಯದಿಂದ ಮನಸೂರೆಗೊಳ್ಳುವಂತೆ ಮಾಡುವ ಪ್ರದೇಶ. ಚಿಕ್ಕಮಗಳೂರು ಜಿಲ್ಲೆ ಬಯಲುಸೀಮೆ ಹಾಗೂ ಮಲೆನಾಡಿನ ಸಂಗಮ ಅಲ್ಲಿಯ  ಕಾಫಿಯ ಘಮ ವಿಶ್ವವ್ಯಾಪಿ ಇಂತಹ ಸೌಂದರ್ಯದ ಮಡಿಲಿನಲ್ಲಿ ಒಂದು ಪುಟ್ಟ ಸಂಸಾರ, ಗಂಡ ಹೆಂಡತಿ ಮತ್ತು ಮಕ್ಕಳು  ಅದರಲ್ಲಿ ಹಿರಿಯ ಮಗನ ಹೆಸರು.....

Thursday, July 23, 2020

ಪ್ರೇಮದ ಅನ್ವೇಷಣೆ ಭಾಗ-7

ಮನಸ್ಸಿನಲ್ಲಿ ಎಲ್ಲೋ ಪ್ರತಿಯೊಂದುನ್ನು ಪಡೆಯಲು ಅದೃಷ್ಟ ಮಾಡಿರಬೇಕು ಎಂದು ಕೆಲವರು ಹೇಳುವ ಮಾತು ಸತ್ಯವೆನಿಸಿತು. ರೈಲಿನಿಂದ ಇಳಿದು ನೇರವಾಗಿ ರೈಲಿನ ವಿಚಾರಣೆಯ ತಿಳಿಯುವ ಸಲುವಾಗಿ ಅಲ್ಲಿದ್ದವರನ್ನು ಕೇಳಿದ ಅವರು ಶಿವಮೊಗ್ಗದ ಕಡೆ ಸಂಜೆಯತನಕ ಯಾವುದೇ ರೈಲು ಗಾಡಿಗಳು ಇರುವುದಿಲ್ಲ ಎಂದರು. ಬೀರೂರಿನಿಂದ ಬಸ್ ನಿಲ್ದಾಣಕ್ಕೆ ಒಂದುವರೆ ಕಿಲೋಮೀಟರ್ ದೂರ, ಬೇಸಿಗೆಯ ಬಿಸಿಲು ಬೇರೆ, ಬಿಸಿಲು ಕಣ್ಣಿಗೆ ರಾಚುತ್ತಿತ್ತು . ಆಟೋಗಾಗಿ ಕಾದರೂ ಒಂದು ಆಟೋ ಬಾರದೆ ಹೋಯಿತು. ಇದ್ದ ಎರಡು ಆಟೋಗಳು ಮೊದಲೇ ಬುಕ್ ಆಗಿದ್ದವು. ರೈಲು ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಸಾಗಲು ಬೇರೆ ಅವಕಾಶವಿಲ್ಲದ ಕಾರಣ ವಿಧು ತನ್ನ ಮಣಬಾರದ ಬ್ಯಾಗಿನೊಂದಿಗೆ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಲು ಶುರು ಮಾಡಿದ, ಬರುವ ದಾರಿಯಲ್ಲಿ ಬಹಳ ಬಾಯಾರಿಕೆಯಾಗಿ ನೀರಿನ ಬಾಟಲ್ ನಿಂದ ನೀರು ಕುಡಿಯಲು ತೆಗೆದರೆ ನೀರು ಕೂಡ ಸಣ್ಣ ಪ್ರಮಾಣದ ಬಿಸಿಯಾಗಿದ್ದ ಅನುಭವ.  ಅಬ್ಬಾ ಎಂತಹ ಬಿಸಿಲಿನ ಝಳ ಎಂದುಕೊಂಡು ಮುಂದೆ ಹೆಜ್ಜೆ ಇಡಬೇಕಾದರೆ ವಿಧುವಿನ ಗೆಳೆಯನಾದ ಅನಿಕೇತ ಸಿಕ್ಕಿದ.
            ವಿಧು ನೀನೇನು ಇಲ್ಲಿ ಎಂದು ಕೇಳಿದ ? ವಿಧು ತಮಾಷೆಗಾಗಿ ಮದುವೆಯ ಪ್ರವಚನ ಗುಂಗಿನಿಂದ ಹೊರಬಂದಿರಲಿಲ್ಲದವನ ಆಗಿದ್ದರಿಂದ ಇಲ್ಲೇ ಮದುವೆಯಾಗಲು ಹೆಣ್ಣು ನೋಡಲು ಬಂದಿದ್ದೇನೆ ಎಂದು ತಮಾಷೆ ಮಾಡಿದ. ಅದಕ್ಕೆ ನಕ್ಕ ಅನಿಕೇತ್ ತುಂಬಾ ದಿನಗಳ ನಂತರ ಸಿಕ್ಕಿದಿಯಾ ಬಾ ಏನಾದರೂ ತಿಂಡಿಯನ್ನು ತಿಂದು ಕಾಫಿಯನ್ನು ಕುಡಿಯೋಣ ಎಂದ. ವಿಧು ಕೂಡ ತುಂಬಾ ದಿನಗಳ ನಂತರ ಸಿಕ್ಕ ಸ್ನೇಹಿತನ ಖುಷಿಗಾಗಿ ಸರಿ ನಡಿ ಹೋಗೋಣವೆಂದ. ಅನಿಕೇತ್ ತನ್ನ ಬೈಕಿನಲ್ಲಿ ಮಣಭಾರದ ಬ್ಯಾಗನ್ನು ಇಟ್ಟುಕೊಂಡು ಕೇಳಿದ ಹೆಣ್ಣು ನೋಡಲು ಬಂದೆ ಎಂದು ಹೇಳಿದೆ ,ನೋಡಿದರೆ ಇಷ್ಟು ದೊಡ್ಡದಾದ ಭಾರವಾದ ಬ್ಯಾಗನ್ನು ಇಟ್ಟುಕೊಂಡಿದಿಯಲ್ಲ ಎಂದ. ಅವನ ಮಾತಿಗೆ ನಕ್ಕ ವಿಧು ಅಯ್ಯೋ ಸುಮ್ಮನೆ ಹೇಳಿದೆ ಮಾರಾಯ ಎಂದ. ನಾನು ಹೌದು ಅಂದುಕೊಂಡೆ ಇಷ್ಟು ದೊಡ್ಡದಾದ ಬ್ಯಾಗನ್ನು ಹಾಕಿಕೊಂಡು ಯಾರು ಹೆಣ್ಣನ್ನು ನೋಡಲು ಬರುತ್ತಾರೆ ಎಂದು ? ಆದರೂ ನೀನು ತುಂಬಾ ಗಂಭೀರ ವ್ಯಕ್ತಿ ಅಲ್ಲವೇ ಹಾಗಾಗಿ ಇದ್ದರೂ ಇರಬಹುದು ಎಂದು ಅಂದುಕೊಂಡೆ ಎಂದ ನಸುನಕ್ಕ ವಿಧು ಯಾರಾದರೂ ಹೆಣ್ಣು ನೋಡಲು ಹೋಗುವವರು ಒಂಟಿಯಾಗಿ ಅದು ಮಣಬಾರದ ಬ್ಯಾಗಿನೊಂದಿಗೆ ಬರುವುದುಂಟಾ ?  ಎಂದು ಹೇಳುತ್ತಾ ಸರಿ ಬಿಡು ಮತ್ತೆ ಏನು ಸಮಾಚಾರ ಎಂದು ಕೇಳಿದ. ಅದಕ್ಕೆ ಅನಿಕೇತ್ ನನ್ನದೇನು ಇಲ್ಲ ಎಲ್ಲಾ ನೀನೆ ಹೇಳಬೇಕು ಬೆಂಗಳೂರು ಹುಡುಗ ಎಂದು ಮಾತು ಮುಂದುವರಿಸಿದ. ಅನಿಕೇತ್ ನಾನೇನು ನಮ್ಮ ಊರಿನಲ್ಲಿ ಬಂದು ಸೆಟಲ್ ಆಗಿದ್ದೀನಿ. ನೀನು ಇನ್ನೂ ಲೋಕ ಸಂಚಾರ ಮಾಡಿಕೊಂಡು ಇದ್ದಿಯೋ ಅಥವಾ ಎಲ್ಲಾದರೂ ಒಂದು ಕಡೆ ಬದುಕು ಕಟ್ಟಿ ಕೊಂಡಿದ್ದೀಯಾ ? ಎಂದು ಕೇಳಿದ.  ವಿಧುವಿನ ನಗುವನ್ನು ನೋಡಿದ ಕೂಡಲೇ ಅದರಲ್ಲೂ ವಿಧವಿನ ಮುಗುಳು ನಗುವಿನ ಹಿಂದೆ ನೂರಾರು ಅರ್ಥವನ್ನು ಹುಡುಕುವ ಅನಿಕೇತ್ ಇನ್ನೂ ಒಂದು ಕಡೆ ನೆಲೆ ನಿಂತಿಲ್ಲ ಅನಿಸುತ್ತಿದೆ ಎಂದು ನೇರವಾಗಿ ಹೇಳಿದ. ವಿಧು ತನ್ನ ನಗುವಿನೊಂದಿಗೆ ಇಲ್ಲ ಬೆಂಗಳೂರಿನಲ್ಲಿ ಇವಾಗ ಸ್ವಂತ ಉದ್ಯೋಗವನ್ನು ಮಾಡುತ್ತಿದ್ದೇನೆ ಎಂದು ಹೇಳಿದ. ಕೂಡಲೇ ಮಾತು ತಡೆದ ಅನಿಕೇತ್ ನಿಲ್ಲು ! ನಿಜವಾಗಲೂ ಯಾವಾಗಲೂ ನೋಡಿದರೆ ದೇಶ ದೇಶ ಎಂದು ಊರೂರು ಸುತ್ತುವ ನೀನು ಸ್ವಂತ ಉದ್ಯೋಗ ಮಾಡುತ್ತಿದ್ದೀಯಾ ಎಂದರೆ ನಂಬಲು ಕಷ್ಟವಾಗುತ್ತಿದೆ .
           ನೀನು ಇಂತಹ ನಿರ್ಧಾರಕ್ಕೆ ಬಂದಿದ್ದೀಯಾ ಎಂದರೆ ಎಲ್ಲೋ ಪ್ರೀತಿಯಲ್ಲಿ ಬಿದ್ದಿರಬೇಕು ಮದುವೆಯ ಬಗ್ಗೆ ವಿಚಾರ ಮಾಡಿರಬೇಕು ಹಾಗಾಗಿ ಒಂದು ಕಡೆ ನೆಲೆ ನಿಂತಿರುವೆ ! ನೀನು ಎಂದು  ಅನುಮಾನದಿಂದ ಕೇಳಿದ ಇನ್ನೇನು ಇದು ಮಾತು ಮುಂದುವರೆಸಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಮಾತು ಮುಂದುವರಿಸಿದ ಅನಿಕೇತ್ ನಾವು ಎಲ್ಲರೂ ಪ್ರೀತಿಯಲ್ಲಿ ಬಿದ್ದರೂ ನೀನು ಮಾತ್ರ ಯಾರನ್ನು ಪ್ರೀತಿಸುವ ಮನಸ್ಸು ಮಾಡಲಿಲ್ಲ ಎಂದ. ವಿಧು ಮಾತು ಮುಂದುವರಿಸುತ್ತಾ ಪ್ರೀತಿ ಮನಸ್ಸಿನಿಂದ ಬರಬೇಕು. ಅದು ಬೇರೆಯವರು ಪ್ರೀತಿಸಿದರೆಂದು ನಾವು ಪ್ರೀತಿಸಲು ಶುರು ಮಾಡಿದರೆ ಅದು ನಿಜವಾದ ಪ್ರೀತಿ ಆಗಲು ಸಾಧ್ಯವೇ ? ಏಕೆ ! ನಾನು ಪ್ರೀತಿಸುತ್ತಿದ್ದೇನೆ ನಾನು ನನ್ನ ದೇಶವನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದೇನೆ. ಇನ್ನು ಏನು ಆಗಬೇಕು ಎಂಬ ಪ್ರಶ್ನೆಗೆ ಅನಿಕೇತ್ ವಿಧು ನೀನು ಹೇಳುವುದು ಸತ್ಯ ಆದರೆ....
Author : Rakesh Bhagiratha.

Monday, July 13, 2020

ಪ್ರೇಮದ ಅನ್ವೇಷಣೆ ಭಾಗ-6

ಈ ಜನ್ಮದಲ್ಲಿ ಮದುವೆಯಾಗಬಾರದೆಂದು ನಿಶ್ಚಯಿಸಿದಕ್ಕೆ ಪ್ರತಿಯಾಗಿ ಇವರು ಮದುವೆಯ ಪ್ರವಚನ ಮಾಡುತ್ತಿದ್ದಾರಲ್ಲ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, ನಾನು ಈ ಜನ್ಮದಲ್ಲಿ ಮದುವೆಯಾಗುವುದಿಲ್ಲ ಎಂದು ಹೇಳುವಷ್ಟರಲ್ಲಿ ಚಿದಾನಂದ ಅವರು ಈ ರೀತಿ ಮಗನ ವಯಸ್ಸಿನ ಮಕ್ಕಳನ್ನು ಕಂಡರೆ ಮದುವೆ ಬಗ್ಗೆ ಮಾತನಾಡುತ್ತಾಳೆ ಎಂದರು. ಇವರನ್ನು ಹೀಗೆ ಬಿಟ್ಟರೆ ಬರೀ ಮದುವೆಯ ಬಗ್ಗೆ ಮಾತನಾಡುತ್ತಾರೆ ಎಂದು ಗೊತ್ತಾದ ಕೂಡಲೇ ಅವರ ಚಿತ್ತವನ್ನು ಪ್ರಕೃತಿಯ ಕಡೆಗೆ ಸೆಳೆಯಬೇಕು ಎಂಬ ಉದ್ದೇಶದಿಂದ ಯೋಚಿಸುತ್ತಿರಬೇಕಾದರೆ ರೈಲು ಅರಸೀಕೆರೆ ನಿಲ್ದಾಣ ತಲುಪಿತ್ತು. ಅರಸೀಕೆರೆ ನಿಲ್ದಾಣ ಜಂಕ್ಷನ್ ಆಗಿರುವುದರಿಂದ ರೈಲು ಸ್ವಲ್ಪ ಸಮಯ ಅಲ್ಲಿ ನಿಲ್ಲುತ್ತದೆ ಎಂದು ತಿಳಿದು ವಿಧು ರೈಲಿನಿಂದ ಕೆಳಗೆ ಇಳಿದು ಸ್ವಲ್ಪ ಸಮಯ ಅತ್ತಿಂದಿತ್ತಾ ಓಡಾಡಿದ, ರೈಲಿನಲ್ಲಿ ಅರಸೀಕೆರೆ ಮಾರ್ಗ ಸಂಚರಿಸುವಾಗ ಯಾವಾಗಲೂ ಬಾದಾಮಿಹಾಲನ್ನು  ಕುಡಿಯುತ್ತಿದ್ದ. ಅದರಂತೆ ಈ ಬಾರಿಯೂ ಹಾಲನ್ನು ತೆಗೆದುಕೊಂಡು ಕುಡಿಯುತ್ತಿರುವಾಗ ಹೊಸದಾಗಿ ಮದುವೆಯಾದ ನವ ಜೋಡಿ ನೋಡಿ ಅವನಿಗೆ ನಗು ಬಂತು. ಕುರಿ ಹಳ್ಳಕ್ಕೆ ಬಿದ್ದಿದೆ ಎಂದು ಮನಸ್ಸಿನಲ್ಲೇ ನಕ್ಕು ಮುಂದೆ ಹೆಜ್ಜೆ ಹಾಕಿದ. ಇನ್ನೇನು ರೈಲುಗಾಡಿಯ ಒಳಗೆ ಬರಬೇಕು, ಅಷ್ಟರಲ್ಲಿ ಸಾಧುಗಳ ದರ್ಶನವಾಯಿತು. ಸಾಧುಗಳ ಕಣ್ಣಿನಲ್ಲಿ ಪ್ರಕಾಶಮಾನವಾದ ತೇಜಸ್ಸು ಕಂಗೊಳಿಸುತ್ತಿತ್ತು. ಸಾಧುಗಳು ವಿಧುವನ್ನು ಹತ್ತಿರ ಬರುವಂತೆ ಕೈಸನ್ನೆ ಮಾಡಿದರು. ಅವರ ಬಳಿ ಹೋಗುತ್ತಿದ್ದಂತೆ  ನೋಡಿ ನಕ್ಕು ನಿನ್ನ ಮುಂದಿನ ಕಾರ್ಯಕ್ಕೆ ಶುಭವಾಗಲಿ, ಬದಲಾವಣೆಗೆ ಸಿದ್ಧನಾಗು ಎಂದು ಹರಸಿದರು. ಅವರ ಆಶೀರ್ವಾದದ ಮರ್ಮ ಏನೆಂದು ಕೇಳಬೇಕು ಅನ್ನುವಷ್ಟರಲ್ಲಿ ರೈಲುಗಾಡಿ ಹೊರಟಿತು ಕೂಡಲೇ ಸಾಧುಗಳ ಆಶೀರ್ವಾದ ಸ್ವೀಕರಿಸಿದ ವಿಧು ರೈಲುಗಾಡಿಯನ್ನು ಹತ್ತಿದ, ರೈಲು ಗಾಡಿಯು ನಿಧಾನವಾಗಿ ತನ್ನ ವೇಗವನ್ನು ಹೆಚ್ಚಿಸಿತು.
           ಅವರ ಮುಗುಳುನಗು ಹಲವಾರು ಗೂಢಾರ್ಥವನ್ನು ಸೂಚಿಸುತ್ತಿತ್ತು ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಇಟ್ಟುಕೊಂಡು ರೈಲಿನಲ್ಲಿ ಕುಳಿತು ತನ್ನದೇ ಆದ ಯೋಚನಾಲಹರಿಯಲ್ಲಿ ಬಿದ್ದ. ಪ್ರತಿಬಾರಿ ಯಾವುದೋ ಒಂದು ಮಹಾಶಕ್ತಿ ತನ್ನ ಬದುಕಿನ ಪಥವನ್ನು ನಿರ್ಧರಿಸುತ್ತದೆ ಎಂದು ಯೋಚಿಸುತ್ತ ಕುಳಿತಿರಬೇಕಾದರೆ ಮತ್ತೆ ಸತ್ಯವತಿ ಅವರ ಮಾತು ಪ್ರಾರಂಭವಾಯಿತು. ಓ ಇವರು ಬಿಟ್ಟರೆ ಇನ್ನು ಮದುವೆ ಪ್ರವಚನ ಹೊಡೆಯುತ್ತಾರೆ ಎಂದವನೇ ನೋಡಿ ಅರಸೀಕೆರೆ ಭಾಗದಲ್ಲಿ ಮಳೆ ಇಲ್ಲದೆ ತೆಂಗಿನ ಮರಗಳು ಹಾಗೂ ಇತ್ತೀಚಿನ ವರ್ಷಗಳಲ್ಲಿ ಹಾಕಿದ ಅಡಿಕೆ ಮರಗಳು ಒಣಗುತ್ತಿವೆ ಅಲ್ಲವೇ ? ಎಂದು ಈ ಬಾರಿ ಅವರ ಗಮನವನ್ನು ಪ್ರಕೃತಿಯ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾದ. ಹೌದಪ್ಪ ಮಳೆಗಾಲ ಚೆನ್ನಾಗಿ ನಡೆಸುತ್ತಿಲ್ಲ ಎಂದು ತಮ್ಮ ಹಿಂದಿನ ಅನುಭವದ ಮಾತುಗಳನ್ನು ಮತ್ತೆ ತೆಗೆದರು ಅಬ್ಬ ಒಂದು ಮದುವೆಯ ಪ್ರವಚನಕ್ಕೆ ಬ್ರೇಕ್ ಬಿತ್ತಲ್ಲ ಎಂದು ಮನಸ್ಸಿನಲ್ಲೇ ಸಂತೋಷಗೊಂಡ.
              ಸತ್ಯವತಿಯವರು ತಮ್ಮ ಬದುಕು ಕಟ್ಟಿಕೊಂಡ ರೀತಿಯನ್ನು ವಿವರಿಸ ತೊಡಗಿದರು. ಅದನ್ನು ಕೇಳುವ ಹೊತ್ತಿಗೆ ರೈಲು ಕಡೂರು ನಿಲ್ದಾಣವನ್ನು ತಲುಪಿತು. ಅಬ್ಬ ಇವರ ಜೊತೆಗೆ ಅರ್ಧದಾರಿ ಕ್ರಮಿಸುವ ಹೊತ್ತಿಗೆ ರೈಲಿನಿಂದ ಇಳಿಯುತ್ತಿರುವುದು ಸರಿಹೋಯಿತು. ಇಲ್ಲವೆಂದರೆ ಇವರು ಹತ್ತಿರ ಮದುವೆ ವಿಚಾರದಲ್ಲಿ ಮೊಳೆಯನ್ನು ಇನ್ನು ಹೊಡೆಸಿ ಕೊಳ್ಳಬೇಕಾಗಿತ್ತು ಎಂದು ಮನಸ್ಸಿನಲ್ಲಿ ಅಂದುಕೊಂಡ. ಅಮ್ಮ ನಾನು ಮುಂದಿನ ನಿಲ್ದಾಣದಲ್ಲಿ ಇಳಿಯಬೇಕು ಸ್ವಲ್ಪ ಜಾಗವನ್ನು ಕೊಡಿ ನಾನು ನನ್ನ ಬ್ಯಾಗುಗಳನ್ನು ತೆಗೆದುಕೊಳ್ಳಬೇಕು ಎಂದು ಎದ್ದುನಿಂತ, ಕೂಡಲೇ ಸತ್ಯವತಿಯವರು ಅಜ್ಜಂಪುರದಲ್ಲಿ ಇಳಿಯುತ್ತೇನೆ ಎಂದು ಇಲ್ಲೇ ಇಳಿಯುತ್ತಿದ್ದಿಯಲ್ಲ ಎಂದರು. ಇಲ್ಲಮ್ಮ ನನ್ನ ಸ್ವಂತ ಊರು ಅಜ್ಜಂಪುರ ನಾನು ಬೇರೆ ಕಾರ್ಯದ ಮೇಲೆ ಶಿವಮೊಗ್ಗಕ್ಕೆ ಹೋಗಬೇಕಾಗಿದೆ ಹಾಗಾಗಿ ಇಲ್ಲೇ ಇಳಿಯುತ್ತಿದ್ದೇನೆ ಎಂದು ಹೇಳಿದ. ಓ ಆಯ್ತು ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ಹರಸಿದರು. ಬೀರೂರಿನ ರೈಲು ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ರೈಲು ಬಂದಿತು. ವಿಧು ಮಾತೃಹೃದಯಿ ಸತ್ಯವತಿ ಅವರಿಗೆ ಧನ್ಯವಾದಗಳನ್ನು ತಿಳಿಸಿ ರೈಲಿನಿಂದ ಇಳಿದ. ಮನಸ್ಸಿನಲ್ಲಿ ಎಲ್ಲೋ......

Author : Rakesh Bhagiratha.