Saturday, November 14, 2020

ಪ್ರೇಮದ ಅನ್ವೇಷಣೆ ಭಾಗ - 21


 
ಆ ಭಾಷೆಯೇ ಸಂಕೇತಿ, ಸಂಕೇತಿ ಭಾಷೆಗೆ ಲಿಪಿಯಿಲ್ಲ ಆದರೆ ಮತ್ತೂರಿನ ಅಗ್ರಹಾರದಲ್ಲಿ ಆಡುಭಾಷೆಯಾಗಿ ಪ್ರಚಲಿತದಲ್ಲಿದೆ. ಒಟ್ಟಿನಲ್ಲಿ ಹೇಳುವುದಾದರೆ ಒಂದು ವಿಶಿಷ್ಟ ಊರು ಇನ್ನೂ ತನ್ನ ಹಳೆಯ ಆಚಾರ-ವಿಚಾರ ಸಂಪ್ರದಾಯಗಳನ್ನು ಯಥಾವತ್ತಾಗಿ ಉಳಿಸಿಕೊಂಡು ಬರುತ್ತಿರುವ ಗ್ರಾಮ. ಅಲ್ಲಿನ ಸ್ಥಳೀಯ ವಿಚಾರಗಳನ್ನು ಸ್ಥಳೀಯ ಸ್ನೇಹಿತನಾದ ಸಾಗರ್ ಇಂದ ತಿಳಿದುಕೊಂಡು ತನ್ನ ರೂಮಿನ ಕಡೆ ಹೆಜ್ಜೆ ಹಾಕಿದ. ಅಂದು ಜಾನಕಿ ಅಮ್ಮನವರು ವಿಧುವಿಗೆ ಮಾತ್ರ ಊಟವನ್ನು ತಂದಿದ್ದರು. ಆದಿತ್ಯ ಹಾಗೂ ಅವರ ಸ್ನೇಹಿತರು ಇಂದು ಹೊರಗಡೆ ಊಟವನ್ನು ಮಾಡುತ್ತಾರೆ .ನೀನು ಊಟವನ್ನು ಮಾಡು ಎಂದು ಹೇಳಿ ಹೋದರು. ಸರಿ ಎಂದು ವಿಧು ತನ್ನ ಊಟವನ್ನು ಮುಗಿಸಿ ಮಲಗಿದ. 
                 ಅಂದು ರಾತ್ರಿ ಸರಿಯಾಗಿ 2:45 ಸಮಯದಲ್ಲಿ ಯಾರೋ ಬಾಗಿಲು ಬಡಿದಂತಾಯಿತು ಯಾರು ಎಂದರು ಉತ್ತರವಿಲ್ಲ ಸರಿ ನೋಡೇಬಿಡೋಣವೆಂದು ಎದ್ದುಹೋಗಿ ಬಾಗಿಲು ತೆಗೆದ. ಚಿನ್ಮಯಿ ಬಾಗಿಲ ಬಳಿ ನಿಂತಿದ್ದ ಯಾಕೆ ಈ ಸಮಯದಲ್ಲಿ ಬಾಗಿಲು ಬಡಿದದ್ದು ಎಂದು ಕೇಳಿದ ವಿಧು. ಚಿನ್ಮಯಿ ನಿನಗೆ ಒಂದು ವಿಷಯವನ್ನು ಹೇಳಬೇಕು ಮನಸ್ಸನ್ನು ಗಟ್ಟಿ ಮಾಡಿಕೋ ಎಂದ ವಿಧು ಆಯ್ತು ಹೇಳಿ ಎಂದಾಗ ಚಿನ್ಮಯ್ ಆದಿತ್ಯನಿಗೆ ಅಪಘಾತವಾಗಿದೆ ಇವಾಗ ಆಸ್ಪತ್ರೆಯಲ್ಲಿದ್ದಾನೆ ಎಂದಾಗ ವಿಧುವಿಗೆ ದಿಗ್ಭ್ರಮೆಯಾಯಿತು. 10:00 ಗಂಟೆಯ ಸಮಯದಲ್ಲಿ ಮೂರು ಜನರು ಮಾತನಾಡುತ್ತಿದ್ದ ಶಬ್ದ ಕೇಳಿಸಿತು. ಇವಾಗ ನೋಡಿದರೆ ಹೀಗೆ ಹೇಳುತ್ತಿದ್ದಾನಲ್ಲ ಎಂದೆನಿಸಿತು. ವಿಧು ಯಾವಾಗ ಎಲ್ಲಿ ಆಗಿದ್ದು ಎಂದ. ಅದಕ್ಕೆ ಚಿನ್ಮಯಿ 10.30 ರ ಸಮಯದಲ್ಲಿ ಆಗಿದೆ ಇವಾಗ ಏನು ಸಮಸ್ಯೆ ಇಲ್ಲ ಎಂದ. ವಿಧು ತಕ್ಷಣ ಆಸ್ಪತ್ರೆಗೆ ಹೊರಡಲು ಅನುವಾದ. ಆದರೆ ನೀವು ಗಾಬರಿಯಾಗುವ ಅವಶ್ಯಕತೆ ಇಲ್ಲ ಈಗ ಅವನು ಚೆನ್ನಾಗಿದ್ದಾನೆ. ನೀವು ಬೆಳಿಗ್ಗೆ ಬಂದು ನೋಡಬಹುದು ಎಂದು ಹೇಳಿದ. ಆಯ್ತು ಸರಿ ಎಂದು ಮತ್ತೆ ಹೋಗಿ ಮಲಗಲು ಹೋದರೆ ವಿಧುವಿಗೆ ನಿದ್ರೆ ಬರುತ್ತಿಲ್ಲ. ಹಲವಾರು ಪ್ರಶ್ನೆಗಳು ಮನದಲ್ಲಿ ಸುಳಿದವು.
                  ಅಪಘಾತ ಹೇಗಾಯಿತು ? ಏಕಾಯಿತು ? ಮೂರೂ ಜನರು ಒಟ್ಟಿಗೆ ಇದ್ದರಲ್ಲ ? ಅಪಘಾತವಾದಾಗ ಇವರುಗಳು ಜೊತೆಗೆ ಇರಲಿಲ್ಲವೇ ? ಅಥವಾ ಅಪಘಾತವಾದ ಕೂಡಲೇ ಅವನನ್ನು ಬಿಟ್ಟು ಬಂದರ ? ಒಬ್ಬನೇ ಹೋಗಿ ಹೇಗೆ ಅಪಘಾತಕ್ಕೀಡಾದ ? ಆದಿತ್ಯನ ಸ್ನೇಹಿತರ ನಡೆಯನ್ನು ನೋಡಿದರೆ ಇವರ ಮೇಲೆ ಅನುಮಾನ ಬರುವಂತೆ ಮಾತನಾಡುತ್ತಿದ್ದಾನೆ ? ಇವಾಗಲೇ ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸಿದರೂ ಆದಿತ್ಯನ ಆತ್ಮೀಯ ಸ್ನೇಹಿತರು ಅವನೊಟ್ಟಿಗೆ ಇದ್ದಾರೆ. ಈವಾಗ ಚೆನ್ನಾಗಿದ್ದಾನೆ ಎಂದು ಹೇಳಿದ್ದಾರೆ ನೋಡೋಣ ಬೆಳಕು ಹರಿಯಲಿ ಎಂದುಕೊಳ್ಳುವಷ್ಟರಲ್ಲಿ ಸೂರ್ಯ ಪೂರ್ವ ದಿಕ್ಕಿನಿಂದ ತನ್ನ ಕರ್ತವ್ಯವನ್ನು ಆರಂಭಿಸಿದ್ದ. ಸ್ಥಳೀಯರಿಂದ ಅವನಿಗೆ ಅಪಘಾತವಾದ ಸ್ಥಳದ ಮಾಹಿತಿ ಪಡೆದು ಹೋಗಿ ನೋಡಿದರೆ, ವಿಧುವಿನ ಅಂದಾಜು ಮೀರಿತ್ತು. ಅವನಿಗೆ ಅಪಘಾತವಾದ ರೀತಿ ವಾತಾವರಣವನ್ನು ಕಲುಷಿತಗೊಳಿಸಿತ್ತು. ರಸ್ತೆಯ ಮೇಲೆ ರಕ್ತ ನೀರಿನಂತೆ ಚೆಲ್ಲಿತ್ತು. ಓಹೋ ಇದು ಸಣ್ಣ ಅಪಘಾತವಲ್ಲ ಇದೊಂದು ದೊಡ್ಡ ಅಪಘಾತ ಎಂಬ ಅರಿವೂ ಆಯಿತು. ವಿಧು ಮತ್ತೆ ತಡಮಾಡಲಿಲ್ಲ ಅಲ್ಲಿಂದ ಸೀದಾ ಆಸ್ಪತ್ರೆಗೆ ಹೋದ ಅಲ್ಲಿ ಆದಿತ್ಯ ಸ್ನೇಹಿತರಿದ್ದರು ಅವರನ್ನು ಕೇಳಿದ ಆದಿತ್ಯ ಎಲ್ಲಿ ಎಂದು. ಐಸಿಯು ಅಲ್ಲಿದ್ದಾನೆ ಎಂದರು. ಇದೇನಪ್ಪಾ ಇದು, ಇವರು ಬೆಳಿಗ್ಗೆ ನೋಡಿದರೆ ಚೆನ್ನಾಗಿದ್ದಾನೆ ಎಂದರು ಈಗ ನೋಡಿದರೆ ಐಸಿಯುನಲ್ಲಿ ಇದ್ದಾನೆ ಎಂದು ಹೇಳುತ್ತಿದ್ದಾರಲ್ಲ ಎಂದುಕೊಂಡ. ಅಷ್ಟರಲ್ಲಿ ವೈದ್ಯರು ಆದಿತ್ಯನ ಕಡೆಯವರು ಬನ್ನಿ ಎಂದು ಕರೆದರು ಆದಿತ್ಯನ ಸ್ನೇಹಿತರಿಬ್ಬರು ವಿಧು ನೀವೇ ಹೋಗಿ ಎಂದರು. ವಿಧು ಒಳಗೆ ಹೋದ. ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಆದಿತ್ಯನಿದ್ದ.....

No comments: