Sunday, August 16, 2020

ಪ್ರೇಮದ ಅನ್ವೇಷಣೆ ಭಾಗ-9.

ಹಿರಿಯ ಮಗನ ಹೆಸರು ವಿಧು, ಕಿರಿಯ ಮಗನ ಹೆಸರು ತೇಜಸ್. ತಂದೆಯವರದು ಬೆಲೆಯನ್ನೇ ಕಟ್ಟಲಾಗದ ಶ್ರೇಷ್ಠ ವೃತ್ತಿಯಾದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು. ತಾಯಿಯವರು ಗೃಹಿಣಿ ಒಂದು ಚಿಕ್ಕ ಸಂಸಾರ ಆದರೆ ಗುಣ ವಿಶೇಷತೆಗಳು ಬೇರೆ. ವಿಧು ಹಠಮಾರಿ ಸ್ವಭಾವದ ಹುಡುಗ ತೇಜಸ್ ಮೃದುಸ್ವಭಾವದ ಹುಡುಗ ಗಾದೆಮಾತು ಹೇಳುವಂತೆ ಕಿರಿಯ ಮಕ್ಕಳು ಕಿವಿ ಕಚ್ಚಿದರು ಪ್ರೀತಿ ಎನ್ನುವಂತೆ, ಕಿರಿಯ ಮಗ ತೇಜಸ್ ಮೇಲೆ ವಿಶೇಷವಾದ ಪ್ರೀತಿ .ಆ ಪ್ರೀತಿ ಎಷ್ಟರ ಮಟ್ಟಿಗೆ ಇತ್ತೆಂದರೆ ಆಗುವ ಅನಿಷ್ಟಕ್ಕೆಲ್ಲ ವಿಧು ಕಾರಣ ಅದೃಷ್ಟಕ್ಕೆ ಎಲ್ಲಾ ತೇಜಸ್ ಕಾರಣ ಎನ್ನುವ ಮಟ್ಟಿಗೆ. ಈ ಮಟ್ಟಿನ ತಾತ್ಸರ ವಿಧುವಿಗೆ ಮನೆಯವರ ಮೇಲೆ ಪ್ರೀತಿ ಇಲ್ಲದಂತೆ ಮಾಡಿತು. ತಂದೆ-ತಾಯಿ ತಮ್ಮ ಎಲ್ಲರೂ ಇದ್ದರೂ ಇಲ್ಲದಂತಿತ್ತು ಆತನ ಜೀವನ. ಅವನ ಮನಸ್ಸಿನಲ್ಲಿ  ಗಾಡ ನೋವಿನೊಂದಿಗೆ ಮನಸ್ಸಿನಲ್ಲಿ ಯೋಚನೆ ಮಾಡುತ್ತಿದ್ದನು. 
           ಬದುಕು ಬಹಳ ವಿಚಿತ್ರ ಎಲ್ಲ ಇದ್ದು ಇಲ್ಲದಂತೆ ಇರುವುದಕ್ಕಿಂತ ಇಲ್ಲದಂತೆ ಇರುವುದು ಉತ್ತಮ ಎಂದು ಮನಸ್ಸಿನಲ್ಲೇ ನೊಂದು ತಾನೇ ಸಮಾಧಾನಪಡಿಸಿ ಕೊಳ್ಳುತ್ತಿದ್ದನು. ಇದೆಲ್ಲದರ ನಡುವೆ ಅವನದು ವಿದ್ಯಾಭ್ಯಾಸದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಏನೂ ಇರಲಿಲ್ಲ. ಹಾಗಾಗಿ ಇವನು ಅವರ ತಂದೆ-ತಾಯಿಯ ಪಾಲಿಗೆ ದಡ್ಡ ಶಿಖಾಮಣಿಯಂತೆ ಕಾಣುತ್ತಿದ್ದನು.  ಇನ್ನು ಅವರ ತಂದೆ ಯಾವಾಗಲೂ ಋಣಾತ್ಮಕ ಅಂಶವನ್ನು ನೋಡುತ್ತಿದ್ದರಿಂದ ಆ ಋಣಾತ್ಮಕ ಪರಿಣಾಮವನ್ನು ವಿಧು ಪೂರ್ಣ ಪ್ರಮಾಣದಲ್ಲಿ ಎದುರಿಸಬೇಕಾಯಿತು. ಮನೆಗೆ ಬಂದ ನೆಂಟರು ಸ್ನೇಹಿತರ ಮುಂದೆ ವಿಧುವನ್ನು ತೆಗಳುವುದು, ತೇಜಸ್ಸನ್ನು ಹೊಗಳುವುದು ಇವರ ಕಾಯಕ ಎನ್ನುವಂತೆ ವರ್ತಿಸುತ್ತಿದ್ದರು. ವಿಧುವಿನ ಜೀವನದಲ್ಲಿ ಪ್ರೀತಿ ತೋರಿಸುವ ವ್ಯಕ್ತಿಗಳು ಚಿಕ್ಕವಯಸ್ಸಿನಿಂದಲೇ ಅವನಿಗೆ ಸಿಗಲಿಲ್ಲ ಅವನ ದುರದೃಷ್ಟವೋ ಏನೋ ಭಾವನೆಗಳು ಅರಳುವ ಸಮಯದಲ್ಲಿ ಭಾವನೆಗಳು ಸತ್ತು ಹೋಗಿದ್ದವು. ಬದುಕು ಬೇಡ ಎನ್ನುವಷ್ಟುರ ಮಟ್ಟಿಗೆ ಜಿಗುಪ್ಸೆ ಪ್ರತಿ ಹಂತದಲ್ಲೂ ಮೂದಲಿಕೆಯ ಮಾತುಗಳು, ಅವನ ತಂದೆ-ತಾಯಿ ನಡೆಸಿಕೊಳ್ಳುತ್ತಿದ್ದ ರೀತಿ ನಾನು ಇವರ ಮಗನೋ ಅಲ್ಲವಾ ಎಂದು ಅನುಮಾನ ಉಂಟುಮಾಡುವಂತೆ ಇರುತ್ತಿತ್ತು. ಅವರ ನಡವಳಿಕೆಗಳು ವಿಧುವಿಗೆ ಒಂಟಿತನದಿಂದ ಬದುಕುವ ಪಾಠವನ್ನು ಕಲಿಸಿ ಬಿಟ್ಟಿದ್ದವು.
                  ಎಲ್ಲಾ ಹೇಳುತ್ತಾರೆ ಕೆಟ್ಟ ಮಕ್ಕಳು ಹುಟ್ಟಬಹುದು. ಆದರೆ ಕೆಟ್ಟ ತಂದೆ-ತಾಯಿ ಇರುವುದಿಲ್ಲವೆಂದು ಆದರೆ ವಿಧುವಿಗೆ ಈ ಮಾತು ಎಷ್ಟು ಸತ್ಯವಿರಬಹುದು ಎಂಬ ಜಿಜ್ಞಾಸೆ. ಪ್ರತಿಬಾರಿಯೂ ಇವನು ದಡ್ಡ ಶಿಖಾಮಣಿ ಇವನು ಹತ್ತನೇ ತರಗತಿಯನ್ನು ಕೂಡ ಪಾಸ್ ಮಾಡಲಾರ ಎಂದು ತಿಳಿದಿದ್ದ ಹಾಗೂ ಎಲ್ಲರ ಮುಂದೆ ಮೂದಲಿಸುತ್ತಿದ್ದ ಅವನ ತಂದೆ ತಾಯಿಗೆ ಅಚ್ಚರಿಯಾಗುವಂತೆ ಹತ್ತನೆಯ ತರಗತಿಯಲ್ಲಿ ಉತ್ತೀರ್ಣನಾದ. ತಾನು ಅನುಭವಿಸುತ್ತಿದ್ದ ಮೂದಲಿಕೆ ಅಪಹಾಸ್ಯ ಇಂತಹದನ್ನೆಲ್ಲ ವಿರೋಧಿಸುತ್ತಿದ್ದ ಕಾರಣಕ್ಕೋ ಏನೋ, ಸಹಪಾಠಿಗಳು ಬೇರೆಯವರಿಗೆ ಮಾಡುತ್ತಿದ್ದ ಅಪಹಾಸ್ಯ ,ಅವಮಾನ ಕಟುವಾಗಿ ವಿರೋಧಿಸುತ್ತಿದ್ದ .ಮನುಷ್ಯರ ಹೊಟ್ಟೆಕಿಚ್ಚಿನ ಗುಣ ಇವನನ್ನು ಯಾವಾಗಲೂ ಗೊಂದಲದಲ್ಲಿ ಇರುವಂತೆ ಮಾಡುತ್ತಿತ್ತು. ಬೇರೆಯವರನ್ನ ಮೂದಲಿಸಿ ಅಪಹಾಸ್ಯ ಮಾಡಿ ಇವರು ಗಳಿಸುವುದಾದರೂ ಏನನ್ನು ಎಂಬ ಪ್ರಶ್ನೆ ಕಾಡುತ್ತಿತ್ತು .10ನೇ ತರಗತಿ ಮುಗಿದ ಮೇಲೆ 11ನೇ ತರಗತಿ ವಿಜ್ಞಾನ ವಿಷಯದಲ್ಲಿ ಪದವಿ ಪೂರ್ವ ಕಾಲೇಜಿಗೆ ಸೇರಿಕೊಂಡ. ಅಲ್ಲಿ ತನ್ನ ಬದುಕಿನ ಹೊಸ ಚಿಂತನೆಗಳು ಹೊಸ ವಿಚಾರಗಳು ಹೊಸ ಕನಸುಗಳೊಂದಿಗೆ ತನ್ನ ಬದುಕಿನ ಯಾತ್ರೆಯನ್ನು ಹೊಸ ಹುಮ್ಮಸ್ಸಿನಿಂದ ಮುಂದುವರಿಸಿಕೊಂಡು ಹೋಗುವುದಾಗಿ ನಿಶ್ಚಯಿಸಿಕೊಂಡು, ಹೊಸ ಬದುಕಿಗೆ ತನ್ನನ್ನು ತಾನು ತೆರೆದುಕೊಂಡು ಮುನ್ನಡೆದ. ಆದರೆ ಅವನ ಮನೆಯಲ್ಲಿ ಯಾವ ಬದಲಾವಣೆಯನ್ನು ಕಾಣಲಿಲ್ಲ ಮನೆಯಲ್ಲಿ ಮಕ್ಕಳು ದೊಡ್ಡವರಾದಮೇಲೆ ಮಕ್ಕಳಿಗಿಂತ ಹೆಚ್ಚಾಗಿ ಸ್ನೇಹಿತರಂತೆ ಕಾಣಬೇಕು ಎಂಬ ಅರಿವಿಲ್ಲದ ಅವರ ತಂದೆ ಇನ್ನೂ ಅವನನ್ನು ಹೊಡೆಯುವುದು ಬಡಿಯುವುದು ಮುಂದುವರಿಸಿದರು. ಇನ್ನು ಇವರ ನಡವಳಿಕೆ ಇಂದ ನೋವನ್ನು ಅನುಭವಿಸಿ ಅವನ ಸಹನೆಯ ಕಟ್ಟೆ ಒಡೆದು ಹೋಗಿತ್ತು. ಇದೇ ರೀತಿ ಮುಂದುವರೆದರೆ ನನ್ನನ್ನು......

No comments: