Wednesday, November 11, 2020

ಪ್ರೇಮದ ಅನ್ವೇಷಣೆ ಭಾಗ - 20

ಇಬ್ಬರು ಸೇರಿ ಒಂದು ಸಂಜೆ ದೇವಸ್ಥಾನದ ಹತ್ತಿರ ಹೋದರು. ಪುರಾತನ ದೇವಸ್ಥಾನ ಜೀರ್ಣೋದ್ಧಾರದ ನಂತರ ತನ್ನ ಹಳೆಯ ಸೊಬಗನ್ನು ಕಳೆದುಕೊಂಡಿದೆ. ಆದರೆ ಪ್ರಕೃತಿಯ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲದು ಒಂದು ಕಡೆ ತುಂಗಾನದಿಯ ಭೋರ್ಗರೆತ ಮತ್ತೊಂದು ಕಡೆ ಶಾಂತಚಿತ್ತನಾಗಿ ಕುಳಿತುಕೊಂಡ ಬಸವ, ದೇವಸ್ಥಾನದ ಒಳಗಡೆ ಅದ್ಭುತವಾದ ಶಿವಲಿಂಗ, ದೇವಸ್ಥಾನಕ್ಕೆ ಬೀಗ ಹಾಕಿದರು ಕಿಂಡಿಯಿಂದ ದೇವರ ದರ್ಶನ ಪಡೆದು ಕತ್ತಲು ಕವಿಯುತ್ತಲೇ ವಾಪಸ್ ಮತ್ತೂರಿಗೆ ಬಂದರು. ಜಾನಕಿ ಅಮ್ಮನವರು ಹೆದರಿಸಿ ದಂತೆ ಅಲ್ಲಿ ಯಾವ ಅನುಭವವೂ ವಿಧುವಿಗೆ ಆಗಲಿ ಆದಿತ್ಯನಿಗೆ ಆಗಲಿ ಆಗಲಿಲ್ಲ. ಮತ್ತೆ ಮುಂಜಾನೆ ಬೇಗ ಎದ್ದು ತನ್ನ ಕೆಲಸಕ್ಕೆ ಹೋದ ವಿಧು ಮಧ್ಯಾಹ್ನದ ಸಮಯಕ್ಕೆ ಮತ್ತೂರಿಗೆ ವಾಪಸ್ಸಾದ, ಅಂದು ಆದಿತ್ಯ ಹೂರಗಡೆ ಊಟಕ್ಕೆ ಹೋಗೋಣ ಬನ್ನಿ ಎಂದು ಕರೆದ, ನಡೆಯಿರಿ ಯಾವುದಾದರೂ ಹೊಸರುಚಿಯನ್ನು ನೋಡೋಣವೆಂದು ಹೋಗಿ ಊಟ ಮುಗಿಸಿ ಬಂದರು. ಮಲೆನಾಡಿನ ವಿಶೇಷವಾದ ಉಂಡೆ ಗಡಬು ಆಗು ಚಟ್ನಿ ಅವರ ಊಟದ ಸ್ವಾದವನ್ನು ಇನ್ನು ಹೆಚ್ಚಿಗೆ ಮಾಡಿತ್ತು. ವಿಧು ಆದಿತ್ಯನ ಪರಿಚಯವಾಗಿ ಇನ್ನು ನಾಲ್ಕು ದಿನಗಳು ಕಳೆದಿದ್ದವು. ಅಷ್ಟರಲ್ಲಿ ಆದಿತ್ಯನ ಸ್ನೇಹಿತರು ಆಂಧ್ರದಿಂದ ಬಂದರು ಅವರನ್ನು ಶಿವಮೊಗ್ಗದಲ್ಲಿ ಬರಮಾಡಿಕೊಳ್ಳಲು ಆದಿತ್ಯನನ್ನು ವಿಧುವನ್ನು ಒಟ್ಟಿಗೆ ಕರೆದುಕೊಂಡು ಹೋದ, ಆತನ ಸ್ನೇಹಿತರನ್ನು ಪರಿಚಯ ಮಾಡಿಕೊಟ್ಟ , ಒಬ್ಬನ ಹೆಸರು ಚಿರಾಗ್ ಮತ್ತೊಬ್ಬನ ಹೆಸರು ಚಿನ್ಮಯ ಎಲ್ಲರೂ ಸೇರಿ ಕೊಡಚಾದ್ರಿಗೆ ಹೋಗಲು ಯೋಜನೆಯನ್ನು ರೂಪಿಸಿದರು. ಆ ಯೋಜನೆಯಿಂದ ವಿಧು ದೂರವುಳಿದಿದ್ದ ಅವನಿಗೆ ಅವನ ಕೆಲಸಗಳನ್ನು ಪೂರ್ಣಪ್ರಮಾಣದಲ್ಲಿ ಮುಗಿಸಲು ಸಮಯದ ಅಭಾವವಿತ್ತು. 
                    ಅಷ್ಟರಲ್ಲಿ ಸಾಗರ್ ವಿಧುವಿನ ಪರಿಚಯ ಸ್ನೇಹದ ಕಡೆ ತಿರುಗಿತು. ವಿಧು ತನ್ನ ಸ್ನೇಹಿತನಾದ ಸಾಗರ್ ಅವರೊಟ್ಟಿಗೆ ಸಂಜೆಯ ವಾಯು ವಿಹಾರಕ್ಕೆ ಇಲ್ಲಿ ಎಲ್ಲಿ ಹೋಗುವುದು ಉತ್ತಮ ಎಂದು ಕೇಳಿದಾಗ ಸಾಗರ್ ಇಂದು ಸಂಜೆ ಇಬ್ಬರು ಒಟ್ಟಿಗೆ ಹೋಗೋಣ, ನೀವು ಆ ಜಾಗವನ್ನು ಖಂಡಿತ ಇಷ್ಟಪಡುತ್ತೀರಾ ಎಂದು ಹೇಳಿದ. ಸಾಗರ್ ಹೇಳಿದ್ದನ್ನು ಕೇಳಿದ ವಿಧು ವಿಶೇಷ ಜಾಗವೇ ಇರಬೇಕು ಅನಿಸುತ್ತದೆ ನೋಡೋಣ ಎಂದು ಸುಮ್ಮನಾದ. ಸಂಜೆಯಾಗುತ್ತಲೇ ಸಾಗರ್ ವಿಧುವನ್ನು ಕರೆದುಕೊಂಡು ಮತ್ತೂರು-ಹೊಸಳ್ಳಿ ನಡುವೆ ಇರುವ ತುಂಗಾನದಿಯಲ್ಲಿ ನಿರ್ಮಿಸಿರುವ ಕಾಲು ಹೊಳೆಗೆ ಸಂಜೆಯ ವಿಹಾರಕ್ಕೆ ಕರೆದುಕೊಂಡು ಹೋದ. ತುಂಗಾನದಿಯಲ್ಲಿ ಇರುವ ಕಾಲು ಹೊಳೆಗೆ ಹೋದರು. ಪ್ರಕೃತಿಯ ಸೌಂದರ್ಯವನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ತುಂಗಾ ನದಿಯ ಎರಡು ತಟದಲ್ಲಿ ಇರುವ ಗ್ರಾಮಗಳು ಮತ್ತೂರು-ಹೊಸಳ್ಳಿ 2 ಗ್ರಾಮಗಳ ಸಂಪರ್ಕವೇ ಆ ಕಾಲು ಹೊಳೆ ಸೇತುವೆ . ಪ್ರಕೃತಿಯ ರಮಣೀಯ ದೃಶ್ಯ ಎಂಥವರನ್ನು ತನ್ನತ್ತ ಸೆಳೆಯಬಲ್ಲದು ಸಂಸ್ಕೃತ ಗ್ರಾಮ ಮತ್ತೂರು, ಹೊಸಳ್ಳಿ ಗಮಕ  ಗ್ರಾಮ ಸಂಸ್ಕೃತವೆಂದರೆ ಗ್ರಾಮದ ಜನರು ಸಂಸ್ಕೃತವನ್ನು ಮಾತನಾಡುತ್ತಾರೆ ಅಲ್ಲಿ ಸಣ್ಣವರಿಂದ ದೊಡ್ಡವರ ತನಕ ಸಂಸ್ಕೃತ ಸಂಭಾಷಣೆಯನ್ನು ಆಡುಭಾಷೆಯಾಗಿ ಬಳಸುತ್ತಾರೆ. ಗಮಕ ಗ್ರಾಮವೆಂದರೆ ಗಮಕ ಒಂದು ವಿಶಿಷ್ಟ ಪ್ರಕಾರದ ಕಲೆ ರಾಮಾಯಣ ಮಹಾಭಾರತವನ್ನು ಆ ಕಲೆಯ ಮುಖಾಂತರ ಮುಂದಿನ ಪೀಳಿಗೆಗೆ ತಿಳಿಸುವ ಒಂದು ಕ್ರಿಯೆ ಅಂತಹ ಗ್ರಾಮದಲ್ಲಿ ವಾಸಮಾಡುವುದು ಒಂದು ಚೈತನ್ಯವನ್ನು ಕೊಡುತ್ತದೆ. ಯಾವುದೇ ಊರಿಗೆ ಹೋದರೂ ಊರಿನ ವಿಶೇಷ ತಿಳಿಯುವುದು ವಿಧುವಿನ ಅಭ್ಯಾಸ ಮತ್ತೂರು ಹೇಗೆ ಅಸ್ತಿತ್ವಕ್ಕೆ ಬಂತು ಎಂದು ಅಲ್ಲಿಯ ಹಿರಿಯರನ್ನು ವಿಚಾರಿಸಿದಾಗ ಇನ್ನೂ ಹಲವು ವಿಚಾರಗಳು ತಿಳಿದು ಬಂದವು ಹಿಂದೆ ದಕ್ಷಿಣ ಭಾರತದಲ್ಲಿ ಇದ್ದ ಹಿಂದೂ ಸಾಮ್ರಾಜ್ಯ ವಿಜಯನಗರ ಕಾಲದಲ್ಲಿ ರಾಜರು ಬ್ರಾಹ್ಮಣರಿಗೆ ಮತ್ತೂರಿನ ಅಗ್ರಹಾರವನ್ನು ನೀಡಿದರು ಎಂದು ತಿಳಿದುಬಂತು. ಮತ್ತೂರಿನ ಇನ್ನೂ ಒಂದು ವಿಶೇಷವೆಂದರೆ ಅಲ್ಲಿ ಕರ್ನಾಟಕದ ತುಳುನಾಡಿನಲ್ಲಿರುವ ತುಳು ಭಾಷೆಯಂತಹ ಮತ್ತೊಂದು ಭಾಷೆ ಅಸ್ತಿತ್ವದಲ್ಲಿರುವುದು ತಿಳಿದು ಆಶ್ಚರ್ಯವಾಯಿತು. ಆ ಭಾಷೆಯೇ.......

2 comments:

Manjunatha N R said...

Padagala shaili adbhutha 👏👏👏

Unknown said...

dhanyavadgalu.