ಅಲ್ಲಿಂದ ಸಂಬಂಧಗಳ ಮೇಲಿನ ನಂಬಿಕೆಯು ಸಡಿಲವಾಗುತ್ತ ಹೋಯಿತು. ಗುರುಗಳಿಗೆ ಆದ ಅವಮಾನ ನನಗೆ ಆದಂತೆ ಎಂದು ತಿಳಿದು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಿ ಮತ್ತು ತರಗತಿಗೆ ಮೊದಲನೆಯವನಾಗಿ ಬಂದನು. ಎಲ್ಲರಿಗೂ ಉತ್ತರ ಎನ್ನುವಂತೆ ಕಾಲೇಜ್ ಬಿಡುವ ಸಮಯದಲ್ಲಿ ಗುರುವಿನ ಆಶೀರ್ವಾದದೊಂದಿಗೆ ಸಿ.ಇ.ಟಿ ಯಲ್ಲಿ ಉತ್ತಮ ಅಂಕಗಳಿಸಿ ಮೈಸೂರಿನಲ್ಲಿ ಇಂಜಿನಿಯರಿಂಗ್ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಸಫಲನಾದ, ಆದರೆ ಮತ್ತೆ ಜೀವನದಲ್ಲಿ ಯಾರ ಸಂಬಂಧವೂ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರಿಂದ ಮತ್ತೆ ಯಾರೊಟ್ಟಿಗೂ ಸ್ನೇಹವನ್ನು ಮಾಡಿಕೊಳ್ಳಲಿಲ್ಲ. ಎಲ್ಲರನ್ನೂ ಸಮನಾಗಿ ಕಾಣುವ ಅವನ ನಿರ್ಧಾರ ಅವನನ್ನು ಒಂಟಿಯಾಗಿ ನಿಲ್ಲಿಸಿತ್ತು. ಈ ಬಾರಿ ವಿಧುವಿನ ಮನಸ್ಸು ಇನ್ನೂ ಗಟ್ಟಿಯಾಗಿ ಕಲ್ಲಿನಂತೆ ಬಲಿಷ್ಠವಾಗಿ ಇರುವಂತೆ ಆಗಿತ್ತು. ಸಾಕು ಇನ್ನು ನನ್ನ ಹಣೇಬರದಲ್ಲಿ ಪ್ರೀತಿ ಸಿಗುವ ಹಾಗೆ ಬರೆದಿಲ್ಲ ಅನಿಸುತ್ತದೆ. ತಿಳುವಳಿಕೆ ಬಂದಾಗಿನಿಂದ ಮನೆಯವರ ಪ್ರೀತಿ ಕಾಣದ ಜೀವ ಹೊರಗಿನ ನಾಟಕೀಯ ಸ್ನೇಹವನ್ನು ನಿಜವಾದ ಕಾಳಜಿ ಹಾಗೂ ನಿಷ್ಕಲ್ಮಶವಾದ ಪ್ರೀತಿ ಎಂದು ತಿಳಿದ ಮೂರ್ಖತನಕ್ಕೆ ಬೇಸರವಾಯಿತು. ವಿಧು ಮತ್ತು ತನ್ನ ಬಗ್ಗೆ ತಾನೇ ಪ್ರಶ್ನೆ ಮಾಡಿಕೊಳ್ಳಲು ಆರಂಭಿಸಿದ, ಬದುಕನ್ನು ಸಮಾಜಕ್ಕೆ ಮೀಸಲಿಡುವ ತೀರ್ಮಾನ ಮಾಡಿರುವ ನನಗೆ ಏಕೆ ವ್ಯಕ್ತಿಗತ ಪ್ರೀತಿಯ ಅವಶ್ಯಕತೆ ಇದೆ ? ಎಂದು ಅವನಲ್ಲಿ ಅವನೇ ಕೇಳಿಕೊಂಡನು. ಇಲ್ಲ ಅದರ ಅವಶ್ಯಕತೆ , ಎಂದು ತನ್ನನ್ನೆ ತಾನು ಸಮಾಧಾನಪಡಿಸಿ ಕೊಂಡನು. ಇಂಜಿನಿಯರಿಂಗ್ ಓದುತ್ತಿರಬೇಕಾದರೆ ಸರ್ಕಾರಿ ಕೆಲಸದ ಜಾಹೀರಾತನ್ನು ನೋಡಿದ ಅವನು ಮನೆಯಲ್ಲಿನ ಹಂಗಿನ ಊಟಕ್ಕಿಂತ ದುಡಿಮೆಯ ಊಟವೇ ಮೇಲೆಂದು ಕೆಲಸಕ್ಕೆ ಅರ್ಜಿ ಹಾಕಿದ. ಅವನು ಅದೃಷ್ಟವೋ ಏನೋ ಎನ್ನುವಂತೆ ಅಲ್ಲಿ ಆಯ್ಕೆಯಾದ. ಆದರೆ ಭ್ರಷ್ಟಾಚಾರ ವಿರುದ್ಧದ ಹೋರಾಟ ಅವನನ್ನು ಕೆಲಸದಲ್ಲಿ ತುಂಬಾ ದಿನಗಳ ಕಾಲ ಉಳಿಯುವಂತೆ ಅವಕಾಶ ಮಾಡಿಕೊಡಲಿಲ್ಲ.
ಕೆಲಸಕ್ಕೆ ರಾಜೀನಾಮೆ ನೀಡಿ ಅಲ್ಲಿಂದ ಹೊರನಡೆದ. ಇತ್ತ ಇಂಜಿನಿಯರಿಂಗ್ ಪೂರ್ಣಗೊಳಿಸದೆ ಅತ್ತ ಕೆಲಸವೂ ಇಲ್ಲದೆ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಂತಹ ಪರಿಸ್ಥಿತಿಯಲ್ಲೂ ತನ್ನ ಬದುಕಿನ ಶಿಸ್ತನ್ನು ಬಿಡದ ಅವನು ಮತ್ತೆ ಸಾಮಾಜಿಕ ಜೀವನದ ಕಡೆ ಮುಖ ಮಾಡಿದ. ಸಮಾಜಸೇವೆಯನ್ನು ಮಾಡಬೇಕು ಎಂದು ಸಮಾಜದಲ್ಲಿ ಹಲವಾರು ಸೇವಾಕಾರ್ಯವನ್ನು ಮಾಡಿಕೊಂಡ ಬಂದಿದ್ದರಿಂದ ಅವನಿಗೆ ಸಾಮಾಜಿಕ ಜನಮನ್ನಣೆ ಇತ್ತು. ಇದರ ಮಧ್ಯೆ ಇಂಜಿನಿಯರಿಂಗ್ ಮಾಡುವಾಗ ಆಕಸ್ಮಿಕವಾಗಿ ಸಂಪರ್ಕಕ್ಕೆ ಬಂದ ರಾಷ್ಟ್ರೀಯ ವಿಚಾರಗಳಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ. ಇದರ ಮಧ್ಯೆ ಅವನಿಗೆ ಒಂದು ಕರೆಬಂತು ಅದು ರಾಜ್ಯನಾಯಕರ ಕರೆಯಾಗಿತ್ತು. ನಿಮ್ಮಂತಹ ಯುವಕರು ನಮ್ಮ ರಾಷ್ಟ್ರಕ್ಕೆ ಅವಶ್ಯಕತೆಯಿದೆ. ರಾಷ್ಟ್ರೀಯವಾದ ವಿಚಾರಗಳನ್ನು ಮನೆಮನೆಗೆ ತಲುಪಿಸಲು ನಿಮ್ಮ ಅವಶ್ಯಕತೆ ಇದೆ ಬನ್ನಿ ಎಂದು ಕರೆದರು. ವಿಧು ಸಂತೋಷದಿಂದ ಒಪ್ಪಿದ. ಬದುಕನ್ನು ಇನ್ನು ಸಾರ್ವಜನಿಕ ಜೀವನಕ್ಕೆ ಮೀಸಲಿಡಬೇಕೆಂದು ನಿರ್ಧರಿಸಿ ಪ್ರಯಾಣಿಸುತ್ತಿದ್ದ ವಿಧು, ಬದುಕಿನ ಪುಟವನ್ನು ತಿರುವಿ ಹಾಕಿ ಇನ್ನೇನು ನಿದ್ರೆಯ ಮಂಪರಿನಿಂದ ಸಂಪೂರ್ಣವಾಗಿ ನಿದ್ರೆಗೆ ಜಾರಬೇಕು ಅಷ್ಟರಲ್ಲೇ ಯಾರೋ ಶಿವಮೊಗ್ಗ ಬಂತು ಬನ್ನಿ ಎಂದು ಕರೆದಂತೆ ಭಾಸವಾಯಿತು. ಯಾರು ಎಂದು ನೋಡಿದರೆ ಬಸ್ ಕಂಡಕ್ಟರ್ ಕೊನೆಯ ನಿಲ್ದಾಣ ಎಲ್ಲರೂ ಇಳಿಯಲು ಬನ್ನಿ ಎಂದು ಕೂಗುತ್ತಿದ್ದರು. ಮಂಪರು ನಿದ್ರೆಯಿಂದ ಎದ್ದ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಶಿವಮೊಗ್ಗದ ಬಸ್ಟ್ಯಾಂಡಿನಲ್ಲಿ ಬಸ್ ನಿಂತಿತ್ತು. ವಿಧುವನ್ನು ಶಿವಮೊಗ್ಗಕ್ಕೆ ಕಳುಹಿಸಿ ಕೊಟ್ಟ ವರ ಫೋನ್ ನಂಬರ್ ಗೆ ಕರೆ ಮಾಡಿದ ಅವರು ಒಂದು ನಂಬರ್ ಕೊಟ್ಟರು ಆ ನಂಬರ್ಗೆ ಕರೆ ಮಾಡಿದಾಗ ಆ ಕಡೆಯಿಂದ ಹೇಳಿ ನಾನು ಕೃಷ್ಣ ಮಾತನಾಡುತ್ತಿರುವುದು ನಿಮ್ಮ ಬಗ್ಗೆ ನಾರಾಯಣ್ ಅವರು ಎಲ್ಲ ಹೇಳಿದ್ದಾರೆ ಇನ್ನು 20 ನಿಮಿಷ ಕಾಯಿರಿ ನಾನು ನಿಮ್ಮನ್ನು ಕರೆದೊಯ್ಯುತ್ತೇನೆ ಎಂದು ಹೇಳಿದರು. ಇನ್ನು 20 ನಿಮಿಷ ಹೇಗಿದ್ದರೂ ಅವರು ಬರುವುದಿಲ್ಲ ನೋಡೋಣ ಇಲ್ಲಿನ ಜನರು ಹೇಗೆ ಎಂಬ ಕುತೂಹಲದಿಂದ ಸುಮ್ಮನೆ ಒಂದು ಬಸ್ ನಿಲ್ದಾಣ ಹತ್ತಿರವಿರುವ ಬೀದಿಗೆ ಹೋರಾಟ.......
No comments:
Post a Comment