Thursday, July 23, 2020

ಪ್ರೇಮದ ಅನ್ವೇಷಣೆ ಭಾಗ-7

ಮನಸ್ಸಿನಲ್ಲಿ ಎಲ್ಲೋ ಪ್ರತಿಯೊಂದುನ್ನು ಪಡೆಯಲು ಅದೃಷ್ಟ ಮಾಡಿರಬೇಕು ಎಂದು ಕೆಲವರು ಹೇಳುವ ಮಾತು ಸತ್ಯವೆನಿಸಿತು. ರೈಲಿನಿಂದ ಇಳಿದು ನೇರವಾಗಿ ರೈಲಿನ ವಿಚಾರಣೆಯ ತಿಳಿಯುವ ಸಲುವಾಗಿ ಅಲ್ಲಿದ್ದವರನ್ನು ಕೇಳಿದ ಅವರು ಶಿವಮೊಗ್ಗದ ಕಡೆ ಸಂಜೆಯತನಕ ಯಾವುದೇ ರೈಲು ಗಾಡಿಗಳು ಇರುವುದಿಲ್ಲ ಎಂದರು. ಬೀರೂರಿನಿಂದ ಬಸ್ ನಿಲ್ದಾಣಕ್ಕೆ ಒಂದುವರೆ ಕಿಲೋಮೀಟರ್ ದೂರ, ಬೇಸಿಗೆಯ ಬಿಸಿಲು ಬೇರೆ, ಬಿಸಿಲು ಕಣ್ಣಿಗೆ ರಾಚುತ್ತಿತ್ತು . ಆಟೋಗಾಗಿ ಕಾದರೂ ಒಂದು ಆಟೋ ಬಾರದೆ ಹೋಯಿತು. ಇದ್ದ ಎರಡು ಆಟೋಗಳು ಮೊದಲೇ ಬುಕ್ ಆಗಿದ್ದವು. ರೈಲು ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಸಾಗಲು ಬೇರೆ ಅವಕಾಶವಿಲ್ಲದ ಕಾರಣ ವಿಧು ತನ್ನ ಮಣಬಾರದ ಬ್ಯಾಗಿನೊಂದಿಗೆ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಲು ಶುರು ಮಾಡಿದ, ಬರುವ ದಾರಿಯಲ್ಲಿ ಬಹಳ ಬಾಯಾರಿಕೆಯಾಗಿ ನೀರಿನ ಬಾಟಲ್ ನಿಂದ ನೀರು ಕುಡಿಯಲು ತೆಗೆದರೆ ನೀರು ಕೂಡ ಸಣ್ಣ ಪ್ರಮಾಣದ ಬಿಸಿಯಾಗಿದ್ದ ಅನುಭವ.  ಅಬ್ಬಾ ಎಂತಹ ಬಿಸಿಲಿನ ಝಳ ಎಂದುಕೊಂಡು ಮುಂದೆ ಹೆಜ್ಜೆ ಇಡಬೇಕಾದರೆ ವಿಧುವಿನ ಗೆಳೆಯನಾದ ಅನಿಕೇತ ಸಿಕ್ಕಿದ.
            ವಿಧು ನೀನೇನು ಇಲ್ಲಿ ಎಂದು ಕೇಳಿದ ? ವಿಧು ತಮಾಷೆಗಾಗಿ ಮದುವೆಯ ಪ್ರವಚನ ಗುಂಗಿನಿಂದ ಹೊರಬಂದಿರಲಿಲ್ಲದವನ ಆಗಿದ್ದರಿಂದ ಇಲ್ಲೇ ಮದುವೆಯಾಗಲು ಹೆಣ್ಣು ನೋಡಲು ಬಂದಿದ್ದೇನೆ ಎಂದು ತಮಾಷೆ ಮಾಡಿದ. ಅದಕ್ಕೆ ನಕ್ಕ ಅನಿಕೇತ್ ತುಂಬಾ ದಿನಗಳ ನಂತರ ಸಿಕ್ಕಿದಿಯಾ ಬಾ ಏನಾದರೂ ತಿಂಡಿಯನ್ನು ತಿಂದು ಕಾಫಿಯನ್ನು ಕುಡಿಯೋಣ ಎಂದ. ವಿಧು ಕೂಡ ತುಂಬಾ ದಿನಗಳ ನಂತರ ಸಿಕ್ಕ ಸ್ನೇಹಿತನ ಖುಷಿಗಾಗಿ ಸರಿ ನಡಿ ಹೋಗೋಣವೆಂದ. ಅನಿಕೇತ್ ತನ್ನ ಬೈಕಿನಲ್ಲಿ ಮಣಭಾರದ ಬ್ಯಾಗನ್ನು ಇಟ್ಟುಕೊಂಡು ಕೇಳಿದ ಹೆಣ್ಣು ನೋಡಲು ಬಂದೆ ಎಂದು ಹೇಳಿದೆ ,ನೋಡಿದರೆ ಇಷ್ಟು ದೊಡ್ಡದಾದ ಭಾರವಾದ ಬ್ಯಾಗನ್ನು ಇಟ್ಟುಕೊಂಡಿದಿಯಲ್ಲ ಎಂದ. ಅವನ ಮಾತಿಗೆ ನಕ್ಕ ವಿಧು ಅಯ್ಯೋ ಸುಮ್ಮನೆ ಹೇಳಿದೆ ಮಾರಾಯ ಎಂದ. ನಾನು ಹೌದು ಅಂದುಕೊಂಡೆ ಇಷ್ಟು ದೊಡ್ಡದಾದ ಬ್ಯಾಗನ್ನು ಹಾಕಿಕೊಂಡು ಯಾರು ಹೆಣ್ಣನ್ನು ನೋಡಲು ಬರುತ್ತಾರೆ ಎಂದು ? ಆದರೂ ನೀನು ತುಂಬಾ ಗಂಭೀರ ವ್ಯಕ್ತಿ ಅಲ್ಲವೇ ಹಾಗಾಗಿ ಇದ್ದರೂ ಇರಬಹುದು ಎಂದು ಅಂದುಕೊಂಡೆ ಎಂದ ನಸುನಕ್ಕ ವಿಧು ಯಾರಾದರೂ ಹೆಣ್ಣು ನೋಡಲು ಹೋಗುವವರು ಒಂಟಿಯಾಗಿ ಅದು ಮಣಬಾರದ ಬ್ಯಾಗಿನೊಂದಿಗೆ ಬರುವುದುಂಟಾ ?  ಎಂದು ಹೇಳುತ್ತಾ ಸರಿ ಬಿಡು ಮತ್ತೆ ಏನು ಸಮಾಚಾರ ಎಂದು ಕೇಳಿದ. ಅದಕ್ಕೆ ಅನಿಕೇತ್ ನನ್ನದೇನು ಇಲ್ಲ ಎಲ್ಲಾ ನೀನೆ ಹೇಳಬೇಕು ಬೆಂಗಳೂರು ಹುಡುಗ ಎಂದು ಮಾತು ಮುಂದುವರಿಸಿದ. ಅನಿಕೇತ್ ನಾನೇನು ನಮ್ಮ ಊರಿನಲ್ಲಿ ಬಂದು ಸೆಟಲ್ ಆಗಿದ್ದೀನಿ. ನೀನು ಇನ್ನೂ ಲೋಕ ಸಂಚಾರ ಮಾಡಿಕೊಂಡು ಇದ್ದಿಯೋ ಅಥವಾ ಎಲ್ಲಾದರೂ ಒಂದು ಕಡೆ ಬದುಕು ಕಟ್ಟಿ ಕೊಂಡಿದ್ದೀಯಾ ? ಎಂದು ಕೇಳಿದ.  ವಿಧುವಿನ ನಗುವನ್ನು ನೋಡಿದ ಕೂಡಲೇ ಅದರಲ್ಲೂ ವಿಧವಿನ ಮುಗುಳು ನಗುವಿನ ಹಿಂದೆ ನೂರಾರು ಅರ್ಥವನ್ನು ಹುಡುಕುವ ಅನಿಕೇತ್ ಇನ್ನೂ ಒಂದು ಕಡೆ ನೆಲೆ ನಿಂತಿಲ್ಲ ಅನಿಸುತ್ತಿದೆ ಎಂದು ನೇರವಾಗಿ ಹೇಳಿದ. ವಿಧು ತನ್ನ ನಗುವಿನೊಂದಿಗೆ ಇಲ್ಲ ಬೆಂಗಳೂರಿನಲ್ಲಿ ಇವಾಗ ಸ್ವಂತ ಉದ್ಯೋಗವನ್ನು ಮಾಡುತ್ತಿದ್ದೇನೆ ಎಂದು ಹೇಳಿದ. ಕೂಡಲೇ ಮಾತು ತಡೆದ ಅನಿಕೇತ್ ನಿಲ್ಲು ! ನಿಜವಾಗಲೂ ಯಾವಾಗಲೂ ನೋಡಿದರೆ ದೇಶ ದೇಶ ಎಂದು ಊರೂರು ಸುತ್ತುವ ನೀನು ಸ್ವಂತ ಉದ್ಯೋಗ ಮಾಡುತ್ತಿದ್ದೀಯಾ ಎಂದರೆ ನಂಬಲು ಕಷ್ಟವಾಗುತ್ತಿದೆ .
           ನೀನು ಇಂತಹ ನಿರ್ಧಾರಕ್ಕೆ ಬಂದಿದ್ದೀಯಾ ಎಂದರೆ ಎಲ್ಲೋ ಪ್ರೀತಿಯಲ್ಲಿ ಬಿದ್ದಿರಬೇಕು ಮದುವೆಯ ಬಗ್ಗೆ ವಿಚಾರ ಮಾಡಿರಬೇಕು ಹಾಗಾಗಿ ಒಂದು ಕಡೆ ನೆಲೆ ನಿಂತಿರುವೆ ! ನೀನು ಎಂದು  ಅನುಮಾನದಿಂದ ಕೇಳಿದ ಇನ್ನೇನು ಇದು ಮಾತು ಮುಂದುವರೆಸಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಮಾತು ಮುಂದುವರಿಸಿದ ಅನಿಕೇತ್ ನಾವು ಎಲ್ಲರೂ ಪ್ರೀತಿಯಲ್ಲಿ ಬಿದ್ದರೂ ನೀನು ಮಾತ್ರ ಯಾರನ್ನು ಪ್ರೀತಿಸುವ ಮನಸ್ಸು ಮಾಡಲಿಲ್ಲ ಎಂದ. ವಿಧು ಮಾತು ಮುಂದುವರಿಸುತ್ತಾ ಪ್ರೀತಿ ಮನಸ್ಸಿನಿಂದ ಬರಬೇಕು. ಅದು ಬೇರೆಯವರು ಪ್ರೀತಿಸಿದರೆಂದು ನಾವು ಪ್ರೀತಿಸಲು ಶುರು ಮಾಡಿದರೆ ಅದು ನಿಜವಾದ ಪ್ರೀತಿ ಆಗಲು ಸಾಧ್ಯವೇ ? ಏಕೆ ! ನಾನು ಪ್ರೀತಿಸುತ್ತಿದ್ದೇನೆ ನಾನು ನನ್ನ ದೇಶವನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದೇನೆ. ಇನ್ನು ಏನು ಆಗಬೇಕು ಎಂಬ ಪ್ರಶ್ನೆಗೆ ಅನಿಕೇತ್ ವಿಧು ನೀನು ಹೇಳುವುದು ಸತ್ಯ ಆದರೆ....
Author : Rakesh Bhagiratha.

No comments: