Tuesday, August 11, 2020

ಪ್ರೇಮದ ಅನ್ವೇಷಣೆ ಭಾಗ-8

          ನೀನು ಹೇಳುವುದು ಸತ್ಯ; ಆದರೆ ದೇಶವನ್ನು ನಿನ್ನಂತೆ ತುಂಬಾ ಜನರು ಪ್ರೀತಿಸುತ್ತಾರೆ. ನಿನ್ನ ದೇಶಪ್ರೇಮದ ಬಗ್ಗೆ ಸಂಶಯವೇ ಬೇಡ ಎಂದು ಹೇಳುತ್ತಾ ಅನಿಕೇತ್ ಈಗಲಾದರೂ ಹೇಳು ಯಾರನ್ನಾದರೂ ಪ್ರೀತಿಸುತ್ತಿದ್ದೀಯ ಎಂದು ? ಅವನ ಪ್ರಶ್ನೆಗೆ ಉತ್ತರ ಎನ್ನುವಂತೆ ವಿಧು ಇಲ್ಲ ಯಾರನ್ನೂ ನಾನು ಇನ್ನು ಪ್ರೀತಿಸಿಲ್ಲ ಎಂದು ಹೇಳುವಾಗಲೇ ಕೊನೆಪಕ್ಷ ಮದುವೆ ಯೋಚನೆ ಏನಾದರೂ ಇದೆಯೇ ? ಎಂದು ಕೇಳಿದ, ಹಾಗೇನು ಇಲ್ಲ ನೋಡೋಣ ಕಾಲ ಬಂದಾಗ ಏನೇನು ಆಗಬೇಕು ಅದು ಆಗೇ ತಿರುತ್ತದೆ. ಸರಿ ಈಗ ಎಲ್ಲಿ ಹೋಗುತ್ತಿರುವೆ ಈ ಸಮಯದಲ್ಲಿ ಶಿವಮೊಗ್ಗಕ್ಕೆ ಹೋಗಲು ಕಾರಣವಾದರೂ ಏನು ? ನಿನ್ನ ವ್ಯವಹಾರದ ದೃಷ್ಟಿಯಿಂದ ಅದಕ್ಕೆ ಸಂಬಂಧಪಟ್ಟಂತೆ ಹೋಗುತ್ತಿರುವೆಯ ಹೇಗೆ ಎಂದು ಪ್ರಶ್ನಿಸಿದ. ಇಲ್ಲ ನಾನು ರಾಷ್ಟ್ರೀಯ ಸೇವಾ ಸಮಿತಿಯಿಂದ ಚುನಾವಣಾ ಕಾರ್ಯಕ್ಕಾಗಿ ರಾಷ್ಟ್ರೀಯ ಸೇವಾ ಪಾರ್ಟಿಯಲ್ಲಿ ಕೆಲಸ ಮಾಡಲು ಹೋಗುತ್ತಿರುವೆ ಎಂದ ವಿಧು. ಓ ನೀನು ಇನ್ನು ನಿನ್ನ ರಾಜಕೀಯ ಒಡನಾಟವನ್ನು ಬಿಟ್ಟಿಲ್ಲ ಎಂದಾಯಿತು, ಹೋಗಲಿ ಬಿಡು ರಾಜಕೀಯದಲ್ಲಿ ಆದರೂ  ನೀನು ಎತ್ತರ ಸ್ಥಾನದಲ್ಲಿ ಬೆಳೆಯಬೇಕು ಎನ್ನುವಷ್ಟರಲ್ಲಿ ಶಿವಮೊಗ್ಗಕ್ಕೆ ಹೋಗುವ ಬಸ್ ಬಂದಿತು. ಅನಿಕೇತ್ ವಿಧುವನ್ನು ಬಸ್ಸಿಗೆ ಹತ್ತಿಸಿ ಹೊರಟ. ವಿಧು ಬಸ್ ಹತ್ತಿದ ಕೂಡಲೇ ಕಿಟಕಿಯ ಪಕ್ಕದ ಜಾಗವನ್ನು ಹುಡುಕಿ ಕುಳಿತ ಬಸ್ ತನ್ನ ಪಯಣವನ್ನು ಆರಂಭಿಸಿತು.
             ಟಿಕೆಟ್ ತೆಗೆದುಕೊಂಡ ವಿಧು ಬಸ್ಸಿನ ಕಿಟಕಿಯನ್ನು ತೆಗೆದ ಆಹ್ಲಾದಕರ ತಂಗಾಳಿ. ಅದು ಮುಸ್ಸಂಜೆಯ ಸಮಯ ಸೂರ್ಯ ಪೂರ್ವದಿಂದ ತನ್ನ ಪಥವನ್ನು ಪಶ್ಚಿಮದ ಕಡೆಗೆ ತನ್ನ ಪಯಣವನ್ನು ಬಲು ಜೋರಾಗಿ ನಡೆಸುತ್ತಿದ್ದಾನೆ ಎನ್ನುವಂತೆ ಭಾಸವಾಗುತ್ತಿತ್ತು. ಆ ಕಿತ್ತಲೆ ಬಣ್ಣದ ಕಿರಣಗಳು ತನ್ನ ಅಂದಿನ ಕರ್ತವ್ಯವನ್ನು ಮುಗಿಸಿ ಮನೆಗೆ ಸೇರುವ ತವಕದಲ್ಲಿ ಮಕ್ಕಳು ಶಾಲೆಯನ್ನು ಬಿಟ್ಟು ಕೂಡಲೇ ಮನೆಗೆ ಹೋಗುವಂತೆ ಹೋಗುವ ರೀತಿಯಲ್ಲಿ ಕಾಣುತ್ತಿತ್ತು. ಬೆಳ್ಳಕ್ಕಿ ಹಿಂಡು ತನ್ನ ಮನೆಗಳಿಗೆ ತೆರಳುವ ದೃಶ್ಯ ಮನಸ್ಸಿಗೆ ಮುದವನ್ನು ಕೊಡುತ್ತಿತ್ತು .ಇನ್ನೇನು ಸಂಜೆ ಕತ್ತಲು ಆವರಿಸುತ್ತಿದ್ದಂತೆ ಪ್ರಕೃತಿಯ ಸೌಂದರ್ಯ ಹಂತಹಂತವಾಗಿ ಮರೆಯಾಗುತ್ತಿತ್ತು. ಕತ್ತಲು ಕವಿಯುತ್ತಿದ್ದಂತೆ ತನ್ನ ಬದುಕಿನ ಕತ್ತಲಿನ ಬಗ್ಗೆ ಯೋಚಿಸಲು ಶುರುಮಾಡಿದ ವಿಧು. ಹೌದು ನಾನು ಏಕೆ ಹೀಗೆ ? ನನ್ನ ಸ್ನೇಹಿತರೆಲ್ಲ ಏಕೆ ನನ್ನನ್ನು ನೀನು ತುಂಬಾ ವಿಭಿನ್ನ ಎಂದು ಕರೆಯುತ್ತಾರೆ, ಎಂದು ಯೋಚಿಸತೊಡಗಿದ.  ಮನುಷ್ಯನ ಬದುಕಿನ ಹಾಗೂ ಪರಿಸರದ ಆಧಾರದ ಮೇಲೆ ಅವನ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎನಿಸಿತು ಮನಸ್ಸಿನಲ್ಲಿ. ವಿಧುವಿನ ಮನಸ್ಸಿನಲ್ಲಿ ಹಲವಾರು ವಿಚಾರಗಳು ಸುಳಿದವು. ನಾನೇಕೆ ಹೀಗೆ ನಾನು ಬೆಳೆದು ಬಂದ ಪರಿಸರವೇ ? ಏಕೆ ನಾನು ಎಲ್ಲರಿಗಿಂತ ಭಿನ್ನವಾಗಿ ಬೆಳೆದೆ. ನಾನೇ ಬಿನ್ನವ ಅಥವಾ ಈ ಲೋಕ ಬಿನ್ನವಾಗಿದೆಯಾ? ಅಥವಾ ನನ್ನ ಬಾಲ್ಯದ ಪ್ರಭಾವ ನಾ ? ಅಥವಾ ಅನುಭವಕ್ಕೆ ಮಾತ್ರ ತಿಳಿಯುವಂತಹ ಯಾವುದಾದರೂ ಅತೀಂದ್ರಿಯ ಶಕ್ತಿ ಆಟದಲ್ಲಿ ಸಿಲುಕಿ ಕೊಂಡಿದ್ದೇನ ? ಎಂಬ ಜಿಜ್ಞಾಸೆ. ಮನಸ್ಸಿನಲ್ಲಿ ಹೀಗೆ ಹತ್ತು ಹಲವಾರು ಯೋಜನೆಗಳು ಹರಿದವು. ಬದುಕಿನ ಪಯಣ ವಿಚಿತ್ರ ಮನುಷ್ಯ ಹುಟ್ಟಿದಾಗ ಇರುವ ಮುಗ್ಧ ಮನಸ್ಸಿನಿಂದ ಹಿಡಿದು ಬದುಕಿನ ಪರಿಪಕ್ವತೆ ತಿಳಿಯುವ ಒಳಗೆ ಬದುಕು ಮುಗಿದು ಹೋಗಿರುತ್ತದೆ. ಅಲ್ಲವಾ ? ಮನಸ್ಸಿನಲ್ಲಿ ಬದುಕಿನ ಪುಟಗಳನ್ನು ತಿರುವು  ಹಾಕಲು ಶುರುಮಾಡಿದ. ಅವನ ಮನಸ್ಸು ತಾನು ಬೆಳೆದ ಚಿಕ್ಕಮಗಳೂರಿನ ಕಡೆ ಹೋಯಿತು. ಚಿಕ್ಕಮಗಳೂರು ಎಂದರೆ ಕೇಳಬೇಕಾ ಪ್ರಕೃತಿ ಸೌಂದರ್ಯ ಮೈಮೇಲೆ ಹೊತ್ತು ನಿಂತಂತಹ ಸೌಂದರ್ಯ ಗಿರಿಶಿಖರಗಳ ನೆಲೆಬೀಡು ಎಂಥವರನ್ನು ತನ್ನ ಸೌಂದರ್ಯದಿಂದ ಮನಸೂರೆಗೊಳ್ಳುವಂತೆ ಮಾಡುವ ಪ್ರದೇಶ. ಚಿಕ್ಕಮಗಳೂರು ಜಿಲ್ಲೆ ಬಯಲುಸೀಮೆ ಹಾಗೂ ಮಲೆನಾಡಿನ ಸಂಗಮ ಅಲ್ಲಿಯ  ಕಾಫಿಯ ಘಮ ವಿಶ್ವವ್ಯಾಪಿ ಇಂತಹ ಸೌಂದರ್ಯದ ಮಡಿಲಿನಲ್ಲಿ ಒಂದು ಪುಟ್ಟ ಸಂಸಾರ, ಗಂಡ ಹೆಂಡತಿ ಮತ್ತು ಮಕ್ಕಳು  ಅದರಲ್ಲಿ ಹಿರಿಯ ಮಗನ ಹೆಸರು.....

No comments: