Thursday, December 22, 2022

ಪ್ರೀತಿಯ ಪಯಣ

         
          ಪೂರ್ಣಚಂದ್ರ ತನ್ನ ಹುಟ್ಟೂರನ್ನು ತೊರೆದು ಓದಲು ಮೈಸೂರಿಗೆ ಹೊರಡುತ್ತಾನೆ. ಸಣ್ಣ ವಯಸ್ಸಿನಲ್ಲಿ ತನ್ನ ತಂದೆ ತಾಯಿಯನ್ನು ಕಳೆದುಕೊಂಡು ಚಿಕ್ಕಪ್ಪ ಚಿಕ್ಕಮ್ಮನ ಮತ್ತು ಅವನ ಅಜ್ಜನ ಆಶ್ರಯದಲ್ಲಿ ಬೆಳೆದ ಹುಡುಗ. ಅವನಿಗೆ ಪ್ರೇಮದ ಕೊರತೆ ಸಣ್ಣ ವಯಸ್ಸಿನಿಂದಲೂ ಕಾಡುತಿತ್ತು. ತನ್ನ ಬದುಕಿನ ಎಲ್ಲಾ ಘಟನಾವಳಿಗಳನ್ನು ಮೆಲಕು ಹಾಕುವುದರ ಒಳಗಾಗಿ ಮೈಸೂರು ನಿಲ್ದಾಣವು ಬಂದಿತ್ತು. ಮೈಸೂರನ್ನು ಸೇರಿದ ಪೂರ್ಣಚಂದ್ರ ತನ್ನ ಬದುಕಿನ ಹೊಸ ಭರವಸೆಯೊಂದಿಗೆ ಮೈಸೂರಿನಲ್ಲಿ ಇಳಿದ.
                ಮೈಸೂರಿನಲ್ಲಿ ಇಳಿದ ನಂತರ ತನ್ನ ಸ್ನೇಹಿತನಿಗೆ ಕರೆ ಮಾಡಿ ತನ್ನ ಸ್ನೇಹಿತನ ಕೊಠಡಿಗೆ ಹೋದ. ಹೊಸ ವಾತಾವರಣ ಅವನನ್ನು ಉಲ್ಲಾಸಗೊಳಿಸಿತ್ತು. ಅರಮನೆಯ ನಗರಿ, ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ, ತನ್ನ ಸ್ನೇಹಿತನ ಜೊತೆ ಸಂಜೆ ವಾಯು ವಿಹಾರಕ್ಕೆ ಹೋಗಿ ಕಾಲೇಜಿನ ದೂರವನ್ನು ತಿಳಿದು ಬಂದ. ಮರುದಿನ ಬೆಳಿಗ್ಗೆ ಬೇಗನೆ ಎದ್ದವನೇ ಗಣಪತಿಗೆ ವಂದಿಸುತ್ತಾ ತನ ದಿನ ನಿತ್ಯದ ವ್ಯಾಯಾಮ ಹಾಗೂ ಯೋಗವನ್ನು ಮುಗಿಸಿ ಕಾಲೇಜಿಗೆ ಹೊರಡಲು ಸಿದ್ದನಾದ. ದ್ವಿತೀಯ ಪಿಯುಸಿ ಯನ್ನು ಉತ್ತಮ ಅಂಕಗಳೊಂದಿಗೆ ಮುಗಿಸಿದ ಪೂರ್ಣಚಂದ್ರ ತನ್ನ ಕಾಲೇಜಿನ ಮೊದಲನೇ ದಿನದ ಅನುಭವ ಅವನಿಗೆ ನಾನು ದೊಡ್ಡವನಾಗಿದ್ದೇನೆ ಎನ್ನುವ ಭಾವವನ್ನು ಮೂಡಿಸುತ್ತಿತ್ತು.
           ಹೆಸರಿಗೆ ತಕ್ಕಂತೆ ಅವನದು ಪೂರ್ಣ ಪ್ರಮಾಣದ ನೈಜ ವ್ಯಕ್ತಿತ್ವ. ಅವನ ವ್ಯಕ್ತಿತ್ವದಿಂದಲೇ ಅವನಿಗೆ ಹಲವಾರು ಸಹಪಾಠಿಗಳು, ಸ್ನೇಹಿತರಾದರು. ಪರ ಊರಿಗೆ ಬಂದರು ಸ್ನೇಹಿತರ ವಿಷಯದಲ್ಲಿ ಕೊರತೆ ಇರಲಿಲ್ಲ ಎಂದಿನಂತೆ ಕಾಲೇಜಿನ ದಿನಗಳು ಅವನಿಗೆ ಖುಷಿಯನ್ನು ನೀಡುತ್ತಿದ್ದವು.
          ಅಂದು ಅವನಿಗೆ ಕಣ್ಣ ಎದುರಿನಲ್ಲಿ ಯಾರೂ ಹೋದಂತಾಯಿತು ಹೌದು ಸುಂದರ ಕಮಲದಳಗಳ ದಂತಿರುವ ಆಕೆಯ ಕಣ್ಣು, ನೀಲ ಮೂಗು, ದಾಳಿಂಬೆ ಬಣ್ಣದ ತುಟಿಗಳು ಸುಂದರ ಚೆಲುವೆ. ಮೊದಲ ನೋಟದಲ್ಲಿ ಮನಸೋತ. ಈಕೆ ಯಾರು ಇರಬಹುದು ಎನ್ನುವಷ್ಟರಲ್ಲಿ ಕಣ್ಣಿಂದ ಮರೆಯಾಗಿ ಹೋಗಿದ್ದಳು.
             ಮರುದಿನ ಕಾಲೇಜಿನ ಕೊಠಡಿಯಲ್ಲಿ ಯಾರೋ ಮೇ ಐ ಕಮಿಂನ್ ಎಂದು ಕೇಳಿದಂತಾಯ್ತು ಎಸ್ ಕಮಿಂನ್ ಅಂದರು ಉಪನ್ಯಾಸಕರು ಪೂರ್ಣಚಂದ್ರನಿಗೆ ಆಶ್ಚರ್ಯ. ಇವನು ಮೊದಲ ನೋಟದಲ್ಲಿ ಮನಸೋತ  ಹುಡುಗಿ ಉಪನ್ಯಾಸಕರ ಒಪ್ಪಿಗೆಯ ಮೇರೆಗೆ ಒಳಬಂದು ಅಸಿನಳಾಗಿದ್ದಾಳೆ. ಉಪನ್ಯಾಸಕರು ಪರಿಚಯ ಕೇಳಿದರು ಅದಕ್ಕೆ ಆಕೆ  ತನ್ನ ಹೆಸರು ಪ್ರಜ್ಞ ಇಂದು ಕಾಲೇಜಿಗೆ ಸೇರಿದ್ದೇನೆ ಎಂದಳು. ಪೂರ್ಣಚಂದ್ರ ಮತ್ತು ಪ್ರಜ್ಞ ದಿನ ಕಳೆದಂತೆ ಸ್ನೇಹಿತರಾದರು. ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆಯಿತು. ಪೂರ್ಣಚಂದ್ರ ಅವಳ ಗುಣ ವಿಶೇಷಗಳಿಂದ ಪ್ರಭಾವಿತನಾದ. ಅವನಿಗೆ ಅವಳ ಮೇಲೆ ಪ್ರೇಮಾಂಕರವಾಯಿತು.
           ತನ್ನ ಪ್ರೀತಿಯನ್ನು ಒಂದು ದಿನ ಹೇಳಬೇಕೆಂದು ನಿರ್ಧರಿಸಿ ಅವಳಿಗೆ ಹೇಳಲು ಸಿದ್ದನಾದ. ಪ್ರೀತಿಯನ್ನು ಹೇಳಲು ದಿನವನ್ನು ಕೂಡ ನಿಶ್ಚಯ ಮಾಡಿದ.
 ಪ್ರಜ್ಞಾ ಪೂರ್ಣ ಚಂದ್ರನಿಗೆ ಕರೆ ಮಾಡಿದಳು ಒಬ್ಬ ವಿಶೇಷ ವ್ಯಕ್ತಿಗೆ ಉಡುಗೊರೆ ಕೊಡುವುದಿದೆ ಯಾವುದನ್ನು ಉಡುಗೊರೆಯಾಗಿ ಕೊಡಬೇಕೆಂದು ತಿಳಿಯುತ್ತಿಲ್ಲ. ಅದನ್ನು ಆಯ್ಕೆ ಮಾಡಲು ನೀನೆ ಸೂಕ್ತವಾದ ವ್ಯಕ್ತಿ ನನ್ನ ಜೊತೆ ಬಾ ಉಡುಗೊರೆಯನ್ನು ತರಲು ಎಂದು ಹೇಳಿದಳು. ಅವನು ಅವಳು ಹೇಳಿದ ಸ್ಥಳಕ್ಕೆ ಕರೆದುಕೊಂಡು ಹೋದನು ಪ್ರಜ್ಞ ಪೂರ್ಣ ಚಂದ್ರನಿಗೆ ನಿನ್ನ ಹತ್ತಿರ ಏನು ಹೇಳಬೇಕೆಂದು ಬಹಳ ದಿನದಿಂದ ಅಂದುಕೊಳ್ಳುತ್ತಿದ್ದೆ. ಇಂದು ಆ ಸಮಯ ಕೂಡಿಬಂದಿದೆ ನಾನು ಒಂದು ಹುಡುಗನನ್ನು ಪ್ರೀತಿಸುತ್ತಿದ್ದೇನೆ ಅವನಿಗಾಗಿ ಈ ಉಡುಗೊರೆ ಎಂದಳು ಪೂರ್ಣಚಂದ್ರನ ಮನಸ್ಸು ನುಚ್ಚುನೂರಾಯಿತು ಆದರೂ ಅದನ್ನು ಅವಳ ಮುಂದೆ ತೋರಿಸಿಕೊಳ್ಳಲಿಲ್ಲ ಪ್ರಜ್ಞ ಪ್ರೀತಿಸಿದ ಹುಡುಗನಿಗೆ ಉತ್ತಮವಾದ ಹುಡುಗರೆಯನ್ನು ತೆಗೆದುಕೊಟ್ಟು ಭಾರವಾದ ಮನಸ್ಸಿನಿಂದ ಹೆಜ್ಜೆಗಳನ್ನು ಹಾಕಿದ. ತನ್ನ ಪ್ರೀತಿ ತನಗೆ ಸಿಗುವುದಿಲ್ಲವೆಂದು ಪ್ರಜ್ಞನನ್ನು ಮನಸ್ಸಿನಿಂದ ಹರಸಿದ ಮತ್ತೆ ಎಂದಿನಂತೆ ಅವರಿಬ್ಬರೂ ಕಾಲೇಜಿನಲ್ಲಿ ಭೇಟಿಯಾದರು. ಪೂರ್ಣಚಂದ್ರನಿಗೆ ಯಾವುದರಲ್ಲೂ ಆಸಕ್ತಿ ಇಲ್ಲದನ್ನು ಪ್ರಜ್ಞ ಗಮನಿಸಿದ್ದಳು. ಸೂಕ್ಷ್ಮ ಮನಸ್ಸಿನ ಅವಳಿಗೆ ಅವನ ಮನಸ್ಥಿತಿ ಅರ್ಥವಾಗಿತ್ತು. ಅಂದು ಪೂರ್ಣ ಚಂದ್ರನ ಹುಟ್ಟುಹಬ್ಬ ಕಾಲೇಜಿನ ಸಹಪಾಠಿಗಳೆಲ್ಲ ಅವನಿಗೆ ಹಾರೈಸಿದರು. ಪ್ರಜ್ಞಳ ಸುಳಿವಿಲ್ಲ ಸಂಜೆ ಕಾಲೇಜು ಬಿಡುವ ಸಮಯಕ್ಕೆ ಯಾರೋ ಕರೆದಂತಾಯಿತು ನೋಡಿದರೆ ಪ್ರಜ್ಞ ಪೂರ್ಣಚಂದ್ರನಿಗೆ ಹುಟ್ಟು ಹಬ್ಬದ  ಉಡುಗೊರೆ ಕೊಟ್ಟಳು ಅದನ್ನು ಸ್ವೀಕರಿಸಿ ಧನ್ಯವಾದ ಹೇಳಿದ. ಹುಟ್ಟುಹಬ್ಬದ ಖುಷಿ ಮನಸ್ಸಿನಲ್ಲಿ ಇರಲಿಲ್ಲ. ಅವಳು ಕೊಟ್ಟ  ಉಡೂಗರೆಯನ್ನು ಭಾರವಾದ ಮನಸ್ಸಿನಿಂದ ಬಿಚ್ಚಿ ನೋಡಿದ, ಹೌದು ಪ್ರಜ್ಞ ಪ್ರೀತಿಸಿದ ಹುಡುಗನಿಗೆ ಕೊಂಡ ಉಡುಗೊರೆ ಇದು. ಅಂದರೆ ಪ್ರಜ್ಞ ಪ್ರೀತಿಸಿದ್ದು ನನ್ನನ್ನೇ.

Friday, September 30, 2022

ಮನಸ್ಸುಂಬ ಮರ್ಕಟದ ಮೇಲೆ ನಡೆಯಲಿ ವಿಜಯ..

           
             ವಿಜಯದಶಮಿ ತಾಯಿ ಚಾಮುಂಡೇಶ್ವರಿ ತನ್ನ ಕಾರ್ಯನಿಮಿತ್ತ ಲೋಕ ರಕ್ಷಣೆಗಾಗಿ ಉಗ್ರರೂಪವನ್ನು ತಾಳಿ ಒಂಬತ್ತು ದಿನಗಳ ಕಾಲ ನಿರಂತರ ಹೋರಾಟದ ಫಲವಾಗಿ ಮಹಿಷ ಎಂಬ ರಾಕ್ಷಸನ ಸಂಹಾರ ಮಾಡಿದ ದಿನ. ರಾಕ್ಷಸನ ಸಂಹಾರ ಮಾಡಿ ಯುಗಗಳೇ ಕಳೆದರೂ ನಮ್ಮ ಮನಸ್ಸಿನೊಳಗಿನ ರಾಕ್ಷಸನನ್ನು ಸಂಹಾರ ಮಾಡಲು ಮನುಜನಿಂದ ಸಾಧ್ಯವಾಗುತ್ತಿಲ್ಲ . ಒಂಬತ್ತು ದಿನಗಳಲ್ಲಿ ಒಂಬತ್ತು ರೂಪಗಳನ್ನು ತಾಳಿ ಪ್ರಕೃತಿಯ  ಸಾಮ್ಯತೆಗೆ ಕೈಗನ್ನಡಿ ಹಿಡಿದು ಎಲ್ಲ ದುಷ್ಟಶಕ್ತಿಗಳ ಸಂಹಾರ ಮಾಡಿದ ದಿನವೇ ವಿಜಯದಶಮಿ. ಇಂತಹ ವಿಜಯದಶಮಿಯಂದು ಮನುಷ್ಯ ತನ್ನ ಮೇಲಿನ ವಿಜಯ ಸಾಧಿಸುವಲ್ಲಿ ವಿಫಲನಾಗುತ್ತಿದ್ದನೆ. ವಿಫಲವಾಗಲು ಮೂಲ ಕಾರಣ ಆತನ ಮನಸ್ಸು.
           ಮನಸ್ಸು ಚಂಚಲತೆಯ ಮೂಲ ಮನಸ್ಸು ಹುಚ್ಚು ಕುದುರೆಯಂತೆ ಎಂಬ ಮಾತನ್ನು ಸರ್ವೇಸಾಮಾನ್ಯವಾಗಿ ಕೇಳಿರುತ್ತೀರಾ ಅದು ಸತ್ಯವೂ ಹೌದು. ಮನಸ್ಸಿನ ನಿಗ್ರಹವೇ ತಪಸ್ಸು ಎಂಬುವುದು ನಮ್ಮಋಷಿಮುನಿಗಳು ಕಂಡುಕೊಂಡ ಸತ್ಯ.ಮನಸ್ಸಿನ ನಿಗ್ರಹದಿಂದ ಹಲವಾರು ಅಗೋಚರ  ವಿದ್ಯೆಗಳನ್ನು ಸಂಪಾದಿಸಿದ್ದರು ನಮ್ಮ ಪೂರ್ವಜರು. ಅದರಲ್ಲಿ ಪ್ರಮುಖವಾಗಿ ಹೇಳುವುದಾದರೆ ಇಂದ್ರಜಾಲ ಮಾಯಜಾಲ ಹಾಗೂ ಇನ್ನಿತರ ವಿದ್ಯೆಗಳು ಅಡಕವಾಗಿವೆ. ಒಂದು ಮಂತ್ರಸಿದ್ಧಿ ಆಗಬೇಕಾದರೂ ಮನಸ್ಸಿನ ನಿಗ್ರಹ ಬೇಕಾಗುತ್ತದೆ ಮನಸ್ಸಿನ ನಿಗ್ರಹವೆಂದರೆ ನಮ್ಮ ಚಿತ್ತವನ್ನು ಏಕಾಗ್ರಗೊಳಿಸಲು ಸಾಧ್ಯವಾಗಿಸುವುದು.
          ಮನುಷ್ಯ ಯಾವುದರಲ್ಲಿ ಏಕಾಗ್ರನಾಗಿರುತ್ತಾನೆ ಅದರಲ್ಲಿ ಅವನು ಏನನ್ನಾದರೂ ಸಾಧಿಸಿ ಬಿಡುತ್ತಾನೆ. ಮನಸ್ಸೆಂಬುದು ಹುಟ್ಟಿನಿಂದಲೂ ಸಾಯುವವರೆಗೂ ತನ್ನ ಲಗಾಮಿಲ್ಲದ ಕುದುರೆಯಂತೆ ಓಡುತ್ತಿರುತ್ತದೆ. ಆಧ್ಯಾತ್ಮವಿರಲಿ ಅಥವಾ ಲೋಕರೂಢಿ ಇರಲಿ ಎರಡರಲ್ಲೂ ಮನಸ್ಸಿನ ಏಕಾಗ್ರತೆ ಬಹುಮುಖ್ಯ ಮನಸ್ಸೆಂಬ ಮರ್ಕಟದ ವಿಜಯ ಅಷ್ಟು ಸುಲಭವಲ್ಲ. ಅದೊಂದು ಸುದೀರ್ಘ ಪ್ರಕ್ರಿಯೆ ನಿರಂತರ ಏಕಾಗ್ರತೆಯ ಮೂಲ ಸೆಲೆ......... ಇನ್ನೂ ಮುಂದುವರೆದು ಬರೆಯಬೇಕೆಂದರೆ ಬರೆಯಲು ಸಾಧ್ಯವಾಗುತ್ತಿಲ್ಲ  ಅದೇ ಚಂಚಲತೆ........ ನಡೆಯಬೇಕಿದೆ ಮನಸ್ಸೆಂಬ ಮರ್ಕಟದ ಮೇಲೆ ಅಂತರ್ಯುದ್ಧ ವಿಜಯ ಸಾಧಿಸುವವರೆಗೂ.....

Sunday, August 28, 2022

ದೇಶದ್ರೋಹದ ಕಾನೂನು ಸ್ವಾತಂತ್ರ ಹಾಗೂ ಪ್ರಜಾಪ್ರಭುತ್ವದ ವಿರೋಧವಾಗಿದೆಯೇ ?


           ದೇಶದ್ರೋಹ ಕಾನೂನು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆಯೇ ಎಂದು ನೋಡುವುದಾದರೆ, ನಮಗೆ ರಾಜದ್ರೋಹ ಹಾಗೂ ದೇಶದ್ರೋಹದ ಬಗ್ಗೆ ಸ್ಪಷ್ಟ ಅರಿವು ಇರಬೇಕಾಗುತ್ತದೆ. ರಾಜದ್ರೋಹವು ಜನರನ್ನು ಆಳುವ ವ್ಯಕ್ತಿ ಅಥವಾ ಪದವಿಯ ಮಾನ್ಯತೆ ಆಧಾರದ ಮೇಲೆ ರಚನೆಗೊಂಡ, ಪ್ರಜಾಪ್ರಭುತ್ವವಲ್ಲದ ವ್ಯಕ್ತಿಕೇಂದ್ರಿಕೃತವಾಗಿ ಸ್ಥಾಪನೆಗೊಂಡ ಪರಂಪರೆಯ ಸರ್ಕಾರದ ವಿರುದ್ಧ ಮಾತನಾಡಿದರೆ ಅದು ರಾಜದ್ರೋಹವೆನಿಸುತ್ತದೆ. ಆದರೆ ಒಂದು ಭೌಗೋಳಿಕ ಪ್ರದೇಶದ (ದೇಶವಾಸಿಗಳ)  ಜನರು ತಮಗೆ ತಾವೇ ಎಲ್ಲರೂ ಒಟ್ಟಿಗೆ ಸೇರಿ ರಚಿಸಿಕೊಂಡ ಪ್ರಜಾಪ್ರಭುತ್ವ ಸರ್ಕಾರದ ವಿರುದ್ಧ ಮಾತನಾಡಿದರೆ ಅದನ್ನು ದೇಶದ್ರೋಹ ಎಂದು ಹೇಳಲು ಬರುವುದಿಲ್ಲ ದೇಶದ್ರೋಹವಾಗಬೇಕೆಂದರೆ ಒಂದು ಭೌಗೋಳಿಕ ಪ್ರದೇಶದ, ತನ್ನ ದೇಶದ ಗಡಿಯ ವ್ಯಾಪ್ತಿಯ ಒಳಗೆ ವಾಸಿಸುವ ಜನರ ಸಮೂಹದ ಹಿತಾಸಕ್ತಿಯ ವಿರುದ್ಧವಾಗಿ ನಡೆದುಕೊಳ್ಳುವಂತಹ ಹಾಗೂ ಸಮಾಜದ ಸ್ವಾಸ್ತ್ಯ ಹಾಳು ಮಾಡುವಂತಹ ಯಾವುದೇ ಕಾರ್ಯವನ್ನು  ನಾವು ದೇಶದ್ರೋಹವೆನ್ನಬಹುದು. ವಾಕ್‌ ಸ್ವಾತಂತ್ರ್ಯದ ಹೆಸರಿನಲ್ಲಿ ಶಾಂತಿಭಂಗಮಾಡುವಂತಹ ಹೇಳಿಕೆಗಳು, ದೇಶವನ್ನು ತುಂಡರಿಸುವಂತಹ ಪ್ರಚೋದನಕಾರಿ ಮಾತುಗಳು ಇವು ದೇಶದ್ರೋಹದ ವ್ಯಾಪ್ತಿಗೆ ಬರುವಂತಹವು ಆಗಿದೆ. ಇನ್ನು ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ವಿಷಯಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸ್ವಾತಂತ್ರ್ಯದ ಪರಿಮಿತಿಯನ್ನು ವ್ಯಾಖ್ಯಾನಿಸುವುದಾದರೆ ನಮ್ಮ ಸ್ವಾತಂತ್ರ್ಯ ಬೇರೆ ಜನರ ಅಥವಾ ಸಮೂಹ ಹಿತಾಸಕ್ತಿಯ ವಿರುದ್ಧವಾಗಿ ಹೋಗುವುದನ್ನು ಸ್ವಾತಂತ್ರ್ಯದ ಪರಿಮಿತಿಗೆ ತರಲಾಗುವುದಿಲ್ಲ. ಪ್ರಜಾಪ್ರಭುತ್ವದ ವಿಷಯದಲ್ಲಿ ದೇಶದ ಏಕತೆ, ಸಮಗ್ರತೆ ಹಾಗೂ ಹಿತಾಸಕ್ತಿಯ ವಿರುದ್ಧವಾದ ನಡವಳಿಕೆಗಳು ಹಾಗೂ ವಾಕ್‌ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ವಿರುದ್ಧವಾದ ಮಾತುಗಳು ಹಾಗೂ ದೇಶವನ್ನು ತುಂಡರಿಸುವಂತಹ ಪ್ರಚೋದನಕಾರಿ ಭಾಷಣಗಳು ಪ್ರಜಾಪ್ರಭತ್ವಕ್ಕೆ ಮಾರಕವಾಗುವಂತಹುಗಳಾಗಿವೆ. ಇಂತಹುಗಳನ್ನೆಲ್ಲ ಹತ್ತಿಕ್ಕಲು ದೇಶದ್ರೋಹದ ಕಾನೂನು ಅತ್ಯಗತ್ಯವಾಗಿದೆ.

ದೇಶದ್ರೋಹ

           ದೇಶದ್ರೋಹ ಕಾನೂನು ಎಂದರೇನು ಮತ್ತು ಹೇಗೆ ಅಸ್ತಿತ್ವಕ್ಕೆ ಬಂದಿತು ಎಂಬುದನ್ನು ನೋಡುವುದಾದರೆ,  ದೇಶದ್ರೋಹವೆಂಬುದು ಒಂದು ಸಮೂಹದ ಬೌಗೋಳಿಕ ಪ್ರದೇಶದಲ್ಲಿ ವಾಸವಾಗಿರುವ ಜನರು ತಮ್ಮ ಹಾಗೂ ತಾವು ವಾಸಿಸುವ ಪ್ರದೇಶದ ಸುರಕ್ಷತೆಗಾಗಿ ತಾವೇ ರಚಿಸಿಕೊಂಡಂತಹ ಒಂದು ನಿಯಮವಾಗಿರುತ್ತದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದಾಗ ಅದನ್ನು ನಿಯಂತ್ರಿಸಲು ಒಂದು ಕಾನೂನಿನ ಅಗತ್ಯತೆ ಇರುತ್ತದೆ ಹಾಗಾಗಿ ಅದರ ಹಿತಾಸಕ್ತಿಗೆ ಪೂರಕವಾಗಿ ಕಾನೂನನ್ನು ರೂಪಿಸಿ ಜಾರಿಗೆ ತರುವುದೇ ದೇಶದ್ರೋಹದ ಕಾನೂನಾಗಿರುತ್ತದೆ. ಹಿಂದಿನ ರಾಜಮನೆತನದ ಆಳ್ವಿಕೆ ಕಾಲದ ರಾಜದ್ರೋಹ ಕಾನೂನು ಕಾಲಾನಂತರದಲ್ಲಿ ಸುಧಾರಣೆಗೊಂಡು ಪ್ರಜೆಗಳಿಂದ ಅಸ್ತಿತ್ವಕ್ಕೆ ಬಂದ ಪ್ರಜಾಪ್ರಭುತ್ವದ ಸರ್ಕಾರದಲ್ಲಿ ದೇಶದ್ರೋಹ ಕಾನೂನಾಗಿ ಅಸ್ತಿತ್ವಕ್ಕೆ ಬಂದಿರುತ್ತದೆ.

ಸ್ವಾತಂತ್ರ್ಯ

          ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸುವುದಾದರೆ, ಒಂದು ನಿರ್ದಿಷ್ಟ ಪ್ರದೇಶದಲ್ಲಿ, ಒಬ್ಬ ವ್ಯಕ್ತಿಯು ತನ್ನ ಇಚ್ಚೆಯಂತೆ ನಿರ್ಧಾರಗಳನ್ನು ಕೈಗೊಳ್ಳುವುದಾಗಿದೆ. ನಮ್ಮ ಸರ್ವೋಚ್ಚ ನ್ಯಾಯಾಲಯವು ಭಾರತದ ಸಂವಿಧಾನ ನೀಡಿರುವ ಸ್ವಾತಂತ್ರ್ಯ ವನ್ನು ವ್ಯಾಖ್ಯಾನಿಸುವಾಗ ಬೇರೆಯವರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ವ್ಯಕ್ತಪಡಿಸುವುದು ಸೂಕ್ತ ಎಂದು ತನ್ನ ಅಭಿಪ್ರಾಯದಲ್ಲಿ ಹೇಳಿದೆ. ವಾಕ್‌ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ವಿರುದ್ಧ ನೀತಿ ನಿಲುವುಗಳು ಹಾಗೂ ಪ್ರಚೋದನಕಾರಿ ಮಾತುಗಳನ್ನು ಆಡಿದರೆ ಅದನ್ನು ಸ್ವಾತಂತ್ರ್ಯದ ಪರಿಮಿತಿಯಲ್ಲಿ ತರಲು ಸಾಧ್ಯವಿಲ್ಲ ಅದು ದೇಶದ ಅಖಂಡತೆ ಹಾಗೂ ಸಾರ್ವಭೌಮತೆಗೆ ಸವಾಲಾಗಿ ನಿಲ್ಲುತ್ತದೆ. ಆದುದರಿಂದ ಅದನ್ನು ದೇಶದ್ರೋಹವೆಂದು ಕರೆಯಬಹುದು.

ಪ್ರಜಾಪ್ರಭುತ್ವ

           ಜನರಿಂದ ನೇರವಾಗಿ ಆಯ್ಕೆಯಾದ ವ್ಯಕ್ತಿಗಳು ರಚಿಸುವ ಸರ್ಕಾರವನ್ನು ನಾವು ಪ್ರಜಾಪ್ರಭುತ್ವ ಸರ್ಕಾರವೆಂದು ಕರೆಯಬಹುದು. ಸರ್ಕಾರಗಳ ವಿಫಲ ಆಡಳಿತದ ವಿರುದ್ಧ ಹೇಳಿಕೆ ನೀಡುವುದು ದೇಶದ್ರೋಹ ಆಗುವುದಿಲ್ಲ. ಆದರೆ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ದೇಶದ ವಿರುದ್ದ ನಡೆಯುವ ಸಂಚುಗಳಲ್ಲಿ ಭಾಗಿಯಾಗುವುದು ಸ್ವಾತಂತ್ರ್ಯದ ಪರಿಮಿತಿಯಲ್ಲಿ ತರಲು ಬರುವುದಿಲ್ಲ. ಪ್ರಜಾಪ್ರಭುತ್ವದ ಸರ್ಕಾರವು ಜನರ ಆಶೊತ್ತರಗಳಿಗೆ ಅನುಗುಣವಾಗಿ ದೇಶದ್ರೋಹದ ಕಾನೂನನ್ನು ರಚಿಸಿರುತ್ತವೆ ಮತ್ತು ಇದರ ಮೂಲ ಉದ್ದೇಶವೇ ದೇಶದ ಸಾರ್ವಭೌಮತೆಗೆ ಧಕ್ಕೆಯಾಗಬಾರದೆಂಬುದಾಗಿದೆ.

            ಹಿಂದೆಂದಿಗಿಂತಲೂ ಇಂದು ದೇಶದ್ರೋಹದ ಕಾನೂನು ಇನ್ನು ಹೆಚ್ಚು ಪ್ರಸ್ತುತವೆನಿಸುತ್ತದೆ. ಏಕೆಂದರೆ ಇಂದು ಅಂತಾರಾಷ್ಟ್ರೀಯ ಕಾನೂನುಗಳು ರೂಪಗೊಂಡಿರುವುದು ದೇಶಗಳ ಆಧಾರದ ಮೇಲೆ ಅದು ಅಲ್ಲದೆ, ಇಂದು ಮತೀಯವಾದ ಹೆಚ್ಚುತ್ತಿರುವ ಈ ಸಂಧರ್ಭದಲ್ಲಿ ಒಂದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಜನರಿಂದ ಆಯ್ಕೆಯಾದ ಸರ್ಕಾರಗಳ ಅಸ್ತಿತ್ವವನ್ನು ಪ್ರಶ್ನಿಸುವಂತಹ ಮತ್ತು ಸರ್ಕಾರವನ್ನೇ ಬೀಳಿಸುವಂತಹ ಕಾರ್ಯಗಳು ನಡೆಯುತ್ತಿವೆ. ಸ್ವಾತಂತ್ರ್ಯದ ಹೆಸರಿನಲ್ಲಿ ಒಂದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಆಗುವಂತೆ ನಡೆದುಕೊಳ್ಳುವುದು ಸಮರ್ಥನೀಯವಲ್ಲ. 
ಭಾರತೀಯ ದಂಡ ಸಂಹಿತೆ 124ಎ ಕಲಂ ಪ್ರಕಾರ “ಯಾವುದೇ ವ್ಯಕ್ತಿಯ ಪದಗಳಿಂದ ಮಾತನಾಡುವ ಅಥವಾ ಬರೆದ ಚಿಹ್ನೆಗಳಿಂದ, ಅಂಗಿಕ ಸನ್ನೆಗಳಿಂದ , ಭಾರತದಲ್ಲಿ ಕಾನೂನಿನಿಂದ ಸ್ಥಾಪಿಸಲ್ಪಟ್ಟ ಸರ್ಕಾರದ ಬಗ್ಗೆ ಕುಂದುಂಟು ಮಾಡುವ ಪ್ರಯತ್ನಗಳು, ಕುತಂತ್ರವನ್ನು ನಡೆಸುವುದು, ಬಾಹ್ಯಶಕ್ತಿಗಳ ಜೊತೆಯಾಗಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವುದು ದೇಶದ್ರೋಹ ಎನಿಸಿಕೊಳ್ಳುತ್ತದೆ ಎಂದು ವ್ಯಾಖ್ಯಾನಿಸಲಾಗಿದೆ.”
  “ಭಾರತದಲ್ಲಿ ಕಾನೂನಿನಿಂದ ಸ್ಥಾಪಿಸಲ್ಪಟ್ಟ ಸರ್ಕಾರದ ಬಗ್ಗೆ ಕುಂದುಂಟು ಮಾಡುವ ಪ್ರಯತ್ನಗಳು” ಹಾಗೂ “ಬಾಹ್ಯಶಕ್ತಿಗಳ ಜೊತೆಯಾಗಿ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವುದು” ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವಾಗಿದೆ. ಅಂದು ಬ್ರಿಟೀಷರ ಕಾಲದಲ್ಲಿ ಸರ್ಕಾರವು ಜನರಿಂದ ಆಯ್ಕೆಯಾಗಿ ಪ್ರತಿನಿಧಿಸುತ್ತಿರಲಿಲ್ಲ ಆದರೆ, ಸ್ವಾತಂತ್ರ್ಯ ಭಾರತದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರವು ಅಸ್ತಿತ್ವದಲ್ಲಿರುತ್ತದೆ. ಅಂದರೆ ಇಲ್ಲಿ ಜನರ ಅಭಿಪ್ರಾಯಕ್ಕೆ ಮಾನ್ಯತೆ ಇದೆ ಎಂದಾಯಿತು.
ಇನ್ನು ಈ ಕಾಯ್ದೆಯೂ ಇಂಗ್ಲೆಂಡಿನಲ್ಲಿ 1839 ರಂದು ರಾಜದ್ರೋಹದ ಕಾನೂನಾಗಿ  ಜಾರಿಗೆ ತರಲಾಯಿತು.  ಆ ಕಾಯ್ದೆಯು ಇಂಗ್ಲೆಂಡಿನಲ್ಲಿ ಅಸ್ತಿತ್ವದಲ್ಲಿ ಇಲ್ಲ ಎಂಬುದು ಕೆಲವರ ವಾದವಾಗಿದೆ. ಇಂಗ್ಲೆಂಡಿನಲ್ಲಿ ಇಂದು ಕೂಡ ಸಣ್ಣ ಪ್ರಮಾಣದಲ್ಲಿ ಅರಸೊತ್ತಿಗೆಯನ್ನು ಕಾಣಬಹುದು. ಇಂಗ್ಲೆಂಡಿನಲ್ಲಿ ವರ್ಷದ ಪ್ರಥಮ ಸಂಸತ್ತನ್ನು ಇಂಗ್ಲೆಂಡಿನ ರಾಣಿ ತಮ್ಮ ಭಾಷಣದ ಮೂಲಕ ಉದ್ಘಾಟಿಸುತ್ತಾರೆ. ಆದರೆ ಭಾರತದಲ್ಲಿ ಈ ಕಾರ್ಯವನ್ನು ಸಂಸದರು ಆಯ್ಕೆ ಮಾಡಿದ ರಾಷ್ಟ್ರಪತಿಯವರು ಮಾಡುತ್ತಾರೆ. ಆದಕಾರಣ ಭಾರತ ಮತ್ತು ಇಂಗ್ಲೆಂಡನ್ನು ತುಲನೆ ಮಾಡುವುದು ಸಮಂಜಸವಲ್ಲ. 
           ಅಮೇರಿಕಾದಲ್ಲಿ 1798 ರಂದು ದೇಶದ್ರೋಹ ಕಾನೂನು ಜಾರಿಗೆ ಬರುತ್ತದೆ. ಆದರೆ ಅದನ್ನು 1820 ರಲ್ಲಿ ರದ್ದು ಮಾಡುತ್ತಾರೆ ಆನಂತರ 1918 ರಲ್ಲಿ ಮತ್ತೆ ಅದನ್ನು ಮರುಸ್ಥಾಪಿಸಲಾಗುತ್ತದೆ. ಇನ್ನು ಆಸ್ಟ್ರೇಲಿಯಾ 1984 ರಲ್ಲಿ ದೇಶದ್ರೋಹದ ಕಾನೂನನ್ನು ರದ್ದು ಮಾಡುತ್ತದೆ. ಮತ್ತೆ ಅದನ್ನು 2010 ರಲ್ಲಿ “ಅರ್ಜಿಂಗ್‌ ವೈಲೆನ್ಸ್‌ ಅಫೆನ್ಸಸ್”‌ ಎನ್ನುವ ಹೆಸರಿನಲ್ಲಿ ಮತ್ತೆ ಮರುಸ್ಥಾಪಿಸುತ್ತದೆ. ದೇಶದ್ರೋಹದ ಕಾನೂನನ್ನು ತೆಗೆದು ಅದರಿಂದಾದ ಅನಾನುಕೂಲಗಳಿಂದಾಗಿ ಮತ್ತೆ ಮರುಸ್ಥಾಪಿಸಿರುವುದನ್ನು ಕಾಣಬಹುದು.
ರಾಷ್ಟ್ರೀಯ ಕಾನೂನು ಆಯೋಗ ದೇಶದ್ರೋಹದ ಕುರಿತು ಇತ್ತೀಚಿನ ಸಮಾಲೋಚನ ಕ್ರಿಯೆಯಲ್ಲಿ “ಸಾರ್ವಜನಿಕ ಸುವ್ಯವಸ್ಥೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಅಥವಾ ಹಿಂಸಾಚಾರ ಮತ್ತು ಕಾನೂನುಬಾಹಿರ ವಿಧಾನಗಳಿಂದ ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಮಾಡಿದ ಕೃತ್ಯಗಳಲ್ಲಿ ಮಾತ್ರ ಈ ಕಾಯ್ದೆಯನ್ನು ಬಳಸಬಹುದು ಎಂದು ಹೇಳಲಾಗಿದೆ. 
             ಭಾರತದ ಸರ್ವೋಚ್ಚ ನ್ಯಾಯಾಲಯವು ದೇಶದ್ರೋಹದ ಕಾನೂನಿಗೆ ಸಂವಿಧಾನಾತ್ಮಕ ಮಾನ್ಯತೆಯನ್ನು ಎತ್ತಿ  ಹಿಡಿದಿದೆ. ಕೇದಾರನಾಥ್‌ ಸಿಂಗೆ ವಿರುದ್ಧ ಬಿಹಾರ ಸರ್ಕಾರ ಪ್ರಕರಣ “ಒಬ್ಬ ವ್ಯಕ್ತಿಯ ಅವನ ಕೃತ್ಯಗಳು ಹಿಂಸಾಚಾರ ಅಥವಾ ಪ್ರಚೋದನೆ ಅಥವಾ ಸಾರ್ವಜನಿಕ ಹಾನಿ ಉಂಟುಮಾಡುವ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವ ಪ್ರವೃತ್ತಿಯನ್ನು ಉಂಟುಮಾಡಿದರೆ ದೇಶ ದ್ರೋಹಕ್ಕಾಗಿ ಕಾನೂನು ಕ್ರಮ ಜರುಗಿಸಬಹುದೆಂದು ಹೇಳಿದೆ. 
ಈ ಮೇಲಿನ ಸರ್ವೋಚ್ಚ ನ್ಯಾಯಾಲಯದ ಹೇಳಿಕೆಗಳನ್ನು ಗಮನಿಸಿದರೆ ಎಲ್ಲೂ ಕೂಡ ಸರ್ಕಾರದ  ವಿರುದ್ಧ ಲೇಖನವನ್ನು ಬರೆಯುವ ಟೀಕಿಸುವ ಹಕ್ಕನ್ನು ಕೊಡಮಾಡಿ ದೇಶದ್ರೋಹದ ಕಾನೂನಿಗೆ ಸಂವಿಧಾನಾತ್ಮಕ ಮಾನ್ಯತೆಯನ್ನು ನೀಡಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಶಾಶ್ವತವಲ್ಲ ಯಾವುದೋ ಒಂದು ಅನಿರೀಕ್ಷಿತ ಸಮಯದಲ್ಲಿ ಸರ್ಕಾರಗಳು ಕಾನೂನನ್ನು ದುರುಪಯೋಗ ಮಾಡಿಕೊಂಡ ಮಾತ್ರಕ್ಕೆ ದೇಶದ ಸಂವಿಧಾನಾತ್ಮಕ ಕಾನೂನನ್ನು ರದ್ದು ಮಾಡುವುದು ಸಮಂಜಸವಲ್ಲ, ದೇಶದೊಳಗಿದ್ದು ದೇಶದ ಬಗ್ಗೆ ದ್ರೋಹ ಮಾಡುವವರನ್ನು ಶಿಕ್ಷಿಸಲು ಭಯೊತ್ಪಾದನಾ ಚಟುವಟಿಕೆಗಳನ್ನು ತಡೆಯಲು ಕಾನೂನು ರೀತ್ಯಾ ಸ್ಥಾಪಿತವಾದ ಸರ್ಕಾರವನ್ನು ಉಳಿಸಿಕೊಳ್ಳಲು ದೇಶದ್ರೊಹದ ಕಾಯ್ದೆ ಪ್ರಸ್ತುತ ಎಂದು ಹೇಳಬಹುದು.
ದೇಶದ್ರೋಹದ ಕಾನೂನಿನ ಬಗ್ಗೆ ಸಮಗ್ರವಾಗಿ ನೋಡುವುದಾದರೆ ಈ ಕಾನೂನಿನ ಅಗತ್ಯತೆ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಕಾಣಬಹುದಾಗಿದೆ ಏಕೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ವಿರುದ್ಧದ ಸಂಚುಗಳಿಗೆ ಹಾಗೂ ವಾಕ್‌ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ದೇಶದಲ್ಲಿನ ಆಂತರಿಕ ಗಲಭೆಗಳಿಗೆ ಪ್ರಚೋದಿಸುತ್ತಿರುವ ಈ ಸಂಧರ್ಭದಲ್ಲಿ ದೇಶದ್ರೋಹ ಕಾನೂನು ಅತ್ಯಗತ್ಯವಾಗಿ ಬೇಕಾಗಿದೆ. ಆದ್ದರಿಂದ ದೇಶದ್ರೋಹ ಕಾನೂನು ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವಕ್ಕೆ ವಿರೋಧವಾಗಿಲ್ಲ ಎಂದು ಹೇಳಬಹುದು.

Thursday, August 11, 2022

ಸ್ವಾತಂತ್ರ್ಯ

           ಅವಳು ಪಂಜರದ ಗಿಳಿಯಂತೆ ನೋಡಲು ಬಲು ಸುಂದರ ಗಿಳಿಯ ಪಂಜರವು ಅಷ್ಟೇ ಸುಂದರ. ಆದರೇನು ಮಾಡುವುದು ಅವಳು ಪಂಜರದಲ್ಲಿ ಬಂಧನವಾದ ಗಿಣಿ. ಅವಳ ಅಂತರಂಗದಲ್ಲಿ ಸ್ವಾತಂತ್ರ್ಯದ ಕಿಚ್ಚು. ಸುಂದರ ಕುಟುಂಬ ಒಬ್ಬಳೇ ಮಗಳು ಒಬ್ಬನೇ ಮಗ ಯಾವುದಕ್ಕೂ ಕೊರತೆಯಿಲ್ಲ. ಸಣ್ಣ ವಯಸ್ಸಿನಿಂದಲೂ ಅಪ್ಪನ ಮುದ್ದಿನ ಮಗಳಾಗಿ ಅಪ್ಪನ ಪ್ರೀತಿ ಕಾಳಜಿಯಲ್ಲಿ ಬೆಳೆದವಳು. ಅಪ್ಪನಷ್ಟು ಮಗಳನ್ನು ಮತ್ತಿನ್ಯಾರು ಪ್ರೀತಿಸಲು ಸಾಧ್ಯ. ಅದೇ ಅವಳಿಗೆ ಜೈಲುಶಿಕ್ಷೆ. ಅಪ್ಪನ ಪ್ರೀತಿ ಎಂದರೆ ಅವಳಿಗೆ ಉಸಿರುಗಟ್ಟಿಸುತ್ತಿದೆ.
          ಅವಳಿಗೆ ಸ್ವಾತಂತ್ರ್ಯವಾಗಿ ಇರಬೇಕೆನ್ನುವ ಬಯಕೆ, ಸಮಾಜವನ್ನು ಅರಿತ ತಂದೆ ತಮ್ಮ ಕಟ್ಟುಪಾಡುಗಳಲ್ಲಿ ಬೆಳೆಸಲು ಬಯಸಿದರು. ಅವಳದು ಉದಾತ್ತ ಚಿಂತನೆ. ಜೊತೆಯಲ್ಲೇ ಹುಟ್ಟಿ ಬೆಳೆದ ತಮ್ಮನಿಗಿರುವ ಸ್ವಾತಂತ್ರ್ಯ ನನಗೆ ಇಲ್ಲ ಎನ್ನುವ ಪ್ರಶ್ನೆ ? ಅವಳಿಗೆ ಚಂದದ ಆಟ ಆಡುವ ಕನಸು ಆದರೆ ಕಳಿಸಲಿಲ್ಲ. ಅವಳಿಗೆ ಭರತನಾಟ್ಯ ಕಲಿಯುವ ಆಸೆ, ವೀಣೆ ನುಡಿಸುವ ಆಸೆ ಆದರೆ ಆಕೆಗೆ ನಿರ್ಬಂಧ. ಓದಿನಲ್ಲಿ ಅವಳು ಯಾರಿಗೂ ಕಮ್ಮಿ ಇಲ್ಲವೇನೋ ಅನ್ನುವಂತೆ ಇದ್ದವಳು. ಅವಳು ಬಹಿರಂಗವಾಗಿ ವಿರೋಧಿಸಲಿಲ್ಲ ಅಪ್ಪನನ್ನು ಏಕೆಂದರೆ ಅಪ್ಪನ  ಕಾಳಜಿಯೇ ಆಕೆಗೆ ಭಯವಾಗಿತ್ತು. ಅಪ್ಪನ ಮೇಲೆ ಇಲ್ಲದ ಕೋಪ ಆದರೆ ತೋರಿಸಿಕೊಳ್ಳುವುದಿಲ್ಲ ಅಪ್ಪನೆದುರು, ಏಕೆಂದರೆ ಅಪ್ಪ ಆಶ್ರಯದಾತ.
          ಕಾಲೇಜಿನ ದಿನಗಳು ಆರಂಭವಾದವು ಮತ್ತೆ ಸ್ವಾತಂತ್ರ್ಯದ ಆಸೆ ಆದರೇನು ಮಗಳನ್ನು ದೂರ ಕಳಿಸಲು ಒಪ್ಪದ ತಂದೆ ಮನೆಯ ಹತ್ತಿರ  ಇರುವ ಕಾಲೇಜಿಗೆ ಸೇರಿಸಿದ. ಆಗಲೂ ಮಾತನಾಡಲಿಲ್ಲ ಅವಳು, ಅಪ್ಪನಿಗೆ ಹಿಡಿಶಾಪ ಅಪ್ಪ ಸ್ವಾತಂತ್ರವನ್ನು ಕೊಟ್ಟಿಲ್ಲವೆಂದು.
          ಬದುಕಿನ ರಾಜಕುಮಾರ ನಿಗಾಗಿ ಕನಸು, ರಾಜಕುಮಾರ ಬರುತ್ತಾನೆ ನನ್ನ ಈ ಮನೆಯೆಂಬ ಪಂಜರದಿಂದ ಬಿಡುಸುತ್ತಾನೆಂದು, ಆದರೆ ವಯಸ್ಸು ಕಳೆಯುತ್ತಿದೆ. ಮದುವೆಯ ಆಸೆ ಮುಗಿಯುತ್ತಿದೆ. ದೇವರಿಗೂ ಕೇಳಿಸಲಿಲ್ಲ ಆಕೆಯ ಕೂಗು ಏಕೆಂದರೆ ಅವಳು ಎಂದು ಮಾತನಾಡಲಿಲ್ಲ ಮನಸ್ಸಿನಲ್ಲಿ ಬಯಸಿದಳು ಎಲ್ಲವನ್ನು, ದೂರಿದಳು ಕಾಣದ ದೇವರನ್ನು ಆಕಾಶ ನೋಡುತ್ತ, ಆದರೆ ಮರೆತಳು ದೇವರು ಮಾತು ಕೊಟ್ಟಿದ್ದು ತನ್ನ ಇಷ್ಟವನ್ನು ಹೇಳಲೆಂದು. ದೂರುತ್ತಲೇ ಇದ್ದಳು ಅಪ್ಪ ಸ್ವಾತಂತ್ರ ಕೊಟ್ಟಿಲ್ಲವೆಂದು ಆದರೆ ಮರೆತೇಬಿಟ್ಟಳು ಸ್ವಾತಂತ್ರ ಕೊಡುವುದಲ್ಲ ದಕ್ಕಿಸಿಕೊಳ್ಳುವುದೆಂದು....

Sunday, July 24, 2022

My crush is a Genuine girl.

          
              At the first day of college chandu was surprised to visit his college with a dream of higher education. His mom and dad admitted him to the college for higher studies in engg., Her mom have a hope on his son that he will complete his studies with campus recuritment.
          At the first day of college mom droped his son and said we both hope on you, that you will be successful. He smiled and reply Mom belive in me and he moved towards class. Where in college he had new friends on first day itself because of his too talkative nature as the days passes one day he saw a girl in his college corridor. He was impressed by her first look but she passed infront of him by a fraction of second. He was impressed in such a manner that she came in his dream he was feeling like they both are having coffee all of a sudden he woke up then he realise that it was a dream.
          Next day when he was in class room someone asked lecture, May i come in? The voice was polite. Yes it was a girl. She entered into a class room. Chandu was shocked because his cursh is classmate now on. As the days passed they become a friends. Chandu was impressed by her nature, character and by her straight forwardness. Chandu was planning to propose her on Valentine day.
           A day before Valentine day Chandu recived a call from her. She told chandu i want to take a gift, come let we go and buy. You are the perfect person to select that gift. Both went to gift shop she said Chandu you are my bestiee. So i selected you to buy a gift for my love. I have a boyfriend his birthday is tommrow so select gift that he should get surprised by that gift. Chandu smiled and said OK. His heart broken into pieces but he hide his feelings infront of her, he selected a unique gift and said to her, He is lucky to have a genuine girl like you and he moved away with a broken heart....

Sunday, June 19, 2022

ಅಪ್ಪ ಕಾಣದ ದೇವರಾದ...

               ಅಪ್ಪ ಅವನು ಕಣ್ಣಮುಂದೆ ಇದ್ದರೂ ಕಾಣದ ದೇವನಾದ. ಅವನು ಸಮಾಜಕ್ಕೂ ಸಿಗಲಿಲ್ಲ ಕುಟುಂಬಕ್ಕೂ ಸಿಗಲಿಲ್ಲ. ಆದರೆ ಅದೆಲ್ಲವೂ ಅವನಿಂದಲೇ  ನಿರ್ಮಾಣವಾದದ್ದು. ಸಮಾಜಕ್ಕೆ ಅರಿವೇ ಆಗಲಿಲ್ಲ ಅವನಿಲ್ಲದಿದ್ದರೆ ಎಲ್ಲವೂ ಶೂನ್ಯವೆಂದು. ಅವನಿಂದಲೇ ಸೃಷ್ಟಿಯ ಸಮತೋಲನ. ಆದರೂ ಅವನು ಯಾರಿಗೂ ಕಾಣದಾದ. ಅವನ ಬೆವರಿನ ಹನಿ ಮನೆಗಳಲ್ಲಿ ಕಾಣಲಿಲ್ಲ. ಬೆಳಿಗ್ಗೆ ಸೂರ್ಯೋದಯದಲ್ಲಿ ಮನೆ ಬಿಟ್ಟು ಮನೆಗೆ ಬರುವುದು ಸಂಜೆಯ ಸಮಯದಲ್ಲಿ, ಅಮ್ಮ ಎಲ್ಲಾ ಕಡೆ ಗೋಚರಿಸಿದಳು. ಏಕೆಂದರೆ ಅವಳು ಮನೆಯಲ್ಲಿಯೇ ಇದ್ದಳು. ಅವಳು ಮನೆಯಲ್ಲಿ ಮಕ್ಕಳನ್ನು ಹಾರೈಕೆ ಮಾಡುವಂತೆ ಮಾಡಿದ ಅಪ್ಪ ಕಾಣದಾದ. ಮಕ್ಕಳಿಗಾಗಿ ಪರಿಶ್ರಮಿಸಿ ತಾಯಿಯಂತೆ ಅವನು ಮಾಡಿದ ಸೇವೆಗಳು ಅದೇಷ್ಟು ಆದರೂ ಅವನು ಕಾಣದಾದ.
               ತಾಯಿ ಮನೆಯಲ್ಲಿ ಆರೈಕೆ ಮಾಡಿದರೆ ಹೊರಗಡೆ ವಯಸ್ಸಿಗೆ ಬಂದ ಮಕ್ಕಳು ದಾರಿ ತಪ್ಪಬಾರದು ಎಂದು ಕಣ್ಗಾವಲಿನಲ್ಲಿ ಚಿಪ್ಪಿನೊಳಗಿನ ಮುತ್ತಿನಂತೆ ಹಗಲು ರಾತ್ರಿ ಎನ್ನದೆ ನೋಡಿಕೊಂಡ ಅಪ್ಪ ಕಾಣದಾದ. ದುಡಿದು ತಿನ್ನುವ ಬದುಕಿನ ದಾರಿಯನ್ನು ಹೇಳಿಕೊಟ್ಟ ಅಪ್ಪ. ಮಕ್ಕಳಿಗೆ ಶಕ್ತಿ ಬರುತ್ತಿದ್ದಂತೆ ಕಾಣದಾದ. ತಾನು ಮಾಡಿದ ತಪ್ಪು ತನ್ನ ಮಕ್ಕಳ ಬದುಕಿನಲ್ಲಿ ಆಗಬಾರದೆಂದು ಬುದ್ಧಿ ಹೇಳಿದ ಅಪ್ಪ ತನ್ನ ಮಕ್ಕಳು ಬೇರೆಯವರ ಬಾಯಿಗೆ ಆಹಾರ ವಾಗಬಾರದು ಎಂದು ಬಯಸಿದ್ದ ಅಪ್ಪ ನಿಷ್ಟುರನಾದ. ದಾರಿತಪ್ಪಿದ ಮಕ್ಕಳನ್ನು ಸರಿದಾರಿಗೆ ತರಲು ಪ್ರಯತ್ನಿಸಿದ ಅಪ್ಪ ಸಮಾಜದ ನಿಂದನೆ ಒಳಗಾದ.
             ತಾನು ಬರೆಯುತ್ತಿರುವ ಪುಸ್ತಕದ ಹಾಳೆಗಳ ಹಿಂದೆ ಅಪ್ಪನ ಬೆವರಿನ ಹನಿ ಇದೆಯೆಂದು ತಿಳಿಯದ ಹುಡುಗ ತಾನು ಓಡಿಸುತ್ತಿರುವ ಬೈಕಿನ ಹಿಂದೆ ಅಪ್ಪನ ಬೆವರಿನ ಹನಿ ಸುಡುವುದನ್ನು ಕಾಣದ ಮಗ ತನ್ನ ಹೊಸ ಬಟ್ಟೆಗಳ ಹಿಂದೆ ಅಪ್ಪನ ಪರಿಶ್ರಮ ಇದೆ ಎಂದು ತಿಳಿಯದ ಮಗ ಅಪ್ಪನನ್ನ ದೂರ ತೊಡಗಿದ. ಇದೆಲ್ಲವನ್ನೂ ಕೊಡಿಸಿದ ಅಪ್ಪ ಕಾಣದಾದ. ತನ್ನ ಹೆಂಡತಿ ಮಕ್ಕಳಿಗಾಗಿ ಕೆಲವೊಮ್ಮೆ ಸಮಾಜದಲ್ಲಿ ಅವಮಾನ ಅಪಮಾನಗಳನ್ನು ಎದುರಿಸಿದ ಅಪ್ಪ ಮನೆಯಲ್ಲಿ ಮಕ್ಕಳಿಂದಲೂ ತಿರಸ್ಕೃತಗೊಂಡು ದೂರದಲ್ಲಿ ನಿಂತು ತನ್ನ ಹೆಂಡತಿ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಬಯಸುತ್ತ ದೂರವಾದ ಕೊನೆಯಲ್ಲಿ ದೇವರಾದ.....

Tuesday, May 31, 2022

Never be ashamed of being Alone

           Yes many time we feel lonely  but in reality , we always remain alone. The fact is being alone itself is a strength. Many says that they are missing  someone. The only question that I would like to ask is until when ? Further I say till your last breath? or till the necessity is at its end?
           None will stand by you in every step of life, as the time passes people will change according to their needs and moods. So be alone, time and again a question like how to be alone ? pops up in the mind . The answer is simple, loneliness is not in outerworld. It sujected to the inner world. Here I am not talking about the sprituality. Because, spirtuality is a different concept.Thus being alone means self preservation. Its like keeping a mind set which will not make you feel alone. Be yourself. Again you may question that,  How can anyone be alone without accompanied by another human beings ? If you connect with humans, the chances of getting disappointed is high. For example if you connect to a boy/girl, a small change in their behaviour leads to dissapointment, this is mainly due to expecting things from them. So get connected with you & your good habits.
         Thus, it can be said that, 'change' is the only 'constant' in this world. Be true to your heart and Soul. Except less from others. none will stay at the end of the day. Never believe that some one will stay with you forever. Believing alike is stupidity. Learn to enjoy being you.  If you Enjoy with yourself , you are not going to loose anyone. So never bother assume that some one will stay. Be Gentle, kind and love yourself.

Monday, February 21, 2022

ಅಂತರಾಷ್ಟ್ರೀಯ ಮಾತೃಭಾಷಾ ದಿನ

ಕನ್ನಡ ಕರ್ನಾಟಕದ ರಾಜ್ಯ ಭಾಷೆ ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ ೫.೫ ಕೋಟಿ ಜನರ ಮಾತೃಭಾಷೆ ಕನ್ನಡವಾಗಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ರಾಜಾಶ್ರಯ ಪಡೆಯಿತು. ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ. ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.

ಕನ್ನಡ ಬಳಕೆಯಲ್ಲಿರುವ  
ಪ್ರದೇಶಗಳು:
ಕರ್ನಾಟಕ, ಭಾರತ, ಕೇರಳಕ್ಕೆ ಸೇರಿಹೋಗಿರುವ ಕಾಸರಗೋಡು, ಮಹಾರಾಷ್ಟ್ರ, ಆಂಧ್ರಪ್ರದೇಶ,ತೆಲಂಗಾಣ, ಗೋವಾ, ತಮಿಳುನಾಡು ಮುಂತಾದೆಡೆಗಳಲ್ಲಿಯೂ ಭಾರತದಿಂದ ಹೊರಗಿರುವ ಕೆನಡಾ, ಆಸ್ಟ್ರೇಲಿಯ, ಮಲೇಷಿಯಾ, ಸಿಂಗಾಪುರ, ಯು.ಕೆ., ಜರ್ಮನಿ, ಹಾಂಗ್ ಕಾಂಗ್, ನ್ಯೂಜಿಲ್ಯಾಂಡ್, ಮೌರೀಷಿಯಸ್, ಯುನೈಟೆಡ್ ಅರಬ್ ಎಮಿರೇಟ್ಸ್, ಥಾಯ್‍ಲ್ಯಾಂಡ್. ಮುಂತಾದೆಡೆಗಳಲ್ಲಿಯೂ ಬದುಕಿರುವ ಜನಗಳು ಕನ್ನಡ ಭಾಷೆಯನ್ನು ಬಳಸುತ್ತಾರೆಂಬುದರ ಬಗ್ಗೆ ಅಧಿಕೃತ ವಿವರಗಳು ಇವೆ.

ಒಟ್ಟು 
ಮಾತನಾಡುವವರು:
೬೪ ದಶಲಕ್ಷ (೨೦೧೧), ಇವರಲ್ಲಿ ೫೫ ದಶಲಕ್ಷ ಜನರಿಗೆ ಕನ್ನಡ ಮಾತೃಭಾಷೆಯಾಗಿದೆ.

ಭಾಷಾ ಕುಟುಂಬ:

ದ್ರಾವಿಡ ಭಾಷೆಗಳು
ದಕ್ಷಿಣ ದ್ರಾವಿಡ
ತಮಿಳು - ಕನ್ನಡ
ಕನ್ನಡ – ಬಡಗ
ಕನ್ನಡ ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಕರ್ನಾಟಕ.

ಭಾರತ ನಿಯಂತ್ರಿಸುವ ಪ್ರಾಧಿಕಾರ:
ಕರ್ನಾಟಕ ಸರ್ಕಾರದ ಹಲವು ಸಂಸ್ಥೆಗಳು.

ಭಾಷೆಯ ಸಂಕೇತಗಳು
ISO 639-1:
kn
ISO 639-2:
kan
ISO/FDIS 639-3:

ಭಾಷಿಕ ಚರಿತ್ರೆ
ಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ. ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ದ್ರಾವಿಡ ಭಾಷಾತಜ್ಞ ಸ್ಟಾನ್‍ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು;

ಹಳಗನ್ನಡ ಕ್ರಿ.ಶ. ೪೫೦ರಿಂದ ಕ್ರಿ.ಶ. ೧೨೦೦ರವರೆಗೆ,
ನಡುಗನ್ನಡ ಕ್ರಿ. ಶ. ೧೨೦೦ರಿಂದ ಕ್ರಿ.ಶ. ೧೭೦೦ರವರೆಗೆ ಮತ್ತು
ಹೊಸಗನ್ನಡ ಕ್ರಿ. ಶ. ೧೭೦೦ರಿಂದ ಪ್ರಸ್ತುತ ಕಾಲಘಟ್ಟದವರೆಗೆ.
ಕನ್ನಡ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಬಹುದಾದ ಕಾಲಮಾನಗಳನ್ನು ಈ ಕೆಳಗಿನಂತೆಯೂ ನಿಷ್ಕರ್ಷಿಸಿದ್ದಾರೆ.

ಪೂರ್ವದ ಹಳಗನ್ನಡ – ಅನಿಶ್ಚಿತ ಕಾಲಘಟ್ಟದಿಂದ ೭ನೇಯ ಶತಮಾನದವರೆಗೆ;
ಹಳಗನ್ನಡ – ೭ರಿಂದ ೧೨ನೆಯ ಶತಮಾನದವರೆಗೆ;
ನಡುಗನ್ನಡ – ೧೨ನೆಯ ಶತಮಾನದ ಪ್ರಾರಂಭದಿಂದ ೧೮ನೆಯ ಶತಮಾನದವರೆಗೆ;
ಹೊಸಗನ್ನಡ – ೧೮ನೆಯ ಶತಮಾನದ ಆದಿಯಿಂದ ಈಚೆಗೆ.
ಕಳೆದ ಶತಮಾನದಲ್ಲಿ ಎಂದರೆ ೨೦ನೆಯ ಶತಮಾನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಬಹಳ ವ್ಯಾಪಕವಾಗಿ ನಡೆಯಿತು. ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯತೊಡಗಿದೆ.

ಕನ್ನಡದಲ್ಲಿ ಸಂಸ್ಕೃತದ ಪ್ರಭಾವ ಅಸಾಧಾರಣವಾದುದು. ಪ್ರಾಕೃತ, ಪಾಳಿ ಮುಂತಾದ ಭಾಷೆಗಳ ಪ್ರಭಾವವೂ ಕನ್ನಡಕ್ಕಿದೆ. ಕ್ರಿ.ಪೂ ಮೂರನೆಯ ಶತಮಾನಕ್ಕೂ ಮುನ್ನವೇ ಕನ್ನಡ ಮೌಖಿಕ ಪರಂಪರೆಯ ಭಾಷೆಯಾಗಿ ರೂಪುಗೊಂಡಿತ್ತೆಂಬುದಕ್ಕೂ ಪ್ರಾಕೃತ ಭಾಷೆಯಲ್ಲಿಯೂ ತಮಿಳು ಭಾಷೆಯಲ್ಲಿಯೂ ಬರೆಯಲ್ಪಟ್ಟ ಶಾಸನಗಳಲ್ಲಿ ಕನ್ನಡದ ಶಬ್ದಗಳು ಬಳಕೆಯಾಗಿವೆಯೆಂದೂ ಇತಿಹಾಸ ತಜ್ಞ ಐರಾವತಂ ಮಹಾದೇವನ್ ಸಾಬೀತುಪಡಿಸಿದ್ದಾರೆ. ಆ ಸಂಶೋಧನೆಯ ಪ್ರಕಾರ ಕನ್ನಡ ಅಗಾಧ ಪ್ರಮಾಣದ ಜನತೆ ಮಾತನಾಡುತ್ತಿದ್ದ ಭಾಷೆಯಾಗಿದ್ದಿತೆಂದೂ ತಿಳಿದುಬಂದಿದೆ. ಕೆ.ವಿ. ನಾರಾಯಣರು ಹೇಳುವಂತೆ, ಇಂದಿಗೆ ಕನ್ನಡದ ಉಪಭಾಷೆಗಳೆಂದು ಗುರುತಿಸಲ್ಪಡುವ ಭಾಷೆಗಳಲ್ಲಿ ಹೆಚ್ಚಿನವು ಕನ್ನಡದ ಹಳೆಯ ರೂಪವನ್ನು ಹೋಲುವಂಥದ್ದಾಗಿರಬಹುದು. ಅಲ್ಲದೆ ಅನ್ಯ ಭಾಷೆಗಳ ಪ್ರಭಾವ ವ್ಯಾಪಕವಾಗಿ ಒಳಗಾಗದ ಭಾಷೆಗಳು ಇವೆಂದೂ ಅಭಿಪ್ರಾಯಪಡುತ್ತಾರೆ.

ಸಂಸ್ಕೃತದ ಪ್ರಭಾವ
ಕನ್ನಡ ಭಾಷೆಗೆ ಪೂರ್ವಕಾಲದಿಂದಲೂ ಮೂರು ಬಗೆಯ ಪ್ರಭಾವಗಳು ಉಂಟಾಗಿವೆ; ಪಾಣಿನೀಯ ಸಂಸ್ಕೃತ ವ್ಯಾಕರಣದ್ದು, ಕಟಂತ್ರ ಮತ್ತು ಶಕಟಯಾನದಂತಹ ಅಪಾಣೀನೀಯ ವ್ಯಾಕರಣಗಳದ್ದು ಹಾಗೂ ಪ್ರಾಕೃತ ವ್ಯಾಕರಣದ್ದು.
ಪ್ರಾಚೀನ ಕರ್ಣಾಟಕದಲ್ಲಿ ಗ್ರಾಂಥಿಕ ಪ್ರಾಕೃತ ಉಪಯೋಗದಲ್ಲಿತ್ತು ಎಂಬುದಕ್ಕೆ ಪುರಾವೆಗಳಿವೆ. ದೇಶ್ಯ ಪ್ರಾಕೃತವನ್ನು ಮಾತನಾಡುತ್ತಿದ್ದವರು ಮತ್ತು ಕನ್ನಡ ಮಾತನಾಡುತ್ತಿದ್ದವರ ಸಂಪರ್ಕದೊಂದಿಗೆ ಪರಸ್ಪರ ಪೋಷಿಸುತ್ತಲೇ ಬೆಳೆದುವು ಎಂಬುದೂ ಸ್ಪಷ್ಟವಾಗಿದೆ. ಕನ್ನಡ ಉಪಾಸನೆಯ ಮತ್ತು ರಾಜಸತ್ತೆಯ ಭಾಷೆಯಾಗಿ ಉಪಯೋಗಿಸಲ್ಪಡುವ ಮುನ್ನವೇ ಈ ಸಂಪರ್ಕ ಮತ್ತು ತನ್ನಿಮಿತ್ತವಾದ ಕೊಡು ಕೊಳ್ಳುಗೆ ಸಂಭವಿಸಿರಬಹುದು. ಕನ್ನಡದ ಧ್ವನಿಮಾದಲ್ಲಿಯೂ, ಸಂರಚನೆಯಲ್ಲಿಯೂ, ಶಬ್ದಸಂಪತ್ತಿಯಲ್ಲಿಯೂ, ವ್ಯಾಕರಣದಲ್ಲಿಯೂ ಹಾಗೆಯೇ ಭಾಷಿಕ ಪ್ರಯೋಗದಲ್ಲಿಯೂ ಸಂಸ್ಕೃತ ಮತ್ತು ಪ್ರಾಕೃತದ ಪ್ರಭಾವ ಸ್ಪಷ್ಟವಾಗಿದೆ.
ಕನ್ನಡದಲ್ಲಿ ಬಹಳ ಸಾಮಾನ್ಯವಾಗಿ ತತ್ಸಮ ಮತ್ತು ತದ್ಭವ ಶಬ್ದಗಳನ್ನು ಕಾಣುತ್ತೇವೆ. ಕನ್ನಡದ ಬಣ್ಣ ಎಂಬ ಶಬ್ದ ಪ್ರಾಕೃತದ ವಣ್ಣ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ವಣ್ಣ ಎಂಬ ಶಬ್ದ ಸಂಸ್ಕೃತದ ವರ್ಣ ಎಂಬ ಶಬ್ದದಿಂದ ಉಂಟಾಯಿತು. ಕನ್ನಡದ ಹುಣ್ಣಿಮೆ ಎಂಬ ಶಬ್ದ ಪ್ರಾಕೃತದ ಪುಣ್ಣಿವ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ಪುಣ್ಣಿವ ಎಂಬ ಶಬ್ದ ಸಂಸ್ಕೃತದ ಪೌರ್ಣಮಿ ಎಂಬ ಶಬ್ದದಿಂದ ಉಂಟಾದ ತದ್ಭವವಾಗಿದೆ.
ಕನ್ನಡದಲ್ಲಿ ತತ್ಸಮ ಶಬ್ದಗಳು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತವೆ. ದಿನ, ಕೋಪ, ಸೂರ್ಯ, ಮುಖ, ನಿಮಿಷ, ಅನ್ನ ಎಂಬುವು ಕೆಲ ಉದಾಹರಣೆಗಳು.

ನಮ್ಮ ಕನ್ನಡವನ್ನು ಉಳಿಸೋಣ ಇನ್ನೂ ಎತ್ತರಕ್ಕೆ ಬೆಳೆಸೋಣ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.

Saturday, February 19, 2022

ಸಮಯ ಸರಿದಾಗ....

            
                   ಕೆಲವೊಮ್ಮೆ ಅನ್ನಿಸುವುದುಂಟು, ನಾನು ಒಬ್ಬಂಟಿಯಾಗಿ ಇದ್ದೇನೆಂದು. ಸತ್ಯವೇನೆಂದರೆ ನೀವು ಯಾವಾಗಲೂ ಒಬ್ಬಂಟಿ. ಆ ಸತ್ಯದ ಅರಿವನ್ನು ಹುಡುಕುವುದೇ ಈ ಲೇಖನದ ಉದ್ದೇಶ. ಹೌದು ಮನುಷ್ಯ ಸಂಘಜೀವಿ ಎಲ್ಲಿಯವರೆಗೆ ಎಂದು ಕೇಳಿದರೆ ಕೆಲವರಿಗೆ ಉತ್ತರ ದೊರಕುವುದಿಲ್ಲ. ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಸಂಘದಲ್ಲೇ ಇರುತ್ತಾನೆ ಆದರೆ ಯಾವಾಗಲೂ ಒಬ್ಬಂಟಿಯಾಗಿ ಇರುತ್ತಾನೆ ಹೌದು ತನ್ನ ಇರುವಿಕೆಯನ್ನು ತೋರ್ಪಡಿಸಿಕೊಳ್ಳಲು ಹಾಗು ತನ್ನ ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಅವನಿಗೆ ಇನ್ನೊಬ್ಬರ ಅವಶ್ಯಕತೆ ಇರುತ್ತದೆ. ಆವಾಗ ಮನುಷ್ಯ ಸಂಘಜೀವಿಯಾಗುತ್ತಾನೆ ತಾನು ತನ್ನವರು ನನ್ನವರು ಎಂದು ಎಲ್ಲರೂ ಬೇಕಾಗುತ್ತಾರೆ. ಏಕೆಂದರೆ ಅಲ್ಲಿ ಅವನಿಗೆ ಬೇಕಾಗಿದ್ದನ್ನು  ಸಾಧಿಸುವ ಉದ್ದೇಶವಿದೆ. ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತಾನೆ. ಆವಾಗಲೇ ಹುಟ್ಟುವುದು ಸಂಬಂಧಗಳೆಂಬ ಕೊಂಡಿ ಅದಕ್ಕೆ ಹಲವಾರು ಹೆಸರುಗಳು ಸ್ನೇಹ, ರಕ್ತಸಂಬಂಧಿ,ಜಾತಿ ಸಂಬಂಧಿ, ನೆಂಟರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಹೀಗೆ ಹಲವಾರು ಸಂಬಂಧಗಳು.
            ಈ ಸಂಬಂಧಗಳು ಅನಿವಾರ್ಯತೆಗೆ ಅವಶ್ಯಕತೆಗೆ ಸೃಷ್ಟಿಯಾಗುತ್ತವೆ. ಉದಾಹರಣೆಗೆ ಹೇಳುವುದಾದರೆ ಕಾಲೇಜಿನಲ್ಲಿ ಸಹಪಾಠಿ ಎಂಬ ಸಂಬಂಧದಿಂದ ಆರಂಭವಾಗಿ ಸಂಬಂಧಗಳು  ಸ್ನೇಹಕ್ಕೆ ತಿರುಗುತ್ತದೆ ಆನಂತರ ಕೆಲ ವರ್ಷಗಳ ನಂತರ ಒಮ್ಮೆ ಹಿಂದೆ ತಿರುಗಿ ನೋಡಿ ಕಾಲೇಜು ದಿನಗಳಲ್ಲಿ ಗುಂಪುಗುಂಪಾಗಿ ಹುಡುಗರನ್ನು ಹುಡುಗಿಯರನ್ನು ಕಟ್ಟಿಕೊಂಡು ತಿರುಗುತ್ತಿದ್ದವ ಇಂದು ಒಂಟಿಯಾಗಿ ನಿಂತಿರುತ್ತಾನೆ, ಇನ್ನು ರಾಜಕೀಯದಲ್ಲಿ ಜಾತಿ ಸಂಬಂಧಗಳು, ಬದ್ಧ ವೈರಿಗಳಾಗಿರುತ್ತಾರೆ. ಅಂದರೆ ಅಲ್ಲಿ ರಾಜಕೀಯ ಲಾಭದ ಲೆಕ್ಕಾಚಾರಗಳಿರುತ್ತವೆ. ಇನ್ನು ನೆಂಟರಿಗೆ ಒಮ್ಮೆ ಸಾಲವನ್ನು ಕೊಟ್ಟು ನೋಡಿ ಹಣವನ್ನು ವಾಪಸ್ ಕೇಳಿದಾಗ ಅವರ ಮುಖವನ್ನು ಒಮ್ಮೆ ನೋಡಬೇಕು ಆವಾಗ ರಕ್ತ ಸಂಬಂಧಗಳು ಏನು ಎನ್ನುವುದು ಗೊತ್ತಾಗುತ್ತದೆ. ಇನ್ನು ಅಣ್ಣ-ತಮ್ಮಂದಿರ ದಾಯಾದಿ ಕಲಹ ಇಂದು-ನಿನ್ನೆಯದಲ್ಲ ಯುಗಗಳ ಇತಿಹಾಸವಿದೆ ಇನ್ನು ಅಕ್ಕತಂಗಿಯರು ಮದುವೆಯಾಗಿ ಹೋಗುವವರೆಗೂ ಸುಮ್ಮನಿದ್ದು ಗಂಡನ ಮನೆಗೆ ಹೋದ ಕೂಡಲೇ ಅಪ್ಪನ ಆಸ್ತಿಯ ಮೇಲೆ ಕಣ್ಣಿಟ್ಟಿರುತ್ತಾರೆ.
             ಇನ್ನು ಪ್ರೀತಿಯ ವಿಷಯವಂತೂ ಇತ್ತೀಚಿನ ದಿನಗಳಲ್ಲಿ ದೈಹಿಕ ಆಕರ್ಷಣೆಯ ಕೇಂದ್ರಬಿಂದು. ಪ್ರೀತಿ ಎಂಬ ಎರಡು ಅಕ್ಷರ ಇಟ್ಟುಕೊಂಡು ಮಾಡಬಾರದ ಕೆಲಸಗಳನ್ನೆಲ್ಲ ಮಾಡಿಕೊಂಡು ದೈಹಿಕ ಅವಶ್ಯಕತೆ ಮುಗಿದ ಮೇಲೆ ಆಕರ್ಷಣೆ ಕಡಿಮೆಯಾಗಿ ಪ್ರೀತಿಯೆಂಬ ಎರಡಕ್ಷರ ಕಡಿಮೆಯಾಗುತ್ತದೆ. ಇನ್ನೂ ವಿಶೇಷವಾದ ಪ್ರೀತಿ ಗಳಿರುತ್ತವೆ ಲೆಕ್ಕಚಾರದ ಪ್ರೀತಿಗಳು ಹುಡುಗ ಸರ್ಕಾರಿ ನೌಕರದಲ್ಲಿದ್ದಾರೆ ಅವನ ಹತ್ತಿರ ಹಣವೊ, ಕಾರು, ಬಂಗಲೆಗಳು ಇದ್ದರೆ ಪ್ರೀತಿಯು ಉಕ್ಕಿ ಹರಿಯುತ್ತದೆ. ಇನ್ನು ಹುಡುಗಿಯರು ದೈಹಿಕ ಆಕರ್ಷಣೆಗೆ ಮರುಳಾಗುತ್ತಾರೋ ಎಂದು ನೋಡಿ ಕೆಲವು ಹುಡುಗರ ಪ್ರೀತಿ ಹುಟ್ಟುತ್ತದೆ.
           ಒಟ್ಟಿನಲ್ಲಿ ಸಂಬಂಧಗಳ ಅನಿವಾರ್ಯತೆ ಅವಶ್ಯಕತೆ ಮುಗಿದ ಮೇಲೆ ಸಂಬಂಧಗಳು ಬೇಡವಾಗುತ್ತವೆ. ಒಮ್ಮೆ ಪ್ರೀತಿಪಾತ್ರರಾದವರು ಇದ್ದಕ್ಕಿದ್ದಂತೆ ಬೇಡವೆನ್ನಿಸಿ ಬಿಡುತ್ತಾರೆ. ಕೆಲವು ಜನ ಅವರಿಗೆ ಬೇಕಾದಂತೆ ಸಂಬಂಧಗಳನ್ನು ಸಮಯಕ್ಕೆ ಅನುಗುಣವಾಗಿ ಸ್ನೇಹಕ್ಕೂ ಪ್ರೀತಿಗೂ ತಿರುಗಿಸಿ ಬೇಕಾದಂತೆ ಸಂಬಂಧಗಳನ್ನು ಬಳಸಿಕೊಂಡು ಮುಂದೆ ಸಾಗುತ್ತಾರೆ. ಒಟ್ಟಿನಲ್ಲಿ ಎಲ್ಲಾ ಸಂಬಂಧಗಳ ಹಿಂದೆ ಒಂದು ಸಣ್ಣ ಪ್ರಮಾಣದ ಸ್ವಾರ್ಥವಿರುತ್ತದೆ. ಅದಕ್ಕೆ ಸ್ನೇಹವೆಂದು, ಪ್ರೀತಿಯೆಂದು, ಸಂಬಂಧವೆಂದು ನಾಮಕರಣ ಮಾಡಿರುತ್ತಾರೆ.
             ಸಮಯ ಸರಿದಾಗ ಸಂಬಂಧಗಳು ಬೇಡವಾಗುತ್ತವೆ. ಏಕೆಂದರೆ ಅನಿವಾರ್ಯತೆಯಾಗಲಿ, ಅವಶ್ಯಕತೆಯಾಗಲಿ, ಇರುವುದಿಲ್ಲ.ಒಮ್ಮೆ ಕಣ್ಣು ಮುಚ್ಚಿಕೊಂಡು ಎಲ್ಲ ಸಂಬಂಧಗಳನ್ನು ನೆನಪಿಸಿಕೊಳ್ಳಿ ನಿಮಗೆ ಬೆರಳೆಣಿಕೆಯಷ್ಟು ಸಂಬಂಧಗಳು ಉಳಿದಿರುವುದು ತಿಳಿಯುತ್ತದೆ. ಏಕೆಂದರೆ ಅಲ್ಲಿ ಇನ್ನೂ ನಿಮ್ಮ ಅನಿವಾರ್ಯತೆ ಹಾಗೂ ಅವಶ್ಯಕತೆ ಇರುತ್ತದೆ. ಅನಿವಾರ್ಯತೆ ಇಲ್ಲವೆಂದರು  ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆ ಎಂಬ ಕೃತಕತೆಯಲ್ಲಿ ಇಂದಲ್ಲ ನಾಳೆ ಇವರಿಂದ ಯಾವುದಾದರೂ ಸಹಾಯವಾಗಬಹುದೇನೋ ಎಂಬ ಲೆಕ್ಕಾಚಾರದಲ್ಲಿ ಆ ಸಂಬಂಧಗಳು ಇರುತ್ತವೆಯೋ ಹೊರತು ನಿಮ್ಮ ಮೇಲಿನ ಗೌರವದಿಂದ ಅಲ್ಲ. ಸಮಯ ಸರಿದಂತೆ ಸಂಬಂಧಗಳು ನಿಧಾನವಾಗಿ ಹೋಗುತ್ತವೆ. ಕೊನೆಗೆ ಉಳಿಯುವುದು ನೀವು ಒಬ್ಬಂಟಿ ಎಂಬುವ ಸತ್ಯ ಮಾತ್ರ. ನೀವು ಹುಟ್ಟಿದಾಗ ಇದ್ದದ್ದು ಒಬ್ಬರೇ ಸಾಯುವಾಗ ಇರುವುದು ಒಬ್ಬರೇ ಆದರೆ ಮಧ್ಯ ಬಂದವರೆಲ್ಲರೂ ಅವರ ಅನಿವಾರ್ಯತೆ ಮತ್ತು ಅವಶ್ಯಕತೆಯ ಭಾಗವಾಗಿದ್ದರೆಂದು.

Sunday, December 26, 2021

ಸಂಬಂಧಗಳನ್ನು ಉಳಿಸಿಕೊಳ್ಳಬೇಕೆ ?


            ಹೌದು ನಮಗೆ ಹಲವು ಸರಿ ಅನಿಸಿಬಿಡುತ್ತದೆ ತಾಳ್ಮೆಗೂ ಒಂದು ಮಿತಿ ಇದೆಯೆಂದು, ಆದರೂ ಇಂದಿನ ದಿನಗಳ ಕೃತಕತೆಯ ಮುಲಾಜಿಗೆ ಬಿದ್ದು ಬಿಡುತ್ತೇವೆ ಕೆಲವೊಮ್ಮೆ ಅನಿಸುವುದುಂಟು ಈ ಸಂಬಂಧ ನನಗೆ ಬೇಡ ಎಂದು. ಯೋಚಿಸುತ್ತಿದ್ದೀರಾ ಅಲ್ಲವೇ ? ಹೌದು ನಾನು ಹೇಳಹೊರಟಿರುವುದು ಸಂಬಂಧಗಳನ್ನು ಮುಲಾಜಿಲ್ಲದೆ ಮುರಿದುಕೊಳ್ಳುವ ಬಗ್ಗೆ ನಿಮಗೆ ಆಶ್ಚರ್ಯವಾಗಬಹುದು ಎಲ್ಲರೂ ಸಂಬಂಧಗಳನ್ನು ಉಳಿಸಿಕೊಳ್ಳುವ ಬಗ್ಗೆ ಹೇಳುತ್ತಿದ್ದರೆ ಈ ವ್ಯಕ್ತಿ ಮುರಿದು ಕೊಳ್ಳುವುದರ ಬಗ್ಗೆ ಹೇಳುತ್ತಿದ್ದಾನೆಂದು? ಹೌದು ನಿಮಗೆ ಸಮಸ್ಯೆಯನ್ನು ತಂದೊಡ್ಡುವ ಸಂಬಂಧಗಳನ್ನು ಮುರಿದುಕೊಳ್ಳುವುದು ಮನಸ್ಸಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
            ಸಂಬಂಧಗಳು ಆರಂಭವಾಗುವುದು ಅನಿವಾರ್ಯತೆ ಆಧಾರದ ಮೇಲೆ ಆನಂತರ ಅದರ ಬಾಳಿಕೆ ನಮ್ಮ ಗುಣ ನಡತೆಗಳು ಮೇಲೆ ನಿಲ್ಲುತ್ತದೆ. ಅದನ್ನು ಉಳಿಸಿಕೊಳ್ಳುವುದು ಬಿಡುವುದು ನಮಗೆ ಬಿಟ್ಟ ವಿಚಾರವಾಗಿರುತ್ತದೆ. ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಒಂದು ಮಾತು ಹೇಳುತ್ತಾರೆ ಯಾರ ಸಂಬಂಧವನ್ನು ಹಾಳು ಮಾಡಿಕೊಳ್ಳಬೇಡ ಮುಂದೊಂದು ದಿನ ಉಪಯೋಗಕ್ಕೆ ಬರುತ್ತದೆ ಎಂದು. ಅವರುಗಳು ಉಪಯೋಗಕ್ಕೆ ಬರುತ್ತಾರೆ ಎನ್ನುವುದಾದರೆ ಸಂಬಂಧಗಳಿಗೆ ಏನು ಅರ್ಥ ಕೊಟ್ಟಂತಾಗುತ್ತದೆ? ಉಪಯೋಗಿಸುವುದು ವಸ್ತುಗಳನ್ನು ವ್ಯಕ್ತಿಗಳನ್ನಲ್ಲ ಅಲ್ಲಿಗೆ ಅದು ಲಾಭ ನಷ್ಟದ ಲೆಕ್ಕಾಚಾರ ಸಂಬಂಧ ಎಂದಾಯಿತಲ್ಲವೇ?. ಅಲ್ಲಿಗೆ ಆ ಸಂಬಂಧದಲ್ಲಿ ಸ್ನೇಹಪೂರ್ವಕವಾಗಿ ನಿಮ್ಮಂತೆ ಮಾತನಾಡಿದರು ಕೊನೆಯದಾಗಿ  ಅವರಿಗೆ ಲಾಭ ವಿರುವಂತೆ ನಿಮ್ಮ ಸಂಬಂಧವನ್ನು ತಂದು  ನಿಲ್ಲಿಸುವವರು.
                 ಹೌದು ಇಂದಿನ ದಿನಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರವನ್ನು ನೋಡಿಯೇ ಸಂಬಂಧಗಳನ್ನು ಮಾಡುವುದುಂಟು ಅದು ಹುಡುಗ ಹುಡುಗಿ ಪ್ರೀತಿಯಿಂದ ಹಿಡಿದು ಸ್ನೇಹದ ಹೆಸರಿನಲ್ಲಿ ಮಾಡುವ ವ್ಯವಾರಿಕ ಸಂಬಂಧಗಳು ಇರಬಹುದು. ಯಾವುದೇ ಸಂಬಂಧ ವಾಗಲಿ ಅನಿವಾರ್ಯತೆ ಮುಗಿದ ಮೇಲೆ ನಮ್ಮನ್ನು ತೊರೆಯುತ್ತವೆ. ತನ್ನ ಕಾಮ ತೃಷೆಯನ್ನು ತೀರಿಸಿಕೊಳ್ಳಲು ಮಾಡುವ ಪ್ರೀತಿಯಿಂದ ಹಿಡಿದು  ಅವನಿಂದ ನನಗೆ ಏನಾದರೂ ಲಾಭವಾದೀತು ಎಂದು ಮಾಡಿಕೊಳ್ಳುವ ಸ್ನೇಹ ಎರಡು ದೀರ್ಘಕಾಲದಲ್ಲಿ ಉಳಿಯಲಾರವು ಅವುಗಳಿಂದ ಅವು ತನಗೆ ಬೇಕಾದ ಕಾರ್ಯಸಾಧನೆ ಮಾಡಿದನಂತರ ನಿಷ್ಕಲ್ಮಶವಾದ ಮನಸ್ಸಿಗೆ ಉಳಿಯುವುದು  ಮನೋಕ್ಲೇಶ ಮಾತ್ರ.
                 ಕೃತಕವಾಗುವತ್ತ ದಾಪುಗಾಲಿಡುತ್ತಿರುವ ಜಗತ್ತಿನಲ್ಲಿ ಕೃತಕ ಸಂಬಂಧಗಳಿಗೆ ಬೆಲೆ ಕೊಟ್ಟಷ್ಟು ನಿಮ್ಮ ಬೆಲೆ ಕಡಿಮೆಯಾಗುತ್ತ ಸಾಗುತ್ತದೆ. ಅನಿವಾರ್ಯತೆಗೆ ಮೂಡುವ ಸ್ನೇಹ ಮತ್ತು ಪ್ರೀತಿ ಶಾಶ್ವತವಲ್ಲ ಕಾರ್ಯ ಮುಗಿದ ಮೇಲೆ ಆ ಸಂಬಂಧಗಳ ಅವಧಿಯು ಮುಗಿದಿರುತ್ತದೆ. ಆ ಸ್ನೇಹ ಅಥವಾ ಪ್ರೀತಿಯಿಂದ ನಿಮ್ಮ ಮಾನಸಿಕ ಆರೋಗ್ಯ ಹದಗೆಡುತ್ತದೆ. ಮನಸ್ಸಿನ ಆರೋಗ್ಯವೇ ನಿಮ್ಮ ಬದುಕನ್ನು ಹಸನುಮಾಡುವುದು ಅಂತಹ ಲಾಭ ಲೆಕ್ಕಾಚಾರದ ಮೇಲೆ ನಿಲ್ಲುವ ಸಂಬಂಧಗಳನ್ನು ಕಡಿಯಲು ಹಿಂಜರಿಯಬೇಡಿ ಉತ್ತಮ ಸಂಬಂಧಗಳು ಬದುಕಿನ ಸಕಾರಾತ್ಮಕ ಚಿಂತನೆಯ ಭಾಗ.

Sunday, November 21, 2021

ಮತ್ತದೆ ಮೌನ

                     ಅಂದು ಬೆಳಿಗ್ಗೆ ಆಕಾಶ್ ಫೋನ್ ಮಾಡಿದ್ದ ನಿನ್ನ ಕಥೆಯನ್ನು ನನ್ನ ಸ್ನೇಹಿತೆ ಓದಿದ್ದಾಳೆ ಎಂದು ಫೋನ್ ರಿಸೀವ್ ಮಾಡಿದ ಅನ್ವಿಕ್ ಹೌದಾ ನಿರೀಕ್ಷೆಯಿರಲಿಲ್ಲ ನನ್ನ ಕಥೆಯನ್ನು ಯಾರಾದರೂ ಓದುತ್ತಾರೆ ಎಂದು ! ಯಾರು ಓದಿದ್ದು ? ನಾನು ಬರೆದ ಕಥೆಯನ್ನು ನಾನು ನಿನಗೆ ಕೊಟ್ಟಿದ್ದೇನೆ ಅಲ್ಲವೇ ? ಅದಕ್ಕೆ ಆಕಾಶ್ ನನಗೆ ಈ ಕಥೆ ಕಾದಂಬರಿಗಳನ್ನು ಓದಲು ಸಮಯವಿಲ್ಲ ನೀನು ಬರೆದುಕೊಟ್ಟ ಕಥೆಯನ್ನು ನಾನು ನನ್ನ ಸ್ನೇಹಿತೆಗೆ ಕೊಟ್ಟಿದ್ದೇನೆ ಎಂದು ಹೇಳಿದ್ದೇನು ನಿನಗೆ ಅದು ನೆನಪಿಲ್ಲವೇ ಎಂದು ಕೇಳಿದ. ಹೌದಲ್ಲವೇ ನನ್ನ ಕತೆಯನ್ನು ಓದಲು ಒಬ್ಬರು ಸಿಕ್ಕರು ಎಂಬ ಖುಷಿ ಹನ್ವಿಕ್ ಗೆ ಸರಿ ಹಾಗಿದ್ದರೆ ಅಭಿಪ್ರಾಯ ಹೇಳು ನಿಮ್ಮ ಸ್ನೇಹಿತೆ ಏನೆಂದು ಹೇಳಿದರೆಂದು, ಮತ್ತೆ ಅದನ್ನು ಸಂಕ್ಷಿಪ್ತವಾಗಿ ಹೇಳಲು ಸಾಧ್ಯವಾಗದ ಆಕಾಶ್ ಕಾಟಾಚಾರಕ್ಕೆ ಹೇಳಿದವನಂತೆ ಹೇಳಲಾರಂಭಿಸಿದ ಸಮರ್ಪಕವಾಗಿ ಹೇಳಲು ವಿಫಲನಾದ ಆಕಾಶ್ ಕೊನೆಹಂತದಲ್ಲಿ ನನ್ನ ಸ್ನೇಹಿತೆ ನಿನ್ನ ಇಮೇಲ್ ವಿಳಾಸವನ್ನು ಕೇಳುತ್ತಿದ್ದಾರೆ ಎಂದು ಇಮೇಲ್ ವಿಳಾಸವನ್ನು ಪಡೆದು ಅದನ್ನು ಆಕೆಯ ಸ್ನೇಹಿತೆಗೆ ಕಳಿಸಿದ.ಆನಂತರದಲ್ಲಿ ಆಕೆಯಿಂದ ಕಡೆಯಿಂದ ಒಂದು ಮೇಲ್ ಬಂದಿತು ತೆಗೆದು ನೋಡಿದ ಅನ್ವಿಕ್ ಹಲವಾರು ಪ್ರಶ್ನೆಗಳು ಕಾಡಲಾರಂಭಿಸಿದವು. ಇಂದಿನ ಫೋನ್ , ವಾಟ್ಸಪ್ , ಇನ್ಸ್ಟಾಗ್ರಾಮ್ , ಫೇಸ್ಬುಕ್ ಕಾಲದಲ್ಲಿ ಇವನು ಆಕೆಯ ಫೋನ್ ನಂಬರನ್ನು ಕೊಡಬಹುದಿತ್ತಲ್ಲ ಏಕೆ ಹೀಗೆ ಮಾಡಿದ್ದ ಎಂದು ತಿಳಿಯದಾಯಿತು ಅನ್ವಿಕ್ ಗೆ ಆಕೆಯ ಫೋನ್ ನಂಬರ್ ತಿಳಿಯುವುದು ಸೂಕ್ತವಲ್ಲ . ಕೊಡುವುದಿದ್ದರೆ ಸ್ನೇಹಿತನೇ ಕೊಡುತ್ತಿದ್ದ ಎಂದು ಭಾವಿಸಿ ಸುಮ್ಮನಾದ.ಯಾವ ಹುಡುಗಿಯರ ಸ್ನೇಹವಿಲ್ಲದ ವನು ಅನ್ವಿಕ್ ಆಕೆಯ ಫೋನ್ ನಂಬರ್ ಕೇಳಲು ಮುಜುಗರ, ಕೊನೆಗೆ ಒಂದು ದಿನ ಆಕೆಯೇ ಫೋನ್ ನಂಬರ್ ಕೇಳಿದರು. ತನ್ನ ಗೆಳೆಯನ ಸ್ನೇಹಿತೆಯ ಹತ್ತಿರ ಹೇಗೆ ಮಾತನಾಡಬೇಕೆಂದು ತಿಳಿಯದು ಮೇಲಾಗಿ ಅನ್ವಿಕ್ ಹೆಣ್ಣುಮಗಳೊಬ್ಬಳ ಸ್ನೇಹವು ಇದೇ ಮೊದಲು, ಮೊದಮೊದಲು ಮಾತನಾಡಲು ಹಿಂಜರಿದರು ಅವರ ಸ್ನೇಹದಲ್ಲಿ ದಿನಕಳೆದಂತೆ ನಿಧಾನವಾಗಿ ಮುಕ್ತವಾಗಿ ಮಾತನಾಡಲಾರಂಭಿಸಿದ.
                    ಆಕೆ ಮಾತಿನೊಂದಿಗೆ ಆಕೆಯ ಪರಿಚಯವಾಯಿತು. ಆಕೆಯ ಹೆಸರು ಅನನ್ಯ ವಿದ್ಯಾವಂತೆ, ಬುದ್ಧಿವಂತೆ ಎಲ್ಲದಕ್ಕಿಂತ ಹೆಚ್ಚಾಗಿ ಓದುವ ಹವ್ಯಾಸ ಉಳ್ಳವಳು ಅನ್ವಿಕ್ ಓದುವ ಹವ್ಯಾಸ ಇದ್ದಿದ್ದರಿಂದ ಇಬ್ಬರ ಅಭಿರುಚಿಗಳಿಗೆ ಸಾಮ್ಯತೆ ಇದ್ದಿದ್ದರಿಂದ ಸ್ನೇಹ ಸಾಂಗವಾಗಿ ಮುನ್ನಡೆಯಿತು, ಆಕೆಯು ಅವನ ಕಥೆಗಳಿಗೆ ಮತ್ತು ಸಣ್ಣಕಥೆಗಳನ್ನು ತಿದ್ದಿ ಸರಿಪಡಿಸುವ ಹುಮ್ಮಸ್ಸು ತನ್ನ ಕಥೆಗಳನ್ನು ಓದುವವರಿದ್ದಾರೆ ಎಂದು ನಿರಂತರವಾಗಿ ಏನನ್ನಾದರೂ ಬರೆಯುವ ಹವ್ಯಾಸ ಹೆಚ್ಚಾಯಿತು. ಅವರ ಮಾತುಗಳು ವೈಯಕ್ತಿಕ ಬದುಕಿನೆಡೆಗೆ ತಿರುಗಿತು. ಸ್ನೇಹವು ಮುಂದುವರೆಯಿತು ಸ್ನೇಹ ಗಟ್ಟಿಯಾಯಿತು ಎನ್ನುವಷ್ಟರಲ್ಲಿ ಆಕಾಶ್ ಗೆ ಇವರಿಬ್ಬರ ಸ್ನೇಹ ಸಹ್ಯವಾಗಲಿಲ್ಲ ಎನ್ನುವಂತೆ ಅನನ್ಯ ವಿಚಾರವಾಗಿ ಎಚ್ಚರಿಕೆಯಿಂದ ಇರುವಂತೆ ಹೇಳಿದ.ಆಕೆಯ ಸ್ನೇಹ ನಿನಗೆ ಸೂಕ್ತವಾದುದಲ್ಲ ಆಕೆ ಬದುಕಿನಲ್ಲಿ ಹಲವಾರು ಹುಡುಗರು ಬಂದು ಹೋಗಿದ್ದಾರೆ. ಅವರ ಕುಟುಂಬದಲ್ಲೂ ಅವರ ತಂದೆಗೆ ಉತ್ತಮ ಚಾರಿತ್ರವಿಲ್ಲ ಅವರ ಮನೆಯಲ್ಲಿ ನೀನು ಅಂದುಕೊಂಡಂತೆ ಇಲ್ಲ ಎಂದು ಹೇಳಿದ ಅದನ್ನು ನಂಬದ ಅನ್ವಿಕ್ ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು ಎನ್ನುವಂತೆ ಅನನ್ಯ ನ ಜೊತೆ ವಿಚಾರಗಳನ್ನು ಚರ್ಚಿಸಿದ. ಆದರೆ ಆಕೆಯ ಹೇಳಿಕೆಗಳು ಎಲ್ಲಾ ತದ್ವಿರುದ್ಧವಾಗಿದ್ದವು. ಕೊನೆಯಲ್ಲಿ ಆಕಾಶ್ ಹೇಳಿಕೆಗಳು ಸತ್ಯ ಎನ್ನುವಂತೆ ಕಾಣತೊಡಗಿದವು ಅವನ ಮಾತಿನಲ್ಲಿ ಅನನ್ಯ ನ ಕೃತಿಯಲ್ಲಿ ಸಾಮ್ಯತೆಗಳಿದ್ದವು. ತನ್ನ ತಂದೆಯ ಚಾರಿತ್ರದ ಬಗ್ಗೆ ಮಾತನಾಡಿದ ಆಕಾಶ್ ಬಗ್ಗೆ ಗೊತ್ತಿದ್ದರೂ ಅವಳು ಅವನೊಂದಿಗೆ ಅತಿಯಾದ ಆತ್ಮೀಯತೆಯಲ್ಲಿ ಇದ್ದಳು. ಆತ್ಮೀಯತೆಗೆ ಅಂಕೆ ಇಲ್ಲ ಸ್ನೇಹದ ಹೆಸರಲ್ಲಿ ಎಲ್ಲೆ ಮೀರಿದ ಸಂಬಂಧ.
                  ಆಕಾಶ್ ಮಾತಿನಲ್ಲಿ ಸತ್ಯವಿರುವುದು ಸ್ಪಷ್ಟವಾಗತೊಡಗಿತ್ತು ಜನರು ಮಾತಿನಲ್ಲಿ ಮತ್ತು ಕೃತಿಯಲ್ಲಿ ಭಿನ್ನವಾಗಿರುತ್ತಾರೆ ಎಂಬ ನಿದರ್ಶನ ಕಣ್ಣ ಮುಂದೆ ಒಂದು ಉದಾಹರಣೆಯಾಗಿ ಹೋಯಿತು. ಅನ್ವಿಕ್ ಗೆ ಮತ್ತದೇ ಪ್ರಶ್ನೆ ನಾನು ಮಾಡಿದ ಸ್ನೇಹ ಸರಿಯೋ-ತಪ್ಪೋ ಎಂದು. ಮಾತಿನಲ್ಲಿ ಮೋಸ ಮಾಡುವ ಜನರ ನಡುವೆ ಮತ್ತೆ ಮೋಸ ಹೋದನೆಂಬ ಬೇಸರ ಅವನ ಬದುಕಿನಲ್ಲಿ ಮತ್ತದೆ ಮೌನ.

Tuesday, July 13, 2021

ಕೇಳಿದ ವರವ ಕೊಡುವ ಬಲಮುರಿ ಗಣಪ

                            ಆದಿನಾಥ ಕೈಲಾಸವಾಸ ಶಿವನ ಹಾಗೂ ಪಾರ್ವತಿಯ ಮುದ್ದು ಕಂದ ಗಣಪತಿಯು ಸರ್ವ ಪೂಜೆಯಲ್ಲಿಯೂ ಮೊದಲು ಪೂಜೆ ಒಳಗಾಗುವ ದೇವರು. ಅವನು ಮೊದಲು ಪೂಜೆ ಸ್ವೀಕರಿಸಲು ಅರ್ಹ ಆಗಿದ್ದಕ್ಕೆ ಒಂದು ಕಥೆ ಇದೆ. ಪಾರ್ವತಿ ದೇವಿಯ ಸೃಷ್ಟಿ ಈ ಗಣಪ. ಒಮ್ಮೆ ಪಾರ್ವತಿದೇವಿಯು ಕೈಲಾಸದಲ್ಲಿ ಇದ್ದಾಗ ನಂದಿಯನ್ನು ಕಾವಲಿಗಿರಿಸಿ ಯಾರನ್ನು ಒಳಗಡೆ ಬಿಡಬಾರದು ಎಂದು ಹೇಳಿದಳು. ಅದಾದ ಕೆಲ ಸಮಯಕ್ಕೆ ಶಿವನು ಲೋಕ ಸಂಚಾರವನ್ನು ಮುಗಿಸಿ ಕೈಲಾಸಕ್ಕೆ ಹಿಂದಿರುಗಿದನು. ನಂದಿಯು ಶಿವನನ್ನು ಒಳಗೆ ಬಿಡಲು ಪಾರ್ವತಿದೇವಿಗೆ ಪ್ರಶ್ನೆ ಮೂಡಿತು, ನಂದಿ ನನಗಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ಶಿವನಿಗೆ ಕೊಡುತ್ತಾನೆ ಹಾಗಾಗಿ ನನ್ನ ಆಜ್ಞೆಯನ್ನು ಮೀರಿ  ಬಿಡುತ್ತಾನೆಂದು. ಇದರಿಂದ ಪಾರ್ವತಿದೇವಿಯು ತಾನು ಹಚ್ಚಿಕೊಂಡಿದ್ದ ಅರಿಶಿಣವನ್ನು ತೆಗೆದು ಆಕೃತಿಯನ್ನು ಮಾಡಿ ಅದಕ್ಕೆ ಜೀವವನ್ನು ತುಂಬಿದಳು. ಈ ಬಾರಿ ದೇವಿಯು ದ್ವಾರದ ಬಳಿ ನಿಂತು ಯಾರನ್ನೂ ಒಳಗೆ ಬಿಡಬೇಡ ಎಂದು ಗಣಪತಿಗೆ  ಆಜ್ಞೆಯನ್ನು ನೀಡಿದಳು. ತಾಯಿಯ ಆಜ್ಞೆಯನ್ನು ಗಣಪನು ಪಾಲಿಸಲು ಅದೇ ಸಮಯಕ್ಕೆ ಶಿವನು ಬಂದನು ಶಿವನನ್ನು ಗಣಪತಿಯು ತಡೆಯಲು ಕೋಪಗೊಂಡ ಶಿವನು ಪಾರ್ವತಿಯ ಸೃಷ್ಟಿ ಬಾಲಕನೆಂದ ತಿಳಿಯದೆ , ಶಿವನು ಆ ಬಾಲಕನ ಶಿರವನ್ನು ಕತ್ತರಿಸಿದನು. ಪಾರ್ವತಿಯು ಹೊರಗೆ ಬಂದು ನೋಡಲಾಗಿ ಶಿರಚ್ಛೇದವಾದ ದೇಹ ಬಿದ್ದಿತ್ತು.
                     ತಾಯಿಯು ತನ್ನ ಮಗನಿಗೆ ಜೀವ ಬರಬೇಕೆಂದು ಹಠ ಹಿಡಿದು ಕುಳಿತಳು. ಪಾರ್ವತಿ ಹಠಕ್ಕೆ ಸೋತ ಶಿವನು ದೇಹಕ್ಕೆ ಜೀವ ಕೊಡಲು ಒಪ್ಪಿ ಬ್ರಹ್ಮನನ್ನು ಕೇಳಲು, ಬ್ರಹ್ಮನು ಪ್ರಾಣಿಯ ತಲೆಯನ್ನು ಜೋಡಿಸಿ ಜೀವ ಕೊಡಬಹುದೆಂದು ಹೇಳಲಾಗಿ, ಶಿವನು ತನ್ನ ಅನುಚರರನ್ನು ಕರೆದು ಉತ್ತರ ದಿಕ್ಕಿಗೆ ಮಲಗಿದ್ದ ಪ್ರಾಣಿಯ ತಲೆಯನ್ನು ತರಲು ಹೇಳಿದನು. ಉತ್ತರ ದಿಕ್ಕಿಗೆ ಮಲಗಿದ ಪ್ರಾಣಿಯ ತಲೆಯನ್ನು ಹುಡುಕಲು ಹೊರಟ ಅನುಚರರಿಗೆ ಸಿಕ್ಕಿದ್ದು ಆನೆಯ ತಲೆ. ಆನೆಯ ತಲೆಯನ್ನು ತಂದು ಜೀವತುಂಬಲು ಪಾರ್ವತಿದೇವಿಗೆ ಚಿಂತೆ ಕಾಡಿತು. ಯಾರು ಪ್ರಾಣಿತಲೆ ಇರುವ ನನ್ನ ಮಗನಿಗೆ ಬೆಲೆ ಕೊಡುತ್ತಾರೆ ಎಂದು ಆ ಚಿಂತೆಯನ್ನು ಹೋಗಿಸಲು ಪರಶಿವನು ಗಣಪತಿಯನ್ನು ಗಣಗಳಿಗೆ ಅಧಿನಾಯಕನನ್ನಾಗಿ ಮಾಡಿ ಎಲ್ಲಾ ದೇವತೆಗಳಿಂದ ಪೂಜೆ ಸ್ವೀಕರಿಸಲು, ಪೂಜೆಗೆ ಎಲ್ಲಾ ದೇವತೆಗಳಿಂದ ಮೊದಲು ಗಣಪನಿಗೆ ಸಿಗುವಂತೆ ಅನುಗ್ರಹಿತನಾದನು.
                     ಅಂತಹ ಗಣಪತಿಯು ಮಳಲಕೊಪ್ಪ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡ್ಡಿದ್ದೇ ರೋಚಕ, ಇಂದಿನ ಬಲಮುರಿ ಗಣಪತಿ ಇರುವ ಜಾಗದಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಗ್ರಾಮದ ಹಿರಿಯರು ನಿರ್ಧರಿಸಿದರು, ಆದರೂ ಎಲ್ಲವೂ ಗಣಪನ ಇಚ್ಛೆಯಂತೆ ಕೊನೆಯಲ್ಲಿ ವಿಘ್ನವಿನಾಯಕನದ ಗಣಪನಿಗೆ ಸುಂದರ ದೇವಾಲಯ ನಿರ್ಮಾಣ ಗೊಂಡಿತ್ತು. ಈ ವಿಗ್ರಹದ ವಿಶೇಷತೆಯೇನೆಂದರೆ ಇದನ್ನು ತಮಿಳುನಾಡಿನಿಂದ ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ಬಲಮುರಿ ಗಣಪನಿಗೆ ಸುತ್ತಮುತ್ತ ಹಳ್ಳಿಗಳಿಂದ ಭಕ್ತರು ಬಂದು ಸ್ವಾಮಿಯ ಸೇವೆಯನ್ನು ಮಾಡಿಸುತ್ತಾರೆ.
                    ಈ ದೇವಸ್ಥಾನದ ಮತ್ತೊಂದು ವಿಶೇಷವೆಂದರೆ ಇಲ್ಲಿ ಹೋಮಹವನ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುತ್ತವೆ . ಪ್ರತಿ ಹುಣ್ಣಿಮೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕವಾದ ಸತ್ಯನಾರಾಯಣ ಪೂಜೆ ಹಾಗೂ ಪ್ರತಿ ತಿಂಗಳು ಬರುವ ಸಂಕಷ್ಟಿಯಲ್ಲಿ ಸಂಕಷ್ಟಹರ ಚತುರ್ಥಿಪೂಜೆ ವಿಜೃಂಭಣೆಯಿಂದ ನಡೆಯುತ್ತದೆ. ಯಾವುದೇ ಜಾತಿ ಮತ ಬೇಧವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ.
                 ಇಂತಹ ಗಣಪನ ಗೋಪುರ ಕಾರ್ಯವು ಪೂರ್ಣಗೊಂಡಿದ್ದು ಇದೇ ತಿಂಗಳು ಊರಿನ ಗುರುಹಿರಿಯರ ಸಮಕ್ಷಮದಲ್ಲಿ ಶಿಖರ ಪ್ರತಿಷ್ಠಾಪನೆ ಕಾರ್ಯವು 15/07/2021ರಂದು ವಿಜ್ರಂಭಣೆಯಿಂದ ನಡೆಯುತ್ತಿದೆ. ಇದೇ ಸಮಯದಲ್ಲಿ ನವಗ್ರಹ ಬಿಂಬ ಪ್ರತಿಷ್ಠಾಪನೆ ಹಾಗೂ ಅಶ್ವತ್ಥ ವೃಕ್ಷ ಉದ್ಯಾಪನೆ ನಡೆಯುತ್ತಿದ್ದು ಸಕಲವೂ ಸ್ವಾಮಿಯ ಇಚ್ಛೆಯಂತೆ ಪೂರ್ಣಗೊಳ್ಳುವುದಿದೇ, ಗಣಪನು ಸಮಸ್ತ ಭಕ್ತರನ್ನು ಆಶೀರ್ವದಿಸುತ್ತಾ ಪ್ರತಿಷ್ಠಾಪನೆಗೊಂಡಿದ್ದಾರೆ.

Saturday, July 10, 2021

ಬದಲಾದ ದೇವತೆ - ಭಾಗ-2

..ಒಟ್ಟಿನಲ್ಲಿ ರೌದ್ರ ರೂಪಿಣಿ, ಆಕೆಯ ತಂಗಿಯೂ ನಾಲಿಗೆಯನ್ನು ಹೊರಗೆ ಚಾಚಿದ ರುದ್ರ ರೂಪಿಣಿ. ಅವರು ರಾಕ್ಷಸರನ್ನು ಸಂಹರಿಸಿದವರು. ಮಾಂಸ ಪ್ರಿಯರು ಕೋಳಿ, ಕೋಣ, ಕುರಿಗಳನ್ನು ಬಲಿ ತೆಗೆದುಕೊಂಡು ಬರುತ್ತಿದ್ದವರು.
                 ಕಾಲಚಕ್ರದ ಸುಳಿಗೆ ಸಿಲುಕಿ ಎಲ್ಲರೂ ಬದಲಾಗಬೇಕು ಇಲ್ಲವಾದರೆ ಅಸ್ತಿತ್ವ ಉಳಿಯುವುದು ಕಷ್ಟವಾಗುತ್ತದೆ. ಬದಲಾದರೂ ದೇವತೆಗಳೇ ಬದಲಾದರೂ ಸಾಮಂತರ ಕುಲದೇವತೆಯಾದ ಮೇಲೆ ಆಕೆಗೆ ಕೋಣ, ಕುರಿ, ಕೋಳಿಗಳನ್ನು ಬಲಿಕೊಡುವುದು ನಿಲ್ಲಿಸಲಾಯಿತು. ಆಕೆ ನೆಲೆಸಿದ್ದ ಆಕೆಯ ಸ್ಥಾನದಿಂದ ಆಕೆಯ ಆಚರಣೆಗಳನ್ನು ದೂರ ಮಾಡಲಾಯಿತು. ಬೆಟ್ಟದ ತುದಿಯಲ್ಲಿ ಇದ್ದ ಆಚರಣೆಯನ್ನು ಬೆಟ್ಟದ ಪಾದದ ಕೆಳಗೆ ತರಲಾಯಿತು. ಆಕೆ ಬಲಿ ಪಡೆಯುತ್ತಿದ್ದ ದೇವತೆ ಎನ್ನಲು ಸಾಕ್ಷಿಯೆನ್ನುವಂತೆ ಇಂದಿಗೂ ಬೆಟ್ಟದ ತಪ್ಪಲಿನ ಕೆಳಗೆ ಆಕೆಗೆ ಬಲಿಯನ್ನು ಕೊಡಲಾಗುವುದು.
         ರಾಜಾಶ್ರಯದಲ್ಲಿ ಆಕೆ ಬದಲಾದಳು ಆಕೆಯನ್ನು ರೌದ್ರ ರೂಪದಿಂದ ಸಾತ್ವಿಕತೆ ದೇವತೆ ಎನ್ನುವಂತೆ ಚಿತ್ರಿಸಲಾಯಿತು. ಆಕೆಯು ತಾಯಿ , ಆಕೆ ಮಕ್ಕಳು  ಇಷ್ಟಪಟ್ಟಂತೆ ಇರಲು ಬಯಸಿದಳೆನೋ ಎನ್ನುವಂತೆ ಬದಲಾದಳು, ಒಟ್ಟಿನಲ್ಲಿ ಬದಲಾಗಿದ್ದಳು ಕೊನೆಗೆ ಬರೀ ಕೆಳವರ್ಗದ ತಾಯಿಯಾಗಿದ್ದ ಆಕೆ ಮೇಲ್ವರ್ಗಕ್ಕೆ ಹತ್ತಿರವಾದಳು. ಕೊನೆಗೆ ನಾಡದೇವತೆಯಾಗಿ ಹೋದಳು. ಇಂದು ಆಕೆಯದು ರಾಜಬೀದಿ ಮೆರವಣಿಗೆ ಏಕೆಂದರೆ ಬದಲಾದಳು, ಬದಲಾವಣೆ ಆಕೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದಿತು.
                 ನಾವು ಅಷ್ಟೇ ಬದಲಾಗಬೇಕು ನಮ್ಮ ಉನ್ನತಿಗಾಗಿ ಬದಲಾಗಬೇಕು ನಮ್ಮತನವನ್ನು ಉಳಿಸಿಕೊಂಡು ಧರ್ಮದ ಹಾದಿಯಲ್ಲಿ ನಡೆಯುತ್ತ ಬದಲಾಗಬೇಕು. ಬದಲಾವಣೆ ಜಗದ ನಿಯಮ ನಾವು ಬದಲಾದರೂ ಬದಲಾಗದಿದ್ದರೂ ಸಮಯ ಎಲ್ಲವನ್ನೂ ಬದಲು ಮಾಡುತ್ತದೆ. ಬದಲಾದರೆ ಉಳಿಯುತ್ತೇವೆ ಇಲ್ಲವಾದರೆ ಅಳಿಯುತ್ತೇವೆ .ಆಕೆ ನಮಗೆ ಕಲಿಸುತ್ತಿರುವ ಪಾಠ ಅದು. ಬದಲಾದಳು ತಾಯಿಯೇ ಬದಲಾದಳು ಇನ್ನು ನಾವು ಆಕೆಯ ಮಕ್ಕಳು, ಬದಲಾಗದಿದ್ದರೆ ಜಗದ ನಿಯಮದ ವಿರುದ್ದ ಅಳಿಯುತ್ತೇವೆ ಬದಲಾದರೆ ಉಳಿಯುತ್ತೇವೆ.

Sunday, June 20, 2021

ಬದಲಾದ ದೇವತೆ - ಭಾಗ-1

           ಸೃಷ್ಟಿಯ ರಹಸ್ಯ ಏನೆಂದು ತಿಳಿಯುವ ಪ್ರಯತ್ನ ಮನುಷ್ಯ ಮಾಡುತ್ತಲೇ ಇರುತ್ತಾನೆ. ಆದರೆ ಅವನಿಗೆ ಅದು ನಿಲುಕದ ಹೋದ ವಿಷಯವಾಗಿಯೇ ಉಳಿದಿದೆ ಏಕೆಂದರೆ ಈ ಜಗತ್ತಿನಲ್ಲಿ ಯಾವುದೂ ಸ್ಥಿರವಲ್ಲ .ಸ್ಥಿರವಲ್ಲದಿದ್ದರೆ ಇಲ್ಲದಿದ್ದರೆ ಮತ್ತೇನು ಎಂದು ಪ್ರಶ್ನೆ ಏಳುವುದು ಸಹಜ.
            ಆಕೆ ಒಬ್ಬಳು ದೇವತೆ ಲೋಕದೃಷ್ಟಿಯಲ್ಲಿ .ಆದರೆ ಆಕೆ ಸಾಮಾನ್ಯ ಹೆಣ್ಣು ಅಸಾಮಾನ್ಯ ವಿದ್ಯೆಯನ್ನು ಕರಗತ ಮಾಡಿಕೊಂಡ ಸಂಪನ್ನೆ. ತ್ರಿಲೋಕ ಅಂದರೆ ತ್ರಿಪುರ ಸುಂದರಿಯ ಅಕ್ಕ. ತ್ರಿ ಎಂದರೆ ಮೂರು ಪುರ ಎಂದರೆ ಊರು ಆಕೆ ತ್ರಿಪುರ ಸುಂದರಿ ಅಂದರೆ ಮೂರು ಊರು ಅಥವಾ ಲೋಕದ ಸುಂದರಿ .ಈಕೆ ಹುಟ್ಟಿಗೆ ಕಾರಣ, ಅಕ್ಕ ಮಾಡಲಾಗದ್ದನ್ನು ತಂಗಿ ಮಾಡಲು ಹುಟ್ಟಿದ್ದಳು. ಇನ್ನು ಅಕ್ಕ ರಾಕ್ಷಸ ಕುಲವನ್ನೇ ನಾಶಮಾಡಲು ಹುಟ್ಟಿ ಬಂದಿದ್ದವಳು.
          ರಾಕ್ಷಸರ ಜೊತೆ ಕಾದಾಡಬೇಕಾದರೂ ಅಪರಿಮಿತ ಶಕ್ತಿ ಬೇಕಾಗುತ್ತದೆ. ಅಂತಹ ಶಕ್ತಿ ಸಂಪನ್ನೆ ಯಾಗುವುದು ಸುಲಭವಲ್ಲ ಅನುಭವ ಬೇಕಾಗುತ್ತದೆ, ಅನುಭವ ಪಡೆಯಬೇಕಾದದ್ದು ಕಾರ್ಯಗಳಿಂದ ರಕ್ತವನ್ನು ಚೆಲ್ಲಾಡಲು ಮೊದಲು ಸಣ್ಣಪುಟ್ಟ ಪ್ರಾಣಿಗಳ ವಧೆ ಮಾಡುತ್ತಾ ಅನುಭವ ಪಡೆಯಬೇಕು ಅದಕ್ಕೆ ಆಕೆ ಆಯ್ಕೆ ಮಾಡಿಕೊಂಡಿದ್ದು ಕೋಳಿ-ಕುರಿ ಕೋಣಗಳನ್ನು. ಅದನ್ನು ಕಡಿಯುತ್ತಾ ಕಡಿಯುತ್ತಾ ರಾಕ್ಷಸರ ವಧೆಗೆ ಸಿದ್ಧವಾದಳು.
                ಅವನೊ ಕೇಳಿದ ತಕ್ಷಣ ವರವನ್ನು ಕೊಡುವ ಶಿವನಿಂದ ವರಪಡೆದು ಶಕ್ತಿ ಸಂಪಾದಿಸಿಕೊಂಡಿದ್ದ ರಾಕ್ಷಸ. ಹೆಣ್ಣಿನ ಹೊರತಾಗಿ ಯಾರಿಂದಲೂ ಸಾವು ಬರಬಾರದು ಎಂದು ಬಯಸಿದ್ದ ವ್ಯಕ್ತಿ ಸಾಮಾನ್ಯ ಹೆಣ್ಣು ಏನು ಮಾಡಬಲ್ಲಳು ಎಂಬ ಬಲವಾದ ನಂಬಿಕೆ .ಅದಕ್ಕೆ ನನ್ನ ಸಾವು ಅಷ್ಟು ಸುಲಭವಲ್ಲ ಹೆಣ್ಣುನನ್ನು ಮಣಿಸುವದವನಷ್ಟು ಶಕ್ತಿಹೀನ ನಾನಲ್ಲ ಎಂಬ ಭ್ರಮೆ .ಇನ್ನು ಆತನ ತಮ್ಮನೋ ಅವನು ರಕ್ತದ ಕಣಕಣದಲ್ಲೂ ರಾಕ್ಷಸರನ್ನು ಸೃಷ್ಟಿ ಮಾಡುವ ವರಪಡೆದ ಬಲಶಾಲಿ .ಅಣ್ಣ ತಮ್ಮ ಇಬ್ಬರೂ ಶಿವಭಕ್ತರು, ಅವರ ನಿತ್ಯಪೂಜೆ ಏನಿದ್ದರೂ ಮಹಾ ಶಕ್ತಿಶಾಲಿಯಾದ ಮಹಾಬಲನಿಗೆ.
             ಆಕೆಯನ್ನು ರೌದ್ರ ರೂಪಿಣಿಯಾಗಿ ಬೆಳೆಸಲಾಯಿತು ಏಕೆಂದರೆ ಅವಳು ಹೋರಾಡಬೇಕಾಗಿತ್ತು. ಅಸುರ ಸಂಹಾರವೇ ಆಕೆಯ ಜನ್ಮಕ್ಕೆ ಕಾರಣವೆಂಬ ನಿರೀಕ್ಷೆಯಿತ್ತು .ರಾಕ್ಷಸರನ್ನು ಕೊಲ್ಲಲೆಂದೇ ಹುಟ್ಟಿದವಳು ಎಂಬಂತೆ ಅಗೋಚರ ವಿದ್ಯೆಗಳನ್ನು ಕಲಿಸಲಾಯಿತು. ಆಕೆಯ ವೇಷಭೂಷಣವೇ ರುದ್ರಭಯಂಕರ ಹಣೆಯಲ್ಲಿ ದೊಡ್ಡದಾದ ಕುಂಕುಮ ಮುಡಿ ಕಟ್ಟದ ಜಡೆ ಕಣ್ಣಲ್ಲಿ ಕಾಂತಿಯುತವಾದ ಹೊಳಪು, ಆಕೆಗೆ ಅಷ್ಟ ವಿದ್ಯೆಯನ್ನು ಕಳಿಸಲಾಯಿತು. ಅಷ್ಟ ಕೈಗಳಲ್ಲಿ ಅಷ್ಟ ಆಯುಧಗಳು ಒಂದು ಕೈಯಲ್ಲಿ ಹಾವುನ್ನು ಹಿಡಿದಿದ್ದರೆ ಮತ್ತೊಂದು ಕೈಯಲ್ಲಿ ಡಮರುಗ ಮಗದೊಂದು ಕೈಯಲ್ಲಿ ಬೆಂಕಿ ಜ್ವಾಲೆಯಿಂದ ಪ್ರಜ್ವಲಿಸುವ ಪಾತ್ರೆ ಮಗದೊಂದು ಕೈಯಲ್ಲಿ ರುಂಡಗಳನ್ನು ಚೆಂಡಾಡುವ ಕತ್ತಿ.....

Thursday, March 11, 2021

ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗ ಯಾವುದು ಶ್ರೇಷ್ಠ

ಭಾರತ ವಿಶ್ವದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ .ತನ್ನ ವಿಶಿಷ್ಟತೆಯಲ್ಲಿ ಜಗತ್ತನ್ನು ಮನಸೂರೆಗೊಂಡ ರಾಷ್ಟ್ರ. ಇಂತಹ ರಾಷ್ಟ್ರವು ಬ್ರಿಟಿಷರ ಆಡಳಿತದಿಂದ 1947 ರಲ್ಲಿ ಸ್ವಾತಂತ್ರ್ಯಗೊಂಡು 26 ಜನವರಿ 1950 ರಂದು ಗಣರಾಜ್ಯವಾಯಿತು. ಒಂದು ರಾಷ್ಟ್ರ ಗಣರಾಜ್ಯವಾಗಲು ಮೂಲತ ಬೇಕಾಗಿರುವುದು ಅದರದೇ ಆದಂತಹ ಕಾನೂನು ಹಾಗೂ ಸುವ್ಯವಸ್ಥೆ. ಒಂದು ರಾಷ್ಟ್ರ ಪರಿಪಕ್ವವಾಗಿ ನಡೆಯಲು ಅದರದೇ ಆದ ರೀತಿ-ರಿವಾಜುಗಳನ್ನು ಮಾಡಿಕೊಂಡಿರುತ್ತದೆ. ಅದೇ ರೀತಿ ಭಾರತವು ಆಯ್ಕೆಮಾಡಿಕೊಂಡ ವಿಧಾನ ಫೆಡರಲ್ ವ್ಯವಸ್ಥೆ. ಅದರ ಪ್ರತಿಫಲವೇ ಹುಟ್ಟಿಕೊಂಡಿದ್ದು ರಾಜ್ಯ ಹಾಗೂ ಕೇಂದ್ರಕೃತ ವ್ಯವಸ್ಥೆ .ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪರಿಕಲ್ಪನೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.
            ರಾಜ್ಯ ಹಾಗೂ ಕೇಂದ್ರ ಆಡಳಿತ ನಡೆಸಲು ಒಂದು ವ್ಯವಸ್ಥೆ ಬೇಕಾಗುತ್ತದೆ. ಅದೇ ಕಾರ್ಯಂಗ, ಆ ಕಾರ್ಯಾಂಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ ಎಂದು ನೋಡಿಕೊಳ್ಳಲು ಮತ್ತೊಂದು ವ್ಯವಸ್ಥೆ ಬೇಕಾಗುತ್ತದೆ ಅದೇ ಶಾಸಕಾಂಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಆಯ್ಕೆಯು ಜನರಿಂದ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಆಡಳಿತ ನಡೆಸುತ್ತಾರೆ. ಕಾರ್ಯಾಂಗಕ್ಕೆ ನಿರ್ದೇಶನ ನೀಡುವ ಅಧಿಕಾರ ಶಾಸಕಾಂಗಕ್ಕೆ ಇರುತ್ತದೆ. ಕೇಂದ್ರದಲ್ಲೂ ಕೂಡ ಇದೇ ಮಾದರಿಯ ಲೋಕಸಭಾ ವ್ಯವಸ್ಥೆ ಜಾರಿಯಲ್ಲಿ ಇರುತ್ತದೆ. ಜನಸಂಖ್ಯೆ ಅನುಗುಣವಾಗಿ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರಗಳನ್ನು ಮಾಡುತ್ತಾರೆ .ಕಾರ್ಯಾಂಗ ನಿರಂತರವಾಗಿ ಯಾವುದೇ ಅಡೆತಡೆ ಇಲ್ಲದೆ ಜನರ ಒಳಗೆ ಇರುವ ಒಂದು ವ್ಯವಸ್ಥೆ .ಇಲ್ಲಿ ಅಧಿಕಾರ ವರ್ಗ, ಸರ್ಕಾರಿ ನೌಕರರು ಹಾಗೂ ಇತರರು ಇರುತ್ತಾರೆ.
             ಇನ್ನು ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳ ಅಧಿಕಾರದ ಅವಧಿ ಐದು ವರ್ಷಗಳು. ಅವರ ಅವಧಿಯಲ್ಲಿ ಜನಪರ ಕೆಲಸಗಳನ್ನು ಮಾಡಿ ಮತ್ತೆ ಅಧಿಕಾರದ ಗದ್ದುಗೆ ಏರಬಹುದು ಇಲ್ಲವಾದಲ್ಲಿ ಜನರಿಗೆ ಅವರನ್ನು ತಿರಸ್ಕರಿಸುವ ಅಧಿಕಾರ ಮತಚಲಾವಣೆಯ ಮುಖಾಂತರ ಭಾರತದ ಸಂವಿಧಾನ ಅವಕಾಶ ಮಾಡಿಕೊಟ್ಟಿರುತ್ತದೆ. ಅಧಿಕಾರಕ್ಕೆ ಬಂದ ಮಾತ್ರಕ್ಕೆ ಅವರು ಕಾನೂನಿನ ಹಾಗೂ ಸಂವಿಧಾನಿಕ ಚೌಕಟ್ಟನ್ನು ಮೀರಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಂತಿಲ್ಲ . ಸಂವಿಧಾನದ ಅರಿವಿಲ್ಲದ ಜನಪ್ರತಿನಿಧಿಗಳು ಅಂತಹ ಕೆಲಸಗಳನ್ನು ಮಾಡಿ ಕೈಸುಟ್ಟುಕೊಂಡ ನಿದರ್ಶನಗಳು ಭಾರತದಲ್ಲಿ ಬಹಳ ಇವೆ.
               ಇನ್ನು ಕಾರ್ಯಂಗ ಸುಸೂತ್ರ ಆಡಳಿತ ನಿರಂತರವಾಗಿ ನಡೆಯಲು ಇರುವ ಒಂದು ಉತ್ತಮ ವ್ಯವಸ್ಥೆ ಆದರೆ ಕೆಲವೊಮ್ಮೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಗುಣವಾಗಿ ತಮ್ಮ ಕಾರ್ಯವನ್ನು ಕಾರ್ಯಂಗದವರು ತೋರುತ್ತಾರೆ. ಅಥವಾ ಒತ್ತಡದ ನಿಮಿತ್ತ ತಮ್ಮ ಕಾರ್ಯ ವ್ಯಾಪ್ತಿಯನ್ನು ಮೀರಿ ವರ್ತಿಸುತ್ತಾರೆ . ಶಾಸಕಾಂಗ ಹಾಗೂ ಕಾರ್ಯಾಂಗ ತಮ್ಮ ವ್ಯಾಪ್ತಿಯನ್ನು ಮೀರಿ ವರ್ತಿಸಿದಾಗ ನ್ಯಾಯಾಂಗವು ಸಂವಿಧಾನಾತ್ಮಕ ರಕ್ಷಣೆಯ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಬಹುದು.
            ಇನ್ನು ನ್ಯಾಯಾಂಗ ವ್ಯವಸ್ಥೆಯು ತುಂಬಾ ಅಚ್ಚುಕಟ್ಟಾಗಿ ಮೂಡಿ ಬಂದಿರುವುದು ಇಡೀ ವಿಶ್ವದಲ್ಲಿ ಭಾರತದಲ್ಲಿ ಮಾತ್ರ ಏಕೆಂದರೆ ಇಲ್ಲಿ ನ್ಯಾಯಾಧೀಶರನ್ನು ಯಾವುದೇ ರಾಜಕೀಯ ವ್ಯವಸ್ಥೆ ಆಯ್ಕೆ ಮಾಡುವುದಿಲ್ಲ . ಭಾರತದಲ್ಲಿ ನ್ಯಾಯಾಧೀಶರನ್ನು ನ್ಯಾಯಾಧೀಶರೇ ಆಯ್ಕೆ ಮಾಡುವ ವಿಧಾನ ಚಾಲ್ತಿಯಲ್ಲಿದೆ. ಅದು ನ್ಯಾಯಾಂಗವನ್ನು ಪಕ್ಷತೀತವಾಗಿ ಕಾರ್ಯನಿರ್ವಹಿಸಲು ಅನುವುಮಾಡಿಕೊಡುತ್ತದೆ. ನ್ಯಾಯಾಂಗ ತೀರ್ಪುಗಳು ಭಾರತದ ಸಂವಿಧಾನ ರಕ್ಷಣೆಗೆ ಒಳಪಟ್ಟು ತಮ್ಮ ತೀರ್ಪನ್ನು ನೀಡುತ್ತ ಬಂದಿವೆ. ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಈ ನೆಲದ ಅಂತಿಮ ಕಾನೂನಾಗಿ ರೂಪಗೊಂಡಿರುವ ಇತಿಹಾಸವಿದೆ.
              ಭಾರತದ ರಾಷ್ಟ್ರೀಯ ಲಾಂಛನದಲ್ಲಿ ಕಾಣುವ ಮೂರು ಸಿಂಹಗಳಂತೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಕಾರ್ಯನಿರ್ವಹಿಸುತ್ತವೆ ಕಾಣದೆ ಇರುವ ಸಿಂಹವೇ ಪ್ರಜಾಪ್ರಭುತ್ವ .ಈ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮೂರು ವ್ಯವಸ್ಥೆಗಳು ಸುಗಮವಾಗಿ ಸಾಗಬೇಕು. ಅದರಲ್ಲೂ ನ್ಯಾಯಾಂಗ ವ್ಯವಸ್ಥೆಯು ಶಾಸಕಾಂಗ ಹಾಗೂ ಕಾರ್ಯಾಂಗದ ತಪ್ಪುಗಳನ್ನು ತಿದ್ದುಪಡಿ ಮಾಡಿ ಸಂವಿಧಾನವನ್ನು ರಕ್ಷಣೆ ಮಾಡುತ್ತ ನಡೆಯಬೇಕಾಗುತ್ತದೆ. ನ್ಯಾಯಾಂಗ ವ್ಯವಸ್ಥೆ ಏರುಪೇರಾದರೆ ಪ್ರಜಾಪ್ರಭುತ್ವದ ರಕ್ಷಣೆ ಅಸಾಧ್ಯ . ಪ್ರಜಾಪ್ರಭುತ್ವದ ವ್ಯವಸ್ಥೆಗೆ ದಕ್ಕೆಯಾದರೆ ರಾಷ್ಟ್ರೀಯ ಏಕತೆಗೆ ಭಂಗ ಉಂಟಾಗುತ್ತದೆ. ಅಂತಿಮವಾಗಿ ಸರ್ವಾಧಿಕಾರಿಗಳು ಹುಟ್ಟಿಕೊಳ್ಳುವ ಸಂಭವವಿರುತ್ತದೆ ಅಂತಹ ಒಂದು ಸಂದರ್ಭವನ್ನು ತಡೆಯುವಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆ ಸಫಲವಾಗಿದೆ. ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕಾದರೆ ಮೂರು ವ್ಯವಸ್ಥೆಯು ಸಮನಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಾಧ್ಯ..

Thursday, November 26, 2020

ಪ್ರೀತಿ ಪ್ರೇಮ ಪಯಣ

ಪ್ರೀತಿಯೆಂದರೆ ಜಗತ್ತಿನ ಶಕ್ತಿ ಆ ಶಕ್ತಿಯಿಂದಲೇ ಜಗತ್ತು ನಡೆಯುವುದು ಎಂದರೆ ತಪ್ಪಾಗಲಾರದು. ಪ್ರೀತಿ ಎಂಬುದು ಇದೇ ರೀತಿ ಇರುತ್ತದೆ ಎಂದು ಹೇಳಲಾಗದು. ಅದರ ಶಕ್ತಿ ಅನಂತ, ಆಗಾದ ಎಷ್ಟು ಅಗಾದವೆಂದರೆ ಮಹಾನ್ ಸಾಮ್ರಾಜ್ಯಗಳನ್ನು ಕಟ್ಟುವಷ್ಟು ಹಾಗೂ ಮಹಾನ್ ಸಾಮ್ರಾಜ್ಯಗಳನ್ನು ಪತನ ಮಾಡುವಷ್ಟು .ಪ್ರೀತಿಯೆಂಬುದು ಬರಿ ಮನುಷ್ಯನಿಗೆ ಸಂಬಂಧಪಟ್ಟ ವಿಷಯವಲ್ಲ .ಪ್ರೀತಿ ಸಕಲ ಜೀವರಾಶಿಗಳಲ್ಲಿ ಇರುತ್ತದೆ. ಪ್ರೀತಿ ಇಲ್ಲದ ಬದುಕು ಶೂನ್ಯ ಎಂಬ ಭಾವನೆ ಮೂಡುತ್ತದೆ. ಅದರಲ್ಲೂ ಹದಿಹರಿಯದ ಪ್ರೀತಿಯಂದರೆ ಕೇಳಬೇಕಾ ? ಪ್ರೀತಿಯಂದರೆ ಅದು ಬರೀ ಹದಿಹರೆಯದವರ ನಡುವೆ ಮಾತ್ರ ಇರುವಂತಹದ ? ಅಥವಾ ಸಕಲ ಜೀವರಾಶಿಗಳಲ್ಲಿ ಇರುವಂತಹದ ? ಎಂದು ನೋಡುತ್ತಾ ಹೋದರೆ ನಮಗೆ ಪ್ರೀತಿ ಏಕೆ ಹುಟ್ಟುತ್ತದೆ ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ಸಾಮಾನ್ಯವಾಗಿ ಕಾಡುವ ಪ್ರಶ್ನೆ ? ಮೊದಲು ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ನೋಡೋಣ ಪ್ರೀತಿ ಎಲ್ಲಾ ಸಂಬಂಧಗಳಲ್ಲಿ ಇರುವಂತಹ ಸಾಮಾನ್ಯ ವಿಷಯ ಆದರೆ ಅದನ್ನು ದೀರ್ಘಕಾಲದಲ್ಲಿ ಉಳಿಸಿಕೊಳ್ಳುವ ಬಗೆ ಹೇಗೆ ?
                   ಪ್ರೀತಿಯಲ್ಲಿ ಹಲವು ಬಗೆ ಅದು ತಂದೆ ತಾಯಿಯ ಪ್ರೀತಿಯಿಂದ ಹಿಡಿದು ತಮ್ಮ ತಂಗಿಯಂದಿರು ಹಾಗೂ ಸಂಬಂಧಿಕರಿಂದ ಸಿಗುವ ಪ್ರೀತಿ ಅಮೂಲ್ಯವಾದದ್ದು. ಒಂದು ಹುಡುಗ ಹುಡುಗಿ ಹಾಗೂ ನಿಷ್ಕಲ್ಮಶ ಸ್ನೇಹದ ಪ್ರೀತಿ ಇನ್ನೂ ಅಮೋಘ. ಸ್ನೇಹದ ಪ್ರೀತಿಯಲ್ಲಿ ಕಾಳಜಿ ಇರುತ್ತದೆ. ಸ್ನೇಹ ಎಲ್ಲ ಸಂಬಂಧಗಳ ಸಮ್ಮಿಲನ ಅಲ್ಲಿ ತಂದೆಯ ಕಾಳಜಿ ತಾಯಿಯ ಮಮತೆ, ತಮ್ಮ ಹಾಗೂ ತಂಗಿಯಂದಿರ ಕುಚೇಷ್ಟೆ ಇರುತ್ತದೆ. ಇನ್ನು ಹದಿಹರೆಯದ ಪ್ರೀತಿಯಲ್ಲಿ ಹಲವು ಬಗೆಗಳು ಇರುತ್ತವೆ. ಹದಿಹರೆಯದವರು ಎಂದರೆ 15 ವರ್ಷದಿಂದ 23 ವರ್ಷದೊಳಗಿನ ಪ್ರೀತಿಯನ್ನು ಹದಿಹರೆಯದ ಪ್ರೀತಿಯೆಂದು ಕರೆಯಬಹುದು. 15ವರ್ಷದ ಪ್ರೀತಿ ಆಕರ್ಷಣೆಯಿಂದ ಹುಟ್ಟುವಂತಹ ಒಂದು ಕ್ರಿಯೆ, ಅದು ನಮ್ಮ ದೇಹದಲ್ಲಿ ಆಗುವ ಹಾರ್ಮೋನುಗಳ ಬದಲಾವಣೆಯಿಂದ ಆಗುವಂತಹ ಆಕರ್ಷಣೆ ದೈಹಿಕ ಆಕರ್ಷಣೆಯಿಂದ ಶುರುವಾಗಿ ಅರ್ಥಮಾಡಿಕೊಳ್ಳುವ ಮಟ್ಟಿಗೆ ಮುಂದುವರೆದರೆ ಆ ಪ್ರೀತಿ  ದೀರ್ಘಕಾಲ ಉಳಿಯುತ್ತದೆ. ಇಲ್ಲವಾದಲ್ಲಿ ಆಕರ್ಷಣೆ ಕಡಿಮೆಯಾದಂತೆ ಪ್ರೀತಿ ಕಡಿಮೆಯಾಗುತ್ತ ಹೋಗುತ್ತದೆ. ಅಂದರೆ ಅದು ಪ್ರೀತಿಯಲ್ಲ ಆಕರ್ಷಣೆ ಎಂದಾಯಿತು.
                 ಇನ್ನು ಕಾಲೇಜು ದಿನಗಳಲ್ಲಿ ಆಗುವ ಪ್ರೀತಿ ಆಕರ್ಷಣೆ ಜೊತೆಗೆ ಭ್ರಮಾತ್ಮಕ ಲೋಕದೊಂದಿಗೆ ಬೆಸೆದಿರುತ್ತದೆ. ಅಂದರೆ ಯಾವುದೋ ಸಿನಿಮಾದ ಪ್ರಭಾವ ಆಗಿರಬಹುದು ಅಥವಾ ಪ್ರೀತಿಸುವ ವ್ಯಕ್ತಿಯ ಆ ಸಮಯದ ನಡವಳಿಕೆ ಆಗಿರಬಹುದು ಅದನ್ನು ಇಷ್ಟಪಡುತ್ತಿದಂತೆ ಹುಟ್ಟುವ ಪ್ರೀತಿ, ಅದು ವಾಸ್ತವಿಕತೆಗೆ ದೂರವಾಗಿರುವಹಂತಹದ್ದು. ಇನ್ನು 23ರ ನಂತರ ಆಗುವ ಪ್ರೀತಿ ವಾಸ್ತವಿಕತೆಗೆ ಸಮೀಪ ಇರುವ ವಯಸ್ಸಿನಲ್ಲಿ ಆಗುವ ಪ್ರೀತಿ ಅಲ್ಲಿ ಭ್ರಮಾತ್ಮಕ ಹಾಗು ವಾಸ್ತವಿಕತೆಯ ಸಣ್ಣ ಎಳೆಯ ಅಂತರವಿರುತ್ತದೆ. ಆ ಅಂತರ ತಿಳಿಯುವುದು 23ರ ನಂತರ, ಬದುಕಿನ ಹಾಗು ಮನೆಯಲ್ಲಿನ ಜವಾಬ್ದಾರಿ ವ್ಯಕ್ತಿಯನ್ನು ಭ್ರಮಾತ್ಮಕದಿಂದ ವಾಸ್ತವಿಕತೆಗೆ ತಂದು ನಿಲ್ಲಿಸುತ್ತದೆ. ಆನಂತರದ ವಯಸ್ಸಿನಲ್ಲಿ ಪ್ರೀತಿ ಹುಟ್ಟುವ ಪ್ರಮಾಣ ಕಡಿಮೆ ಆದರೆ ಅದು ದೀರ್ಘಕಾಲ ಉಳಿಯುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾದರೆ ಹದಿಹರೆಯದ ಪ್ರೀತಿ ಉಳಿಯುವುದಿಲವಾ ? ಎಂದು ಪ್ರಶ್ನೆ ಕಾಡುವುದು ಸಹಜ. ಹದಿಹರೆಯದ ಪ್ರೀತಿಯು ಉಳಿಯುತ್ತದೆ. ಆದರೆ ಅದು ಆಕರ್ಷಕ ಹಾಗೂ ಬ್ರಹ್ಮ ತ್ಮಕ ಹಂತವನ್ನು ದಾಟಿರಬೇಕು. ಆಗ ಮಾತ್ರ ಅಂತಹ ಪ್ರೀತಿ ಉಳಿಯಲು ಸಾಧ್ಯ.
                 ಪ್ರೀತಿಯಲ್ಲಿ ಮೂಲವಾಗಿ ಬೇಕಾಗಿರುವುದು ನಂಬಿಕೆ .ಅದು ಪ್ರೀತಿಯಲ್ಲಿ ಮಾತ್ರವಲ್ಲ ಎಲ್ಲ ಸಂಬಂಧಗಳಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಅಂಶ, ನಂಬಿಕೆ ಇಲ್ಲದೆ ಯಾವ ಪ್ರೀತಿಯು ಉಳಿಯುವುದಿಲ್ಲ ನಂಬಿಕೆ ಎಲ್ಲಾ ಸಂಬಂಧಗಳ ಜೀವಾಳ. ನಂಬಿಕೆ ಹೊರತಾದ ಸಂಬಂಧ ಒಂದು ರೀತಿ ಯಾಂತ್ರಿಕ ಬದುಕಿನಂತೆ, ಬದುಕು ನಡೆಯುತ್ತದೆ ಆದರೆ ಒಳಗಿನಿಂದ ಅಂದರೆ ಅಂತರಂಗದಿಂದ ಮನುಷ್ಯ ಖುಷಿಯಾಗಿರುವುದು ಇಲ್ಲ ,ಆದರೆ ಬದುಕಿರುತ್ತಾನೆ. ಪ್ರೀತಿ ದೀರ್ಘಕಾಲ ಉಳಿಯಲು ನಂಬಿಕೆ ಒಂದೆ ಸಾಲದು ಪರಸ್ಪರ ಅರ್ಥಮಾಡಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಪರಸ್ಪರ ಅರ್ಥಮಾಡಿಕೊಂಡು ನಂಬಿಕೆ ಆಧಾರದ ಮೇಲೆ ಬದುಕಿದರೆ ಸಂಬಂಧಗಳು ಖುಷಿಯನ್ನು ನೆಮ್ಮದಿಯನ್ನು ಸಂತೃಪ್ತಿಯನ್ನು ನೀಡಿ ಬದುಕನ್ನು ಅರ್ಥಪೂರ್ಣಗೊಳಿಸುತ್ತವೆ.

Thursday, November 19, 2020

ಪ್ರೇಮದ ಅನ್ವೇಷಣೆ ಭಾಗ - 25.

ಅವರ ಕುಟುಂಬವನ್ನು ಕಳುಹಿಸಿಕೊಡುವಾಗ ಮೊದಲಬಾರಿ ಮನಸ್ಸಿಗೆ ತುಂಬಾ ಬೆಲೆ ಬಾಳುವುದನ್ನು ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಭಾವ ವಿಧುವನ್ನು ಬಹಳವಾಗಿ ಕಾಡಿತು. ಜಾನಕಿ ಅಮ್ಮನವರು ಅತ್ತುಬಿಟ್ಟರು ಅಷ್ಟು ಅನನ್ಯವಾಗಿತ್ತು ಅವರ ಸಂಬಂಧ ಅವರನ್ನು ಕಳುಹಿಸಿದ ದಿನ ತುಂಬಾ ದುಃಖದ ದಿನವಾಗಿತ್ತು .ಆದರೂ ವಿಧುವಿಗೆ ಒಂದು ಸಮಾಧಾನಕರ ವಿಷಯ, ಏನೆಂದರೆ ಅದಿತಿಯ ಫೋನ್ ನಂಬರ್ ಸಿಕ್ಕಿದ್ದು ಇಂದು ಸಂಜೆಯಾದರೂ ನಾನು ನನ್ನ ಪ್ರೀತಿಯ ವಿಷಯವನ್ನು ಹೇಳಿಬಿಡಬೇಕು ಎಂದು ನಿರ್ಧರಿಸಿದ ವಿಧು.
                  ಅಂದು ವಿಧು ತನ್ನ ಸ್ನೇಹಿತನಾದ ಸಾಗರ್ ಒಟ್ಟಿಗೆ ಏಂದಿನಂತೆ ಸಂಜೆ ವಾಯು ವಿಹಾರಕ್ಕೆ ಹೋದನು ದಿನ ನಿತ್ಯದ ವಾಯುವಿಹಾರಕ್ಕೆ ಮತ್ತುರಿನಿಂದ ಹೊಸಳ್ಳಿಗೆ ಕಾಲು ಸೇತುವೆ ಮೇಲೆ ಹೋಗಿ ಹೊಸಳ್ಳಿ ದಡವನ್ನು ಮುಟ್ಟಿ ಬರುತ್ತಿದ್ದರು. ಅಂದು ಎಂದಿನಂತೆ ಕಾಲು ಸೇತುವೆ ಮೇಲೆ ಸಣ್ಣದಾಗಿ ಹರಿಯುವ ನೀರಿನ ಮೇಲೆ ನಡೆದು ಹೋಗುವಾಗ ವಿಧುವಿನ ಫೋನ್ ರಿಂಗಣಿಸಿತು.  ಫೋನನ್ನು ತೆಗೆದುಕೊಳ್ಳವ ಸಮಯದಲ್ಲಿ ಕಾಲುಜಾರಿದ ವಿಧು. ಸಾಗರ್ ವಿಧುವಿನ ಕೈಯನ್ನು ಹಿಡಿದ, ಜಾರಿದ ರಭಸಕ್ಕೆ ಫೋನ್ ನೀರಿನ ಅಂತರಾಳವನ್ನು ಸೇರಿತು. ಸಾಗರ್ ತಕ್ಷಣ ನೀರಿಗೆ ಜಿಗಿದ ಫೋನ್ ತರಲೆಂದು. ಆದರೆ ಫೋನ್ ಸಿಗಲಿಲ್ಲ ಅದಾಗಲೇ ನೀರಿನ ಅಂತರಾಳದಲ್ಲಿ ಫೋನ್ ಮುಳುಗಿಹೋಯಿತು. ವಿಧು ಹಾಗೂ ಅದಿತಿಯ ನಡುವೆ ಇದ್ದ ಏಕಮಾತ್ರ ಕೊಂಡಿ ಅಂತಿದ್ದ ಫೋನ್ ನೀರಿಗೆ ಜಾರಿದ ಕೂಡಲೇ ವಿಧುವಿನ ಮನವು ನೀರಿನಲ್ಲಿ ಜಾರಿತು ವಿಧು ಮೌನವಾದ.

   *                   *                 *

ಕೃತಜ್ಞತೆಗಳು

ನನ್ನ ಮೊಟ್ಟ ಮೊದಲ ಕೃತಜ್ಞತೆ ನಿಮಗೆ ಓದುಗರಿಗೆ ಸಲ್ಲುತ್ತದೆ. ಈ ಕಥೆಯು ನಿಮ್ಮಲ್ಲಿ ಆಸಕ್ತಿಯನ್ನು ಕೆರಳಿಸಿತು ಎನ್ನುವುದು ನನಗೆ ತುಂಬಾ ಪ್ರಿಯವಾದ ಸಂಗತಿಯಾಗಿದೆ. ಒಂದು ಕಥೆ ತುಂಬಾ ಅಮೋಘವಾಗಿ ಬರಬೇಕಾದರೆ ಅದರ ಹಿಂದೆ ಹಲವಾರು ಕಾಣದ ಕೈಗಳು ತಮ್ಮ ಕೆಲಸಗಳನ್ನು ಮಾಡಿರುತ್ತವೆ. ಈ ಕಥೆಯನ್ನು ಮೊದಲ ಬಾರಿ ಓದಿದ ಸಾಹಿತ್ಯ ಪ್ರಿಯರಾದ ಪುಟ್ಟಮಾರರಶೆಟ್ಟಿ ಅಣ್ಣನವರು ಕಥೆಯಲ್ಲಿ ಇದ್ದ ಹಲವಾರು ಪುನರಾವರ್ತಿತ ಪದಗಳನ್ನು ತೆಗೆಯಲು ಹೇಳಿ ಅದಕ್ಕೆ ಸ್ಪಷ್ಟ ರೂಪವನ್ನು ಕೊಟ್ಟರು.
                ಇನ್ನು ನನ್ನ ಕಥೆಯನ್ನು ಮೆಚ್ಚಿ ನ್ಯೂಸ್ ಮೈಸೂರ್ ವೆಬ್ಸೈಟ್ನಲ್ಲಿ ಪ್ರಕಟ ಮಾಡುತ್ತಿದ್ದ ಹೊಸದಿಗಂತ ಪತ್ರಿಕೆಯ ಅಂಕಣಕಾರ ಹಾಗೂ ಲೇಖಕರಾದ ಪ್ರವೀಣ್ ಕುಮಾರ್ ಮಾವಿನಕಾಡು ಅಣ್ಣನವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ.
               ಅಂತಿಮ ರೂಪದಲ್ಲಿ ಈ ಕಥೆಯನ್ನು ನೀವು ಓದುವಂತೆ ಮಾಡಿದ ಕಥೆಯ ಅಭಿಮಾನಿಗಳಿಗೆ ಅನಂತ ಅನಂತ ಧನ್ಯವಾದಗಳು.

Wednesday, November 18, 2020

ಪ್ರೇಮದ ಅನ್ವೇಷಣೆ ಭಾಗ - 24

ಅದು ನನ್ನ ಹುಡುಗಿ ನನಗೆ ಸಿಗದವಳು ನಿಮಗೆ ಸಿಕ್ಕಿದ್ದಾಳೆ. ತಮಾಷೆ ಮಾಡಿದ ಕೂಡಲೇ ಅವರು, ಅದಿತಿ ನನ್ನ ಕೈರುಚಿಯನ್ನು ವಿಧು ನೋಡಲಿ ನಾನು ಇವತ್ತು ಅಡುಗೆಯನ್ನು ಮಾಡುತ್ತೇನೆ ಬಿಡಿ ಎಂದು ಹೇಳಿ ಅಡಿಗೆಯನ್ನು ಮಾಡಿ ಇಟ್ಟಿದ್ದಾಳೆ . ನಸುನಕ್ಕ ವಿಧು ಅದಕ್ಕೆ ಊಟದಲ್ಲಿ ಉಪ್ಪು ಖಾರ ಇಲ್ಲದ ಈ ರಸಂ ಅನ್ನು ಆ ದೇವರೇ ಮೆಚ್ಚಬೇಕು ಎಂದು ತಮಾಷೆ ಮಾಡುತ್ತ ಊಟವನ್ನು ಮಾಡಿದ. ದಿನವು ಹತ್ತಿರದಲ್ಲೇ ಇದ್ದ ಶಿವನ ಆಲಯಕ್ಕೆ ಹೋಗುವ ಅಭ್ಯಾಸವಿದ್ದ ವಿಧು ದೇವಸ್ಥಾನಕ್ಕೆ ಹೋಗಿ ಬರುವ ಸಮಯದಲ್ಲಿ ರೂಮಿನ ಹೊರಭಾಗದಲ್ಲಿ ಇದ್ದ ಅದಿತಿ ನೀವು ಬೆಳಗ್ಗೆ ಎಷ್ಟೊತ್ತಿಗೆ ಎದ್ದು ವ್ಯಾಯಾಮ ಮಾಡಲು ಹೋಗುತ್ತೀರಿ ಎಂದು ಕೇಳಿದಾಗ ನಗು ತಾಳಲಾರದೆ ನಕ್ಕು ನುಡಿದಿದ್ದ ವಿಧು ಹೌದು ದೇವಸ್ಥಾನದಲ್ಲಿ ಜಿಮ್ ಮಾಡುತ್ತೇನೆ ಎಂದು. ಶುಬ್ರ ವಸ್ತ್ರದಲ್ಲಿ ಯಾರುತಾನೇ ವ್ಯಾಯಾಮ ಮಾಡಲು ಹೋಗುತ್ತಾರೆ ಅಷ್ಟು ತಿಳಿಯದೆ ಈ ಹುಡುಗಿಗೆ !  ಮುಗ್ಧ ಪ್ರಶ್ನೆಗಳು ಅವಳ ಮುಗ್ದಮನಸ್ಸಿನ ಸೂಚಕ ವಾಗಿರುವಂತೆ ಇರುತ್ತಿದ್ದವು ಅದಿತಿಯ ಪ್ರಶ್ನೆಗಳು. ಕಲ್ಲಿನಂತಿದ್ದ ವಿಧುವಿನ ಮನಸ್ಸು  ಮಗುವಿನಂತೆ ಮೃದುವಾಗುತ್ತ ಹೋಯಿತು. ಅದಿತಿಯ ಮುಗ್ಧ ಮಾತುಗಳು ಅವಳ ಹತ್ತಿರ ಮಾತನಾಡಲು ತವಕಿಸುತ್ತಿತ್ತು. ಮೊದಲ ಬಾರಿ ಬೇರೆ ಒಂದು ಜೀವಕ್ಕಾಗಿ ವಿಧುವಿನ ಮನಸ್ಸು ಚಡಪಡಿಸುತ್ತಿತ್ತು. ಅದಿತಿಯನ್ನು ಬೆಳಿಗ್ಗೆ ಸಂಜೆ ನೋಡಲಿಲ್ಲ ವೆಂದರೆ ಏನೋ ಕಳೆದುಕೊಂಡ ಅನುಭವ ಆದಂತೆಯೇ ! ವಿಧು ತನ್ನ ಜೀವನದಲ್ಲಿ ಬೇರೆ ಹುಡುಗಿ ಹತ್ತಿರ ಮುಕ್ತವಾಗಿ ಮಾತನಾಡಿದನೆಂದರೆ ಅದು ಅದಿತಿಯ ಹತ್ತಿರ ಮಾತ್ರ. ಆದಿತ್ಯ ಹಂತಹಂತವಾಗಿ ಸುಧಾರಿಸುತ್ತಾ ಗುಣವಾಗುತ್ತ ಹೋದ.
            ಅದಿತಿಯ ಪ್ರೀತಿಯಲ್ಲಿ ಬಿದ್ದ ವಿಧುವಿಗೆ ದಿನಗಳು ಕಳೆದಿದ್ದು ಅವನ ಅರಿವಿಗೆ ಬರಲಿಲ್ಲ . ಆದಿತ್ಯ ಸುಧಾರಿಸುತ್ತಿದ್ದಂತೆ ವೈದ್ಯರು ಅವನಿಗೆ ಕರೆದುಕೊಂಡು ಹೋಗಬಹುದು ಎಂದು ಹೇಳಿದರು. ಅದಿತಿ ಕುಟುಂಬದವರು ಇನ್ನು ಮೂರು ದಿನಗಳಲ್ಲಿ ಅವರು ಕರ್ನಾಟಕವನ್ನು ಬಿಟ್ಟು ಹೊರಡುವವರಲ್ಲಿದ್ದರು. ಅದು ವಿಧುವಿಗೆ ತಿಳಿದ ಕೂಡಲೇ ಹೇಗಾದರೂ ಧೈರ್ಯಮಾಡಿ ತನ್ನ ಪ್ರೀತಿಯನ್ನು ಅದಿತಿಯಲ್ಲಿ ಹೇಳಿಬಿಡಬೇಕು ಎಂದು ನಿಶ್ಚಯಿಸಿ ಅದಿತಿಯ ಹತ್ತಿರ ಹೋದ. ಆದರೆ ಅವನಿಗೆ ಧೈರ್ಯ ಸಾಲದೆ ಹೋಯಿತು. ಆದರೂ ಧೈರ್ಯ ಮಾಡಿ ಇನ್ನೇನು ಅವಳಿಗೆ ತನ್ನ ಪ್ರೀತಿಯ ಬಗ್ಗೆ ಹೇಳಬೇಕೆನ್ನುವಷ್ಟರಲ್ಲಿ ಅದಿತಿಗೆ ಫೋನ್ ಬಂತು, ಕರೆಯನ್ನು ಸ್ವೀಕಾರ ಮಾಡಿ ನಾನು ನಿಮಗೆ ಆಮೇಲೆ ಸಿಗುತ್ತೇನೆ ಎಂದು ಹೇಳಿ ಹೋದಳು. ಓಹೋ ನನಗೆ ಧೈರ್ಯವಾಗಿ ನೇರವಾಗಿ ಹೇಳಲು ಆಗುತ್ತಿಲ್ಲವಲ್ಲ ಸರಿ ಆಗದಿದ್ದರೆ ಹೇಗೆ ಹೇಳುವುದು ಎಂದು ಯೋಚಿಸುತ್ತಿರುವಾಗಲೇ ಅದಿತಿ ಜಾನಕಿ ಅಮ್ಮನವರ ಜೊತೆ  ಅಡುಗೆ ಮಾಡಿ ತರಲು ಹೋಗಿರುವುದು ತಿಳಿಯಿತು. ಹೇಗಿದ್ದರೂ ಜಾನಕಿ ಅಮ್ಮನವರಿಗೆ ವಿಧು ಅದಿತಿ ಮಾತನಾಡುವುದು ತಿಳಿದ ವಿಚಾರವೇ ಎಂದು ತಿಳಿದಿದ್ದ ವಿಧು ಜಾನಕಿ ಅಮ್ಮನವರಿಗೆ ಫೋನ್ ಮಾಡಿ ಅದಿತಿಗೆ ಕೊಡಲು ಹೇಳಿದರೆ ಕೊಡುತ್ತಾರೆ ಎಂದು ಜಾನಕಿ ಅಮ್ಮನವರಿಗೆ ಫೋನ್ ಮಾಡಿದ ಆ ಕಡೆಯಿಂದ ಇಂಗ್ಲಿಷ್ನಲ್ಲಿ ಮಾತು ನಾನು ಅದಿತಿ ಮಾತನಾಡುತ್ತಿರುವುದು ಎಂದು ಓಹೋ ಅದಿತಿ ಫೋನ್ ತೆಗೆದುಕೊಂಡಿರುವುದರಿಂದ ನೇರವಾಗಿ ಹೇಳಿ ಬಿಡಬೇಕೆಂದು, ಅದಿತಿಯವರೇ ಎಂದ ವಿಧು ಅದಿತಿ ಏನು ಹೇಳಿ ಎಂದಳು ನಾನು ನಿಮಗೆ ಒಂದು ಮಾತನ್ನು ಹೇಳಬೇಕೆಂದಿದ್ದನೇ ಎಂದ ಇನ್ನೇನು ಧೈರ್ಯವಾಗಿ ಹೇಳಬೇಕು ಅನ್ನುವಷ್ಟರಲ್ಲಿ ಫೋನ್ ನಿಶಬ್ದವಾಯಿತು.
                   ಹಲೋ ಹಲೋ ಎಂದು ವಿಧು,  ಆ ಕಡೆಯಿಂದ ಯಾರು ಮಾತನಾಡದಂತಾಯಿತು. ಕೆಲವು ಸಮಯದ ನಂತರ ಜಾನಕಿ ಅಮ್ಮನವರು ಹಾಗೂ ಅದಿತಿ ಅಡುಗೆಯನ್ನು ತಯಾರಿಸಿಕೊಂಡು ಬಂದರು. ಬಂದವರೇ ಅದಿತಿ ವಿಧುವಿಗೆ ಊಟವನ್ನು ಕೊಟ್ಟು ಕೇಳಿದಳು. ನೀವು ಫೋನಿನಲ್ಲಿ ಏನೋ ಹೇಳಲು ಬಂದಿರಿ. ಆದರೆ ಫೋನಿನಲ್ಲಿ ಬ್ಯಾಟರಿ ಕಡಿಮೆ ಇದ್ದ ಕಾರಣ ಫೋನ್ ಸ್ವಿಚ್ ಆಫ್ ಆಯಿತು, ಏನು ಹೇಳಿ ಎಂದಳು. ಅದಿತಿಯ ಪಕ್ಕ ಜಾನಕಿ ಅಮ್ಮನವರು ಇದ್ದಿದ್ದರಿಂದ ವಿಧು ಏನು ಇಲ್ಲ ಸ್ವಲ್ಪ ಊಟವನ್ನು ಕಡಿಮೆ ತರಲು ಹೇಳೋಣವೆಂದು ಫೋನ್ ಮಾಡಿದೆ ಎಂದು ಸುಮ್ಮನಾದ. ಅವರು ಹೋಗುವ ಮೂರು ದಿನಗಳ ಒಳಗಾಗಿ ಹೇಳಲು ವಿಧುವಿಗೆ ಕೊನೆಗೂ ಸಾಧ್ಯವಾಗಲಿಲ್ಲ. ಅದಿತಿ ಹಾಗೂ ಅವರ ಕುಟುಂಬ ಹೋಗುವ ದಿನ ಬಂದೇ ಬಿಟ್ಟಿತು ಅವರು ಹೋಗುವವರಿದ್ದರು. ಜಾನಕಿ ಅಮ್ಮನವರು ನಾನು ಇನ್ನು ಹೇಗೆ ಅವರನ್ನು ನೋಡಲಿ ಮಾತನಾಡಿಸಲಿ ಇಲ್ಲಿ ಅವರನ್ನು ಮನೆಯ ಮಕ್ಕಳಂತೆ ನೋಡಿಕೊಂಡಿದ್ದೇನೆ. ಇನ್ನು ಹೇಗೆ ಎಂಬ ಚಿಂತೆಯನ್ನು ಹೊರಹಾಕಿದರು. ಈಗ ಫೋನಿನಲ್ಲೇ ನೋಡಿ ನೇರವಾಗಿ ಮಾತನಾಡಬಹುದು ಅಂತಹ ಅವಕಾಶವಿದೆ ಎಂದು ಹೇಳಿದ ವಿಧು. ಅದಿತಿಯನ್ನು ಕರೆದು ವಿಧುವಿನ ಫೋನ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತೇನೆ ಎಂದು ಹೇಳಿದರು. ಅದಕ್ಕೆ ಅದಿತಿ ಒಪ್ಪಿದಳು. ಆಕೆಯ ಫೋನ್ ನಂಬರನ್ನು ವಿಧುವಿಗೆ ನೀಡಿದಳು. ಮರುದಿನ ಬೆಳಗಿನ ಜಾವ ಐದು ಮೂವತ್ತರ ಸಮಯದಲ್ಲಿ ಅವರಿಗೆ ಹೋಗಲು ವಾಹನದ ವ್ಯವಸ್ಥೆ ಮಾಡಲಾಯಿತು. ಅದಿತಿಯನ್ನು ಅವರ ಕುಟುಂಬವನ್ನು ಕಳುಹಿಸಿಕೊಡುವಾಗ.......

Tuesday, November 17, 2020

ಪ್ರೇಮದ ಅನ್ವೇಷಣೆ ಭಾಗ - 23


ನನ್ನ ಹೆಸರು ಅದಿತಿ ಎಂದು ಪರಿಚಯ  ಮಾಡಿಕೊಂಡಳು. ವಿಧುವಿಗೆ ಅವಳನ್ನು ನೋಡುತ್ತಿದ್ದರೆ ಮೊದಲೇ ಅದಿತಿ ಹತ್ತಿರ ಮಾತನಾಡಿಸಿದ್ದೇನೆ ಎನ್ನುವಂತೆ ಭಾಸವಾಗುತ್ತಿತ್ತು . ಅದಿತಿಯ ಕಣ್ಣನ್ನು ನೋಡುತ್ತಿದ್ದರೆ ಯಾವುದೋ ಜನುಮದ ನಂತು ಇರುವಂತೆ ಅನಿಸುತ್ತಿತ್ತು. ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಪ್ರಶಾಂತತೆ ಭಾಷೆಯ ಸಂವಹನ ಸಮಸ್ಯೆ ಇದ್ದರೂ ಕೂಡ ಏನೋ ಒಂದು ರೀತಿಯ ಆತ್ಮೀಯತೆಯ ಭಾವ. ಭಾಷೆಯ ಸಂವಹನದ ಸಮಸ್ಯೆ ಇದ್ದಿದ್ದರಿಂದ ಯಾವುದೇ ವಿಚಾರವಾಗಿ ವಿಧವನ್ನು ಕೇಳುವುದು ಅನಿವಾರ್ಯವಾಯಿತು. ಆದಿತ್ಯನ ತಂದೆ ತಾಯಿಯಾದ ಗಾಯತ್ರಿಯವರಿಗೆ ಅಲ್ಪಸ್ವಲ್ಪ ಹಿಂದಿ ಇಂಗ್ಲಿಷ್ ಬರುತ್ತಿದ್ದರಿಂದ ಸಂವಹನದ ಸಮಸ್ಯೆ ಅದಿತಿ ಕುಟುಂಬದವರಿಗೆ ಅಷ್ಟಾಗಿ ಕಾಡಲಿಲ್ಲ. ಆದಿತ್ಯನ ಕುಟುಂಬ ಏನನ್ನಾದರೂ ಕೇಳುವುದಿದ್ದರೆ ವಿಧುವನ್ನು ಕೇಳಬೇಕಾಗಿತ್ತು. ಸ್ಥಳೀಯರಾದ ಜಾನಕಿ ಅಮ್ಮನವರು ಹಾಗೂ ವಿಧುವಿನ ಸ್ನೇಹಿತನಾದ ಸಾಗರ್ ತಮ್ಮ ಕೆಲಸ ಮುಗಿದ ಮೇಲೆ ಸಂಜೆಯಾಗುತ್ತಲೇ ಮನೆಗೆ ಹೋಗುತ್ತಿದ್ದರು . ಜಾನಕಿ ಅಮ್ಮನವರಿಗೆ ಕನ್ನಡ ಬಿಟ್ಟರೆ ತಮಿಳು ಅಲ್ಪಸ್ವಲ್ಪ ಬರುತ್ತಿತ್ತು ಉಳಿದಂತೆ ಅವರಿಗೆ ಬೇರೆ ಭಾಷೆ ಬರುತ್ತಿರಲಿಲ್ಲ ಹಾಗಾಗಿ ವಿಧು ಇವರಿಬ್ಬರ ಸಂಭಾಷಣೆಯನ್ನು ಅನುವಾದ ಮಾಡಿ ಅವರಿಗೆ ಅವರ ಸಂಭಾಷಣೆಯನ್ನು ಇವರಿಗೆ ಅನುವಾದವನ್ನು ಮಾಡಬೇಕಾಗಿತ್ತು. ಹುಡುಗಿಯರೊಂದಿಗೆ ಮೊದಲಿನಿಂದಲೂ ಅಂತರ ಕಾಯ್ದುಕೊಂಡ ಬಂದ ವಿಧುವಿಗೆ ಹುಡುಗಿಯರ ಹತ್ತಿರ ಮಾತನಾಡುವುದಕ್ಕೂ ಸ್ವಲ್ಪ ಹಿಂಜರಿಕೆ, ಆದರೆ ಆದಿತ್ಯನ ತಂಗಿ ಅದಿತಿ ದಿಟ್ಟತನದ ಹುಡುಗಿ ಏನೇ ಹೇಳುವುದಿದ್ದರೆ ನೇರವಾಗಿ ಹೇಳುವ ಹುಡುಗಿ ಮುಗ್ಧ ಮನಸ್ಸಿನ ಹುಡುಗಿ ಅದಿತಿ ಅವಳ ಕಮಲದ ಕಣ್ಣುಗಳು ವಿಧುವನ್ನು ಸೆಳೆಯಲು ತುಂಬ ದಿನ ಬೇಕಾಗಿರಲಿಲ್ಲ ಕಾಡಿಗೆಯನ್ನು ಹಚ್ಚುತ್ತಿದ್ದ ಕಣ್ಣುಗಳು ಮುಕ್ತ ಮನಸ್ಸಿನ ಮಾತುಗಳು ನೇರನುಡಿಯ ಮಾತುಗಳು. ಅದಿತಿಯ ಕಣ್ಣೋಟ ವಿಧು ಅದಿತಿಯನ್ನು ಪ್ರೀತಿಸುವಂತೆ ಮಾಡಿತ್ತು. ವಿಧು ತನ್ನ ಅರಿವಿಲ್ಲದಂತೆ ಅದಿತಿಯನ್ನು ಪ್ರೀತಿಸಲು ತೊಡಗಿದ್ದನು. ದಿನ ಬೆಳಿಗ್ಗೆ ಎದ್ದ ಕೂಡಲೇ ಅದಿತಿ ಮುಖವನ್ನು ನೋಡುವುದು ವಿಧುವಿಗೆ ಸಂತೋಷವನ್ನು ತರಿಸುತ್ತಿತ್ತು. ಆಕೆಯ ಮುಗ್ಧ ಮುಖ ಆಕೆಯ ಬಗ್ಗೆ ಕಾಳಜಿ ಬರುವಂತೆ ಮಾಡಿತ್ತು .ಅವಳ ನಗು ಚಂದ್ರನು ಭೂಮಿಗೆ ಬೆಳದಿಂಗಳು ಸೂಸುವಂತೆ ಬೆಳದಿಂಗಳ ಕಿರಣಗಳಿಗೆ ಭೂಮಿ ತಂಪೆರೆಯುವ ರೀತಿ ಮನಸ್ಸಿಗೆ ಮುದವನ್ನು ನೀಡುತ್ತಿತ್ತು. 
                    ಬದುಕಿನಲ್ಲಿ ಮೊದಲ ಬಾರಿ ಪ್ರೀತಿಯ ಸೆಲೆಯನ್ನು ಕಂಡ ವಿಧು ಪ್ರೀತಿಯಲ್ಲಿ ಬಿದ್ದ ನಂತರ ತನ್ನನ್ನು ತಾನೇ ಮರೆತವನಂತೆ ಇದ್ದನು. ಇದನ್ನೆಲ್ಲ ಗಮನಿಸುತ್ತಿದ್ದ ಜಾನಕಿ ಅಮ್ಮನವರು ವಿಧು ಹಾಗೂ ಅದಿತಿಯ ಮೇಲೆ ಅನುಮಾನ ಪಡಲು ಆರಂಭಿಸಿದರು. ಇಬ್ಬರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಜಾನಕಿ ಅಮ್ಮನವರು ವಿಧುವನ್ನು ನೇರವಾಗಿ ಕೇಳಿಯೇ ಬಿಟ್ಟರು. ನಿನ್ನನ್ನು ನೋಡಿದರೆ ಯಾಕೋ ಅದಿತಿಯನ್ನು ಇಷ್ಟಪಟ್ಟಂತೆ ಕಾಣುತ್ತಿದೆ ಎಂದರು . ಅದಕ್ಕೆ ಹಾಗೇನು ಇಲ್ಲ ಪರಸ್ಪರ ಚೆನ್ನಾಗಿ ಮಾತನಾಡಿದ ಮಾತ್ರಕ್ಕೆ ಹೇಗೆ ಪ್ರೀತಿಸಿದಂತೆ ಆಗುತ್ತದೆ ಎಂದು ಜಾನಕಿ ಅಮ್ಮನವರನ್ನು ಕೇಳಿದ. ಅಷ್ಟಕ್ಕೆ ಸುಮ್ಮನಾಗದ ಜಾನಕಿಮ್ಮನವರು ಅದಿತಿಯನ್ನು ನೀನು ಯಾರನ್ನಾದರೂ ಮದುವೆಯಾಗಬೇಕೆಂದು ನಿಶ್ಚಯ ಮಾಡಿದ್ದೀಯಾ ಎಂದು ಕೇಳಿಯೇ ಬಿಟ್ಟರು. ಅದಕ್ಕೆ ಅದಿತಿ ಇಲ್ಲ ನಾನು ಯಾರನ್ನು ಮದುವೆಯಾಗಬಾರದೆಂದು ನಿರ್ಧರಿಸಿದ್ದೇನೆ ಎಂದು ಹೇಳಿದಳು. ವಿಧು ಅದಿತಿ ಮಾತನಾಡಿದರೆ ಸಾಕು ಜಾನಕಿ ಅಮ್ಮನವರಿಗೆ ಅನುಮಾನದ ಭೂತ ಬಂದುಬಿಡುವುದು. ದಿನವೂ ಮನೆಯಿಂದ ಅಡಿಗೆಯನ್ನು ಮಾಡಿ ತರುತ್ತಿದ್ದ ಜಾನಕಿ ಅಮ್ಮನವರು ಅದಿತಿ ಕುಟುಂಬಕ್ಕೂ ಅಡಿಗೆಯನ್ನು ಮಾಡಿ ತರುತ್ತಿದ್ದರು. ಆದರೆ ಅಂದು ಅಡಿಗೆಯಲ್ಲಿ ಏನು ವ್ಯತ್ಯಾಸ ಕಂಡಂತೆ ಆಯ್ತು ವಿಧು ಜಾನಕಿ ಅಮ್ಮನವರಿಗೆ ಕೇಳಿದ ಅಡುಗೆ ರುಚಿಯಲ್ಲಿ ವ್ಯತ್ಯಾಸವಿದೆಯಲ್ಲ ಎಂದ ಅದಕ್ಕೆ ಅವರು ನಿನ್ನ ಹುಡುಗಿ ಮಾಡಿದ್ದು ಎಂದು ಹೇಳಿದರು. ಅದು ನನ್ನ ಹುಡುಗಿ ನನಗೆ ಸಿಗದವಳು ನಿಮಗೆ ಸಿಕ್ಕಿದ್ದಾಳೆ ಯಾರವಳು......

Monday, November 16, 2020

ಪ್ರೇಮದ ಅನ್ವೇಷಣೆ ಭಾಗ - 22

ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಆದಿತ್ಯನಿದ್ದ ವೈದ್ಯರು ಅವನ ಕಿವಿಯಲ್ಲಿ ತುಂಬಾ ರಕ್ತ ಹೋಗಿದೆ ಸ್ವಲ್ಪದರಲ್ಲಿ ಡ್ಯಾಮೇಜ್ ಆಗುವುದು ತಪ್ಪಿದೆ. ತಲೆಬುರುಡೆಯಲ್ಲಿ ಏರ್ಕ್ರಾಕ್ ಆಗಿದೆ ಇವನು ಬದುಕಿ ಉಳಿದದ್ದೇ ಹೆಚ್ಚು ಅದು ಖಂಡಿತವಾಗಿ ಬದುಕಿ ಉಳಿಯುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಪ್ರಜ್ಞೆ ಬರುವತನಕ ಏನನ್ನು ಹೇಳಲು ಬರುವುದಿಲ್ಲ ಎಂದರು. ಐಸಿಯು ಇಂದ ಹೊರಗೆ ಬಂದವನೇ ಆದಿತ್ಯನ ಸ್ನೇಹಿತರಾದ ಚಿರಾಗ್ ಮತ್ತು ಚಿನ್ಮಯ್ ಅನ್ನು ಕರೆದು ಮನೆಗೆ ವಿಷಯವನ್ನು ತಿಳಿಸಿದ್ದೀರಾ ಎಂದು ಕೇಳಿದ ಅದಕ್ಕವರು ತಿಳಿಸಿದ್ದೇವೆ ಆದಿತ್ಯನ ತಂದೆ-ತಾಯಿ ಬರುತ್ತಾರೆ ಎಂದರು. ಮತ್ತೆ ವೈದ್ಯರ ಬಳಿ ಹೋದ ವಿಧು ಎಷ್ಟೇ ಖರ್ಚು ಆದರೂ ಪರವಾಗಿಲ್ಲ ಅತ್ಯುತ್ತಮ ಚಿಕಿತ್ಸೆಯನ್ನು ನೀಡಿ ಆದಿತ್ಯನನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡಿ, ಅವರ ತಂದೆ ತಾಯಿ ಸದ್ಯದಲ್ಲಿ ಬರುತ್ತಾರೆ ಒಳ್ಳೆಯ ಔಷಧಿ ಗಳನ್ನು ಕೊಡಿ ಎಂದು ಹೇಳಿ ಹೊರಬರುವಾಗ ವೈದ್ಯರು ನಿಮ್ಮ ಸ್ನೇಹಿತ ಮಧ್ಯಪಾನ ಮಾಡಿದ್ದಾನೆ ಎಂದು ಹೇಳಿದರು. ಓಹೋ ಆದಿತ್ಯ ಹಾಗೂ ಆತನ ಸ್ನೇಹಿತರು ಹಿಂದಿನ ರಾತ್ರಿ ಮಧ್ಯಪಾನವನ್ನು ಮಾಡಿದ್ದಾರೆ ಎಂದು ಅರಿವಿಗೆ ಬರುತ್ತಿದ್ದಂತೆ ವೈದ್ಯರಿಗೆ ವಿಧು ಇವನ್ನೆಲ್ಲ ಅವನ ತಂದೆ ತಾಯಿಗೆ ಹೇಳಬೇಡಿ ಅವರು ನೊಂದುಕೊಳ್ಳುತ್ತಾರೆ ಅವನ ಆರೋಗ್ಯದ ಬಗ್ಗೆ ಮಾತ್ರ ಗಮನ ಕೊಡಿ ಎಂದು ಹೇಳಿ ಬಂದನು. ಚಿರಾಗ್ ಚಿನ್ಮಯ್ ಅವರಿಗೆ ಹಣದ ಅವಶ್ಯಕತೆ ಇದ್ದರೆ ಕೇಳಿ ಎಂದು ಹೇಳಿ ಆಸ್ಪತ್ರೆಯಿಂದ ಹೊರಟ. ಮಧ್ಯಾಹ್ನದ ಹೊತ್ತಿಗೆ ಫೋನ್ ಕರೆ ಬಂದಿತ್ತು ಆದಿತ್ಯನ ತಂದೆ-ತಾಯಿ ಬಂದಿದ್ದಾರೆಂದು ನೀವು ಬರಬೇಕು ಎಂದು. ವಿಧು ಆಸ್ಪತ್ರೆ ತಲುಪಿದಾಗ ಅವರ ತಂದೆ-ತಾಯಿ ಹಾಗು ತಂಗಿ ಆಸ್ಪತ್ರೆಯಲ್ಲಿ ಕುಳಿತಿದ್ದರು. ಚಿನ್ಮಯ್ ಆದಿತ್ಯನ ತಂದೆ-ತಾಯಿ ಹಾಗೂ ಅವರ ತಂಗಿಯನ್ನು ಪರಿಚಯ ಮಾಡಿಕೊಟ್ಟ. 
                     ಆದಿತ್ಯ ಅವರಿಗೆ ಒಬ್ಬನೇ ಮಗ ಅವನಿಗೆ ಊರೂರು ಸುತ್ತುವ ಹವ್ಯಾಸ ಅದೇ ರೀತಿ ಊರೂರು ಸುತ್ತುತ್ತ ಬಂದವನು ಸಂಸ್ಕೃತ ಗ್ರಾಮಕ್ಕೆ ಬಂದು ಸಂಸ್ಕೃತ ಕಲಿಯುವ ಇಚ್ಛೆಯಾಗಿ ಉಳಿದಿದ್ದ. ಆದಿತ್ಯನ ತಂದೆ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ತಾಯಿ ಆಂಧ್ರಪ್ರದೇಶದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿ ಇಬ್ಬರು ಮಕ್ಕಳು ಒಂದು ಹೆಣ್ಣು ಒಂದು ಗಂಡು ಬೇರೆ ರಾಜ್ಯದಿಂದ ಬಂದವರಾಗಿದ್ದರಿಂದ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿತ್ತು .ಅವರ ಜೊತೆ ಮಾತನಾಡಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆ ಮೂಡಿಸಲಾಯಿತು . ಆದಿತ್ಯ ಓಡಿಸಿಕೊಂಡು ಬಂದಿದ್ದ ಅವನ ಸ್ನೇಹಿತನಾದ ಚಿನ್ಮಯ್ ಅವನ ಬೈಕನ್ನು ಪೊಲೀಸರು ತೆಗೆದುಕೊಂಡುಹೋಗಿ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡಿದ್ದರು.  ಅದನ್ನು ಬಿಡಿಸಿಕೊಡುವಂತೆ ಕೇಳಿಕೊಂಡರು. ವಿಧು ತನ್ನ ರಾಜಕೀಯ ಪ್ರಭಾವ ಬಳಸಿ ಆದಿತ್ಯ ತಾಯಿಯ ಒಪ್ಪಿಗೆ ಮೇಲೆ ಬೈಕನ್ನು ಬಿಡಿಸಿಕೊಂಡು ಅವರ ಸ್ನೇಹಿತರಿಗೆ ವಾಪಸ್ ಸಿಗುವಂತೆ ಮಾಡಿದನು. ಅದನ್ನು ಅವರಿಗೆ ಕೊಡಿಸಿದ ಮೇಲೆ ರಿಪೇರಿ ಮಾಡಿಸಿಕೊಂಡು ಮತ್ತೆ ಆಂಧ್ರಕ್ಕೆ ತಮ್ಮ ಬೈಕನ್ನು ತೆಗೆದುಕೊಂಡು ಹೋದರು. ಆದಿತ್ಯ ಕಾಲ ಕ್ರಮೇಣ ಹಂತಹಂತವಾಗಿ ಸುಧಾರಿಸುತ್ತ ಬಂದನು. ಆದಿತ್ಯನಿಗೆ ಚಿಕಿತ್ಸೆ ಮುಂದುವರಿಸುವ ಸಲುವಾಗಿ ಮತ್ತೂರಿನಲ್ಲಿ ಉಳಿಯುವ ಪರಿಸ್ಥಿತಿ ಎದುರಾಯಿತು. ಆದಿತ್ಯನ ಕುಟುಂಬ ಮತ್ತೂರಿಗೆ ಬಂದು ಭವನದಲ್ಲಿ ಉಳಿಯುವಂತಾಯಿತು. ಕನ್ನಡ ಭಾಷೆಯ ಅರಿವಿಲ್ಲದ ತಂದೆ-ತಾಯಿ ಹಾಗೂ ಮಗಳು. ವಿಧು ಹಾಗೂ ಅವರ ನಡುವೆ ಇದ್ದ ಏಕೈಕ ಭಾಷೆ ಇಂಗ್ಲಿಷ್, ಅವರ ಸಂವಹನಕ್ಕೆ ಅಡ್ಡಿಯಾಗದ ಭಾಷೆಯಾಯಿತು. ಅವರ ಮಗಳು ಇಂಗ್ಲಿಷ್ ಹಾಗು ಹಿಂದಿಯನ್ನು ಸಲೀಸಾಗಿ ಮಾತನಾಡುತ್ತಿದ್ದಳು. ಬರಿ ಮುಖತಹ ಪರಿಚಯವಿದ್ದ ವಿಧು ಅಷ್ಟಗಿ ಅವರ ಬಗ್ಗೆ ಕೇಳಲು ಹೋಗಲಿಲ್ಲ. ಮಾತು ಮುಂದುವರಿಸಿದ ಆದಿತ್ಯನ ತಂಗಿ ನನ್ನ ತಂದೆ ಹೆಸರು ಜಗನ್ ತಾಯಿಯ ಹೆಸರು ಗಾಯತ್ರಿ ಹಾಗೂ ನನ್ನ ಹೆಸರು.......

Saturday, November 14, 2020

ಪ್ರೇಮದ ಅನ್ವೇಷಣೆ ಭಾಗ - 21


 
ಆ ಭಾಷೆಯೇ ಸಂಕೇತಿ, ಸಂಕೇತಿ ಭಾಷೆಗೆ ಲಿಪಿಯಿಲ್ಲ ಆದರೆ ಮತ್ತೂರಿನ ಅಗ್ರಹಾರದಲ್ಲಿ ಆಡುಭಾಷೆಯಾಗಿ ಪ್ರಚಲಿತದಲ್ಲಿದೆ. ಒಟ್ಟಿನಲ್ಲಿ ಹೇಳುವುದಾದರೆ ಒಂದು ವಿಶಿಷ್ಟ ಊರು ಇನ್ನೂ ತನ್ನ ಹಳೆಯ ಆಚಾರ-ವಿಚಾರ ಸಂಪ್ರದಾಯಗಳನ್ನು ಯಥಾವತ್ತಾಗಿ ಉಳಿಸಿಕೊಂಡು ಬರುತ್ತಿರುವ ಗ್ರಾಮ. ಅಲ್ಲಿನ ಸ್ಥಳೀಯ ವಿಚಾರಗಳನ್ನು ಸ್ಥಳೀಯ ಸ್ನೇಹಿತನಾದ ಸಾಗರ್ ಇಂದ ತಿಳಿದುಕೊಂಡು ತನ್ನ ರೂಮಿನ ಕಡೆ ಹೆಜ್ಜೆ ಹಾಕಿದ. ಅಂದು ಜಾನಕಿ ಅಮ್ಮನವರು ವಿಧುವಿಗೆ ಮಾತ್ರ ಊಟವನ್ನು ತಂದಿದ್ದರು. ಆದಿತ್ಯ ಹಾಗೂ ಅವರ ಸ್ನೇಹಿತರು ಇಂದು ಹೊರಗಡೆ ಊಟವನ್ನು ಮಾಡುತ್ತಾರೆ .ನೀನು ಊಟವನ್ನು ಮಾಡು ಎಂದು ಹೇಳಿ ಹೋದರು. ಸರಿ ಎಂದು ವಿಧು ತನ್ನ ಊಟವನ್ನು ಮುಗಿಸಿ ಮಲಗಿದ. 
                 ಅಂದು ರಾತ್ರಿ ಸರಿಯಾಗಿ 2:45 ಸಮಯದಲ್ಲಿ ಯಾರೋ ಬಾಗಿಲು ಬಡಿದಂತಾಯಿತು ಯಾರು ಎಂದರು ಉತ್ತರವಿಲ್ಲ ಸರಿ ನೋಡೇಬಿಡೋಣವೆಂದು ಎದ್ದುಹೋಗಿ ಬಾಗಿಲು ತೆಗೆದ. ಚಿನ್ಮಯಿ ಬಾಗಿಲ ಬಳಿ ನಿಂತಿದ್ದ ಯಾಕೆ ಈ ಸಮಯದಲ್ಲಿ ಬಾಗಿಲು ಬಡಿದದ್ದು ಎಂದು ಕೇಳಿದ ವಿಧು. ಚಿನ್ಮಯಿ ನಿನಗೆ ಒಂದು ವಿಷಯವನ್ನು ಹೇಳಬೇಕು ಮನಸ್ಸನ್ನು ಗಟ್ಟಿ ಮಾಡಿಕೋ ಎಂದ ವಿಧು ಆಯ್ತು ಹೇಳಿ ಎಂದಾಗ ಚಿನ್ಮಯ್ ಆದಿತ್ಯನಿಗೆ ಅಪಘಾತವಾಗಿದೆ ಇವಾಗ ಆಸ್ಪತ್ರೆಯಲ್ಲಿದ್ದಾನೆ ಎಂದಾಗ ವಿಧುವಿಗೆ ದಿಗ್ಭ್ರಮೆಯಾಯಿತು. 10:00 ಗಂಟೆಯ ಸಮಯದಲ್ಲಿ ಮೂರು ಜನರು ಮಾತನಾಡುತ್ತಿದ್ದ ಶಬ್ದ ಕೇಳಿಸಿತು. ಇವಾಗ ನೋಡಿದರೆ ಹೀಗೆ ಹೇಳುತ್ತಿದ್ದಾನಲ್ಲ ಎಂದೆನಿಸಿತು. ವಿಧು ಯಾವಾಗ ಎಲ್ಲಿ ಆಗಿದ್ದು ಎಂದ. ಅದಕ್ಕೆ ಚಿನ್ಮಯಿ 10.30 ರ ಸಮಯದಲ್ಲಿ ಆಗಿದೆ ಇವಾಗ ಏನು ಸಮಸ್ಯೆ ಇಲ್ಲ ಎಂದ. ವಿಧು ತಕ್ಷಣ ಆಸ್ಪತ್ರೆಗೆ ಹೊರಡಲು ಅನುವಾದ. ಆದರೆ ನೀವು ಗಾಬರಿಯಾಗುವ ಅವಶ್ಯಕತೆ ಇಲ್ಲ ಈಗ ಅವನು ಚೆನ್ನಾಗಿದ್ದಾನೆ. ನೀವು ಬೆಳಿಗ್ಗೆ ಬಂದು ನೋಡಬಹುದು ಎಂದು ಹೇಳಿದ. ಆಯ್ತು ಸರಿ ಎಂದು ಮತ್ತೆ ಹೋಗಿ ಮಲಗಲು ಹೋದರೆ ವಿಧುವಿಗೆ ನಿದ್ರೆ ಬರುತ್ತಿಲ್ಲ. ಹಲವಾರು ಪ್ರಶ್ನೆಗಳು ಮನದಲ್ಲಿ ಸುಳಿದವು.
                  ಅಪಘಾತ ಹೇಗಾಯಿತು ? ಏಕಾಯಿತು ? ಮೂರೂ ಜನರು ಒಟ್ಟಿಗೆ ಇದ್ದರಲ್ಲ ? ಅಪಘಾತವಾದಾಗ ಇವರುಗಳು ಜೊತೆಗೆ ಇರಲಿಲ್ಲವೇ ? ಅಥವಾ ಅಪಘಾತವಾದ ಕೂಡಲೇ ಅವನನ್ನು ಬಿಟ್ಟು ಬಂದರ ? ಒಬ್ಬನೇ ಹೋಗಿ ಹೇಗೆ ಅಪಘಾತಕ್ಕೀಡಾದ ? ಆದಿತ್ಯನ ಸ್ನೇಹಿತರ ನಡೆಯನ್ನು ನೋಡಿದರೆ ಇವರ ಮೇಲೆ ಅನುಮಾನ ಬರುವಂತೆ ಮಾತನಾಡುತ್ತಿದ್ದಾನೆ ? ಇವಾಗಲೇ ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸಿದರೂ ಆದಿತ್ಯನ ಆತ್ಮೀಯ ಸ್ನೇಹಿತರು ಅವನೊಟ್ಟಿಗೆ ಇದ್ದಾರೆ. ಈವಾಗ ಚೆನ್ನಾಗಿದ್ದಾನೆ ಎಂದು ಹೇಳಿದ್ದಾರೆ ನೋಡೋಣ ಬೆಳಕು ಹರಿಯಲಿ ಎಂದುಕೊಳ್ಳುವಷ್ಟರಲ್ಲಿ ಸೂರ್ಯ ಪೂರ್ವ ದಿಕ್ಕಿನಿಂದ ತನ್ನ ಕರ್ತವ್ಯವನ್ನು ಆರಂಭಿಸಿದ್ದ. ಸ್ಥಳೀಯರಿಂದ ಅವನಿಗೆ ಅಪಘಾತವಾದ ಸ್ಥಳದ ಮಾಹಿತಿ ಪಡೆದು ಹೋಗಿ ನೋಡಿದರೆ, ವಿಧುವಿನ ಅಂದಾಜು ಮೀರಿತ್ತು. ಅವನಿಗೆ ಅಪಘಾತವಾದ ರೀತಿ ವಾತಾವರಣವನ್ನು ಕಲುಷಿತಗೊಳಿಸಿತ್ತು. ರಸ್ತೆಯ ಮೇಲೆ ರಕ್ತ ನೀರಿನಂತೆ ಚೆಲ್ಲಿತ್ತು. ಓಹೋ ಇದು ಸಣ್ಣ ಅಪಘಾತವಲ್ಲ ಇದೊಂದು ದೊಡ್ಡ ಅಪಘಾತ ಎಂಬ ಅರಿವೂ ಆಯಿತು. ವಿಧು ಮತ್ತೆ ತಡಮಾಡಲಿಲ್ಲ ಅಲ್ಲಿಂದ ಸೀದಾ ಆಸ್ಪತ್ರೆಗೆ ಹೋದ ಅಲ್ಲಿ ಆದಿತ್ಯ ಸ್ನೇಹಿತರಿದ್ದರು ಅವರನ್ನು ಕೇಳಿದ ಆದಿತ್ಯ ಎಲ್ಲಿ ಎಂದು. ಐಸಿಯು ಅಲ್ಲಿದ್ದಾನೆ ಎಂದರು. ಇದೇನಪ್ಪಾ ಇದು, ಇವರು ಬೆಳಿಗ್ಗೆ ನೋಡಿದರೆ ಚೆನ್ನಾಗಿದ್ದಾನೆ ಎಂದರು ಈಗ ನೋಡಿದರೆ ಐಸಿಯುನಲ್ಲಿ ಇದ್ದಾನೆ ಎಂದು ಹೇಳುತ್ತಿದ್ದಾರಲ್ಲ ಎಂದುಕೊಂಡ. ಅಷ್ಟರಲ್ಲಿ ವೈದ್ಯರು ಆದಿತ್ಯನ ಕಡೆಯವರು ಬನ್ನಿ ಎಂದು ಕರೆದರು ಆದಿತ್ಯನ ಸ್ನೇಹಿತರಿಬ್ಬರು ವಿಧು ನೀವೇ ಹೋಗಿ ಎಂದರು. ವಿಧು ಒಳಗೆ ಹೋದ. ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಆದಿತ್ಯನಿದ್ದ.....

Wednesday, November 11, 2020

ಪ್ರೇಮದ ಅನ್ವೇಷಣೆ ಭಾಗ - 20

ಇಬ್ಬರು ಸೇರಿ ಒಂದು ಸಂಜೆ ದೇವಸ್ಥಾನದ ಹತ್ತಿರ ಹೋದರು. ಪುರಾತನ ದೇವಸ್ಥಾನ ಜೀರ್ಣೋದ್ಧಾರದ ನಂತರ ತನ್ನ ಹಳೆಯ ಸೊಬಗನ್ನು ಕಳೆದುಕೊಂಡಿದೆ. ಆದರೆ ಪ್ರಕೃತಿಯ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲದು ಒಂದು ಕಡೆ ತುಂಗಾನದಿಯ ಭೋರ್ಗರೆತ ಮತ್ತೊಂದು ಕಡೆ ಶಾಂತಚಿತ್ತನಾಗಿ ಕುಳಿತುಕೊಂಡ ಬಸವ, ದೇವಸ್ಥಾನದ ಒಳಗಡೆ ಅದ್ಭುತವಾದ ಶಿವಲಿಂಗ, ದೇವಸ್ಥಾನಕ್ಕೆ ಬೀಗ ಹಾಕಿದರು ಕಿಂಡಿಯಿಂದ ದೇವರ ದರ್ಶನ ಪಡೆದು ಕತ್ತಲು ಕವಿಯುತ್ತಲೇ ವಾಪಸ್ ಮತ್ತೂರಿಗೆ ಬಂದರು. ಜಾನಕಿ ಅಮ್ಮನವರು ಹೆದರಿಸಿ ದಂತೆ ಅಲ್ಲಿ ಯಾವ ಅನುಭವವೂ ವಿಧುವಿಗೆ ಆಗಲಿ ಆದಿತ್ಯನಿಗೆ ಆಗಲಿ ಆಗಲಿಲ್ಲ. ಮತ್ತೆ ಮುಂಜಾನೆ ಬೇಗ ಎದ್ದು ತನ್ನ ಕೆಲಸಕ್ಕೆ ಹೋದ ವಿಧು ಮಧ್ಯಾಹ್ನದ ಸಮಯಕ್ಕೆ ಮತ್ತೂರಿಗೆ ವಾಪಸ್ಸಾದ, ಅಂದು ಆದಿತ್ಯ ಹೂರಗಡೆ ಊಟಕ್ಕೆ ಹೋಗೋಣ ಬನ್ನಿ ಎಂದು ಕರೆದ, ನಡೆಯಿರಿ ಯಾವುದಾದರೂ ಹೊಸರುಚಿಯನ್ನು ನೋಡೋಣವೆಂದು ಹೋಗಿ ಊಟ ಮುಗಿಸಿ ಬಂದರು. ಮಲೆನಾಡಿನ ವಿಶೇಷವಾದ ಉಂಡೆ ಗಡಬು ಆಗು ಚಟ್ನಿ ಅವರ ಊಟದ ಸ್ವಾದವನ್ನು ಇನ್ನು ಹೆಚ್ಚಿಗೆ ಮಾಡಿತ್ತು. ವಿಧು ಆದಿತ್ಯನ ಪರಿಚಯವಾಗಿ ಇನ್ನು ನಾಲ್ಕು ದಿನಗಳು ಕಳೆದಿದ್ದವು. ಅಷ್ಟರಲ್ಲಿ ಆದಿತ್ಯನ ಸ್ನೇಹಿತರು ಆಂಧ್ರದಿಂದ ಬಂದರು ಅವರನ್ನು ಶಿವಮೊಗ್ಗದಲ್ಲಿ ಬರಮಾಡಿಕೊಳ್ಳಲು ಆದಿತ್ಯನನ್ನು ವಿಧುವನ್ನು ಒಟ್ಟಿಗೆ ಕರೆದುಕೊಂಡು ಹೋದ, ಆತನ ಸ್ನೇಹಿತರನ್ನು ಪರಿಚಯ ಮಾಡಿಕೊಟ್ಟ , ಒಬ್ಬನ ಹೆಸರು ಚಿರಾಗ್ ಮತ್ತೊಬ್ಬನ ಹೆಸರು ಚಿನ್ಮಯ ಎಲ್ಲರೂ ಸೇರಿ ಕೊಡಚಾದ್ರಿಗೆ ಹೋಗಲು ಯೋಜನೆಯನ್ನು ರೂಪಿಸಿದರು. ಆ ಯೋಜನೆಯಿಂದ ವಿಧು ದೂರವುಳಿದಿದ್ದ ಅವನಿಗೆ ಅವನ ಕೆಲಸಗಳನ್ನು ಪೂರ್ಣಪ್ರಮಾಣದಲ್ಲಿ ಮುಗಿಸಲು ಸಮಯದ ಅಭಾವವಿತ್ತು. 
                    ಅಷ್ಟರಲ್ಲಿ ಸಾಗರ್ ವಿಧುವಿನ ಪರಿಚಯ ಸ್ನೇಹದ ಕಡೆ ತಿರುಗಿತು. ವಿಧು ತನ್ನ ಸ್ನೇಹಿತನಾದ ಸಾಗರ್ ಅವರೊಟ್ಟಿಗೆ ಸಂಜೆಯ ವಾಯು ವಿಹಾರಕ್ಕೆ ಇಲ್ಲಿ ಎಲ್ಲಿ ಹೋಗುವುದು ಉತ್ತಮ ಎಂದು ಕೇಳಿದಾಗ ಸಾಗರ್ ಇಂದು ಸಂಜೆ ಇಬ್ಬರು ಒಟ್ಟಿಗೆ ಹೋಗೋಣ, ನೀವು ಆ ಜಾಗವನ್ನು ಖಂಡಿತ ಇಷ್ಟಪಡುತ್ತೀರಾ ಎಂದು ಹೇಳಿದ. ಸಾಗರ್ ಹೇಳಿದ್ದನ್ನು ಕೇಳಿದ ವಿಧು ವಿಶೇಷ ಜಾಗವೇ ಇರಬೇಕು ಅನಿಸುತ್ತದೆ ನೋಡೋಣ ಎಂದು ಸುಮ್ಮನಾದ. ಸಂಜೆಯಾಗುತ್ತಲೇ ಸಾಗರ್ ವಿಧುವನ್ನು ಕರೆದುಕೊಂಡು ಮತ್ತೂರು-ಹೊಸಳ್ಳಿ ನಡುವೆ ಇರುವ ತುಂಗಾನದಿಯಲ್ಲಿ ನಿರ್ಮಿಸಿರುವ ಕಾಲು ಹೊಳೆಗೆ ಸಂಜೆಯ ವಿಹಾರಕ್ಕೆ ಕರೆದುಕೊಂಡು ಹೋದ. ತುಂಗಾನದಿಯಲ್ಲಿ ಇರುವ ಕಾಲು ಹೊಳೆಗೆ ಹೋದರು. ಪ್ರಕೃತಿಯ ಸೌಂದರ್ಯವನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ತುಂಗಾ ನದಿಯ ಎರಡು ತಟದಲ್ಲಿ ಇರುವ ಗ್ರಾಮಗಳು ಮತ್ತೂರು-ಹೊಸಳ್ಳಿ 2 ಗ್ರಾಮಗಳ ಸಂಪರ್ಕವೇ ಆ ಕಾಲು ಹೊಳೆ ಸೇತುವೆ . ಪ್ರಕೃತಿಯ ರಮಣೀಯ ದೃಶ್ಯ ಎಂಥವರನ್ನು ತನ್ನತ್ತ ಸೆಳೆಯಬಲ್ಲದು ಸಂಸ್ಕೃತ ಗ್ರಾಮ ಮತ್ತೂರು, ಹೊಸಳ್ಳಿ ಗಮಕ  ಗ್ರಾಮ ಸಂಸ್ಕೃತವೆಂದರೆ ಗ್ರಾಮದ ಜನರು ಸಂಸ್ಕೃತವನ್ನು ಮಾತನಾಡುತ್ತಾರೆ ಅಲ್ಲಿ ಸಣ್ಣವರಿಂದ ದೊಡ್ಡವರ ತನಕ ಸಂಸ್ಕೃತ ಸಂಭಾಷಣೆಯನ್ನು ಆಡುಭಾಷೆಯಾಗಿ ಬಳಸುತ್ತಾರೆ. ಗಮಕ ಗ್ರಾಮವೆಂದರೆ ಗಮಕ ಒಂದು ವಿಶಿಷ್ಟ ಪ್ರಕಾರದ ಕಲೆ ರಾಮಾಯಣ ಮಹಾಭಾರತವನ್ನು ಆ ಕಲೆಯ ಮುಖಾಂತರ ಮುಂದಿನ ಪೀಳಿಗೆಗೆ ತಿಳಿಸುವ ಒಂದು ಕ್ರಿಯೆ ಅಂತಹ ಗ್ರಾಮದಲ್ಲಿ ವಾಸಮಾಡುವುದು ಒಂದು ಚೈತನ್ಯವನ್ನು ಕೊಡುತ್ತದೆ. ಯಾವುದೇ ಊರಿಗೆ ಹೋದರೂ ಊರಿನ ವಿಶೇಷ ತಿಳಿಯುವುದು ವಿಧುವಿನ ಅಭ್ಯಾಸ ಮತ್ತೂರು ಹೇಗೆ ಅಸ್ತಿತ್ವಕ್ಕೆ ಬಂತು ಎಂದು ಅಲ್ಲಿಯ ಹಿರಿಯರನ್ನು ವಿಚಾರಿಸಿದಾಗ ಇನ್ನೂ ಹಲವು ವಿಚಾರಗಳು ತಿಳಿದು ಬಂದವು ಹಿಂದೆ ದಕ್ಷಿಣ ಭಾರತದಲ್ಲಿ ಇದ್ದ ಹಿಂದೂ ಸಾಮ್ರಾಜ್ಯ ವಿಜಯನಗರ ಕಾಲದಲ್ಲಿ ರಾಜರು ಬ್ರಾಹ್ಮಣರಿಗೆ ಮತ್ತೂರಿನ ಅಗ್ರಹಾರವನ್ನು ನೀಡಿದರು ಎಂದು ತಿಳಿದುಬಂತು. ಮತ್ತೂರಿನ ಇನ್ನೂ ಒಂದು ವಿಶೇಷವೆಂದರೆ ಅಲ್ಲಿ ಕರ್ನಾಟಕದ ತುಳುನಾಡಿನಲ್ಲಿರುವ ತುಳು ಭಾಷೆಯಂತಹ ಮತ್ತೊಂದು ಭಾಷೆ ಅಸ್ತಿತ್ವದಲ್ಲಿರುವುದು ತಿಳಿದು ಆಶ್ಚರ್ಯವಾಯಿತು. ಆ ಭಾಷೆಯೇ.......

Sunday, November 8, 2020

ಪ್ರೇಮದ ಅನ್ವೇಷಣೆ ಭಾಗ - 19


ಬಸ್ ನಿಲ್ದಾಣ ಹತ್ತಿರವಿರುವ ಬೀದಿಗೆ ಹೊರಟು ಒಂದು ಕಪ್ ಚಾ ಕುಡಿದು ಮತ್ತೆ ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಸರಿಯಾಗಿ 38 ನಿಮಿಷವಾಗಿತ್ತು. ಬಸ್ ನಿಲ್ದಾಣಕ್ಕೆ ಬರುವುದಕ್ಕೂ ಕೃಷ್ಣ ಅವರು ಬಂದರು. ವಿಧುವನ್ನು ಕರೆದುಕೊಂಡು ಹೊರಟರು. ಅವನಿಗೆ ಶಿವಮೊಗ್ಗ ಬಿಟ್ಟು ಬೇರೆ ಎಲ್ಲೋ ಹೋಗುತ್ತಿರುವಂತೆ ಎನಿಸಿತು. ನೇರ ವ್ಯಕ್ತಿತ್ವದ ಹುಡುಗ ಕೃಷ್ಣ ಅಣ್ಣಾವ್ರನ್ನು ಕೇಳಿಯೇಬಿಟ್ಟ ನಾವು ಎಲ್ಲಿಗೆ ಹೋಗುತ್ತಿರುವುದು ಎಂದು. ಅದಕ್ಕೆ ಅವರು ಹೇಳಿದರು ಮತ್ತೂರಿಗೆ. ವಿದು ಮನಸ್ಸಿನಲ್ಲಿ ಅಂದುಕೊಂಡ ಇವರು ಹೇಳುತ್ತಿರುವ ಮತ್ತೂರು ನಾನು ಹಿಂದೆ ಪತ್ರಿಕೆಯಲ್ಲಿ ಓದಿದ ಸಂಸ್ಕೃತ ಮಾತನಾಡುವ ಮತ್ತೂರು ಗ್ರಾಮ ಅಲ್ಲ ತಾನೇ ! ನೋಡೋಣ ಹೇಗಿದ್ದರೂ ಹೋಗುತ್ತಿದ್ದೇನೆ ಎಂದು ಅಂದುಕೊಂಡು ಸುಮ್ಮನಾದ. ಊರು ತಲುಪಿದ ಮೇಲೆ ಅವನಿಗೆ ಆಶ್ಚರ್ಯ ಕಾದಿತ್ತು ಅವನು ಅಂದುಕೊಂಡಂತೆ ಅದು  ಸಂಸ್ಕೃತ ಮಾತನಾಡುವ ಗ್ರಾಮ. ಭಾರತೀಯ ಸಂಸ್ಕೃತಿ ಭಾರತೀಯ ಪರಂಪರೆ ಮೇಲೆ ವಿಶೇಷ ಅಭಿಮಾನವಿದ್ದ  ವಿಧುವಿಗೆ ತುಂಬಾ ಖುಷಿಯಾಯಿತು. ಈ ಗ್ರಾಮಕ್ಕೆ ಒಂದು ಬಾರಿಯಾದರೂ ಭೇಟಿ ಕೊಡಬೇಕು ಅಂದುಕೊಂಡಿದ್ದ ವಿಧು ಇಂದು ಅದೇ ಗ್ರಾಮದಲ್ಲಿ ಇದ್ದಾನೆ. ಕೃಷ್ಣ ಅಣ್ಣನವರು ಅವನಿಗೆ ಅಲ್ಲಿ ಉಳಿಯಲು ವ್ಯವಸ್ಥೆ ಮಾಡಿದರು. ಅದು ನಾಲ್ಕು ರೂಮುಗಳು ಇರುವ ಒಂದು ಭವನ, ಸಂಸ್ಕೃತ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಅಲ್ಲಿ ಉಳಿಯಲು ವ್ಯವಸ್ಥೆ ಮಾಡುತ್ತಿದ್ದ ಜಾಗ, ಅಲ್ಲಿ ಉಳಿಯಲು ವ್ಯವಸ್ಥೆ ಮಾಡಿ ಕೆಲಸ ಮಾಡುತ್ತಿದ್ದ ಜಾನಕಿ ಅಮ್ಮನವರಿಗೆ ಊಟದ ವ್ಯವಸ್ಥೆ ಮಾಡುವಂತೆ ಹೇಳಿ ಬೆಳಿಗ್ಗೆ ಸಿಗುತ್ತೇನೆ ಎಂದು ಹೇಳಿ ಹೋದರು. ವಿಧು ಕೈಕಾಲು ಮುಖ ತೊಳೆದುಕೊಂಡು ಹೊರಬರುವಷ್ಟರಲ್ಲಿ ಜಾನಕಿಮ್ಮನವರು ಮನೆಗೆ ಹೋಗಿ ಊಟವನ್ನು ತಂದಿದ್ದರು. ಊಟವನ್ನು ತಂದು ಮುಂಭಾಗದಲ್ಲಿ ಇಟ್ಟು ನೋಡಪ್ಪ ಎರಡು ಊಟ ಇಟ್ಟಿದ್ದೇನೆ. ಒಂದು ನಿನಗೆ ಮತ್ತೊಂದು ಆದಿತ್ಯನಿಗೆ ಎಂದು ಹೇಳಿದರು. ಜಾನಕಿ ಅಮ್ಮನವರನ್ನು ಯಾರು ಆದಿತ್ಯ ಎಂದು ಕೇಳಿದ್ದಕ್ಕೆ ನಿನ್ನ ಮುಂದಿನ ರೂಂನಲ್ಲಿರುವ ಹುಡುಗನ ಆದಿತ್ಯ .ಅವನು ಬಾಗಿಲು ತೆರೆದು ಹೊರಗೆ ಬಂದಮೇಲೆ ಊಟವನ್ನು ಅವನಿಗೆ ಕೊಡು ಎಂದು ಹೇಳಿ ಹೋದರು. ಕೆಲವು ನಿಮಿಷಗಳನಂತರ ಆದಿತ್ಯ ಹೊರಗೆ ಬಂದನು.
                  ವಿಧು ಮತ್ತು ಆದಿತ್ಯ ಇಬ್ಬರೂ ಸಮಾನ ವಯಸ್ಕರಾಗಿದ್ದರಿಂದ ಇಬ್ಬರಿಗೂ ಇಂಗ್ಲೀಷ್ ಬರುತ್ತಿದ್ದರಿಂದ ಅವರ ಮಾತುಕತೆಗೆ ಸಮಸ್ಯೆ ಏನು ಆಗಲಿಲ್ಲ .ಒಬ್ಬರಿಗೊಬ್ಬರ ಪರಿಚಯ ಆಯಿತು. ಆದಿತ್ಯ ಸಂಸ್ಕೃತ ಕಲಿಯಲು ಮತ್ತೂರಿಗೆ ಆಂಧ್ರದ ವಿಜಯವಾಡದಿಂದ ಬಂದಿದ್ದವನಾಗಿದ್ದನು. ವಿಧು ತಾನು ಬಂದಿದ್ದ ಕೆಲಸದ ವಿಚಾರವನ್ನು ಹೇಳಿದನು. ವಿಧು ಕೃಷ್ಣ ಅಣ್ಣನವರ ಮಾರ್ಗದರ್ಶನದಂತೆ ಜನರಿಗೆ ರಾಷ್ಟ್ರೀಯತೆಯ ಬಗ್ಗೆ ತಿಳಿಹೇಳುವ ಕೆಲಸವನ್ನು ಆರಂಬಿಸಿದನು. ಅವನಿಗೆ ಹೊಸ ಹೊಸ ಜಾಗಗಳನ್ನು ಆವಿಷ್ಕಾರ ಮಾಡುವ ಹಾಗೂ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜಾಸ್ತಿ ಹಾಗಾಗಿ ಸ್ಥಳೀಯರೊಂದಿಗೆ ಕೆಲವು ಸ್ಥಳೀಯ ವಿಷಯಗಳನ್ನು ತಿಳುವ ಪ್ರಯತ್ನ ಮಾಡಿದನು. ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸುವ ವ್ಯಕ್ತಿತ್ವದ ವಿಧುವಿಗೆ ಸ್ಥಳೀಯವಾಗಿ ಒಬ್ಬ ವ್ಯಕ್ತಿಯ ಪರಿಚಯವಾಯಿತು. ಅವನ ಹೆಸರು ಸಾಗರ್ ವಿಧುವಿನ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ. ಮತ್ತೂರಿನ ಹತ್ತಿರದಲ್ಲೇ ಒಂದು ಪುರಾತನ ಶಿವನ ದೇವಾಲಯವಿದೆ ಎಂದು ಜನಕಿ ಅಮ್ಮ ಹಾಗೂ ಸಾಗರ್ ಇಂದ ತಿಳಿದ ಅವನಿಗೆ ಆ ದೇವಸ್ಥಾನವನ್ನು ನೋಡುವ ಬಯಕೆ. ಆದರೆ ಆ ದೇವಸ್ಥಾನಕ್ಕೆ ಸಂಜೆಯ ಮೇಲೆ ಯಾರೂ ಹೋಗುವುದಿಲ್ಲ ಅಲ್ಲಿ ದಿವ್ಯಜ್ಯೋತಿಯ ಸಂಚಾರವಿದೆ ಎಂದು ಜಾನಕಿ ಅಮ್ಮನವರು ಹೆದರಿಸುತ್ತಿದ್ದರು. ಹಾಗಾದರೆ ಆ ದೇವಸ್ಥಾನವನ್ನು ಸಂಜೆಯ ಸಮಯದಲ್ಲಿಯೇ ನೋಡಬೇಕು ಎಂದು ನಿಶ್ಚಯಿಸಿದ ವಿಧು ಅದರ ವಿಚಾರವಾಗಿ ಆದಿತ್ಯ ನೊಂದಿಗೆ ಚರ್ಚಿಸಿದನು. ಆದಿತ್ಯನು ಕೂಡ ಹುಚ್ಚುಸಾಹಸಗಳನ್ನು ಮಾಡಲು ಇಷ್ಟ ಪಡುವ ವ್ಯಕ್ತಿ. ಇಬ್ಬರು ಸೇರಿ ಒಂದು ಸಂಜೆ ದೇವಸ್ಥಾನದ ಹತ್ತಿರ......

Saturday, November 7, 2020

ಪ್ರೇಮದ ಅನ್ವೇಷಣೆ ಭಾಗ - 18

ಅಲ್ಲಿಂದ ಸಂಬಂಧಗಳ ಮೇಲಿನ ನಂಬಿಕೆಯು ಸಡಿಲವಾಗುತ್ತ ಹೋಯಿತು. ಗುರುಗಳಿಗೆ ಆದ ಅವಮಾನ ನನಗೆ ಆದಂತೆ ಎಂದು ತಿಳಿದು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಿ ಮತ್ತು ತರಗತಿಗೆ ಮೊದಲನೆಯವನಾಗಿ ಬಂದನು. ಎಲ್ಲರಿಗೂ ಉತ್ತರ ಎನ್ನುವಂತೆ ಕಾಲೇಜ್ ಬಿಡುವ ಸಮಯದಲ್ಲಿ ಗುರುವಿನ ಆಶೀರ್ವಾದದೊಂದಿಗೆ ಸಿ.ಇ.ಟಿ ಯಲ್ಲಿ ಉತ್ತಮ ಅಂಕಗಳಿಸಿ ಮೈಸೂರಿನಲ್ಲಿ ಇಂಜಿನಿಯರಿಂಗ್ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಸಫಲನಾದ, ಆದರೆ ಮತ್ತೆ ಜೀವನದಲ್ಲಿ ಯಾರ ಸಂಬಂಧವೂ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರಿಂದ ಮತ್ತೆ ಯಾರೊಟ್ಟಿಗೂ ಸ್ನೇಹವನ್ನು ಮಾಡಿಕೊಳ್ಳಲಿಲ್ಲ. ಎಲ್ಲರನ್ನೂ ಸಮನಾಗಿ ಕಾಣುವ ಅವನ ನಿರ್ಧಾರ ಅವನನ್ನು ಒಂಟಿಯಾಗಿ ನಿಲ್ಲಿಸಿತ್ತು. ಈ ಬಾರಿ ವಿಧುವಿನ ಮನಸ್ಸು ಇನ್ನೂ ಗಟ್ಟಿಯಾಗಿ ಕಲ್ಲಿನಂತೆ ಬಲಿಷ್ಠವಾಗಿ ಇರುವಂತೆ ಆಗಿತ್ತು. ಸಾಕು ಇನ್ನು ನನ್ನ ಹಣೇಬರದಲ್ಲಿ ಪ್ರೀತಿ ಸಿಗುವ ಹಾಗೆ ಬರೆದಿಲ್ಲ ಅನಿಸುತ್ತದೆ. ತಿಳುವಳಿಕೆ ಬಂದಾಗಿನಿಂದ ಮನೆಯವರ ಪ್ರೀತಿ ಕಾಣದ ಜೀವ ಹೊರಗಿನ ನಾಟಕೀಯ ಸ್ನೇಹವನ್ನು ನಿಜವಾದ ಕಾಳಜಿ ಹಾಗೂ ನಿಷ್ಕಲ್ಮಶವಾದ ಪ್ರೀತಿ ಎಂದು ತಿಳಿದ ಮೂರ್ಖತನಕ್ಕೆ ಬೇಸರವಾಯಿತು. ವಿಧು ಮತ್ತು ತನ್ನ ಬಗ್ಗೆ ತಾನೇ ಪ್ರಶ್ನೆ ಮಾಡಿಕೊಳ್ಳಲು ಆರಂಭಿಸಿದ, ಬದುಕನ್ನು ಸಮಾಜಕ್ಕೆ ಮೀಸಲಿಡುವ ತೀರ್ಮಾನ ಮಾಡಿರುವ ನನಗೆ ಏಕೆ ವ್ಯಕ್ತಿಗತ ಪ್ರೀತಿಯ ಅವಶ್ಯಕತೆ ಇದೆ ? ಎಂದು ಅವನಲ್ಲಿ ಅವನೇ ಕೇಳಿಕೊಂಡನು. ಇಲ್ಲ ಅದರ ಅವಶ್ಯಕತೆ , ಎಂದು ತನ್ನನ್ನೆ ತಾನು ಸಮಾಧಾನಪಡಿಸಿ ಕೊಂಡನು. ಇಂಜಿನಿಯರಿಂಗ್ ಓದುತ್ತಿರಬೇಕಾದರೆ ಸರ್ಕಾರಿ ಕೆಲಸದ ಜಾಹೀರಾತನ್ನು ನೋಡಿದ ಅವನು ಮನೆಯಲ್ಲಿನ ಹಂಗಿನ ಊಟಕ್ಕಿಂತ ದುಡಿಮೆಯ ಊಟವೇ ಮೇಲೆಂದು ಕೆಲಸಕ್ಕೆ ಅರ್ಜಿ ಹಾಕಿದ. ಅವನು ಅದೃಷ್ಟವೋ ಏನೋ ಎನ್ನುವಂತೆ ಅಲ್ಲಿ ಆಯ್ಕೆಯಾದ. ಆದರೆ ಭ್ರಷ್ಟಾಚಾರ ವಿರುದ್ಧದ ಹೋರಾಟ ಅವನನ್ನು ಕೆಲಸದಲ್ಲಿ ತುಂಬಾ ದಿನಗಳ ಕಾಲ ಉಳಿಯುವಂತೆ ಅವಕಾಶ ಮಾಡಿಕೊಡಲಿಲ್ಲ.
                ಕೆಲಸಕ್ಕೆ ರಾಜೀನಾಮೆ ನೀಡಿ ಅಲ್ಲಿಂದ ಹೊರನಡೆದ. ಇತ್ತ ಇಂಜಿನಿಯರಿಂಗ್ ಪೂರ್ಣಗೊಳಿಸದೆ ಅತ್ತ ಕೆಲಸವೂ ಇಲ್ಲದೆ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಂತಹ ಪರಿಸ್ಥಿತಿಯಲ್ಲೂ ತನ್ನ ಬದುಕಿನ ಶಿಸ್ತನ್ನು ಬಿಡದ ಅವನು ಮತ್ತೆ ಸಾಮಾಜಿಕ ಜೀವನದ ಕಡೆ ಮುಖ ಮಾಡಿದ. ಸಮಾಜಸೇವೆಯನ್ನು ಮಾಡಬೇಕು ಎಂದು ಸಮಾಜದಲ್ಲಿ ಹಲವಾರು ಸೇವಾಕಾರ್ಯವನ್ನು ಮಾಡಿಕೊಂಡ ಬಂದಿದ್ದರಿಂದ ಅವನಿಗೆ ಸಾಮಾಜಿಕ ಜನಮನ್ನಣೆ ಇತ್ತು. ಇದರ ಮಧ್ಯೆ ಇಂಜಿನಿಯರಿಂಗ್ ಮಾಡುವಾಗ ಆಕಸ್ಮಿಕವಾಗಿ ಸಂಪರ್ಕಕ್ಕೆ ಬಂದ ರಾಷ್ಟ್ರೀಯ ವಿಚಾರಗಳಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ. ಇದರ ಮಧ್ಯೆ ಅವನಿಗೆ ಒಂದು ಕರೆಬಂತು ಅದು ರಾಜ್ಯನಾಯಕರ ಕರೆಯಾಗಿತ್ತು. ನಿಮ್ಮಂತಹ ಯುವಕರು ನಮ್ಮ ರಾಷ್ಟ್ರಕ್ಕೆ ಅವಶ್ಯಕತೆಯಿದೆ. ರಾಷ್ಟ್ರೀಯವಾದ ವಿಚಾರಗಳನ್ನು ಮನೆಮನೆಗೆ ತಲುಪಿಸಲು ನಿಮ್ಮ ಅವಶ್ಯಕತೆ ಇದೆ ಬನ್ನಿ ಎಂದು ಕರೆದರು. ವಿಧು ಸಂತೋಷದಿಂದ ಒಪ್ಪಿದ. ಬದುಕನ್ನು ಇನ್ನು ಸಾರ್ವಜನಿಕ ಜೀವನಕ್ಕೆ ಮೀಸಲಿಡಬೇಕೆಂದು ನಿರ್ಧರಿಸಿ ಪ್ರಯಾಣಿಸುತ್ತಿದ್ದ ವಿಧು, ಬದುಕಿನ ಪುಟವನ್ನು ತಿರುವಿ ಹಾಕಿ ಇನ್ನೇನು ನಿದ್ರೆಯ ಮಂಪರಿನಿಂದ ಸಂಪೂರ್ಣವಾಗಿ ನಿದ್ರೆಗೆ ಜಾರಬೇಕು ಅಷ್ಟರಲ್ಲೇ ಯಾರೋ ಶಿವಮೊಗ್ಗ ಬಂತು ಬನ್ನಿ ಎಂದು ಕರೆದಂತೆ ಭಾಸವಾಯಿತು. ಯಾರು ಎಂದು ನೋಡಿದರೆ ಬಸ್ ಕಂಡಕ್ಟರ್ ಕೊನೆಯ ನಿಲ್ದಾಣ ಎಲ್ಲರೂ ಇಳಿಯಲು ಬನ್ನಿ ಎಂದು ಕೂಗುತ್ತಿದ್ದರು. ಮಂಪರು ನಿದ್ರೆಯಿಂದ ಎದ್ದ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಶಿವಮೊಗ್ಗದ ಬಸ್ಟ್ಯಾಂಡಿನಲ್ಲಿ ಬಸ್ ನಿಂತಿತ್ತು. ವಿಧುವನ್ನು ಶಿವಮೊಗ್ಗಕ್ಕೆ ಕಳುಹಿಸಿ ಕೊಟ್ಟ ವರ ಫೋನ್ ನಂಬರ್ ಗೆ ಕರೆ ಮಾಡಿದ ಅವರು ಒಂದು ನಂಬರ್ ಕೊಟ್ಟರು ಆ ನಂಬರ್ಗೆ ಕರೆ ಮಾಡಿದಾಗ ಆ ಕಡೆಯಿಂದ ಹೇಳಿ ನಾನು ಕೃಷ್ಣ ಮಾತನಾಡುತ್ತಿರುವುದು ನಿಮ್ಮ ಬಗ್ಗೆ ನಾರಾಯಣ್ ಅವರು ಎಲ್ಲ ಹೇಳಿದ್ದಾರೆ ಇನ್ನು 20 ನಿಮಿಷ ಕಾಯಿರಿ ನಾನು ನಿಮ್ಮನ್ನು ಕರೆದೊಯ್ಯುತ್ತೇನೆ ಎಂದು ಹೇಳಿದರು. ಇನ್ನು 20 ನಿಮಿಷ ಹೇಗಿದ್ದರೂ ಅವರು ಬರುವುದಿಲ್ಲ ನೋಡೋಣ ಇಲ್ಲಿನ ಜನರು ಹೇಗೆ ಎಂಬ ಕುತೂಹಲದಿಂದ ಸುಮ್ಮನೆ ಒಂದು ಬಸ್ ನಿಲ್ದಾಣ ಹತ್ತಿರವಿರುವ ಬೀದಿಗೆ ಹೋರಾಟ.......

Monday, October 19, 2020

ನಿಷ್ಕಲ್ಮಶ ಸ್ನೇಹ ಹೇಗಿರಬೇಕು ?


ಸ್ನೇಹ ಜಗತ್ತಿನ ಅದ್ಭುತವಾದ ಸಂಬಂಧ ಅಲ್ಲಿ ಯಾವ ಅಳತೆಗಳು ಇರುವುದಿಲ್ಲ .ಕುಚೇಷ್ಟೆಯಿಂದ ಹಿಡಿದು ಪ್ರೀತಿ ,ಮಮತೆ ,ವಿಶ್ವಾಸ ಎಲ್ಲ ಇರುತ್ತದೆ .ಅದು ನಿಷ್ಕಲ್ಮಶ, ಎಲ್ಲಾ ಸಂಬಂಧಗಳಿಗೆ ಮೀರಿದ ಬಂದವದು. ಸ್ನೇಹ ಪ್ರತಿಯೊಂದು ಜೀವಿಗೆ ಬದುಕಿನಲ್ಲಿ ಅವಶ್ಯವಾಗಿ ಬೇಕಾಗಿರುವ ಅನುಭೂತಿ, ಅನುಬಂಧ. ಅಂತಹ ಸ್ನೇಹಕ್ಕೆ ಬೆಲೆ ಕಟ್ಟಲಾಗದು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ಸಂಬಂಧಗಳು ಜಾಗತೀಕರಣದ ಪ್ರಭಾವದಿಂದ ತಮ್ಮ ಸಂಬಂಧದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದವೆ. ಅದರೊಳಗೆ ಸ್ನೇಹ ಸೇರಿರುವುದು ಇಂದಿನ ಸಮಾಜದ ದುರಂತ. ಇಂದಿನ ದಿನಮಾನದಲ್ಲಿ ಸಂಬಂಧಗಳು ಲಾಭದ ಆಧಾರದಲ್ಲಿ ನಡೆಯುತ್ತಿರುವುದರಿಂದ ನಿಷ್ಕಲ್ಮಶ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಕೃತಕತೆ ಸತ್ಯವಾಗಿ ಕಾಣುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದರೊಳಗೆ ನಾವು ಉತ್ತಮ ಸ್ನೇಹಿತರನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದರ ಬಗ್ಗೆ ನೋಡೋಣ. ಉತ್ತಮ ಸ್ನೇಹಿತರನ್ನು ತಿಳಿಯುವ ಮೊದಲು ನಾವು ಉತ್ತಮ ಸ್ನೇಹಿತರಾಗಿದೇವ ಎಂಬುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು. ಉತ್ತಮ ಸ್ನೇಹವೆಂದರೆ ಏನು ಎಂಬ ಪ್ರಶ್ನೆ ಕಾಡುವುದು ಸಹಜ. ಬದುಕಿನಲ್ಲಿ ಹಲವಾರು ಜನರು ಬರುತ್ತಾರೆ. ಕೆಲವರು ವರವಾಗಿ ಬಂದರೆ ಕೆಲವರು ಶಾಪವಾಗಿ ಬರುತ್ತಾರೆ .ಕೆಲವರು ನಿಮ್ಮ ಸತ್ವವನ್ನೇ ಹೀರಿದರೆ ಮತ್ತೆ ಕೆಲವರು ನಿಮ್ಮ ಅಂತರಂಗದ ಶಕ್ತಿಯನ್ನು ಪ್ರಚೋದಿಸುತ್ತಾರೆ.
                  ನಾವು ಇಲ್ಲಿ ಹುಡುಕ ಬೇಕಾಗಿರುವುದು ನಿಜ ಸ್ನೇಹಿತರನ್ನು ,ನಿಜ ಸ್ನೇಹಿತರು ಎಂದರೆ ಯಾರು ಎಂಬ ಪ್ರಶ್ನೆ ಕಾಡುವುದು ಸಹಜ. ನಮ್ಮ ಜೊತೆ ಊಟ ಮಾಡಿ ಹರಟೆ ಹೊಡೆದವರೆಲ್ಲ ಹಾಗೂ ನಮ್ಮ ಜೊತೆ ಸುತ್ತುವವರೆಲ್ಲ ನಿಜ ಸ್ನೇಹಿತರಾಗಲು ಸಾಧ್ಯವಿಲ್ಲ. ನಿಜ ಸ್ನೇಹದಲ್ಲಿ ಸ್ನೇಹಿತನ ಏಳಿಗೆಯನ್ನು ಪ್ರಚೋದಿಸುವಂತ ಶಕ್ತಿ ಇರಬೇಕು. ಅವನ ಅಂತರಂಗದ ಶಕ್ತಿಯನ್ನು ತಿಳಿದು ಅವನ ಉನ್ನತಿಗೆ ಸಹಕಾರ ಕೊಡುವ ಮನೋಭಾವವಿರಬೇಕು. ಅದು ಬಿಟ್ಟು ಅವನ ಮುಂದೆ ನಯವಾಗಿ ಮಾತನಾಡಿ ಅವನ ಬೆನ್ನ ಹಿಂದೆ ಮಾತನಾಡುವ ಚಾಳಿ ಇರಬಾರದು, ಬೇರೆಯವರ ಮುಂದೆ ತಾವು ಒಳ್ಳೆಯವರಾಗಲು ಅವರು ಕೆಟ್ಟವರಂತೆ ಚಿತ್ರಿಸಬಾರದು. ಸ್ನೇಹದ ಏಳಿಗೆಯನ್ನು ಸಹಿಸದೆ ಹಿತ ಶತ್ರುವಿನ ರೀತಿ ಇರಬಾರದು. ಅಂತಹ ಸಂಬಂಧಗಳು ಸುದೀರ್ಘಕಾಲ ಬಾರದಂತೆ ಮುರಿದು ಬೀಳುತ್ತವೆ.
                 ಸ್ನೇಹವೆಂಬುದು ಒಂದು ಮಧುರ ಸಂಬಂಧ. ಅದನ್ನು ನಾವು ಪುರಾಣ ಕಾಲದಿಂದಲೂ ನೋಡಿಕೊಂಡು ಬಂದಿದ್ದೇವೆ. ಅದಕ್ಕೆ ಉತ್ತಮ ಉದಾಹರಣೆ ಕೃಷ್ಣ ಕುಚೇಲನ ಸ್ನೇಹ. ಕೃಷ್ಣ ರಾಜಪರಂಪರೆಯಲ್ಲಿ ಬಂದಿದ್ದರು . ಆತನ ಬಡ ಸ್ನೇಹಿತನನ್ನು ಮರೆಯಲಿಲ್ಲ ಅದು ಶ್ರೇಷ್ಠ ಸ್ನೇಹ. ಸ್ವಾರ್ಥ ಸ್ನೇಹಕ್ಕೆ ಉತ್ತಮ ಉದಾಹರಣೆ ದುರ್ಯೋಧನ ಹಾಗೂ ಕರ್ಣನ ಸ್ನೇಹ. ಅದು ಲಾಭಕ್ಕಾಗಿ ಆದ ಸ್ನೇಹ ಹಾಗಾಗಿ ಕರ್ಣ ಧರ್ಮ ಮಾರ್ಗದಲ್ಲಿ ನಡೆದರು ಅವನ ಸಾವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಮತ್ತು ಮುಂದುವರೆದು ಹೇಳುವುದಾದರೆ ದ್ರುಪದ ಹಾಗೂ ದ್ರೋಣಾಚಾರ್ಯರ ಸ್ನೇಹ. ಅವರಿಬ್ಬರೂ ಸಹಪಾಠಿಗಳು ಒಂದೇ ಗುರುಕುಲದಲ್ಲಿ ಬೆಳೆದವರು. ಸ್ನೇಹಕ್ಕೆ ಬೆಲೆ ಕೊಡದ ದ್ರುಪದ ತನ್ನ ಅಧಿಕಾರದ ಅಹಂನಿಂದ ಸಹಾಯ ಕೇಳಿಬಂದ ದ್ರೋಣಾಚಾರ್ಯರನ್ನು ಅವಮಾನಿಸಿದ ಅದರ ಪ್ರತಿಫಲವೇ ದ್ರೋಣಾಚಾರ್ಯರ ಕ್ಷಮೆ ಕೇಳುವಂತಹ ಸಂದರ್ಭ ಒದಗಿ ಬಂತು.  ಐತಿಹಾಸಿಕ ಕಥೆಗಳಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಸ್ನೇಹವಿದ್ದರೆ ಕೃಷ್ಣ ಕುಚೇಲನಂತೆ ಇರಬೇಕು. ಅದು ನಿಷ್ಕಲ್ಮಶ ಸ್ವಾರ್ಥದ ಸ್ನೇಹ ವಾಗಲಿ ,ಲಾಭದ ಸ್ನೇಹವಾಗಲಿ ಬಹಳ ಕಾಲ ಉಳಿಯುವುದಿಲ್ಲ .ಕಾಲಕಳೆದಂತೆ ಸ್ವಾರ್ಥದ ಲಾಭದ ಸ್ನೇಹಗಳು ಅಳಿಯುತ್ತವೆ .ಆದರೆ ನಿಜ ಸ್ನೇಹ ಶಾಶ್ವತವಾಗಿ ಉಳಿಯುತ್ತದೆ .ಸ್ನೇಹದಲ್ಲಿ ಅಪೇಕ್ಷೆಯು ಇರಬಾರದು. ಅಪೇಕ್ಷೆಯೂ ಸ್ನೇಹವನ್ನು ಮಾತ್ರವಲ್ಲ ಎಲ್ಲಾ ಸಂಬಂಧಗಳನ್ನು ಹಾಳು ಮಾಡಿಬಿಡುತ್ತದೆ. ಎಲ್ಲ ಸಂಬಂಧಗಳ ಜೀವಾಳ ನಂಬಿಕೆ. ನಂಬಿಕೆ ಕಳೆದುಹೋಗದಂತೆ ನಡೆದುಕೊಂಡರೆ ಸ್ನೇಹವು ಸುದೀರ್ಘವಾಗಿ ಉಳಿಯುತ್ತದೆ. ನಂಬಿಕೆ ಕಳೆದುಕೊಂಡ ಸಂಬಂಧಗಳು ಉಳಿಯುವುದು ಅಸಾಧ್ಯ .ಯಾವುದೇ ಸಂಬಂಧ ಉಳಿಯಬೇಕಾದರೆ ಎರಡು ಕಡೆಯ ಪ್ರಯತ್ನದಿಂದ ಮಾತ್ರ ಸಾಧ್ಯ .ಯಾವುದೇ ಸಂಬಂಧಗಳನ್ನು ಒತ್ತಾಯಪೂರ್ವಕವಾಗಿ ಉಳಿಸಿಕೊಳ್ಳುವಂತ ಕೆಲಸ ಮಾಡಬಾರದು. ನಂಬಿಕೆ ಇಲ್ಲದ ಮೇಲೆ ಅವು ಕೃತಕ ಸಂಬಂಧಗಳ ಆಗಿಬಿಡುತ್ತವೆ. ಕೃತಕತೆಯ ಬದುಕು ಮನಸ್ಸಿಗೆ ಮುದ ನೀಡಲು ಸಾಧ್ಯವಿಲ್ಲ . ಆ ಸಂಬಂಧಗಳು ಇದ್ದೂ ಇಲ್ಲದಂತೆ ಇರುತ್ತವೆ. ಇದ್ದು ಇಲ್ಲದಿರುವುದಕ್ಕಿಂತ ಇಲ್ಲದಿರುವುದೇ ಉತ್ತಮ. ಉತ್ತಮ ಸ್ನೇಹಿತರನ್ನು ಕಳೆದುಕೊಂಡರೆ ವಜ್ರವನ್ನು ಎಸೆದ ಕಲ್ಲನ್ನು ಎತ್ತಿ ಕೊಂಡಂತೆ. ಕೃತಕ ಸ್ನೇಹ ಉಳಿಯುವುದಿಲ್ಲ .ನಿಜ ಸ್ನೇಹ ಅಳಿಯುವುದಿಲ್ಲ....

Sunday, October 11, 2020

ಪ್ರೇಮದ ಅನ್ವೇಷಣೆ ಭಾಗ-17


ಹೇಗಿದ್ದರೂ ಕುಶಾಲ್ ನಿಂದ ದೂರಸರಿಯಲು ನಿಶ್ಚಯಿಸಿದ್ದ ವಿಧುವಿಗೆ ಇದು ಒಂದು ರೀತಿಯ ಅನುಕೂಲವೇ ಆಯಿತು. ಇನ್ನು ಅಂತರವನ್ನು ಕಾಯ್ದುಕೊಳ್ಳಲು ಸುಲಭವಾಯಿತು. ವಿಧು ಎರಡನೆಯ ಬಾರಿಯೂ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಕುಶಾಲ್ಗೆ ತಡೆಯಲಾಗಲಿಲ್ಲ ಹೇಗಾದರೂ ಮಾಡಿ ಪ್ರಥಮಸ್ಥಾನ ಗಳಿಸಿದಂತೆ ತಡೆಯಬೇಕು ಎಂದು ನಿಶ್ಚಯಿಸಿ ನೇರವಾಗಿ ಎದುರಿಸಲು ಸಾಧ್ಯವಾಗದೆ ಕುಶಾಲ್ ವಿಧುವಿಗೆ ಯಾವುದೇ ರೀತಿಯ ಶೈಕ್ಷಣಿಕ ನೆರವು ಸಿಗದಂತೆ ಮಾಡಬೇಕು ಎಂದು ಯೋಚಿಸಿ ತನ್ನ ಸಹಪಾಠಿಗಳಿಗೆ ಯಾವುದೇ ಕಾರಣಕ್ಕೂ ಅವನಿಗೆ ಗೊತ್ತಿಲ್ಲದ್ದನ್ನು ಹೇಳಿ ಕೊಡಬೇಡಿ ಎಂದು ತಾಕೀತು ಮಾಡುತ್ತಿದ್ದ ಅವನ ಸಹಪಾಠಿಗಳು ಕುಶಾಲ್ ನ ಅರಿವಿಗೆಬಾರದೆ ಹೇಳಿಕೊಡುತ್ತಿದ್ದರು. ಅದನ್ನು ತಿಳಿದ ಕುಶಾಲ್ ವಿಧುವಿನ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಹೇಳಿ ಅವನ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದ .ಆ ವಿಚಾರವಾಗಿ ಕೆಲವು ಸಹಪಾಠಿಗಳು ವಿಧುವಿನ ಹತ್ತಿರ ಚರ್ಚೆ ಮಾಡುತ್ತಿದ್ದರು. ವಿಧುವಿಗೆ ಗೊತ್ತಿಲ್ಲದ ಪಾಠದ ವಿಷಯಗಳನ್ನು ಹೇಳಿ ಕೊಡಲು ಹಿಂದೇಟು ಹಾಕುವಂತೆ ಮಾಡಿದ. ಆಗ ಅವನ ನೆರವಿಗೆ ಬಂದಿದೆ ಅವನ ಗುರುಗಳು. ಗುರುಗಳ ಬಳಿ ತನ್ನ ಸಮಸ್ಯೆಗಳನ್ನು ಹೇಳಿಕೊಂಡು ಯಾರು ನನಗೆ ಪಠ್ಯಪುಸ್ತಕದ ವಿಚಾರಗಳನ್ನು ಹೇಳಿಕೊಡುತ್ತಿಲ್ಲ ಸರ್ .ನಿಮ್ಮ ಸಹಾಯ ಬೇಕು ಎಂದಾಗ ಅವನು ಗುರುಗಳು ದಿನದ 24 ಗಂಟೆಗಳು ನಮ್ಮ ಮನೆಯ ಬಾಗಿಲು ತೆರೆದಿರುತ್ತದೆ ಎಂದು ಹೇಳಿ ಆತ್ಮಸ್ಥೈರ್ಯವನ್ನು ತುಂಬಿ ಕಳುಹಿಸಿದರು. ಹರ ಮುನಿದರೂ ಗುರು ಕಾಯುವನು ಎಂಬ ನಾಡು-ನುಡಿ ಅವನ ವಿಷಯದಲ್ಲಿ ಸತ್ಯವಾಯಿತು. ಸರ್ವ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುತ್ತಿದ್ದ ಗುರುಗಳಿಗೆ ಕುಶಾಲ್ ಅವಮಾನ ಮಾಡಿಬಿಟ್ಟ. ವಿದು ಗುರುವಿಗೆ ಪ್ರಿಯವಾದ ಶಿಷ್ಯ ಹಾಗಾಗಿ ಇವನಿಗೆ ಹೆಚ್ಚಿನ ಅಂಕಗಳನ್ನು ಕೊಡುತ್ತಾರೆಂದು ತರಗತಿಯ ಸಹಪಾಠಿಗಳನ್ನು ಗುರುಗಳ ವಿರುದ್ದ ಎತ್ತಿಕಟ್ಟಿ ಬಿಟ್ಟ. 
           ಕುಶಾಲ್ ನ ನಿಜಮುಖ ಗೋಚರಿಸಿದ್ದು ತರಗತಿಯಲ್ಲಿ. ವಿಧುವಿಗೆ ಹೆಚ್ಚಿನ ಅಂಕವನ್ನು ನೀವು ಕೊಡುತ್ತಿದ್ದೀರಾ ಎಂದು ತರಗತಿಯಲ್ಲಿ ಗುರುಗಳ ವಿರುದ್ಧದ ಆರೋಪವನ್ನು ಮಾಡಿದ ಗುರುಗಳು ಪುಸ್ತಕ ಮುಟ್ಟಿ ಪ್ರಮಾಣ ಮಾಡುವಂತಹ ಪರಿಸ್ಥಿತಿಗೆ ತಂದು ಬಿಟ್ಟ. ಇಂತಹ ಆರೋಪ ನಿರೀಕ್ಷಿಸದ ಗುರುಗಳು ಮನಸ್ಸಿನಲ್ಲಿ ನೊಂದುಕೊಂಡು ನೋವುಂಡು ತರಗತಿಯಲ್ಲಿ ಪುಸ್ತಕವನ್ನು ಹಿಡಿದು ಪ್ರಮಾಣ ಮಾಡಿಬಿಟ್ಟರು. ಯಾವುದೇ ಕಾರಣಕ್ಕೂ ವಿಧುವಿಗೆ ನಾನು ಹೆಚ್ಚು ಅಂಕಗಳನ್ನು ನೀಡಿಲ್ಲ ಅವನು ಸ್ವಂತ ಶಕ್ತಿಯನ್ನು ಅನುಸಾರ ಅಂಕಗಳನ್ನು ಪಡೆಯುತ್ತಿದ್ದಾನೆ. ಅದರಲ್ಲಿ ನನ್ನ ಪಾತ್ರವಿಲ್ಲ ಎಂದು ತರಗತಿಯಲ್ಲಿ ವಿದ್ಯಾರ್ಥಿಗಳ ಎದುರಿಗೆ ಪ್ರಮಾಣ ಮಾಡಿಬಿಟ್ಟರು. ಬದುಕಿನಲ್ಲಿ ಗಟ್ಟಿತನವನ್ನು ರೂಡಿಸಿಕೊಂಡಿದ್ದ ವಿಧುವಿನ ಕಣ್ಣಿನ ಅಂಚಿನಲ್ಲಿ ನೀರು ಜಿನುಗಿತು. ಅವನ ಮನಸ್ಸಿನಲ್ಲಿ ಆ ಚಿತ್ರಣ ಅಚ್ಚಳಿಯದೇ ಉಳಿಯಿತು. 
                    ನನ್ನ ಮೇಲೆ ಇದ್ದ ದ್ವೇಷ ಗುರುಗಳ ಮೇಲೆ ತೀರಿಸಿ ಬಿಟ್ಟನಲ್ಲ ಎಂದು ಮನಸ್ಸಿನಲ್ಲೇ ಕೊರಗಿದನು. ಗುರುಗಳು ಪುಸ್ತಕ ಮುಟ್ಟಿ ಪ್ರಮಾಣಿಸುವ ಅಂತಾಯಿತಲ್ಲ ಎಂದು ದುಃಖಿಸಿದನು. ಕುಶಾಲ್ ಗೆ ವಿಧುವಿನ ಮೇಲೆ ಇದ್ದ ದ್ವೇಷಭಾವನೆ ಹೊರಜಗತ್ತಿಗೆ ಪ್ರಕಟಗೊಂಡಿತು. ಅಲ್ಲಿಗೆ ಕುಶಾಲ್ನ ನಾಟಕೀಯತೆ ಪೂರ್ಣಪ್ರಮಾಣದಲ್ಲಿ ತಿಳಿಯಿತು.  ಕುಶಾಲ್ ನ ಸ್ವಾರ್ಥ ಹಿತದ ಸ್ನೇಹ ತಿಳಿದು ವಿಧು ಸ್ನೇಹವನ್ನು ಅಂತ್ಯಗೊಳಿಸಿದನು. ಅಲ್ಲಿಗೆ ಕುಶಾಲ್ ಮೇಲೆ ಇದ್ದ ನಿಷ್ಕಲ್ಮಶವಾದ ಸ್ನೇಹ ಪ್ರೀತಿ ವಿಶ್ವಾಸ ಕಳೆದುಹೋಯಿತು. ವಿಧುವಿಗೆ ಸತ್ಯದ ಅರಿವಾಯಿತು. ಮನೆಯಲ್ಲಿ ಸಿಗದ ಪ್ರೀತಿ ವಿಶ್ವಾಸ ಸ್ನೇಹಿತನಲ್ಲಿ ಸಿಕ್ಕಿದೆ ಎಂದು ಅಂದುಕೊಂಡಿದ್ದ ವಿಧುವಿಗೆ ಸ್ನೇಹದ ಹೆಸರಿನಲ್ಲಿ ಮೋಸ ಹೋಗಿದ್ದ ಅವನಿಗೆ ಅವನ ಬಗ್ಗೆ ಜಿಗುಪ್ಸೆಯಾಯಿತು. ಲಾಭಕ್ಕಾಗಿ ಅನುಕೂಲತೆಗಾಗಿ ನೋಡಿ ಸಂಬಂಧಗಳನ್ನು ಬೆಳೆಸುತ್ತಾರೆ ಎಂಬುದನ್ನು ಮನಗಂಡನು. ನಿಜವಾದ ಸಂಬಂಧಗಳಿಗೆ ಬೆಲೆ ಇಲ್ಲ ಎಂಬ ಸತ್ಯದ ಅರಿವಾಯಿತು. ಸಂಬಂಧವೆಂಬುದು ಅನಿವಾರ್ಯತೆ , ಅವಶ್ಯಕತೆ ಮೇಲೆ ಮಾಡುವುದು ಎಂಬ ಸತ್ಯವನ್ನು ತಿಳಿದುಕೊಂಡನು. ಅಲ್ಲಿಂದ ಸಂಬಂಧಗಳ ಮೇಲಿನ......

Friday, October 9, 2020

ಹಿಂದುತ್ವದ ರಾಯಭಾರಿಗಳು ಯಾರು ?


ಹಿಂದುತ್ವ ಜಗತ್ತಿಗೆ ಪ್ರಕೃತಿಯೊಂದಿಗೆ ಬದುಕುವ ಪಾಠವನ್ನು ಹೇಳಿಕೊಟ್ಟ ಧರ್ಮ. ಅದು ಸನಾತನ ಹಿಂದುತ್ವ ಎಂಬ ಪದವೆ ಒಂದು ರೋಮಾಂಚನ ತನ್ನ ಸನಾತನ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ವಿಶ್ವದಲ್ಲೆಡೆ ಪಸರಿಸಿ ಭಾರತದ ಮಣ್ಣಿನ ಪರಂಪರೆಯನ್ನು ವಿಶ್ವಕ್ಕೆ ತಿಳಿಸಿದ ಧರ್ಮ. ಹಿಂದುತ್ವ ಪದದ ಮೂಲವನ್ನು ಹುಡುಕುತ್ತಾ ಹೊರಟರೆ ನಮಗೆ ಸಿಗುವುದು ಸಿಂಧೂ ನಾಗರಿಕತೆ, ಆ ನಾಗರಿಕತೆಯ ಫಲವೇ ಅನ್ಯ ಖಂಡಗಳ ಜನರು ಭಾರತದ ಭೂಭಾಗವನ್ನು ಸಿಂಧೂ ನಾಗರಿಕತೆಯ ನಾಡು ಎಂದು ಕರೆದದ್ದು. ಅದು ಕಾಲಕ್ರಮೇಣ ಜನಗಳ ಉಚ್ಚಾರ ಸ್ಥಿತಿಯಲ್ಲಿ ಹಿಂದೂ ಆಯಿತು. ಹಿಂದೂ ಧರ್ಮಕ್ಕೆ ಆದಿಯಾಗಲಿ ಅಂತ್ಯವಾಗಲಿ ಇಲ್ಲ ಅದು ಸನಾತನ. ಸನಾತನ ಎಂದರೆ  ಅಂತ್ಯವಿಲ್ಲದ್ದು ಎಂದು ಅರ್ಥ. ಹಿಂದೂ ಪದ ಹುಟ್ಟುವುದಕ್ಕಿಂತ ಮೊದಲೇ ನಮ್ಮ ಇಂದಿನ ದಿನಮಾನದಲ್ಲಿ ಕರೆಯುವ ಹಿಂದೂ ಸಂಪ್ರದಾಯದ ರೀತಿ-ರಿವಾಜುಗಳು ಅಸ್ತಿತ್ವದಲ್ಲಿದ್ದವು.
            ಹಿಂದೂ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ. ಅದನ್ನು ಸನಾತನ ಎಂದು ಕೂಡ ಕರೆಯಬಹುದು.  ಅದು ಯಾರಿಂದಲೂ ಸ್ಥಾಪಿತವಾದ ಅಥವಾ ಯಾರದೋ ಮಾರ್ಗದರ್ಶನದಲ್ಲಿ ಮೂಡಿಬಂದ ಸಂಸ್ಕಾರ ಸಂಸ್ಕೃತಿ ಪರಂಪರೆಯಲ್ಲ .ಅದು ಪ್ರಾಕೃತಿಕವಾಗಿ ಪ್ರಕೃತಿಯೊಂದಿಗೆ ಹೊಂದಿಕೊಂಡು ಹೋಗುವ ಒಂದು ಜೀವನ ವಿಧಾನ. ಆ ಜೀವನ ವಿಧಾನ ಸಹಬಾಳ್ವೆ, ಸಮೃದ್ಧಿ ಹಾಗೂ ಶಾಂತಿಯನ್ನು ಬದುಕಿನೊಂದಿಗೆ ಜೋಡಿಸಿ ಕೊಟ್ಟಿದ್ದು .ಅದರ ಪರಿಣಾಮವೇ ಇಂದು ನಾವು ನಮ್ಮ ದೇಶದಲ್ಲಿ ವಿವಿಧತೆಯನ್ನು ಕಾಣಬಹುದು. ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯವಾಗಿರುವುದು. ಹಿಂದೂ ಸಂಸ್ಕೃತಿಯು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಂತೆ ಹೇಳಿಕೊಡುವ ಧರ್ಮ .ಅದೇ ಕಾರಣ ಇಂದು ಭಾರತದಲ್ಲಿ ವಿವಿಧ ಧರ್ಮದ ( ಮತದ ) ಜನರು ವಾಸಿಸಲು ಸಾಧ್ಯವಾಗಿರುವುದು. ಈ ಪರಂಪರೆ ಪ್ರಕೃತಿಯೊಂದಿಗೆ ಬದಲಾವಣೆಯಾಗುತ್ತಾ ಹೋಗಿದ್ದರ ಫಲವೇ ಇಂದು ಕೂಡ ತನ್ನ ಸಂಸ್ಕೃತಿಯನ್ನು ಹಾಗೂ ತನ್ನ ಇತಿಹಾಸವನ್ನು ಉಳಿಸಿಕೊಳ್ಳಲು ಹಿಂದೂ ಧರ್ಮಕ್ಕೆ ಸಾಧ್ಯವಾಗಿರುವುದು.
             ಇಂತಹ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಅನ್ಯ ಮತಗಳು ನಿರಂತರವಾಗಿ ಆಕ್ರಮಣ ನಡೆಸುತ್ತಾ ಸಂಸ್ಕೃತಿಯನ್ನು ನಾಶ ಮಾಡಲು ಅವಣಿಸುತ್ತಾ ಬಂದರು ಏನು ಮಾಡಲು ಸಾಧ್ಯವಾಗಿಲ್ಲ ಕಾರಣ ಹುಡುಕುತ್ತ ಹೊರಟರೆ ನಮಗೆ ಸಿಗುವುದು ಹಿಂದುತ್ವವನ್ನು ಉಳಿಸಿಕೊಂಡು ಬರುತ್ತಿರುವ ಸಮಾಜ ಅಂದರೆ ಅದನ್ನು ವಾಸ್ತವದ ರೂಪದಲ್ಲಿ ಅನುಷ್ಠಾನಕ್ಕೆ ತಂದು ಅದರೊಟ್ಟಿಗೆ ಬದುಕನ್ನು ನಡೆಸುತ್ತಿರುವ ಸಾಮಾನ್ಯ ಜನರಿಂದ ಇಂದು ಹಿಂದೂ ಧರ್ಮವು ಉಳಿದಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ನಾವು ಹಿಂದೂ ಧರ್ಮದ ರಾಯಭಾರಿಗಳು ಎನ್ನುವಂತೆ ಬಿಂಬಿಸಿಕೊಂಡು ಧರ್ಮವನ್ನೇ ಹೈಜಾಕ್ ಮಾಡಿ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಂಡು ನಮ್ಮ ದೇಶವನ್ನು ಆಳುತ್ತಿರುವ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆ. ಯಾವುದೇ ರಾಜಕೀಯ ಪಕ್ಷದಿಂದ ಧರ್ಮ ಉಳಿಯಲಾರದು ಏಕೆಂದರೆ ರಾಜಕೀಯ ಪಕ್ಷ ಹುಟ್ಟುವ ಮೊದಲೇ ಹಿಂದೂ ಧರ್ಮವು ಅಸ್ತಿತ್ವದಲ್ಲಿತ್ತು .ಮುಂದಿನ ದಿನಗಳಲ್ಲಿ ಹಿಂದುತ್ವದ ಹೆಸರನ್ನು ಹೇಳಿಕೊಂಡು  ಅಧಿಕಾರಕ್ಕೆ ಬರುವ ರಾಜಕೀಯ  ಪಕ್ಷ ಇಲ್ಲದಿದ್ದರೂ  ಹಿಂದುತ್ವ ಉಳಿಯುತ್ತದೆ. ಆದಿ-ಅಂತ್ಯ ಇಲ್ಲದ್ದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಇಂದಿಗೂ ನಿಜವಾದ ಹಿಂದುತ್ವದ ರಾಯಭಾರಿಗಳು ಸಾಮಾನ್ಯ ಜನರೇ. ಹಿಂದುತ್ವವು ರಾಜಕೀಯ ವಿಚಾರವಾಗದೆ ಸಾಮಾನ್ಯ ಜನರೊಳಗೆ ಶಾಶ್ವತವಾಗಿ ಉಳಿಯಲಿ.

Sunday, October 4, 2020

ಪ್ರೇಮದ ಅನ್ವೇಷಣೆ ಭಾಗ - 16


ನನಗೆ ಪ್ರೀತಿ ತೋರದ ತಂದೆ-ತಾಯಿ ಸಿಗದಿದ್ದರೂ ಪರವಾಗಿಲ್ಲ ಪ್ರೀತಿ ಹಾಗೂ ಕಾಳಜಿ ತೋರುವ ಸ್ನೇಹಿತ ಸಿಕ್ಕಿದನಲ್ಲ ಎಂಬುದೇ ದೊಡ್ಡ ವಿಷಯವಾಗಿತ್ತು. ಆದರೆ ಅವನ ಮನಸ್ಸಿನಲ್ಲಿ ಪ್ರೀತಿಯ ಹಿಂದೆ ಇದ್ದ ದ್ವೇಷ, ಕಾಳಜಿ ಹಿಂದೆ ಇದ್ದ ಸ್ವಾರ್ಥ ಅವನ ನಾಟಕೀಯತೆಯ ಪ್ರೀತಿ ಮತ್ತು ಕಾಳಜಿ ತಿಳಿದು ವಿಧುವಿಗೆ ದೊಡ್ಡ ಆಘಾತವಾಯಿತು. ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಇದ್ದ ವಿಧುವಿನ ಏಳಿಗೆ ಸಹಿಸದ ಕುಶಾಲ್ ವಿಧುವಿನ ಜೊತೆಗಾರರಿಗೆ ಮತ್ತು ಕಾಲೇಜಿನ ಸಹಪಾಠಿಗಳಿಗೆ ಇಲ್ಲದ ವಿಷಯಗಳನ್ನು ಹೇಳಿ ವಿಧುವಿನ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದ ಕುಶಾಲ್ ಮೇಲೆ ಅತಿಯಾದ ನಂಬಿಕೆ ಇಟ್ಟಿದ್ದ ಅವನಿಗೆ ತಿಳಿಯದಂತೆ ಅವನ ವಿರುದ್ಧ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ. ಕುಶಾಲ್ ನ ಮೋಸದ ಹರಿವು ನಿಧಾನವಾಗಿ ತಿಳಿಯಲು ಪ್ರಾರಂಭಿಸಿದ ಕೂಡಲೆ ಅವನಿಂದ ಅಂತರವನ್ನು ಕಾಯ್ದುಕೊಳ್ಳಲು ಆರಂಭಿಸಿದ. ವಿಧು ಉತ್ತಮವಾಗಿ ಓದಬೇಕು ಎಂಬ ಏಕಮಾತ್ರ ಉದ್ದೇಶದಿಂದ ಕಾಲೇಜು ಸೇರಿದ್ದರಿಂದ ಅವನ ಮುಂದೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡುವುದಷ್ಟೇ  ಆಯ್ಕೆಯಾಗಿತ್ತು. ತನ್ನ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಹಂಬಲ ಅವನಲ್ಲಿತ್ತು. ಅದರ ಅನಿವಾರ್ಯತೆ ಅವನಿಗಿತ್ತು. ಹಾಗಾಗಿ ವಿದ್ಯಾಭ್ಯಾಸದ ಕಡೆ ಪೂರ್ತಿಯಾಗಿ ಗಮನಹರಿಸಲು  ಉತ್ತಮ ಅಂಕ ಬರಲು ಶುರುವಾಯಿತು. ವಿಧುವಿನ ನಿರೀಕ್ಷೆ ಇಲ್ಲದೆ ತರಗತಿಗೆ ಮೊದಲನೆಯವನಾಗಿ ಬಂದ. ಅದನ್ನು ಸ್ನೇಹಿತ ಎನಿಸಿಕೊಂಡಿದ್ದ ಕುಶಾಲ್ ಗೆ ತಡೆಯಲಾಗಲಿಲ್ಲ ಎಂಬ ಸತ್ಯದ ಅರಿವಾದಾಗ ವಿಧುವಿಗೆ ಆಘಾತವಾಯಿತು. ಅವನನ್ನು ನೇರವಾಗಿ ಎದುರಿಸಲು ಆಗದ ಕುಶಾಲ್ ಬೇರೆ ರೀತಿಯಲ್ಲಿ ಅವನ ಏಳಿಗೆಯನ್ನು ತಡೆಯಬೇಕೆಂದು ಸಹಪಾಠಿಗಳಿಂದ ಯಾವುದೇ ರೀತಿಯ ಶೈಕ್ಷಣಿಕ ಸಹಕಾರ ಸಿಗದಂತೆ ಮಾಡಬೇಕು ಎಂಬ ದೃಷ್ಟಿಕೋನದಲ್ಲಿ ಯೋಚಿಸಿ ಅವನಿಗೆ ಅರ್ಥವಾಗದ ಪಾಠವನ್ನು ಹೇಳಿಕೊಡುವ ಹುಡುಗರಿಗೆ ಪಾಠವನ್ನು ಹೇಳಿಕೊಡಬೇಡಿ ಎಂದು ತಾಕಿತು ಮಾಡುತ್ತಿದ್ದ .
          ಆದರೂ ವಿಧುವಿನ ಸಹಪಾಠಿಗಳು ವಿದ್ಯಾಭ್ಯಾಸದ ವಿಚಾರಗಳನ್ನು ಹೇಳಿಕೊಡುತ್ತಿದ್ದರು. ಕುಶಾಲ್ನ ಒತ್ತಡ ಹೆಚ್ಚಿದ ಮೇಲೆ ಈ ವಿಚಾರವನ್ನು ವಿಧುವಿಗೆ ತಿಳಿಹೇಳಿದರು. ಅವನು ಎರಡನೆಯ ಬಾರಿಯೂ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿದರು ಫಲವಾಗಿ ತರಗತಿಗೆ ಮೊದಲನೆಯವನಾಗಿ ಬಂದ. ಅಷ್ಟರಲ್ಲಾಗಲೇ ಕಾಲೇಜಿನಲ್ಲಿ ಉತ್ತಮ ಸಹಪಾಠಿಗಳನ್ನು ಎಲ್ಲ ವಿಭಾಗಗಳಲ್ಲಿ ಸಂಪಾದಿಸಿದ್ದ ವಿಧು ಎಲ್ಲ ವಿಭಾಗಗಳಿಗೆ ಚಿರಪರಿಚಿತನಾಗಿದ್ದ. ಡಿಪ್ಲೋಮೋ ತರಗತಿಯ ಮೂರನೇ ವರ್ಷಕ್ಕೆ ಕಾಲಿಟ್ಟಾಗ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯುವ ಚರ್ಚೆಗಳು ಆರಂಭವಾದವು. ಎಲ್ಲಾ ವಿಭಾಗದ ಸ್ನೇಹಿತರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರಿಂದ ವಿಧುವಿಗೆ ಚುನಾವಣೆಗೆ ನಿಲ್ಲುವಂತೆ ಒತ್ತಡ ಬರುತ್ತಿತ್ತು. ಆದರೆ ಅವನಿಗೆ ಯಾವುದೇ ಚುನಾವಣೆ ಬೇಡವಾಗಿತ್ತು. ಏಕೆಂದರೆ ಅವನ ಉದ್ದೇಶ ಓದುವುದರ ಮುಖಾಂತರ ಡಿಪ್ಲೋಮಾ ಮುಗಿಸಿ ಹೋಗುವುದಾಗಿತ್ತು. ಅದೇ ಸಮಯದಲ್ಲಿ ಕುಶಾಲ್ ವಿಧುವಿನ ಹತ್ತಿರ ಸಹಾಯ ಕೇಳಿಕೊಂಡು ಬಂದ, ಅವನು ಉದ್ದೇಶವಿದ್ದು ವಿಧವನ್ನು ಹಿಡಿದರೆ ವೋಟು ತೆಗೆದುಕೊಳ್ಳಲು ಅನುಕೂಲ ಆಗಬಹುದು ಎಂಬುದು ಅವನ ಲೆಕ್ಕಾಚಾರವಾಗಿತ್ತು. ಇದನ್ನು ಅರಿಯದ ವಿಧು ಸ್ನೇಹಿತ ಸಹಾಯ ಕೇಳಿಬಂದಾಗ ಸಹಾಯ ಮಾಡುವುದು ನಿಜ ಸ್ನೇಹಿತನ ಲಕ್ಷಣವೆಂದು ಅವನ ಚುನಾವಣೆಗೆ ಸಹಾಯ ಮಾಡಲು ಒಪ್ಪಿದ. ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕುಶಾಲ್ ನ ಗೆಲುವಿಗೆ ಪ್ರಮುಖ ಕಾರಣನಾದ. ಕುಶಾಲ್ ಗೆಲ್ಲುವೆ ವಿಧುವಿಗೆ ಮುಳುವಾಗಿ ಕಾಡಿತು. ಕುಶಾಲ್ ನ ಇತರೆ ಸ್ನೇಹಿತರೆ ಅವನನ್ನು ಸೋಲಿಸಲು ಸಿದ್ಧವಿದ್ದ ಪರಿಸ್ಥಿತಿಯಲ್ಲಿ ಅವರನ್ನೆಲ್ಲ ಸಂಬಾಳಿಸಿ ಕುಶಾಲ್ ಗೆಲುವಿಗೆ ಕಾರಣನಾದ, ಕುಶಾಲ್ ತನ್ನ ಬುದ್ಧಿಯನ್ನು ಚುನಾವಣೆಯಲ್ಲಿ ಗೆದ್ದ ಮರುದಿನದಿಂದಲೇ ತೋರಿಸಲು ಶುರು ಮಾಡಿದ. ಚುನಾವಣೆಯಲ್ಲಿ ಗೆದ್ದ ಮರುದಿನ ಸಿಹಿ ಹಂಚುವ ಸಮಯದಲ್ಲಿ ಕುಶಾಲ್ ಗೆ ಕೇಡು ಬಯಸಿದವರನ್ನ ವೇದಿಕೆಯ ಮೇಲೆ ಕರೆದು ವಿಧವನ್ನು ಕರೆಯದಂತೆ ಅವಮಾನಿಸಿ ಬಿಟ್ಟ........

Friday, October 2, 2020

ಬಿಜೆಪಿ ಹೊರತಾದ ಹಿಂದೂ ರಾಷ್ಟ್ರೀಯವಾದದ ಪಕ್ಷದ ಅವಶ್ಯಕತೆ ಈ ದೇಶಕ್ಕೆ ಇದೆಯೇ ?

ಭಾರತದ ಭವ್ಯ ಪರಂಪರೆಗೆ ಕಾರಣ, ಈ ನೆಲದ ಮಣ್ಣಿನ ಗುಣವಾದ ಪ್ರಾಕೃತಿಕ ಸೊಬಗಿನ ಸಂಸ್ಕೃತಿ .ಭಾರತ ವಿಶ್ವಕ್ಕೆ ಬದುಕನ್ನು ಹೇಳಿಕೊಟ್ಟ ದೇಶ. ವಿವಿಧತೆಯಲ್ಲಿ ಏಕತೆಯನ್ನು ಅನಾದಿಕಾಲದಿಂದಲೂ ರೂಢಿಸಿಕೊಂಡು ಬಂದ, ವಿಶ್ವಕ್ಕೆ ಸಹಬಾಳ್ವೆಯ ಮಹತ್ವವನ್ನು ಸಾರಿದ, ವಿಶ್ವವೇ ಒಂದು ಮನೆಯೆಂದು ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯವನ್ನು ಕೊಟ್ಟ ದೇಶ. ಇಂತಹ ದೇಶದ ರಾಜಕೀಯ ಇತಿಹಾಸ ಇಂದು ನೆನ್ನೆಯದಲ್ಲ ಅದಕ್ಕೆ ಅದರದೇ ಆದ ಅಮೋಘ ಇತಿಹಾಸವಿದೆ. ರಾಮಾಯಣ ಕಾಲದಿಂದ ಆರಂಭವಾಗಿ ಮಹಾಭಾರತದಿಂದ ಇಂದಿನ  ಕಲಿಯುಗದಲೂ ತನ್ನದೇ ರಾಜಕೀಯ ಇತಿಹಾಸ ಇರುವ ದೇಶ ಯಾವುದಾದರೂ ಇದ್ದರೆ ? ಅದು ಭಾರತ ಮಾತ್ರ . ಭಾರತವು ಇಂದಿನವರೆಗೆ ಪ್ರೌಢತೆಯ ಪ್ರಬುದ್ಧತೆಯ ರಾಜಕೀಯ ಆಡಳಿತವನ್ನು ಮಾಡಿಕೊಂಡು ಬಂದ ದೇಶ. ಈ ದೇಶವನ್ನು ಇದುವರೆಗೂ ಯಾರೂ ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಲಾಗಲಿಲ್ಲ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು ? ಅದಕ್ಕೆ ಉತ್ತರ ನಮ್ಮ ಭೂತಾಯಿಯ ಆತ್ಮವೇ ಈ ನಮ್ಮ ಭಾರತ ದೇಶ. ಆತ್ಮವಿಲ್ಲದ ದೇಹ ಹೇಗೆ ಕಾರ್ಯಾಚರಿಸುವುದು ಇಲ್ಲವೋ ಅದೇ ರೀತಿ ಭಾರತದ ಬೆಳಕಿಲ್ಲದೆ ವಿಶ್ವವು ಉನ್ನತಿಗೆ ಹೋಗಲು ಸಾಧ್ಯವಿಲ್ಲ. ಭಾರತವು ಪ್ರಕೃತಿಯೊಂದಿಗೆ ಬೆರೆತ ದೇಶ ಪ್ರಕೃತಿಯ ಒಂದು ಭಾಗವೂ ಹೌದು. ಪ್ರಕೃತಿ ಬಯಸುವುದು ಧರ್ಮವನ್ನು, ಧರ್ಮವೆಂದರೆ ಪ್ರಕೃತಿಯೊಂದಿಗೆ ಕೂಡಿಬಾಳುವ ಒಂದು ಅನುಬಂಧ. ಅದೇ  ಸಂಸ್ಕೃತಿಯೇ ಮುಂದೆ ಧರ್ಮವಾಯಿತು.
                ಈ ಅನುಬಂಧ ಏರುಪೇರಾದರೆ ಈ ಪುಣ್ಯಭೂಮಿಯು ತನ್ನ ಸೇವಕರನ್ನು ತನ್ನ ನೆಲದ ಮೇಲೆ ಕರೆಸಿಕೊಳ್ಳುತ್ತದೆ. ಹಾಗೆಯೇ ನಮ್ಮ ದೇಶಕ್ಕೆ ಅವನತಿ ಬಂದಾಗ ಒಬ್ಬರ ಅಧಿಪತ್ಯ ಸಾಧಿಸುವಂತಹ ಪ್ರಸಂಗಗಳು ಎದುರಾದಾಗ ಪರ್ಯಾಯ ನಾಯಕರುಗಳು ಬರುತ್ತಾರೆ. ಹಾಗೆಯೇ ಇತಿಹಾಸ ನೋಡಿಕೊಂಡು ಹೋದಾಗ ನಮಗೆ ಹಲವಾರು ಉದಾಹರಣೆಗಳು ಸಿಗುತ್ತವೆ. ಹಿಂದುತ್ವ ಅವನತಿಯ ಹಾದಿ ಹಿಡಿಯುವ ಸಮಯದಲ್ಲಿ ಆಧ್ಯಾತ್ಮಿಕ ಕ್ರಾಂತಿಗಳು ಆಗಿದ್ದುಂಟು. ಅದಕ್ಕೆ ಉತ್ತಮ ಉದಾಹರಣೆ  ಶಂಕರಾಚಾರ್ಯರು ಸನಾತನ ಧರ್ಮವನ್ನು ಮತ್ತೆ ಉಳಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡಿದ್ದು. ಉತ್ತರಭಾರತದಲ್ಲಿ ಮುಸಲ್ಮಾನರ ದಾಳಿಗಳ ಆದಾಗ ದಕ್ಷಿಣ ಭಾರತದಲ್ಲಿ ನಾರಾಯಣಗುರು ಅವರ ಮುಖಾಂತರ ಆಧ್ಯಾತ್ಮಿಕ ಕ್ರಾಂತಿಯಾಗಿದ್ದು ಉಂಟು. ಒಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಈ ಮಣ್ಣಿನ ಗುಣಲಕ್ಷಣ. ಅದೇ ಕಾರಣ ಇಂದಿನವರೆಗೂ ಈ ದೇಶದಲ್ಲಿ ಯಾರಿಗೂ ಸರ್ವಾಧಿಕಾರಿಯಾಗಿ ಮರೆಯಲು ಸಾಧ್ಯವಾಗಿಲ್ಲ.
                 ಸ್ವಾತಂತ್ರ ಭಾರತದ ನಂತರ ದೇಶವು ಸಂಸ್ಕೃತಿಯ ಹೊರತಾಗಿ ರಾಜಕೀಯ ಧರ್ಮದ ( ಅಂದರೆ ರಾಜಕೀಯ ಸ್ವಾರ್ಥವನ್ನು ಇಟ್ಟುಕೊಂಡು ವೋಟ್ ಬ್ಯಾಂಕಿಗಾಗಿ ಹೆಸರಿಸುವ ಧರ್ಮ ) ವಿಚಾರವಾಗಿ ದೇಶ ಇಬ್ಭಾಗವಾಗಿ ಹೋಯಿತು. ಪಾಕಿಸ್ತಾನ ಮುಸಲ್ಮಾನರ ದೇಶವಾಗಿ ಭಾರತವು ಅರ್ಥವಿಲ್ಲದ ಪದವಾದ ಸೆಕ್ಯುಲರ್ ದೇಶವಾಗಿ ಹೊರಹೊಮ್ಮಿದಾಗ ಸಹಜವಾಗಿ ಹಿಂದುಗಳ ಸಹನೆಯ ಕಟ್ಟೆ ಒಡೆಯಿತು. ಅದರ ಫಲವೇ ಮುಂದಿನ ದಿನಗಳಲ್ಲಿ ಬಂದ ಜನ ಸಂಘ. ಜನ ಸಂಗವು ರೂಪಾಂತರಗೊಂಡು ಭಾರತೀಯ ಜನತಾ ಪಾರ್ಟಿ ಯಾಗಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಅದು ಯಾವ ಹೆಸರಿನಲ್ಲಿ ಅಧಿಕಾರ ಹಿಡಿಯಿತೋ ಅದರ ಮೂಲ ಸತ್ವವನ್ನೇ ಮರೆತುಬಿಟ್ಟಿತು. ಹಿಂದುತ್ವಕ್ಕೆ ಪೂರಕವಾದ ಯಾವ ಕೆಲಸಗಳು ಆಗಲಿಲ್ಲ. ಮತ್ತೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನು ಕಂಡಿತು. ಆನಂತರ ವಿದೇಶಿ ಮಹಿಳೆ ನಮ್ಮ ಭಾರತ ಭೂಮಿಯನ್ನು ಅನ್ಯಮಾರ್ಗದಿಂದ ಆಳಿದರು. ಅದರ ಪ್ರತಿಫಲ ಎನ್ನುವಂತೆ ದೇಶವು ಅವನತಿ ಹಾದಿಯನ್ನು  ಹಿಡಿಯಿತು. ಕಾಲಕಳೆದಂತೆ ಹಿಂದುತ್ವದ ಆದರ್ಶಗಳು ಕ್ರಮೇಣ ಕಡಿಮೆಯಾಗುತ್ತಾ ಹೋಯಿತು. ಪಕ್ಷಕ್ಕಾಗಿ ಹಗಲು ಇರುಳು ಎನ್ನದೆ ದುಡಿದ ಕಾರ್ಯಕರ್ತರು, ನಾಯಕರು ನೈಪಥ್ಯಕ್ಕೆ ಸರಿದರು. ಅನ್ಯ ಪಕ್ಷಗಳಿಂದ ಬಂದು ಬಿಜೆಪಿಯಲ್ಲಿ ಅಧಿಕಾರ ಅನುಭವಿಸುತ್ತಿರುವವರು ಒಂದು ಕಾಲದಲ್ಲಿ ಬಿಜೆಪಿಯ ನಿಷ್ಠಾವಂತರಿಗೆ ನೋವು ಕೊಟ್ಟವರೇ. ನಿಸ್ವಾರ್ಥದಿಂದ ದುಡಿದವರನ್ನು ಬಿಜೆಪಿ ಮರೆಯಿತು. ಜಾತಿ ಆಧಾರದ, ಸ್ವಜನಪಕ್ಷಪಾತದ, ಹಿಂಬಾಲಕರಿಗೆ ಮಣೆ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಜನಸಂಘದ ಧ್ಯೇಯಗಳು ಬಿಜೆಪಿಯಲ್ಲಿ ಉಳಿದಿಲ್ಲ ಎಲ್ಲವೂ ಬರೀ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ.
                  ಇಂದು ಬಿಜೆಪಿಯಲ್ಲಿ ನೈತಿಕತೆ ಕಡಿಮೆಯಾಗಿರುವ ಪರಿಣಾಮ ಕೆಲವರು ಬಿಜೆಪಿ ಬಿಡಲು ಸಿದ್ಧರಿದ್ದರು ಅವರಿಗೆ ಹಿಂದೂ ರಾಷ್ಟ್ರೀಯವಾದದ ನೆಲೆಗಟ್ಟಿನ ಪಕ್ಷ ಸಿಗುತ್ತಿಲ್ಲ. ಹಿಂದೂ ರಾಷ್ಟ್ರೀಯವಾದ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿ ಭಾರತದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ಅಧಿಕಾರದಲ್ಲಿದ್ದರು ಭಾರತವನ್ನು ಹಿಂದು ರಾಷ್ಟ್ರವೆಂದು ಘೋಷಿಸುತ್ತಿಲ್ಲ. ಇದು ಬಿಜೆಪಿಯ ದ್ವಂದ್ವ ನಿಲುವನ್ನು ತೋರಿಸುತ್ತದೆ. ಅದರ ಹಿಂದುತ್ವದ ಅಜೆಂಡಾ ಬರಿ ವೋಟ್ ಬ್ಯಾಂಕಿಗಾಗಿ ಸೀಮಿತವಾಗಿದೆ. ಇನ್ನೂ ಅದರ ಆರ್ಥಿಕ ನೀತಿಯಲ್ಲಿನ ಅಸಮತೋಲನ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ. ಅದನ್ನು ಪ್ರಶ್ನಿಸುವ ಗಟ್ಟಿ ದ್ವನಿ ಸಂಸತ್ತಿನಲ್ಲಿ ಇಲ್ಲದಂತಾಗಿದೆ. ಅದರ ವೈಫಲ್ಯಗಳನ್ನು ಹೇಳಿದರೆ ಅದು ಹಿಂದುತ್ವ ಎಂಬ ಅಸ್ತ್ರವನ್ನು ಪ್ರಯೋಗಿಸುತ್ತಿದೆ. ಬಿಜೆಪಿಯ ವಿರುದ್ಧ ಮಾತನಾಡಿದರೆ ಅದು ದೇಶ ವಿರುದ್ಧ ಮಾತನಾಡಿದಂತೆ ಎಂದು ಬಿಂಬಿಸಲಾಗುತ್ತಿದೆ. ಅದನ್ನು ಪ್ರಶ್ನಿಸುವ ದೇಶದ ಪರವಾಗಿ ಹೋರಾಡುವ ಇನ್ನೊಂದು ಹಿಂದೂ ರಾಷ್ಟ್ರೀಯವಾದದ ಪಕ್ಷದ ಅವಶ್ಯಕತೆ ಈ ದೇಶದಲ್ಲಿ ಬಹಳ ಇದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾಗಿದೆ. ಹಿಂದುತ್ವವೆಂಬುದು ಬಿಜೆಪಿ ಬರುವುದಕ್ಕಿಂತಲೂ ಮೊದಲೇ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ..... ಏಕೆಂದರೆ ಹಿಂದುತ್ವ ಸನಾತನ ಹಾಗೂ ಅನಂತ.....