Monday, October 19, 2020

ನಿಷ್ಕಲ್ಮಶ ಸ್ನೇಹ ಹೇಗಿರಬೇಕು ?


ಸ್ನೇಹ ಜಗತ್ತಿನ ಅದ್ಭುತವಾದ ಸಂಬಂಧ ಅಲ್ಲಿ ಯಾವ ಅಳತೆಗಳು ಇರುವುದಿಲ್ಲ .ಕುಚೇಷ್ಟೆಯಿಂದ ಹಿಡಿದು ಪ್ರೀತಿ ,ಮಮತೆ ,ವಿಶ್ವಾಸ ಎಲ್ಲ ಇರುತ್ತದೆ .ಅದು ನಿಷ್ಕಲ್ಮಶ, ಎಲ್ಲಾ ಸಂಬಂಧಗಳಿಗೆ ಮೀರಿದ ಬಂದವದು. ಸ್ನೇಹ ಪ್ರತಿಯೊಂದು ಜೀವಿಗೆ ಬದುಕಿನಲ್ಲಿ ಅವಶ್ಯವಾಗಿ ಬೇಕಾಗಿರುವ ಅನುಭೂತಿ, ಅನುಬಂಧ. ಅಂತಹ ಸ್ನೇಹಕ್ಕೆ ಬೆಲೆ ಕಟ್ಟಲಾಗದು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ಸಂಬಂಧಗಳು ಜಾಗತೀಕರಣದ ಪ್ರಭಾವದಿಂದ ತಮ್ಮ ಸಂಬಂಧದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದವೆ. ಅದರೊಳಗೆ ಸ್ನೇಹ ಸೇರಿರುವುದು ಇಂದಿನ ಸಮಾಜದ ದುರಂತ. ಇಂದಿನ ದಿನಮಾನದಲ್ಲಿ ಸಂಬಂಧಗಳು ಲಾಭದ ಆಧಾರದಲ್ಲಿ ನಡೆಯುತ್ತಿರುವುದರಿಂದ ನಿಷ್ಕಲ್ಮಶ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಕೃತಕತೆ ಸತ್ಯವಾಗಿ ಕಾಣುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದರೊಳಗೆ ನಾವು ಉತ್ತಮ ಸ್ನೇಹಿತರನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದರ ಬಗ್ಗೆ ನೋಡೋಣ. ಉತ್ತಮ ಸ್ನೇಹಿತರನ್ನು ತಿಳಿಯುವ ಮೊದಲು ನಾವು ಉತ್ತಮ ಸ್ನೇಹಿತರಾಗಿದೇವ ಎಂಬುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು. ಉತ್ತಮ ಸ್ನೇಹವೆಂದರೆ ಏನು ಎಂಬ ಪ್ರಶ್ನೆ ಕಾಡುವುದು ಸಹಜ. ಬದುಕಿನಲ್ಲಿ ಹಲವಾರು ಜನರು ಬರುತ್ತಾರೆ. ಕೆಲವರು ವರವಾಗಿ ಬಂದರೆ ಕೆಲವರು ಶಾಪವಾಗಿ ಬರುತ್ತಾರೆ .ಕೆಲವರು ನಿಮ್ಮ ಸತ್ವವನ್ನೇ ಹೀರಿದರೆ ಮತ್ತೆ ಕೆಲವರು ನಿಮ್ಮ ಅಂತರಂಗದ ಶಕ್ತಿಯನ್ನು ಪ್ರಚೋದಿಸುತ್ತಾರೆ.
                  ನಾವು ಇಲ್ಲಿ ಹುಡುಕ ಬೇಕಾಗಿರುವುದು ನಿಜ ಸ್ನೇಹಿತರನ್ನು ,ನಿಜ ಸ್ನೇಹಿತರು ಎಂದರೆ ಯಾರು ಎಂಬ ಪ್ರಶ್ನೆ ಕಾಡುವುದು ಸಹಜ. ನಮ್ಮ ಜೊತೆ ಊಟ ಮಾಡಿ ಹರಟೆ ಹೊಡೆದವರೆಲ್ಲ ಹಾಗೂ ನಮ್ಮ ಜೊತೆ ಸುತ್ತುವವರೆಲ್ಲ ನಿಜ ಸ್ನೇಹಿತರಾಗಲು ಸಾಧ್ಯವಿಲ್ಲ. ನಿಜ ಸ್ನೇಹದಲ್ಲಿ ಸ್ನೇಹಿತನ ಏಳಿಗೆಯನ್ನು ಪ್ರಚೋದಿಸುವಂತ ಶಕ್ತಿ ಇರಬೇಕು. ಅವನ ಅಂತರಂಗದ ಶಕ್ತಿಯನ್ನು ತಿಳಿದು ಅವನ ಉನ್ನತಿಗೆ ಸಹಕಾರ ಕೊಡುವ ಮನೋಭಾವವಿರಬೇಕು. ಅದು ಬಿಟ್ಟು ಅವನ ಮುಂದೆ ನಯವಾಗಿ ಮಾತನಾಡಿ ಅವನ ಬೆನ್ನ ಹಿಂದೆ ಮಾತನಾಡುವ ಚಾಳಿ ಇರಬಾರದು, ಬೇರೆಯವರ ಮುಂದೆ ತಾವು ಒಳ್ಳೆಯವರಾಗಲು ಅವರು ಕೆಟ್ಟವರಂತೆ ಚಿತ್ರಿಸಬಾರದು. ಸ್ನೇಹದ ಏಳಿಗೆಯನ್ನು ಸಹಿಸದೆ ಹಿತ ಶತ್ರುವಿನ ರೀತಿ ಇರಬಾರದು. ಅಂತಹ ಸಂಬಂಧಗಳು ಸುದೀರ್ಘಕಾಲ ಬಾರದಂತೆ ಮುರಿದು ಬೀಳುತ್ತವೆ.
                 ಸ್ನೇಹವೆಂಬುದು ಒಂದು ಮಧುರ ಸಂಬಂಧ. ಅದನ್ನು ನಾವು ಪುರಾಣ ಕಾಲದಿಂದಲೂ ನೋಡಿಕೊಂಡು ಬಂದಿದ್ದೇವೆ. ಅದಕ್ಕೆ ಉತ್ತಮ ಉದಾಹರಣೆ ಕೃಷ್ಣ ಕುಚೇಲನ ಸ್ನೇಹ. ಕೃಷ್ಣ ರಾಜಪರಂಪರೆಯಲ್ಲಿ ಬಂದಿದ್ದರು . ಆತನ ಬಡ ಸ್ನೇಹಿತನನ್ನು ಮರೆಯಲಿಲ್ಲ ಅದು ಶ್ರೇಷ್ಠ ಸ್ನೇಹ. ಸ್ವಾರ್ಥ ಸ್ನೇಹಕ್ಕೆ ಉತ್ತಮ ಉದಾಹರಣೆ ದುರ್ಯೋಧನ ಹಾಗೂ ಕರ್ಣನ ಸ್ನೇಹ. ಅದು ಲಾಭಕ್ಕಾಗಿ ಆದ ಸ್ನೇಹ ಹಾಗಾಗಿ ಕರ್ಣ ಧರ್ಮ ಮಾರ್ಗದಲ್ಲಿ ನಡೆದರು ಅವನ ಸಾವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಮತ್ತು ಮುಂದುವರೆದು ಹೇಳುವುದಾದರೆ ದ್ರುಪದ ಹಾಗೂ ದ್ರೋಣಾಚಾರ್ಯರ ಸ್ನೇಹ. ಅವರಿಬ್ಬರೂ ಸಹಪಾಠಿಗಳು ಒಂದೇ ಗುರುಕುಲದಲ್ಲಿ ಬೆಳೆದವರು. ಸ್ನೇಹಕ್ಕೆ ಬೆಲೆ ಕೊಡದ ದ್ರುಪದ ತನ್ನ ಅಧಿಕಾರದ ಅಹಂನಿಂದ ಸಹಾಯ ಕೇಳಿಬಂದ ದ್ರೋಣಾಚಾರ್ಯರನ್ನು ಅವಮಾನಿಸಿದ ಅದರ ಪ್ರತಿಫಲವೇ ದ್ರೋಣಾಚಾರ್ಯರ ಕ್ಷಮೆ ಕೇಳುವಂತಹ ಸಂದರ್ಭ ಒದಗಿ ಬಂತು.  ಐತಿಹಾಸಿಕ ಕಥೆಗಳಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಸ್ನೇಹವಿದ್ದರೆ ಕೃಷ್ಣ ಕುಚೇಲನಂತೆ ಇರಬೇಕು. ಅದು ನಿಷ್ಕಲ್ಮಶ ಸ್ವಾರ್ಥದ ಸ್ನೇಹ ವಾಗಲಿ ,ಲಾಭದ ಸ್ನೇಹವಾಗಲಿ ಬಹಳ ಕಾಲ ಉಳಿಯುವುದಿಲ್ಲ .ಕಾಲಕಳೆದಂತೆ ಸ್ವಾರ್ಥದ ಲಾಭದ ಸ್ನೇಹಗಳು ಅಳಿಯುತ್ತವೆ .ಆದರೆ ನಿಜ ಸ್ನೇಹ ಶಾಶ್ವತವಾಗಿ ಉಳಿಯುತ್ತದೆ .ಸ್ನೇಹದಲ್ಲಿ ಅಪೇಕ್ಷೆಯು ಇರಬಾರದು. ಅಪೇಕ್ಷೆಯೂ ಸ್ನೇಹವನ್ನು ಮಾತ್ರವಲ್ಲ ಎಲ್ಲಾ ಸಂಬಂಧಗಳನ್ನು ಹಾಳು ಮಾಡಿಬಿಡುತ್ತದೆ. ಎಲ್ಲ ಸಂಬಂಧಗಳ ಜೀವಾಳ ನಂಬಿಕೆ. ನಂಬಿಕೆ ಕಳೆದುಹೋಗದಂತೆ ನಡೆದುಕೊಂಡರೆ ಸ್ನೇಹವು ಸುದೀರ್ಘವಾಗಿ ಉಳಿಯುತ್ತದೆ. ನಂಬಿಕೆ ಕಳೆದುಕೊಂಡ ಸಂಬಂಧಗಳು ಉಳಿಯುವುದು ಅಸಾಧ್ಯ .ಯಾವುದೇ ಸಂಬಂಧ ಉಳಿಯಬೇಕಾದರೆ ಎರಡು ಕಡೆಯ ಪ್ರಯತ್ನದಿಂದ ಮಾತ್ರ ಸಾಧ್ಯ .ಯಾವುದೇ ಸಂಬಂಧಗಳನ್ನು ಒತ್ತಾಯಪೂರ್ವಕವಾಗಿ ಉಳಿಸಿಕೊಳ್ಳುವಂತ ಕೆಲಸ ಮಾಡಬಾರದು. ನಂಬಿಕೆ ಇಲ್ಲದ ಮೇಲೆ ಅವು ಕೃತಕ ಸಂಬಂಧಗಳ ಆಗಿಬಿಡುತ್ತವೆ. ಕೃತಕತೆಯ ಬದುಕು ಮನಸ್ಸಿಗೆ ಮುದ ನೀಡಲು ಸಾಧ್ಯವಿಲ್ಲ . ಆ ಸಂಬಂಧಗಳು ಇದ್ದೂ ಇಲ್ಲದಂತೆ ಇರುತ್ತವೆ. ಇದ್ದು ಇಲ್ಲದಿರುವುದಕ್ಕಿಂತ ಇಲ್ಲದಿರುವುದೇ ಉತ್ತಮ. ಉತ್ತಮ ಸ್ನೇಹಿತರನ್ನು ಕಳೆದುಕೊಂಡರೆ ವಜ್ರವನ್ನು ಎಸೆದ ಕಲ್ಲನ್ನು ಎತ್ತಿ ಕೊಂಡಂತೆ. ಕೃತಕ ಸ್ನೇಹ ಉಳಿಯುವುದಿಲ್ಲ .ನಿಜ ಸ್ನೇಹ ಅಳಿಯುವುದಿಲ್ಲ....

Sunday, October 11, 2020

ಪ್ರೇಮದ ಅನ್ವೇಷಣೆ ಭಾಗ-17


ಹೇಗಿದ್ದರೂ ಕುಶಾಲ್ ನಿಂದ ದೂರಸರಿಯಲು ನಿಶ್ಚಯಿಸಿದ್ದ ವಿಧುವಿಗೆ ಇದು ಒಂದು ರೀತಿಯ ಅನುಕೂಲವೇ ಆಯಿತು. ಇನ್ನು ಅಂತರವನ್ನು ಕಾಯ್ದುಕೊಳ್ಳಲು ಸುಲಭವಾಯಿತು. ವಿಧು ಎರಡನೆಯ ಬಾರಿಯೂ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಕುಶಾಲ್ಗೆ ತಡೆಯಲಾಗಲಿಲ್ಲ ಹೇಗಾದರೂ ಮಾಡಿ ಪ್ರಥಮಸ್ಥಾನ ಗಳಿಸಿದಂತೆ ತಡೆಯಬೇಕು ಎಂದು ನಿಶ್ಚಯಿಸಿ ನೇರವಾಗಿ ಎದುರಿಸಲು ಸಾಧ್ಯವಾಗದೆ ಕುಶಾಲ್ ವಿಧುವಿಗೆ ಯಾವುದೇ ರೀತಿಯ ಶೈಕ್ಷಣಿಕ ನೆರವು ಸಿಗದಂತೆ ಮಾಡಬೇಕು ಎಂದು ಯೋಚಿಸಿ ತನ್ನ ಸಹಪಾಠಿಗಳಿಗೆ ಯಾವುದೇ ಕಾರಣಕ್ಕೂ ಅವನಿಗೆ ಗೊತ್ತಿಲ್ಲದ್ದನ್ನು ಹೇಳಿ ಕೊಡಬೇಡಿ ಎಂದು ತಾಕೀತು ಮಾಡುತ್ತಿದ್ದ ಅವನ ಸಹಪಾಠಿಗಳು ಕುಶಾಲ್ ನ ಅರಿವಿಗೆಬಾರದೆ ಹೇಳಿಕೊಡುತ್ತಿದ್ದರು. ಅದನ್ನು ತಿಳಿದ ಕುಶಾಲ್ ವಿಧುವಿನ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಹೇಳಿ ಅವನ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದ .ಆ ವಿಚಾರವಾಗಿ ಕೆಲವು ಸಹಪಾಠಿಗಳು ವಿಧುವಿನ ಹತ್ತಿರ ಚರ್ಚೆ ಮಾಡುತ್ತಿದ್ದರು. ವಿಧುವಿಗೆ ಗೊತ್ತಿಲ್ಲದ ಪಾಠದ ವಿಷಯಗಳನ್ನು ಹೇಳಿ ಕೊಡಲು ಹಿಂದೇಟು ಹಾಕುವಂತೆ ಮಾಡಿದ. ಆಗ ಅವನ ನೆರವಿಗೆ ಬಂದಿದೆ ಅವನ ಗುರುಗಳು. ಗುರುಗಳ ಬಳಿ ತನ್ನ ಸಮಸ್ಯೆಗಳನ್ನು ಹೇಳಿಕೊಂಡು ಯಾರು ನನಗೆ ಪಠ್ಯಪುಸ್ತಕದ ವಿಚಾರಗಳನ್ನು ಹೇಳಿಕೊಡುತ್ತಿಲ್ಲ ಸರ್ .ನಿಮ್ಮ ಸಹಾಯ ಬೇಕು ಎಂದಾಗ ಅವನು ಗುರುಗಳು ದಿನದ 24 ಗಂಟೆಗಳು ನಮ್ಮ ಮನೆಯ ಬಾಗಿಲು ತೆರೆದಿರುತ್ತದೆ ಎಂದು ಹೇಳಿ ಆತ್ಮಸ್ಥೈರ್ಯವನ್ನು ತುಂಬಿ ಕಳುಹಿಸಿದರು. ಹರ ಮುನಿದರೂ ಗುರು ಕಾಯುವನು ಎಂಬ ನಾಡು-ನುಡಿ ಅವನ ವಿಷಯದಲ್ಲಿ ಸತ್ಯವಾಯಿತು. ಸರ್ವ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುತ್ತಿದ್ದ ಗುರುಗಳಿಗೆ ಕುಶಾಲ್ ಅವಮಾನ ಮಾಡಿಬಿಟ್ಟ. ವಿದು ಗುರುವಿಗೆ ಪ್ರಿಯವಾದ ಶಿಷ್ಯ ಹಾಗಾಗಿ ಇವನಿಗೆ ಹೆಚ್ಚಿನ ಅಂಕಗಳನ್ನು ಕೊಡುತ್ತಾರೆಂದು ತರಗತಿಯ ಸಹಪಾಠಿಗಳನ್ನು ಗುರುಗಳ ವಿರುದ್ದ ಎತ್ತಿಕಟ್ಟಿ ಬಿಟ್ಟ. 
           ಕುಶಾಲ್ ನ ನಿಜಮುಖ ಗೋಚರಿಸಿದ್ದು ತರಗತಿಯಲ್ಲಿ. ವಿಧುವಿಗೆ ಹೆಚ್ಚಿನ ಅಂಕವನ್ನು ನೀವು ಕೊಡುತ್ತಿದ್ದೀರಾ ಎಂದು ತರಗತಿಯಲ್ಲಿ ಗುರುಗಳ ವಿರುದ್ಧದ ಆರೋಪವನ್ನು ಮಾಡಿದ ಗುರುಗಳು ಪುಸ್ತಕ ಮುಟ್ಟಿ ಪ್ರಮಾಣ ಮಾಡುವಂತಹ ಪರಿಸ್ಥಿತಿಗೆ ತಂದು ಬಿಟ್ಟ. ಇಂತಹ ಆರೋಪ ನಿರೀಕ್ಷಿಸದ ಗುರುಗಳು ಮನಸ್ಸಿನಲ್ಲಿ ನೊಂದುಕೊಂಡು ನೋವುಂಡು ತರಗತಿಯಲ್ಲಿ ಪುಸ್ತಕವನ್ನು ಹಿಡಿದು ಪ್ರಮಾಣ ಮಾಡಿಬಿಟ್ಟರು. ಯಾವುದೇ ಕಾರಣಕ್ಕೂ ವಿಧುವಿಗೆ ನಾನು ಹೆಚ್ಚು ಅಂಕಗಳನ್ನು ನೀಡಿಲ್ಲ ಅವನು ಸ್ವಂತ ಶಕ್ತಿಯನ್ನು ಅನುಸಾರ ಅಂಕಗಳನ್ನು ಪಡೆಯುತ್ತಿದ್ದಾನೆ. ಅದರಲ್ಲಿ ನನ್ನ ಪಾತ್ರವಿಲ್ಲ ಎಂದು ತರಗತಿಯಲ್ಲಿ ವಿದ್ಯಾರ್ಥಿಗಳ ಎದುರಿಗೆ ಪ್ರಮಾಣ ಮಾಡಿಬಿಟ್ಟರು. ಬದುಕಿನಲ್ಲಿ ಗಟ್ಟಿತನವನ್ನು ರೂಡಿಸಿಕೊಂಡಿದ್ದ ವಿಧುವಿನ ಕಣ್ಣಿನ ಅಂಚಿನಲ್ಲಿ ನೀರು ಜಿನುಗಿತು. ಅವನ ಮನಸ್ಸಿನಲ್ಲಿ ಆ ಚಿತ್ರಣ ಅಚ್ಚಳಿಯದೇ ಉಳಿಯಿತು. 
                    ನನ್ನ ಮೇಲೆ ಇದ್ದ ದ್ವೇಷ ಗುರುಗಳ ಮೇಲೆ ತೀರಿಸಿ ಬಿಟ್ಟನಲ್ಲ ಎಂದು ಮನಸ್ಸಿನಲ್ಲೇ ಕೊರಗಿದನು. ಗುರುಗಳು ಪುಸ್ತಕ ಮುಟ್ಟಿ ಪ್ರಮಾಣಿಸುವ ಅಂತಾಯಿತಲ್ಲ ಎಂದು ದುಃಖಿಸಿದನು. ಕುಶಾಲ್ ಗೆ ವಿಧುವಿನ ಮೇಲೆ ಇದ್ದ ದ್ವೇಷಭಾವನೆ ಹೊರಜಗತ್ತಿಗೆ ಪ್ರಕಟಗೊಂಡಿತು. ಅಲ್ಲಿಗೆ ಕುಶಾಲ್ನ ನಾಟಕೀಯತೆ ಪೂರ್ಣಪ್ರಮಾಣದಲ್ಲಿ ತಿಳಿಯಿತು.  ಕುಶಾಲ್ ನ ಸ್ವಾರ್ಥ ಹಿತದ ಸ್ನೇಹ ತಿಳಿದು ವಿಧು ಸ್ನೇಹವನ್ನು ಅಂತ್ಯಗೊಳಿಸಿದನು. ಅಲ್ಲಿಗೆ ಕುಶಾಲ್ ಮೇಲೆ ಇದ್ದ ನಿಷ್ಕಲ್ಮಶವಾದ ಸ್ನೇಹ ಪ್ರೀತಿ ವಿಶ್ವಾಸ ಕಳೆದುಹೋಯಿತು. ವಿಧುವಿಗೆ ಸತ್ಯದ ಅರಿವಾಯಿತು. ಮನೆಯಲ್ಲಿ ಸಿಗದ ಪ್ರೀತಿ ವಿಶ್ವಾಸ ಸ್ನೇಹಿತನಲ್ಲಿ ಸಿಕ್ಕಿದೆ ಎಂದು ಅಂದುಕೊಂಡಿದ್ದ ವಿಧುವಿಗೆ ಸ್ನೇಹದ ಹೆಸರಿನಲ್ಲಿ ಮೋಸ ಹೋಗಿದ್ದ ಅವನಿಗೆ ಅವನ ಬಗ್ಗೆ ಜಿಗುಪ್ಸೆಯಾಯಿತು. ಲಾಭಕ್ಕಾಗಿ ಅನುಕೂಲತೆಗಾಗಿ ನೋಡಿ ಸಂಬಂಧಗಳನ್ನು ಬೆಳೆಸುತ್ತಾರೆ ಎಂಬುದನ್ನು ಮನಗಂಡನು. ನಿಜವಾದ ಸಂಬಂಧಗಳಿಗೆ ಬೆಲೆ ಇಲ್ಲ ಎಂಬ ಸತ್ಯದ ಅರಿವಾಯಿತು. ಸಂಬಂಧವೆಂಬುದು ಅನಿವಾರ್ಯತೆ , ಅವಶ್ಯಕತೆ ಮೇಲೆ ಮಾಡುವುದು ಎಂಬ ಸತ್ಯವನ್ನು ತಿಳಿದುಕೊಂಡನು. ಅಲ್ಲಿಂದ ಸಂಬಂಧಗಳ ಮೇಲಿನ......

Friday, October 9, 2020

ಹಿಂದುತ್ವದ ರಾಯಭಾರಿಗಳು ಯಾರು ?


ಹಿಂದುತ್ವ ಜಗತ್ತಿಗೆ ಪ್ರಕೃತಿಯೊಂದಿಗೆ ಬದುಕುವ ಪಾಠವನ್ನು ಹೇಳಿಕೊಟ್ಟ ಧರ್ಮ. ಅದು ಸನಾತನ ಹಿಂದುತ್ವ ಎಂಬ ಪದವೆ ಒಂದು ರೋಮಾಂಚನ ತನ್ನ ಸನಾತನ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ವಿಶ್ವದಲ್ಲೆಡೆ ಪಸರಿಸಿ ಭಾರತದ ಮಣ್ಣಿನ ಪರಂಪರೆಯನ್ನು ವಿಶ್ವಕ್ಕೆ ತಿಳಿಸಿದ ಧರ್ಮ. ಹಿಂದುತ್ವ ಪದದ ಮೂಲವನ್ನು ಹುಡುಕುತ್ತಾ ಹೊರಟರೆ ನಮಗೆ ಸಿಗುವುದು ಸಿಂಧೂ ನಾಗರಿಕತೆ, ಆ ನಾಗರಿಕತೆಯ ಫಲವೇ ಅನ್ಯ ಖಂಡಗಳ ಜನರು ಭಾರತದ ಭೂಭಾಗವನ್ನು ಸಿಂಧೂ ನಾಗರಿಕತೆಯ ನಾಡು ಎಂದು ಕರೆದದ್ದು. ಅದು ಕಾಲಕ್ರಮೇಣ ಜನಗಳ ಉಚ್ಚಾರ ಸ್ಥಿತಿಯಲ್ಲಿ ಹಿಂದೂ ಆಯಿತು. ಹಿಂದೂ ಧರ್ಮಕ್ಕೆ ಆದಿಯಾಗಲಿ ಅಂತ್ಯವಾಗಲಿ ಇಲ್ಲ ಅದು ಸನಾತನ. ಸನಾತನ ಎಂದರೆ  ಅಂತ್ಯವಿಲ್ಲದ್ದು ಎಂದು ಅರ್ಥ. ಹಿಂದೂ ಪದ ಹುಟ್ಟುವುದಕ್ಕಿಂತ ಮೊದಲೇ ನಮ್ಮ ಇಂದಿನ ದಿನಮಾನದಲ್ಲಿ ಕರೆಯುವ ಹಿಂದೂ ಸಂಪ್ರದಾಯದ ರೀತಿ-ರಿವಾಜುಗಳು ಅಸ್ತಿತ್ವದಲ್ಲಿದ್ದವು.
            ಹಿಂದೂ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ. ಅದನ್ನು ಸನಾತನ ಎಂದು ಕೂಡ ಕರೆಯಬಹುದು.  ಅದು ಯಾರಿಂದಲೂ ಸ್ಥಾಪಿತವಾದ ಅಥವಾ ಯಾರದೋ ಮಾರ್ಗದರ್ಶನದಲ್ಲಿ ಮೂಡಿಬಂದ ಸಂಸ್ಕಾರ ಸಂಸ್ಕೃತಿ ಪರಂಪರೆಯಲ್ಲ .ಅದು ಪ್ರಾಕೃತಿಕವಾಗಿ ಪ್ರಕೃತಿಯೊಂದಿಗೆ ಹೊಂದಿಕೊಂಡು ಹೋಗುವ ಒಂದು ಜೀವನ ವಿಧಾನ. ಆ ಜೀವನ ವಿಧಾನ ಸಹಬಾಳ್ವೆ, ಸಮೃದ್ಧಿ ಹಾಗೂ ಶಾಂತಿಯನ್ನು ಬದುಕಿನೊಂದಿಗೆ ಜೋಡಿಸಿ ಕೊಟ್ಟಿದ್ದು .ಅದರ ಪರಿಣಾಮವೇ ಇಂದು ನಾವು ನಮ್ಮ ದೇಶದಲ್ಲಿ ವಿವಿಧತೆಯನ್ನು ಕಾಣಬಹುದು. ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯವಾಗಿರುವುದು. ಹಿಂದೂ ಸಂಸ್ಕೃತಿಯು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಂತೆ ಹೇಳಿಕೊಡುವ ಧರ್ಮ .ಅದೇ ಕಾರಣ ಇಂದು ಭಾರತದಲ್ಲಿ ವಿವಿಧ ಧರ್ಮದ ( ಮತದ ) ಜನರು ವಾಸಿಸಲು ಸಾಧ್ಯವಾಗಿರುವುದು. ಈ ಪರಂಪರೆ ಪ್ರಕೃತಿಯೊಂದಿಗೆ ಬದಲಾವಣೆಯಾಗುತ್ತಾ ಹೋಗಿದ್ದರ ಫಲವೇ ಇಂದು ಕೂಡ ತನ್ನ ಸಂಸ್ಕೃತಿಯನ್ನು ಹಾಗೂ ತನ್ನ ಇತಿಹಾಸವನ್ನು ಉಳಿಸಿಕೊಳ್ಳಲು ಹಿಂದೂ ಧರ್ಮಕ್ಕೆ ಸಾಧ್ಯವಾಗಿರುವುದು.
             ಇಂತಹ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಅನ್ಯ ಮತಗಳು ನಿರಂತರವಾಗಿ ಆಕ್ರಮಣ ನಡೆಸುತ್ತಾ ಸಂಸ್ಕೃತಿಯನ್ನು ನಾಶ ಮಾಡಲು ಅವಣಿಸುತ್ತಾ ಬಂದರು ಏನು ಮಾಡಲು ಸಾಧ್ಯವಾಗಿಲ್ಲ ಕಾರಣ ಹುಡುಕುತ್ತ ಹೊರಟರೆ ನಮಗೆ ಸಿಗುವುದು ಹಿಂದುತ್ವವನ್ನು ಉಳಿಸಿಕೊಂಡು ಬರುತ್ತಿರುವ ಸಮಾಜ ಅಂದರೆ ಅದನ್ನು ವಾಸ್ತವದ ರೂಪದಲ್ಲಿ ಅನುಷ್ಠಾನಕ್ಕೆ ತಂದು ಅದರೊಟ್ಟಿಗೆ ಬದುಕನ್ನು ನಡೆಸುತ್ತಿರುವ ಸಾಮಾನ್ಯ ಜನರಿಂದ ಇಂದು ಹಿಂದೂ ಧರ್ಮವು ಉಳಿದಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ನಾವು ಹಿಂದೂ ಧರ್ಮದ ರಾಯಭಾರಿಗಳು ಎನ್ನುವಂತೆ ಬಿಂಬಿಸಿಕೊಂಡು ಧರ್ಮವನ್ನೇ ಹೈಜಾಕ್ ಮಾಡಿ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಂಡು ನಮ್ಮ ದೇಶವನ್ನು ಆಳುತ್ತಿರುವ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆ. ಯಾವುದೇ ರಾಜಕೀಯ ಪಕ್ಷದಿಂದ ಧರ್ಮ ಉಳಿಯಲಾರದು ಏಕೆಂದರೆ ರಾಜಕೀಯ ಪಕ್ಷ ಹುಟ್ಟುವ ಮೊದಲೇ ಹಿಂದೂ ಧರ್ಮವು ಅಸ್ತಿತ್ವದಲ್ಲಿತ್ತು .ಮುಂದಿನ ದಿನಗಳಲ್ಲಿ ಹಿಂದುತ್ವದ ಹೆಸರನ್ನು ಹೇಳಿಕೊಂಡು  ಅಧಿಕಾರಕ್ಕೆ ಬರುವ ರಾಜಕೀಯ  ಪಕ್ಷ ಇಲ್ಲದಿದ್ದರೂ  ಹಿಂದುತ್ವ ಉಳಿಯುತ್ತದೆ. ಆದಿ-ಅಂತ್ಯ ಇಲ್ಲದ್ದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಇಂದಿಗೂ ನಿಜವಾದ ಹಿಂದುತ್ವದ ರಾಯಭಾರಿಗಳು ಸಾಮಾನ್ಯ ಜನರೇ. ಹಿಂದುತ್ವವು ರಾಜಕೀಯ ವಿಚಾರವಾಗದೆ ಸಾಮಾನ್ಯ ಜನರೊಳಗೆ ಶಾಶ್ವತವಾಗಿ ಉಳಿಯಲಿ.

Sunday, October 4, 2020

ಪ್ರೇಮದ ಅನ್ವೇಷಣೆ ಭಾಗ - 16


ನನಗೆ ಪ್ರೀತಿ ತೋರದ ತಂದೆ-ತಾಯಿ ಸಿಗದಿದ್ದರೂ ಪರವಾಗಿಲ್ಲ ಪ್ರೀತಿ ಹಾಗೂ ಕಾಳಜಿ ತೋರುವ ಸ್ನೇಹಿತ ಸಿಕ್ಕಿದನಲ್ಲ ಎಂಬುದೇ ದೊಡ್ಡ ವಿಷಯವಾಗಿತ್ತು. ಆದರೆ ಅವನ ಮನಸ್ಸಿನಲ್ಲಿ ಪ್ರೀತಿಯ ಹಿಂದೆ ಇದ್ದ ದ್ವೇಷ, ಕಾಳಜಿ ಹಿಂದೆ ಇದ್ದ ಸ್ವಾರ್ಥ ಅವನ ನಾಟಕೀಯತೆಯ ಪ್ರೀತಿ ಮತ್ತು ಕಾಳಜಿ ತಿಳಿದು ವಿಧುವಿಗೆ ದೊಡ್ಡ ಆಘಾತವಾಯಿತು. ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಇದ್ದ ವಿಧುವಿನ ಏಳಿಗೆ ಸಹಿಸದ ಕುಶಾಲ್ ವಿಧುವಿನ ಜೊತೆಗಾರರಿಗೆ ಮತ್ತು ಕಾಲೇಜಿನ ಸಹಪಾಠಿಗಳಿಗೆ ಇಲ್ಲದ ವಿಷಯಗಳನ್ನು ಹೇಳಿ ವಿಧುವಿನ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದ ಕುಶಾಲ್ ಮೇಲೆ ಅತಿಯಾದ ನಂಬಿಕೆ ಇಟ್ಟಿದ್ದ ಅವನಿಗೆ ತಿಳಿಯದಂತೆ ಅವನ ವಿರುದ್ಧ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ. ಕುಶಾಲ್ ನ ಮೋಸದ ಹರಿವು ನಿಧಾನವಾಗಿ ತಿಳಿಯಲು ಪ್ರಾರಂಭಿಸಿದ ಕೂಡಲೆ ಅವನಿಂದ ಅಂತರವನ್ನು ಕಾಯ್ದುಕೊಳ್ಳಲು ಆರಂಭಿಸಿದ. ವಿಧು ಉತ್ತಮವಾಗಿ ಓದಬೇಕು ಎಂಬ ಏಕಮಾತ್ರ ಉದ್ದೇಶದಿಂದ ಕಾಲೇಜು ಸೇರಿದ್ದರಿಂದ ಅವನ ಮುಂದೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡುವುದಷ್ಟೇ  ಆಯ್ಕೆಯಾಗಿತ್ತು. ತನ್ನ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಹಂಬಲ ಅವನಲ್ಲಿತ್ತು. ಅದರ ಅನಿವಾರ್ಯತೆ ಅವನಿಗಿತ್ತು. ಹಾಗಾಗಿ ವಿದ್ಯಾಭ್ಯಾಸದ ಕಡೆ ಪೂರ್ತಿಯಾಗಿ ಗಮನಹರಿಸಲು  ಉತ್ತಮ ಅಂಕ ಬರಲು ಶುರುವಾಯಿತು. ವಿಧುವಿನ ನಿರೀಕ್ಷೆ ಇಲ್ಲದೆ ತರಗತಿಗೆ ಮೊದಲನೆಯವನಾಗಿ ಬಂದ. ಅದನ್ನು ಸ್ನೇಹಿತ ಎನಿಸಿಕೊಂಡಿದ್ದ ಕುಶಾಲ್ ಗೆ ತಡೆಯಲಾಗಲಿಲ್ಲ ಎಂಬ ಸತ್ಯದ ಅರಿವಾದಾಗ ವಿಧುವಿಗೆ ಆಘಾತವಾಯಿತು. ಅವನನ್ನು ನೇರವಾಗಿ ಎದುರಿಸಲು ಆಗದ ಕುಶಾಲ್ ಬೇರೆ ರೀತಿಯಲ್ಲಿ ಅವನ ಏಳಿಗೆಯನ್ನು ತಡೆಯಬೇಕೆಂದು ಸಹಪಾಠಿಗಳಿಂದ ಯಾವುದೇ ರೀತಿಯ ಶೈಕ್ಷಣಿಕ ಸಹಕಾರ ಸಿಗದಂತೆ ಮಾಡಬೇಕು ಎಂಬ ದೃಷ್ಟಿಕೋನದಲ್ಲಿ ಯೋಚಿಸಿ ಅವನಿಗೆ ಅರ್ಥವಾಗದ ಪಾಠವನ್ನು ಹೇಳಿಕೊಡುವ ಹುಡುಗರಿಗೆ ಪಾಠವನ್ನು ಹೇಳಿಕೊಡಬೇಡಿ ಎಂದು ತಾಕಿತು ಮಾಡುತ್ತಿದ್ದ .
          ಆದರೂ ವಿಧುವಿನ ಸಹಪಾಠಿಗಳು ವಿದ್ಯಾಭ್ಯಾಸದ ವಿಚಾರಗಳನ್ನು ಹೇಳಿಕೊಡುತ್ತಿದ್ದರು. ಕುಶಾಲ್ನ ಒತ್ತಡ ಹೆಚ್ಚಿದ ಮೇಲೆ ಈ ವಿಚಾರವನ್ನು ವಿಧುವಿಗೆ ತಿಳಿಹೇಳಿದರು. ಅವನು ಎರಡನೆಯ ಬಾರಿಯೂ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿದರು ಫಲವಾಗಿ ತರಗತಿಗೆ ಮೊದಲನೆಯವನಾಗಿ ಬಂದ. ಅಷ್ಟರಲ್ಲಾಗಲೇ ಕಾಲೇಜಿನಲ್ಲಿ ಉತ್ತಮ ಸಹಪಾಠಿಗಳನ್ನು ಎಲ್ಲ ವಿಭಾಗಗಳಲ್ಲಿ ಸಂಪಾದಿಸಿದ್ದ ವಿಧು ಎಲ್ಲ ವಿಭಾಗಗಳಿಗೆ ಚಿರಪರಿಚಿತನಾಗಿದ್ದ. ಡಿಪ್ಲೋಮೋ ತರಗತಿಯ ಮೂರನೇ ವರ್ಷಕ್ಕೆ ಕಾಲಿಟ್ಟಾಗ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯುವ ಚರ್ಚೆಗಳು ಆರಂಭವಾದವು. ಎಲ್ಲಾ ವಿಭಾಗದ ಸ್ನೇಹಿತರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರಿಂದ ವಿಧುವಿಗೆ ಚುನಾವಣೆಗೆ ನಿಲ್ಲುವಂತೆ ಒತ್ತಡ ಬರುತ್ತಿತ್ತು. ಆದರೆ ಅವನಿಗೆ ಯಾವುದೇ ಚುನಾವಣೆ ಬೇಡವಾಗಿತ್ತು. ಏಕೆಂದರೆ ಅವನ ಉದ್ದೇಶ ಓದುವುದರ ಮುಖಾಂತರ ಡಿಪ್ಲೋಮಾ ಮುಗಿಸಿ ಹೋಗುವುದಾಗಿತ್ತು. ಅದೇ ಸಮಯದಲ್ಲಿ ಕುಶಾಲ್ ವಿಧುವಿನ ಹತ್ತಿರ ಸಹಾಯ ಕೇಳಿಕೊಂಡು ಬಂದ, ಅವನು ಉದ್ದೇಶವಿದ್ದು ವಿಧವನ್ನು ಹಿಡಿದರೆ ವೋಟು ತೆಗೆದುಕೊಳ್ಳಲು ಅನುಕೂಲ ಆಗಬಹುದು ಎಂಬುದು ಅವನ ಲೆಕ್ಕಾಚಾರವಾಗಿತ್ತು. ಇದನ್ನು ಅರಿಯದ ವಿಧು ಸ್ನೇಹಿತ ಸಹಾಯ ಕೇಳಿಬಂದಾಗ ಸಹಾಯ ಮಾಡುವುದು ನಿಜ ಸ್ನೇಹಿತನ ಲಕ್ಷಣವೆಂದು ಅವನ ಚುನಾವಣೆಗೆ ಸಹಾಯ ಮಾಡಲು ಒಪ್ಪಿದ. ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕುಶಾಲ್ ನ ಗೆಲುವಿಗೆ ಪ್ರಮುಖ ಕಾರಣನಾದ. ಕುಶಾಲ್ ಗೆಲ್ಲುವೆ ವಿಧುವಿಗೆ ಮುಳುವಾಗಿ ಕಾಡಿತು. ಕುಶಾಲ್ ನ ಇತರೆ ಸ್ನೇಹಿತರೆ ಅವನನ್ನು ಸೋಲಿಸಲು ಸಿದ್ಧವಿದ್ದ ಪರಿಸ್ಥಿತಿಯಲ್ಲಿ ಅವರನ್ನೆಲ್ಲ ಸಂಬಾಳಿಸಿ ಕುಶಾಲ್ ಗೆಲುವಿಗೆ ಕಾರಣನಾದ, ಕುಶಾಲ್ ತನ್ನ ಬುದ್ಧಿಯನ್ನು ಚುನಾವಣೆಯಲ್ಲಿ ಗೆದ್ದ ಮರುದಿನದಿಂದಲೇ ತೋರಿಸಲು ಶುರು ಮಾಡಿದ. ಚುನಾವಣೆಯಲ್ಲಿ ಗೆದ್ದ ಮರುದಿನ ಸಿಹಿ ಹಂಚುವ ಸಮಯದಲ್ಲಿ ಕುಶಾಲ್ ಗೆ ಕೇಡು ಬಯಸಿದವರನ್ನ ವೇದಿಕೆಯ ಮೇಲೆ ಕರೆದು ವಿಧವನ್ನು ಕರೆಯದಂತೆ ಅವಮಾನಿಸಿ ಬಿಟ್ಟ........

Friday, October 2, 2020

ಬಿಜೆಪಿ ಹೊರತಾದ ಹಿಂದೂ ರಾಷ್ಟ್ರೀಯವಾದದ ಪಕ್ಷದ ಅವಶ್ಯಕತೆ ಈ ದೇಶಕ್ಕೆ ಇದೆಯೇ ?

ಭಾರತದ ಭವ್ಯ ಪರಂಪರೆಗೆ ಕಾರಣ, ಈ ನೆಲದ ಮಣ್ಣಿನ ಗುಣವಾದ ಪ್ರಾಕೃತಿಕ ಸೊಬಗಿನ ಸಂಸ್ಕೃತಿ .ಭಾರತ ವಿಶ್ವಕ್ಕೆ ಬದುಕನ್ನು ಹೇಳಿಕೊಟ್ಟ ದೇಶ. ವಿವಿಧತೆಯಲ್ಲಿ ಏಕತೆಯನ್ನು ಅನಾದಿಕಾಲದಿಂದಲೂ ರೂಢಿಸಿಕೊಂಡು ಬಂದ, ವಿಶ್ವಕ್ಕೆ ಸಹಬಾಳ್ವೆಯ ಮಹತ್ವವನ್ನು ಸಾರಿದ, ವಿಶ್ವವೇ ಒಂದು ಮನೆಯೆಂದು ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯವನ್ನು ಕೊಟ್ಟ ದೇಶ. ಇಂತಹ ದೇಶದ ರಾಜಕೀಯ ಇತಿಹಾಸ ಇಂದು ನೆನ್ನೆಯದಲ್ಲ ಅದಕ್ಕೆ ಅದರದೇ ಆದ ಅಮೋಘ ಇತಿಹಾಸವಿದೆ. ರಾಮಾಯಣ ಕಾಲದಿಂದ ಆರಂಭವಾಗಿ ಮಹಾಭಾರತದಿಂದ ಇಂದಿನ  ಕಲಿಯುಗದಲೂ ತನ್ನದೇ ರಾಜಕೀಯ ಇತಿಹಾಸ ಇರುವ ದೇಶ ಯಾವುದಾದರೂ ಇದ್ದರೆ ? ಅದು ಭಾರತ ಮಾತ್ರ . ಭಾರತವು ಇಂದಿನವರೆಗೆ ಪ್ರೌಢತೆಯ ಪ್ರಬುದ್ಧತೆಯ ರಾಜಕೀಯ ಆಡಳಿತವನ್ನು ಮಾಡಿಕೊಂಡು ಬಂದ ದೇಶ. ಈ ದೇಶವನ್ನು ಇದುವರೆಗೂ ಯಾರೂ ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಲಾಗಲಿಲ್ಲ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು ? ಅದಕ್ಕೆ ಉತ್ತರ ನಮ್ಮ ಭೂತಾಯಿಯ ಆತ್ಮವೇ ಈ ನಮ್ಮ ಭಾರತ ದೇಶ. ಆತ್ಮವಿಲ್ಲದ ದೇಹ ಹೇಗೆ ಕಾರ್ಯಾಚರಿಸುವುದು ಇಲ್ಲವೋ ಅದೇ ರೀತಿ ಭಾರತದ ಬೆಳಕಿಲ್ಲದೆ ವಿಶ್ವವು ಉನ್ನತಿಗೆ ಹೋಗಲು ಸಾಧ್ಯವಿಲ್ಲ. ಭಾರತವು ಪ್ರಕೃತಿಯೊಂದಿಗೆ ಬೆರೆತ ದೇಶ ಪ್ರಕೃತಿಯ ಒಂದು ಭಾಗವೂ ಹೌದು. ಪ್ರಕೃತಿ ಬಯಸುವುದು ಧರ್ಮವನ್ನು, ಧರ್ಮವೆಂದರೆ ಪ್ರಕೃತಿಯೊಂದಿಗೆ ಕೂಡಿಬಾಳುವ ಒಂದು ಅನುಬಂಧ. ಅದೇ  ಸಂಸ್ಕೃತಿಯೇ ಮುಂದೆ ಧರ್ಮವಾಯಿತು.
                ಈ ಅನುಬಂಧ ಏರುಪೇರಾದರೆ ಈ ಪುಣ್ಯಭೂಮಿಯು ತನ್ನ ಸೇವಕರನ್ನು ತನ್ನ ನೆಲದ ಮೇಲೆ ಕರೆಸಿಕೊಳ್ಳುತ್ತದೆ. ಹಾಗೆಯೇ ನಮ್ಮ ದೇಶಕ್ಕೆ ಅವನತಿ ಬಂದಾಗ ಒಬ್ಬರ ಅಧಿಪತ್ಯ ಸಾಧಿಸುವಂತಹ ಪ್ರಸಂಗಗಳು ಎದುರಾದಾಗ ಪರ್ಯಾಯ ನಾಯಕರುಗಳು ಬರುತ್ತಾರೆ. ಹಾಗೆಯೇ ಇತಿಹಾಸ ನೋಡಿಕೊಂಡು ಹೋದಾಗ ನಮಗೆ ಹಲವಾರು ಉದಾಹರಣೆಗಳು ಸಿಗುತ್ತವೆ. ಹಿಂದುತ್ವ ಅವನತಿಯ ಹಾದಿ ಹಿಡಿಯುವ ಸಮಯದಲ್ಲಿ ಆಧ್ಯಾತ್ಮಿಕ ಕ್ರಾಂತಿಗಳು ಆಗಿದ್ದುಂಟು. ಅದಕ್ಕೆ ಉತ್ತಮ ಉದಾಹರಣೆ  ಶಂಕರಾಚಾರ್ಯರು ಸನಾತನ ಧರ್ಮವನ್ನು ಮತ್ತೆ ಉಳಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡಿದ್ದು. ಉತ್ತರಭಾರತದಲ್ಲಿ ಮುಸಲ್ಮಾನರ ದಾಳಿಗಳ ಆದಾಗ ದಕ್ಷಿಣ ಭಾರತದಲ್ಲಿ ನಾರಾಯಣಗುರು ಅವರ ಮುಖಾಂತರ ಆಧ್ಯಾತ್ಮಿಕ ಕ್ರಾಂತಿಯಾಗಿದ್ದು ಉಂಟು. ಒಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಈ ಮಣ್ಣಿನ ಗುಣಲಕ್ಷಣ. ಅದೇ ಕಾರಣ ಇಂದಿನವರೆಗೂ ಈ ದೇಶದಲ್ಲಿ ಯಾರಿಗೂ ಸರ್ವಾಧಿಕಾರಿಯಾಗಿ ಮರೆಯಲು ಸಾಧ್ಯವಾಗಿಲ್ಲ.
                 ಸ್ವಾತಂತ್ರ ಭಾರತದ ನಂತರ ದೇಶವು ಸಂಸ್ಕೃತಿಯ ಹೊರತಾಗಿ ರಾಜಕೀಯ ಧರ್ಮದ ( ಅಂದರೆ ರಾಜಕೀಯ ಸ್ವಾರ್ಥವನ್ನು ಇಟ್ಟುಕೊಂಡು ವೋಟ್ ಬ್ಯಾಂಕಿಗಾಗಿ ಹೆಸರಿಸುವ ಧರ್ಮ ) ವಿಚಾರವಾಗಿ ದೇಶ ಇಬ್ಭಾಗವಾಗಿ ಹೋಯಿತು. ಪಾಕಿಸ್ತಾನ ಮುಸಲ್ಮಾನರ ದೇಶವಾಗಿ ಭಾರತವು ಅರ್ಥವಿಲ್ಲದ ಪದವಾದ ಸೆಕ್ಯುಲರ್ ದೇಶವಾಗಿ ಹೊರಹೊಮ್ಮಿದಾಗ ಸಹಜವಾಗಿ ಹಿಂದುಗಳ ಸಹನೆಯ ಕಟ್ಟೆ ಒಡೆಯಿತು. ಅದರ ಫಲವೇ ಮುಂದಿನ ದಿನಗಳಲ್ಲಿ ಬಂದ ಜನ ಸಂಘ. ಜನ ಸಂಗವು ರೂಪಾಂತರಗೊಂಡು ಭಾರತೀಯ ಜನತಾ ಪಾರ್ಟಿ ಯಾಗಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಅದು ಯಾವ ಹೆಸರಿನಲ್ಲಿ ಅಧಿಕಾರ ಹಿಡಿಯಿತೋ ಅದರ ಮೂಲ ಸತ್ವವನ್ನೇ ಮರೆತುಬಿಟ್ಟಿತು. ಹಿಂದುತ್ವಕ್ಕೆ ಪೂರಕವಾದ ಯಾವ ಕೆಲಸಗಳು ಆಗಲಿಲ್ಲ. ಮತ್ತೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನು ಕಂಡಿತು. ಆನಂತರ ವಿದೇಶಿ ಮಹಿಳೆ ನಮ್ಮ ಭಾರತ ಭೂಮಿಯನ್ನು ಅನ್ಯಮಾರ್ಗದಿಂದ ಆಳಿದರು. ಅದರ ಪ್ರತಿಫಲ ಎನ್ನುವಂತೆ ದೇಶವು ಅವನತಿ ಹಾದಿಯನ್ನು  ಹಿಡಿಯಿತು. ಕಾಲಕಳೆದಂತೆ ಹಿಂದುತ್ವದ ಆದರ್ಶಗಳು ಕ್ರಮೇಣ ಕಡಿಮೆಯಾಗುತ್ತಾ ಹೋಯಿತು. ಪಕ್ಷಕ್ಕಾಗಿ ಹಗಲು ಇರುಳು ಎನ್ನದೆ ದುಡಿದ ಕಾರ್ಯಕರ್ತರು, ನಾಯಕರು ನೈಪಥ್ಯಕ್ಕೆ ಸರಿದರು. ಅನ್ಯ ಪಕ್ಷಗಳಿಂದ ಬಂದು ಬಿಜೆಪಿಯಲ್ಲಿ ಅಧಿಕಾರ ಅನುಭವಿಸುತ್ತಿರುವವರು ಒಂದು ಕಾಲದಲ್ಲಿ ಬಿಜೆಪಿಯ ನಿಷ್ಠಾವಂತರಿಗೆ ನೋವು ಕೊಟ್ಟವರೇ. ನಿಸ್ವಾರ್ಥದಿಂದ ದುಡಿದವರನ್ನು ಬಿಜೆಪಿ ಮರೆಯಿತು. ಜಾತಿ ಆಧಾರದ, ಸ್ವಜನಪಕ್ಷಪಾತದ, ಹಿಂಬಾಲಕರಿಗೆ ಮಣೆ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಜನಸಂಘದ ಧ್ಯೇಯಗಳು ಬಿಜೆಪಿಯಲ್ಲಿ ಉಳಿದಿಲ್ಲ ಎಲ್ಲವೂ ಬರೀ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ.
                  ಇಂದು ಬಿಜೆಪಿಯಲ್ಲಿ ನೈತಿಕತೆ ಕಡಿಮೆಯಾಗಿರುವ ಪರಿಣಾಮ ಕೆಲವರು ಬಿಜೆಪಿ ಬಿಡಲು ಸಿದ್ಧರಿದ್ದರು ಅವರಿಗೆ ಹಿಂದೂ ರಾಷ್ಟ್ರೀಯವಾದದ ನೆಲೆಗಟ್ಟಿನ ಪಕ್ಷ ಸಿಗುತ್ತಿಲ್ಲ. ಹಿಂದೂ ರಾಷ್ಟ್ರೀಯವಾದ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿ ಭಾರತದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ಅಧಿಕಾರದಲ್ಲಿದ್ದರು ಭಾರತವನ್ನು ಹಿಂದು ರಾಷ್ಟ್ರವೆಂದು ಘೋಷಿಸುತ್ತಿಲ್ಲ. ಇದು ಬಿಜೆಪಿಯ ದ್ವಂದ್ವ ನಿಲುವನ್ನು ತೋರಿಸುತ್ತದೆ. ಅದರ ಹಿಂದುತ್ವದ ಅಜೆಂಡಾ ಬರಿ ವೋಟ್ ಬ್ಯಾಂಕಿಗಾಗಿ ಸೀಮಿತವಾಗಿದೆ. ಇನ್ನೂ ಅದರ ಆರ್ಥಿಕ ನೀತಿಯಲ್ಲಿನ ಅಸಮತೋಲನ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ. ಅದನ್ನು ಪ್ರಶ್ನಿಸುವ ಗಟ್ಟಿ ದ್ವನಿ ಸಂಸತ್ತಿನಲ್ಲಿ ಇಲ್ಲದಂತಾಗಿದೆ. ಅದರ ವೈಫಲ್ಯಗಳನ್ನು ಹೇಳಿದರೆ ಅದು ಹಿಂದುತ್ವ ಎಂಬ ಅಸ್ತ್ರವನ್ನು ಪ್ರಯೋಗಿಸುತ್ತಿದೆ. ಬಿಜೆಪಿಯ ವಿರುದ್ಧ ಮಾತನಾಡಿದರೆ ಅದು ದೇಶ ವಿರುದ್ಧ ಮಾತನಾಡಿದಂತೆ ಎಂದು ಬಿಂಬಿಸಲಾಗುತ್ತಿದೆ. ಅದನ್ನು ಪ್ರಶ್ನಿಸುವ ದೇಶದ ಪರವಾಗಿ ಹೋರಾಡುವ ಇನ್ನೊಂದು ಹಿಂದೂ ರಾಷ್ಟ್ರೀಯವಾದದ ಪಕ್ಷದ ಅವಶ್ಯಕತೆ ಈ ದೇಶದಲ್ಲಿ ಬಹಳ ಇದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾಗಿದೆ. ಹಿಂದುತ್ವವೆಂಬುದು ಬಿಜೆಪಿ ಬರುವುದಕ್ಕಿಂತಲೂ ಮೊದಲೇ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ..... ಏಕೆಂದರೆ ಹಿಂದುತ್ವ ಸನಾತನ ಹಾಗೂ ಅನಂತ.....

Wednesday, September 30, 2020

ಪ್ರೇಮದ ಅನ್ವೇಷಣೆ ಭಾಗ-15


ಕುಶಾಲ್ ತನ್ನ ಪ್ರೀತಿಯ ಸಮಸ್ಯೆಗಳನ್ನು ಹೇಳಿಕೊಳ್ಳಲು ಶುರುಮಾಡಿದ. ವಿಧುವಿಗೆ ಹದಿಹರೆಯದ ಪ್ರೀತಿಯ ಮೇಲೆ ನಂಬಿಕೆ ಇಲ್ಲದ ಕಾರಣ ಕುಶಾಲ್ ನ ಕಥೆಯನ್ನು ಕೇಳಲು ಮೊದಲು ನಿರಾಸಕ್ತಿ ತೋರಿದರು ಪ್ರೀತಿಸಿದ ಹುಡುಗಿಯ ಬಗ್ಗೆ ಕಣ್ಣೀರು ಹಾಕುತ್ತ ಹೇಳಿದಾಗ ಅಯ್ಯೋಪಾಪ ಕೇಳಬೇಕು ಅನಿಸಿತು. ಇದುವರೆಗೂ ಹುಡುಗರು ಹುಡುಗಿಯರಿಗೆ ಮೋಸ ಮಾಡುತ್ತಾರೆ ಎಂದು ಬಲವಾಗಿ ನಂಬಿದ್ದ ವಿಧುವಿಗೆ ಹುಡುಗಿಯರು ಹುಡುಗರಿಗೆ ಮೋಸ ಮಾಡುತ್ತಾರೆ ಎಂಬುದನ್ನು ಮನಗಂಡನು. ಹುಡುಗಿಯರು ಎಂದರೆ ಬರಿ ಒಳ್ಳೆಯವರು ಇರುತ್ತಾರೆ ಎಂದು ತಿಳಿದವನಿಗೆ ಮೊದಲ ಬಾರಿಗೆ ಕೆಟ್ಟವರು ಇರುತ್ತಾರೆ ಎಂಬ ಸತ್ಯದ ಅರಿವಾಯಿತು.  ಒಬ್ಬ ನಿಜ ಸ್ನೇಹಿತನಾಗಿ ಅವನಿಗೆ ಸಮಾಧಾನ ಹೇಳುತ್ತಿದ್ದ. ರಾತ್ರಿ 2:00 3:00ರ ಸಮಯದಲ್ಲಿ ವಿಧುವಿಗೆ ಫೋನ್ ಮಾಡಿ ಅತ್ತಿದ್ದೂ ಉಂಟು. ಸ್ನೇಹಿತನ ನೋವನ್ನು ತನ್ನದೆಂದು ಭಾವಿಸಿದವನು ಪ್ರತಿಬಾರಿ ಸಮಾಧಾನ ಹೇಳುವುದು ಸಾಮಾನ್ಯವಾಗಿಬಿಟ್ಟಿತು. ರಾತ್ರಿ ಹೊತ್ತು ಮಾತನಾಡುತ್ತಿದ್ದ ವಿಧುವಿನ ಮೇಲೆ ಅವನ ತಂದೆ-ತಾಯಿ ಅನುಮಾನಿಸಿದ್ದು ಉಂಟು. ಅವರಿಂದ ಚುಚ್ಚು ಮಾತುಗಳನ್ನು ಕೇಳುತ್ತಿದ್ದ ಆದರೂ ಸ್ನೇಹಿತನ ಕಣ್ಣಿನಿಂದ ಬರುವ ನೀರನ್ನು ತಡೆಯುವ ಉದ್ದೇಶದಿಂದ ಆ ನೋವನ್ನು ಅನುಭವಿಸಿದನು. ನಿಧಾನವಾಗಿ ಅವರಿಬ್ಬರ ಸ್ನೇಹ ಬಲವಾಗುತ್ತ ಹೋಯಿತು.
             ಕುಶಾಲ್ ಪ್ರೀತಿಸಿದ ಹುಡುಗಿಯ ಸಂಬಂಧವು ಮುರಿದುಬಿತ್ತು. ಆ ಸಂಬಂಧ ಮುರಿದು ಬಿದ್ದ ಕೆಲವೇ ದಿನಗಳಲ್ ಕುಶಾಲ್  ಬೇರೆ ಹುಡುಗಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾನೆ ಎಂದು ಬೇರೆಯವರಿಂದ ತಿಳಿದು ಆಶ್ಚರ್ಯವಾಯಿತು. ನೇರನುಡಿಯ ವಿಧು ಕುಶಾಲ್ ನನ್ನು ನೇರವಾಗಿಯೇ ಕೇಳಿಬಿಟ್ಟ. ನೀನು ಇತ್ತೀಚಿನ ದಿನಗಳಲ್ಲಿ ಯಾರನ್ನಾದರೂ ಪ್ರೀತಿಸುತ್ತಿದ್ದೀಯ ? ಬೇರೆಯವರಿಂದ ಮಾಹಿತಿ ಸಿಕ್ಕಿದೆ. ಅದು ನಿಜವೂ ಸುಳ್ಳೆಂದು ಹೇಳು ಎಂದ, ಕುಶಾಲ್ ಅದು ನಿಜವೆಂದ ವಿಧು ಅವಕ್ಕಾಗಿ ಬಿಟ್ಟ. ವಿಧು ಕುಶಾಲ್ ನಿನ್ನ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಸೃಷ್ಟಿಸಿ ಮಾತನಾಡುತ್ತಿದ್ದಾನೆ ಎಂದು ಅನ್ಯ ಸ್ನೇಹಿತರು ಹೇಳಿದಾಗ ನಂಬದವನು. ಈಗ ನಮ್ಮ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರೀತಿ ಎಂದರೆ ಅದೊಂದು ನಿರೀಕ್ಷೆಯಿಲ್ಲದ ಕಾಳಜಿ ,ಪರಸ್ಪರ ಗೌರವಯುತವಾಗಿ ನಡೆದುಕೊಳ್ಳುವುದು, ಪರಸ್ಪರ ಅರ್ಥಮಾಡಿಕೊಂಡು ಬದುಕನ್ನು ಪರಿಪೂರ್ಣ ಮಾಡಿಕೊಳ್ಳುವುದು ಎಂದು ನಂಬಿದ್ದ ವಿಧುಗೆ ಕುಶಾಲಿನ ನಡೆ ಇಷ್ಟವಾಗಲಿಲ್ಲ . ಮೊದಲಿನಿಂದಲೂ ಕುಶಾಲ್ ಮೇಲೆ ಬೇರೆ ಸ್ನೇಹಿತರ ಆರೋಪವಿದ್ದರೂ ನಂಬದ ವಿಧು ಕಣ್ಣಮುಂದಿನ ಸತ್ಯವನ್ನು ನಂಬಲೇಬೇಕಾದ ಸ್ಥಿತಿ. ಬಟ್ಟೆ ಬದಲಿಸುವ ರೀತಿ ಸುಲಭವಾಗಿ ಪ್ರೀತಿಯನ್ನು ಬದಲಾಯಿಸುತ್ತಿದ್ದಾನಲ್ಲ. ಇವನು ನಿಜವಾಗಿಯೂ ಪ್ರೀತಿಸಿದ್ದನ್ನ ಎಂಬ ಪ್ರಶ್ನೆ ? ಅದು ಪ್ರೀತಿ ಮುರಿದು ಬಿದ್ದ ಕೇವಲ ಒಂದು ತಿಂಗಳ ಒಳಗಾಗಿ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂದರೆ ಏನರ್ಥ ? ಇವನಿಗೂ ನನ್ನ 11ನೇ ತರಗತಿಯ ಸಹಪಾಠಿಯಾದ ಹುಡುಗಿಯನ್ನು ಪ್ರೀತಿಸಿ ಮೋಸ ಮಾಡಿದವನಿಗೂ ವ್ಯತ್ಯಾಸವಿಲ್ಲ. ಇವನದು ಏನಿದ್ದರೂ ದೈಹಿಕ ಆಕರ್ಷಣೆಯ ಪ್ರೀತಿ ಎಂಬುದು ಅರಿವಾಯಿತು. ಅವನಿಂದ ಅಂತರವನ್ನು ಕಾಯ್ದುಕೊಳ್ಳಲು ನಿಶ್ಚಯಿಸಿ ಇವನಿಂದ ದೂರಸರಿಯುವುದು ಲೇಸೆಂದು ನಿಧಾನವಾಗಿ ಅವನಿಂದ ದೂರ ಇರಲು ಪ್ರಯತ್ನಿಸಿದ. ಆದರೆ ಅದಾಗಲೇ ಅವರಿಬ್ಬರ ಸ್ನೇಹ ಗಾಢವಾಗಿತ್ತು. ಕುಶಾಲ್ ಅಷ್ಟು ಸುಲಭವಾಗಿ ವಿಧುವನ್ನು ಬಿಡಲು ಸಿದ್ಧ ಇರುವವನಂತೆ ಕಾಣುತ್ತಿರಲಿಲ್ಲ. ಏಕೆಂದರೆ ಅವನದು ಪಕ್ಕಾ ಲೆಕ್ಕಾಚಾರದ ಸಂಬಂಧ ಎನ್ನುವುದು ತಿಳಿಯಲು ತುಂಬಾ ಸಮಯ ಹಿಡಯಿತು. ಕುಶಾಲ್ ಮಾತನ್ನು ನಂಬುತ್ತಿದ್ದ ವಿಧುವನ್ನು ಕುಶಾಲ್ ಮಾತಿನ ಮೂಲಕ ಕಟ್ಟಿ ಹಾಕುತ್ತಿದ್ದ .ಕುಶಾಲ್ ನಾಯವಾದ ಮಾತಿನ ಹಿಂದಿರುವ ಲೆಕ್ಕಚಾರದ ಮೋಸವನ್ನು ಅರಿಯಲು ಯಾವಾಗಲೂ ವಿಫಲನಾಗುತ್ತಿದ ಏಕೆಂದರೆ ಅವನದು ನಿಷ್ಕಲ್ಮಶ ಸ್ನೇಹ....

Monday, September 28, 2020

ಕೃಷಿ ವಿಧೇಯಕ 2020: ಮರಣಶಾಸನ ಆಗದಿರಲಿ ರೈತರ ಬದುಕು.


ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾ ಹಳ್ಳಿ ಇಂದ ರಾಜಕಾರಣವನ್ನು ಶುರುಮಾಡಿ ದಿಲ್ಲಿ ಗದ್ದುಗೆಯನ್ನು ಹಲವರು ಏರಿದರು. ನಾವು ಯಾರಿಂದ ಆಯ್ಕೆ ಆದೆವು ಎನ್ನುವುದನ್ನೇ ಮರೆತು ಬಿಟ್ಟರು. ರೈತ ಮಾತ್ರ ವೋಟ್ ಬ್ಯಾಂಕ್ ಆಗಿ ಉಳಿದುಬಿಟ್ಟ. ಸ್ವಾತಂತ್ರ್ಯ ಬಂದಾಗಿನಿಂದಲೂ ಅವನು ಹೇಳಿಕೊಳ್ಳುವಂತಹ ಪ್ರಗತಿಯನ್ನು ಕಾಣಲಿಲ್ಲ . ರೈತ ಹೋರಾಟದ ಆದಿಯನ್ನು ತಿಳಿಯಲಿಲ್ಲ ತನ್ನ ಪಾಡಿಗೆ ತಾನು ಲೋಕಕ್ಕೆ ಅನ್ನವನ್ನು ನೀಡುವ ಕಾಯಕವನ್ನು ಮಾಡಿಕೊಂಡು ಬದುಕುತ್ತಿದ್ದ. ಕಾಲ ಬದಲಾದಂತೆ ರೈತ ವೋಟ್ ಬ್ಯಾಂಕ್ ಆದಕಾರಣ ರೈತ ಸಂಘಟನೆಗಳು ಹುಟ್ಟಿಕೊಂಡವು. ರೈತ ಚಳುವಳಿಯ ಬಿಸಿ ಏರುತ್ತಿದ್ದಂತೆ ಅದರೊಳಗೆ ರಾಜಕೀಯ ಮೆತ್ತಿಕೊಂಡು ರಾಜಕೀಯ ಶಕ್ತಿಗಳು ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಸಂಘಟನೆಗಳನ್ನು ಅಸ್ತ್ರವಾಗಿ ಉಪಯೋಗಿಸಲು ಶುರು ಮಾಡಿದವು. ರಾಜಕೀಯದಿಂದ ರೈತಸಂಘಟನೆಗಳು ಚೆದುರಿ ಹೋದವು. ಕಾಲಕಳೆದಂತೆ ರೈತ ಸಂಘಟನೆಗಳ ಶಕ್ತಿ ಕಳೆದುಕೊಂಡು ರಾಜಕೀಯ ಶಕ್ತಿಯಾಗಿ ಪರಿವರ್ತನೆಗೊಂಡವು. ರಾಜಕೀಯ ಹಿತಾಸಕ್ತಿಗಾಗಿ ಕೆಲಸ ಮಾಡುವಂತಹ ನಾಯಕರುಗಳು ಹುಟ್ಟಿಕೊಂಡರು. ಅದರ ಫಲವೇ ಇಂದಿನ ರೈತ ಹೋರಾಟವನ್ನು ಬಿಜೆಪಿ ಸರ್ಕಾರ ರಾಜಕೀಯ ಹೋರಾಟ ಎಂದು ಕರೆದಿರುವುದು. ರೈತರ ಮೇಲೆ ಗುಂಡು ಹಾರಿಸಿದ ಸರ್ಕಾರದಿಂದ ಇದರ ಹೊರತಾಗಿ ಏನನ್ನಾದರೂ ನಿರೀಕ್ಷಿಸಲು ಸಾಧ್ಯವೇ ? ಕೇಂದ್ರ ಸರ್ಕಾರದ ರೈತ ವಿರೋಧಿ ನಿಲುವನ್ನು ಪ್ರಶ್ನೆ ಮಾಡುವ ಧೈರ್ಯ ಆ ಪಕ್ಷದ ನಾಯಕರುಗಳಿಗೆ ಉಳಿದಿಲ್ಲ ಏಕೆಂದರೆ ಇಂದು ಬಿಜೆಪಿ ಕೂಡ ಎಲ್ಲಾ ಪಕ್ಷಗಳಂತೆ ಸ್ವಜನಪಕ್ಷಪಾತ, ಸ್ವಾರ್ಥದಿಂದ ತುಂಬಿಹೋಗಿದೆ. ರೈತರ ಪರ ಧ್ವನಿ ಎತ್ತಲು ಕಾಂಗ್ರೆಸ್ನಲ್ಲಿ ನಾಯಕತ್ವದ ಕೊರತೆ ಇದೆ. ಇನ್ನು ಜೆಡಿಎಸ್ ಕುಟುಂಬ ರಾಜಕಾರಣದಲ್ಲಿ ಮುಳುಗಿ ಹೋಗಿದೆ. ಇಂದು ನಿಜವಾಗಿ ರೈತ ಪರ ಹೋರಾಟ ಮಾಡುವ ನಾಯಕರು ಯಾರು ಹೇಳಿಕೊಳ್ಳುವಂತಹವರು ಉಳಿದಿಲ್ಲ. ಅದರ ಲಾಭ ವಾಗುತ್ತಿರುವುದು ದುಡ್ಡು ತೆಗೆದುಕೊಂಡು ಹೋರಾಟ ಮಾಡುತ್ತಿರುವವರಿಗೆ, ಇನ್ನೂ ದುರ್ಬಲ ನಾಯಕತ್ವದಿಂದ ಪ್ರಬಲ ಹೋರಾಟಗಳು ನಡೆಯುತ್ತಿಲ್ಲ.
            ಇನ್ನು ರೈತರ ಹೆಸರು ಹೇಳಿಕೊಂಡು ಅಧಿಕಾರದ ಗದ್ದುಗೆ ಹಿಡಿದ ರಾಜ್ಯ ಬಿಜೆಪಿಯು ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ತಂದು ರೈತರ ಜಮೀನನ್ನು ಕಾರ್ಪೊರೇಟ್ ಕಂಪನಿಗಳು ಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿಧಾನಪರಿಷತ್ತಿನಲ್ಲಿ ಅನುಮೋದನೆ ಸಿಗದೆ ಬಾಕಿ ಉಳಿದಿದೆ. ಇದೇ ಸಮಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಮೂರು ರೈತ ವಿರೋಧಿ ಮಸೂದೆಗಳನ್ನು ಕಾಯ್ದೆ ರೂಪದಲ್ಲಿ ಜಾರಿಗೆ ತಂದಿದೆ.
1 ) ಎಪಿಎಂಸಿ ಬೈಪಾಸ್ ಅಡ್ರಿನನ್ಸ್ ಮಾದರಿಯಲ್ಲಿ "ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ 2020."
2 ) ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರಿವಾಗ್ನೆ 2020 "ಇದನ್ನು ಕೃಷಿ ಉದ್ಯಮದ ಮೂಲಕ ಆಹಾರ ಸಂಗ್ರಹಣೆ ಸ್ವಾತಂತ್ರ್ಯ ಸುಗ್ರಿವಾಗ್ನೆ" ಎಂದು ಭಾವಿಸಬಹುದು.
3 ) "ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆಗಳ ಒಪ್ಪಂದದ ಬರವಸೆ ಮತ್ತು ಕೃಷಿ ಸೇವೆಗಳ ಸುಗ್ರಿವಾಗ್ನೆ 2020" ಇದನ್ನು ಗುತ್ತಿಗೆ ಕೃಷಿ ಸುಗ್ರೀವಾಜ್ಞೆಯಾಗಿ ಪರಿಗಣಿಸಲಾಗಿದೆ.
        ಇನ್ನು ಇರುವ ಕಾಯ್ದೆಗಳನ್ನು ಸೂಕ್ತರೀತಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ವಿಫಲವಾಗಿರುವುದರಿಂದ ಹೊಸ ಕಾಯ್ದೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಸುಗ್ರೀವಾಜ್ಞೆಗಳು ರೈತರ ಬದುಕನ್ನು ಬೇರೆಯವರಿಗೆ ಮಾರಿಕೊಳ್ಳುವಂತಹ ಸ್ಥಿತಿಗೆ ತಂದು ನಿಲ್ಲಿಸಲು ಅನುವು ಮಾಡಿಕೊಡುತ್ತವೆ. ಕೇಂದ್ರ ಸರ್ಕಾರವು ಕೃಷಿ ವಿಧೇಯಕಗಳನ್ನು ರಾಜಕೀಯಗೊಳಿಸಿ, ಕೃಷಿ ಎಂದರೇನು ಎಂಬುದನ್ನು ತಿಳಿಯದ ಮೂರ್ಖ ಮಬ್ಬು ಭಕ್ತರಿಂದ ಶಂಖನಾದವನ್ನು ಬಾರಿಸುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರವು ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆಯೆರೆಯಲು ಮಾಡಿರುವಂತಹ ಶಾಸನವೇ ಕೃಷಿ ವಿಧೇಯಕಗಳು 2020. ಕಾರ್ಪೊರೇಟ್ ಕ್ಷೇತ್ರ ಕೃಷಿಯನ್ನು ಒಂದು ಬಾರಿ ನಿಯಂತ್ರಣ ತೆಗೆದುಕೊಂಡರೆ, ರೈತರನ್ನು ಸಾಮಾನ್ಯ ಜನರನ್ನು ತನಗೆಬೇಕಾದಂತೆ ಕುಣಿಸುತ್ತದೆ. ಮುಂದಿನ ದಿನಗಳಲ್ಲಿ ರೈತರು ಬೆಳೆಯುವ ತರಕಾರಿ ದವಸಧಾನ್ಯಗಳ ಹಕ್ಕುಸ್ವಾಮ್ಯ ಕಾರ್ಪೊರೇಟ್ ಕಂಪನಿಗಳದಾಗುತ್ತದೆ. ಕಾರ್ಪೊರೇಟ್ ಕಂಪನಿಗಳು ಕೃತಕ ಅಭಾವವನ್ನು ಸೃಷ್ಟಿಸಿ ದವಸ ಧಾನ್ಯಗಳ ಬೆಲೆಯನ್ನು ಎರಡು-ಮೂರು ಪಟ್ಟು ಹೆಚ್ಚಿಗೆ ಮಾಡಿ ಮಾಡುವಂತಹ ಪರಿಸ್ಥಿತಿಗೆ ತಂದು ನಿಲ್ಲಿಸುತ್ತವೆ. ವಿಧಿ ಇಲ್ಲದೆ ಗ್ರಾಹಕರು ಕೂಡ ಅದನ್ನು ಕೊಳ್ಳುವಂತಹ ಅನಿವಾರ್ಯತೆ ಬಿಳುತ್ತಾರೆ. ಮತ್ತದೇ ಬೆಳೆಯುವ ರೈತನಿಗೆ ಏನು ಸಿಗದು ಕೊಳ್ಳುವ ಗ್ರಾಹಕನಿಗೂ ಏನು ಸಿಗುವುದಿಲ್ಲ. ಹೊಸ ವಿಧೇಯಕ ಕೃಷಿಗೆ ಬೆಂಬಲ ಬೆಲೆಯನ್ನು ಕೊಡುವ ವಿಚಾರವಾಗಿ ಯಾವುದನ್ನು ಸ್ಪಷ್ಟಪಡಿಸಿಲ್ಲ. ರೈತ ಸಂಕಷ್ಟಕ್ಕೆ ಸಿಲುಕಿದಾಗ ಬೆಂಬಲ ಬೆಲೆ ಅವನ ನೆರವಿಗೆ ಬರುತ್ತಿತ್ತು. ರಾಷ್ಟ್ರೀಯ ಆಹಾರ ಭದ್ರತೆ ಮಾರಕವಾದ ಇಂತಹ ಕೃಷಿ ವಿಧೇಯಕವನ್ನು ಗಟ್ಟಿಧ್ವನಿಯಲ್ಲಿ ದನಿಯಲ್ಲಿ ವಿರೋಧಿಸುವಂತಹ ವಿರೋಧಪಕ್ಷಗಳು ಇಲ್ಲದ ಕಾರಣ ರೈತರಿಗೆ ಮಾರಕವಾದ ಈ ಕೃಷಿ ವಿಧೇಯಕ ಅನುಷ್ಠಾನಕ್ಕೆ ಬರುತ್ತಿದೆ.

Saturday, September 26, 2020

ಪ್ರೇಮದ ಅನ್ವೇಷಣೆ ಭಾಗ-14.

12ನೇ ತರಗತಿ ಅನುತ್ತೀರ್ಣನಾದ ಅವನಿಗೆ ಡಿಪ್ಲೊಮಾದಲ್ಲಿ ಆಯ್ಕೆಯಾಗಿದ್ದು ಬದುಕಿನಲ್ಲಿ ಅಮೃತ ಸಿಕ್ಕಿದ ಅನುಭವವಾಯಿತು. ಹೌದು, ಹೊಸ ಕಾಲೇಜು ಹೊಸ ಸ್ನೇಹಿತರ ಬಳಗ ಬದುಕಿನಲ್ಲಿ ಹೊಸ ಬುಗ್ಗೆ , ಹೊಸಬೆಳಕು. ನೇರ ನಿಷ್ಠುರಿವಾದಿಯಾದವನು ಯಾವುದಕ್ಕೂ ಹೆದರುವ ಜಾಯಮಾನ ಅವನದಲ್ಲ ,ತಪ್ಪನ್ನು ನೇರವಾಗಿ ಖಂಡಿಸುವ ಧೈರ್ಯ, ಚಾತಿ ಅವನಲ್ಲಿತ್ತು .ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯುವುದು ಶತಸಿದ್ಧ. ಇರುವುದರ ಒಳಗಾಗಿ ಏನನ್ನಾದರೂ ಸಾಧಿಸಬೇಕು ಎಂಬ ದೃಢ ಸಂಕಲ್ಪ ಅವನದು. ಬದುಕಿನಲ್ಲಿ ಯಾವತ್ತು ಹೇಡಿಯಂತೆ ಸಾಯಬಾರದು ಎಂದು ನಿಶ್ಚಯಿಸಿದ ಅವನಿಗೆ ಉಳಿದಿದ್ದು ಒಂದೇ ಮಾರ್ಗ ಚೆನ್ನಾಗಿ ಓದಬೇಕು ಉತ್ತಮ ಅಂಕ ಪಡೆದು ಬದುಕು ಕಟ್ಟಿಕೊಳ್ಳಬೇಕು. ಪುಸ್ತಕದ ಜ್ಞಾನ ಅವನ ಮಸ್ತಕವನ್ನು ತುಂಬಿತ್ತು .ಅವನ ಬದುಕನ್ನು ಸಮಾಜದ ಸೇವೆಗೆ ಮೀಸಲಿಡಬೇಕು ಎಂದು ನಿಶ್ಚಯಿಸಿದ. ಅವನು ಅವನಂತೆ ಮಾನಸಿಕ ಹಿಂಸೆ ಅನುಭವಿಸುವವರ ನೋವಿಗೆ ಸ್ಪಂದಿಸಬೇಕು. ಅವರನ್ನು ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕು. ಕೆಲವರಿಗೆ ತಂದೆ ತಾಯಿ ಇರುತ್ತಾರೆ ಮಕ್ಕಳು ಇರುವುದಿಲ್ಲ ಮತ್ತೆ ಕೆಲವರಿಗೆ ತಂದೆ-ತಾಯಿಯೇ ಇರುವುದಿಲ್ಲ ಮಕ್ಕಳು ಅನಾಥರು ಇರುತ್ತಾರೆ. ಅಂತವರನ್ನು ಸೇರಿಸಿ ಒಂದು ಸೂರಿನಡಿ ಬದುಕುವಂತೆ ಮಾಡಬೇಕು ಒಟ್ಟಿನಲ್ಲಿ ನಾನು ಬದುಕು ಕಟ್ಟಿಕೊಂಡು ಇತರರ ಬದುಕಿಗೆ ಬೆಳಕಾಗಿ ಬಾಳಬೇಕು. ಇನ್ನು ಮುಂದೆ ನನಗಾಗಿ ಅಲ್ಲದಿದ್ದರೂ ಸಮಾಜದ ಒಳಿತಿಗಾಗಿ ಜೀವಿಸಬೇಕು ಎಂಬ ಆಲೋಚನೆಯಲ್ಲಿ ವಿದ್ಯಾಭ್ಯಾಸ ಮುಂದುವರೆಯಲು ಪ್ರಾರಂಭವಾಯಿತು. ಅವನಿಗೆ ತಾಯಿ ಸರಸ್ವತಿಯ ಕೃಪೆ ಬಿಟ್ಟರೆ ಮತ್ತೆ ಏನು ಬೇಡವಾಯಿತು. ನಾಟಕೀಯತೆ, ಸ್ವಾರ್ಥ, ಪ್ರೀತಿಯ ಬಗ್ಗೆ ನಂಬಿಕೆ ಇಲ್ಲದಂತಾಯಿತು. ಹೊಸ ಬದುಕಿನೊಂದಿಗೆ ಹೊಸ ಆಲೋಚನೆಯೊಂದಿಗೆ ಮತ್ತೆ ಬದುಕನ್ನು ಶುರುಮಾಡಿದ.
             ಶಿಸ್ತುಬದ್ಧವಾದ ಜೀವನ ಮಿತಾಹಾರ ವ್ಯಾಯಾಮ, ಓದು ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವ ಶಿಸ್ತುಬದ್ಧವಾದ ಜೀವನಕ್ಕೆ ಹೊಂದಿಕೊಂಡು ಬಿಟ್ಟಿದ್ದ .ಬದುಕನ್ನು ಸಮಾಜಕ್ಕೆ ಮೀಸಲಿಡುವ ಸಂಕಲ್ಪಕ್ಕೆ ಅವನು ಸಿದ್ಧನಾದ. ಕಾಲೇಜು ದಿನಗಳು ಪ್ರಾರಂಭವಾದವು ಎಲ್ಲರನ್ನೂ ಸಮಾನವಾಗಿ ಕಾಣುವ ವಿಧು ಎಲ್ಲಾ ವಿಭಾಗದ ಸ್ನೇಹಿತರನ್ನು ಸಂಪಾದಿಸುವಲ್ಲಿ ಸಫಲನಾದ. ಕೆಲವೇ ದಿನಗಳಲ್ಲಿ ಉತ್ತಮ ಸ್ನೇಹಿತ ವರ್ಗವನ್ನು ಸಂಪಾದಿಸಿದ. ಕೆಲವು ದಿನಗಳ ನಂತರ ಇಬ್ಬರು ಹೊಸ ವ್ಯಕ್ತಿಗಳ ಆಗಮನವಾಯಿತು. ಮೊದಲು ಆಯ್ಕೆಯಾದವರು ಕಾಲೇಜಿಗೆ ಬರದಿರುವ ಕಾರಣ ಎರಡನೇ ಪಟ್ಟಿಯಲ್ಲಿ ಬಂದಿದ್ದವರು ಅವರಾಗಿದ್ದರು. ಅವರಲ್ಲಿ ಒಬ್ಬ ವ್ಯಕ್ತಿ ವಿಧುವನ್ನು ಪರಿಚಯ ಮಾಡಿಕೊಂಡ ಅವನ ಹೆಸರು ಕುಶಾಲ್ ಮತ್ತೊಬ್ಬ ಸಂಜಯ್. ಆಟೋಮೊಬೈಲ್ ವಿಭಾಗಕ್ಕೆ ಅವರು ಬಂದಿದ್ದರಿಂದ ಸಹಜವಾಗಿ ಉತ್ತಮ ಸಹಪಾಠಿಗಳದರು.ದಿನಕಳೆದಂತೆ ಕುಶಾಲ್ ವಿಧುವಿಗೆ ಆತ್ಮೀಯನಾಗುತ್ತಾ ಹೋದ, ಬೇರೆ ಸಹಪಾಠಿಗಳು ಎಂತಹ ಸ್ನೇಹ ಇವರದು ಒಂದೇ ಜೀವ ಎರಡು ಆತ್ಮ ಎಂದು ಕಾಲೇಜಿನ ಇತರ ಸಹಪಾಠಿಗಳು ಮಾತನಾಡಲು ಆರಂಭಿಸಿದರು. ವಿಧು ಆ ವಿಚಾರವಾಗಿ ಯಾರೇ ಏನೇ ಅಂದರು ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ ಏಕೆಂದರೆ ಅವನು ಸರ್ವರನ್ನೂ ಸಮಾನವಾಗಿ ಕಾಣುತ್ತಿದ್ದ ವ್ಯಕ್ತಿ. ಎಲ್ಲರೂ ಸಮಾನರು ಎಂಬ ಭಾವ ಅವನದು. ಅವನಿಗೆ ಓದುವುದು ಮಾತ್ರ ಮುಖ್ಯವಾಗಿತ್ತು. ಸಹಪಾಠಿಯಾಗಿದ್ದ ಕುಶಾಲ್ ಮೊದಲಿಗನಾಗಿ ಫೋನ್ ಮಾಡುವುದು ಮನೆಗೆ ಬರುವುದು ವಿಧುವಿನ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುವುದು. ತನ್ನ ವೈಯಕ್ತಿಕ ವಿಚಾರಗಳನ್ನು ಹೇಳಿಕೊಳ್ಳುವುದನ್ನು ಶುರುಮಾಡಿದ. ವಿಧುವಿಗೆ ಕೇಳಲು ಇರುಸು ಮುರುಸಾಗುತ್ತಿತ್ತು. ತನ್ನ ಮನೆಯ ಒಳಗೆ ಕರೆಯಲು ಹತ್ತು ಇಪ್ಪತ್ತು ಬಾರಿ ಯೋಚನೆ ಮಾಡಿ ಕರೆಯುವಂತಹ ಪರಿಸ್ಥಿತಿಯಲ್ಲಿ ಇದ್ದ ಅವನಿಗೆ ಮನೆಯ ಹತ್ತಿರ ಬರುತ್ತಿದ್ದ ಕುಶಾಲ್ ಅನ್ನು ಹೇಗೆ ಸಂಭಾಳಿಸುವುದು ಎಂಬ ಯೋಚನೆ.ಕುಶಾಲ್ ತನ್ನ ಪ್ರೀತಿಯ.....

Thursday, September 24, 2020

ಪ್ರೇಮದ ಅನ್ವೇಷಣೆ ಭಾಗ-13

ಆ ನಾಡು ನುಡಿ ಸತ್ಯವೆನಿಸಿತು. ಪುಸ್ತಕ ಓದುವ ಗೀಳು ಪ್ರಬುದ್ಧನ್ನಾಗಿ ಮಾಡಿತು. ಗ್ರಂಥಾಲಯ ಅದೊಂದು ವಿದ್ಯೆಯನ್ನು ನೀಡುವ ಶಾರದೆಯ ಸ್ಥಾನ ಎನ್ನುವ ಅರಿವು ಅವನಿಗಾಯಿತು. ಗ್ರಂಥಾಲಯದಲ್ಲಿದ್ದ ವ್ಯಕ್ತಿತ್ವ ವಿಕಸನದ ಪುಸ್ತಕವು ವಿಧುವಿನ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾದವು. ಹೀಗೆ ವ್ಯಕ್ತಿತ್ವ ವಿಕಾಸದ ಕಡೆಗೆ ಹೆಜ್ಜೆ ಇಟ್ಟ ಅವನಿಗೆ ಒಂದು ವರ್ಷಗಳ ಕಾಲ ಜ್ಞಾನ ಸಂಪಾದನೆಯಲ್ಲಿ ಕಳೆದುಹೋಗಿದ್ದು ಗೊತ್ತಾಗಲಿಲ್ಲ. ಆತನಿಗೆ ಗ್ರಂಥಾಲಯವೇ ಮನೆಯಾಗಿ ಹೋಯಿತು. ಒಂದು ವರ್ಷಗಳ ಕಾಲ ಸತತ ಅಭ್ಯಾಸ ಅವನಿಗೆ ಪುಸ್ತಕ ಓದುವ ಗೀಳನ್ನು ಇನ್ನೂ ಹೆಚ್ಚು ಮಾಡಿತು. ಜ್ಞಾನ ಹೆಚ್ಚಿದಂತೆ ಅವನು ಪ್ರಬುದ್ಧನಾಗುತ್ತ ಹೋದ. ಮನೆಯ ಹತ್ತಿರವೇ ಇದ್ದ ಸರ್ಕಾರಿ ಡಿಪ್ಲೋಮೋ ಕಾಲೇಜಿನಲ್ಲಿ ಸೀಟು ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಿದ್ದನ್ನು ಪತ್ರಿಕೆಯಲ್ಲಿ ನೋಡಿ, ನೋಡೋಣ ಒಂದು ಅರ್ಜಿಯನ್ನು ಹಾಕಿದರೆ ಆಯಿತು ಎಂದು ಅರ್ಜಿಯನ್ನು ಡಿಪ್ಲೋಮಾ ಕೋರ್ಸ್ಗೆ ಹಾಕಿ ಬಂದ. ಅದು 10ನೇ ತರಗತಿಯ ಅಂಕಗಳಿಗೆ ಅನುಗುಣವಾಗಿ ( ಗಣಿತ ಹಾಗೂ ವಿಜ್ಞಾನ )ದ ಒಟ್ಟು ಅಂಕಗಳ ಆಧಾರದ ಮೇಲೆ ಕೊಡಮಾಡುವ ಸೀಟ್. ಅವನದು ಹೇಳಿಕೊಳ್ಳುವಂತಹ ಅಂಕಗಳು ಹತ್ತನೇ ತರಗತಿಯಲ್ಲಿ ಇಲ್ಲದಿದ್ದ ಕಾರಣ ಡಿಪ್ಲೋಮೋ ಸೀಟು ಸಿಗುವ ಯಾವ ನಿರೀಕ್ಷೆಯೂ ಇರಲಿಲ್ಲ. ನೋಡೋಣ ಕೊನೆಯಬಾರಿ ಡಿಪ್ಲೋಮೋ ಸೀಟು ಸಿಕ್ಕರೆ ಹೋಗೋಣ ಇಲ್ಲದಿದ್ದರೆ ಮನೆ ಬಿಟ್ಟು ಹೋಗಿ ಬದುಕನ್ನು ಕಟ್ಟೋಣ. ಹಂಗಿನ ಅರಮನೆಗಿಂತ ಬಂಗದ ಕೂಳು ಲೇಸು ಎನ್ನುವ ನಾಣ್ಣುಡಿಯಂತೆ ಬದುಕುವ ದೃಢ ನಿಶ್ಚಯ ಮಾಡಿ ಮುನ್ನಡೆದ. ಅವನ ಅದೃಷ್ಟವೇನು ಎನ್ನುವಂತೆ ತಾಂತ್ರಿಕ ವಿದ್ಯಾಲಯದಲ್ಲಿ ಅಂತಿಮ ಸುತ್ತಿನಲ್ಲಿ ಎರಡು ಸೀಟುಗಳು ಉಳಿದವು. ಒಂದು ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತೊಂದು ಆಟೋಮೊಬೈಲ್ ಕ್ಷೇತ್ರದ ವಿಭಾಗ. ಮೂರು ಮಂದಿ ಅಂತಿಮ ಸುತ್ತಿನಲ್ಲಿ ಉಳಿದರು. ಅದರಲ್ಲಿ 15ನೇ ವಯಸ್ಸಿನ ಇಬ್ಬರು ಹಾಗೂ 16ನೇ ವಯಸ್ಸಿನ ಒಬ್ಬರು ಉಳಿದರು. ಮೊದಲನೆಯದಾಗಿ 15ನೇ ವಯಸ್ಸಿನವರನ್ನು ಕರೆದರು ಅದರಲ್ಲಿ ಹೆಚ್ಚಿಗೆ ಅಂಕವನ್ನು ಯಾರು ತೆಗೆದಿದ್ದರೋ ಅವರಿಗೆ ಕಂಪ್ಯೂಟರ್ ಸೈನ್ಸ್ ವಿಭಾಗವನ್ನು ಕೊಡಲಾಯಿತು. ಮತ್ತೊಬ್ಬನಿಗೆ ಉಳಿದಿದ್ದು ಒಂದು ಸೀಟು. ಅದು ಆಟೋಮೊಬೈಲ್ ಕ್ಷೇತ್ರ. ಆಟೋಮೊಬೈಲ್ ವಿಭಾಗ ಸೇರಬೇಕೆಂದರೆ 16ವಯಸ್ಸು ತುಂಬಿರಬೇಕು ಎಂಬ ಸರ್ಕಾರಿ ನಿಯಮ ಇದ್ದುದರಿಂದ ಆ ಹುಡುಗನಿಗೆ ಆಟೋಮೊಬೈಲ್ಸ್ ಸೀಟ್ ಸಿಗದಂತಾಯಿತು. ಉಳಿದಿದ್ದು ವಿಧು ಮಾತ್ರ. 16ನೇ ವಯಸ್ಸು ತುಂಬಿದ ಕಾರಣ ಅವನಿಗೆ ಆಟೋಮೊಬೈಲ್ ವಿಭಾಗದಲ್ಲಿ ಕೊನೆಯವನಾಗಿ ಸೇರಿಸಿಕೊಳ್ಳಲಾಯಿತು. ಅವನ ಅದೃಷ್ಟ ಎನ್ನುವಂತೆ 50 ಮಂದಿಯನ್ನು ಮಾತ್ರ ತೆಗೆದುಕೊಳ್ಳುವ ವಿಭಾಗದಲ್ಲಿ 50ನೇ ಯಾವನು ಆಗಿ ಆಯ್ಕೆ ಪತ್ರವನ್ನು ನೀಡಲಾಯಿತು. ಸಿಕ್ಕ ಆಯ್ಕೆ ಪತ್ರವನ್ನು ಅಲ್ಲಿನ ಸೂಪರಿಂಟೆಂಡೆಂಟ್ ಅವರಿಂದ ಅನುಮೋದನೆ ಪಡೆಯಬೇಕು. ಅನುಮೋದನೆ ಪಡೆಯಲು ಹೋದಾಗ ಅವರು ವ್ಯಂಗ್ಯವಾಗಿ ಸೀಟು ಪಡೆಯುವುದು ಮುಖ್ಯವಲ್ಲ ಮೊದಲು ಇಲ್ಲಿಂದ ಉತ್ತೀರ್ಣನಾಗಿ ಹೋಗಬೇಕು, ಎಂದು ಅಲ್ಲಿ ಆಯ್ಕೆಯಾಗಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕೇವಲವಾಗಿ ಹೇಳುತ್ತಿದ್ದರು.  ಅಂದೇ ವಿಧು ಮನಸ್ಸಿನಲ್ಲಿ ನಿರ್ಧರಿಸಿದ. ಈ ಕಾಲೇಜಿನಲ್ಲಿ ಕೊನೆಯ ಹಂತದಲ್ಲಿ ಆಯ್ಕೆಯಾದ ಹುಡುಗರು ಎಂದು ಅಪಹಾಸ್ಯ ಮಾಡುತ್ತಿದ್ದ ವ್ಯಕ್ತಿಯ ಮುಂದೆ ತುಂಬಾ ಚೆನ್ನಾಗಿ ಓದಿ ಉನ್ನತ ಅಂಕವನ್ನು ಪಡೆಯಬೇಕು. ನಾನೇ ಈ ವ್ಯಕ್ತಿಗೆ ಉತ್ತರವಾಗಿ ನಿಲ್ಲಬೇಕು ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಮುನ್ನಡೆದ. ಅಲ್ಲಿಗೆ ಸರಿಯಾಗಿ ಒಂದು ವಾರದ ನಂತರ ಕಾಲೇಜು ಪ್ರಾರಂಭವಾಯಿತು. ಬದುಕಿನ ಹೊಸ ಆಸೆ ಕನಸು ನಿರೀಕ್ಷೆಗಳೊಂದಿಗೆ ಕಾಲೇಜಿಗೆ ಮೊದಲ ದಿನ ಭೇಟಿಕೊಟ್ಟ ಬದುಕು ಇನ್ನಾದರೂ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ.....

Sunday, September 20, 2020

ಪ್ರೇಮದ ಅನ್ವೇಷಣೆ ಭಾಗ-12


ಈ ಜಗತ್ತಿನಲ್ಲಿ ಪ್ರೀತಿ ಪ್ರೇಮ ಅಂತ ಏನು ಇಲ್ಲ ಯಾರೇ ಕೆಟ್ಟವರು ಆದರೂ ತಾಯಿ ಕೆಟ್ಟವಳು ಆಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಆದರೆ ವಿಧುವಿನ ತಾಯಿ ಈಗಾಗಲೇ ವಿಧುವಿನ ಹತ್ತಿರ ಮಾತುಬಿಟ್ಟು ಹಲವು ವರ್ಷಗಳೇ ಕಳೆದು ಹೋಗಿವೆ .ತಾಯಿ ಪ್ರೀತಿ ಎನ್ನುತ್ತಾರೆ ಆದರೆ ಅವನಿಗೆ ತಿಳುವಳಿಕೆ ಬುದ್ಧಿ ಬಂದಾಗಿನಿಂದಲೂ ತಾಯಿ ಪ್ರೀತಿ ಕಂಡಿಲ್ಲ ತಂದೆಯದು ಕೇಳುವುದೇ ಬೇಡ ಪ್ರತಿ ಬಾರಿ ತೀರಾ ಅವಶ್ಯಕವೆಂದು ಹಣ ಕೇಳುವಾಗ ದೊಡ್ಡ ಜಗಳವೇ ನಡೆದುಹೋಗುತ್ತಿತ್ತು. ಇನ್ನೂ ಹದಿಹರೆಯದ  ಪ್ರೀತಿ ತನ್ನ ಕಾಮದ ಬಾಹ್ಯ ಸೌಂದರ್ಯದ ಆಕರ್ಷಿತವಾಗುವ ವಿಚಾರವೇ ಪ್ರೀತಿ ಎಂದುಕೊಳ್ಳುವಂತೆ ಬದುಕು ತೋರಿಸಿ ಕೊಟ್ಟಿತ್ತು. ಅದೇನೆಂದರೆ ಅವನ ಜೀವನದಲ್ಲಿ ನಡೆದ ಒಂದು ಘಟನೆ, ಸಹಪಾಠಿಯಾದ ಹುಡುಗಿ ಕಾಲೇಜಿನಲ್ಲಿ ಹಾಗೂ ಸ್ಕೂಲ್ನಲ್ಲಿಯು ಹಲವಾರು ವಿಚಾರಗಳಲ್ಲಿ ಅವನಿಗೆ ಸಹಾಯ ಮಾಡುತ್ತಿದ್ದ ಸಹಪಾಠಿಯಾದ ಅಕ್ಷತಾ ಗೌಡ ಒಬ್ಬ ಶ್ರೀಮಂತ ಮನೆಯ ಹುಡುಗನನ್ನು ಪ್ರೀತಿಸಿದಳು. ಅಕ್ಷತ ಗೌಡ ಅವರ ಮನೆಯ ಶ್ರೀಮಂತಿಕೆಗೆ ಏನು ಕಡಿಮೆ ಇರಲಿಲ್ಲ ತಂದೆ-ತಾಯಿ ಇಬ್ಬರು ಸರ್ಕಾರಿ ನೌಕರಿಯಲ್ಲಿ ಉನ್ನತ ಸ್ಥಾನದಲ್ಲಿ ಇದ್ದವರು ಇಬ್ಬರಿಗೂ ಒಬ್ಬಳೇ ಮುದ್ದಿನ ಮಗಳು ಅಕ್ಷತಾ ಗೌಡ.
            ಸ್ನೇಹಿತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುತ್ತಿದ್ದ ಹುಡುಗಿ ಯಾವುದನ್ನು ವಿಚಾರ ಮಾಡಿ ಒಪ್ಪಿಕೊಳ್ಳುತ್ತಿದ್ದ ಹುಡುಗಿ ಅದ್ಯಾವ ಸಮಯದಲ್ಲಿ ಪ್ರೀತಿಯ ಬಲೆಯಲ್ಲಿ ಬಿದ್ದಳು ಎನ್ನುವುದನ್ನು ತಿಳಿಯುವುದರ ಒಳಗಾಗಿ ಆತ್ಮಹತ್ಯೆಗೆ ಶರಣಾದಳು.  ಅವರಿಬ್ಬರ ನಡುವೆ ಏನು ನಡೆದಿತ್ತು ಗೊತ್ತಿಲ್ಲ.  ಅವಳನ್ನು ಪ್ರೀತಿಸಿದ ಹುಡುಗ ಹೇಮಂತ್ ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡ ಮಾರನೇ ದಿನವೇ ಬೇರೆ ಹುಡುಗಿಯೊಂದಿಗೆ ಚೆಲ್ಲಾಟ ವನ್ನು ಆಡಿಕೊಂಡು ತುಂಬಾ ಬೆಲೆಬಾಳುವ ಬೈಕಿನಲ್ಲಿ ಹೋಗುತ್ತಿರುವುದನ್ನು ನೋಡಿ ವಿಧು ದಿಗ್ಭ್ರಮೆಗೆ ಒಳಗಾದ.  ಅವರ ವಿಚಾರವಾಗಿ ಕಾಲೇಜಿನ ಇನ್ನಿತರೆ ಸಹಪಾಠಿಗಳನ್ನು ಕೇಳಿದಾಗ ಅವರು ಉತ್ತರವನ್ನು ಕೇಳಿ ಆಶ್ಚರ್ಯಚಕಿತನಾಗಿ ನಿಂತ. ಸಹಪಾಠಿಗಳು, ಅವನಿಗೆ ಅಕ್ಷತ ಗೌಡ ಅಂತವರು ಹಲವಾರು ಜನರೇಂದು ತಿಳಿದು ಬೇಸರವಾಯಿತು. ಈ ಹುಡುಗಿ ತನ್ನ ಪ್ರೀತಿಗಾಗಿ ಪ್ರಾಣವನ್ನೇ ಬಿಟ್ಟಿದ್ದು ಇವನ್ನು ನೋಡಿದರೆ ಈ ರೀತಿ ಮಾಡಿ ಬಿಟ್ಟನಲ್ಲ.
             ಓ ಈ ಜಗತ್ತಿನಲ್ಲಿ ಪ್ರೀತಿ ಎಂಬುದು ಬರಿ ಆಕರ್ಷಣೀಯ ವಿಷಯವಷ್ಟೇ ಎಂಬ ತೀರ್ಮಾನಕ್ಕೆ ಬಂದಿದ್ದ .ಆದರೆ ಇಲ್ಲಿ ಎಲ್ಲಾ ಉಲ್ಟಾ ಹುಡುಗರು ಅಣ್ಣನು ಪ್ರೀತಿಗೆ ಸಪೋರ್ಟ್ ಮಾಡಿದ ಎಂದು ಬಂದು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುತ್ತಾರೆ .ಇದು ಒಂದು ರೀತಿಯ ಸೋಜಿಗವೆನಿಸಿತು ಅಂತು-ಇಂತು ಚುನಾವಣೆಯನ್ನು ಮುಗಿಸಿದ ವಿಧು ಚುನಾವಣೆ ಮುಗಿದ ಮೇಲೆ ಮತ್ತೆ ರಾಜಕಾರಣಿಗಳು ತಕ್ಷಣಕ್ಕೆ ತಮ್ಮನ್ನು ತಿರುಗಿ ನೋಡಲ್ಲ ಎಂಬ ಅರಿವು ಅನುಭವದ ಮೂಲಕ ಬಂದಿತ್ತು .ಇಷ್ಟು ದಿನ ಹೇಗೋ ಮನೆಯಲ್ಲಿ ಇರುವುದು ತಪ್ಪಿಸಿಕೊಳ್ಳುತ್ತಿದ್ದ ಈಗ ಹೇಗೆ ತಪ್ಪಿಸಿಕೊಳ್ಳುವುದು ಎಂದು ಚಿಂತಿಸುತ್ತಿರಬೇಕಾದರೆ ಅವನ ಅದೃಷ್ಟವನ್ನುವಂತೆ, ಅವನ ಮನೆಯ ಅನತಿ ದೂರದಲ್ಲಿ ಒಂದು ಗ್ರಂಥಾಲಯದ ಉದ್ಘಾಟನೆ ಸುದ್ದಿ ಬಂದಿತು. ಪತ್ರಿಕೆ ಓದುವ ಗೀಳನ್ನು ಹಿಡಿಸಿಕೊಂಡಿದ್ದ ಅವನು ಗ್ರಂಥಾಲಯಕ್ಕೆ ಹೋಗಲು ಶುರು ಮಾಡಿದ. ದಿನ ಗ್ರಂಥಾಲಯಕ್ಕೆ ಹೋಗುತ್ತಿದ್ದ ಪತ್ರಿಕೆಯನ್ನು ಕೆಲವು ಗಂಟೆಗಳವರೆಗೆ ಓದುವುದು ಅವನ ಅಭ್ಯಾಸವಾಗಿತ್ತು .ಆನಂತರ ಏನು ಮಾಡುವುದು ಮನೆಗೆ ಹೋದರೆ ಬೈಯ್ಯುತ್ತಾರೆ. ಮನೆಯಲ್ಲಿ ನರಕಯಾತನೆ ಅನುಭವಿಸುವುದಕ್ಕಿಂತ ಗ್ರಂಥಾಲಯದಲ್ಲಿ ಸಮಯ ಕಳೆಯುವುದು ಲೇಸು ಎಂದುಕೊಂಡು ತಿಂಗಳಿಗೊಮ್ಮೆ ವಾರಕ್ಕೊಮ್ಮೆ ಬರುವ ಲೇಖನಗಳನ್ನು ಪುಸ್ತಕಗಳನ್ನು ಓದಲು ಶುರು ಮಾಡಿದ. ಕ್ರಮೇಣ ದೊಡ್ಡ ದೊಡ್ಡ ಪುಸ್ತಕಗಳನ್ನು ಕೇವಲ ಎರಡು-ಮೂರು ದಿನಗಳಲ್ಲಿ ಮುಗಿಸುವಷ್ಟು ಕಾದಂಬರಿಗಳನ್ನು ಮೂರರಿಂದ ಐದು ದಿನಗಳಲ್ಲಿ ಮುಗಿಸುವ ಸಂಕಲ್ಪದೊಂದಿಗೆ ತೆಗೆದುಕೊಂಡು ಅವುಗಳನ್ನು ಮುಗಿಸುತ್ತಿದ್ದ . ಓದಿನ ಹುಚ್ಚು ವಿಪರೀತವಾಯಿತು. ಅದು ಅವನನ್ನು ಜ್ಞಾನದ ಕಾಶಿ ಯನ್ನಾಗಿ ಮಾಡಿತು. ಒಂದು ದೇಶ ಸುತ್ತಬೇಕು ಇಲ್ಲ ಕೋಶ ಓದಬೇಕು ಎಂಬ ನಾಣ್ಣುಡಿಯನ್ನು ಕೇಳಿದ್ದ ವಿಧುವಿಗೆ.....

Thursday, September 17, 2020

ಪ್ರೇಮದ ಅನ್ವೇಷಣೆ ಭಾಗ - 11


12ನೇ ತರಗತಿ ಓದುತ್ತಿದ್ದ ಸಮಯದಲ್ಲಿ ವಿಧುವಿಗೆ ಒಳ್ಳೆಯ ಉಪಾಧ್ಯಾಯರು ಸಿಕ್ಕರು. 12ನೇ ತರಗತಿಯ ವಿಜ್ಞಾನದ ವಿಷಯ ಹಾರಿಸಿದ್ದರಿಂದ ಗಣಿತವೆಂಬ ಕಬ್ಬಿಣದಕಡಲೆ ಜಿಗಿಯುವುದು ಸ್ವಲ್ಪ ಕಷ್ಟವೆನಿಸಿತು. ಕಾಲೇಜಿನಲ್ಲಿ ಉತ್ತಮ ಶಿಕ್ಷಕ ವೃಂದ ಮನೆಯಲ್ಲಿ ತದ್ವಿರುದ್ಧ ವಾತಾವರಣ ತೊಳಲಾಟದಲ್ಲಿ ವಿಜ್ಞಾನ ವಿಷಯದಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣನಾದ ಕಬ್ಬಿಣದ ಕಡಲೆಯಂತ್ತಿದ್ದ ಗಣಿತವನ್ನು ಶಿಕ್ಷಕರ ಪ್ರೋತ್ಸಾಹದಿಂದ ಪಾಸ್ ಮಾಡಿದ. ಇಷ್ಟು ಸಾಕಾಗಿತ್ತು ಮನೆಯಲ್ಲಿ ವಿಧವನ್ನು ಇನ್ನು ತುಚ್ಚವಾಗಿ ಕಾಣಲು. ತಾಯಿ ಎನಿಸಿಕೊಂಡವರು ಕಠಿಣವಾಗಿ ವರ್ತಿಸುತ್ತಿರಲು ದೇವರೇ ದಿಕ್ಕು ಎನ್ನುವಂತಾಯಿತು. ಆತನ ಪರಿಸ್ಥಿತಿ. ಆತನ ಕೆಲವು ಸ್ನೇಹಿತರು ಅನುತ್ತೀರ್ಣರಾಗಿದ್ದರು. ಅವರ ತಂದೆಯವರು ತಮ್ಮ ಮಕ್ಕಳಿಗೆ ಉಳಿದಿದ್ದ ಒಂದು ಅವಕಾಶ ಹತ್ತನೇ ತರಗತಿಯ ಆಧಾರದ ಮೇಲೆ ತಾಂತ್ರಿಕ ಕೋರ್ಸ್ ಗೆ ಸೇರಿಸುವುದು ಆಗಿತ್ತು.  ಸ್ನೇಹಿತರ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಖಾಸಗಿ ಕಾಲೇಜಿಗೆ ಹೆಚ್ಚಿನ ಪ್ರಮಾಣದ ಶುಲ್ಕವನ್ನು ತುಂಬಿ ಸೇರಿಸಿದರು. ಆದರೆ ವಿಧುವಿಗೆ ಆ ಅವಕಾಶ ಇರಲಿಲ್ಲ. ವಿಧು ಮನೆಯಲ್ಲಿಯೇ ಉಳಿಯಬೇಕಾಯಿತು. ಮನೆಯಲ್ಲಿ ಅನುತ್ತೀರ್ಣನಾದ ತಪ್ಪನ್ನು ತಿದ್ದಿ ಬುದ್ಧಿ ಹೇಳಿ ಮಾರ್ಗದರ್ಶನ ಮಾಡುವುದು ಬಿಟ್ಟು ಇನ್ನು ಮನೆಯಲ್ಲಿ ಮೂದಲಿಕೆಯ ತುಚ್ಛವಾದ ಮಾತನ್ನು ಹೆಚ್ಚು ಮಾಡಿದರು. ಇದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಮನೆ ಬಿಟ್ಟು ಹೊರಡುವ ಯೋಚನೆ ಜನ್ಮತಾಳಿತು.
            ಮನೆಯಲ್ಲಿನ ಬೈಗುಳ ಮನಸ್ಸನ್ನು ಘಾಸಿ ಮಾಡುತ್ತಲೇ ಹೋಯಿತು. ಮನೆಯವರ ಬೈಗುಳ ತಪ್ಪಿಸಿಕೊಳ್ಳುವ ಸಲುವಾಗಿ ಹೊರಗಡೆ ಸುತ್ತಲೂ ಶುರುಮಾಡಿದ ಮನೆಯ ವಾತಾವರಣಕ್ಕಿಂತ ಹೊರಗಡೆ ಸಮಾಜದಲ್ಲಿ ನೆಮ್ಮದಿ ಸಿಗುವಂತಾಯಿತು. ಮನೆಯಲ್ಲಿ ಎಲ್ಲರೂ ಇದ್ದರೂ ಇಲ್ಲದಂತಿದ್ದ .ಅನಾಥಪ್ರಜ್ಞೆ ಸಾಮಾಜಿಕ ಜೀವನಕ್ಕೆ ಕಾಲಿಟ್ಟ ಮೇಲೆ ಕಡಿಮೆಯಾಗತೊಡಗಿತ್ತು. ತನ್ನ ಬದುಕನ್ನು ಮುಗಿಸಲು ಯೋಚಿಸಿದ್ದ ವಿಧುವಿಗೆ ಹೇಡಿಯಂತೆ ಸಾಯಬಾರದು. ಬದುಕನ್ನು ಸವಾಲಾಗಿ ಸ್ವೀಕರಿಸಬೇಕು ಎದುರಿಸಬೇಕು ಎಂಬ ಪಾಠವನ್ನು ಸಮಾಜವು ಕಲಿಸಿತು. ಸಮಾಜದಿಂದ ಕಲಿತ ಪಾಠ ಇನ್ನೂ ಅನೇಕ ಸಮಾಜ ಬದುಕಿಗೆ ಬೇಕಾದ ಪಾಠ ಕಲಿಸುತ್ತದೆ ಎಂಬ ಮಾತನ್ನು ಕೇಳಿದ್ದ ಆದರೆ ಅದರ ಅನುಭವ ಬರುವಂತಾಯಿತು. ಸಮಾಜದಲ್ಲಿ ಒಳ್ಳೆಯವರು ಹಾಗೂ ಕೆಟ್ಟವರ ಸಹವಾಸ ಒಳ್ಳೆಯದನ್ನು ಕೆಟ್ಟದ್ದನ್ನು ಗುರುತಿಸುವ ಕಲೆಯನ್ನು ಕಲಿಸಿತು. ಮನೆಯಲ್ಲಿನ ಮೂದಲಿಕೆಯನ್ನು ತಪ್ಪಿಸಿಕೊಳ್ಳಲು ಎಷ್ಟು ಸಾಧ್ಯವೋ ಅಷ್ಟು ಮನೆಯಿಂದ ಹೊರಬರಲು ಪ್ರಯತ್ನಿಸುತ್ತಿದ. ಈ ನಡುವೆ ಹಲವಾರು ರೀತಿಯ ಜನರ ಪರಿಚಯವಾದರು. ಚಿಕ್ಕನಿಂದಲೂ ಅದೇ ಊರಿನಲ್ಲಿ ಹುಟ್ಟಿ ಬೆಳೆದಿದ್ದರಿಂದ ಮುಖ ಪರಿಚಯವಿದ್ದ ಜನರು ಮಾತನಾಡಲು ಶುರು ಮಾಡಿದರು. ಅದೇ ಸಮಯದಲ್ಲಿ ಅಲ್ಲಿನ ವಾರ್ಡ್ ಚುನಾವಣೆ ಸನಿಹವಾಯಿತು.
                               ವಿಧುವಿಗೆ ಮೊದಲಿನಿಂದಲೂ ದಿನಪತ್ರಿಕೆ ಓದುವ ಹುಚ್ಚು ಇದ್ದಿದ್ದರಿಂದ ರಾಜಕೀಯ ವಿಷಯದ ಮೇಲೆ ಸ್ವಲ್ಪ ಓಲವು ಹೆಚ್ಚಾಗಿಯೇ  ಇತ್ತು. ಹಾಗಾಗಿ ರಾಜಕೀಯ ವಿಚಾರಗಳನ್ನು ಕೆಲವು ಜನರೊಟ್ಟಿಗೆ ಚರ್ಚೆ ಮಾಡುತ್ತಿದ್ದನ್ನು ಕಂಡು ಚುನಾವಣೆ ಪ್ರಚಾರ ಕಾರ್ಯ ಮಾಡಲು ಕರೆಯುತ್ತಿದ್ದರು. ಮನೆಯಲ್ಲಿನ ಚುಚ್ಚುಮಾತು ಮೂದಲಿಕೆಯ ಮಾತು ಕೇಳಿ ಕೇಳಿ ಸಾಕಾಗಿ ತಪ್ಪಿಸಿಕೊಳ್ಳಬೇಕೆಂದು ಅವರೊಟ್ಟಿಗೆ ಪ್ರಚಾರಕಾರ್ಯಕ್ಕೆ ಹೋಗುತ್ತಿದ್ದ. ಅಲ್ಲಿ ಎಲ್ಲಾ ಪಕ್ಷಗಳ ಪ್ರಚಾರವನ್ನು ಮಾಡುತ್ತಿದ್ದ ಎಲ್ಲಾ ಪಕ್ಷಗಳ ಅಂತರಾಳ ಹಾಗೂ ಅಂತರಂಗದ ಅರಿವು ಆಗುತ್ತಾ ಹೋಯಿತು. ಪ್ರಚಾರ ಮಾಡುವಾಗ ಕೆಲವು ಹುಡುಗರು ಅಣ್ಣ ನನ್ನ ಪ್ರೀತಿಗೆ ಸಪೋರ್ಟ್ ಮಾಡಿದ್ದಾರೆ ಎಂದು ಬರುತ್ತಿದ್ದರು. ವಿಧುವಿಗೆ ಅದು ವಿಚಿತ್ರವೆನಿಸಿತ್ತು. ಮನಸ್ಸಿನಲ್ಲಿ ಗೊಂದಲ ಇವರೆಲ್ಲ ಏಕೆ ಪ್ರೀತಿಗೆ ಅಣ್ಣ ಸಪೋರ್ಟ್ ಮಾಡುತ್ತಾನೆ ಅಂತ ಬರುತ್ತಾರೆ ಈ ಜಗತ್ತಿನಲ್ಲಿ ಪ್ರೀತಿ ಪ್ರೇಮ.....

Sunday, September 13, 2020

ಪ್ರೇಮದ ಅನ್ವೇಷಣೆ ಭಾಗ-10


ಇನ್ನು ಈ ಮನುಷ್ಯ ಹಲವಾರು ಜನರ ಮುಂದೆ ಕೇವಲವಾಗಿ ಕಾಣುವಂತೆ ಮಾಡುತ್ತಾನೆ .ಈ ಮನುಷ್ಯನ ಎದುರು ನಿಲ್ಲದೆ ಹೊರತು ಬೇರೆ ದಾರಿಯಿಲ್ಲವೆಂದು ತಿಳಿದು ಮೊದಲ ಬಾರಿ ತನ್ನ ತಂದೆಯ ವಿರುದ್ಧ ಮಾತನಾಡಲು ಶುರುಮಾಡಿದ. ಇದು ಅವನ ತಾಯಿಗೆ ಅಪಮಾನ್ಯ ವಾಯಿತು. ಅವನ ತಾಳ್ಮೆಯ ಕಟ್ಟೆ ಒಡೆದು ತಂದೆ ಎಂಬ ಮುಲಾಜನ್ನು ನೋಡದೆ ತನ್ನ ತಂದೆ ಬಳಸುತ್ತಿದ್ದ ಅವಾಚ್ಯ ಶಬ್ದಗಳನ್ನು ತಿರುಗಿಸಿ ಅವರ ವಿರುದ್ಧ ಬಳಸಲು ಆರಂಭಿಸಿದ. ಆಗ ಅವನ ತಾಯಿಯು ತನ್ನ ಗಂಡನ ಪರವಾಗಿ ನಿಂತದ್ದು ನೋಡಿ ಮತ್ತೆ ಅವನಿಗೆ ಕಾಡಿದ ಪ್ರಶ್ನೆ ನಿಜವಾಗಿಯೂ ಈಕೆ ನನ್ನ ತಾಯಿಯೇ ! ತಂದೆಯ ದೌರ್ಜನ್ಯ ಪ್ರಶ್ನೆ ಮಾಡಿದ್ದೆ ಮುಳುವಾಯಿತು. ಆನಂತರದ ದಿನಗಳಲ್ಲಿ ತಾಯಿ ಎನಿಸಿಕೊಂಡವರಿಂದ ಚುಚ್ಚು ಮಾತುಗಳು ಪ್ರಾರಂಭವಾದವು. ಮನೆಯಲ್ಲಿನ ಸಂಘರ್ಷ ಹೆಚ್ಚಾಯಿತು. ಚುಚ್ಚು ಮಾತುಗಳನ್ನು ಕೇಳುವುದು ಇವನಿಗೆ ಅಭ್ಯಾಸವಾಯಿತು. ತಾಯಿಯೆಂದರೆ ಮಮತೆಯ, ಪ್ರೀತಿಯ ರೂಪ, ತ್ಯಾಗಮಹಿ ಎಂದು ಬಣ್ಣಿಸುವ ಈ ಜಗತ್ತು ನೋಡಿ ವಿಚಿತ್ರವೆನ್ನಿಸಿತು. ತಾಯೆಂದರೆ ಬರಿ ಒಳ್ಳೆಯವರಿರುತ್ತರ ? ಕೆಟ್ಟವರು ಇರುವುದಿಲ್ಲವಾ ? ಇಲ್ಲಿ ನನ್ನದೇನು ತಪ್ಪು ತಂದೆ ಎನಿಸಿಕೊಂಡವನ ದೌರ್ಜನ್ಯವನ್ನು ಪ್ರಶ್ನೆ  ಮಾಡಿದ್ದೆ ತಪ್ಪು ಎಂದು ಅನಿಸಿದ್ದು ಉಂಟು. ವಿಧು ಏನನ್ನು ಕೇಳಿದರೂ ಸಿಗದ ವಸ್ತುಗಳು ತೇಜಸ್ ಕೇಳಿದ ಕೂಡಲೇ ಸಿಗುತ್ತಿದ್ದವು ಏಕೆಂದರೆ ಅವನು ಅವರಿಗೆ ಅದೃಷ್ಟದ ಮಗನಾಗಿದ್ದನು. ಹೀಗಾಗಿ ಯಾವುದೇ ವಸ್ತುವಿನ ಮೇಲೆ ವಿಧುವಿಗೆ ವ್ಯಾಮೋಹ ಉಂಟಾಗದಂತೆ ಆಯಿತು. ಯಾವುದು ಅವನಿಗೆ ಸಿಗದೆ ಹೋದದ್ದು ಅವನು ವಸ್ತುಗಳ ಮೇಲಿನ ಆಸೆಯನ್ನು ಬಿಡಲು ನೆರವಾಯಿತು. ಆದರೆ ಮನೆಗೆ ಬಂದು ಹೋಗುವವರ ಮುಂದೆ ಅವಮಾನ ಅಪಮಾನ ಕಡಿಮೆಯಾಗಲಿಲ್ಲ .ಅವನಿಗೆ ಅವನ ಸ್ವಾಭಿಮಾನ ಬಡಿದು ಬಡಿದು ಹೇಳುತ್ತಿತ್ತು.
            ಒಂದು ತುತ್ತು ಅನ್ನಕ್ಕಾಗಿ ಇವರಿಂದ ಇನ್ನೂ ಎಷ್ಟು ಎಂದು ದೌರ್ಜನ್ಯವನ್ನು ಸಹಿಸುವುದು. ಹಲವಾರು ಬಾರಿ ಮನೆಬಿಟ್ಟು ಹೊರಡಲು ಯೋಚಿಸಿದ್ದರು ಎಲ್ಲಿಗೆ ಹೋಗುವುದು ಎಂಬ ಪ್ರಶ್ನೆಯೊಂದಿಗೆ ಸುಮ್ಮನಾಗುತ್ತಿದ್ದ. ಬದುಕು ಒಂದು ಹೋರಾಟ ಅದು ಮನೆಯಲ್ಲೇ ಇರಬಹುದು ಅಥವಾ ಸಮಾಜದಲ್ಲಿ ಇರಬಹುದು ಹೋರಾಟ ಮಾಡಬೇಕಾದದ್ದು ಅನಿವಾರ್ಯ ಅದಕ್ಕೆ ನಾನು ಸಿದ್ಧವಾಗಬೇಕು ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು. ಆತ್ಮಹತ್ಯೆಯ ಯೋಚನೆ ಅವನ ತಲೆಯಲ್ಲಿ ಹೊಳೆದರು. ಆತ್ಮಹತ್ಯೆಯ ಹಾದಿ ತುಳಿಯುವವರು ಹೇಡಿಗಳು ಎಂದು ಓದಿದ್ದ ವಿಧು ನಾನು ಹೇಡಿಯಲ್ಲ ಹೋರಾಡುತ್ತೇನೆ. ಆ ವಿಧಿ ತನ್ನ ಸಾವನ್ನು ಪಡೆಯುವವರೆಗೂ ಹೋರಾಡುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಂಡು ತನ್ನ ಬದುಕಿನ ಹೋರಾಟವನ್ನು ಮುಂದುವರೆಸಿದ್ದ. ನನ್ನನ್ನು ಇವರು ಇಷ್ಟು ಕೇವಲವಾಗಿ ಕಾಣುತ್ತಿರುವುದು ಇವರ ಹಂಗಿನಲ್ಲಿ ಇರುವುದರಿಂದಲೇ ಎಂದು ನಿರ್ಧರಿಸಿ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲು ಮುಂದಾದ, ಬಟ್ಟೆಗಳನ್ನು ತೊಳೆದುಕೊಳ್ಳುತ್ತಿದ್ದ ಜೊತೆಗೆ ತಾನೇ ಅಡಿಗೆಯನ್ನು ಮಾಡಿಕೊಳ್ಳಲು ಶುರು ಮಾಡಿದ. ಅವರ ತಾಯಿಯ ಮೇಲಿನ ಅವಲಂಬನೆಯಿಂದ ಸಂಪೂರ್ಣವಾಗಿ ಹೊರಬಂದ. ತನ್ನ ಕಾಲೇಜಿನಲ್ಲಿ 11ನೇ ತರಗತಿ ಉತ್ತೀರ್ಣನಾದ ವಿಧು, 12ನೇ ತರಗತಿ ಪ್ರವೇಶ ಪಡೆಯುವ ಹೊತ್ತಿಗೆ ಅವನ ಮನಸ್ಸಿನಲ್ಲಿ ತೊಳಲಾಟ ಹದಿಹರಿಯದ ಹೊಯ್ದಾಟ ತನ್ನ ನೋವು ನಲಿವನ್ನು ಯಾರಲ್ಲಿ ಹೇಳಿಕೊಳ್ಳಲಿ ಎಂಬ ಜಿಜ್ಞಾಸೆ. ನೋವನ್ನು ಯಾರಿಗಾದರೂ ಹೇಳಿಕೊಂಡರು ಯಾರು ಕೂಡ ಅದಕ್ಕೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂಬ ಸತ್ಯದ ಅರಿವು ಅವನಿಗಿತ್ತು .ಸ್ನೇಹಿತರು ಮನೆಗೆ ಬಂದರು ಅವರನ್ನು ಮನೆಯ ಒಳಗೆ ಕರೆಯಲು ಹಿಂದುಮುಂದು ನೋಡುತ್ತಿದ. ಒಳಗೆ ಕರೆದರೆ ಎಲ್ಲಿ ಆಥಿತ್ಯ ನಾನೇ ಕೊಡಬೇಕಾಗಿ ಬರುವುದು ಅವರು ಕೇಳಿದರೆ ಏನು ಹೇಳುವುದು ಎಂಬ ಅಂಜಿಕೆ ಇನ್ನು ಅವರ ತಂದೆ ತಾಯಿಯನ್ನು ಪರಿಚಯ ಮಾಡಿ ಕೊಡುವಂತಿರಲಿಲ್ಲ ಬಿಡುವಂತೆಯೂ ಇರಲಿಲ್ಲ ಪರಿಚಯ ಮಾಡಿಕೊಟ್ಟರೆ ಎಲ್ಲಿ ಸ್ನೇಹಿತರ ಮುಂದೆ ಅವಮಾನ ಮಾಡುತ್ತಾರೆ ಎಂಬ ಯೋಚನೆ....

Sunday, August 16, 2020

ಪ್ರೇಮದ ಅನ್ವೇಷಣೆ ಭಾಗ-9.

ಹಿರಿಯ ಮಗನ ಹೆಸರು ವಿಧು, ಕಿರಿಯ ಮಗನ ಹೆಸರು ತೇಜಸ್. ತಂದೆಯವರದು ಬೆಲೆಯನ್ನೇ ಕಟ್ಟಲಾಗದ ಶ್ರೇಷ್ಠ ವೃತ್ತಿಯಾದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು. ತಾಯಿಯವರು ಗೃಹಿಣಿ ಒಂದು ಚಿಕ್ಕ ಸಂಸಾರ ಆದರೆ ಗುಣ ವಿಶೇಷತೆಗಳು ಬೇರೆ. ವಿಧು ಹಠಮಾರಿ ಸ್ವಭಾವದ ಹುಡುಗ ತೇಜಸ್ ಮೃದುಸ್ವಭಾವದ ಹುಡುಗ ಗಾದೆಮಾತು ಹೇಳುವಂತೆ ಕಿರಿಯ ಮಕ್ಕಳು ಕಿವಿ ಕಚ್ಚಿದರು ಪ್ರೀತಿ ಎನ್ನುವಂತೆ, ಕಿರಿಯ ಮಗ ತೇಜಸ್ ಮೇಲೆ ವಿಶೇಷವಾದ ಪ್ರೀತಿ .ಆ ಪ್ರೀತಿ ಎಷ್ಟರ ಮಟ್ಟಿಗೆ ಇತ್ತೆಂದರೆ ಆಗುವ ಅನಿಷ್ಟಕ್ಕೆಲ್ಲ ವಿಧು ಕಾರಣ ಅದೃಷ್ಟಕ್ಕೆ ಎಲ್ಲಾ ತೇಜಸ್ ಕಾರಣ ಎನ್ನುವ ಮಟ್ಟಿಗೆ. ಈ ಮಟ್ಟಿನ ತಾತ್ಸರ ವಿಧುವಿಗೆ ಮನೆಯವರ ಮೇಲೆ ಪ್ರೀತಿ ಇಲ್ಲದಂತೆ ಮಾಡಿತು. ತಂದೆ-ತಾಯಿ ತಮ್ಮ ಎಲ್ಲರೂ ಇದ್ದರೂ ಇಲ್ಲದಂತಿತ್ತು ಆತನ ಜೀವನ. ಅವನ ಮನಸ್ಸಿನಲ್ಲಿ  ಗಾಡ ನೋವಿನೊಂದಿಗೆ ಮನಸ್ಸಿನಲ್ಲಿ ಯೋಚನೆ ಮಾಡುತ್ತಿದ್ದನು. 
           ಬದುಕು ಬಹಳ ವಿಚಿತ್ರ ಎಲ್ಲ ಇದ್ದು ಇಲ್ಲದಂತೆ ಇರುವುದಕ್ಕಿಂತ ಇಲ್ಲದಂತೆ ಇರುವುದು ಉತ್ತಮ ಎಂದು ಮನಸ್ಸಿನಲ್ಲೇ ನೊಂದು ತಾನೇ ಸಮಾಧಾನಪಡಿಸಿ ಕೊಳ್ಳುತ್ತಿದ್ದನು. ಇದೆಲ್ಲದರ ನಡುವೆ ಅವನದು ವಿದ್ಯಾಭ್ಯಾಸದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಏನೂ ಇರಲಿಲ್ಲ. ಹಾಗಾಗಿ ಇವನು ಅವರ ತಂದೆ-ತಾಯಿಯ ಪಾಲಿಗೆ ದಡ್ಡ ಶಿಖಾಮಣಿಯಂತೆ ಕಾಣುತ್ತಿದ್ದನು.  ಇನ್ನು ಅವರ ತಂದೆ ಯಾವಾಗಲೂ ಋಣಾತ್ಮಕ ಅಂಶವನ್ನು ನೋಡುತ್ತಿದ್ದರಿಂದ ಆ ಋಣಾತ್ಮಕ ಪರಿಣಾಮವನ್ನು ವಿಧು ಪೂರ್ಣ ಪ್ರಮಾಣದಲ್ಲಿ ಎದುರಿಸಬೇಕಾಯಿತು. ಮನೆಗೆ ಬಂದ ನೆಂಟರು ಸ್ನೇಹಿತರ ಮುಂದೆ ವಿಧುವನ್ನು ತೆಗಳುವುದು, ತೇಜಸ್ಸನ್ನು ಹೊಗಳುವುದು ಇವರ ಕಾಯಕ ಎನ್ನುವಂತೆ ವರ್ತಿಸುತ್ತಿದ್ದರು. ವಿಧುವಿನ ಜೀವನದಲ್ಲಿ ಪ್ರೀತಿ ತೋರಿಸುವ ವ್ಯಕ್ತಿಗಳು ಚಿಕ್ಕವಯಸ್ಸಿನಿಂದಲೇ ಅವನಿಗೆ ಸಿಗಲಿಲ್ಲ ಅವನ ದುರದೃಷ್ಟವೋ ಏನೋ ಭಾವನೆಗಳು ಅರಳುವ ಸಮಯದಲ್ಲಿ ಭಾವನೆಗಳು ಸತ್ತು ಹೋಗಿದ್ದವು. ಬದುಕು ಬೇಡ ಎನ್ನುವಷ್ಟುರ ಮಟ್ಟಿಗೆ ಜಿಗುಪ್ಸೆ ಪ್ರತಿ ಹಂತದಲ್ಲೂ ಮೂದಲಿಕೆಯ ಮಾತುಗಳು, ಅವನ ತಂದೆ-ತಾಯಿ ನಡೆಸಿಕೊಳ್ಳುತ್ತಿದ್ದ ರೀತಿ ನಾನು ಇವರ ಮಗನೋ ಅಲ್ಲವಾ ಎಂದು ಅನುಮಾನ ಉಂಟುಮಾಡುವಂತೆ ಇರುತ್ತಿತ್ತು. ಅವರ ನಡವಳಿಕೆಗಳು ವಿಧುವಿಗೆ ಒಂಟಿತನದಿಂದ ಬದುಕುವ ಪಾಠವನ್ನು ಕಲಿಸಿ ಬಿಟ್ಟಿದ್ದವು.
                  ಎಲ್ಲಾ ಹೇಳುತ್ತಾರೆ ಕೆಟ್ಟ ಮಕ್ಕಳು ಹುಟ್ಟಬಹುದು. ಆದರೆ ಕೆಟ್ಟ ತಂದೆ-ತಾಯಿ ಇರುವುದಿಲ್ಲವೆಂದು ಆದರೆ ವಿಧುವಿಗೆ ಈ ಮಾತು ಎಷ್ಟು ಸತ್ಯವಿರಬಹುದು ಎಂಬ ಜಿಜ್ಞಾಸೆ. ಪ್ರತಿಬಾರಿಯೂ ಇವನು ದಡ್ಡ ಶಿಖಾಮಣಿ ಇವನು ಹತ್ತನೇ ತರಗತಿಯನ್ನು ಕೂಡ ಪಾಸ್ ಮಾಡಲಾರ ಎಂದು ತಿಳಿದಿದ್ದ ಹಾಗೂ ಎಲ್ಲರ ಮುಂದೆ ಮೂದಲಿಸುತ್ತಿದ್ದ ಅವನ ತಂದೆ ತಾಯಿಗೆ ಅಚ್ಚರಿಯಾಗುವಂತೆ ಹತ್ತನೆಯ ತರಗತಿಯಲ್ಲಿ ಉತ್ತೀರ್ಣನಾದ. ತಾನು ಅನುಭವಿಸುತ್ತಿದ್ದ ಮೂದಲಿಕೆ ಅಪಹಾಸ್ಯ ಇಂತಹದನ್ನೆಲ್ಲ ವಿರೋಧಿಸುತ್ತಿದ್ದ ಕಾರಣಕ್ಕೋ ಏನೋ, ಸಹಪಾಠಿಗಳು ಬೇರೆಯವರಿಗೆ ಮಾಡುತ್ತಿದ್ದ ಅಪಹಾಸ್ಯ ,ಅವಮಾನ ಕಟುವಾಗಿ ವಿರೋಧಿಸುತ್ತಿದ್ದ .ಮನುಷ್ಯರ ಹೊಟ್ಟೆಕಿಚ್ಚಿನ ಗುಣ ಇವನನ್ನು ಯಾವಾಗಲೂ ಗೊಂದಲದಲ್ಲಿ ಇರುವಂತೆ ಮಾಡುತ್ತಿತ್ತು. ಬೇರೆಯವರನ್ನ ಮೂದಲಿಸಿ ಅಪಹಾಸ್ಯ ಮಾಡಿ ಇವರು ಗಳಿಸುವುದಾದರೂ ಏನನ್ನು ಎಂಬ ಪ್ರಶ್ನೆ ಕಾಡುತ್ತಿತ್ತು .10ನೇ ತರಗತಿ ಮುಗಿದ ಮೇಲೆ 11ನೇ ತರಗತಿ ವಿಜ್ಞಾನ ವಿಷಯದಲ್ಲಿ ಪದವಿ ಪೂರ್ವ ಕಾಲೇಜಿಗೆ ಸೇರಿಕೊಂಡ. ಅಲ್ಲಿ ತನ್ನ ಬದುಕಿನ ಹೊಸ ಚಿಂತನೆಗಳು ಹೊಸ ವಿಚಾರಗಳು ಹೊಸ ಕನಸುಗಳೊಂದಿಗೆ ತನ್ನ ಬದುಕಿನ ಯಾತ್ರೆಯನ್ನು ಹೊಸ ಹುಮ್ಮಸ್ಸಿನಿಂದ ಮುಂದುವರಿಸಿಕೊಂಡು ಹೋಗುವುದಾಗಿ ನಿಶ್ಚಯಿಸಿಕೊಂಡು, ಹೊಸ ಬದುಕಿಗೆ ತನ್ನನ್ನು ತಾನು ತೆರೆದುಕೊಂಡು ಮುನ್ನಡೆದ. ಆದರೆ ಅವನ ಮನೆಯಲ್ಲಿ ಯಾವ ಬದಲಾವಣೆಯನ್ನು ಕಾಣಲಿಲ್ಲ ಮನೆಯಲ್ಲಿ ಮಕ್ಕಳು ದೊಡ್ಡವರಾದಮೇಲೆ ಮಕ್ಕಳಿಗಿಂತ ಹೆಚ್ಚಾಗಿ ಸ್ನೇಹಿತರಂತೆ ಕಾಣಬೇಕು ಎಂಬ ಅರಿವಿಲ್ಲದ ಅವರ ತಂದೆ ಇನ್ನೂ ಅವನನ್ನು ಹೊಡೆಯುವುದು ಬಡಿಯುವುದು ಮುಂದುವರಿಸಿದರು. ಇನ್ನು ಇವರ ನಡವಳಿಕೆ ಇಂದ ನೋವನ್ನು ಅನುಭವಿಸಿ ಅವನ ಸಹನೆಯ ಕಟ್ಟೆ ಒಡೆದು ಹೋಗಿತ್ತು. ಇದೇ ರೀತಿ ಮುಂದುವರೆದರೆ ನನ್ನನ್ನು......

Tuesday, August 11, 2020

ಪ್ರೇಮದ ಅನ್ವೇಷಣೆ ಭಾಗ-8

          ನೀನು ಹೇಳುವುದು ಸತ್ಯ; ಆದರೆ ದೇಶವನ್ನು ನಿನ್ನಂತೆ ತುಂಬಾ ಜನರು ಪ್ರೀತಿಸುತ್ತಾರೆ. ನಿನ್ನ ದೇಶಪ್ರೇಮದ ಬಗ್ಗೆ ಸಂಶಯವೇ ಬೇಡ ಎಂದು ಹೇಳುತ್ತಾ ಅನಿಕೇತ್ ಈಗಲಾದರೂ ಹೇಳು ಯಾರನ್ನಾದರೂ ಪ್ರೀತಿಸುತ್ತಿದ್ದೀಯ ಎಂದು ? ಅವನ ಪ್ರಶ್ನೆಗೆ ಉತ್ತರ ಎನ್ನುವಂತೆ ವಿಧು ಇಲ್ಲ ಯಾರನ್ನೂ ನಾನು ಇನ್ನು ಪ್ರೀತಿಸಿಲ್ಲ ಎಂದು ಹೇಳುವಾಗಲೇ ಕೊನೆಪಕ್ಷ ಮದುವೆ ಯೋಚನೆ ಏನಾದರೂ ಇದೆಯೇ ? ಎಂದು ಕೇಳಿದ, ಹಾಗೇನು ಇಲ್ಲ ನೋಡೋಣ ಕಾಲ ಬಂದಾಗ ಏನೇನು ಆಗಬೇಕು ಅದು ಆಗೇ ತಿರುತ್ತದೆ. ಸರಿ ಈಗ ಎಲ್ಲಿ ಹೋಗುತ್ತಿರುವೆ ಈ ಸಮಯದಲ್ಲಿ ಶಿವಮೊಗ್ಗಕ್ಕೆ ಹೋಗಲು ಕಾರಣವಾದರೂ ಏನು ? ನಿನ್ನ ವ್ಯವಹಾರದ ದೃಷ್ಟಿಯಿಂದ ಅದಕ್ಕೆ ಸಂಬಂಧಪಟ್ಟಂತೆ ಹೋಗುತ್ತಿರುವೆಯ ಹೇಗೆ ಎಂದು ಪ್ರಶ್ನಿಸಿದ. ಇಲ್ಲ ನಾನು ರಾಷ್ಟ್ರೀಯ ಸೇವಾ ಸಮಿತಿಯಿಂದ ಚುನಾವಣಾ ಕಾರ್ಯಕ್ಕಾಗಿ ರಾಷ್ಟ್ರೀಯ ಸೇವಾ ಪಾರ್ಟಿಯಲ್ಲಿ ಕೆಲಸ ಮಾಡಲು ಹೋಗುತ್ತಿರುವೆ ಎಂದ ವಿಧು. ಓ ನೀನು ಇನ್ನು ನಿನ್ನ ರಾಜಕೀಯ ಒಡನಾಟವನ್ನು ಬಿಟ್ಟಿಲ್ಲ ಎಂದಾಯಿತು, ಹೋಗಲಿ ಬಿಡು ರಾಜಕೀಯದಲ್ಲಿ ಆದರೂ  ನೀನು ಎತ್ತರ ಸ್ಥಾನದಲ್ಲಿ ಬೆಳೆಯಬೇಕು ಎನ್ನುವಷ್ಟರಲ್ಲಿ ಶಿವಮೊಗ್ಗಕ್ಕೆ ಹೋಗುವ ಬಸ್ ಬಂದಿತು. ಅನಿಕೇತ್ ವಿಧುವನ್ನು ಬಸ್ಸಿಗೆ ಹತ್ತಿಸಿ ಹೊರಟ. ವಿಧು ಬಸ್ ಹತ್ತಿದ ಕೂಡಲೇ ಕಿಟಕಿಯ ಪಕ್ಕದ ಜಾಗವನ್ನು ಹುಡುಕಿ ಕುಳಿತ ಬಸ್ ತನ್ನ ಪಯಣವನ್ನು ಆರಂಭಿಸಿತು.
             ಟಿಕೆಟ್ ತೆಗೆದುಕೊಂಡ ವಿಧು ಬಸ್ಸಿನ ಕಿಟಕಿಯನ್ನು ತೆಗೆದ ಆಹ್ಲಾದಕರ ತಂಗಾಳಿ. ಅದು ಮುಸ್ಸಂಜೆಯ ಸಮಯ ಸೂರ್ಯ ಪೂರ್ವದಿಂದ ತನ್ನ ಪಥವನ್ನು ಪಶ್ಚಿಮದ ಕಡೆಗೆ ತನ್ನ ಪಯಣವನ್ನು ಬಲು ಜೋರಾಗಿ ನಡೆಸುತ್ತಿದ್ದಾನೆ ಎನ್ನುವಂತೆ ಭಾಸವಾಗುತ್ತಿತ್ತು. ಆ ಕಿತ್ತಲೆ ಬಣ್ಣದ ಕಿರಣಗಳು ತನ್ನ ಅಂದಿನ ಕರ್ತವ್ಯವನ್ನು ಮುಗಿಸಿ ಮನೆಗೆ ಸೇರುವ ತವಕದಲ್ಲಿ ಮಕ್ಕಳು ಶಾಲೆಯನ್ನು ಬಿಟ್ಟು ಕೂಡಲೇ ಮನೆಗೆ ಹೋಗುವಂತೆ ಹೋಗುವ ರೀತಿಯಲ್ಲಿ ಕಾಣುತ್ತಿತ್ತು. ಬೆಳ್ಳಕ್ಕಿ ಹಿಂಡು ತನ್ನ ಮನೆಗಳಿಗೆ ತೆರಳುವ ದೃಶ್ಯ ಮನಸ್ಸಿಗೆ ಮುದವನ್ನು ಕೊಡುತ್ತಿತ್ತು .ಇನ್ನೇನು ಸಂಜೆ ಕತ್ತಲು ಆವರಿಸುತ್ತಿದ್ದಂತೆ ಪ್ರಕೃತಿಯ ಸೌಂದರ್ಯ ಹಂತಹಂತವಾಗಿ ಮರೆಯಾಗುತ್ತಿತ್ತು. ಕತ್ತಲು ಕವಿಯುತ್ತಿದ್ದಂತೆ ತನ್ನ ಬದುಕಿನ ಕತ್ತಲಿನ ಬಗ್ಗೆ ಯೋಚಿಸಲು ಶುರುಮಾಡಿದ ವಿಧು. ಹೌದು ನಾನು ಏಕೆ ಹೀಗೆ ? ನನ್ನ ಸ್ನೇಹಿತರೆಲ್ಲ ಏಕೆ ನನ್ನನ್ನು ನೀನು ತುಂಬಾ ವಿಭಿನ್ನ ಎಂದು ಕರೆಯುತ್ತಾರೆ, ಎಂದು ಯೋಚಿಸತೊಡಗಿದ.  ಮನುಷ್ಯನ ಬದುಕಿನ ಹಾಗೂ ಪರಿಸರದ ಆಧಾರದ ಮೇಲೆ ಅವನ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎನಿಸಿತು ಮನಸ್ಸಿನಲ್ಲಿ. ವಿಧುವಿನ ಮನಸ್ಸಿನಲ್ಲಿ ಹಲವಾರು ವಿಚಾರಗಳು ಸುಳಿದವು. ನಾನೇಕೆ ಹೀಗೆ ನಾನು ಬೆಳೆದು ಬಂದ ಪರಿಸರವೇ ? ಏಕೆ ನಾನು ಎಲ್ಲರಿಗಿಂತ ಭಿನ್ನವಾಗಿ ಬೆಳೆದೆ. ನಾನೇ ಬಿನ್ನವ ಅಥವಾ ಈ ಲೋಕ ಬಿನ್ನವಾಗಿದೆಯಾ? ಅಥವಾ ನನ್ನ ಬಾಲ್ಯದ ಪ್ರಭಾವ ನಾ ? ಅಥವಾ ಅನುಭವಕ್ಕೆ ಮಾತ್ರ ತಿಳಿಯುವಂತಹ ಯಾವುದಾದರೂ ಅತೀಂದ್ರಿಯ ಶಕ್ತಿ ಆಟದಲ್ಲಿ ಸಿಲುಕಿ ಕೊಂಡಿದ್ದೇನ ? ಎಂಬ ಜಿಜ್ಞಾಸೆ. ಮನಸ್ಸಿನಲ್ಲಿ ಹೀಗೆ ಹತ್ತು ಹಲವಾರು ಯೋಜನೆಗಳು ಹರಿದವು. ಬದುಕಿನ ಪಯಣ ವಿಚಿತ್ರ ಮನುಷ್ಯ ಹುಟ್ಟಿದಾಗ ಇರುವ ಮುಗ್ಧ ಮನಸ್ಸಿನಿಂದ ಹಿಡಿದು ಬದುಕಿನ ಪರಿಪಕ್ವತೆ ತಿಳಿಯುವ ಒಳಗೆ ಬದುಕು ಮುಗಿದು ಹೋಗಿರುತ್ತದೆ. ಅಲ್ಲವಾ ? ಮನಸ್ಸಿನಲ್ಲಿ ಬದುಕಿನ ಪುಟಗಳನ್ನು ತಿರುವು  ಹಾಕಲು ಶುರುಮಾಡಿದ. ಅವನ ಮನಸ್ಸು ತಾನು ಬೆಳೆದ ಚಿಕ್ಕಮಗಳೂರಿನ ಕಡೆ ಹೋಯಿತು. ಚಿಕ್ಕಮಗಳೂರು ಎಂದರೆ ಕೇಳಬೇಕಾ ಪ್ರಕೃತಿ ಸೌಂದರ್ಯ ಮೈಮೇಲೆ ಹೊತ್ತು ನಿಂತಂತಹ ಸೌಂದರ್ಯ ಗಿರಿಶಿಖರಗಳ ನೆಲೆಬೀಡು ಎಂಥವರನ್ನು ತನ್ನ ಸೌಂದರ್ಯದಿಂದ ಮನಸೂರೆಗೊಳ್ಳುವಂತೆ ಮಾಡುವ ಪ್ರದೇಶ. ಚಿಕ್ಕಮಗಳೂರು ಜಿಲ್ಲೆ ಬಯಲುಸೀಮೆ ಹಾಗೂ ಮಲೆನಾಡಿನ ಸಂಗಮ ಅಲ್ಲಿಯ  ಕಾಫಿಯ ಘಮ ವಿಶ್ವವ್ಯಾಪಿ ಇಂತಹ ಸೌಂದರ್ಯದ ಮಡಿಲಿನಲ್ಲಿ ಒಂದು ಪುಟ್ಟ ಸಂಸಾರ, ಗಂಡ ಹೆಂಡತಿ ಮತ್ತು ಮಕ್ಕಳು  ಅದರಲ್ಲಿ ಹಿರಿಯ ಮಗನ ಹೆಸರು.....

Thursday, July 23, 2020

ಪ್ರೇಮದ ಅನ್ವೇಷಣೆ ಭಾಗ-7

ಮನಸ್ಸಿನಲ್ಲಿ ಎಲ್ಲೋ ಪ್ರತಿಯೊಂದುನ್ನು ಪಡೆಯಲು ಅದೃಷ್ಟ ಮಾಡಿರಬೇಕು ಎಂದು ಕೆಲವರು ಹೇಳುವ ಮಾತು ಸತ್ಯವೆನಿಸಿತು. ರೈಲಿನಿಂದ ಇಳಿದು ನೇರವಾಗಿ ರೈಲಿನ ವಿಚಾರಣೆಯ ತಿಳಿಯುವ ಸಲುವಾಗಿ ಅಲ್ಲಿದ್ದವರನ್ನು ಕೇಳಿದ ಅವರು ಶಿವಮೊಗ್ಗದ ಕಡೆ ಸಂಜೆಯತನಕ ಯಾವುದೇ ರೈಲು ಗಾಡಿಗಳು ಇರುವುದಿಲ್ಲ ಎಂದರು. ಬೀರೂರಿನಿಂದ ಬಸ್ ನಿಲ್ದಾಣಕ್ಕೆ ಒಂದುವರೆ ಕಿಲೋಮೀಟರ್ ದೂರ, ಬೇಸಿಗೆಯ ಬಿಸಿಲು ಬೇರೆ, ಬಿಸಿಲು ಕಣ್ಣಿಗೆ ರಾಚುತ್ತಿತ್ತು . ಆಟೋಗಾಗಿ ಕಾದರೂ ಒಂದು ಆಟೋ ಬಾರದೆ ಹೋಯಿತು. ಇದ್ದ ಎರಡು ಆಟೋಗಳು ಮೊದಲೇ ಬುಕ್ ಆಗಿದ್ದವು. ರೈಲು ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಸಾಗಲು ಬೇರೆ ಅವಕಾಶವಿಲ್ಲದ ಕಾರಣ ವಿಧು ತನ್ನ ಮಣಬಾರದ ಬ್ಯಾಗಿನೊಂದಿಗೆ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಲು ಶುರು ಮಾಡಿದ, ಬರುವ ದಾರಿಯಲ್ಲಿ ಬಹಳ ಬಾಯಾರಿಕೆಯಾಗಿ ನೀರಿನ ಬಾಟಲ್ ನಿಂದ ನೀರು ಕುಡಿಯಲು ತೆಗೆದರೆ ನೀರು ಕೂಡ ಸಣ್ಣ ಪ್ರಮಾಣದ ಬಿಸಿಯಾಗಿದ್ದ ಅನುಭವ.  ಅಬ್ಬಾ ಎಂತಹ ಬಿಸಿಲಿನ ಝಳ ಎಂದುಕೊಂಡು ಮುಂದೆ ಹೆಜ್ಜೆ ಇಡಬೇಕಾದರೆ ವಿಧುವಿನ ಗೆಳೆಯನಾದ ಅನಿಕೇತ ಸಿಕ್ಕಿದ.
            ವಿಧು ನೀನೇನು ಇಲ್ಲಿ ಎಂದು ಕೇಳಿದ ? ವಿಧು ತಮಾಷೆಗಾಗಿ ಮದುವೆಯ ಪ್ರವಚನ ಗುಂಗಿನಿಂದ ಹೊರಬಂದಿರಲಿಲ್ಲದವನ ಆಗಿದ್ದರಿಂದ ಇಲ್ಲೇ ಮದುವೆಯಾಗಲು ಹೆಣ್ಣು ನೋಡಲು ಬಂದಿದ್ದೇನೆ ಎಂದು ತಮಾಷೆ ಮಾಡಿದ. ಅದಕ್ಕೆ ನಕ್ಕ ಅನಿಕೇತ್ ತುಂಬಾ ದಿನಗಳ ನಂತರ ಸಿಕ್ಕಿದಿಯಾ ಬಾ ಏನಾದರೂ ತಿಂಡಿಯನ್ನು ತಿಂದು ಕಾಫಿಯನ್ನು ಕುಡಿಯೋಣ ಎಂದ. ವಿಧು ಕೂಡ ತುಂಬಾ ದಿನಗಳ ನಂತರ ಸಿಕ್ಕ ಸ್ನೇಹಿತನ ಖುಷಿಗಾಗಿ ಸರಿ ನಡಿ ಹೋಗೋಣವೆಂದ. ಅನಿಕೇತ್ ತನ್ನ ಬೈಕಿನಲ್ಲಿ ಮಣಭಾರದ ಬ್ಯಾಗನ್ನು ಇಟ್ಟುಕೊಂಡು ಕೇಳಿದ ಹೆಣ್ಣು ನೋಡಲು ಬಂದೆ ಎಂದು ಹೇಳಿದೆ ,ನೋಡಿದರೆ ಇಷ್ಟು ದೊಡ್ಡದಾದ ಭಾರವಾದ ಬ್ಯಾಗನ್ನು ಇಟ್ಟುಕೊಂಡಿದಿಯಲ್ಲ ಎಂದ. ಅವನ ಮಾತಿಗೆ ನಕ್ಕ ವಿಧು ಅಯ್ಯೋ ಸುಮ್ಮನೆ ಹೇಳಿದೆ ಮಾರಾಯ ಎಂದ. ನಾನು ಹೌದು ಅಂದುಕೊಂಡೆ ಇಷ್ಟು ದೊಡ್ಡದಾದ ಬ್ಯಾಗನ್ನು ಹಾಕಿಕೊಂಡು ಯಾರು ಹೆಣ್ಣನ್ನು ನೋಡಲು ಬರುತ್ತಾರೆ ಎಂದು ? ಆದರೂ ನೀನು ತುಂಬಾ ಗಂಭೀರ ವ್ಯಕ್ತಿ ಅಲ್ಲವೇ ಹಾಗಾಗಿ ಇದ್ದರೂ ಇರಬಹುದು ಎಂದು ಅಂದುಕೊಂಡೆ ಎಂದ ನಸುನಕ್ಕ ವಿಧು ಯಾರಾದರೂ ಹೆಣ್ಣು ನೋಡಲು ಹೋಗುವವರು ಒಂಟಿಯಾಗಿ ಅದು ಮಣಬಾರದ ಬ್ಯಾಗಿನೊಂದಿಗೆ ಬರುವುದುಂಟಾ ?  ಎಂದು ಹೇಳುತ್ತಾ ಸರಿ ಬಿಡು ಮತ್ತೆ ಏನು ಸಮಾಚಾರ ಎಂದು ಕೇಳಿದ. ಅದಕ್ಕೆ ಅನಿಕೇತ್ ನನ್ನದೇನು ಇಲ್ಲ ಎಲ್ಲಾ ನೀನೆ ಹೇಳಬೇಕು ಬೆಂಗಳೂರು ಹುಡುಗ ಎಂದು ಮಾತು ಮುಂದುವರಿಸಿದ. ಅನಿಕೇತ್ ನಾನೇನು ನಮ್ಮ ಊರಿನಲ್ಲಿ ಬಂದು ಸೆಟಲ್ ಆಗಿದ್ದೀನಿ. ನೀನು ಇನ್ನೂ ಲೋಕ ಸಂಚಾರ ಮಾಡಿಕೊಂಡು ಇದ್ದಿಯೋ ಅಥವಾ ಎಲ್ಲಾದರೂ ಒಂದು ಕಡೆ ಬದುಕು ಕಟ್ಟಿ ಕೊಂಡಿದ್ದೀಯಾ ? ಎಂದು ಕೇಳಿದ.  ವಿಧುವಿನ ನಗುವನ್ನು ನೋಡಿದ ಕೂಡಲೇ ಅದರಲ್ಲೂ ವಿಧವಿನ ಮುಗುಳು ನಗುವಿನ ಹಿಂದೆ ನೂರಾರು ಅರ್ಥವನ್ನು ಹುಡುಕುವ ಅನಿಕೇತ್ ಇನ್ನೂ ಒಂದು ಕಡೆ ನೆಲೆ ನಿಂತಿಲ್ಲ ಅನಿಸುತ್ತಿದೆ ಎಂದು ನೇರವಾಗಿ ಹೇಳಿದ. ವಿಧು ತನ್ನ ನಗುವಿನೊಂದಿಗೆ ಇಲ್ಲ ಬೆಂಗಳೂರಿನಲ್ಲಿ ಇವಾಗ ಸ್ವಂತ ಉದ್ಯೋಗವನ್ನು ಮಾಡುತ್ತಿದ್ದೇನೆ ಎಂದು ಹೇಳಿದ. ಕೂಡಲೇ ಮಾತು ತಡೆದ ಅನಿಕೇತ್ ನಿಲ್ಲು ! ನಿಜವಾಗಲೂ ಯಾವಾಗಲೂ ನೋಡಿದರೆ ದೇಶ ದೇಶ ಎಂದು ಊರೂರು ಸುತ್ತುವ ನೀನು ಸ್ವಂತ ಉದ್ಯೋಗ ಮಾಡುತ್ತಿದ್ದೀಯಾ ಎಂದರೆ ನಂಬಲು ಕಷ್ಟವಾಗುತ್ತಿದೆ .
           ನೀನು ಇಂತಹ ನಿರ್ಧಾರಕ್ಕೆ ಬಂದಿದ್ದೀಯಾ ಎಂದರೆ ಎಲ್ಲೋ ಪ್ರೀತಿಯಲ್ಲಿ ಬಿದ್ದಿರಬೇಕು ಮದುವೆಯ ಬಗ್ಗೆ ವಿಚಾರ ಮಾಡಿರಬೇಕು ಹಾಗಾಗಿ ಒಂದು ಕಡೆ ನೆಲೆ ನಿಂತಿರುವೆ ! ನೀನು ಎಂದು  ಅನುಮಾನದಿಂದ ಕೇಳಿದ ಇನ್ನೇನು ಇದು ಮಾತು ಮುಂದುವರೆಸಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಮಾತು ಮುಂದುವರಿಸಿದ ಅನಿಕೇತ್ ನಾವು ಎಲ್ಲರೂ ಪ್ರೀತಿಯಲ್ಲಿ ಬಿದ್ದರೂ ನೀನು ಮಾತ್ರ ಯಾರನ್ನು ಪ್ರೀತಿಸುವ ಮನಸ್ಸು ಮಾಡಲಿಲ್ಲ ಎಂದ. ವಿಧು ಮಾತು ಮುಂದುವರಿಸುತ್ತಾ ಪ್ರೀತಿ ಮನಸ್ಸಿನಿಂದ ಬರಬೇಕು. ಅದು ಬೇರೆಯವರು ಪ್ರೀತಿಸಿದರೆಂದು ನಾವು ಪ್ರೀತಿಸಲು ಶುರು ಮಾಡಿದರೆ ಅದು ನಿಜವಾದ ಪ್ರೀತಿ ಆಗಲು ಸಾಧ್ಯವೇ ? ಏಕೆ ! ನಾನು ಪ್ರೀತಿಸುತ್ತಿದ್ದೇನೆ ನಾನು ನನ್ನ ದೇಶವನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದೇನೆ. ಇನ್ನು ಏನು ಆಗಬೇಕು ಎಂಬ ಪ್ರಶ್ನೆಗೆ ಅನಿಕೇತ್ ವಿಧು ನೀನು ಹೇಳುವುದು ಸತ್ಯ ಆದರೆ....
Author : Rakesh Bhagiratha.

Monday, July 13, 2020

ಪ್ರೇಮದ ಅನ್ವೇಷಣೆ ಭಾಗ-6

ಈ ಜನ್ಮದಲ್ಲಿ ಮದುವೆಯಾಗಬಾರದೆಂದು ನಿಶ್ಚಯಿಸಿದಕ್ಕೆ ಪ್ರತಿಯಾಗಿ ಇವರು ಮದುವೆಯ ಪ್ರವಚನ ಮಾಡುತ್ತಿದ್ದಾರಲ್ಲ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, ನಾನು ಈ ಜನ್ಮದಲ್ಲಿ ಮದುವೆಯಾಗುವುದಿಲ್ಲ ಎಂದು ಹೇಳುವಷ್ಟರಲ್ಲಿ ಚಿದಾನಂದ ಅವರು ಈ ರೀತಿ ಮಗನ ವಯಸ್ಸಿನ ಮಕ್ಕಳನ್ನು ಕಂಡರೆ ಮದುವೆ ಬಗ್ಗೆ ಮಾತನಾಡುತ್ತಾಳೆ ಎಂದರು. ಇವರನ್ನು ಹೀಗೆ ಬಿಟ್ಟರೆ ಬರೀ ಮದುವೆಯ ಬಗ್ಗೆ ಮಾತನಾಡುತ್ತಾರೆ ಎಂದು ಗೊತ್ತಾದ ಕೂಡಲೇ ಅವರ ಚಿತ್ತವನ್ನು ಪ್ರಕೃತಿಯ ಕಡೆಗೆ ಸೆಳೆಯಬೇಕು ಎಂಬ ಉದ್ದೇಶದಿಂದ ಯೋಚಿಸುತ್ತಿರಬೇಕಾದರೆ ರೈಲು ಅರಸೀಕೆರೆ ನಿಲ್ದಾಣ ತಲುಪಿತ್ತು. ಅರಸೀಕೆರೆ ನಿಲ್ದಾಣ ಜಂಕ್ಷನ್ ಆಗಿರುವುದರಿಂದ ರೈಲು ಸ್ವಲ್ಪ ಸಮಯ ಅಲ್ಲಿ ನಿಲ್ಲುತ್ತದೆ ಎಂದು ತಿಳಿದು ವಿಧು ರೈಲಿನಿಂದ ಕೆಳಗೆ ಇಳಿದು ಸ್ವಲ್ಪ ಸಮಯ ಅತ್ತಿಂದಿತ್ತಾ ಓಡಾಡಿದ, ರೈಲಿನಲ್ಲಿ ಅರಸೀಕೆರೆ ಮಾರ್ಗ ಸಂಚರಿಸುವಾಗ ಯಾವಾಗಲೂ ಬಾದಾಮಿಹಾಲನ್ನು  ಕುಡಿಯುತ್ತಿದ್ದ. ಅದರಂತೆ ಈ ಬಾರಿಯೂ ಹಾಲನ್ನು ತೆಗೆದುಕೊಂಡು ಕುಡಿಯುತ್ತಿರುವಾಗ ಹೊಸದಾಗಿ ಮದುವೆಯಾದ ನವ ಜೋಡಿ ನೋಡಿ ಅವನಿಗೆ ನಗು ಬಂತು. ಕುರಿ ಹಳ್ಳಕ್ಕೆ ಬಿದ್ದಿದೆ ಎಂದು ಮನಸ್ಸಿನಲ್ಲೇ ನಕ್ಕು ಮುಂದೆ ಹೆಜ್ಜೆ ಹಾಕಿದ. ಇನ್ನೇನು ರೈಲುಗಾಡಿಯ ಒಳಗೆ ಬರಬೇಕು, ಅಷ್ಟರಲ್ಲಿ ಸಾಧುಗಳ ದರ್ಶನವಾಯಿತು. ಸಾಧುಗಳ ಕಣ್ಣಿನಲ್ಲಿ ಪ್ರಕಾಶಮಾನವಾದ ತೇಜಸ್ಸು ಕಂಗೊಳಿಸುತ್ತಿತ್ತು. ಸಾಧುಗಳು ವಿಧುವನ್ನು ಹತ್ತಿರ ಬರುವಂತೆ ಕೈಸನ್ನೆ ಮಾಡಿದರು. ಅವರ ಬಳಿ ಹೋಗುತ್ತಿದ್ದಂತೆ  ನೋಡಿ ನಕ್ಕು ನಿನ್ನ ಮುಂದಿನ ಕಾರ್ಯಕ್ಕೆ ಶುಭವಾಗಲಿ, ಬದಲಾವಣೆಗೆ ಸಿದ್ಧನಾಗು ಎಂದು ಹರಸಿದರು. ಅವರ ಆಶೀರ್ವಾದದ ಮರ್ಮ ಏನೆಂದು ಕೇಳಬೇಕು ಅನ್ನುವಷ್ಟರಲ್ಲಿ ರೈಲುಗಾಡಿ ಹೊರಟಿತು ಕೂಡಲೇ ಸಾಧುಗಳ ಆಶೀರ್ವಾದ ಸ್ವೀಕರಿಸಿದ ವಿಧು ರೈಲುಗಾಡಿಯನ್ನು ಹತ್ತಿದ, ರೈಲು ಗಾಡಿಯು ನಿಧಾನವಾಗಿ ತನ್ನ ವೇಗವನ್ನು ಹೆಚ್ಚಿಸಿತು.
           ಅವರ ಮುಗುಳುನಗು ಹಲವಾರು ಗೂಢಾರ್ಥವನ್ನು ಸೂಚಿಸುತ್ತಿತ್ತು ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಇಟ್ಟುಕೊಂಡು ರೈಲಿನಲ್ಲಿ ಕುಳಿತು ತನ್ನದೇ ಆದ ಯೋಚನಾಲಹರಿಯಲ್ಲಿ ಬಿದ್ದ. ಪ್ರತಿಬಾರಿ ಯಾವುದೋ ಒಂದು ಮಹಾಶಕ್ತಿ ತನ್ನ ಬದುಕಿನ ಪಥವನ್ನು ನಿರ್ಧರಿಸುತ್ತದೆ ಎಂದು ಯೋಚಿಸುತ್ತ ಕುಳಿತಿರಬೇಕಾದರೆ ಮತ್ತೆ ಸತ್ಯವತಿ ಅವರ ಮಾತು ಪ್ರಾರಂಭವಾಯಿತು. ಓ ಇವರು ಬಿಟ್ಟರೆ ಇನ್ನು ಮದುವೆ ಪ್ರವಚನ ಹೊಡೆಯುತ್ತಾರೆ ಎಂದವನೇ ನೋಡಿ ಅರಸೀಕೆರೆ ಭಾಗದಲ್ಲಿ ಮಳೆ ಇಲ್ಲದೆ ತೆಂಗಿನ ಮರಗಳು ಹಾಗೂ ಇತ್ತೀಚಿನ ವರ್ಷಗಳಲ್ಲಿ ಹಾಕಿದ ಅಡಿಕೆ ಮರಗಳು ಒಣಗುತ್ತಿವೆ ಅಲ್ಲವೇ ? ಎಂದು ಈ ಬಾರಿ ಅವರ ಗಮನವನ್ನು ಪ್ರಕೃತಿಯ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾದ. ಹೌದಪ್ಪ ಮಳೆಗಾಲ ಚೆನ್ನಾಗಿ ನಡೆಸುತ್ತಿಲ್ಲ ಎಂದು ತಮ್ಮ ಹಿಂದಿನ ಅನುಭವದ ಮಾತುಗಳನ್ನು ಮತ್ತೆ ತೆಗೆದರು ಅಬ್ಬ ಒಂದು ಮದುವೆಯ ಪ್ರವಚನಕ್ಕೆ ಬ್ರೇಕ್ ಬಿತ್ತಲ್ಲ ಎಂದು ಮನಸ್ಸಿನಲ್ಲೇ ಸಂತೋಷಗೊಂಡ.
              ಸತ್ಯವತಿಯವರು ತಮ್ಮ ಬದುಕು ಕಟ್ಟಿಕೊಂಡ ರೀತಿಯನ್ನು ವಿವರಿಸ ತೊಡಗಿದರು. ಅದನ್ನು ಕೇಳುವ ಹೊತ್ತಿಗೆ ರೈಲು ಕಡೂರು ನಿಲ್ದಾಣವನ್ನು ತಲುಪಿತು. ಅಬ್ಬ ಇವರ ಜೊತೆಗೆ ಅರ್ಧದಾರಿ ಕ್ರಮಿಸುವ ಹೊತ್ತಿಗೆ ರೈಲಿನಿಂದ ಇಳಿಯುತ್ತಿರುವುದು ಸರಿಹೋಯಿತು. ಇಲ್ಲವೆಂದರೆ ಇವರು ಹತ್ತಿರ ಮದುವೆ ವಿಚಾರದಲ್ಲಿ ಮೊಳೆಯನ್ನು ಇನ್ನು ಹೊಡೆಸಿ ಕೊಳ್ಳಬೇಕಾಗಿತ್ತು ಎಂದು ಮನಸ್ಸಿನಲ್ಲಿ ಅಂದುಕೊಂಡ. ಅಮ್ಮ ನಾನು ಮುಂದಿನ ನಿಲ್ದಾಣದಲ್ಲಿ ಇಳಿಯಬೇಕು ಸ್ವಲ್ಪ ಜಾಗವನ್ನು ಕೊಡಿ ನಾನು ನನ್ನ ಬ್ಯಾಗುಗಳನ್ನು ತೆಗೆದುಕೊಳ್ಳಬೇಕು ಎಂದು ಎದ್ದುನಿಂತ, ಕೂಡಲೇ ಸತ್ಯವತಿಯವರು ಅಜ್ಜಂಪುರದಲ್ಲಿ ಇಳಿಯುತ್ತೇನೆ ಎಂದು ಇಲ್ಲೇ ಇಳಿಯುತ್ತಿದ್ದಿಯಲ್ಲ ಎಂದರು. ಇಲ್ಲಮ್ಮ ನನ್ನ ಸ್ವಂತ ಊರು ಅಜ್ಜಂಪುರ ನಾನು ಬೇರೆ ಕಾರ್ಯದ ಮೇಲೆ ಶಿವಮೊಗ್ಗಕ್ಕೆ ಹೋಗಬೇಕಾಗಿದೆ ಹಾಗಾಗಿ ಇಲ್ಲೇ ಇಳಿಯುತ್ತಿದ್ದೇನೆ ಎಂದು ಹೇಳಿದ. ಓ ಆಯ್ತು ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ಹರಸಿದರು. ಬೀರೂರಿನ ರೈಲು ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ರೈಲು ಬಂದಿತು. ವಿಧು ಮಾತೃಹೃದಯಿ ಸತ್ಯವತಿ ಅವರಿಗೆ ಧನ್ಯವಾದಗಳನ್ನು ತಿಳಿಸಿ ರೈಲಿನಿಂದ ಇಳಿದ. ಮನಸ್ಸಿನಲ್ಲಿ ಎಲ್ಲೋ......

Author : Rakesh Bhagiratha.

Sunday, July 5, 2020

ಪ್ರೇಮದ ಅನ್ವೇಷಣೆ ಭಾಗ - 5

ಅಷ್ಟರಲ್ಲೇ ಅವರ ಸೊಸೆ ಹರ್ಷಿತ ಅಣ್ಣ ನೀವು ಯಾವ ಕೆಲಸವನ್ನು ಮಾಡಿಸುತ್ತೀರಾ ಎಂದು ಕೇಳಿದಳು. ಅಯ್ಯೋ ! ಇವರ ಅತ್ತೆಯ ಸರದಿ ಆಯ್ತು ಈವಾಗ ಸೊಸೆಯ ಸರದಿಯಲ್ಲ ಎಂದು ಮನದಲ್ಲೇ ಅಂದುಕೊಂಡ. ನಾವು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮಾಡಿಸುತ್ತೇವೆ ಎಂದು ಹೇಳಿ ಸುಮ್ಮನಾದ. ಹರ್ಷಿತಾ ಮಾತು ಮುಂದುವರೆಸಿ ಹಾಗಾದರೆ ಒಳ್ಳೆಯದೇ ದುಡಿಮೆ ಇದೆ ಮದುವೆ ಆಗಬಹುದಲ್ಲ ಎಂದು ಕೇಳಿದ ಕೂಡಲೇ ವಿಧು ಅಯ್ಯೋ ಇವರೇನು ಹೀಗೆ ಗುರುತು ಪರಿಚಯ ಇಲ್ಲದವರಿಗೆ ಇವರು ಈಗೆಲ್ಲ ಮಾತನಾಡುತ್ತಾರಲ್ಲ ಎಂದು ಮನಸ್ಸಿನಲ್ಲೇ ಅಂದುಕೊಂಡ. ಅತ್ತೆ ಆಯ್ತು ಸೊಸೆ ಆಯ್ತು ಇವಾಗ ಹುಡುಗಿಯ ಮಾವ ಏನು ಹೇಳುತ್ತಾರೋ ಎಂದುಕೊಳ್ಳುವಷ್ಟರಲ್ಲಿ ಮಾವನ ಮುಖದಲ್ಲಿ ಮುಗುಳ್ನಗೆ ಕಂಡಿತು. ಅಬ್ಭಾ... ಇವರಿಂದ ಮದುವೆ ಪ್ರವಚನ ನಡೆಯಲಿಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟು ಉಸಿರು ಎಳೆದುಕೊಳ್ಳುವರೊಳಗಾಗಿ ಅವರ ಮಾತು ಆರಂಭವಾಯಿತು. ಓಹೂ.. ಇನ್ನು ಸುಮ್ಮನಿದ್ದರೆ ಮದುವೆ ಬಗ್ಗೆ ಪ್ರವಚನ ಕೇಳಬೇಕಲ್ಲ ಎಂದುಕೊಂಡು, ಸತ್ಯವತಿಯವರು ಮಾತನಾಡುವ ಭಾವ ಕಂಡ ಕೂಡಲೇ ಅಮ್ಮ ನೋಡಿ ರೈಲುಗಾಡಿಯು ತಿಪಟೂರು ನಿಲ್ದಾಣವನ್ನು ಪ್ರವೇಶಿಸುತ್ತಿದೆ ಎಂದು ಗಮನವನ್ನು ಬೇರೆಡೆಗೆ ಸೆಳೆದ. 
           ಓಹೋ.. ಹೌದಲ್ಲಪ್ಪ ನೋಡು ಮಾತನಾಡುತ್ತ ಹೋದಂತೆಲ್ಲ ಸಮಯ ಸರಿದು ಹೋಗುವುದು ಗೊತ್ತಾಗುವುದಿಲ್ಲ ಎಂದು ಹೇಳುತ್ತಾ ರೈಲಿನ ಮೇಲಿನ ಬರ್ತ್ ಇಂದ ಒಂದು ಬಾಕ್ಸ್ ಅನ್ನು ತೆಗೆಯಲು ಮುಂದಾದರು. ಅದು ಅಷ್ಟು ಸುಲಭವಾಗಿ ಸಿಗುವಂತಿರಲಿಲ್ಲ ಹಾಗಾಗಿ ವಿಧು ಎದ್ದು ಅವರಿಗೆ ಆ ಬಾಕ್ಸನ್ನು ತೆಗೆದುಕೊಟ್ಟ, ಧನ್ಯವಾದ ಅರ್ಪಿಸಿದ ಅವರು ಅದನ್ನು ತೆಗೆದುಕೊಂಡರು.  ಅದನ್ನು ತೆಗೆದ ಮೇಲೆ ತಮ್ಮ ಕೆಳಗೆ ಇದ್ದ ಬ್ಯಾಗ್ ಇಂದ ಒಂದು ಕವರನ್ನು ತೆಗೆದರು ಅದರಲ್ಲಿದ್ದ ಚಪಾತಿಯನ್ನು ಕೊಡಲು ಬಂದರು. ಅದಕ್ಕೆ ಬೇಡಮ್ಮ ಊಟವನ್ನು ಮುಗಿಸಿ ನಾನು ರೈಲನ್ನು ಹತ್ತಿರುವುದು ಎಂದು ಹೇಳಿದ ಆಗ ಮಧ್ಯಪ್ರವೇಶಿಸಿದ ಸತ್ಯವತಿ ಗಂಡನಾದ ಚಿದಾನಂದ ಅವರು ಏನಪ್ಪಾ ನೀನು, ನಿನ್ನ ವಯಸ್ಸಿನಲ್ಲಿ ನಾನು ದಿನಕ್ಕೆ ನಾಲ್ಕು ಬಾರಿ ಊಟ ಮಾಡುತ್ತಿದ್ದೆ .ತೆಗೆದುಕೋ ಎಂದರು ಅದಕ್ಕೂ ಬೇಡ ಅಣ್ಣ ನಿಮ್ಮ ಕಾಲದಲ್ಲಿ ಎಲ್ಲಾ ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿದ್ದರು ನಿಮ್ಮ ಕಾಲದ ಊಟ ಆರೋಗ್ಯವನ್ನು ವೃದ್ಧಿಸುತ್ತಿತು ಇವಾಗ ಎಸಿಡಿಟಿ ಯನ್ನು ಉಂಟುಮಾಡುತ್ತದೆ, ಎಂದು ತಮಾಷೆ ಮಾಡಿದ. ಅದಕ್ಕೆ ಮುಗುಳ್ನಕ್ಕ ಚಿದಾನಂದ ಅವರು ನೀವು ಈಗಿನ ಕಾಲದ ಹುಡುಗರು ಹಾಗೂ ಹುಡುಗಿಯರು ಡಯಟ್ ಡಯಟ್ ಅಂತ ಚೆನ್ನಾಗಿ ತಿಂದು ಚೆನ್ನಾಗಿ ಇರುವುದಿಲ್ಲ. ನಮ್ಮ ಕಾಲದ ಊಟನೇ ಬೇರೆ ಎಂದರು ಅದಕ್ಕೊ ಮುಗುಳು ನಕ್ಕು ಸುಮ್ಮನಾದ.
           ಸತ್ಯವತಿಯವರು ಒಂದು ದಾಳಿಂಬೆ ಹಣ್ಣನ್ನು ಕೊಟ್ಟು ಕೊನೆಪಕ್ಷ ಈ ದಾಳಿಂಬೆ ಹಣ್ಣನ್ನು ಆದರೂ ತಿನ್ನು ಎಂದು ಹೇಳಿದರು ಸರಿ ಇನ್ನೇನು ಹಣ್ಣಿನ ಸಿಪ್ಪೆಯನ್ನು ಬಿಡಿಸಿ ತಿನ್ನಬೇಕು ಅನ್ನುವಷ್ಟರಲ್ಲಿ ಮತ್ತೆ ಮದುವೆ ಪ್ರವಚನ ಶುರುವಾಯಿತು. ನೋಡಪ್ಪ ವಿಧು ವಯಸ್ಸಿಗೆ ತಕ್ಕಂತೆ ಮದುವೆಯಾಗಬೇಕು ನೋಡಿ ತೆಳ್ಳಗೆ ಸುಂದರವಾಗಿ ಬೆಳ್ಳಗಿರುವ ಹೆಣ್ಣನ್ನು ನೋಡಿ ಮದುವೆಯಾಗು ಏಕೆಂದರೆ ನೀನು ಸುಂದರವಾಗಿರುವ ಹುಡುಗಿಯನ್ನು ಮದುವೆಯಾದರೆ ಸುಂದರವಾದ ಮಕ್ಕಳು ಹುಟ್ಟುತ್ತಾರೆ. ಇಲ್ಲ ಕಪ್ಪು ಹುಡುಗಿ ಮದುವೆಯಾದರೆ ಹುಟ್ಟುವ ಮಗು ಗಂಡಾದರೆ ಪರವಾಗಿಲ್ಲ ಹೆಣ್ಣಾದರೆ ಮತ್ತೆ ವರದಕ್ಷಿಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟು ಅವಳಿಗೆ ಮದುವೆ ಮಾಡಬೇಕಾಗುತ್ತದೆ. ಅದಕ್ಕೆ ಇವಾಗಲೇ ಒಳ್ಳೆಯ ಬೆಳ್ಳಗಿನ ಹುಡುಗಿಯನ್ನು ನೋಡಿ ಮದುವೆಯಾದರೆ ಒಳ್ಳೆಯದಲ್ಲವೇ ನೋಡು ನನ್ನ ಸೊಸೆಯನ್ನು ಅದಕ್ಕೆ ಹುಡುಕಿ ಹುಡುಕಿ ಇಂತಹ ಸೊಸೆಯನ್ನು ನನ್ನ ಮಗನಿಗೆ ತಂದಿದ್ದೇನೆ ಎಂದರು. ವಿಧು ಮನಸ್ಸಿನಲ್ಲೇ ಸತ್ಯವತಿ ಬಹಳ ಲೆಕ್ಕಾಚಾರದ ವ್ಯಕ್ತಿತ್ವದ ಅಮ್ಮನವರು ಎಂದುಕೊಂಡ.ಈ ಜನ್ಮದಲ್ಲಿ ನಾನು....
Author : Rakesh Bhagiratha.

Friday, July 3, 2020

ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯಲ್ಲಿ ನಿಜವಾದ ಹಿಂದುತ್ವದ ಜೇಂಕಾರ ಯಾವಾಗ ?

ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರವು ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದಿದ್ದರೂ ಅನ್ಯಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದೆ ಅದರ ಸಾಧನೆಯಾಯಿತು. ಮೊದಲ ಬಾರಿಗೆ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ದಕ್ಷಿಣ ಭಾರತದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಪಕ್ಷ ಮೊದಲು ಒಳ್ಳೆಯ ಅಧಿಕಾರ ನೀಡುವ ಭರವಸೆಯನ್ನು ನೀಡಿ ಜನರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿತ್ತು. ಅದರ ಬರವಸೆಯನ್ನು ನಂಬಿದ ಜನ ಒಳ್ಳೆಯ ಆಡಳಿತ ನೀಡಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ 20- 20 ಮ್ಯಾಚ್ ಆಡಿದ ಅಂದಿನ ಜೆಡಿಎಸ್ ಹಾಗೂ ಬಿಜೆಪಿ ಪರಸ್ಪರ ತೆಗಳುವುದರೊಂದಿಗೆ ಆರಂಭವಾಗಿ ಕೊನೆಗೆ ಸರ್ಕಾರ ಪತನದೊಂದಿಗೆ ಅಂತ್ಯವಾಯಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎರಡು ಪಕ್ಷಗಳ ಕಾರ್ಯಕರ್ತರ ಪರಿಶ್ರಮ ಜೆಡಿಎಸ್ ಸಂಸ್ಕೃತಿಗೂ ಹಾಗೂ ಬಿಜೆಪಿ ಸಂಸ್ಕೃತಿಗೂ ಅಜಗಜಾಂತರ ವ್ಯತ್ಯಾಸವಿದೆ.
           ಬಿಜೆಪಿಯದ್ದು ಸಿದ್ಧಾಂತಾಧರಿತ ಪಕ್ಷವೆಂದು ಹೇಳಲಾಗುತ್ತಿತ್ತು. ಜೆಡಿಎಸ್ ನದು ಜಾತ್ಯತೀತವೆಂದರೂ ಅಲ್ಲಿ ಜಾತಿಗಳದೇ ಕಾರುಬಾರು. ಬಿಜೆಪಿ ಹಿಂದುತ್ವದ ಆಧಾರದಲ್ಲಿ ಅಧಿಕಾರ ಹಿಡಿಯುವ ಇಚ್ಛೆಯೊಂದಿಗೆ ಇದ್ದು ತನ್ನ ಎರಡನೇ ಅವಧಿಯ ಚುನಾವಣೆ ಪ್ರಚಾರದಲ್ಲಿ ಹಿಂದುತ್ವವನ್ನು ಮರೆಯಿತು. ಬಿಜೆಪಿಗೆ ಜೆಡಿಎಸ್ ಅಧಿಕಾರ ಕೊಡದಿದ್ದೇ ದೊಡ್ಡ ವಿಚಾರವೆಂಬಂತೆ ಬಿಂಬಿಸಿತು. ಕರ್ನಾಟಕದ ಪ್ರಜ್ಞಾವಂತ ಮತದಾರ ಆಗಲೂ ಕೂಡ ಬಿಜೆಪಿಗೆ ಪೂರ್ಣಬಹುಮತ ಕೊಡಲಿಲ್ಲ. ಏಕೆಂದರೆ ಬಿಜೆಪಿ ಅಷ್ಟರಲ್ಲಾಗಲೇ ಹಿಂದುತ್ವದಿಂದ ಜಾತಿಯ ಕಡೆಗೆ ವಾಲಿಯಾಗಿತ್ತು. ಬಿಜೆಪಿಯಲ್ಲೂ ಜಾತಿ ಆಧಾರದ ಮೇಲೆ ಟಿಕೆಟ್ ನೀಡುವ ಸಂಸ್ಕೃತಿ ಆರಂಭವಾಯಿತು. ಪಕ್ಷಕ್ಕಾಗಿ ತ್ಯಾಗಮಾಡಿದ ನಾಯಕರು ಮನೆ ಸೇರುವಂತಾಯಿತು. ಹೊಗಳು ಭಟ್ಟರಿಂದ ಕೂಡಿದ ಮಂದಿಗೆ ಮಣ್ಣೆ ಹಾಕಲು ಬಿಜೆಪಿಯ ದೇವದುರ್ಲಭ ಕಾರ್ಯಕರ್ತರನ್ನು ಬಲಿಕೊಡಲು ಹಿಂದುಮುಂದು ನಾಯಕರು ಯೋಚಿಸಲಿಲ್ಲ. ಸಂಸ್ಕೃತಿ ಸಂಸ್ಕಾರ ಇಲ್ಲದವರ ಪಕ್ಷವಾಗುವತ್ತ ಬಿಜೆಪಿ ತನ್ನ ಕಾರ್ಯವನ್ನು ಶುರು ಮಾಡಿತು. ಮೂಲ ಬಿಜೆಪಿಗರು ಕಾಣೆಯಾಗತೊಡಗಿದರು. ಬಿಜೆಪಿಯ ಒಳಗೆ ಜಾತಿಗಳ ಕಾರುಬಾರು ಶುರುವಾಯಿತು. ದೇಶಕ್ಕಾಗಿ ರಾಜಕಾರಣ ಎಂದು ಹೇಳುತ್ತಾ ಭ್ರಷ್ಟರು ಬಿಜೆಪಿಯನ್ನು ಅಳಲು ಶುರುಮಾಡಿದರು. ಕೊನೆಗೆ ಎಲ್ಲಾ ಪಕ್ಷಗಳಂತೆ ಬಿಜೆಪಿಯು ವಿಶೇಷವಾಗಿ ಕರ್ನಾಟಕದ ಬಿಜೆಪಿ ಅಧಿಕಾರಕ್ಕೆ  ಕೇಂದ್ರೀಕೃತ ಪಕ್ಷವಾಗಿ ಹೊರಹೊಮ್ಮಿತು. ನಿಜವಾದ ಹಿಂದುತ್ವ ತೆರೆಮರೆಗೆ ಸರಿದು ಜಾತಿ ನಾಯಕರು ಬಿಜೆಪಿಯನ್ನು ಅಳಲು ಶುರುಮಾಡಿದರು ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ರೋಸಿಹೋದ ಬಿಜೆಪಿಯ ನಿಷ್ಠರು ಸುಮ್ಮನಾದರು.
           ಮೊದಲೇ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದ ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಕಳೆದುಕೊಂಡ ಅಧಿಕಾರಕ್ಕೆ ಬರಲು ಸಾಧ್ಯವೇ! ಜಾತಿಗಳ ಪ್ರತಿಷ್ಠೆಯಲ್ಲಿ ಎಲ್ಲಾ ಪಕ್ಷಗಳಂತೆ ಆಗಿ ಬಿಜೆಪಿಯು ಮತ್ತೆ ಅಧಿಕಾರ ಹಿಡಿಯಲು ವಿಫಲವಾಯಿತು. ಹಿಂದುತ್ವದ ಹೆಸರು ಹೇಳಿಕೊಂಡು ಜಾತಿ ರಾಜಕಾರಣ ಮಾಡಿದ ಪಕ್ಷದ ನಾಯಕರು ಕೊನೆಗೇ ಪೂರ್ಣಬಹುಮತ ತರುವಲ್ಲಿ ವಿಫಲವಾದರು. ಕಾರ್ಯಕರ್ತರು ಪಕ್ಷದ ಮೇಲೆ ನಂಬಿಕೆ ಕಳೆದುಕೊಂಡರು. ಪಕ್ಷಕ್ಕೆ ದೊಡ್ಡಮಟ್ಟದ ಹಾನಿಯಾಯಿತು. ಜಾತಿ ನಾಯಕರು ಬಿಜೆಪಿಯ ಮುಂಚೂಣಿಯಲ್ಲಿ ನಿಂತಿದ್ದೆ ಪಕ್ಷಕೇ ಬಹುಮತ ಬರದಿರಲು ಕಾರಣವಾಯಿತು. 
              ಇನ್ನು ತನ್ನ ಮೂರನೇ ಅವಧಿಯನ್ನು ಆಪರೇಷನ್ ಕಮಲದ ಮೂಲಕ ತನ್ನ ನೆಲೆಯನ್ನು ಗಟ್ಟಿಮಾಡಿಕೊಂಡ ನಾಯಕರಿಗೆ ಬಿಜೆಪಿಯ ಕಾರ್ಯಕರ್ತರು ಬೇಡವಾದರು. ಬಿಜೆಪಿಯನ್ನು ತಳಮಟ್ಟದಲ್ಲಿ ಕಟ್ಟಲು ಸಹಕಾರವಾಗುವಂತಹ ಗ್ರಾಮ ಪಂಚಾಯಿತಿ ಹಂತದಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ನೇಮಿಸುವ ಅವಕಾಶವಿದ್ದರೂ ಪ್ರಜಾಪ್ರಭುತ್ವ-ವಿರೋಧಿ ನಿಲ್ಲುವಾದ ಆಡಳಿತಾಧಿಕಾರಿ ನೇಮಿಸುವ ನಿರ್ಧಾರದೊಂದಿಗೆ ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಾಮಾನ್ಯ ಕಾರ್ಯಕರ್ತನಿಗೆ ಸಮಾಧಿ ಮಾಡಲಾಯಿತು. ವಂಶಪಾರಂಪರ್ಯ ರಾಜಕಾರಣ ಬಿಜೆಪಿಯಲ್ಲಿ ಶುರುವಾಗಿ ಬಹಳ ಕಾಲವಾಗಿದೆ. ದೇವದುರ್ಲಭ ಕಾರ್ಯಕರ್ತರನ್ನು ಕಳೆದುಕೊಂಡು ಬಿಜೆಪಿ ಬಡವಾಗುತ್ತಿದೆ . ಸಂಸ್ಕಾರ-ಸಂಸ್ಕೃತಿ ಇಲ್ಲದ ಜನರು ಬಿಜೆಪಿಯನ್ನು ಆಳುತ್ತಿದ್ದಾರೆ. ಅದೇ ರೀತಿ ಮುಂದುವರೆದಿದ್ದು ಆದರೆ ಬಿಜೆಪಿಗೆ ಪರ್ಯಾಯವಾಗಿ ರಾಜಕೀಯ ಶಕ್ತಿಯೊಂದು ಉದಯ ಆಗುವುದರಲ್ಲಿ ಸಂಶಯವೇ ಬೇಡ. ಈಗಲಾದರೂ ಬಿಜೆಪಿ ತನ್ನ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸಬೇಕಾಗಿದೆ. ಇಲ್ಲವಾದರೆ ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಸಿದ್ಧವಾಗಬೇಕಾಗುತ್ತದೆ.
Author : Rakesh Bhagiratha.

Monday, June 29, 2020

ಭಾರತ ತನ್ನ ಇತಿಹಾಸದಲ್ಲಿ ಕಳೆದುಕೊಂಡ ಹಾಗೂ ಕಳೆದುಕೊಳ್ಳುತ್ತಿರುವ ಭೂಭಾಗವೆಷ್ಟು

              ಭಾರತ ಹೆಸರೇ ಹೇಳುವಂತೆ ತನ್ನ ಇತಿಹಾಸದಲ್ಲಿ ವಿಶ್ವದ ಮಾರ್ಗದರ್ಶನದ ಭಾರವನ್ನು ತನ್ನ ಮೇಲೆ ಹಾಕಿಕೊಂಡು ವಿಶ್ವಕ್ಕೆ ಮಾರ್ಗದರ್ಶನ ಮಾಡಿದ ದೇಶ. ಆದರೆ ಇಂದು ತನ್ನತನದ ಉಳಿವಿಗಾಗಿ ಹೋರಾಟ ಮಾಡುವಂತಹ ಹಂತಕ್ಕೆ ಬಂದು ತಲುಪಿದೆ. ಅದಕ್ಕೆ ಕಾರಣ ಭಾರತ ತನ್ನ ಸಂಸ್ಕೃತಿ-ಪರಂಪರೆಯನ್ನು ಕಳೆದುಕೊಂಡಿದ್ದು ಎಂದರೆ ಅತಿಶಯೋಕ್ತಿಯೇನಲ್ಲ. ಅದರ ಪರಿಣಾಮವೇ ಇಂದು ತನ್ನ ಭೂಭಾಗವನ್ನು ಕಳೆದುಕೊಳ್ಳುತ್ತಾ ಕಿರಿದಾಗುತ್ತಾ ವಿಶ್ವದಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡು ವಿಶ್ವಕ್ಕೆ ಬೆಳಕಿನ ದೀವಟಿಗೆ ಹಿಡಿದ ದೇಶ ಇಂದು ತಾನೇ ಕತ್ತಲಲ್ಲಿ ಮುಳುಗಿರುವುದು.
     ಭಾರತ ದೇಶವು ಮತ್ತೆ ಮೇಲೇಳಲು ತನ್ನ ಸ್ವಂತಿಕೆಯನ್ನು ಮತ್ತೆ ಪ್ರತಿಬಿಂಬಿಸಬೇಕು ಇಲ್ಲದಿದ್ದರೆ ಮಾರ್ಗದರ್ಶನ ಮಾಡಲು ಹೇಗೆ ಸಾಧ್ಯವಾದೀತು ? ಅದು ತನ್ನ ಸ್ವಂತಿಕೆಯನ್ನು ಕಳೆದುಕೊಂಡ ಫಲವೇ ಹಲವಾರು ಭೂಪ್ರದೇಶಗಳನ್ನು ಕಳೆದುಕೊಳ್ಳುತ್ತಾ ಕಿರಿದಾಗಿದ್ದು. ಹಲವಾರು ಶತಮಾನಗಳ ನಂತರ ಇಂದು ಅದು ತನ್ನ ಸ್ವಂತಿಕೆಯನ್ನು ಮತ್ತೆ ಜಾಗೃತಗೊಳಿಸಹೊರಟಿದೆ. ಅದರಿಂದ ವಿಚಲಿತಗೊಂಡ ಅನ್ಯ ದೇಶದಿಂದ ಬಂದು ನಮ್ಮ ದೇಶವನ್ನು ಆಳಿದವರು ಇಂದು ದೇಶಿಯ ಆಡಳಿತದ ವಿರುದ್ಧವಾದ ನಿಲುವನ್ನು ಬಹಿರಂಗವಾಗಿ ತೋರಿಸಿಕೊಳ್ಳುತ್ತಿರುವುದು.
           ಭಾರತವನ್ನು ಆರ್ಯವ್ರತ ಎಂದು ಕರೆಯಲಾಗುತ್ತಿತ್ತು. ಆರ್ಯ ಎಂದರೆ ಜ್ಞಾನಿ ಎಂಬರ್ಥ ಬರುತ್ತದೆ. ಹಿಂದಿನ ದಿನಮಾನಗಳಲ್ಲಿ ಜ್ಞಾನಿಯನ್ನು ಆರ್ಯನೆoದು  ಕರೆಯಲಾಗುತ್ತಿತು. ಆದರೆ ತಕ್ಕಮಿದಿತ ಇತಿಹಾಸಕಾರರು ಆರ್ಯ-ದ್ರಾವಿಡ ಎಂಬ ಅವರ ದೂರ ಆಲೋಚನೆಯ  ( ದುರಾಲೋಚನೆಯ ) ಕಲ್ಪನೆಯನ್ನು ಕೊಟ್ಟು ( ಅವರ ಉದ್ದೇಶ ಸ್ಪಷ್ಟ ಭಾರತದಲ್ಲಿ ಒಗ್ಗಟ್ಟು ಇದ್ದರೆ ತಾವು ಭಾರತೀಯರನ್ನು ಆಳುವುದು ಕಷ್ಟವೆಂಬುದು ಅವರಿಗೆ ಗೊತ್ತು ) ಅದೇ ಸತ್ಯವೆಂದು ನಂಬಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವುದು. ಇಂತಹ ದುಷ್ಟರ ಕರಾಮತ್ತಿನ ಫಲವೇ ಇಂದು ನಮ್ಮ ಸೈನಿಕರು ದೇಶ ರಕ್ಷಣೆಯಲ್ಲಿ ಸಾವಿಗೀಡಾಗುತ್ತಿದ್ದರು. ಅದಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ಬದುಕುತ್ತಿರುವ ಕಾಕಾಗಳು ( ಕಾ - Congress ಕಾ - Communist ) ಬುದ್ಧಿಜೀವಿಗಳು ಪ್ರಗತಿಪರರು ಎನಿಸಿಕೊಂಡವರು ಬಾಯಿಗೆ ಬಂದಂತೆ ಹರಟೆ ಹೊಡೆಯುತ್ತಾ ಬಾಯಿ ಚಪಲಕ್ಕೆ ದೇಶದ ಸೈನಿಕರ ಮನೋಸ್ಥೈರ್ಯವನ್ನು ಕುಗ್ಗಿಸುತ್ತಾ ಸುಖವಾಗಿ ನಮ್ಮ ದೇಶದಲ್ಲಿ ಬದುಕುತ್ತಿರುವುದು ಈ ದೇಶದ ದುರಂತ. ಈ ದೇಶಭ್ರಷ್ಟ ಜನರಿಂದ ಈಗಾಗಲೇ ನಾವು ಭಾರತದ ಹಲವಾರು ಪ್ರದೇಶಗಳನ್ನು ಕಳೆದುಕೊಂಡಿದ್ದೇವೆ. ಅವರು ನೇರವಾಗಿ ಅಲ್ಲದಿದ್ದರೂ ದೇಶ ವಿರೋಧಿಗಳ್ಗೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಸೃಷ್ಟಿಸುವುದರಲ್ಲಿ ನಿರತರಾಗಿರುತ್ತಾರೆ.
        ಇನ್ನು ನಾವು ಕಾಲಕ್ರಮದಲ್ಲಿ ಕಳೆದುಕೊಂಡ  ಭೂಪ್ರದೇಶಗಳು ಇಂದು ಹಲವಾರು ದೇಶಗಳಾಗಿ ನಮ್ಮ ದೇಶಕ್ಕೆ ಕಂಟಕವಾಗಿ ಕಾಡುತ್ತಿವೆ. ಆ ದೇಶಗಳಲ್ಲಿ ಈ ಪರಿಯ ಬದಲಾವಣೆ ಏಕಾಯಿತು ಎಂದು ವಿಮರ್ಶಿಸುತ್ತ ಹೋದರೆ ನಮಗೆ ತಿಳಿಯುವುದು ನಮ್ಮ ಸಂಸ್ಕೃತಿಯನ್ನು ಮರೆತು ಅನ್ಯರ ಕ್ರೌರ್ಯ ಪರಂಪರೆಯನ್ನು ರೂಢಿಸಿಕೊಂಡಿದ್ದರ ಫಲವಾಗಿ ಆ ದೇಶಗಳು ನೆಮ್ಮದಿಯಿಂದ ಇರಲು ಸಾಧ್ಯವಾಗಿಲ್ಲ. ಹೀಗೆ ಹಲವಾರು ದೇಶಗಳನ್ನು ನಾವು ಕಾಣಬಹುದು. ಭಾರತದ ಭೂ ಪ್ರದೇಶದಿಂದ ಉದಯಿಸಿದ ದೇಶಗಳು ಈ ಕೆಳಗಿನಂತಿವೆ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಕಾಂಬೋಡಿಯಾ, ಶ್ರೀಲಂಕಾ ಟಿಬೆಟ್, ಥೈಲ್ಯಾಂಡ್, ವಿಯೆಟ್ನಾಮ್, ಮಯನ್ಮಾರ್ ಲಾವೊಸ್, ಭೂತಾನ್ ಮಾಲ್ಟ್ ಮಲ್ದವಿಸ್. ಹೀಗೆ ಹಲವಾರು ದೇಶಗಳಾಗಿ ಹಂತಹಂತವಾಗಿ ಭೂ ಪ್ರದೇಶವನ್ನು ಕಳೆದುಕೊಂಡಿತು ಭಾರತ. 1739 ರಲ್ಲಿ ಅಫ್ಘಾನಿಸ್ತಾನ ಬೇರ್ಪಟ್ಟಿತು. 1936 ರವರೆಗೆ ಮಯನ್ಮಾರ್ ಭಾರತದ ಅವಿಭಾಜ್ಯ ಅಂಗವೇ ಆಗಿತ್ತು. ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು.1948 ಫೆಬ್ರವರಿ ನಾಲ್ಕರಂದು ಶ್ರೀಲಂಕಾ ಬೇರೆ ದೇಶವಾಯಿತು.  1947 ರ ಆಗಸ್ಟ್ 14ರಂದು ಪಾಕಿಸ್ತಾನವೆಂಬ ಧರ್ಮಾಧಾರಿತ ದೇಶದ ಉಗಮವಾಯಿತು. ಪಶ್ಚಿಮ ಪಾಕಿಸ್ತಾನವು 1971 ರ ಬಾಂಗ್ಲಾದೇಶ ಲಿಬೇರೇಷನ್ ವಾರ್ ಇಂದ ಬಾಂಗ್ಲಾದೇಶ ಅಧಿಕೃತವಾಗಿ ಸ್ವಾತಂತ್ರ್ಯ ದೇಶವಾಯಿತು. ಹೀಗೆ ನಮ್ಮ ಭೂಭಾಗವು ಹಲವು ದೇಶಗಳಾಗಿ ಹರಿದುಹಂಚಿ ಹೋಯಿತು. ಅದರ ಮುಂದುವರೆದ ಭಾಗವೇ ಕಾಶ್ಮೀರದ ವಿಚಾರ, ಕಾಶ್ಮೀರ ಭಾರತದ ಆಯಕಟ್ಟಿನ ಪ್ರದೇಶ. 1947 ರ ಭಾರತ-ಪಾಕ್ ವಿಭಜನೆಯ ನಂತರ ಕಾಶ್ಮೀರದಲ್ಲಿನ ರಾಜ ಹರಿಸಿಂಗ್  ಭಾರತದ ಒಕ್ಕೂಟಕ್ಕೆ ಸೇರುವುದೂ ಅಥವಾ ಪಾಕಿಸ್ತಾನಕ್ಕೆ ಸೇರುವುದೂ ಎಂಬ ಜಿಜ್ಞಾಸೆ ಉಂಟಾಯಿತು. ಮೊದಲು ಸ್ವಾತಂತ್ರವಾಗಿ ಉಳಿಯಲು ನಿರ್ಧರಿಸಿದ ರಾಜ. ಪಾಕ್ ಆಕ್ರಮಣಕ್ಕೆ ಹೆದರಿ ಭಾರತದ ಒಕ್ಕೂಟದ ಒಳಗೆ ಸೇರಲು ಒಪ್ಪಿಗೆ ಪತ್ರವನ್ನು ಭಾರತ ಸರ್ಕಾರಕ್ಕೆ ಕಳಿಸಿದ. ಅಷ್ಟರಲ್ಲಾಗಲೇ ರಾಜ ಹರಿಸಿಂಗ್ ಸೈನ್ಯದಲ್ಲಿದ್ದ ಹೆಚ್ಚಿನ ಮುಸಲ್ಮಾನರು ಪಾಕಿಸ್ತಾನದ ಪರವಾಗಿ ನಿಂತು ಪಾಕಿಸ್ತಾನದ ಸೇನೆಯೊಂದಿಗೆ ಕೈಜೋಡಿಸಿದರು. ಆದರೆ ಅದಾಗಲೇ ಕಾಶ್ಮೀರವು ಭಾರತದ ಒಕ್ಕೂಟಕ್ಕೆ ಸೇರಿಯಾಗಿತ್ತು.ಆದರೂ ಪಾಕ್ ತನ್ನ ಸೇನೆಯನ್ನು ಕಾಶ್ಮೀರಕ್ಕೆ ನುಗ್ಗಿಸಿ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡು ತನ್ನದೆಂದು ಹೇಳಲಾರಂಭಿಸಿತ್ತು. ಅದನ್ನೇ ಇಂದು ನಾವು ಪಿಓಕೆ ಎಂದು ಕರೆಯುವುದು. ಭಾರತದ ಅಂದಿನ ದುರ್ಬಲ ನಾಯಕತ್ವ ಪಾಕ್ ಸೈನ್ಯವನ್ನು ಹಿಮ್ಮೆಟ್ಟಿಸಲು ವಿಫಲವಾಯಿತು. ಅದರಲ್ಲಿ ಗಾಂಧೀಜಿಯವರ ಕೊಡುಗೆಯೂ ಇದೆ ಎಂಬ ಶಂಕೆ, ಸಾರ್ವಜನಿಕ ಅಭಿಪ್ರಾಯ ವಲಯದಲ್ಲಿ ಇಂದಿಗೂ ಕೇಳಿಬರುತ್ತಿದೆ. ಅದೇ ಕಾರಣ ಹಾಗೂ ಧರ್ಮದ ಆಧಾರದ ಮೇಲೆ ದೇಶ ಒಡೆದಿದ್ದರು ಗಾಂಧೀಜಿ ಅವರ ಮುಸಲ್ಮಾನ ಪರವಾದ ಧೋರಣೆ ಅವರ ಸಾವಿಗೆ ಕಾರಣವಾಗಿದ್ದು ಎಂಬ ನಿಲುವನ್ನು ಇಂದಿಗೂ ಹಲವಾರು ಸಂಘಟನೆಗಳು ಹೇಳಿಕೊಂಡು ಬರುತ್ತಿವೆ. ಇದೆಲ್ಲ ಗೊತ್ತಾಗಬೇಕಾದರೆ ಗಾಂಧೀಜಿ ಅವರ ಸಾವಿನ ರಹಸ್ಯ ಹೊರಬರಬೇಕು ಆದರೆ ಅದು ಸಾಧ್ಯವಾಗಲಿಲ್ಲ.
      ಇನ್ನು ನಮ್ಮ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು ಹೊಸ ರಾಷ್ಟ್ರವಾಗಿ ಹೊರಹೊಮ್ಮುವ ಸಮಯದಲ್ಲಿ ಸಿಗದ ಬಲಿಷ್ಠ ನಾಯಕತ್ವ ಸ್ವಾತಂತ್ರ್ಯ ಬಂದ ನಂತರವೂ ಕೂಡ ಹಲವಾರು ಭೂಪ್ರದೇಶಗಳನ್ನು ಕಳೆದುಕೊಳ್ಳಲು ಕಾರಣವಾಯಿತು. 1962 ರಲ್ಲಿ ಭಾರತದ ಬೆನ್ನಿಗೆ ಚೂರಿ ಇರಿಯುವಂತಹ ಕೆಲಸವನ್ನು ಕಮ್ಯುನಿಸ್ಟ್ ಚೀನಾ ಮಾಡಿತು. 1962 ರಲ್ಲಿ ಭಾರತದ ಮೇಲೆ ಯುದ್ಧ ಸಾರಿದ ಚೀನಾ ಹಲವಾರು ಭಾರತದ ಪ್ರದೇಶಗಳನ್ನು ವಶಪಡಿಸಿಕೊಂಡಿತು. ಅದು ಇಂದಿಗೂ ಕೂಡ ಚೀನಾ ವಶದಲ್ಲಿದೆ ಅದನ್ನೇ ನಾವು COK-1 ಎಂದು ಕರೆಯುತ್ತೇವೆ. ಮತ್ತೆ ಮುಂದುವರೆದ ಚೀನಾ ತನ್ನ ಸಿಲ್ಕ್ ರೋಡ್ ಯೋಜನೆಗೆ ಅಕ್ರಮವಾಗಿ ಪಾಕಿಸ್ತಾನ ಭಾರತದಿಂದ ವಶಪಡಿಸಿಕೊಂಡ ಜಾಗವನ್ನು 99 ವರ್ಷಗಳಿಗೆ ಲೀಸ್ ಗೆ ತೆಗೆದುಕೊಂಡಿದೆ, ಹೀಗೆ ಹಲವಾರು ಭೂ ಭಾಗಗಳನ್ನು ಕಳೆದುಕೊಳ್ಳುತ್ತ ಭಾರತ ಕ್ಷೀಣಿಸುತ್ತಿದೆ. ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವ  ಮಂದಿ ಭಾರತದ ಅನ್ನ ತಿಂದು ದೇಶದ್ರೋಹಿಗಳಾದ ಕಮ್ಯುನಿಸ್ಟರನ್ನು ಆಲಂಗಿಸುತ್ತಿದ್ದಾರೆ. "ಇಷ್ಟೆಲ್ಲ ಆದ್ರೂ ನಾವು ಏನೂ ಮಾಡದೇ ಹೋದ್ರೆ ಇನ್ನೂ ಅದೆಸ್ಟೋ  ಕಳಕೊಂಡು... ಕೊನೆಗೆ ಉಳಿದ್ದಿದು ಇಷ್ಟೇ ಅಂತ ಕೊರಗೋ ಪರಿಸ್ಗಿತಿ ಬೇಕಾ...?" ನೀವೇ ಯೋಚಿಸಿ, ದೇಶದ ಏಕತೆಗೆ ಕಾರ್ಯಪ್ರವೃತ್ತರಾಗಿ. ದೇಶದ ಅಖಂಡತೆ ಎತ್ತಿ ಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಲಿ. ಭಾರತಮಾತೆ ವಿಶ್ವವನ್ನು ಬೆಳಗಲಿ.
ಭಾರತದ ಈಗಿನ ಆಡಳಿತದ ನಕ್ಷೆ.

Author : Rakesh Bhagiratha.

Sunday, June 28, 2020

ಪ್ರೇಮದ ಅನ್ವೇಷಣೆ. ಭಾಗ-4

      ಈಕೆಯ ಹೆಸರು ಹರ್ಷಿತ. ಎಂದು ಹೇಳುತ್ತಾ ಅವರ ಮಾತು ಮುಂದುವರೆಯಿತು. ಕೆಲವು ವರ್ಷಗಳಿಂದ ಪ್ರಯಾಣದಲ್ಲಿ ಮೌನವಾಗಿ ಪ್ರಯಾಣಿಸುತ್ತಿದ್ದ ,ಆದರೆ ಈ ಬಾರಿ ಮಾತನಾಡುವ ಕುಟುಂಬ ಸಿಕ್ಕಿದೆಯಲ್ಲಾ ಎಂದು ಮನದಲ್ಲೇ ಅಂದುಕೊಂಡ. ಅಷ್ಟರಲ್ಲೇ ಸತ್ಯವತಿಯವರು ನೀನು ಏನು ಕೆಲಸ ಮಾಡಿಕೊಂಡಿದ್ದೀಯ ಎಂದು ಕೇಳಿದರು ಉತ್ತರಿಸಬೇಕು ಅನ್ನುವಷ್ಟರಲ್ಲಿ ಸತ್ಯವತಿಯವರ ಯಜಮಾನರಾದ ಚಿದಾನಂದ ಅವರು ಏನು ಪ್ರಶ್ನೆ ಕೇಳುತ್ತೀಯಾ ! ಆ ಹುಡುಗನ ಕೈಯಲ್ಲಿ ಇರುವ ಪುಸ್ತಕವನ್ನು ನೋಡಿದರೆ ತಿಳಿಯುವುದಿಲ್ಲವೆ ಕಾಲೇಜು ವಿದ್ಯಾರ್ಥಿ ಎಂದು ಹೇಳಿದರು. ಇದನ್ನು ಕೇಳಿ ನಸುನಕ್ಕ ವಿಧು ಇಲ್ಲ ನಾನು ಕಾಲೇಜು ವಿದ್ಯಾರ್ಥಿಯಲ್ಲ ನನ್ನ ಕಾಲೇಜಿನ ದಿನಗಳು ಮುಗಿದು ಒಂದು ವರ್ಷವಾಯಿತು ಇದು ಬೇರೆ ಪುಸ್ತಕ ನನಗೆ ಅನ್ಯ ಪುಸ್ತಕಗಳನ್ನು ಓದುವ ಅಭ್ಯಾಸವಿರುವುದರಿಂದ ಪುಸ್ತಕವನ್ನು ಓದುತ್ತಿದ್ದೇನೆ. ಈ ಪುಸ್ತಕದ ಹೆಸರು " ಎಸ್ ವಿ ಕೆನ್ವಿನ್ " ಎಂದು ರಾಬಿನ್ ಶರ್ಮಾ ಅವರು ರಚಿತಾ ಪುಸ್ತಕಗಳನ್ನು ನಾನು ಬಿಡುವಿನ ಸಮಯದಲ್ಲಿ ಓದುತ್ತೇನೆ ಎಂದು ಹೇಳಿದ. 
            ಅಷ್ಟರಲ್ಲೇ ಸತ್ಯವತಿಯವರು ಮಧ್ಯದಲ್ಲಿ ಮತ್ತೊಂದು ಪ್ರಶ್ನೆಯನ್ನು ಎಸೆದರು. ಈ ಮೊದಲು ನಿನ್ನ ಹತ್ತಿರ ಇದ್ದ ಪುಸ್ತಕ ಯಾವುದು ಎಂದು ಕೇಳಿದರು. ಅದಕ್ಕೆ ವಿಧು ಭಾರತೀಯ ಕ್ಷಾತ್ರ ಪರಂಪರೆ ಎನ್ನುವ ಪುಸ್ತಕ. ಈ ಬಾರಿ ಎರಡು ಪುಸ್ತಕಗಳನ್ನು ತಂದಿದ್ದೇನೆ. ಈ ಮೊದಲು ನೀವು ನೋಡಿದ್ದು ಆ ಪುಸ್ತಕ. ನಾನು ಸ್ವಂತ ಉದ್ಯೋಗವನ್ನು ಮಾಡುತ್ತಿದ್ದೇನೆ ಎಂದ ಕೂಡಲೇ, ಹೌದು ಸ್ವಂತ ಉದ್ಯೋಗವೇ ಕೆಲವೊಮ್ಮೆ ಮೇಲು ಅನಿಸುತ್ತದೆ. ಆದರೆ ಮದುವೆಯಾದ ಮೇಲೆ ಜವಾಬ್ದಾರಿ ಬಂದರೆ ಕಷ್ಟವಾಗುತ್ತದೆ ಎಂದು ಹೇಳಿದರು.  
            ಮದುವೆಯು ವಿಧುವಿಗೆ ಆಸಕ್ತಿ ವಿಷಯ ಅಲ್ಲವಾದ್ದರಿಂದ ಅವರ ಮಾತಿಗೆ ಹೆಚ್ಚಿಗೆ ಗಮನ ಕೊಡದೆ , ಈ ರೀತಿ ಏನು ಇರುವುದಿಲ್ಲ ಅದು ಅವರು ದುಡಿಮೆಗೇ ಹಾಕುವ ಪರಿಶ್ರಮದ ಮೇಲೆ ಇರುತ್ತದೆ. ಎಂದು ಹೇಳಿ ತನ್ನ ಪುಸ್ತಕದ ಕಡೆ ಗಮನ ಹರಿಸತೊಡಗಿದ. ಪುಸ್ತಕದ ಕೆಲವು ಪುಟಗಳನ್ನು ತಿರುವಿ ಹಾಕುವುದರೊಳಗೆ ಆಗಿ ಸತ್ಯವತಿಯವರು ಮತ್ತೆ ಮಾತನಾಡಲು ಶುರು ಮಾಡಿದರು. ಇನ್ನೂ ಮುಂದುವರೆದು ಮಾತನಾಡಿಸುವ ಎಲ್ಲ ಲಕ್ಷಣಗಳನ್ನು ತಿಳಿದ ನಂತರ ಪುಸ್ತಕವನ್ನು ಮುಚ್ಚಿ ತನ್ನ ಬ್ಯಾಗಿನೊಳಗೆ ಇಟ್ಟ. ಸತ್ಯವತಿಯವರೇ ಮಾತು ಮುಂದುವರಿಸಿ ನಿನ್ನ ವಯಸ್ಸು ಎಷ್ಟು ಎಂದು ಕೇಳಿದರು. ವಿಧು ಮನಸ್ಸಿನಲ್ಲೇ ಇವರಿಗೆ ಏಕೆ ಈ ಉಸಾಬರಿ ಎಂದು ಅಂದುಕೊಂಡು ಹೇಳಿದ ಇವಾಗ ನನಗೆ 26 ಎಂದು, ಸತ್ಯವತಿಯವರು ಏನಪ್ಪಾ ಇನ್ನೂ ಮದುವೆಯಾಗಿಲ್ಲ ನೀನು ಎಂದು ಕೇಳಿದರು. ಅವರ ಮಾತಿಗೆ ಅವರ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ನಕ್ಕಳು, ವಿಧುವಿಗೆ ಮನಸ್ಸಿನಲ್ಲೇ ಕಸಿವಿಸಿಯಾಯಿತು. ಈ ಮಹಾತಾಯಿ ಏನು ತೀರಾ ಖಾಸಗಿ ವಿಷಯಗಳನ್ನು ಕೇಳುತ್ತಿದ್ದಾರೆ. ಇವರ ಹತ್ತಿರ ಮಾತನಾಡಿದ್ದೆ ತಪ್ಪಾಯ್ತು ಅನಿಸುತ್ತದೆ, ಎಂದುಕೊಳ್ಳುವಷ್ಟರಲ್ಲಿ ಆ ಮಾತೃ ಹೃದಯದ ತಾಯಿ ಮಾತನ್ನು ಮುಂದುವರೆಸುತ್ತಾ ನೋಡಪ್ಪ ನಿನ್ನದು ಮದುವೆಯಾಗುವ ವಯಸ್ಸು ಮೊದಲು ಮದುವೆಯಾಗು, ಬದುಕಿನಲ್ಲಿ ವಯಸ್ಸಿಗೆ ತಕ್ಕಹಾಗೆ ಏನು ಏನು ಮಾಡಬೇಕು ಎಲ್ಲವನ್ನು ಮಾಡಬೇಕು. ಈಗ ನನ್ನ ನನ್ನನ್ನೇ ನೋಡು ನನ್ನ ತಂದೆ ನಮಗೆ 18 ವಯಸ್ಸು ತುಂಬುವುದರೊಳಗೆ ಮದುವೆ ಮಾಡಿದರು. ಈಗ ನಾನು ಕೂಡ ನನ್ನ ಮಗನಿಗೆ 20 ವರ್ಷಕ್ಕೆ ಮದುವೆ ಮಾಡಿದ್ದೀನಿ, ನೋಡು ಈಕೆ ನನ್ನ ಸೊಸೆ ಹರ್ಷಿತಾ ಡಿಗ್ರಿ ಮುಗಿಸಿ ಈಗ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಳೆ. ಒಳ್ಳೆಯ ಕಡೆ ಕೆಲಸಕ್ಕೆ ಸೇರಿದ್ದಾನೆ .ಇಬ್ಬರೂ ಸುಖವಾಗಿ ಸಂಸಾರ ಮಾಡಿಕೊಂಡು ಹೋಗುತ್ತಿದ್ದಾರೆ. ಈಗ ನಾನು ನನ್ನ ಗಂಡ ಇಬ್ಬರೂ ಬೆಂಗಳೂರಿನಲ್ಲಿ ನನ್ನ ಮಗನ ಮನೆಯಲ್ಲಿದ್ದವೇ ನನ್ನ ಯಜಮಾನರು ಕೆಲಸಕ್ಕೆ ಹೋಗುತ್ತಾರೆ. ನಾನು ನನ್ನ ಮನೆಯ ಕೆಲಸವನ್ನೆಲ್ಲ ಮಾಡಿ ಎಲ್ಲರ ಯೋಗಕ್ಷೇಮವನ್ನು ವಿಚಾರಿಸಿ ಕೊಳ್ಳುತ್ತೇನೆ ಎಂದರು. ಅಯ್ಯೋ ನಾನು ಇವರನ್ನು ಮಾತನಾಡಿಸಿದ್ದೆ ತಪ್ಪಾಯ್ತು ಅನಿಸುತ್ತದೆ ಎಂದು ಮನದಲ್ಲೇ ಅಂದುಕೊಂಡ. ಅಷ್ಟರಲ್ಲೇ ಅವರ ಸೊಸೆ ಹರ್ಷಿತಾ......

Author : Rakesh Bhagiratha.

Friday, June 26, 2020

ಗ್ರಾಮ ಪಂಚಾಯಿತಿ ಹಂತದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲು ಇದು ಸಕಾಲ.

ಗ್ರಾಮ ಪಂಚಾಯಿತಿ ಹಂತದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲು ಇದು ಸಕಾಲ.


           ಭಾರತದ ಸಂವಿಧಾನ ಆಶಯವನ್ನು ಹಾಗೂ ಗಾಂಧೀಜಿಯವರ ಗ್ರಾಮ ಪರಿಕಲ್ಪನೆಯನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತರಲು ಇದು ಸಕಾಲವಾಗಿದೆ. ಭಾರತದ ಸಂವಿಧಾನದ ಆರ್ಟಿಕಲ್ 40, ಆರ್ಟಿಕಲ್ 243ಎ ಗ್ರಾಮ ಪಂಚಾಯತಿಗಳ ಸ್ವಾವಲಂಬನೆಯ ಮಹತ್ವವನ್ನು ಸ್ಪಷ್ಟವಾಗಿ ಹೇಳುತ್ತದೆ.
(Article 40 of the constitution which enshrines one of the directive principles of the state policy lays down that the state shall take steps to organize village Panchayath and endow them such powers and authority as may be necessary to enable them to functions as units of self government)
(Article 243 A says can excise powers and perform such)
        ಕಳೆದ ತಿಂಗಳು 24/4/2020 ರಂದು ಪಂಚಾಯತ್ ರಾಜ್ ದಿನವನ್ನು ಆಚರಿಸಿದೆವು. ಪಂಚಾಯತ್ ರಾಜ್ ಪರಿಕಲ್ಪನೆ ಹುಟ್ಟಿದ್ದು 1957 ರಲ್ಲಿ. ಅಂದಿನ ಕೇಂದ್ರ ಸರ್ಕಾರವು ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿ ಅನುಭವವಿದ್ದ ಹಾಗೂ ಸಂಸದರಾಗಿದ್ದ ಬಲವಂತರಾಯ್ ಮೆಹ್ತಾ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. ಆ ಸಮಿತಿಯು ಮೂರು ಹಂತಗಳ ಚುನಾವಣೆ ವ್ಯವಸ್ಥೆಯ ಪ್ರಸ್ತಾವನೆಯನ್ನು ಮಾಡಿದ್ದು, ಮೊದಲನೇ ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಜಿಲ್ಲಾ ಪಂಚಾಯಿತಿ,ಎರಡನೇ ಹಂತದಲ್ಲಿ ( ಬ್ಲಾಕ್ ) ತಾಲೂಕ್ ಪಂಚಾಯಿತಿ,ಮೂರನೇ ಹಂತದಲ್ಲಿ ಗ್ರಾಮ ಪಂಚಾಯಿತಿ ಮಾಡಬೇಕೆಂದು ಶಿಫಾರಸು ಮಾಡಿತು. ಆನಂತರ ಹಲವಾರು ಸಮಿತಿಗಳು ಬಂದವು. ಶಾಂತ ನಾಮ್ ಸಮಿತಿ (1963), ಜನತಾ ಸರ್ಕಾರ ನೇಮಿಸಿದ ಅಶೋಕ ಮೆಹತಾ ಸಮಿತಿ (1977)ರಲ್ಲಿ ಜಿ.ವಿ.ಕೆ ರಾವ್ ಸಮಿತಿ (1985), ಎಲ್.ಎಂ. ಸಿಂಗ್ವಿ ಸಮಿತಿ (1986 ), ಹೀಗೆ ಹಲವಾರು ಸಮಿತಿಗಳ ಶಿಫಾರಸ್ಸಿನ ನಂತರ ಇಂದಿನ ಚುನಾವಣೆ ಹಾಗೂ ಆಡಳಿತ ವ್ಯವಸ್ಥೆಯನ್ನು ನಾವು ಗ್ರಾಮಪಂಚಾಯಿತಿಯಲ್ಲಿ ಕಾಣುವಂತಾಯಿತು. ಗ್ರಾಮಪಂಚಾಯಿತಿ ವ್ಯವಸ್ಥೆಯು ಗ್ರಾಮಗಳ ಸಬಲೀಕರಣ ದೃಷ್ಟಿಕೋನದಿಂದ ಹುಟ್ಟಿದ ವ್ಯವಸ್ಥೆ.ಗ್ರಾಮಗಳ ಅಭಿವೃದ್ಧಿ ಹಾಗೂ ಗ್ರಾಮಗಳು ಸ್ವಾವಲಂಬಿ ಪಥದತ್ತ ಸಾಗಬೇಕು ಎಂಬ ಆಶಯದಿಂದ ಗ್ರಾಮ ಪಂಚಾಯತ್ ಕಾನೂನಿನ ಮೂಲಕ ಗ್ರಾಮಪಂಚಾಯಿತಿಗಳಿಗೆ ಚಾಲನೆ ನೀಡಲಾಯಿತು.
        ಗ್ರಾಮ ಪಂಚಾಯಿತಿಯು ತನ್ನದೇ ಆದ ವ್ಯಾಪ್ತಿಯಲ್ಲಿ ಕೆಲಸವನ್ನು ಮಾಡಬೇಕಾಗುತ್ತದೆ. ಅದಕ್ಕೆ ತನ್ನದೇ ಆದ ಹಲವಾರು ಕರ್ತವ್ಯಗಳಿವೆ. ಗ್ರಾಮ ಪಂಚಾಯಿತಿಯು ಗ್ರಾಮ ಕಂದಾಯವನ್ನು ವಸೂಲಿ ಮಾಡುತ್ತದೆ.ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನ ಅದರ ಮಹತ್ವದ ಜವಾಬ್ದಾರಿ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರಾವರಿ ಯೋಜನೆ, ರಸ್ತೆಗಳು, ಚರಂಡಿ ವ್ಯವಸ್ಥೆ, ಶಾಲೆ ಕಟ್ಟಡಗಳ ಕಾಮಗಾರಿ ಮತ್ತು ಸಿ.ಪಿ.ರ್ ನ್ನು ನೋಡಿಕೊಳ್ಳುತ್ತದೆ. ಎಲ್ಲ ಗ್ರಾಮಮಟ್ಟದ ಜಾತಿಗಣತಿ, ಬೆಳೆಯ ಗಣತಿ, ಜಾನುವಾರಗಳ ಗಣತಿ ಜೊತೆಗೆ ಸ್ಥಳೀಯ ಮಟ್ಟದ ಗ್ರಾಮ ದಾಖಲಾತಿಗಳನ್ನು ಕ್ರೋಢೀಕರಿಸಿಕೊಳ್ಳುತ್ತದೆ. ಆ ಮಾಹಿತಿಯ ಆಧಾರದ ಮೇಲೆ ಅಲ್ಲಿನ ಅಭಿವೃದ್ಧಿಯ ರೂಪರೇಷೆಯನ್ನು ಸಿದ್ಧಪಡಿಸಿಕೊಂಡು ಉನ್ನತ ಹಂತಕ್ಕೆ ಹಣಕಾಸಿನ ನೆರವು ಕುರಿತು ಪತ್ರ ಬರೆಯುತ್ತದೆ. ಆದರೆ ಹಣಕಾಸನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಗ್ರಾಮಪಂಚಾಯಿತಿಗಳು ವಿಫಲವಾಗುತ್ತಿವೆ.
       ಗ್ರಾಮ ಪಂಚಾಯಿತಿ ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಗ್ರಾಮಾಭಿವೃದ್ಧಿ ಕಂಡಂತಹ ಹಲವಾರು ಗ್ರಾಮಗಳು ಇವೆ. ಉದಾಹರಣೆಗೆ ಹೇಳುವುದಾದರೆ ಗುಜರಾತ್ ಇಂದ 90 ಕಿಲೋಮೀಟರ್ ದೂರದಲ್ಲಿರುವ ಆಕೋದರ ಎಂಬ ಗ್ರಾಮವು ಕ್ಯಾಶ್ಲೆಸ್ ಗ್ರಾಮವೆಂದು ಪ್ರಸಿದ್ಧಿಪಡೆದಿದೆ. ಭಾರತದಲ್ಲಿ ಅತಿ ಸಣ್ಣ ವಯಸ್ಸಿನ ಹೆಣ್ಣು ಮಗಳು ಜಯಪುರದಿಂದ 60 ಕಿಲೋಮೀಟರ್ ದೂರದಲ್ಲಿರುವ ಸೋಡಾ ಎಂಬ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಆಕೆಯ ಹೆಸರು ಚಾವಿ ರಾಜ್ವತ್. ಇಂತಹ ಸಾಧನೆಗಳು ಉತ್ತರ ಭಾರತದ ಹಲವಾರು ಗ್ರಾಮಪಂಚಾಯಿತಿಗಳಿಗೆ ಸಾಧ್ಯವಾಗಿದೆ. ಆದರೆ ದಕ್ಷಿಣ ಭಾರತದ ಯಾವುದೇ ಗ್ರಾಮಪಂಚಾಯಿತಿಗಳು ಕ್ಯಾಶ್ಲೆಸ್ ಅಥವಾ ಹೆಣ್ಣುಮಗಳೊಬ್ಬಳ ಸ್ವಾತಂತ್ರ್ಯ ಆಯ್ಕೆ ಮಾಡುವಲ್ಲಿ ವಿಫಲವಾಗಿವೆ. ದಕ್ಷಿಣ ಭಾರತದ ಗ್ರಾಮ ಪಂಚಾಯಿತಿಗಳಲ್ಲಿ ಹೆಣ್ಣುಮಗಳೊಬ್ಬಳು ಆಯ್ಕೆಯಾಗಿದ್ದರೂ ಆಕೆ ನಾಮಕಾವಸ್ಥೆಯ ಅಧ್ಯಕ್ಷೆಯಾಗಿ ಮುಂದುವರೆಯುತ್ತಾಳೆ .ಆದರೆ ಆಡಳಿತವೆಲ್ಲವು ಗಂಡನದೇ ಆಗಿರುತ್ತದೆ .ಅದರಲ್ಲೂ ಕರ್ನಾಟಕದ ಚುನಾವಣೆ ವ್ಯವಸ್ಥೆಯು ಜಾತಿ ಕೇಂದ್ರೀಕೃತವಾಗಿರುವುದರಿಂದ ಒಳ್ಳೆಯ ಅಭಿವೃದ್ಧಿ ದೃಷ್ಟಿಕೋನದಿಂದ ಅಭ್ಯರ್ಥಿಯ ಆಯ್ಕೆಯಾಗುವುದು ಬಹಳ ಕಷ್ಟಸಾಧ್ಯ .ವಿದ್ಯಾವಂತರ ಕೊರತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎದ್ದು ಕಾಣುತ್ತದೆ.
        ಗ್ರಾಮ ಪಂಚಾಯಿತಿಯನ್ನು ಶಕ್ತಿಯುತವಾಗಿ ಪರಿವರ್ತಿಸಲು ಇದು ಸಕಾಲ. ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ಐದು ವರ್ಷಗಳು ತುಂಬುತ್ತ ಬಂದಿರುವ ಈ ಸಂದರ್ಭದಲ್ಲಿ ಕೋವಿಡ್ – 19 ಇರುವ ಕಾರಣ ಚುನಾವಣೆ ನಡೆಸುವುದು ಕಷ್ಟಸಾಧ್ಯವಾಗುತ್ತದೆ. ಗ್ರಾಮ ಪಂಚಾಯಿತಿಗೆ ರೋಸ್ಟರ್ ಪದ್ಧತಿಯ ಮುಖಾಂತರ ಆಯ್ಕೆ ಮಾಡುವ ಸ್ವಾತಂತ್ರ್ಯ ಸರ್ಕಾರಕ್ಕೆ ಇರುತ್ತದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸರ್ಕಾರವು ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಂಡು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಾಜ ಸೇವೆ ಮಾಡಿದವರನ್ನು ಗುರುತಿಸಿ ನೇಮಿಸಬಹುದು. ಹೀಗೆ ಮಾಡುವುದರಿಂದ ಹಣ ಇಲ್ಲದಿದ್ದರೂ ಸಾಮಾಜಿಕ ಕೆಲಸ ಮಾಡುವವರನ್ನು ಗುರುತಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ.ಇನ್ನು ಸಾಮಾಜಿಕ ನ್ಯಾಯ ಕಾಪಾಡಿಕೊಂಡು ರೋಸ್ಟರ್ ಪದ್ಧತಿಯಲ್ಲಿ ಆಯ್ಕೆ ಮಾಡುವುದರಿಂದ ಗೊಂದಲಗಳು ಆಗುವುದಿಲ್ಲ .ಇನ್ನು ಲಿಂಗ ತಾರತಮ್ಯಕ್ಕೆ ಅವಕಾಶ ಮಾಡಿಕೊಡದೆ 70:30 ಅನುಪಾತದಲ್ಲಿ ಲಿಂಗ ಸಮಾನತೆಯನ್ನು ಕಾಪಾಡುವುದರಿಂದ ಸರ್ಕಾರದ ಮೇಲಿನ ಸಾರ್ವಜನಿಕ ನಂಬಿಕೆ ಬಲವಾಗುತ್ತದೆ. 50% ಯುವಕರಿಗೆ ಅವಕಾಶ ಕೊಡುವುದರಿಂದ ಹಳ್ಳಿಗಳನ್ನು ಡಿಜಿಟಲೀಕರಣ ಮಾಡಲು ದಾರಿ ಮಾಡಿಕೊಟ್ಟಂತಾಗುತ್ತದೆ. ವಿದ್ಯಾವಂತ ಯುವಕರನ್ನು ಆಯ್ಕೆ ಮಾಡುವುದರಿಂದ ಹಳ್ಳಿಗಳಲ್ಲಿನ ಸಣ್ಣ ಮನಸ್ಥಿತಿಯ ಜಾತಿ ರಾಜಕಾರಣಕ್ಕೆ ಕೊಡಲಿ ಪೆಟ್ಟು ಕೊಟ್ಟಂತಾಗುತ್ತದೆ .ಇನ್ನು 30% ಮಹಿಳೆಯರಿಗೆ ಕೊಟ್ಟರೆ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದಂತೆ ಆಗುತ್ತದೆ. ಇನ್ನು 20% ಗ್ರಾಮಗಳಲ್ಲಿ ವಿಶೇಷ ಸಾಧನೆ ಮಾಡಿ ಸಾಮಾಜಿಕ ಬದಲಾವಣೆ ತಂದವರನ್ನು ಗುರುತಿಸಿ ಅವರನ್ನು ರೋಸ್ಟರ್ ಪದ್ಧತಿಯ ಮುಖಾಂತರ ಆಯ್ಕೆ ಮಾಡಿದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ.
         ಗ್ರಾಮಮಟ್ಟದಲ್ಲಿ ಹೊಸ ರಾಜಕೀಯ, ಅಭಿವೃದ್ಧಿಯ ಕೇಂದ್ರೀಕೃತ ರಾಜಕಾರಣಕ್ಕೆ ನಾಂದಿ ಹಾಡಿ ಹಳ್ಳಿಗಳಲ್ಲಿನ ಹಳೆಯ ಜಡ್ಡುಗಟ್ಟಿದ ಜಾತಿ ರಾಜಕೀಯ ವ್ಯವಸ್ಥೆಗೆ ಅಂತ್ಯ ಹಾಡಲು ಇದು ಸಕಾಲವಾಗಿದೆ. ಗಾಂಧೀಜಿಯವರ ರಾಮರಾಜ್ಯದ ಕಲ್ಪನೆಗೆ ಹಾಗೂ ಭಾರತದ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬದಲಾವಣೆ ತರಲು ಈ ರೋಸ್ಟರ್ ಪದ್ಧತಿ ಕಾರಣವಾಗಬಲ್ಲದು. ರೋಸ್ಟರ್ ಪದ್ಧತಿ ಆಯ್ಕೆಯು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ, ಹಳ್ಳಿಗಳಲ್ಲಿನ ಬದಲಾವಣೆಗೆ ನಾಂದಿ ಹಾಡುವುದು ಸಾಧ್ಯವಾಗಲಿದೆ.
          ಗ್ರಾಮಮಟ್ಟದಲ್ಲಿ ಹೊಸ ರಾಜಕೀಯ, ಅಭಿವೃದ್ಧಿಯ ಕೇಂದ್ರೀಕೃತ ರಾಜಕಾರಣಕ್ಕೆ ನಾಂದಿ ಹಾಡಿ ಹಳ್ಳಿಗಳಲ್ಲಿನ ಹಳೆಯ ಜಡ್ಡುಗಟ್ಟಿದ ಜಾತಿ ರಾಜಕೀಯ ವ್ಯವಸ್ಥೆಗೆ ಅಂತ್ಯ ಹಾಡಲು ಇದು ಸಕಾಲವಾಗಿದೆ. ಗಾಂಧೀಜಿಯವರ ರಾಮರಾಜ್ಯದ ಕಲ್ಪನೆಗೆ ಹಾಗೂ ಭಾರತದ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬದಲಾವಣೆ ತರಲು ಈ ರೋಸ್ಟರ್ ಪದ್ಧತಿ ಕಾರಣವಾಗಬಲ್ಲದು. ರೋಸ್ಟರ್ ಪದ್ಧತಿ ಆಯ್ಕೆಯು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ, ಹಳ್ಳಿಗಳಲ್ಲಿನ ಬದಲಾವಣೆಗೆ ನಾಂದಿ ಹಾಡುವುದು ಸಾಧ್ಯವಾಗಲಿದೆ.
          ಗ್ರಾಮಮಟ್ಟದಲ್ಲಿ ಹೊಸ ರಾಜಕೀಯ, ಅಭಿವೃದ್ಧಿಯ ಕೇಂದ್ರೀಕೃತ ರಾಜಕಾರಣಕ್ಕೆ ನಾಂದಿ ಹಾಡಿ ಹಳ್ಳಿಗಳಲ್ಲಿನ ಹಳೆಯ ಜಡ್ಡುಗಟ್ಟಿದ ಜಾತಿ ರಾಜಕೀಯ ವ್ಯವಸ್ಥೆಗೆ ಅಂತ್ಯ ಹಾಡಲು ಇದು ಸಕಾಲವಾಗಿದೆ. ಗಾಂಧೀಜಿಯವರ ರಾಮರಾಜ್ಯದ ಕಲ್ಪನೆಗೆ ಹಾಗೂ ಭಾರತದ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬದಲಾವಣೆ ತರಲು ಈ ರೋಸ್ಟರ್ ಪದ್ಧತಿ ಕಾರಣವಾಗಬಲ್ಲದು. ರೋಸ್ಟರ್ ಪದ್ಧತಿ ಆಯ್ಕೆಯು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ, ಹಳ್ಳಿಗಳಲ್ಲಿನ ಬದಲಾವಣೆಗೆ ನಾಂದಿ ಹಾಡುವುದು ಸಾಧ್ಯವಾಗಲಿದೆ.

ಪ್ರೇಮದ ಅನ್ವೇಷಣೆ ಭಾಗ-3



ಪ್ರೇಮದ ಅನ್ವೇಷಣೆ ಭಾಗ-3





        ನೆತ್ತಿಯ ಮೇಲಿನ ಸೂರ್ಯ ತನ್ನ ಪೂರ್ವದ ಪಯಣವನ್ನು ಮುಗಿಸಿ ಪಶ್ಚಿಮದತ್ತ ತನ್ನ ಪಥವನ್ನು ಆರಂಭಿಸಿದ್ದ. ಬಿಸಿಲಿನ ಝಳ ಕಿಟಕಿಯ ಮುಖಾಂತರ ಒಳಪ್ರವೇಶಿಸಲು, ಬಿಸಿಲಿನ ಝಳ ತಡೆಯುವ ವ್ಯರ್ಥ ಪ್ರಯತ್ನವನ್ನು ಆ ಹುಡುಗಿ ಬಟ್ಟೆ ಹಿಡಿಯುವುದರ ಮುಖಾಂತರ ಮಾಡುತ್ತಿದ್ದಳು. ಆಕೆಯ ವ್ಯರ್ಥ ಪ್ರಯತ್ನಕ್ಕೆ ತೆರೆ ಎಳೆಯುವಂತೆ ಅವರ ತಂದೆ ಕಿಟಕಿಯಲ್ಲಿ ಗಾಳಿ ಬರುವಂತೆ ಕಿಟಕಿಯನ್ನು ಮುಚ್ಚಿದರು. ಆ ಕುಟುಂಬದ ಮಾತು ಮುಂದುವರೆಯುತ್ತಾ ಹೋಯಿತು. ಸಾಮಾನ್ಯವಾಗಿ ರೈಲಿನಲ್ಲಿ ಹಾಗೂ ಬಸ್ಸಿನಲ್ಲಿ ಸಹ ಪ್ರಯಾಣಿಕರೊಂದಿಗೆ ಹರಟೆ ಹೊಡೆಯುತ್ತಿದ್ದ ವಿಧು ಈಚಿನ ದಿನಗಳಲ್ಲಿ ಹರಟೆ ಹೊಡೆಯುವುದನ್ನು ನಿಲ್ಲಿಸಿದ್ದ. ನಾವು ಸಮಾಜದ ಬಗ್ಗೆ ಮಾತನಾಡುವುದರಿಂದ ಏನು ಬದಲಾವಣೆ ಮಾಡಲಾಗುವುದಿಲ್ಲ ಎಂಬ ಧೋರಣೆ ಮೌನವಾಗಿ ಪ್ರಯಾಣ ಮಾಡುವ ಮಟ್ಟಕ್ಕೆ ತಂದು ನಿಲ್ಲಿಸಿತ್ತು. ರೈಲು ಗಾಡಿಯ ವೇಗ ಹೆಚ್ಚಾದಂತೆ ತಂಪಾದ ಗಾಳಿ ಪಕ್ಕದ ಕಿಟಕಿಯಿಂದ ಬೀಸತೊಡಗಿದ್ದರಿಂದ ನಿಧಾನವಾಗಿ ನಿದ್ರೆಯ ಮಂಪರಿಗೆ ಜಾರಿದ. ಹಾಗೆಯೇ ಗಾಢ ನಿದ್ರೆಗೆ ಜಾರುವ ಹೊತ್ತಿಗೆ ಹಿಂದಿನಿಂದ ಟಿಕೆಟ್ ಟಿಕೆಟ್ ಎನ್ನುವ ಶಬ್ದ ಕಿವಿಗೆ ಅಪ್ಪಳಿಸಿತು. ನಿದ್ದೆಯ ಮಂಪರಿನಲ್ಲಿಲ್ಲೇ ಮುಚ್ಚಿದ್ದ ಕಣ್ಣು ಬಿಟ್ಟು ನೋಡಿದಾಗ ಟಿಕೆಟ್ ಚೆಕಿಂಗ್ ಆಫೀಸರ್ ವಿಧುವಿನ ಕಣ್ಣ ಮುಂದೆ ನಿಂತಿದ್ದ.

         ಟಿಕೆಟ್ ಕೇಳಿದ ಕೂಡಲೇ ಟಿಕೆಟ್ ಕೊಡಲು ಜೇಬಿನೊಳಗೆ ಕೈಹಾಕಿದ, ಟಿಕೆಟ್ ಸಿಗದೇ ಹೋಯಿತು. ಅಯ್ಯೋ ಏನು ಮಾಡುವುದು ಇವಾಗ ಟಿಕೆಟ್ ಕೂಂಡೆನಲ್ಲ ಎಂದು ಟಿಕೆಟ್ಗಾಗಿ ತನ್ನ ಕಿಸೆ ಹಾಗೂ ಬ್ಯಾಗನ್ನು ಹುಡುಕಿದರೂ ಟಿಕೆಟ್ ಸಿಗದೇ ಹೋಯಿತು. ಇನ್ನೇನು ದಂಡ ಕಟ್ಟುವುದೇ ಗಟ್ಟಿ ಎಂದುಕೊಳ್ಳುತ್ತಿರುವಾಗಲೇ ಜೇಬಿನಲ್ಲಿದ್ದ ಟಿಕೆಟ್ ಅರಿವಿಗೆ ಬಾರದ ಹಾಗೆ ಕೆಳಗೆ ಬಿದ್ದದ್ದನ್ನು ನೋಡಿದ ಎದುರುಗಡೆ ಕುಳಿತಿದ್ದ ಹುಡುಗಿ ಟಿಕೆಟ್ಟನ್ನು ತೆಗೆದುಕೊಂಡು ವಿಧುವಿನ ಕೈಗೆ ಕೊಟ್ಟಳು. ಅಬ್ಬಾ ಬದುಕಿದೆ! ಇಲ್ಲ ಎಂದರೆ ಈ ಟಿಕೆಟ್ ಚೆಕಿಂಗ್ ಆಫೀಸರುಗಳು ಸಿಕ್ಕಿದಷ್ಟು ಕಬಳಿಸಲು ಯತ್ನಿಸುತ್ತಿದ್ದರು ಎಂದು ಬೇರೆಯವರಿಗೆ ಆದ ಅನುಭವವನ್ನು ನೋಡಿದ್ದ ವಿಧು ಮನಸ್ಸಿನಲ್ಲಿ ನೆನೆಸಿಕೊಂಡು ನಿಟ್ಟಿಸಿರುಬಿಟ್ಟನು. ಆ ತಕ್ಷಣ ವಿಧುವಿನ ಕಣ್ಣಿಗೆ ಹುಡುಗಿ ದೇವತೆಯಂತೆ ಕಂಡಳು.  ಟಿಕೆಟ್ಟನ್ನು ಆಫೀಸರಿಗೆ ತೋರಿಸಿ ಮತ್ತೆ ಜೇಬಿನಲ್ಲಿಟ್ಟುಕೊಳ್ಳುವಾಗ ಮುಗುಳ್ನಕ್ಕಳು. ಅದಕ್ಕೆ ಪ್ರತಿಯಾಗಿ ಇವನು ಕೂಡ ಮುಗುಳ್ನಕ್ಕ ಆನಂತರ ಅವರ ತಾಯಿಯವರು ಮಾತನಾಡಲು ಶುರು ಮಾಡಿದರು.

            “ಯಾವ ಊರಪ್ಪ ನಿಂದು?” ಎಂದು ಕೇಳಿದರು. ಅದಕ್ಕೆ ಅಜ್ಜಂಪುರ ಎಂದು ಹೇಳಿದ. ಅವರಿಂದ ಬಂದ ಮರುಪ್ರಶ್ನೆ ಯಾವ ಅಜ್ಜಂಪುರವೆಂದು. ಅದು ಎಲ್ಲಿ ಬರುತ್ತದೆ? ಎಂದು… ಹೇಗೆ ಹೇಳುವುದು? ಇವರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕಲ್ಲ,  ಎಂದು ಯೋಚಿಸಿದವನೇ “ಅದು ನೀವು ಹುಬ್ಬಳ್ಳಿ ಮಾರ್ಗದಲ್ಲಿ ರೈಲಿನಲ್ಲಿ ಹೋಗುವಾಗ ಸಿಗುತ್ತದೆ. ನಿಮಗೆ ಗೊತ್ತಿಲ್ಲವೇ?” ಎಂದು ಕೇಳಿದ. ಅದಕ್ಕವರು “ನಾವು ಹೆಚ್ಚಿನ ಸಮಯ ರಾತ್ರಿ ಪ್ರಯಾಣ ಮಾಡುವುದು. ಹಾಗಾಗಿ ನಮಗೆ ತಿಳಿದಿಲ್ಲ” ಎಂದರು. ಇವರಿಗೆ ನಮ್ಮ ಊರು ನೆನಪಿಟ್ಟುಕೊಳ್ಳುವಂತೆ ಹೇಗೆ ಹೇಳುವುದು ಎಂದು ಯೋಚಿಸುತ್ತಿರುವಾಗಲೇ ರೈಲಿನಲ್ಲಿ ಚರುಮುರಿ ಅವನಿಗೆ ಈರುಳ್ಳಿ ಜಾಸ್ತಿ ಹಾಕಪ್ಪ ಎಂದು ಯಾರೋ ಹೇಳಿದ್ದು ಕೇಳಿಸಿತು. “ಅಮ್ಮ ನಿಮಗೆ ಗೊತ್ತಲ್ವಾ, ಇಡೀ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಈರುಳ್ಳಿ ಬೆಳೆಯುವ ಪ್ರದೇಶ ನಮ್ಮದು” ಎಂದು ಹೆಮ್ಮೆಯಿಂದ ಹೇಳಿದ. ಮಾತು ಮುಂದುವರೆದು ಮಹಾರಾಷ್ಟ್ರದ ನಾಸಿಕ್ ಇಂದ ಈರುಳ್ಳಿ ಬರುವವರೆಗೂ ನಮ್ಮ ಕಡೆ ಬೆಳೆಯುವ ಈರುಳ್ಳಿಗೆ ಬೇಡಿಕೆ ಎಂದು ಹೇಳುವಾಗಲೇ ಅವರು ನಿನ್ನ ಹೆಸರೇನು ಎಂದು ಕೇಳಿದರು. ವಿಧು ತನ್ನ ಪರಿಚಯವನ್ನು ಮಾಡಿಕೊಂಡು ಅವರ ಪರಿಚಯವನ್ನು ಕೇಳಿದ. ಅವರು ತನ್ನ ಪರಿಚಯ ಮಾಡಿಕೊಳ್ಳುತ್ತಾ “ನಾನು ಸತ್ಯವತಿ, ನಮ್ಮ ಮನೆಯವರ ಹೆಸರು ಚಿದಾನಂದ, ಹಾಗೂ ಈಕೆಯ ಹೆಸರು…..


Author : Rakesh Bhagiratha.

ಪ್ರೇಮದ ಅನ್ವೇಷಣೆ ಭಾಗ-2

ಪ್ರೇಮದ ಅನ್ವೇಷಣೆ ಭಾಗ-2

        ಕಿಟಕಿ ಪಕ್ಕ ದಡೂತಿ ದೇಹದ ಮನುಷ್ಯ ಕುಳಿತಿದ್ದ.ಈ ತುದಿಯ ಪಕ್ಕದಲ್ಲಿ ಸಾಮಾನ್ಯ ಗಾತ್ರದ ವ್ಯಕ್ತಿ ಕುಳಿತಿದ್ದ. ವಿಧು ಕುಳಿತುಕೊಳ್ಳುವುದಕ್ಕೂ ಅವನು ಕುಳಿತುಕೊಂಡ ಹಿಂದಿನ ನಾಲ್ಕನೆಯ ಸಾಲಿನಲ್ಲಿ ಜಾಗಕ್ಕಾಗಿ ಜಗಳ ಶುರುವಾಯಿತು. ಜಾಗಕ್ಕಾಗಿ ನಡೆಯುವ ಜಗಳವನ್ನು ನೋಡಿ ನಗುವನ್ನು ತಡೆಯಲಾರದೆ ಮಂದಸ್ಮಿತನಾಗಿ ನಕ್ಕು ಸುಮ್ಮನಾದ. ಕೆಲವೇ ಗಂಟೆಗಳ ಪ್ರಯಾಣಕ್ಕಾಗಿ ಕುಳಿತುಕೊಳ್ಳುವ ಜಾಗಕ್ಕಾಗಿ ಈ ರೀತಿ ಕಿತ್ತಾಡುವಾಗ, ಇನ್ನು ಅಧಿಕಾರದಾಹದ ನಮ್ಮ ರಾಜಕಾರಣಿಗಳು ಮಂತ್ರಿಗಿರಿಗಾಗಿ ಕುರ್ಚಿಗಾಗಿ ಹೊಡೆದಾಡುವುದುರಲ್ಲಿ ಅರ್ಥವಿದೆಯೇನೋ ಅನಿಸಿತು. ರೈಲು ಹೊರಡುವ ಸಮಯದ ಹೊತ್ತಿಗೆ ಯಥಾಪ್ರಕಾರ ರೈಲುಗಾಡಿಯು ತುಂಬಿ ತುಳುಕುತ್ತಾ ತನ್ನ ಚುಕುಬುಕು ಸದ್ದಿನೊಂದಿಗೆ ಹೊರಡುವ ಹೊತ್ತಿಗೆ ನೆತ್ತಿಯ ಮೇಲಿನ ಸೂರ್ಯ ಸರಿಯುತ್ತಲಿದ್ದ.
           ರೈಲಿನ ವೇಗ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದ ವಿಧುವಿಗೆ ರೈಲು ತನ್ನ ನಿಲ್ದಾಣವನ್ನು ಬಿಟ್ಟು, ಇನ್ನೂ ವೇಗವನ್ನು ಹೆಚ್ಚಿಸುತ್ತಿರುವವಾಗಲೇ ತಾನು ಪ್ರತಿಬಾರಿಯೂ ಪ್ರಯಾಣದಲ್ಲಿ ತೆಗೆದುಕೊಂಡು ಹೋಗುವ ಯಾವುದಾದರೂ ಪುಸ್ತಕವನ್ನು ತನ್ನ ಬ್ಯಾಗಿನಲ್ಲಿ ಇಡುವಂತೆ ತನ್ನ ರೂಮಿನ ಸಹಪಾಠಿಗೆ ಹೇಳಿದ್ದು ನೆನಪಾಯಿತು. ವಿಧುವಿನ ಪುಸ್ತಕದ ಗೀಳನ್ನು ಬಲ್ಲವನಾಗಿದ್ದ ಆತನ ರೂಮಿನ ಸಹಪಾಠಿ ತ್ರಿಭುವನ್ ಹಿಂದಿನ ರಾತ್ರಿ ಓದುತ್ತಿದ್ದ ಪುಸ್ತಕವಾದ ‘ಭಾರತೀಯ ಕ್ಷಾತ್ರ ಪರಂಪರೆ’ ಪುಸ್ತಕವನ್ನು ತೆಗೆದು ಓದಲು ಶುರುಮಾಡಿದ. ಅಷ್ಟರಲ್ಲೇ ಯಾರೋ ಜೋರಾಗಿ ಮಾತನಾಡುತ್ತಿದ್ದ ಶಬ್ದ ಕೇಳಿಸಿತು. ಕಂಚಿನ ಕಂಠದ ಮಾತನ್ನು ಕೇಳಿ ತನ್ನ ತಲೆಯನ್ನು ಎತ್ತಿ ಮುಂದೆ ನೋಡಿದಾಗ ಮಧ್ಯವಯಸ್ಸಿನ ತಂದೆ-ತಾಯಿ ಹಾಗೂ ಅವರ ಮಗಳು ಕುಳಿತಿದ್ದರು. ಅವರು ತಮ್ಮ ಮಗಳಿಗೆ ಊಟದ ಬುತ್ತಿಯನ್ನು ಬಿಚ್ಚಿ ತಿನ್ನಲು ಕೊಡುತ್ತಿದ್ದರು. ಅವರನ್ನು ನೋಡಿದಾಗ ಅವರ ವೇಷಭೂಷಣದಿಂದ ಅವರು ಕರ್ನಾಟಕದ ಉತ್ತರ ಭಾಗದವರು ಎಂದು ತಿಳಿಯಲು ಸುಲಭವಾಗುವಂತೆ ಇತ್ತು. ಅವರು ಬಟ್ಟೆ ಧರಿಸಿದ ರೀತಿ ಇನ್ನೂ ತಮ್ಮತನವನ್ನು ಉಳಿಸಿಕೊಂಡು ಹೋಗುತ್ತಿರುವ, ಕರ್ನಾಟಕದ ಉತ್ತರ ಭಾಗದ ಅವರೆಂದರೆ ಸ್ವಲ್ಪ ಅಭಿಮಾನ ಹಾಗೂ ಹೆಚ್ಚು ಪ್ರೀತಿ. ಆ ತಾಯಿ ಅಗಲವಾದ ಹಣೆಯ ಮೇಲೆ ದೊಡ್ಡ ಕುಂಕುಮ, ಮೂಗಿನ ಎರಡು ಕಡೆ ವಜ್ರಾಭರಣಗಳ ಮೂಗುತಿ, ತುಂಬಾ ವಿಶೇಷವಾಗಿ ಕಾಣುವ ಗುಂಡಿನ ಸರ ಹಾಗೂ ಜರಿಯಂಚಿನ ಚಿನ್ನದ ಬಣ್ಣದ ಕಾಟನ್ ಸೀರೆಯನ್ನು ಉಟ್ಟುಕೊಂಡಿದ್ದಳು. ಆ ತಾಯಿ ಇನ್ನೂ ನಗರೀಕರಣದ ಪ್ರಭಾವಕ್ಕೆ ಒಳಗಾಗದೆ ಗ್ರಾಮೀಣ ಸೊಗಡಿನ ಮೂಲನೆಲೆಯನ್ನು ಉಳಿಸಿಕೊಂಡಿದ್ದು ಎದ್ದು ತೋರುತ್ತಿತ್ತು.
            ಇನ್ನು ಅವರ ತಂದೆಯು ಕುರ್ತಾದೂಂದಿಗೆ ಕಚ್ಚೆ ಪಂಚೆಯನ್ನು ತೊಟ್ಟಿದ್ದು, ಅವರ ಮುಖದ ಮೇಲಿನ ದಪ್ಪನೆಯ ಮೀಸೆ, ಆ ಮುಖದಲ್ಲಿನ ಗಾಂಭೀರ್ಯ ಅವರು ಆ ಕುಟುಂಬದ ಯಜಮಾನ ಎಂಬುದು ಖಾತ್ರಿ ಪಡಿಸುವಂತೆ ಇತ್ತು. ಇನ್ನು ಕೊನೆಯಲ್ಲಿ ಕುಳಿತಿದ್ದ ಹುಡುಗಿಯನ್ನು ನೋಡಿ “ಅರೇ! ಯಾರು ಈ ಹುಡುಗಿ? ಸುಮ್ಮನೆ ಮೌನವಾಗಿ ಕಿಟಕಿಯಾಚೆಗಿನ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಕುಳಿತಿರುವಳಲ್ಲ..?” ಎಂದುಕೊಂಡ. ಇಂದಿನ ಶೈಲಿಯ ಉಡುಗೆ-ತೊಡುಗೆ ತೊಟ್ಟು ಚಿನ್ನದ ಮೂಗುತಿಯನ್ನು ಸರಿ ಮಾಡಿಕೊಳ್ಳುತ್ತಾ ಕುಳಿತಿದ್ದ ಈ ಹುಡುಗಿ ಯಾರಿರಬಹುದು ಎಂದುಕೊಳ್ಳುವಷ್ಟರಲ್ಲಿ ಆ ಹುಡುಗಿಯ ಪಕ್ಕದಲ್ಲಿ ಕುಳಿತಿದ್ದ ತಾಯಿ ಹುಡುಗಿಯ ಕೈಗೆ ರೊಟ್ಟಿ ಊಟವನ್ನು ಕೊಟ್ಟರು. ಅಮ್ಮಾ… ನಾನು ಆನಂತರ ಊಟವನ್ನು ಮಾಡುತ್ತೇನೆ ಎಂದು ಆ ಹುಡುಗಿ ಊಟವನ್ನು ನಿರಾಕರಿಸಿದಳು. ಓ ಇವರು ತಾಯಿ-ಮಗಳು ಎಂದುಕೊಂಡು ತನ್ನ ಪುಸ್ತಕವನ್ನು ಓದಲು ಮುಂದುವರಿಸಿದನು. ರೈಲು ನಿಧಾನವಾಗಿ ತನ್ನ ವೇಗವನ್ನು ಹೆಚ್ಚಿಸುತ್ತಾ ಹೋದಂತೆ, ಆ ತಂದೆ ತಾಯಿ ಮತ್ತು ಮಗಳ ನಡುವಿನ ಚರ್ಚೆಯೂ ಹೆಚ್ಚಾಗುತ್ತಾ ಹೋಯಿತು. ಹಲವಾರು ವಿಷಯಗಳನ್ನು ಚರ್ಚಿಸುತ್ತಾ ಕುಳಿತಿದ್ದ ಅವರ ಗದ್ದಲದಲ್ಲಿ ವಿಧು ಓದು ಮುಂದುವರಿಸುವುದು ಕಷ್ಟವಾಯಿತು. ಪುಸ್ತಕವನ್ನು ಮುಚ್ಚಿ ತನ್ನ ಬ್ಯಾಗಿನೊಳಗೆ ಹಾಕಿಕೊಂಡು ಮೌನವಾಗಿ ಕುಳಿತ. ಆದರೂ ತನ್ನ ಮನಸ್ಸಿನ ಆಲೋಚನೆಯನ್ನು ತಡೆಯಲಾದಿತೇ? ಮನಸ್ಸಿನಲ್ಲೇ ತಂದೆ-ತಾಯಿ ಇಷ್ಟು ಊಟಕ್ಕಾಗಿ ಹಿಂಸೆ ಮಾಡಿ ತಿನ್ನಿಸುತ್ತಿರುವುದರಿಂದಲೇ ಆ ಹುಡುಗಿ ತೆಳ್ಳಗೆ ಸಣ್ಣವಾಗಿರುವುದು ಎಂದುಕೊಂಡು ಸುಮ್ಮನಾದ.....

Author : Rakesh Bhagiratha.

ಪ್ರೇಮದ ಅನ್ವೇಷಣೆ ಭಾಗ-1

ಪ್ರೇಮದ ಅನ್ವೇಷಣೆ ಭಾಗ-1

          ಬೆಂಗಳೂರು ಎಂಬ ಮಹಾನಗರಿಯ ಎಲೆಕ್ಟ್ರಾನಿಕ್ ಸಿಟಿ ಬಸ್ ನಿಲ್ದಾಣದಿಂದ ಹೊರಟು ಸಿಲ್ಕ್ ಬೋರ್ಡ್ ಜಂಕ್ಷನ್ ಮಾರ್ಗವಾಗಿ ಬೆಂಗಳೂರು ಕೇಂದ್ರ ಬಸ್ ನಿಲ್ದಾಣವಾದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರುವ ಹೊತ್ತಿಗೆ 3:00 ಗಂಟೆ ಸರಿದಿತ್ತು. ಮೆಜೆಸ್ಟಿಕ್ ನಿಲ್ದಾಣದಿಂದ ಹೊರಟು ರೈಲು ನಿಲ್ದಾಣಕ್ಕೆ ಹೋಗಿ ಬೆಂಗಳೂರು-ಹುಬ್ಬಳ್ಳಿ ಇಂಟರ್ ಸಿಟಿ ರೈಲಿನಲ್ಲಿ ಜಾಗ ಹಿಡಿಯುವಷ್ಟರಲ್ಲಿ ಮತ್ತೆ ಅರ್ಧಗಂಟೆ ಸಮಯ ಸರಿದು ಹೋಯಿತು. ಆ ರೈಲಿನಲ್ಲಿ ದಿನವೂ ತುಂಬಾ ಜನರು ಪ್ರಯಾಣಿಸುತ್ತಿದ್ದರಿಂದ ಅರ್ಧ ಗಂಟೆ ಮೊದಲೇ ತಲುಪಬೇಕೆಂಬ ಲೆಕ್ಕಾಚಾರ ತಲೆಕೆಳಗಾಯಿತು. ಬೆಂಗಳೂರು ಎಂಬ ಮಹಾನಗರದ ಜನಸಂದಣಿಯ ಟ್ರಾಫಿಕ್ ಸಮಸ್ಯೆ ನಮ್ಮ ಸಮಯದ ಲೆಕ್ಕಾಚಾರವನ್ನೇ ಪರಿಶೀಲಿಸುವಂತೆ ಮಾಡುತ್ತದೆ ಎಂದು ಕೇಳಿದ್ದ, ಆದರೆ ಅದರ ಅನುಭವವಾಯಿತು. ಬೆಂಗಳೂರಿನ ಮೆಟ್ರೋ ರೈಲಿನಲ್ಲಿ ಸಂಚರಿಸಿ ಅನುಭವವಿದ್ದ ವಿಧುವಿಗೆ ಇನ್ನು ಯಾವ ಕಾಲಕ್ಕೆ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಸಂಚಾರ ಆರಂಭವಾಗುವುದೋ ಎಂದು ಅಂದುಕೊಳ್ಳುತ್ತಿರುವಾಗಲೇ, ಮನಸ್ಸಿನಲ್ಲಿ ಬೆಂಗಳೂರಿನಲ್ಲಿ ಯಾಕೆ ಈ ರೀತಿ ಜನಸಂಖ್ಯೆ ಎಂದು ಯೋಚಿಸತೊಡಗಿದಾಗ ‘ಬೆಂಗಳೂರು ಎಂಬ ಮಹಾನಗರದಲ್ಲಿ ಎಲ್ಲಿಂದ ಬಂದರೂ ಜೀವಿಸಬಹುದು’ ಎಂಬ ಮಾತು ನೆನಪಿಗೆ ಬಂತು.
        ಮೆಜೆಸ್ಟಿಕ್ ನಿಲ್ದಾಣದಿಂದ ಅಂಡರ್ ಪಾಸ್ ಮುಖಾಂತರ ರೈಲು ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಯಾರೋ ಹಣ್ಣುಗಳನ್ನು ಮಾರುತ್ತಿರುವ ಕೂಗು ಕೇಳಿಸಿತು. ತಿರುಗಿ ನೋಡಿದರೆ ಒಂದು ಬಿದಿರಿನ ಬುಟ್ಟಿಯ ತುಂಬಾ ಹಣ್ಣುಗಳನ್ನು ತುಂಬಿಕೊಂಡು ಕುಳಿತಿರುವ ಕಪ್ಪುವರ್ಣದ, ತನ್ನ ಮುಖದಲ್ಲಿ ಬದುಕಿನ ಅನುಭವವನ್ನು ಹೂತ್ತು ಕುಳಿತಿರುವ ಹಿರಿಯ ಜೀವ. ತನ್ನ ಇಳಿವಯಸ್ಸಿನಲ್ಲೂ ಬೇರೆಯವರ ಮುಂದೆ ತುತ್ತು ಅನ್ನಕ್ಕಾಗಿ ಕೈಯನ್ನು ಚಾಚದೆ ತನ್ನ ಸ್ವಂತ ದುಡಿಮೆಯಲ್ಲಿ ಜೀವನ ನಡೆಸುತ್ತಿರುವ ಅಜ್ಜಿಯನ್ನು ಕಂಡು ಖುಷಿಯಾಯಿತು. ವಿಧುವಿನ ಸೂಕ್ಷ್ಮ ಮನಸ್ಸಿಗೆ ಇಂದಿನ ಸಾಮಾಜಿಕ ಪರಿಸ್ಥಿತಿಯ ಬದಲಾವಣೆ ಕಂಡು ಖೇದವೂ ಉಂಟಾಯಿತು. ಗಟ್ಟಿಯಾಗಿದ್ದು ಕೈತುಂಬ ಸಂಪಾದನೆ ಇದ್ದರೆ ಮಾತ್ರ ಮನುಷ್ಯನಿಗೆ ಬೆಲೆ ಎನ್ನುವ ಮಾತು ಅಕ್ಷರಶಃ ಸತ್ಯ ಎಂದು ಅರಿವಿಗೆ ಬಂತು. ಅಜ್ಜಿಯ ಪರಿಸ್ಥಿತಿ ಕಂಡು ಮನಸ್ಸು ಮುರುಗಿದ್ದರಿಂದ ಅಜ್ಜಿಗೆ ಹಣ ಸಹಾಯವನ್ನು ಮಾಡಲು ಹೋದರೆ, ಆ ಸ್ವಾಭಿಮಾನಿ ಅಜ್ಜಿ ಹಣ್ಣನ್ನು ಕೊಂಡರೆ ಮಾತ್ರ ಹಣವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ಅವರ ಸ್ವಾಭಿಮಾನಕ್ಕೆ ಮನಸ್ಸಿನಲ್ಲೇ ಶಿರಬಾಗಿದ ವಿಧು, ಸರಿ ಹಾಗಾದರೆ ಹಣ್ಣನ್ನು ಕೊಡಿ ಎಂದು ಹಣ್ಣನ್ನು ತೆಗೆದುಕೊಂಡ. ಚಿಲ್ಲರೆ ನಿಮ್ಮಲ್ಲೇ ಇರಲಿ ಎಂದರೂ ಅಜ್ಜಿ ಅದನ್ನು ಸ್ವೀಕರಿಸಲು ಒಪ್ಪಲಿಲ್ಲ.ಅಜ್ಜಿಯ ಸ್ವಾಭಿಮಾನ ಕಂಡು ಅಜ್ಜಿಯ ಮೇಲಿನ ಗೌರವ ನೂರ್ಮಡಿಗೊಂಡಿತು. ಹಣ್ಣನ್ನು ತೆಗೆದುಕೊಂಡು ಮುಂದೆ ಸ್ವಲ್ಪ ದೂರ ಸಾಗುತ್ತಿರುವಾಗಲೇ ಕಣ್ಣು ಕಾಣದ ಕುರುಡ ವ್ಯಕ್ತಿಯೊಬ್ಬ ದೇಹ ತೂಕದ ಯಂತ್ರವನ್ನು ಹಿಡಿದು ಕುಳಿತಿದ್ದ.ಅಲ್ಲಿ ಕೆಲವರು ಎರಡು ರೂಪಾಯಿಗಳನ್ನು ಅವನ ಕೈಗೆ ಕೊಟ್ಟು ತಮ್ಮ ತೂಕವನ್ನು ಪರಿಶೀಲಿಸಿಕೊಳ್ಳುತ್ತಿದ್ದರು. ತಾನು ತೂಕವನ್ನು ಪರಿಶೀಲಿಸಿ ಕೊಳ್ಳುವ ಅವಶ್ಯಕತೆ ಇಲ್ಲದಿದ್ದರೂ ಅವರ ಸ್ವಾಭಿಮಾನದ ದುಡಿಮೆಗೆ ನನ್ನದೊಂದು ಸಣ್ಣ ಸಹಾಯವಾಗಲಿ ಎಂದುಕೊಂಡು ತಾನೂ ಕೂಡ ತನ್ನ ತೂಕವನ್ನು ಪರಿಶೀಲಿಸಿಕೊಂಡು ಮುನ್ನಡೆದನು. ಎದುರಿಗೆ ಬೆಂಗಳೂರು ರೈಲು ನಿಲ್ದಾಣಕ್ಕೆ ದಾರಿ ಎಂಬ ನಾಮಫಲಕ ಸಿಕ್ಕಿತ್ತು. ವಿಧು ಅದನ್ನು ಅನುಸರಿಸಿ ನಡೆದು ಅಂಡರ್ ಪಾಸ್ ನಿಂದ ಹೂರಗಡೆ ಬರುವುದರಲ್ಲಿ ಹಿರಿಯ ಜೀವ ಹಾಗೂ ಕಣ್ಣುಕಾಣದ ವ್ಯಕ್ತಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದು ನೋಡಿ, ಮತ್ತೊಮ್ಮೆ ‘ಬೆಂಗಳೂರು ಯಾರಿಗಾದರೂ ಬದುಕು ಕೊಡುತ್ತದೆ’ ಎಂಬುದರ ಅರಿವಾಯಿತು.
        ಅಂತೂ ರೈಲು ನಿಲ್ದಾಣಕ್ಕೆ ಬಂದು ನೋಡಿದರೆ ಹಾವಿನ ಬಾಲದಂತೆ ಸರತಿ ಸಾಲು ನೋಡಿ ಅವಾಕ್ಕಾದ. ಯಾವಾಗಲೂ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿ ನೇರವಾಗಿ ಹೋಗುತ್ತಿದ್ದ ವಿಧುವಿಗೆ ಸ್ವಲ್ಪ ಕಿರಿಕಿರಿ ಎನಿಸಿದರೂ, ಒಂದು ಹೊಸ ಅನುಭವ ಒದಗಿಸಿಕೊಟ್ಟಿತು. ಅಂತೂ ರೈಲಿನ ಟಿಕೆಟ್ ಖರೀದಿಸಿ ಪ್ಲಾಟ್ಫಾರ್ಮ್ ಹುಡುಕಿ ಹೋಗಿ ರೈಲಿನಲ್ಲಿ ಜಾಗಕ್ಕೆ ಹುಡುಕತೊಡಗಿದ. ಸುಡುಬಿಸಿಲಿನ ಬೇಸಿಗೆಯ ಸೆಕೆಯ ಕಾಲವಾಗಿದ್ದರಿಂದ ಕಿಟಕಿಯ ಪಕ್ಕ ಕೂರಲು ಜಾಗಕ್ಕಾಗಿ ಹುಡುಕಿದರೂ ಎಲ್ಲಾ ಸೀಟುಗಗಳೂ ಭರ್ತಿಯಾಗಿದ್ದವು. ರೈಲಿನ ಹಿಂದಿನ ಭೋಗಿಯಿಂದ ಇಂಜಿನ್ ವರೆಗೆ ತಡಕಾಡಿದರೂ ಕಿಟಕಿಯ ಪಕ್ಕ ಜಾಗ ಸಿಗದೇ ಹೋಯಿತು. ಇನ್ನೂ ಹುಡುಕಿದರೆ ಇರುವ ಜಾಗವೂ ಇಲ್ಲದಂತಾಗುತ್ತದೆಂದು ನಿರ್ಧರಿಸಿ ಬರುವಷ್ಟರಲ್ಲಿ ಇರುವ ಜಾಗಗಳೂ ಬರ್ತಿ ಆಗಿದ್ದವು. ಉಳಿದ ಜಾಗಕ್ಕಾಗಿ ಹುಡುಕಾಡಿದರೆ ಮಧ್ಯಭಾಗದಲ್ಲಿ ಮಾತ್ರ ಇದ್ದವು. “ಅಯ್ಯೋ… ನಾನು ಮೊದಲೇ ಕುಳಿತುಕೊಂಡಿದ್ದರೆ ಇಬ್ಬರ ಮಧ್ಯದಲ್ಲಿ ಸಿಕ್ಕಿ ಒದ್ದಾಡುವ ಪರಿಸ್ಥಿತಿ ಬರುತ್ತಿರಲಿಲ್ಲವಲ್ಲ” ಎಂದು ಅಂದುಕೊಂಡು ಇದ್ದ ಸ್ವಲ್ಪ ಸ್ಥಳಾವಕಾಶದಲ್ಲೇ ಕುಳಿತುಕೊಂಡ.......

Author : Rakesh Bhagiratha.