Wednesday, September 30, 2020

ಪ್ರೇಮದ ಅನ್ವೇಷಣೆ ಭಾಗ-15


ಕುಶಾಲ್ ತನ್ನ ಪ್ರೀತಿಯ ಸಮಸ್ಯೆಗಳನ್ನು ಹೇಳಿಕೊಳ್ಳಲು ಶುರುಮಾಡಿದ. ವಿಧುವಿಗೆ ಹದಿಹರೆಯದ ಪ್ರೀತಿಯ ಮೇಲೆ ನಂಬಿಕೆ ಇಲ್ಲದ ಕಾರಣ ಕುಶಾಲ್ ನ ಕಥೆಯನ್ನು ಕೇಳಲು ಮೊದಲು ನಿರಾಸಕ್ತಿ ತೋರಿದರು ಪ್ರೀತಿಸಿದ ಹುಡುಗಿಯ ಬಗ್ಗೆ ಕಣ್ಣೀರು ಹಾಕುತ್ತ ಹೇಳಿದಾಗ ಅಯ್ಯೋಪಾಪ ಕೇಳಬೇಕು ಅನಿಸಿತು. ಇದುವರೆಗೂ ಹುಡುಗರು ಹುಡುಗಿಯರಿಗೆ ಮೋಸ ಮಾಡುತ್ತಾರೆ ಎಂದು ಬಲವಾಗಿ ನಂಬಿದ್ದ ವಿಧುವಿಗೆ ಹುಡುಗಿಯರು ಹುಡುಗರಿಗೆ ಮೋಸ ಮಾಡುತ್ತಾರೆ ಎಂಬುದನ್ನು ಮನಗಂಡನು. ಹುಡುಗಿಯರು ಎಂದರೆ ಬರಿ ಒಳ್ಳೆಯವರು ಇರುತ್ತಾರೆ ಎಂದು ತಿಳಿದವನಿಗೆ ಮೊದಲ ಬಾರಿಗೆ ಕೆಟ್ಟವರು ಇರುತ್ತಾರೆ ಎಂಬ ಸತ್ಯದ ಅರಿವಾಯಿತು.  ಒಬ್ಬ ನಿಜ ಸ್ನೇಹಿತನಾಗಿ ಅವನಿಗೆ ಸಮಾಧಾನ ಹೇಳುತ್ತಿದ್ದ. ರಾತ್ರಿ 2:00 3:00ರ ಸಮಯದಲ್ಲಿ ವಿಧುವಿಗೆ ಫೋನ್ ಮಾಡಿ ಅತ್ತಿದ್ದೂ ಉಂಟು. ಸ್ನೇಹಿತನ ನೋವನ್ನು ತನ್ನದೆಂದು ಭಾವಿಸಿದವನು ಪ್ರತಿಬಾರಿ ಸಮಾಧಾನ ಹೇಳುವುದು ಸಾಮಾನ್ಯವಾಗಿಬಿಟ್ಟಿತು. ರಾತ್ರಿ ಹೊತ್ತು ಮಾತನಾಡುತ್ತಿದ್ದ ವಿಧುವಿನ ಮೇಲೆ ಅವನ ತಂದೆ-ತಾಯಿ ಅನುಮಾನಿಸಿದ್ದು ಉಂಟು. ಅವರಿಂದ ಚುಚ್ಚು ಮಾತುಗಳನ್ನು ಕೇಳುತ್ತಿದ್ದ ಆದರೂ ಸ್ನೇಹಿತನ ಕಣ್ಣಿನಿಂದ ಬರುವ ನೀರನ್ನು ತಡೆಯುವ ಉದ್ದೇಶದಿಂದ ಆ ನೋವನ್ನು ಅನುಭವಿಸಿದನು. ನಿಧಾನವಾಗಿ ಅವರಿಬ್ಬರ ಸ್ನೇಹ ಬಲವಾಗುತ್ತ ಹೋಯಿತು.
             ಕುಶಾಲ್ ಪ್ರೀತಿಸಿದ ಹುಡುಗಿಯ ಸಂಬಂಧವು ಮುರಿದುಬಿತ್ತು. ಆ ಸಂಬಂಧ ಮುರಿದು ಬಿದ್ದ ಕೆಲವೇ ದಿನಗಳಲ್ ಕುಶಾಲ್  ಬೇರೆ ಹುಡುಗಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾನೆ ಎಂದು ಬೇರೆಯವರಿಂದ ತಿಳಿದು ಆಶ್ಚರ್ಯವಾಯಿತು. ನೇರನುಡಿಯ ವಿಧು ಕುಶಾಲ್ ನನ್ನು ನೇರವಾಗಿಯೇ ಕೇಳಿಬಿಟ್ಟ. ನೀನು ಇತ್ತೀಚಿನ ದಿನಗಳಲ್ಲಿ ಯಾರನ್ನಾದರೂ ಪ್ರೀತಿಸುತ್ತಿದ್ದೀಯ ? ಬೇರೆಯವರಿಂದ ಮಾಹಿತಿ ಸಿಕ್ಕಿದೆ. ಅದು ನಿಜವೂ ಸುಳ್ಳೆಂದು ಹೇಳು ಎಂದ, ಕುಶಾಲ್ ಅದು ನಿಜವೆಂದ ವಿಧು ಅವಕ್ಕಾಗಿ ಬಿಟ್ಟ. ವಿಧು ಕುಶಾಲ್ ನಿನ್ನ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಸೃಷ್ಟಿಸಿ ಮಾತನಾಡುತ್ತಿದ್ದಾನೆ ಎಂದು ಅನ್ಯ ಸ್ನೇಹಿತರು ಹೇಳಿದಾಗ ನಂಬದವನು. ಈಗ ನಮ್ಮ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರೀತಿ ಎಂದರೆ ಅದೊಂದು ನಿರೀಕ್ಷೆಯಿಲ್ಲದ ಕಾಳಜಿ ,ಪರಸ್ಪರ ಗೌರವಯುತವಾಗಿ ನಡೆದುಕೊಳ್ಳುವುದು, ಪರಸ್ಪರ ಅರ್ಥಮಾಡಿಕೊಂಡು ಬದುಕನ್ನು ಪರಿಪೂರ್ಣ ಮಾಡಿಕೊಳ್ಳುವುದು ಎಂದು ನಂಬಿದ್ದ ವಿಧುಗೆ ಕುಶಾಲಿನ ನಡೆ ಇಷ್ಟವಾಗಲಿಲ್ಲ . ಮೊದಲಿನಿಂದಲೂ ಕುಶಾಲ್ ಮೇಲೆ ಬೇರೆ ಸ್ನೇಹಿತರ ಆರೋಪವಿದ್ದರೂ ನಂಬದ ವಿಧು ಕಣ್ಣಮುಂದಿನ ಸತ್ಯವನ್ನು ನಂಬಲೇಬೇಕಾದ ಸ್ಥಿತಿ. ಬಟ್ಟೆ ಬದಲಿಸುವ ರೀತಿ ಸುಲಭವಾಗಿ ಪ್ರೀತಿಯನ್ನು ಬದಲಾಯಿಸುತ್ತಿದ್ದಾನಲ್ಲ. ಇವನು ನಿಜವಾಗಿಯೂ ಪ್ರೀತಿಸಿದ್ದನ್ನ ಎಂಬ ಪ್ರಶ್ನೆ ? ಅದು ಪ್ರೀತಿ ಮುರಿದು ಬಿದ್ದ ಕೇವಲ ಒಂದು ತಿಂಗಳ ಒಳಗಾಗಿ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂದರೆ ಏನರ್ಥ ? ಇವನಿಗೂ ನನ್ನ 11ನೇ ತರಗತಿಯ ಸಹಪಾಠಿಯಾದ ಹುಡುಗಿಯನ್ನು ಪ್ರೀತಿಸಿ ಮೋಸ ಮಾಡಿದವನಿಗೂ ವ್ಯತ್ಯಾಸವಿಲ್ಲ. ಇವನದು ಏನಿದ್ದರೂ ದೈಹಿಕ ಆಕರ್ಷಣೆಯ ಪ್ರೀತಿ ಎಂಬುದು ಅರಿವಾಯಿತು. ಅವನಿಂದ ಅಂತರವನ್ನು ಕಾಯ್ದುಕೊಳ್ಳಲು ನಿಶ್ಚಯಿಸಿ ಇವನಿಂದ ದೂರಸರಿಯುವುದು ಲೇಸೆಂದು ನಿಧಾನವಾಗಿ ಅವನಿಂದ ದೂರ ಇರಲು ಪ್ರಯತ್ನಿಸಿದ. ಆದರೆ ಅದಾಗಲೇ ಅವರಿಬ್ಬರ ಸ್ನೇಹ ಗಾಢವಾಗಿತ್ತು. ಕುಶಾಲ್ ಅಷ್ಟು ಸುಲಭವಾಗಿ ವಿಧುವನ್ನು ಬಿಡಲು ಸಿದ್ಧ ಇರುವವನಂತೆ ಕಾಣುತ್ತಿರಲಿಲ್ಲ. ಏಕೆಂದರೆ ಅವನದು ಪಕ್ಕಾ ಲೆಕ್ಕಾಚಾರದ ಸಂಬಂಧ ಎನ್ನುವುದು ತಿಳಿಯಲು ತುಂಬಾ ಸಮಯ ಹಿಡಯಿತು. ಕುಶಾಲ್ ಮಾತನ್ನು ನಂಬುತ್ತಿದ್ದ ವಿಧುವನ್ನು ಕುಶಾಲ್ ಮಾತಿನ ಮೂಲಕ ಕಟ್ಟಿ ಹಾಕುತ್ತಿದ್ದ .ಕುಶಾಲ್ ನಾಯವಾದ ಮಾತಿನ ಹಿಂದಿರುವ ಲೆಕ್ಕಚಾರದ ಮೋಸವನ್ನು ಅರಿಯಲು ಯಾವಾಗಲೂ ವಿಫಲನಾಗುತ್ತಿದ ಏಕೆಂದರೆ ಅವನದು ನಿಷ್ಕಲ್ಮಶ ಸ್ನೇಹ....

Monday, September 28, 2020

ಕೃಷಿ ವಿಧೇಯಕ 2020: ಮರಣಶಾಸನ ಆಗದಿರಲಿ ರೈತರ ಬದುಕು.


ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾ ಹಳ್ಳಿ ಇಂದ ರಾಜಕಾರಣವನ್ನು ಶುರುಮಾಡಿ ದಿಲ್ಲಿ ಗದ್ದುಗೆಯನ್ನು ಹಲವರು ಏರಿದರು. ನಾವು ಯಾರಿಂದ ಆಯ್ಕೆ ಆದೆವು ಎನ್ನುವುದನ್ನೇ ಮರೆತು ಬಿಟ್ಟರು. ರೈತ ಮಾತ್ರ ವೋಟ್ ಬ್ಯಾಂಕ್ ಆಗಿ ಉಳಿದುಬಿಟ್ಟ. ಸ್ವಾತಂತ್ರ್ಯ ಬಂದಾಗಿನಿಂದಲೂ ಅವನು ಹೇಳಿಕೊಳ್ಳುವಂತಹ ಪ್ರಗತಿಯನ್ನು ಕಾಣಲಿಲ್ಲ . ರೈತ ಹೋರಾಟದ ಆದಿಯನ್ನು ತಿಳಿಯಲಿಲ್ಲ ತನ್ನ ಪಾಡಿಗೆ ತಾನು ಲೋಕಕ್ಕೆ ಅನ್ನವನ್ನು ನೀಡುವ ಕಾಯಕವನ್ನು ಮಾಡಿಕೊಂಡು ಬದುಕುತ್ತಿದ್ದ. ಕಾಲ ಬದಲಾದಂತೆ ರೈತ ವೋಟ್ ಬ್ಯಾಂಕ್ ಆದಕಾರಣ ರೈತ ಸಂಘಟನೆಗಳು ಹುಟ್ಟಿಕೊಂಡವು. ರೈತ ಚಳುವಳಿಯ ಬಿಸಿ ಏರುತ್ತಿದ್ದಂತೆ ಅದರೊಳಗೆ ರಾಜಕೀಯ ಮೆತ್ತಿಕೊಂಡು ರಾಜಕೀಯ ಶಕ್ತಿಗಳು ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಸಂಘಟನೆಗಳನ್ನು ಅಸ್ತ್ರವಾಗಿ ಉಪಯೋಗಿಸಲು ಶುರು ಮಾಡಿದವು. ರಾಜಕೀಯದಿಂದ ರೈತಸಂಘಟನೆಗಳು ಚೆದುರಿ ಹೋದವು. ಕಾಲಕಳೆದಂತೆ ರೈತ ಸಂಘಟನೆಗಳ ಶಕ್ತಿ ಕಳೆದುಕೊಂಡು ರಾಜಕೀಯ ಶಕ್ತಿಯಾಗಿ ಪರಿವರ್ತನೆಗೊಂಡವು. ರಾಜಕೀಯ ಹಿತಾಸಕ್ತಿಗಾಗಿ ಕೆಲಸ ಮಾಡುವಂತಹ ನಾಯಕರುಗಳು ಹುಟ್ಟಿಕೊಂಡರು. ಅದರ ಫಲವೇ ಇಂದಿನ ರೈತ ಹೋರಾಟವನ್ನು ಬಿಜೆಪಿ ಸರ್ಕಾರ ರಾಜಕೀಯ ಹೋರಾಟ ಎಂದು ಕರೆದಿರುವುದು. ರೈತರ ಮೇಲೆ ಗುಂಡು ಹಾರಿಸಿದ ಸರ್ಕಾರದಿಂದ ಇದರ ಹೊರತಾಗಿ ಏನನ್ನಾದರೂ ನಿರೀಕ್ಷಿಸಲು ಸಾಧ್ಯವೇ ? ಕೇಂದ್ರ ಸರ್ಕಾರದ ರೈತ ವಿರೋಧಿ ನಿಲುವನ್ನು ಪ್ರಶ್ನೆ ಮಾಡುವ ಧೈರ್ಯ ಆ ಪಕ್ಷದ ನಾಯಕರುಗಳಿಗೆ ಉಳಿದಿಲ್ಲ ಏಕೆಂದರೆ ಇಂದು ಬಿಜೆಪಿ ಕೂಡ ಎಲ್ಲಾ ಪಕ್ಷಗಳಂತೆ ಸ್ವಜನಪಕ್ಷಪಾತ, ಸ್ವಾರ್ಥದಿಂದ ತುಂಬಿಹೋಗಿದೆ. ರೈತರ ಪರ ಧ್ವನಿ ಎತ್ತಲು ಕಾಂಗ್ರೆಸ್ನಲ್ಲಿ ನಾಯಕತ್ವದ ಕೊರತೆ ಇದೆ. ಇನ್ನು ಜೆಡಿಎಸ್ ಕುಟುಂಬ ರಾಜಕಾರಣದಲ್ಲಿ ಮುಳುಗಿ ಹೋಗಿದೆ. ಇಂದು ನಿಜವಾಗಿ ರೈತ ಪರ ಹೋರಾಟ ಮಾಡುವ ನಾಯಕರು ಯಾರು ಹೇಳಿಕೊಳ್ಳುವಂತಹವರು ಉಳಿದಿಲ್ಲ. ಅದರ ಲಾಭ ವಾಗುತ್ತಿರುವುದು ದುಡ್ಡು ತೆಗೆದುಕೊಂಡು ಹೋರಾಟ ಮಾಡುತ್ತಿರುವವರಿಗೆ, ಇನ್ನೂ ದುರ್ಬಲ ನಾಯಕತ್ವದಿಂದ ಪ್ರಬಲ ಹೋರಾಟಗಳು ನಡೆಯುತ್ತಿಲ್ಲ.
            ಇನ್ನು ರೈತರ ಹೆಸರು ಹೇಳಿಕೊಂಡು ಅಧಿಕಾರದ ಗದ್ದುಗೆ ಹಿಡಿದ ರಾಜ್ಯ ಬಿಜೆಪಿಯು ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ತಂದು ರೈತರ ಜಮೀನನ್ನು ಕಾರ್ಪೊರೇಟ್ ಕಂಪನಿಗಳು ಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿಧಾನಪರಿಷತ್ತಿನಲ್ಲಿ ಅನುಮೋದನೆ ಸಿಗದೆ ಬಾಕಿ ಉಳಿದಿದೆ. ಇದೇ ಸಮಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಮೂರು ರೈತ ವಿರೋಧಿ ಮಸೂದೆಗಳನ್ನು ಕಾಯ್ದೆ ರೂಪದಲ್ಲಿ ಜಾರಿಗೆ ತಂದಿದೆ.
1 ) ಎಪಿಎಂಸಿ ಬೈಪಾಸ್ ಅಡ್ರಿನನ್ಸ್ ಮಾದರಿಯಲ್ಲಿ "ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ 2020."
2 ) ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರಿವಾಗ್ನೆ 2020 "ಇದನ್ನು ಕೃಷಿ ಉದ್ಯಮದ ಮೂಲಕ ಆಹಾರ ಸಂಗ್ರಹಣೆ ಸ್ವಾತಂತ್ರ್ಯ ಸುಗ್ರಿವಾಗ್ನೆ" ಎಂದು ಭಾವಿಸಬಹುದು.
3 ) "ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆಗಳ ಒಪ್ಪಂದದ ಬರವಸೆ ಮತ್ತು ಕೃಷಿ ಸೇವೆಗಳ ಸುಗ್ರಿವಾಗ್ನೆ 2020" ಇದನ್ನು ಗುತ್ತಿಗೆ ಕೃಷಿ ಸುಗ್ರೀವಾಜ್ಞೆಯಾಗಿ ಪರಿಗಣಿಸಲಾಗಿದೆ.
        ಇನ್ನು ಇರುವ ಕಾಯ್ದೆಗಳನ್ನು ಸೂಕ್ತರೀತಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ವಿಫಲವಾಗಿರುವುದರಿಂದ ಹೊಸ ಕಾಯ್ದೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಸುಗ್ರೀವಾಜ್ಞೆಗಳು ರೈತರ ಬದುಕನ್ನು ಬೇರೆಯವರಿಗೆ ಮಾರಿಕೊಳ್ಳುವಂತಹ ಸ್ಥಿತಿಗೆ ತಂದು ನಿಲ್ಲಿಸಲು ಅನುವು ಮಾಡಿಕೊಡುತ್ತವೆ. ಕೇಂದ್ರ ಸರ್ಕಾರವು ಕೃಷಿ ವಿಧೇಯಕಗಳನ್ನು ರಾಜಕೀಯಗೊಳಿಸಿ, ಕೃಷಿ ಎಂದರೇನು ಎಂಬುದನ್ನು ತಿಳಿಯದ ಮೂರ್ಖ ಮಬ್ಬು ಭಕ್ತರಿಂದ ಶಂಖನಾದವನ್ನು ಬಾರಿಸುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರವು ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆಯೆರೆಯಲು ಮಾಡಿರುವಂತಹ ಶಾಸನವೇ ಕೃಷಿ ವಿಧೇಯಕಗಳು 2020. ಕಾರ್ಪೊರೇಟ್ ಕ್ಷೇತ್ರ ಕೃಷಿಯನ್ನು ಒಂದು ಬಾರಿ ನಿಯಂತ್ರಣ ತೆಗೆದುಕೊಂಡರೆ, ರೈತರನ್ನು ಸಾಮಾನ್ಯ ಜನರನ್ನು ತನಗೆಬೇಕಾದಂತೆ ಕುಣಿಸುತ್ತದೆ. ಮುಂದಿನ ದಿನಗಳಲ್ಲಿ ರೈತರು ಬೆಳೆಯುವ ತರಕಾರಿ ದವಸಧಾನ್ಯಗಳ ಹಕ್ಕುಸ್ವಾಮ್ಯ ಕಾರ್ಪೊರೇಟ್ ಕಂಪನಿಗಳದಾಗುತ್ತದೆ. ಕಾರ್ಪೊರೇಟ್ ಕಂಪನಿಗಳು ಕೃತಕ ಅಭಾವವನ್ನು ಸೃಷ್ಟಿಸಿ ದವಸ ಧಾನ್ಯಗಳ ಬೆಲೆಯನ್ನು ಎರಡು-ಮೂರು ಪಟ್ಟು ಹೆಚ್ಚಿಗೆ ಮಾಡಿ ಮಾಡುವಂತಹ ಪರಿಸ್ಥಿತಿಗೆ ತಂದು ನಿಲ್ಲಿಸುತ್ತವೆ. ವಿಧಿ ಇಲ್ಲದೆ ಗ್ರಾಹಕರು ಕೂಡ ಅದನ್ನು ಕೊಳ್ಳುವಂತಹ ಅನಿವಾರ್ಯತೆ ಬಿಳುತ್ತಾರೆ. ಮತ್ತದೇ ಬೆಳೆಯುವ ರೈತನಿಗೆ ಏನು ಸಿಗದು ಕೊಳ್ಳುವ ಗ್ರಾಹಕನಿಗೂ ಏನು ಸಿಗುವುದಿಲ್ಲ. ಹೊಸ ವಿಧೇಯಕ ಕೃಷಿಗೆ ಬೆಂಬಲ ಬೆಲೆಯನ್ನು ಕೊಡುವ ವಿಚಾರವಾಗಿ ಯಾವುದನ್ನು ಸ್ಪಷ್ಟಪಡಿಸಿಲ್ಲ. ರೈತ ಸಂಕಷ್ಟಕ್ಕೆ ಸಿಲುಕಿದಾಗ ಬೆಂಬಲ ಬೆಲೆ ಅವನ ನೆರವಿಗೆ ಬರುತ್ತಿತ್ತು. ರಾಷ್ಟ್ರೀಯ ಆಹಾರ ಭದ್ರತೆ ಮಾರಕವಾದ ಇಂತಹ ಕೃಷಿ ವಿಧೇಯಕವನ್ನು ಗಟ್ಟಿಧ್ವನಿಯಲ್ಲಿ ದನಿಯಲ್ಲಿ ವಿರೋಧಿಸುವಂತಹ ವಿರೋಧಪಕ್ಷಗಳು ಇಲ್ಲದ ಕಾರಣ ರೈತರಿಗೆ ಮಾರಕವಾದ ಈ ಕೃಷಿ ವಿಧೇಯಕ ಅನುಷ್ಠಾನಕ್ಕೆ ಬರುತ್ತಿದೆ.

Saturday, September 26, 2020

ಪ್ರೇಮದ ಅನ್ವೇಷಣೆ ಭಾಗ-14.

12ನೇ ತರಗತಿ ಅನುತ್ತೀರ್ಣನಾದ ಅವನಿಗೆ ಡಿಪ್ಲೊಮಾದಲ್ಲಿ ಆಯ್ಕೆಯಾಗಿದ್ದು ಬದುಕಿನಲ್ಲಿ ಅಮೃತ ಸಿಕ್ಕಿದ ಅನುಭವವಾಯಿತು. ಹೌದು, ಹೊಸ ಕಾಲೇಜು ಹೊಸ ಸ್ನೇಹಿತರ ಬಳಗ ಬದುಕಿನಲ್ಲಿ ಹೊಸ ಬುಗ್ಗೆ , ಹೊಸಬೆಳಕು. ನೇರ ನಿಷ್ಠುರಿವಾದಿಯಾದವನು ಯಾವುದಕ್ಕೂ ಹೆದರುವ ಜಾಯಮಾನ ಅವನದಲ್ಲ ,ತಪ್ಪನ್ನು ನೇರವಾಗಿ ಖಂಡಿಸುವ ಧೈರ್ಯ, ಚಾತಿ ಅವನಲ್ಲಿತ್ತು .ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯುವುದು ಶತಸಿದ್ಧ. ಇರುವುದರ ಒಳಗಾಗಿ ಏನನ್ನಾದರೂ ಸಾಧಿಸಬೇಕು ಎಂಬ ದೃಢ ಸಂಕಲ್ಪ ಅವನದು. ಬದುಕಿನಲ್ಲಿ ಯಾವತ್ತು ಹೇಡಿಯಂತೆ ಸಾಯಬಾರದು ಎಂದು ನಿಶ್ಚಯಿಸಿದ ಅವನಿಗೆ ಉಳಿದಿದ್ದು ಒಂದೇ ಮಾರ್ಗ ಚೆನ್ನಾಗಿ ಓದಬೇಕು ಉತ್ತಮ ಅಂಕ ಪಡೆದು ಬದುಕು ಕಟ್ಟಿಕೊಳ್ಳಬೇಕು. ಪುಸ್ತಕದ ಜ್ಞಾನ ಅವನ ಮಸ್ತಕವನ್ನು ತುಂಬಿತ್ತು .ಅವನ ಬದುಕನ್ನು ಸಮಾಜದ ಸೇವೆಗೆ ಮೀಸಲಿಡಬೇಕು ಎಂದು ನಿಶ್ಚಯಿಸಿದ. ಅವನು ಅವನಂತೆ ಮಾನಸಿಕ ಹಿಂಸೆ ಅನುಭವಿಸುವವರ ನೋವಿಗೆ ಸ್ಪಂದಿಸಬೇಕು. ಅವರನ್ನು ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕು. ಕೆಲವರಿಗೆ ತಂದೆ ತಾಯಿ ಇರುತ್ತಾರೆ ಮಕ್ಕಳು ಇರುವುದಿಲ್ಲ ಮತ್ತೆ ಕೆಲವರಿಗೆ ತಂದೆ-ತಾಯಿಯೇ ಇರುವುದಿಲ್ಲ ಮಕ್ಕಳು ಅನಾಥರು ಇರುತ್ತಾರೆ. ಅಂತವರನ್ನು ಸೇರಿಸಿ ಒಂದು ಸೂರಿನಡಿ ಬದುಕುವಂತೆ ಮಾಡಬೇಕು ಒಟ್ಟಿನಲ್ಲಿ ನಾನು ಬದುಕು ಕಟ್ಟಿಕೊಂಡು ಇತರರ ಬದುಕಿಗೆ ಬೆಳಕಾಗಿ ಬಾಳಬೇಕು. ಇನ್ನು ಮುಂದೆ ನನಗಾಗಿ ಅಲ್ಲದಿದ್ದರೂ ಸಮಾಜದ ಒಳಿತಿಗಾಗಿ ಜೀವಿಸಬೇಕು ಎಂಬ ಆಲೋಚನೆಯಲ್ಲಿ ವಿದ್ಯಾಭ್ಯಾಸ ಮುಂದುವರೆಯಲು ಪ್ರಾರಂಭವಾಯಿತು. ಅವನಿಗೆ ತಾಯಿ ಸರಸ್ವತಿಯ ಕೃಪೆ ಬಿಟ್ಟರೆ ಮತ್ತೆ ಏನು ಬೇಡವಾಯಿತು. ನಾಟಕೀಯತೆ, ಸ್ವಾರ್ಥ, ಪ್ರೀತಿಯ ಬಗ್ಗೆ ನಂಬಿಕೆ ಇಲ್ಲದಂತಾಯಿತು. ಹೊಸ ಬದುಕಿನೊಂದಿಗೆ ಹೊಸ ಆಲೋಚನೆಯೊಂದಿಗೆ ಮತ್ತೆ ಬದುಕನ್ನು ಶುರುಮಾಡಿದ.
             ಶಿಸ್ತುಬದ್ಧವಾದ ಜೀವನ ಮಿತಾಹಾರ ವ್ಯಾಯಾಮ, ಓದು ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವ ಶಿಸ್ತುಬದ್ಧವಾದ ಜೀವನಕ್ಕೆ ಹೊಂದಿಕೊಂಡು ಬಿಟ್ಟಿದ್ದ .ಬದುಕನ್ನು ಸಮಾಜಕ್ಕೆ ಮೀಸಲಿಡುವ ಸಂಕಲ್ಪಕ್ಕೆ ಅವನು ಸಿದ್ಧನಾದ. ಕಾಲೇಜು ದಿನಗಳು ಪ್ರಾರಂಭವಾದವು ಎಲ್ಲರನ್ನೂ ಸಮಾನವಾಗಿ ಕಾಣುವ ವಿಧು ಎಲ್ಲಾ ವಿಭಾಗದ ಸ್ನೇಹಿತರನ್ನು ಸಂಪಾದಿಸುವಲ್ಲಿ ಸಫಲನಾದ. ಕೆಲವೇ ದಿನಗಳಲ್ಲಿ ಉತ್ತಮ ಸ್ನೇಹಿತ ವರ್ಗವನ್ನು ಸಂಪಾದಿಸಿದ. ಕೆಲವು ದಿನಗಳ ನಂತರ ಇಬ್ಬರು ಹೊಸ ವ್ಯಕ್ತಿಗಳ ಆಗಮನವಾಯಿತು. ಮೊದಲು ಆಯ್ಕೆಯಾದವರು ಕಾಲೇಜಿಗೆ ಬರದಿರುವ ಕಾರಣ ಎರಡನೇ ಪಟ್ಟಿಯಲ್ಲಿ ಬಂದಿದ್ದವರು ಅವರಾಗಿದ್ದರು. ಅವರಲ್ಲಿ ಒಬ್ಬ ವ್ಯಕ್ತಿ ವಿಧುವನ್ನು ಪರಿಚಯ ಮಾಡಿಕೊಂಡ ಅವನ ಹೆಸರು ಕುಶಾಲ್ ಮತ್ತೊಬ್ಬ ಸಂಜಯ್. ಆಟೋಮೊಬೈಲ್ ವಿಭಾಗಕ್ಕೆ ಅವರು ಬಂದಿದ್ದರಿಂದ ಸಹಜವಾಗಿ ಉತ್ತಮ ಸಹಪಾಠಿಗಳದರು.ದಿನಕಳೆದಂತೆ ಕುಶಾಲ್ ವಿಧುವಿಗೆ ಆತ್ಮೀಯನಾಗುತ್ತಾ ಹೋದ, ಬೇರೆ ಸಹಪಾಠಿಗಳು ಎಂತಹ ಸ್ನೇಹ ಇವರದು ಒಂದೇ ಜೀವ ಎರಡು ಆತ್ಮ ಎಂದು ಕಾಲೇಜಿನ ಇತರ ಸಹಪಾಠಿಗಳು ಮಾತನಾಡಲು ಆರಂಭಿಸಿದರು. ವಿಧು ಆ ವಿಚಾರವಾಗಿ ಯಾರೇ ಏನೇ ಅಂದರು ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ ಏಕೆಂದರೆ ಅವನು ಸರ್ವರನ್ನೂ ಸಮಾನವಾಗಿ ಕಾಣುತ್ತಿದ್ದ ವ್ಯಕ್ತಿ. ಎಲ್ಲರೂ ಸಮಾನರು ಎಂಬ ಭಾವ ಅವನದು. ಅವನಿಗೆ ಓದುವುದು ಮಾತ್ರ ಮುಖ್ಯವಾಗಿತ್ತು. ಸಹಪಾಠಿಯಾಗಿದ್ದ ಕುಶಾಲ್ ಮೊದಲಿಗನಾಗಿ ಫೋನ್ ಮಾಡುವುದು ಮನೆಗೆ ಬರುವುದು ವಿಧುವಿನ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುವುದು. ತನ್ನ ವೈಯಕ್ತಿಕ ವಿಚಾರಗಳನ್ನು ಹೇಳಿಕೊಳ್ಳುವುದನ್ನು ಶುರುಮಾಡಿದ. ವಿಧುವಿಗೆ ಕೇಳಲು ಇರುಸು ಮುರುಸಾಗುತ್ತಿತ್ತು. ತನ್ನ ಮನೆಯ ಒಳಗೆ ಕರೆಯಲು ಹತ್ತು ಇಪ್ಪತ್ತು ಬಾರಿ ಯೋಚನೆ ಮಾಡಿ ಕರೆಯುವಂತಹ ಪರಿಸ್ಥಿತಿಯಲ್ಲಿ ಇದ್ದ ಅವನಿಗೆ ಮನೆಯ ಹತ್ತಿರ ಬರುತ್ತಿದ್ದ ಕುಶಾಲ್ ಅನ್ನು ಹೇಗೆ ಸಂಭಾಳಿಸುವುದು ಎಂಬ ಯೋಚನೆ.ಕುಶಾಲ್ ತನ್ನ ಪ್ರೀತಿಯ.....

Thursday, September 24, 2020

ಪ್ರೇಮದ ಅನ್ವೇಷಣೆ ಭಾಗ-13

ಆ ನಾಡು ನುಡಿ ಸತ್ಯವೆನಿಸಿತು. ಪುಸ್ತಕ ಓದುವ ಗೀಳು ಪ್ರಬುದ್ಧನ್ನಾಗಿ ಮಾಡಿತು. ಗ್ರಂಥಾಲಯ ಅದೊಂದು ವಿದ್ಯೆಯನ್ನು ನೀಡುವ ಶಾರದೆಯ ಸ್ಥಾನ ಎನ್ನುವ ಅರಿವು ಅವನಿಗಾಯಿತು. ಗ್ರಂಥಾಲಯದಲ್ಲಿದ್ದ ವ್ಯಕ್ತಿತ್ವ ವಿಕಸನದ ಪುಸ್ತಕವು ವಿಧುವಿನ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾದವು. ಹೀಗೆ ವ್ಯಕ್ತಿತ್ವ ವಿಕಾಸದ ಕಡೆಗೆ ಹೆಜ್ಜೆ ಇಟ್ಟ ಅವನಿಗೆ ಒಂದು ವರ್ಷಗಳ ಕಾಲ ಜ್ಞಾನ ಸಂಪಾದನೆಯಲ್ಲಿ ಕಳೆದುಹೋಗಿದ್ದು ಗೊತ್ತಾಗಲಿಲ್ಲ. ಆತನಿಗೆ ಗ್ರಂಥಾಲಯವೇ ಮನೆಯಾಗಿ ಹೋಯಿತು. ಒಂದು ವರ್ಷಗಳ ಕಾಲ ಸತತ ಅಭ್ಯಾಸ ಅವನಿಗೆ ಪುಸ್ತಕ ಓದುವ ಗೀಳನ್ನು ಇನ್ನೂ ಹೆಚ್ಚು ಮಾಡಿತು. ಜ್ಞಾನ ಹೆಚ್ಚಿದಂತೆ ಅವನು ಪ್ರಬುದ್ಧನಾಗುತ್ತ ಹೋದ. ಮನೆಯ ಹತ್ತಿರವೇ ಇದ್ದ ಸರ್ಕಾರಿ ಡಿಪ್ಲೋಮೋ ಕಾಲೇಜಿನಲ್ಲಿ ಸೀಟು ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಿದ್ದನ್ನು ಪತ್ರಿಕೆಯಲ್ಲಿ ನೋಡಿ, ನೋಡೋಣ ಒಂದು ಅರ್ಜಿಯನ್ನು ಹಾಕಿದರೆ ಆಯಿತು ಎಂದು ಅರ್ಜಿಯನ್ನು ಡಿಪ್ಲೋಮಾ ಕೋರ್ಸ್ಗೆ ಹಾಕಿ ಬಂದ. ಅದು 10ನೇ ತರಗತಿಯ ಅಂಕಗಳಿಗೆ ಅನುಗುಣವಾಗಿ ( ಗಣಿತ ಹಾಗೂ ವಿಜ್ಞಾನ )ದ ಒಟ್ಟು ಅಂಕಗಳ ಆಧಾರದ ಮೇಲೆ ಕೊಡಮಾಡುವ ಸೀಟ್. ಅವನದು ಹೇಳಿಕೊಳ್ಳುವಂತಹ ಅಂಕಗಳು ಹತ್ತನೇ ತರಗತಿಯಲ್ಲಿ ಇಲ್ಲದಿದ್ದ ಕಾರಣ ಡಿಪ್ಲೋಮೋ ಸೀಟು ಸಿಗುವ ಯಾವ ನಿರೀಕ್ಷೆಯೂ ಇರಲಿಲ್ಲ. ನೋಡೋಣ ಕೊನೆಯಬಾರಿ ಡಿಪ್ಲೋಮೋ ಸೀಟು ಸಿಕ್ಕರೆ ಹೋಗೋಣ ಇಲ್ಲದಿದ್ದರೆ ಮನೆ ಬಿಟ್ಟು ಹೋಗಿ ಬದುಕನ್ನು ಕಟ್ಟೋಣ. ಹಂಗಿನ ಅರಮನೆಗಿಂತ ಬಂಗದ ಕೂಳು ಲೇಸು ಎನ್ನುವ ನಾಣ್ಣುಡಿಯಂತೆ ಬದುಕುವ ದೃಢ ನಿಶ್ಚಯ ಮಾಡಿ ಮುನ್ನಡೆದ. ಅವನ ಅದೃಷ್ಟವೇನು ಎನ್ನುವಂತೆ ತಾಂತ್ರಿಕ ವಿದ್ಯಾಲಯದಲ್ಲಿ ಅಂತಿಮ ಸುತ್ತಿನಲ್ಲಿ ಎರಡು ಸೀಟುಗಳು ಉಳಿದವು. ಒಂದು ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತೊಂದು ಆಟೋಮೊಬೈಲ್ ಕ್ಷೇತ್ರದ ವಿಭಾಗ. ಮೂರು ಮಂದಿ ಅಂತಿಮ ಸುತ್ತಿನಲ್ಲಿ ಉಳಿದರು. ಅದರಲ್ಲಿ 15ನೇ ವಯಸ್ಸಿನ ಇಬ್ಬರು ಹಾಗೂ 16ನೇ ವಯಸ್ಸಿನ ಒಬ್ಬರು ಉಳಿದರು. ಮೊದಲನೆಯದಾಗಿ 15ನೇ ವಯಸ್ಸಿನವರನ್ನು ಕರೆದರು ಅದರಲ್ಲಿ ಹೆಚ್ಚಿಗೆ ಅಂಕವನ್ನು ಯಾರು ತೆಗೆದಿದ್ದರೋ ಅವರಿಗೆ ಕಂಪ್ಯೂಟರ್ ಸೈನ್ಸ್ ವಿಭಾಗವನ್ನು ಕೊಡಲಾಯಿತು. ಮತ್ತೊಬ್ಬನಿಗೆ ಉಳಿದಿದ್ದು ಒಂದು ಸೀಟು. ಅದು ಆಟೋಮೊಬೈಲ್ ಕ್ಷೇತ್ರ. ಆಟೋಮೊಬೈಲ್ ವಿಭಾಗ ಸೇರಬೇಕೆಂದರೆ 16ವಯಸ್ಸು ತುಂಬಿರಬೇಕು ಎಂಬ ಸರ್ಕಾರಿ ನಿಯಮ ಇದ್ದುದರಿಂದ ಆ ಹುಡುಗನಿಗೆ ಆಟೋಮೊಬೈಲ್ಸ್ ಸೀಟ್ ಸಿಗದಂತಾಯಿತು. ಉಳಿದಿದ್ದು ವಿಧು ಮಾತ್ರ. 16ನೇ ವಯಸ್ಸು ತುಂಬಿದ ಕಾರಣ ಅವನಿಗೆ ಆಟೋಮೊಬೈಲ್ ವಿಭಾಗದಲ್ಲಿ ಕೊನೆಯವನಾಗಿ ಸೇರಿಸಿಕೊಳ್ಳಲಾಯಿತು. ಅವನ ಅದೃಷ್ಟ ಎನ್ನುವಂತೆ 50 ಮಂದಿಯನ್ನು ಮಾತ್ರ ತೆಗೆದುಕೊಳ್ಳುವ ವಿಭಾಗದಲ್ಲಿ 50ನೇ ಯಾವನು ಆಗಿ ಆಯ್ಕೆ ಪತ್ರವನ್ನು ನೀಡಲಾಯಿತು. ಸಿಕ್ಕ ಆಯ್ಕೆ ಪತ್ರವನ್ನು ಅಲ್ಲಿನ ಸೂಪರಿಂಟೆಂಡೆಂಟ್ ಅವರಿಂದ ಅನುಮೋದನೆ ಪಡೆಯಬೇಕು. ಅನುಮೋದನೆ ಪಡೆಯಲು ಹೋದಾಗ ಅವರು ವ್ಯಂಗ್ಯವಾಗಿ ಸೀಟು ಪಡೆಯುವುದು ಮುಖ್ಯವಲ್ಲ ಮೊದಲು ಇಲ್ಲಿಂದ ಉತ್ತೀರ್ಣನಾಗಿ ಹೋಗಬೇಕು, ಎಂದು ಅಲ್ಲಿ ಆಯ್ಕೆಯಾಗಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕೇವಲವಾಗಿ ಹೇಳುತ್ತಿದ್ದರು.  ಅಂದೇ ವಿಧು ಮನಸ್ಸಿನಲ್ಲಿ ನಿರ್ಧರಿಸಿದ. ಈ ಕಾಲೇಜಿನಲ್ಲಿ ಕೊನೆಯ ಹಂತದಲ್ಲಿ ಆಯ್ಕೆಯಾದ ಹುಡುಗರು ಎಂದು ಅಪಹಾಸ್ಯ ಮಾಡುತ್ತಿದ್ದ ವ್ಯಕ್ತಿಯ ಮುಂದೆ ತುಂಬಾ ಚೆನ್ನಾಗಿ ಓದಿ ಉನ್ನತ ಅಂಕವನ್ನು ಪಡೆಯಬೇಕು. ನಾನೇ ಈ ವ್ಯಕ್ತಿಗೆ ಉತ್ತರವಾಗಿ ನಿಲ್ಲಬೇಕು ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಮುನ್ನಡೆದ. ಅಲ್ಲಿಗೆ ಸರಿಯಾಗಿ ಒಂದು ವಾರದ ನಂತರ ಕಾಲೇಜು ಪ್ರಾರಂಭವಾಯಿತು. ಬದುಕಿನ ಹೊಸ ಆಸೆ ಕನಸು ನಿರೀಕ್ಷೆಗಳೊಂದಿಗೆ ಕಾಲೇಜಿಗೆ ಮೊದಲ ದಿನ ಭೇಟಿಕೊಟ್ಟ ಬದುಕು ಇನ್ನಾದರೂ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ.....

Sunday, September 20, 2020

ಪ್ರೇಮದ ಅನ್ವೇಷಣೆ ಭಾಗ-12


ಈ ಜಗತ್ತಿನಲ್ಲಿ ಪ್ರೀತಿ ಪ್ರೇಮ ಅಂತ ಏನು ಇಲ್ಲ ಯಾರೇ ಕೆಟ್ಟವರು ಆದರೂ ತಾಯಿ ಕೆಟ್ಟವಳು ಆಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಆದರೆ ವಿಧುವಿನ ತಾಯಿ ಈಗಾಗಲೇ ವಿಧುವಿನ ಹತ್ತಿರ ಮಾತುಬಿಟ್ಟು ಹಲವು ವರ್ಷಗಳೇ ಕಳೆದು ಹೋಗಿವೆ .ತಾಯಿ ಪ್ರೀತಿ ಎನ್ನುತ್ತಾರೆ ಆದರೆ ಅವನಿಗೆ ತಿಳುವಳಿಕೆ ಬುದ್ಧಿ ಬಂದಾಗಿನಿಂದಲೂ ತಾಯಿ ಪ್ರೀತಿ ಕಂಡಿಲ್ಲ ತಂದೆಯದು ಕೇಳುವುದೇ ಬೇಡ ಪ್ರತಿ ಬಾರಿ ತೀರಾ ಅವಶ್ಯಕವೆಂದು ಹಣ ಕೇಳುವಾಗ ದೊಡ್ಡ ಜಗಳವೇ ನಡೆದುಹೋಗುತ್ತಿತ್ತು. ಇನ್ನೂ ಹದಿಹರೆಯದ  ಪ್ರೀತಿ ತನ್ನ ಕಾಮದ ಬಾಹ್ಯ ಸೌಂದರ್ಯದ ಆಕರ್ಷಿತವಾಗುವ ವಿಚಾರವೇ ಪ್ರೀತಿ ಎಂದುಕೊಳ್ಳುವಂತೆ ಬದುಕು ತೋರಿಸಿ ಕೊಟ್ಟಿತ್ತು. ಅದೇನೆಂದರೆ ಅವನ ಜೀವನದಲ್ಲಿ ನಡೆದ ಒಂದು ಘಟನೆ, ಸಹಪಾಠಿಯಾದ ಹುಡುಗಿ ಕಾಲೇಜಿನಲ್ಲಿ ಹಾಗೂ ಸ್ಕೂಲ್ನಲ್ಲಿಯು ಹಲವಾರು ವಿಚಾರಗಳಲ್ಲಿ ಅವನಿಗೆ ಸಹಾಯ ಮಾಡುತ್ತಿದ್ದ ಸಹಪಾಠಿಯಾದ ಅಕ್ಷತಾ ಗೌಡ ಒಬ್ಬ ಶ್ರೀಮಂತ ಮನೆಯ ಹುಡುಗನನ್ನು ಪ್ರೀತಿಸಿದಳು. ಅಕ್ಷತ ಗೌಡ ಅವರ ಮನೆಯ ಶ್ರೀಮಂತಿಕೆಗೆ ಏನು ಕಡಿಮೆ ಇರಲಿಲ್ಲ ತಂದೆ-ತಾಯಿ ಇಬ್ಬರು ಸರ್ಕಾರಿ ನೌಕರಿಯಲ್ಲಿ ಉನ್ನತ ಸ್ಥಾನದಲ್ಲಿ ಇದ್ದವರು ಇಬ್ಬರಿಗೂ ಒಬ್ಬಳೇ ಮುದ್ದಿನ ಮಗಳು ಅಕ್ಷತಾ ಗೌಡ.
            ಸ್ನೇಹಿತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುತ್ತಿದ್ದ ಹುಡುಗಿ ಯಾವುದನ್ನು ವಿಚಾರ ಮಾಡಿ ಒಪ್ಪಿಕೊಳ್ಳುತ್ತಿದ್ದ ಹುಡುಗಿ ಅದ್ಯಾವ ಸಮಯದಲ್ಲಿ ಪ್ರೀತಿಯ ಬಲೆಯಲ್ಲಿ ಬಿದ್ದಳು ಎನ್ನುವುದನ್ನು ತಿಳಿಯುವುದರ ಒಳಗಾಗಿ ಆತ್ಮಹತ್ಯೆಗೆ ಶರಣಾದಳು.  ಅವರಿಬ್ಬರ ನಡುವೆ ಏನು ನಡೆದಿತ್ತು ಗೊತ್ತಿಲ್ಲ.  ಅವಳನ್ನು ಪ್ರೀತಿಸಿದ ಹುಡುಗ ಹೇಮಂತ್ ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡ ಮಾರನೇ ದಿನವೇ ಬೇರೆ ಹುಡುಗಿಯೊಂದಿಗೆ ಚೆಲ್ಲಾಟ ವನ್ನು ಆಡಿಕೊಂಡು ತುಂಬಾ ಬೆಲೆಬಾಳುವ ಬೈಕಿನಲ್ಲಿ ಹೋಗುತ್ತಿರುವುದನ್ನು ನೋಡಿ ವಿಧು ದಿಗ್ಭ್ರಮೆಗೆ ಒಳಗಾದ.  ಅವರ ವಿಚಾರವಾಗಿ ಕಾಲೇಜಿನ ಇನ್ನಿತರೆ ಸಹಪಾಠಿಗಳನ್ನು ಕೇಳಿದಾಗ ಅವರು ಉತ್ತರವನ್ನು ಕೇಳಿ ಆಶ್ಚರ್ಯಚಕಿತನಾಗಿ ನಿಂತ. ಸಹಪಾಠಿಗಳು, ಅವನಿಗೆ ಅಕ್ಷತ ಗೌಡ ಅಂತವರು ಹಲವಾರು ಜನರೇಂದು ತಿಳಿದು ಬೇಸರವಾಯಿತು. ಈ ಹುಡುಗಿ ತನ್ನ ಪ್ರೀತಿಗಾಗಿ ಪ್ರಾಣವನ್ನೇ ಬಿಟ್ಟಿದ್ದು ಇವನ್ನು ನೋಡಿದರೆ ಈ ರೀತಿ ಮಾಡಿ ಬಿಟ್ಟನಲ್ಲ.
             ಓ ಈ ಜಗತ್ತಿನಲ್ಲಿ ಪ್ರೀತಿ ಎಂಬುದು ಬರಿ ಆಕರ್ಷಣೀಯ ವಿಷಯವಷ್ಟೇ ಎಂಬ ತೀರ್ಮಾನಕ್ಕೆ ಬಂದಿದ್ದ .ಆದರೆ ಇಲ್ಲಿ ಎಲ್ಲಾ ಉಲ್ಟಾ ಹುಡುಗರು ಅಣ್ಣನು ಪ್ರೀತಿಗೆ ಸಪೋರ್ಟ್ ಮಾಡಿದ ಎಂದು ಬಂದು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುತ್ತಾರೆ .ಇದು ಒಂದು ರೀತಿಯ ಸೋಜಿಗವೆನಿಸಿತು ಅಂತು-ಇಂತು ಚುನಾವಣೆಯನ್ನು ಮುಗಿಸಿದ ವಿಧು ಚುನಾವಣೆ ಮುಗಿದ ಮೇಲೆ ಮತ್ತೆ ರಾಜಕಾರಣಿಗಳು ತಕ್ಷಣಕ್ಕೆ ತಮ್ಮನ್ನು ತಿರುಗಿ ನೋಡಲ್ಲ ಎಂಬ ಅರಿವು ಅನುಭವದ ಮೂಲಕ ಬಂದಿತ್ತು .ಇಷ್ಟು ದಿನ ಹೇಗೋ ಮನೆಯಲ್ಲಿ ಇರುವುದು ತಪ್ಪಿಸಿಕೊಳ್ಳುತ್ತಿದ್ದ ಈಗ ಹೇಗೆ ತಪ್ಪಿಸಿಕೊಳ್ಳುವುದು ಎಂದು ಚಿಂತಿಸುತ್ತಿರಬೇಕಾದರೆ ಅವನ ಅದೃಷ್ಟವನ್ನುವಂತೆ, ಅವನ ಮನೆಯ ಅನತಿ ದೂರದಲ್ಲಿ ಒಂದು ಗ್ರಂಥಾಲಯದ ಉದ್ಘಾಟನೆ ಸುದ್ದಿ ಬಂದಿತು. ಪತ್ರಿಕೆ ಓದುವ ಗೀಳನ್ನು ಹಿಡಿಸಿಕೊಂಡಿದ್ದ ಅವನು ಗ್ರಂಥಾಲಯಕ್ಕೆ ಹೋಗಲು ಶುರು ಮಾಡಿದ. ದಿನ ಗ್ರಂಥಾಲಯಕ್ಕೆ ಹೋಗುತ್ತಿದ್ದ ಪತ್ರಿಕೆಯನ್ನು ಕೆಲವು ಗಂಟೆಗಳವರೆಗೆ ಓದುವುದು ಅವನ ಅಭ್ಯಾಸವಾಗಿತ್ತು .ಆನಂತರ ಏನು ಮಾಡುವುದು ಮನೆಗೆ ಹೋದರೆ ಬೈಯ್ಯುತ್ತಾರೆ. ಮನೆಯಲ್ಲಿ ನರಕಯಾತನೆ ಅನುಭವಿಸುವುದಕ್ಕಿಂತ ಗ್ರಂಥಾಲಯದಲ್ಲಿ ಸಮಯ ಕಳೆಯುವುದು ಲೇಸು ಎಂದುಕೊಂಡು ತಿಂಗಳಿಗೊಮ್ಮೆ ವಾರಕ್ಕೊಮ್ಮೆ ಬರುವ ಲೇಖನಗಳನ್ನು ಪುಸ್ತಕಗಳನ್ನು ಓದಲು ಶುರು ಮಾಡಿದ. ಕ್ರಮೇಣ ದೊಡ್ಡ ದೊಡ್ಡ ಪುಸ್ತಕಗಳನ್ನು ಕೇವಲ ಎರಡು-ಮೂರು ದಿನಗಳಲ್ಲಿ ಮುಗಿಸುವಷ್ಟು ಕಾದಂಬರಿಗಳನ್ನು ಮೂರರಿಂದ ಐದು ದಿನಗಳಲ್ಲಿ ಮುಗಿಸುವ ಸಂಕಲ್ಪದೊಂದಿಗೆ ತೆಗೆದುಕೊಂಡು ಅವುಗಳನ್ನು ಮುಗಿಸುತ್ತಿದ್ದ . ಓದಿನ ಹುಚ್ಚು ವಿಪರೀತವಾಯಿತು. ಅದು ಅವನನ್ನು ಜ್ಞಾನದ ಕಾಶಿ ಯನ್ನಾಗಿ ಮಾಡಿತು. ಒಂದು ದೇಶ ಸುತ್ತಬೇಕು ಇಲ್ಲ ಕೋಶ ಓದಬೇಕು ಎಂಬ ನಾಣ್ಣುಡಿಯನ್ನು ಕೇಳಿದ್ದ ವಿಧುವಿಗೆ.....

Thursday, September 17, 2020

ಪ್ರೇಮದ ಅನ್ವೇಷಣೆ ಭಾಗ - 11


12ನೇ ತರಗತಿ ಓದುತ್ತಿದ್ದ ಸಮಯದಲ್ಲಿ ವಿಧುವಿಗೆ ಒಳ್ಳೆಯ ಉಪಾಧ್ಯಾಯರು ಸಿಕ್ಕರು. 12ನೇ ತರಗತಿಯ ವಿಜ್ಞಾನದ ವಿಷಯ ಹಾರಿಸಿದ್ದರಿಂದ ಗಣಿತವೆಂಬ ಕಬ್ಬಿಣದಕಡಲೆ ಜಿಗಿಯುವುದು ಸ್ವಲ್ಪ ಕಷ್ಟವೆನಿಸಿತು. ಕಾಲೇಜಿನಲ್ಲಿ ಉತ್ತಮ ಶಿಕ್ಷಕ ವೃಂದ ಮನೆಯಲ್ಲಿ ತದ್ವಿರುದ್ಧ ವಾತಾವರಣ ತೊಳಲಾಟದಲ್ಲಿ ವಿಜ್ಞಾನ ವಿಷಯದಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣನಾದ ಕಬ್ಬಿಣದ ಕಡಲೆಯಂತ್ತಿದ್ದ ಗಣಿತವನ್ನು ಶಿಕ್ಷಕರ ಪ್ರೋತ್ಸಾಹದಿಂದ ಪಾಸ್ ಮಾಡಿದ. ಇಷ್ಟು ಸಾಕಾಗಿತ್ತು ಮನೆಯಲ್ಲಿ ವಿಧವನ್ನು ಇನ್ನು ತುಚ್ಚವಾಗಿ ಕಾಣಲು. ತಾಯಿ ಎನಿಸಿಕೊಂಡವರು ಕಠಿಣವಾಗಿ ವರ್ತಿಸುತ್ತಿರಲು ದೇವರೇ ದಿಕ್ಕು ಎನ್ನುವಂತಾಯಿತು. ಆತನ ಪರಿಸ್ಥಿತಿ. ಆತನ ಕೆಲವು ಸ್ನೇಹಿತರು ಅನುತ್ತೀರ್ಣರಾಗಿದ್ದರು. ಅವರ ತಂದೆಯವರು ತಮ್ಮ ಮಕ್ಕಳಿಗೆ ಉಳಿದಿದ್ದ ಒಂದು ಅವಕಾಶ ಹತ್ತನೇ ತರಗತಿಯ ಆಧಾರದ ಮೇಲೆ ತಾಂತ್ರಿಕ ಕೋರ್ಸ್ ಗೆ ಸೇರಿಸುವುದು ಆಗಿತ್ತು.  ಸ್ನೇಹಿತರ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಖಾಸಗಿ ಕಾಲೇಜಿಗೆ ಹೆಚ್ಚಿನ ಪ್ರಮಾಣದ ಶುಲ್ಕವನ್ನು ತುಂಬಿ ಸೇರಿಸಿದರು. ಆದರೆ ವಿಧುವಿಗೆ ಆ ಅವಕಾಶ ಇರಲಿಲ್ಲ. ವಿಧು ಮನೆಯಲ್ಲಿಯೇ ಉಳಿಯಬೇಕಾಯಿತು. ಮನೆಯಲ್ಲಿ ಅನುತ್ತೀರ್ಣನಾದ ತಪ್ಪನ್ನು ತಿದ್ದಿ ಬುದ್ಧಿ ಹೇಳಿ ಮಾರ್ಗದರ್ಶನ ಮಾಡುವುದು ಬಿಟ್ಟು ಇನ್ನು ಮನೆಯಲ್ಲಿ ಮೂದಲಿಕೆಯ ತುಚ್ಛವಾದ ಮಾತನ್ನು ಹೆಚ್ಚು ಮಾಡಿದರು. ಇದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಮನೆ ಬಿಟ್ಟು ಹೊರಡುವ ಯೋಚನೆ ಜನ್ಮತಾಳಿತು.
            ಮನೆಯಲ್ಲಿನ ಬೈಗುಳ ಮನಸ್ಸನ್ನು ಘಾಸಿ ಮಾಡುತ್ತಲೇ ಹೋಯಿತು. ಮನೆಯವರ ಬೈಗುಳ ತಪ್ಪಿಸಿಕೊಳ್ಳುವ ಸಲುವಾಗಿ ಹೊರಗಡೆ ಸುತ್ತಲೂ ಶುರುಮಾಡಿದ ಮನೆಯ ವಾತಾವರಣಕ್ಕಿಂತ ಹೊರಗಡೆ ಸಮಾಜದಲ್ಲಿ ನೆಮ್ಮದಿ ಸಿಗುವಂತಾಯಿತು. ಮನೆಯಲ್ಲಿ ಎಲ್ಲರೂ ಇದ್ದರೂ ಇಲ್ಲದಂತಿದ್ದ .ಅನಾಥಪ್ರಜ್ಞೆ ಸಾಮಾಜಿಕ ಜೀವನಕ್ಕೆ ಕಾಲಿಟ್ಟ ಮೇಲೆ ಕಡಿಮೆಯಾಗತೊಡಗಿತ್ತು. ತನ್ನ ಬದುಕನ್ನು ಮುಗಿಸಲು ಯೋಚಿಸಿದ್ದ ವಿಧುವಿಗೆ ಹೇಡಿಯಂತೆ ಸಾಯಬಾರದು. ಬದುಕನ್ನು ಸವಾಲಾಗಿ ಸ್ವೀಕರಿಸಬೇಕು ಎದುರಿಸಬೇಕು ಎಂಬ ಪಾಠವನ್ನು ಸಮಾಜವು ಕಲಿಸಿತು. ಸಮಾಜದಿಂದ ಕಲಿತ ಪಾಠ ಇನ್ನೂ ಅನೇಕ ಸಮಾಜ ಬದುಕಿಗೆ ಬೇಕಾದ ಪಾಠ ಕಲಿಸುತ್ತದೆ ಎಂಬ ಮಾತನ್ನು ಕೇಳಿದ್ದ ಆದರೆ ಅದರ ಅನುಭವ ಬರುವಂತಾಯಿತು. ಸಮಾಜದಲ್ಲಿ ಒಳ್ಳೆಯವರು ಹಾಗೂ ಕೆಟ್ಟವರ ಸಹವಾಸ ಒಳ್ಳೆಯದನ್ನು ಕೆಟ್ಟದ್ದನ್ನು ಗುರುತಿಸುವ ಕಲೆಯನ್ನು ಕಲಿಸಿತು. ಮನೆಯಲ್ಲಿನ ಮೂದಲಿಕೆಯನ್ನು ತಪ್ಪಿಸಿಕೊಳ್ಳಲು ಎಷ್ಟು ಸಾಧ್ಯವೋ ಅಷ್ಟು ಮನೆಯಿಂದ ಹೊರಬರಲು ಪ್ರಯತ್ನಿಸುತ್ತಿದ. ಈ ನಡುವೆ ಹಲವಾರು ರೀತಿಯ ಜನರ ಪರಿಚಯವಾದರು. ಚಿಕ್ಕನಿಂದಲೂ ಅದೇ ಊರಿನಲ್ಲಿ ಹುಟ್ಟಿ ಬೆಳೆದಿದ್ದರಿಂದ ಮುಖ ಪರಿಚಯವಿದ್ದ ಜನರು ಮಾತನಾಡಲು ಶುರು ಮಾಡಿದರು. ಅದೇ ಸಮಯದಲ್ಲಿ ಅಲ್ಲಿನ ವಾರ್ಡ್ ಚುನಾವಣೆ ಸನಿಹವಾಯಿತು.
                               ವಿಧುವಿಗೆ ಮೊದಲಿನಿಂದಲೂ ದಿನಪತ್ರಿಕೆ ಓದುವ ಹುಚ್ಚು ಇದ್ದಿದ್ದರಿಂದ ರಾಜಕೀಯ ವಿಷಯದ ಮೇಲೆ ಸ್ವಲ್ಪ ಓಲವು ಹೆಚ್ಚಾಗಿಯೇ  ಇತ್ತು. ಹಾಗಾಗಿ ರಾಜಕೀಯ ವಿಚಾರಗಳನ್ನು ಕೆಲವು ಜನರೊಟ್ಟಿಗೆ ಚರ್ಚೆ ಮಾಡುತ್ತಿದ್ದನ್ನು ಕಂಡು ಚುನಾವಣೆ ಪ್ರಚಾರ ಕಾರ್ಯ ಮಾಡಲು ಕರೆಯುತ್ತಿದ್ದರು. ಮನೆಯಲ್ಲಿನ ಚುಚ್ಚುಮಾತು ಮೂದಲಿಕೆಯ ಮಾತು ಕೇಳಿ ಕೇಳಿ ಸಾಕಾಗಿ ತಪ್ಪಿಸಿಕೊಳ್ಳಬೇಕೆಂದು ಅವರೊಟ್ಟಿಗೆ ಪ್ರಚಾರಕಾರ್ಯಕ್ಕೆ ಹೋಗುತ್ತಿದ್ದ. ಅಲ್ಲಿ ಎಲ್ಲಾ ಪಕ್ಷಗಳ ಪ್ರಚಾರವನ್ನು ಮಾಡುತ್ತಿದ್ದ ಎಲ್ಲಾ ಪಕ್ಷಗಳ ಅಂತರಾಳ ಹಾಗೂ ಅಂತರಂಗದ ಅರಿವು ಆಗುತ್ತಾ ಹೋಯಿತು. ಪ್ರಚಾರ ಮಾಡುವಾಗ ಕೆಲವು ಹುಡುಗರು ಅಣ್ಣ ನನ್ನ ಪ್ರೀತಿಗೆ ಸಪೋರ್ಟ್ ಮಾಡಿದ್ದಾರೆ ಎಂದು ಬರುತ್ತಿದ್ದರು. ವಿಧುವಿಗೆ ಅದು ವಿಚಿತ್ರವೆನಿಸಿತ್ತು. ಮನಸ್ಸಿನಲ್ಲಿ ಗೊಂದಲ ಇವರೆಲ್ಲ ಏಕೆ ಪ್ರೀತಿಗೆ ಅಣ್ಣ ಸಪೋರ್ಟ್ ಮಾಡುತ್ತಾನೆ ಅಂತ ಬರುತ್ತಾರೆ ಈ ಜಗತ್ತಿನಲ್ಲಿ ಪ್ರೀತಿ ಪ್ರೇಮ.....

Sunday, September 13, 2020

ಪ್ರೇಮದ ಅನ್ವೇಷಣೆ ಭಾಗ-10


ಇನ್ನು ಈ ಮನುಷ್ಯ ಹಲವಾರು ಜನರ ಮುಂದೆ ಕೇವಲವಾಗಿ ಕಾಣುವಂತೆ ಮಾಡುತ್ತಾನೆ .ಈ ಮನುಷ್ಯನ ಎದುರು ನಿಲ್ಲದೆ ಹೊರತು ಬೇರೆ ದಾರಿಯಿಲ್ಲವೆಂದು ತಿಳಿದು ಮೊದಲ ಬಾರಿ ತನ್ನ ತಂದೆಯ ವಿರುದ್ಧ ಮಾತನಾಡಲು ಶುರುಮಾಡಿದ. ಇದು ಅವನ ತಾಯಿಗೆ ಅಪಮಾನ್ಯ ವಾಯಿತು. ಅವನ ತಾಳ್ಮೆಯ ಕಟ್ಟೆ ಒಡೆದು ತಂದೆ ಎಂಬ ಮುಲಾಜನ್ನು ನೋಡದೆ ತನ್ನ ತಂದೆ ಬಳಸುತ್ತಿದ್ದ ಅವಾಚ್ಯ ಶಬ್ದಗಳನ್ನು ತಿರುಗಿಸಿ ಅವರ ವಿರುದ್ಧ ಬಳಸಲು ಆರಂಭಿಸಿದ. ಆಗ ಅವನ ತಾಯಿಯು ತನ್ನ ಗಂಡನ ಪರವಾಗಿ ನಿಂತದ್ದು ನೋಡಿ ಮತ್ತೆ ಅವನಿಗೆ ಕಾಡಿದ ಪ್ರಶ್ನೆ ನಿಜವಾಗಿಯೂ ಈಕೆ ನನ್ನ ತಾಯಿಯೇ ! ತಂದೆಯ ದೌರ್ಜನ್ಯ ಪ್ರಶ್ನೆ ಮಾಡಿದ್ದೆ ಮುಳುವಾಯಿತು. ಆನಂತರದ ದಿನಗಳಲ್ಲಿ ತಾಯಿ ಎನಿಸಿಕೊಂಡವರಿಂದ ಚುಚ್ಚು ಮಾತುಗಳು ಪ್ರಾರಂಭವಾದವು. ಮನೆಯಲ್ಲಿನ ಸಂಘರ್ಷ ಹೆಚ್ಚಾಯಿತು. ಚುಚ್ಚು ಮಾತುಗಳನ್ನು ಕೇಳುವುದು ಇವನಿಗೆ ಅಭ್ಯಾಸವಾಯಿತು. ತಾಯಿಯೆಂದರೆ ಮಮತೆಯ, ಪ್ರೀತಿಯ ರೂಪ, ತ್ಯಾಗಮಹಿ ಎಂದು ಬಣ್ಣಿಸುವ ಈ ಜಗತ್ತು ನೋಡಿ ವಿಚಿತ್ರವೆನ್ನಿಸಿತು. ತಾಯೆಂದರೆ ಬರಿ ಒಳ್ಳೆಯವರಿರುತ್ತರ ? ಕೆಟ್ಟವರು ಇರುವುದಿಲ್ಲವಾ ? ಇಲ್ಲಿ ನನ್ನದೇನು ತಪ್ಪು ತಂದೆ ಎನಿಸಿಕೊಂಡವನ ದೌರ್ಜನ್ಯವನ್ನು ಪ್ರಶ್ನೆ  ಮಾಡಿದ್ದೆ ತಪ್ಪು ಎಂದು ಅನಿಸಿದ್ದು ಉಂಟು. ವಿಧು ಏನನ್ನು ಕೇಳಿದರೂ ಸಿಗದ ವಸ್ತುಗಳು ತೇಜಸ್ ಕೇಳಿದ ಕೂಡಲೇ ಸಿಗುತ್ತಿದ್ದವು ಏಕೆಂದರೆ ಅವನು ಅವರಿಗೆ ಅದೃಷ್ಟದ ಮಗನಾಗಿದ್ದನು. ಹೀಗಾಗಿ ಯಾವುದೇ ವಸ್ತುವಿನ ಮೇಲೆ ವಿಧುವಿಗೆ ವ್ಯಾಮೋಹ ಉಂಟಾಗದಂತೆ ಆಯಿತು. ಯಾವುದು ಅವನಿಗೆ ಸಿಗದೆ ಹೋದದ್ದು ಅವನು ವಸ್ತುಗಳ ಮೇಲಿನ ಆಸೆಯನ್ನು ಬಿಡಲು ನೆರವಾಯಿತು. ಆದರೆ ಮನೆಗೆ ಬಂದು ಹೋಗುವವರ ಮುಂದೆ ಅವಮಾನ ಅಪಮಾನ ಕಡಿಮೆಯಾಗಲಿಲ್ಲ .ಅವನಿಗೆ ಅವನ ಸ್ವಾಭಿಮಾನ ಬಡಿದು ಬಡಿದು ಹೇಳುತ್ತಿತ್ತು.
            ಒಂದು ತುತ್ತು ಅನ್ನಕ್ಕಾಗಿ ಇವರಿಂದ ಇನ್ನೂ ಎಷ್ಟು ಎಂದು ದೌರ್ಜನ್ಯವನ್ನು ಸಹಿಸುವುದು. ಹಲವಾರು ಬಾರಿ ಮನೆಬಿಟ್ಟು ಹೊರಡಲು ಯೋಚಿಸಿದ್ದರು ಎಲ್ಲಿಗೆ ಹೋಗುವುದು ಎಂಬ ಪ್ರಶ್ನೆಯೊಂದಿಗೆ ಸುಮ್ಮನಾಗುತ್ತಿದ್ದ. ಬದುಕು ಒಂದು ಹೋರಾಟ ಅದು ಮನೆಯಲ್ಲೇ ಇರಬಹುದು ಅಥವಾ ಸಮಾಜದಲ್ಲಿ ಇರಬಹುದು ಹೋರಾಟ ಮಾಡಬೇಕಾದದ್ದು ಅನಿವಾರ್ಯ ಅದಕ್ಕೆ ನಾನು ಸಿದ್ಧವಾಗಬೇಕು ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು. ಆತ್ಮಹತ್ಯೆಯ ಯೋಚನೆ ಅವನ ತಲೆಯಲ್ಲಿ ಹೊಳೆದರು. ಆತ್ಮಹತ್ಯೆಯ ಹಾದಿ ತುಳಿಯುವವರು ಹೇಡಿಗಳು ಎಂದು ಓದಿದ್ದ ವಿಧು ನಾನು ಹೇಡಿಯಲ್ಲ ಹೋರಾಡುತ್ತೇನೆ. ಆ ವಿಧಿ ತನ್ನ ಸಾವನ್ನು ಪಡೆಯುವವರೆಗೂ ಹೋರಾಡುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಂಡು ತನ್ನ ಬದುಕಿನ ಹೋರಾಟವನ್ನು ಮುಂದುವರೆಸಿದ್ದ. ನನ್ನನ್ನು ಇವರು ಇಷ್ಟು ಕೇವಲವಾಗಿ ಕಾಣುತ್ತಿರುವುದು ಇವರ ಹಂಗಿನಲ್ಲಿ ಇರುವುದರಿಂದಲೇ ಎಂದು ನಿರ್ಧರಿಸಿ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲು ಮುಂದಾದ, ಬಟ್ಟೆಗಳನ್ನು ತೊಳೆದುಕೊಳ್ಳುತ್ತಿದ್ದ ಜೊತೆಗೆ ತಾನೇ ಅಡಿಗೆಯನ್ನು ಮಾಡಿಕೊಳ್ಳಲು ಶುರು ಮಾಡಿದ. ಅವರ ತಾಯಿಯ ಮೇಲಿನ ಅವಲಂಬನೆಯಿಂದ ಸಂಪೂರ್ಣವಾಗಿ ಹೊರಬಂದ. ತನ್ನ ಕಾಲೇಜಿನಲ್ಲಿ 11ನೇ ತರಗತಿ ಉತ್ತೀರ್ಣನಾದ ವಿಧು, 12ನೇ ತರಗತಿ ಪ್ರವೇಶ ಪಡೆಯುವ ಹೊತ್ತಿಗೆ ಅವನ ಮನಸ್ಸಿನಲ್ಲಿ ತೊಳಲಾಟ ಹದಿಹರಿಯದ ಹೊಯ್ದಾಟ ತನ್ನ ನೋವು ನಲಿವನ್ನು ಯಾರಲ್ಲಿ ಹೇಳಿಕೊಳ್ಳಲಿ ಎಂಬ ಜಿಜ್ಞಾಸೆ. ನೋವನ್ನು ಯಾರಿಗಾದರೂ ಹೇಳಿಕೊಂಡರು ಯಾರು ಕೂಡ ಅದಕ್ಕೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂಬ ಸತ್ಯದ ಅರಿವು ಅವನಿಗಿತ್ತು .ಸ್ನೇಹಿತರು ಮನೆಗೆ ಬಂದರು ಅವರನ್ನು ಮನೆಯ ಒಳಗೆ ಕರೆಯಲು ಹಿಂದುಮುಂದು ನೋಡುತ್ತಿದ. ಒಳಗೆ ಕರೆದರೆ ಎಲ್ಲಿ ಆಥಿತ್ಯ ನಾನೇ ಕೊಡಬೇಕಾಗಿ ಬರುವುದು ಅವರು ಕೇಳಿದರೆ ಏನು ಹೇಳುವುದು ಎಂಬ ಅಂಜಿಕೆ ಇನ್ನು ಅವರ ತಂದೆ ತಾಯಿಯನ್ನು ಪರಿಚಯ ಮಾಡಿ ಕೊಡುವಂತಿರಲಿಲ್ಲ ಬಿಡುವಂತೆಯೂ ಇರಲಿಲ್ಲ ಪರಿಚಯ ಮಾಡಿಕೊಟ್ಟರೆ ಎಲ್ಲಿ ಸ್ನೇಹಿತರ ಮುಂದೆ ಅವಮಾನ ಮಾಡುತ್ತಾರೆ ಎಂಬ ಯೋಚನೆ....