ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ. ಬದುಕು ನಡೆಯುವುದು ನಮ್ಮ ಕರ್ತವ್ಯದ ಮೇಲೆ ನಮ್ಮ ಬದುಕಿನಲ್ಲಿ ಒಂದು ಕರ್ತವ್ಯ ಇದ್ದೇ ಇರುತ್ತದೆ. ಅದೇ ನಾವು ಪ್ರಾಣಿ ಪಕ್ಷಿಗಳಾಗಿ ಇದ್ದಿದ್ದರೆ ಸ್ವಾತಂತ್ರವಾಗಿ ಸ್ವಚ್ಛಂದವಾಗಿ ಯಾವುದೇ ದೇಶ ಭಾಷೆ ಕಾನೂನಿನ ಮಿತಿ ಇಲ್ಲದೆ ಬದುಕಲು ಅವಕಾಶವಾಗುತ್ತಿತ್ತು. ಆದರೆ ಮನುಷ್ಯನು ಆಗಿ ಬದುಕಲು ಸಾಧ್ಯವಿಲ್ಲ ಅವನು ಎಲ್ಲದರ ಪರಿಮಿತಿಯಲ್ಲಿ ಬದುಕಬೇಕಾಗುತ್ತದೆ. ಅದರಲ್ಲೂ ಅವನಿಗೆ ಇತಿಮಿತಿಗಳಿವೆ . ನಾವು ಯಾವುದೇ ಕರ್ತವ್ಯ ಮಾಡುವಾಗ ಅದರ ಸಾಧಕ ಬಾದಕ ಬಗ್ಗೆ ಯೋಚಿಸುತ್ತೇವೆ. ಹಾಗೂ ನಾವು ಮಾಡುವ ಕೆಲಸದಿಂದ ಬೇರೆಯವರು ನಮ್ಮನ್ನು ಗುರುತಿಸಲಿ ಎಂದು ಭಾವಿಸುತ್ತೇವೆ ಅವರ ಗುರುತುಸುವಿಕೆ ನಮ್ಮ ಅಹಂ ಅನ್ನು ಸಮಾಧಾನ ಪಡಿಸುವುದಕ್ಕೆ ಸೀಮಿತವಾಗುತ್ತದೆ. ನಮಗೆ ನಮ್ಮ ಕರ್ತವ್ಯದ ಬಗ್ಗೆ ಅತಿಯಾದ ಮೋಹವಿರಬಾರದು. ನಾವು ಮಾಡುವ ಕೆಲಸ ಮೊದಲು ನಮಗೆ ಆತ್ಮ ತೃಪ್ತಿಯನ್ನು ನೀಡುವಂತಿರಬೇಕು. ಆತ್ಮತೃಪ್ತಿ ಇಲ್ಲದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸಾಧ್ಯವಿಲ್ಲ ನಮ್ಮ ಕೆಲಸಗಳು ನಮ್ಮ ಜೊತೆಗಾರರಿಗೆ ಹಾಗೂ ನಮ್ಮನ್ನು ನಂಬಿ ಬಂದವರಿಗೆ ಅನುಕೂಲಗಳಾಗುವಂತಿರಬೇಕು. ನಮ್ಮಿಂದ ಅನುಕೂಲ ಆಗುವ ಸಂಭವವಿದ್ದರೆ ಮಾತ್ರ ನಮ್ಮನ್ನು ಬಳಸಿಕೊಳ್ಳುವ ಜನರಿಂದ ದೂರವಿರಬೇಕು. ನಮ್ಮನ್ನು ಶ್ಲಾಘಿಸುವವರು ಮತ್ತು ನಿಂದಿಸುವವರು ಯಾರು ಶಾಶ್ವತವಲ್ಲ. ಎರಡನ್ನು ತೀರ ಹಚ್ಚಿಕೊಳ್ಳದೆ ನಮ್ಮ ಸಮಯ ಮುಗಿಯುವ ಮುನ್ನ ಆತ್ಮ ವಂಚನೆ ಇಲ್ಲದೆ ನಮ್ಮ ಪಾಲಿನ ಕರ್ಮವನ್ನು ( ಕೆಲಸವನ್ನು ) ನಮಗೆ ನಾವು ವಂಚಿಸಿಕೊಳ್ಳದೆ ಮಾಡಿ ಹೊರಡಬೇಕಷ್ಟೆ.